Showing posts with label ಚರ್ಚೆ. Show all posts
Showing posts with label ಚರ್ಚೆ. Show all posts

Wednesday, January 15, 2014

ಅಂಬೇಡ್ಕರ್ ಅವರ ಮೊಮ್ಮಕ್ಕಳ ಬ್ರಾಹ್ಮಣತ್ವ ಸ್ವೀಕಾರ ?

ಡಾ. ಬಾಬಾಸಾಹೇಬ ಅಂಬೇಡ್ಕರ್
ಡಾ. ಸಿದ್ರಾಮ ಕಾರಣಿಕ
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರಖರ ವೈಚಾರಿಕತೆಯ ಅರಿವು ಅವರ ಜೊತೆಗೆಯೇ ಹೋಯಿತೇನೋ ಎನಿಸುತ್ತದೆ. 'ಇಲ್ಲಿಯವರೆಗೆ ನಾನು ಎಳೆದು ತಂದಿರುವ ರಥವನ್ನು ಸಾಧ್ಯವಾದರೆ ಮುಂದಕ್ಕೆ ಒಯ್ಯಿರಿ. ಇಲ್ಲವಾದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ. ಆದರೆ ದಯವಿಟ್ಟು ಹಿಂದಕ್ಕೆ ಮಾತ್ರ ತಳ್ಳಬೇಡಿ' ಎಂಬ ವಿಚಾರ ಕೇವಲ ವೇದಿಕೆಯ ಮಾತಾಗಿ ಇಂದು ಉಳಿದುಕೊಂಡಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಬೆಳೆದ ಎಷ್ಟೋ ಮಂದಿ ಇಂದು ಆ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬೇರೆಯವರು ಯಾಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಕ್ಕಳೇ ಇಂದು ಬ್ರಾಹ್ಮಣತ್ವವನ್ನು ಪೋಷಿಸುತ್ತಿದ್ದಾರೆ. ದೇವಾಲಯಗಳಲ್ಲಿ ಹೋಮ-ಹವನ, ಪೂಜೆ ಮಾಡುವುದಷ್ಟೇ ಅಲ್ಲ ; 'ರಾಜಗೃಹ'ದಲ್ಲೂ ಆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಮನಸ್ಸು ಸಂತಾಪಿತಗೊಳ್ಳುತ್ತಿದೆ.
 
ಇಂಥ ಸಂಗತಿಗಳನ್ನು ಖಂಡಿಸಲೇ ಬೇಕಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿ ಬೇಡವಾಗಿದ್ದರೆ ಅವರ ಹೆಸರನ್ನೂ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ !

Sunday, March 10, 2013

ಮಹಾಶಿವರಾತ್ರಿ : ಬೇಡರ ಕಣ್ಣಪ್ಪನ ನೆನಪು !

 ಡಾ. ಸಿದ್ರಾಮ ಕಾರಣಿಕ
ಮಹಾಶಿವರಾತ್ರಿ ಶುಭಾಶಯ.... ಮಹಾಶಿವರಾತ್ರಿ ಎಲ್ಲರಿಗೂ ಒಳ್ಳೇದು ಮಾಡಲಿ ಅನ್ಕೊಂತನss ಶಿವರಾತ್ರಿ ಮಹಿಮಾ ಬಗ್ಗಿ ಮಾತಾಡೂ ಮಂದಿ ಒಂದುಕ್ಷಣ 'ಬೇಡರ ಕಣ್ಣಪ್ಪ'ನ ನೆನಪು ಮಾಡಿಕೋಬೇಕು. ಮೇಲು ಮೇಲಿನ ಆಡಂಬರದ ಭಕ್ತಿ-ಪೂಜೆಗಿಂತ ಮನಸ್ಸು ಸರಳಾಗಿರಬೇಕು ; ಅಂತರಂಗದ ಶುದ್ಧಿ ಇರಬೇಕು ಎಂಬೋದು ತಿಳಿದುಕೊಳ್ಳೋದು ಲೇಸಲ್ಲವೆ ?

Saturday, January 26, 2013

ಸಾಹಿತ್ಯ ಸಂಭ್ರಮಕ್ಕೆ ತಕ್ಷಣ ಪ್ರತಿಕ್ರಿಯಾತ್ಮಕ ವಿರೋಧ ಬೇಕು !

ಡಾ. ಸಿದ್ರಾಮ ಕಾರಣಿಕ

'ಸಾಹಿತ್ಯ ಸಂಭ್ರಮ ಹುಟ್ಟು ಹಾಕಿರುವ ಪ್ರಶ್ನೆಗಳು' ಎಂಬ ಎಂ.ಡಿ. ಒಕ್ಕುಂದ ಅವರ ಲೇಖನ (ವಿ.ಕ-25-01-2013) ಸಕಾಲಿಕವಾಗಿದೆ. ವ್ಯಾಪಾರೀ ಮನೋಭಾವವನ್ನಿಟ್ಟುಕೊಂಡು ಸಾಹಿತ್ಯವನ್ನು, ಸಾಹಿತ್ಯ ಚರ್ಚೆಯನ್ನು ಮಾಡಲು ಮುಂದಾಗಿದ್ದ ಸಾಹಿತ್ಯ ಸಂಭ್ರಮದ ಟ್ರಸ್ಟು, ಪ್ರಜ್ಞಾವಂತರ ಭಾರೀ ಪ್ರತಿಭಟನೆ ಮತ್ತು ವಿರೋಧದ ಕಾರಣವಾಗಿ ನಿಯಮಾವಳಿಗಳನ್ನು ಸಡಿಲಿಸಿಕೊಂಡಿರುವುದು ಸ್ವಾಗತಾರ್ಹವಾದರೂ ಅದರ ನಡೆಯಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

'ಸಾಹಿತ್ಯಿಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ' ಎನ್ನುವ ಟ್ರಸ್ಟಿನ ಗೌರವಾಧ್ಯಕ್ಷ ಡಾ. ಎಂ. ಎಂ. ಕಲಬುರ್ಗಿಯವರು ಹೇಳಿದ್ದು ಮತ್ತು ಟ್ರಸ್ಟಿನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್ ಅವರು ಹೇಳಿರುವ 'ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳುವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ' ಎನ್ನುವ ಮಾತುಗಳು ಕಾರ್ಯಕ್ರಮದ ಹೊಸ ಸಾಧ್ಯತೆಗಳ ಬಗ್ಗೆ ತಿಳಿಸುವ ಪರಿಯಲ್ಲಿದ್ದರೂ ಆ ಮಾತುಗಳ ಹಿಂದೆ ಚಳುವಳಿಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಬಗ್ಗೆ ಅವರಿಗಿರುವ ನಿಷ್ಕಾಳಜಿಯನ್ನು ವ್ಯಕ್ತಿಸುತ್ತವೆ. ಗೋಷ್ಟಿಗಳಲ್ಲಿ ಇರುವ ವಿಷಯಗಳು ಅಂಥ ಹೊಸ ಕಲ್ಪನೆಗಳನ್ನೇನೂ ಹುಟ್ಟು ಹಾಕುವುದಿಲ್ಲ. ಕತೆ ಹುಟ್ಟುವ ರೀತಿ, ಕತೆ ಹೇಳುವ ಕಲೆ, ಆತ್ಮಕತೆಗಳ ಓದು, ಪ್ರಶಸ್ತಿಗಳ ಹಾವಳಿ ಪ್ರಾಚೀನ ಕಾವ್ಯವಾಚನ, ಅಂತರ್ ಜಾಲ ಕನ್ನಡ, ಕನ್ನಡ ವಿಮರ್ಶೆ, ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು ಮೊದಲಾದವುಗಳ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. 'ಹಾಗಿರಬಾರದು; ಹೀಗೆ ಇರಬೇಕು; ಹೀಗೆಯೇ ಇರಬೇಕು' ಎಂಬುದರತ್ತಲೇ ಹೆಚ್ಚಿನ ಒತ್ತು ನೀಡುವ ಇದು ಸಂಭ್ರಮವಾದರೂ ಹೇಗಾದೀತು ? ತಮ್ಮ ಬದ್ಧತೆಗಳನ್ನೇ ಎಲ್ಲರೂ ಅನುಸರಿಸಬೇಕು ಎಂಬ ಯಜಮಾನಿಕೆಯ ಗತ್ತುಗಾರಿಕೆ ಇಲ್ಲಿ ಕಂಡು ಬರುತ್ತದೆ. ನಮ್ಮ ನಾಡಿನ ಗಮನ ಸೆಳೆಯುವ ಬರಹಗಾರರು, ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಎಂದುಕೊಂಡಿದ್ದ ಮಂದಿಯೇ ಇಂಥ ಯಜಮಾನಿಕೆ ನಡೆಸಲು ಮುಂದಾಗಿರುವುದು ತುಂಬ ವಿಪರ್ಯಾಸ ಎನ್ನುವುದಕ್ಕಿಂತ ನಂಬಿಕೆಯನ್ನೇ ಬುಡಮೇಲಾಗಿಸುವ ಮನೋಭಾವ ಎನ್ನಬಹುದೇನೋ ! ಇಂದು ನಡೆದ ಕಾರ್ಯಕ್ರಮವನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಭಾ ಭವನದ ಹೊರಗೆ ನಾಲ್ಕೈದು ಸೆಕ್ಯೂರಿಟಿ ಗಾರ್ಡುಗಳು, ಒಳಗೆ ಇನ್ನೊಂದಿಷ್ಟು ಸೆಕ್ಯುರಿಟಿ ಗಾರ್ಡುಗಳು ಟಿಪ್‌ಟಾಪ್ ಆಗಿ ನಿಂತಿದ್ದರು. ಒಳಗೆ ಮಾತನಾಡಿದರೆಲ್ಲಿ ಹೊರ ಹಾಕುತ್ತಾರೋ ಎಂದುಕೊಂಡು ಉಸಿರಾಡಿಸಲೂ ಕಷ್ಟಪಡುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು, ಹೊರಗಡೆ ಇನ್ನೂ ಪುಸ್ತಕಗಳ ಕಟ್ಟನ್ನೇ ಬಿಚ್ಚಿಡುತ್ತಿದ್ದ ನಾಲ್ಕೈದು ಪುಸ್ತಕ ವ್ಯಾಪಾರಿಗಳು, ಗಂಟು ಹಾಕಿಕೊಂಡಂತಿದ್ದ ಮುಖಗಳು ತುಂಬ ನಿರಾಸೆಯನ್ನುಂಟು ಮಾಡಿದವು. ಐನೂರು ಕೊಟ್ಟು ಬಂದವರು ಯಾವ ಸಾರ್ಥಕತೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಸಂಭ್ರಮಕ್ಕೆ ಆಗಮಿಸಿರುವ ದೊಡ್ಡ ದೊಡ್ಡ ಸಾಹಿತಿಗಳ ಜೊತೆಗೆ ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು ಎಂಬ ಅವರ ಹಂಬಲ ಮಾತ್ರ ಈಡೇರಬಹುದೇನೋ !

ಇಂತಹ ಸಾಂಸ್ಕೃತಿಕ ದಿವಾಳಿತನಕ್ಕೆ ಎಡೆ ಮಾಡಿಕೊಟ್ಟಿರುವ ಈ 'ಸಂಭ್ರಮ' ವನ್ನು ವಿರೋಧಿಸಿ ಧಾರವಾಡದ ಪ್ರಗತಿಪರ ಬರಹಗಾರರ ಹಾಗೂ ಸಂಘಟನೆಗಳ ವೇದಿಕೆ 'ಜನತೆಯತ್ತ ಸಾಹಿತ್ಯ' ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರೂ ಅದನ್ನು 'ಸಂಭ್ರಮ ಸಂಘಟಕರ' ಮಾತು ಕೇಳಿ ಮುಂದೆ ಹಾಕಿದ್ದಾದರೂ ಯಾಕೆ ಎಂದು ತಿಳಿಯುತ್ತಿಲ್ಲ. ರಾಜಿಯಾಗುವ ಮನೋಧರ್ಮ ಇನ್ನೂ ಬದಲಾಗಿಲ್ಲ ಎಂದರೆ ಧಾರವಾಡದಲ್ಲಿ ಇನ್ನು ಮುಂದೆ 'ಸಂಭ್ರಮ' ಮಾದರಿಯ ಕಾರ್ಯಕ್ರಮಗಳು ಯಾರ ಮುಲಾಜಿಗೂ ಕಾಯದೆ ಕಾರ್ಯಪ್ರವತ್ತರಾಗಬಲ್ಲವು ! 'ಸಂಭ್ರಮ' ಆರಂಭದ ದಿನವೇ ಒಂದು ಸಣ್ಣ ಪ್ರತಿಭಟನೆಯನ್ನೋ ಪರ್ಯಾಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೋ ಅದು ಬೀದಿಯಲ್ಲಾದರೂ ಸರಿ ಮಾಡಿದ್ದರೆ ಪ್ರತಿಭಟನೆಗೆ ಒಂದು ಅರ್ಥ ಬರುತ್ತಿತ್ತು. ಮಾರ್ಚಿನಲ್ಲಿ 'ಸಂಭ್ರಮ' ವನ್ನು ವಿರೋಧಿಸಿ ಮಾಡುವ ಕಾರ್ಯಕ್ರಮ ಪರ್ಯಾಯ ಎನಿಸಿಕೊಳ್ಳಲಾರದು. ಎಂ.ಡಿ. ಒಕ್ಕುಂದ ಅವರು ಹೇಳುವಂತೆ 'ಕರ್ನಾಟಕದ ಚರಿತ್ರೆಯಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು ಆಸ್ಥಾನೀಕರಿಸುವ, ಅಗ್ರಹಾರೀಕರಿಸುವ ಪ್ರಯತ್ನಗಳು ನಡೆದಾಗಲೆಲ್ಲ ತೀವ್ರವಾದ ಪ್ರತಿಭಟನೆಗಳು ಸಜನಶೀಲವಾದ ಪರ‌್ಯಾಯಗಳು ರೂಪ ತಾಳಿವೆ' ಎಂಬುದೇ ನಿಜವಾದರೆ ಇನ್ನೂ ಕಾಲ ಮಿಂಚಿಲ್ಲ; ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಎದುರಿನಲ್ಲೇ ನಡೆಯುತ್ತಿರುವ ವೈಚಾರಿಕ ಬದ್ಧತೆಯಿಲ್ಲದ 'ಸಂಭ್ರಮ' ದ ಕೊನೆಯ ದಿನವಾದರೂ ಪರ್ಯಾಯ ಮಾದರಿಯಲ್ಲಿ ವಿಶ್ವವಿದ್ಯಾಲಯ ವೃತ್ತದಲ್ಲಿ ಅಥವಾ ಇನ್ನೆಲ್ಲಿಯಾದರೂ ಒಂದು ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಧಾರವಾಡದ ಪ್ರಜ್ಞಾವಂತ ಗೆಳೆಯರು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.
 
ಕೃಪೆ: ವಿಜಯ ಕರ್ನಾಟಕ

Tuesday, January 22, 2013

ಹಿಂದು ಉಗ್ರವಾದ ನಿಜ: ಬರಗೂರು ರಾಮಚಂದ್ರಪ್ಪ



'ಹಿಂದೂ ಧರ್ಮದ ಹೆಸರಿನಲ್ಲೂ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳಿಂದ ಭಯೋತ್ಪಾದನೆ ನಡೆಯುತ್ತಿರುವುದು ಸತ್ಯ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್‌ ಸಂಘಟನೆಯಿಂದಲೇ ಅದು ನಡೆಯುತ್ತಿದೆ ಎಂಬುದನ್ನು ನಾನು ಹೇಳಲಾರೆ' ಎಂದು ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಇಂದು ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ. ಮುಸ್ಲಿಂ ಧರ್ಮಕ್ಕೆ ಸೇರಿದ ಹಾದಿ ತಪ್ಪಿದ ಕೆಲವರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪ ಇತ್ತು. ಆದರೆ, ಈಗ ಹಿಂದೂ ಧರ್ಮದ ಹೆಸರಿನಲ್ಲೂ ಕೆಲ ವ್ಯಕ್ತಿ ಮತ್ತು ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಹೇಳಿದರು.

ಹಿಂದೂಗಳ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಹಿಂದೆ ಬಿಜೆಪಿ ಅಥವಾ ಆರೆಸ್ಸೆಸ್‌ ಇದೆ ಎಂದು ಹೇಳುವುದು ಕಷ್ಟ. ಹೀಗೆ ಹೇಳಿರುವ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಬಳಿ ಈ ಕುರಿತು ಯಾವುದಾದರೂ ದಾಖಲೆಗಳಿದ್ದರೆ ಬಹಿರಂಗ ಪಡಿಸುವುದು ಸೂಕ್ತ. ಈ ಬಗ್ಗೆ ನನ್ನ ಬಳಿ ಯಾವುದೇ ಸ್ಪಷ್ಟ ದಾಖಲೆಗಳು ಇಲ್ಲ ಎಂದು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

ಕೃಪೆ : ಉದಯವಾಣಿ : 22-01-2013

Saturday, January 19, 2013

ಧಾರವಾಡ ಸಾಹಿತ್ಯ ಸಂಭ್ರಮ : ನಿಬಂಧನೆಗಳು ರದ್ದು !

ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ನಿಬಂಧನೆಗಳನ್ನು ನಾಡಿನ ಹಲವಾರು ಬರಹಗಾರರು ಖಂಡಿಸುವ ಮೂಲಕ, ವಿರೋಧಿಸುವ ಮೂಲಕ ಪರ್ಯಾಯ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ ಮೇಲೆ ಸಾಹಿತ್ಯ ಸಂಭ್ರಮದ ಸಂಘಟಕರು ಎಚ್ಚೆತ್ತುಕೊಂಡು ತಾವು ವಿಧಿಸಿದ್ದ ನಿಬಂಧನೆಗಳನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಂದ ಸುದ್ದಿ ಇಲ್ಲಿದೆ ನೋಡಿ ;

ಇದೇ 25, 26 ಮತ್ತು 27ರಂದು ನಗರದಲ್ಲಿ ನಡೆಯಲಿರುವ `ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಪಾಲ್ಗೊಳ್ಳುವವರಿಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ರದ್ದುಪಡಿಸಲಾಗಿದೆ ಎಂದು `ಧಾರವಾಡ ಸಾಹಿತ್ಯ ಸಂಭ್ರಮ'ದ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸ್ಪಷ್ಟಪಡಿಸಿದ್ದಾರೆ.
`ಈ ನಿಬಂಧನೆಗಳ ಬಗ್ಗೆ ಬಹಳಷ್ಟು ತಪ್ಪು ತಿಳಿವಳಿಕೆ ಉಂಟಾಗಿದ್ದರಿಂದ ಮತ್ತು ಇವುಗಳನ್ನೇ ಮುಖ್ಯವಾಗಿರಿಸಿಕೊಂಡು ವಿರೋಧ ವ್ಯಕ್ತವಾಗುತ್ತಿರುವುದರಿಂದ ಇವುಗಳನ್ನು ರದ್ದುಪಡಿಸಲಾಗಿದೆ. ಈ ಸಂಭ್ರಮವನ್ನು ಮೊದಲ ಪ್ರಯೋಗವಾಗಿ ಹಮ್ಮಿಕೊಳ್ಳಲಾಗಿದ್ದು, ಚರ್ಚಿಸಬೇಕಾಗಿರುವ ಸಾಕಷ್ಟು ವಿಷಯಗಳನ್ನು ಮುಂಬರುವ ಸಂಭ್ರಮಗಳಲ್ಲಿ ಎತ್ತಿಕೊಳ್ಳಲು ಅವಕಾಶ ಇದ್ದೇ ಇದೆ. 60 ಸಂಪನ್ಮೂಲ ವ್ಯಕ್ತಿಗಳು ಮತ್ತು ಸುಮಾರು 60 ವಿಶೇಷ ಆಮಂತ್ರಿತರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದಾರೆ'.
`ಅವರಿಗೆ ಯಾವುದೇ ಶುಲ್ಕ ಇರುವುದಿಲ್ಲ. 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರ ಕೊಡುವ ಅನುದಾನ ಸಾಲದೇ ಇದ್ದುದರಿಂದ ಸಂಭ್ರಮದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಪ್ರತಿನಿಧಿ ಶುಲ್ಕ ಆಕರಿಸಲಾಗುತ್ತಿದೆ. ಕೆಲವರು ತಪ್ಪು ತಿಳಿವಳಿಕೆಯಿಂದ ಆರೋಪಿಸುತ್ತಿರುವಂತೆ ಇದರಿಂದ ಯಾವುದೇ ಹಣ ಮಾಡಿಕೊಳ್ಳುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಸಂಭ್ರಮದ ವೆಚ್ಚ ಸುಮಾರುರೂ 16ರಿಂದರೂ 18 ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಆದರೆ ಕೆಲವರು ಆರೋಪಿಸುತ್ತಿರುವಂತೆರೂ 40ರಿಂದರೂ 50 ಲಕ್ಷ ಸಂಗ್ರಹಿಸಲಾಗಿಲ್ಲ. ಸಂಭ್ರಮ ಮುಗಿದ ಕೆಲವೇ ದಿನಗಳೊಳಗಾಗಿ ಇದರ ಖರ್ಚು ವೆಚ್ಚವನ್ನು ಪಾರದರ್ಶಕವಾಗಿ ಪ್ರಕಟಿಸಲಾಗುವುದು' ಎಂದು ಡಾ.ಗಿರಡ್ಡಿ ತಿಳಿಸಿದ್ದಾರೆ.

Friday, January 18, 2013

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ಜೋಗಿ ಅವರ ಪತ್ರ

ಗೆ,
ಅಧ್ಯಕ್ಷರು,
ಧಾರವಾಡ ಸಾಹಿತ್ಯ ಸಂಭ್ರಮ

ಮಾನ್ಯರೇ,
ವಿಷಯ: ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸದೇ ಇರುವ ಕುರಿತು.

ಜೈಪುರ ಲಿಟರೇಚರ್ ಫೆಸ್ಟಿವಲ್ ಮಾದರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 3 ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಆಭಾರಿ.
ಆದರೆ, ನಾನು ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಕಾರಣಗಳು ಇಂತಿವೆ:
1. ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ಮುಕ್ತ ಪ್ರವೇಶ ಇರುವುದಿಲ್ಲ ಎಂದು ತಿಳಿಯಿತು. 1,500 ರುಪಾಯಿ ತೆತ್ತು ಅದರಲ್ಲಿ ಪ್ರತಿನಿಧಿಗಳು ಭಾಗವಹಿಸಬೇಕು ಅನ್ನುವುದು ನನಗೆ ಒಪ್ಪಿಗೆ ಇಲ್ಲ. 1500 ರುಪಾಯಿ ಕೊಟ್ಟು ಭಾಗವಹಿಸುವ ಪ್ರತಿನಿಧಿಗೆ ನಾನೇನು ಕೊಡಬಲ್ಲೆ ಎಂದು ಯಾರಾದರೂ ಕೇಳಿದರೆ, ನನ್ನಲ್ಲಿ ಉತ್ತರ ಇಲ್ಲ.
2. ತಾವು ಪ್ರತಿನಿಧಿಗಳಿಗೆ ವಿಧಿಸಿರುವ ಕಟ್ಟುಪಾಡುಗಳ ಬಗ್ಗೆ ನನಗೆ ವಿರೋಧವಿದೆ. ಅನುಮತಿ ಇಲ್ಲದೇ ಪ್ರಶ್ನೆ ಕೇಳಕೂಡದು, ಕರಪತ್ರ ಹಂಚಕೂಡದು ಇವೆಲ್ಲ ಪಾಳೇಗಾರಿಕೆಯಂತೆ ಭಾಸವಾಗುತ್ತಿದೆ. ಸಭ್ಯವಾಗಿ ವರ್ತಿಸಬೇಕು ಎಂದು ಓದುಗರಿಗೆ ಹೇಳಬಹುದೇ? ಶಸ್ತ್ರಾಸ್ತ್ರ ತರಬೇಡಿ, ಸಭಾಂಗಣದೊಳಗೆ ಕುಡಿಯಬೇಡಿ, ಮಾದಕ ದ್ರವ್ಯ ಸೇವಿಸಬೇಡಿ ಎಂದು ಸಜ್ಜನ ಸಾಹಿತ್ಯ ರಸಿಕರಿಗೆ ಹೇಳುವ ಮುಖಾಂತರ ಅವರ ವ್ಯಕ್ತಿತ್ವವನ್ನು ಅವಮಾನಿಸಬಹುದೇ? ಈ ಎಲ್ಲ ಗೊಂದಲಗಳೂ ನನ್ನಲ್ಲಿವೆ. ಸಾಹಿತ್ಯದ ವಿದ್ಯಾರ್ಥಿಗಳು ಕೂಡ ರುಪಾಯಿ 1000 ಕೊಟ್ಟು ಭಾಗವಹಿಸಬೇಕು ಅನ್ನುವುದು, ಕೇವಲ ಐವತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅನ್ನುವುದು ಸರಿಯಾ? ಇಂಥ ಕಟ್ಟುಪಾಡುಗಳಿದ್ದಿದ್ದರೆ ಬಡತನದಲ್ಲಿ ಓದಿ ಬೆಳೆದ ನಾವು ಯಾವುದಾದರೂ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತೇ?
3. ನಿಮ್ಮ ನಿಯಮಾವಳಿಯೊಂದು ಹೀಗಿದೆ: ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ ಅಥವಾ ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು, ಕರಪತ್ರಗಳ ಮೂಲಕ ಹಂಚುವುದು, ಅಂಚೆಯ ಮೂಲಕ ಕಳಿಸುವುದು, ಕಂಪ್ಯೂಟರ್‌ದಲ್ಲಿ ಸೇರಿಸುವುದು ಇತ್ಯಾದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಇದನ್ನು ಪಾಲಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ಅಂಚೆಯ ಮೂಲಕ ಕಳುಹಿಸುವುದನ್ನು ತಾವು ಹೇಗೆ ತಡೆಯಬಲ್ಲಿರಿ? ಕಂಪ್ಯೂಟರಿಗೆ ಸೇರಿಸುವುದಕ್ಕೆ ಅವಕಾಶ ಇಲ್ಲ ಎಂದರೆ ಕಾರ್ಯಕ್ರಮದ ಕುರಿತು ವಿಮರ್ಶೆಗಳನ್ನೂ ನಾನು ಬರೆಯುವಂತಿಲ್ಲ ಎಂದು ಅರ್ಥವೇ ತಿಳಿಯುತ್ತಿಲ್ಲ.
4. ಓದುಗರನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ನಾವು ಇದೇನು ಮಾಡಲು ಹೊರಟಿದ್ದೇವೆ ಎಂಬ ಬಗ್ಗೆ ನನಗೆ ಗೊಂದಲವಿದೆ. ಸರ್ಕಸ್ಸಿನಲ್ಲಿ ಹುಲಿ, ಸಿಂಹ, ಆನೆಗಳನ್ನು ತಂದು ಅವುಗಳಿಂದ ವಿವಿದ ಚಮತ್ಕಾರಗಳನ್ನು ತೋರಿಸಿ, ಪ್ರವೇಶ ದರ ನಿಗದಿ ಮಾಡಿ, ಪ್ರಾಣಿಗಳಿಗೆ ತಿಂಡಿ ಹಾಕುವಂತಿಲ್ಲ ಎಂದು ಕಟ್ಟುಪಾಡು ಮಾಡುವ ಸರ್ಕಸ್ಸು ಕಂಪೆನಿಯ ಮಾಲಿಕರಂತೆ ಸಾಹಿತಿಗಳು ಕಾಣಬೇಕಾಗಿಲ್ಲ ಎಂದು ನನ್ನ ವಿನಮ್ರ ಭಾವನೆ.
5. ನಾನು ಕವಿತೆ ಓದುತ್ತೇನೆ, ಕತೆ ಓದುತ್ತೇನೆ, ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದು ಮುಕ್ತ ಆಹ್ವಾನ ನೀಡುತ್ತಿದ್ದ ಸಾಹಿತಿಗಳ ಬಳಗ, ಹೀಗೆ ಪ್ರವೇಶ ಶುಲ್ಕ ಕೊಟ್ಟು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬನ್ನಿ ಎಂದು ಹೇಳುವ ಸಂಪ್ರದಾಯದಲ್ಲಿ ಪಾಲುದಾರನಾಗುವಷ್ಟು ಮಹಾನ್ ಲೇಖಕನಾಗಲೀ, ಭಾಷಣಕಾರನಾಗಲೀ ನಾನು ಅಲ್ಲದೇ ಇರುವುದರಿಂದ ಸಂಭ್ರಮದಿಂದ ದೂರ ಉಳಿಯಲು ಇಚ್ಛಿಸುತ್ತೇನೆ.

ಶುಭವಾಗಲಿ.

ಪ್ರೀತಿಯಿಂದ
ಜೋಗಿ

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ರಹಮತ್ ತರೀಕೆರೆ ಪತ್ರ

ಮಾನ್ಯರಾದ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ವಿಜ್ಞಾಪನೆಗಳು

ಪ್ರಿಯರೆ,
ಜನವರಿ ೨೫ರಿಂದ ೨೭ರ ತನಕ ನಡೆಯಲಿರುವ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ನನ್ನನ್ನುವಿಶೇಷ ಆಮಂತ್ರಿತನಾಗಿ ಆಹ್ವಾನ (ಪತ್ರ ೧೨.೧೨.೧೨) ನೀಡಿದ್ದಿರಿ. ತಮ್ಮ ವಿಶ್ವಾಸಕ್ಕೆ ಕೃತಜ್ಞತೆ ಹೇಳುತ್ತೇನೆ. ಈಗ ಧಾರವಾಡ ಗೆಳೆಯರು ಕಳಿಸಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ವಿವರಗಳನ್ನು ಕಂಡ ಮೇಲೆ ಬರಬೇಕು ಎಂದು ಅನಿಸುತ್ತಿಲ್ಲ . ಆದ್ದರಿಂದ ನನ್ನ ಹೆಸರನ್ನು ವಿಶೇಷ ಆಮಂತ್ರಿತರ ಪಟ್ಟಿಯಿಂದ ಕೈಬಿಡಬೇಕು ಎಂದು ಕೋರುತ್ತೇನೆ.
ವಂದನೆಗಳು

ತಮ್ಮ ವಿಶ್ವಾಸದ

ರಹಮತ್ ತರೀಕೆರೆ

ಸಾಹಿತ್ಯ ಸಂಭ್ರಮಕ್ಕೆ ಗೈರು ಆಗುವ ವಿಚಾರದ ಕುಂ.ವೀ. ಅವರ ಪತ್ರ

ಸಂಭ್ರಮ ಸಂಘಟಕ ಗೆಳೆಯರೇ,
ಶುಭೋದಯ,

ಕಾರ್ಯಕ್ರಮದ ನಿಯಮಾವಳಿಗಳಿಗೆ ನನ್ನ ಸಹಮತವಿಲ್ಲ,

ಅಂತ ಉಸಿರುಗಟ್ಟಿಸುವ ವಾತಾವರಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ,

ದಯವಿಟ್ಟು ಕ್ಷಮಿಸಿ ನನ್ನ ಗೈರುಹಾಜರಿಯನ್ನು,

ನಿಮ್ಮ

ಕುಂವೀ

ಧಾರವಾಡ ಸಾಹಿತ್ಯ ಸಂಭ್ರಮ : ಅಧ್ಯಕ್ಷರಿಗೊಂದು ಅಶೋಕ ಶೆಟ್ಟರ್ ಬಹಿರಂಗ ಪತ್ರ

 ಡಾ. ಗಿರಡ್ಡಿ ಗೋವಿಂದರಾಜ
ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ)
ಇವರಿಗೆ


ಡಿಯರ್ ಸರ್,

ಇದೇ (ಜನವರಿ, ೨೦೧೩) ೨೫, ೨೬, ೨೭ ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ತಾವು ಕಳಿಸಿದ ಮುದ್ರಿತ ಓಲೆ ತಲುಪಿದೆ. ಮೊದಲಿಗೆ ತಮ್ಮ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ.

ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ. ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಧಾರವಾಡದ ಈ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ, ಗುಂಪು, ಜಾತಿ, ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ, ಸಂಗೀತ, ವಿಮರ್ಶೆ, ಚಿತ್ರಕಲೆ, ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು, ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ, ಪ್ರೀತಿ, ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು “ಇನ್ನೊಂದು ಹೊಸ ಪ್ರಯೋಗ” ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ-ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ. ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವುದಿಲ್ಲ.

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ನೀವು ಹೇಳಿದ್ದೀರಿ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ತಮಗೆ ತೋಚಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಒಕ್ಕಣೆಯೇ ಸಾಕ್ಷಿ. “ಮೊದಲಿಗೇ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರವಹಿಸುವವರೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಧಾರವಾಡದಲ್ಲಿ ತಾವು ಹಲವಾರು ದಶಕಗಳಿಂದ ಇದ್ದೀರಿ. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೀರಿ. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ಅಸಭ್ಯವಾಗಿ ವರ್ತನೆಯನ್ನು ಕಂಡಿದ್ದೀರಿ ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದೀರಿ ? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದೀರಿ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ-ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೆ ಧಾರವಾಡದ ಮಂದಿ ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯ ತಮಗೆ ಕಂಡಿತು ? ಏಕೆ ಇಂಥ ಹಾಸ್ಯಾಸ್ಪದ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದೀರಿ ?

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ ; ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ; ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು ..... ! ಹೇಳಿ, ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದು?

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಆದರೆ ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶದಲ್ಲಿ ತಾವು ಸಂಭ್ರಮಿಸಬಯಸುತ್ತಿದ್ದೀರಿ. ತಮ್ಮ ಸಂಭ್ರಮಕ್ಕೆ ಶುಭವಾಗಲಿ
ಅಶೋಕ ಶೆಟ್ಟರ್
 ಧಾರವಾಡ
 ೧೬ ಜನವರಿ ೨೦೧೩

Thursday, January 10, 2013

ದೇವರು ದೆವ್ವ ವಿಜ್ಞಾನ : ಮೌಢ್ಯತೆ ಹೊಡೆದೋಡಿಸುವ ಪುಸ್ತಕ

ಡಾ. ಸಿದ್ರಾಮ ಕಾರಣಿಕ   

    ಒಂದು ಪುಸ್ತಕ ಯಾಕೆ ಮೆಚ್ಚುಗೆ ಗಳಿಸುತ್ತದೆ ಎಂಬುದು ವಾಚಕನ ಅಭಿರುಚಿಯನ್ನು ಅವಲಂಬಿಸಿರುತ್ತದೆ. ವಾಚಕನ ಮನಸ್ಥಿತಿ ಮತ್ತು ಅನುಭವ ಗ್ರಾಹ್ಯತೆಗಳು ಅಭಿರುಚಿಯನ್ನು ನಿರ್ಧರಿಸುತ್ತವೆ. ಒಬ್ಬನಿಗೆ ಮೆಚ್ಚುಗೆಯಾದ ಪುಸ್ತಕ ಇನ್ನೊಬ್ಬನಿಗೆ ಮೆಚ್ಚುಗೆಯಾಗದೇ ಹೋಗಬಹುದು. ಡಾ. ಕೋವೂರ್ ಅವರ `ದೇವರು ದೆವ್ವ ವಿಜ್ಞಾನ' ಎಂಬ ಕೃತಿ ನನ್ನ ಮೆಚ್ಚಿನ ಪುಸ್ತಕ. ಅದು ನನ್ನ ಮೇಲೆ ಬೀರಿದ ಪ್ರಭಾವ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದರೆ ಕೆಲವರು ನಂಬಲಿಕ್ಕಿಲ್ಲ ! ಈ ಪುಸ್ತಕ ಮತ್ತು ಕುಮಾರ ಕಕ್ಕಯ್ಯ  ಪೋಳ ಅವರ `ಚಾತುರ್ವರ್ಣ ಧರ್ಮದರ್ಶನ' ಈ ಎರಡೂ ಪುಸ್ತಕಗಳನ್ನು ನಾನು ಹೈಸ್ಕೂಲಿನಲ್ಲಿದ್ದಾಗಲೇ ಓದಿ ತಿಳಿದುಕೊಂಡೆ. ಇನ್ನೂ ಕೂಡ ಯಾವಾಗಾದರೊಮ್ಮೆ ಈ ಪುಸ್ತಕಗಳ ಪುಟ ಹೊರಳಿಸುತ್ತಲೇ ಇರುತ್ತೇನೆ. ಈ ಎರಡೂ ಪುಸ್ತಕಗಳು ಮೊದಲ ಓದಿಗೇ ನನ್ನ ಮೇಲೆ ಅಗಾಧವಾದ ಪ್ರಭಾವ ಬೀರಿ, ಬದುಕಿನ ದಾರಿಯನ್ನೇ ಬದಲಿಸಿದವು ; ವೈಚಾರಿಕ ಮನೋಭಾವದ ತಳಹದಿಯನ್ನು ಗಟ್ಟಿಗೊಳಿಸಿದವು. ಅಲ್ಲಿಯವರೆಗೆ ಪೂಜೆ, ವೃತ, ಭಕ್ತಿ ಎಂದು ಕಂಡ ಕಂಡ ಕಲ್ಲು-ಕಟ್ಟಿಗೆಗಳಿಗೆ, ಕಲ್ಲು-ಮಣ್ಣಿನ ಕಟ್ಟಡಗಳಿಗೆ, ಬೊಂಬೆಗಳಿಗೆ ಭಯಭಕ್ತಿಯಿಂದ ನಮಸ್ಕರಿಸಿ, ಅವುಗಳ ಬಗ್ಗೆಯೇ ಇನ್ನೊಬ್ಬರು ಹೇಳಿದ್ದನ್ನು ಮತ್ತು ನನಗೆ ತಿಳಿದಿರುವುದನ್ನು ಕವಿತೆ ಮಾಡಿ ಹಾಡಿ ಖುಷಿ ಪಡುತ್ತಿದ್ದ ನಾನು ಆನಂತರದಲ್ಲಿ ತೀರ ಬದಲಾಗಿ ಹೋದೆ. ಭಕ್ತಿ, ಪೂಜೆ, ವೃತ ಮೊದಲಾದವುಗಳಿಗೆ ತಿಲಾಂಜಲಿ ನೀಡಿದೆ. ಅಷ್ಟೇ ಯಾಕೆ ಫ್ರೇಮಿನಲ್ಲಿ ಬೆಚ್ಚಗೆ ಕುಳಿತ ಚಿತ್ರಗಳನ್ನೂ ಕಿತ್ತೆಸೆದೆ ಮತ್ತು ನಾನು ಬರೆದ ಸ್ತುತಿ ಹಾಡುಗಳನ್ನು ಹರಿದು ಹಾಕಿದೆ. ದೇವರು-ದೆವ್ವಗಳ ನಿರಾಕರಣೆ ಮಾಡುತ್ತಲೇ ಬೊಗಳೆ ಬಿಡುತ್ತಿದ್ದವರ ಮುಂದೆ ಗೇಲಿ ಮಾಡಿ ನಗತೊಡಗಿದೆ ; ವಾದಿಸುತ್ತಿದ್ದೆ ; ವಾದಗಳಲ್ಲಿ ನಿಜವಾಗಿಯೂ ನನ್ನ ಮೇಲೆ ಪ್ರಭಾವ ಬೀರಿದ ಆ ಎರಡೂ ಪುಸ್ತಕಗಳಲ್ಲಿದ್ದ ಉದಾಹರಣೆ ನೀಡಿ ಗೆಲ್ಲುತ್ತಿದ್ದೆ.  ನನ್ನೊಳಗಿನ ಹೊಸ ಮನುಷ್ಯನ ಹುಟ್ಟಿಗೆ ಆ ಎರಡೂ ಪುಸ್ತಕಗಳು ಕಾರಣವಾಗಿವೆ. ಅವುಗಳಲ್ಲಿ ಡಾ. ಕೋವೂರ್ ಅವರ `ದೇವರು ದೆವ್ವ ವಿಜ್ಞಾನ' ಪುಸ್ತಕದ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೇನೆ.
    ಡಾ. ಕೋವೂರ್ ಅವರ ಮೂವತ್ತ್ಮೂರು ಲೇಖನಗಳನ್ನು ಎಚ್.ಎಂ. ಕುಮಾರಸ್ವಾಮಿ, ಮಹಾಬಲೇಶ್ವರರಾವ್, ತೀ.ನಂ. ಶ್ರೀಧರ, ಯಶವಂತ ಡೋಂಗ್ರೆ, ಸಬೀಹಾ ಗಜೇಂದ್ರಗಡ, ಎನ್. ಅನ್ನಪೂರ್ಣೇಶ್ವರಿ, ಒಡೆಯರ್ ಡಿ. ಹೆಗಡೆ ಕನ್ನಡೀಕರಣ ಮಾಡಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರು ಸಂಪಾದಕರಾಗಿರುವ ಈ ಪುಸ್ತಕವನ್ನು 1988ರಲ್ಲಿ ಬೆಂಗಳೂರಿನ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ಇಂದಿಗೂ ಈ ಪುಸ್ತಕದ ಪ್ರತಿಗಳು ಬಹುಬೇಗನೇ ಮುಗಿದು  ಪುನರ್‍ಮುದ್ರಣವಾಗುತ್ತಲೇ  ಇದೆ ಎಂದರೆ ಅದರ ಮಹತ್ವವನ್ನು ಯಾರಾದರೂ ಅರಿಯಬಹುದು.
    ಡಾ. ಅಬ್ರಾಹಂ ಟಿ. ಕೋವೂರ್ ಕೇರಳದ ತಿರುವಳ್ಳ ಎಂಬ ಗ್ರಾಮದಲ್ಲಿ 10ನೇ ಎಪ್ರೀಲ್ 1898 ರಂದು ಜನಿಸಿದರು. ಅವರ ತಂದೆ ರೆವ್ಹರಂಡ್ ಕೋವೂರ್ ಐಪೆತೊಮ್ಮಕತ್ತನಾರ್ ಅವರು ಮಲಬಾರಿನ ಸಿರಿಯನ್ ಚರ್ಚೊಂದರಲ್ಲಿ ಫಾದ್ರಿಯಾಗಿದ್ದರು. ಅಬ್ರಾಹಂ ಅವರು ತಂದೆಯ ಹಾದಿಯನ್ನು ಹಿಡಿಯಲಿಲ್ಲ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನು ಅಧ್ಯಯನ ಮಾಡಿದರೂ ವಿಶೇಷವಾಗಿ `ಅತೀಂದ್ರಿಯ ಮತ್ತು ಅತೀ ಮಾನಸ ಪ್ರಕ್ರಿಯೆಗಳು' (Pshychic and Para Pshychic ) ಎಂಬ ಹೆಸರಿನ ಮಹಾಪ್ರಬಂಧಕ್ಕೆ ಅಮೇರಿಕೆಯ ಮಿನ್ನಿಸೋಟ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಪಿಯಿಂದ ಡಾಕ್ಟರೇಟ್ ಪಡೆದರು.
    ಆನಂತರ ಕೇರಳದಲ್ಲಿ ಡಾ. ಕೋವೂರ್ ಅವರ ವೃತ್ತಿಜೀವನ ಆರಂಭವಾಯಿತು. ಕೊಟ್ಟಾಯಂನ ಸಿ.ಎಂ.ಎಸ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿ, ಅಲ್ಲಿಂದ ಶ್ರೀಲಂಕಾಗೆ ಹೋಗಿ ಜಾಪ್ನಾ ಸೆಂಟ್ರಲ್ ಕಾಲೇಜು, ಗಲ್ಲೆಯ ರಿಚ್ಮಂಡ್ ಕಾಲೇಜು, ಮೌಂಟ್ ಲೇವಿನಿಯಾದ ಸೇಂಟ್ ಥಾಮಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದರು. ಆನಂತರ ಕೊಲೊಂಬೋದ ಥಸ್ರ್ಟನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, 1959 ರಲ್ಲಿ ನಿವೃತ್ತಿಯಾದರು.
    ನಿವೃತ್ತಿಯ ನಂತರದಲ್ಲಿ ಡಾ. ಕೋವೂರ್ ರು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಕ್ರಿಯಾಶೀಲರಾದರು. ಜನರಲ್ಲಿ ಮಡುಗಟ್ಟಿದ ಮೌಢ್ಯದ ಕತ್ತಲೆಯಲ್ಲಿ ದೀಪ ಬೆಳಗಿಸಲು ನಿರಂತರವಾಗಿ ಪ್ರಯತ್ನಿಸಿದರು. ಸಾಂಪ್ರದಾಯಿಕ ಆಲೋಚನೆಗಳ ಸೆರೆಯಿಂದ ಹೊಸ ಬದುಕಿನ ಹಾದಿ ತೋರುವ ಅವರ ಪ್ರಯತ್ನ ಬಹಳಷ್ಟು ಗಟ್ಟಿಯಾಗಿತ್ತು. ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉದ್ದೀಪನಗೊಳಿಸುವತ್ತ ಆಸಕ್ತಿ ತಳೆದರು. ಅತೀಂದ್ರಿಯ, ಅತೀ ಮಾನಸ ಹಾಗೂ ಆಧ್ಯಾತ್ಮಿಕ ಶಕ್ತಿ ಹೊಂದಿದವರೆಂದು ಹೇಳಿಕೊಳ್ಳುವ ಮಂದಿ ವಂಚಕರಾಗಿರುತ್ತಾರೆ ಇಲ್ಲವೆ ಮನೋರೋಗಿಗಳಾಗಿರುತ್ತಾರೆ ಎಂಬ ವಾದವನ್ನು ಜನರ ಮುಂದಿಟ್ಟ ಕೋವೂರ್‍ರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಅದನ್ನು ಸಶಕ್ತವಾಗಿ ಮಂಡಿಸಿದರು.
    ಅತೀಂದ್ರಿಯ ಶಕ್ತಿ ಇದೆ ಎನ್ನುವವರು ಅದನ್ನು ಸಾಬೀತುಪಡಿಸಿದ್ದಲ್ಲಿ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ಅವರು ಘೋಷಿಸಿದರು. ಈ ಸವಾಲನ್ನು ಸ್ವೀಕರಿಸಿದ ಬೆಂಗಳೂರಿನ ರಾಘವೇಂದ್ರ ಸ್ವಾಮಿಭಕ್ತ ಡಾ. ಜಿ. ವೆಂಕಟರಾವ್ ಮತ್ತು ಸ್ವೀಡನ್ನಿನ ಪಾದ್ರಿ ಕೆಜಲ್ ಐಡ್ ತಮ್ಮತನವನ್ನು ತೋರಿಸಲು ಹೋಗಿ ಕೈ ಸುಟ್ಟುಕೊಂಡರು. ಡಾ. ಕೋವೂರ್‍ರು ಪುಟ್ಟಪರ್ತಿ ಸಾಯೀಬಾಬಾನಿಗೆ  ನೇರ ಸವಾಲು ಹಾಕಿ, ಶೂನ್ಯದಿಂದ ವಿಭೂತಿ, ಬಂಗಾರದುಂಗುರ ಸೃಷ್ಟಿಸಿ ಭಕ್ತರಿಗೆ ನೀಡುವಂತೆ ಒಂದು ಕುಂಬಳಕಾಯಿಯನ್ನು ಸೃಷ್ಟಿಸಿ ಕೊಡಿ ಎಂದಿದ್ದರು. ಪುಟ್ಟಪರ್ತಿ ಸಾಯೀಬಾಬಾ ಅದಕ್ಕೆ ಉತ್ತರವನ್ನು ನೀಡದೇ ಗಪ್‍ಚುಪ್ ಆಗಿದ್ದ ! ಡಾ. ಕೋವೂರ್ ರ ಇನ್ನೊಂದು ಹೆಗ್ಗಳಿಕೆ ಎಂದರೆ ದೇವಮಾನವರು ಎಂದು ಫೋಜು ಕೊಟ್ಟು, ಪವಾಡ ಮಾಡಿ, ಮೂಢಮಂದಿಯನ್ನು ಮರುಳು ಮಾಡುವ ಜನರ ಗುಟ್ಟುಗಳನ್ನೆಲ್ಲ ಬಯಲು ಮಾಡುತ್ತಿದ್ದರು. ಜನರು ನಂಬುತ್ತಿದ್ದ ಪವಾಡದಂತಹ ಕ್ರಿಯೆಗಳನ್ನು ಸ್ವತಃ ತಾವೇ ಮಾಡಿ, ಆ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಅನಾವರಣಗೊಳಿಸುತ್ತಿದ್ದರು.
    "ನಾನು ಮಾನವಪ್ರೇಮಿ. ನಾನು ಸಾಯುವುದರೊಳಗಾಗಿ ಸಾಧ್ಯವಾದಷ್ಟು ಇಂತಹ ಮೋಸಗಾರರ, ವಂಚಕರ ಎಲ್ಲ ಕುತಂತ್ರಗಳನ್ನು ಬಯಲಿಗೆಳೆದು ಇಂತಹ ನಯವಂಚಕರ ಜಾಲದೊಳಗೆ ಸಿಕ್ಕಿ ಒದ್ದಾಡುತ್ತಿರುವ ಲಕ್ಷಗಟ್ಟಲೇ ಜನರನ್ನು ಮುಕ್ತಿಗೊಳಿಸಿದರೆ ಅದೇ ನನಗೆ ತೃಪ್ತಿಯ ವಿಷಯ. ನಂತರ ಸಂತೋಷದಿಂದ ಸಾವನ್ನು ಸ್ವಾಗತಿಸುತ್ತೇನೆ." ಎನ್ನುತ್ತಿದ್ದ ಅವರು ಅಂದುಕೊಂಡಂತೆಯೇ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿ, ಫಲ ಪಡೆದರು. 1978 ರಲ್ಲಿ ಮರಣಿಸಿದ ಡಾ. ಕೋವೂರ್‍ರ ದೇಹವನ್ನು ಅವರ ಇಚ್ಚೆಯಂತೆಯೇ ವೈದ್ಯಕೀಯ ಸಂಶೋಧನೆಗೆ ಬಳಸಿಕೊಳ್ಳಲಾಯಿತು.
    ದೇವರು ದೆವ್ವ ವಿಜ್ಞಾನ ಕೃತಿಯಲ್ಲಿಯ ಎಲ್ಲ ಲೇಖನಗಳಲ್ಲಿ ಕತ್ತಲೆಯಿಂದ ಬೆಳಕಿನ ಕಡೆಗೆ ದಾದಿ ಕಾಣಿಸುವ ಪ್ರಬಲ ಪ್ರಯತ್ನವಿದೆ ಅಥವಾ ಅವರ ಸಾಧನೆಯ ಸಿದ್ಧಿ ಇದೆ. ಜಪಾನ್ ದೇಶದ ಹೆಣ್ಣುಮಗುವೊಂದು ಸತ್ತ ಮೇಲೆ ಅದರ ಆತ್ಮ ಒಂದು ಗೊಂಬೆಯಲ್ಲಿ ಸೇರಿದ್ದು, ಆ ಗೊಂಬೆಗೆ ಕ್ರಮೇಣ ತಲೆಗೂದಲು ಬೆಳೆಯುತ್ತಿವೆ ಎಂಬ ವರದಿಯನ್ನು ತಳ್ಳಿ ಹಾಕುವ ಕೋವೂರ್‍ರು ಕೂದಲು ಬೆಳೆಯಬೇಕಾದರೆ ದೇಹದಲ್ಲಿ ರಕ್ತ ಸಂಚಾರ ಇರಲೇಬೇಕಾಗುತ್ತದೆ. ಹಾಗಾಗಿ ಇದೊಂದು ಕಟ್ಟುಕತೆ ; ಹಾಸ್ಯಾಸ್ಪದ ಸಂಗತಿ ಎಂದು ತಿಳಿಸಿದರು.
    ದೇವರ ಅಸ್ತಿತ್ವವನ್ನು ಸಂಪೂರ್ಣವಾಗಿ ತಳ್ಳಿ ಹಾಕುವ ಅವರು `ಈ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಭೌತಿಕ ಎಂಬ ವೈಜ್ಞಾನಿಕ ವಿಚಾರವನ್ನು ಮರೆಯಬಾರದು' ಎಂದಿರುವ ಅವರು, `ಒಂದು ವೇಳೆ ವಿಶ್ವಕರ್ತೃ ಒಬ್ಬನಿದ್ದರೆ, ಒಳ್ಳೆಯದು-ಕೆಟ್ಟದ್ದು, ಸುಂದರ-ಕುರೂಪ ಇವೆಲ್ಲ ಅವನಿಂದಲೇ ಬಂದಿರಬೇಕಲ್ಲವೇ ?ಆದರೆ ಉದಾರಿಯಾದ ಆ ದೇವನು ಇಷ್ಟೊಂದು ಕೆಟ್ಟ ವಸ್ತುಗಳನ್ನೇಕೆ ಸೃಷ್ಟಿಸಿದ ?' ಎಂದು ಪ್ರಶ್ನಿಸುತ್ತಾರೆ. `ಪ್ರಪಂಚದಲ್ಲಿ  ನಡೆಯುವುದೆಲ್ಲವೂ ದೈವ ನಿಯಾಮಕವಾದರೆ ಕೊಲೆ, ಹಿಂಸೆ, ಯುದ್ಧ, ಬಲತ್ಕಾರ, ಮಾನಭಂಗ, ಕಳ್ಳತನ, ದರೋಡೆ, ಪ್ಲೇಗ್, ಕ್ಷಾಮ, ಪ್ರವಾಹ-ಈ ಎಲ್ಲ ದುರಂತಗಳಿಗೆ ಆತ ಸ್ವಯಂ ಬಾಧ್ಯಸ್ಥನಾಗಲೇಬೇಕಲ್ಲವೆ ?' ಎಂದು ಕೇಳಿದ್ದಾರೆ.
    ಧರ್ಮ ಮತ್ತು ದೇವರು ಮನುಷ್ಯನನ್ನು ಭ್ರಮೆಯಲ್ಲಿಡುತ್ತವೆ. ಬೈಬಲ್ `ದೇವವಾಣಿ' ಅಲ್ಲ ಎನ್ನುವ ಅವರು ಅಲ್ಲಿ ಬರುವ ಮ್ಯಾಥ್ಯೂ ಅಧ್ಯಾಯ 10 ರಲ್ಲಿ ಜೀಸಸ್ ಕ್ರಿಸ್ತ ಹೀಗೆ ಹೇಳುತ್ತಾನೆ, `ನಾನು ಶಾಂತಿಯನ್ನು ಸಾರಲು ಬಂದಿಲ್ಲ ; ಖಡ್ಗವನ್ನು ಕೊಡಲು, ತಂದೆಯ ವಿರುದ್ಧ ಮಗನನ್ನೂ ತಾಯಿಯ ವಿರುದ್ಧ ಮಗಳನ್ನೂ ಸೊಸೆಯ ವಿರುದ್ಧ ಅತ್ತೆಯನ್ನೂ ಎತ್ತಿ ಕಟ್ಟಲು ನಾನು ಬಂದಿದ್ದೇನೆ.' ಇದರಿಂದ ಜೀಸಸ್‍ನ ಉದ್ದೇಶ ಸ್ಪಷ್ಟವಾಗುತ್ತದೆ. ಹೀಗಾಗಿಯೇ ಅವರು ಕ್ರೈಸ್ತ ಧರ್ಮದ ಬಗ್ಗೆ ನಿರಾಕರಣ ವಾದವನ್ನು ಮಂಡಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಇತಿಹಾಸಕಾರ ಮಾರ್ಷಲ್ ಜೆ. ಗೌವ್‍ನ ಮಾತನ್ನು ಉದ್ದರಿಸುತ್ತಾರೆ. ಗೌವ್‍ನ ವಿಚಾರ ಹೀಗಿದೆ, `ಮನುಷ್ಯನಲ್ಲಿ ವಕ್ರಬುದ್ಧಿಯನ್ನು ಬೆಳೆಸುವಲ್ಲಿ ಬೈಬಲ್‍ನ್ನು ಮೀರಿಸುವ ಬೇರೊಂದು ಪುಸ್ತಕವಿಲ್ಲ. ಸುಳ್ಳು, ಕಪಟ, ಮೋಸ, ದಾಸ್ಯ, ಕೊಲೆ, ಸುಲಿಗೆ, ನರಭಕ್ಷಕತನ, ಸೂಳೆಗಾರಿಕೆ, ಅನೈತಿಕ ವ್ಯವಹಾರ, ಹಿಂಸೆ ಮೊದಲಾದ ಚಟುವಟಿಕೆಗಳಿಗೆ ಬೈಬಲ್ ಅನುಮತಿ ನೀಡುತ್ತದೆ ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತದೆ.'
    ಬೌದ್ಧ ಧರ್ಮದ ಜಾತಕ ಕತೆಗಳು ವೈಜ್ಞಾನಿಕ ವಾದವನ್ನು ಬುಡಮೇಲಾಗಿಸುತ್ತವೆ ಎಂದು ಡಾ. ಕೋವೂರ್‍ರು ಅಭಿಪ್ರಾಯಪಡುತ್ತಾರೆ. ಹಿಂದೂ ಧರ್ಮದ ದೇವತೆಗಳನ್ನೂ ಗೇಲಿ ಮಾಡಿರುವ ಅವರು, ಬ್ರಹ್ಮ ತನ್ನ ಮಗಳೇ ಆದ ಸರಸ್ವತಿಯನ್ನು ಮಾನಭಂಗ ಮಾಡಿ ಮದುವೆಯಾದದ್ದು, ಆನಂತರದಲ್ಲಿ ಅವರಿಬ್ಬರಿಗೆ ಹುಟ್ಟುವ ಸ್ವಯಂಭು ಮತ್ತು ಶತರೂಪಾ ಎಂಬ ಹೆಸರಿನ ಅಣ್ಣ-ತಂಗಿಯರೇ ದಂಪತಿಗಳಾಗಿ ಮಕ್ಕಳನ್ನು ಪಡೆಯುವುದು, ಶಿವನಿಂದ ಅತ್ಯಾಚಾರಕ್ಕೆ ಒಳಗಾದ ಮಧುರಾ ಮಂಡೋದರಿಯಾಗಿ ಗರ್ಭ ಧರಿಸುವುದು, ಇಂದ್ರ ಮತ್ತು ಶಂಕರಾಚಾರ್ಯರ ಅತೀ ಕಾಮುಕತನ, ಶಿವನ ಲೈಂಗಿಕ ಹಗರಣಗಳು, ಅನೈತಿಕ ಸಲಿಂಗ ಕಾಮದಿಂದ ಹುಟ್ಟಿದ ಶಬರಿಮಲೈ ಅಯ್ಯಪ್ಪ, ಕೃಷ್ಣನ ವಿಕೃತ ಕಾಮ ಮೊದಲಾದವುಗಳನ್ನು ಉದಾಹರಣೆ ಸಹಿತ ವಿವರಿಸುತ್ತಾರೆ. ಜೊತೆಗೆ ಕ್ರೈಸ್ತ ಯವಹಾನನು ಮೂವತ್ತೆರಡು ಸಾವಿರ ಕನ್ಯೆಯರೊಂದಿಗೆ ನಡೆಸಿದ ವಿಕೃತ ಕಾಮ, ಕ್ರಿಸ್ತನ ತಾಯಿ ಕನ್ಯೆಯಾಗಿಯೇ ಉಳಿದದ್ದು ಮೊದಲಾದವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ವಾಸ್ತವ ವಾದವನ್ನು ಪ್ರತಿಪಾದಿಸುತ್ತಾರೆ. ಈ ಎಲ್ಲ ಕಾರಣಗಳಿಂದಲೇ ಇಂಥವುಗಳನ್ನು ಪಠ್ಯಪುಸ್ತಕ ಮಾಡಬಾರದು ಎಂಬ ವಿಚಾರವನ್ನೂ ಅವರು ಮಂಡಿಸಿದ್ದಾರೆ.
    ದೇವಮಾನವರೆಂದು ಘೋಷಿಸಿಕೊಂಡ ವ್ಯಕ್ತಿಗಳ ಬಗ್ಗೆ ಕಿಡಿ ಕಾರುವ ಅವರು ಪುಟ್ಟಪರ್ತಿ ಸಾಯೀಬಾಬಾನ ಅನೈತಿಕ ಸಲಿಂಗರತಿಯ ವಿಕೃತ ಕಾಮ, ಮಹರ್ಷಿ ಎನಿಸಿಕೊಂಡಿದ್ದ ಮಹೇಶಯೋಗಿ ಪಾಪ್ ಸಂಗೀತಗಾರ್ತಿ ಮಿಯಾಫಾರೋ ಎಂಬಾಕೆಯನ್ನು ಬಲತ್ಕರಿಸಿದ್ದು, ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಿಬಿದ್ದ ಪ್ರಸಂಗಗಳನ್ನು ತಿಳಿಸುತ್ತಾರೆ. ಹಾಗೆಯೇ ನೀಲಕಂಠ ಬಾಬಾ, ಪಂಡರೀಮಲೈಸ್ವಾಮಿ ಆಚಾರ್ಯ ರಜನೀಶ್, ದತ್ತಾಬಾಳ್, ಗುರುದೇವ ಮುಕ್ತಾನಂದ, ನಿರ್ಮಲಾದೇವಿ, ಸ್ವಾಮಿ ಚಿನ್ಮಯಾನಂದ ಮೊದಲಾದವರ ಕುಟೀಲತೆಗಳನ್ನು ಬಹಿರಂಗಗೊಳಿಸುತ್ತಾರೆ.
    ಭೂತಚೇಷ್ಟೆ (ಪೋಲ್ಟರ್ ಗೋಸ್ಟ್) ಬಗೆಗಿನ ತಮ್ಮ ಸ್ವಂತ ಅನುಭವಗಳನ್ನು ದಾಖಲಿಸುವ ಡಾ ಕೋವೂರ್‍ರು ಘಟನೆ ನಡೆದ ಸ್ಥಳಕ್ಕೆ ಹೋಗಿ ವೈಜ್ಞಾನಿಕ ರೀತಿಯಿಂದ ಅವುಗಳನ್ನು ಅಧ್ಯಯನ ಮಾಡಿ, ಅವೆಲ್ಲ ಸುಳ್ಳು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. `ಬಾಲ್ಯದಿಂದಲೂ ಮನಸ್ಸಿನ ಮೇಲಾದ ಪ್ರಭಾವಗಳು ಮತ್ತು ಭೋದನೆಗಳ ಪರಿಣಾಮದಿಂದಾಗಿ ಶೇಖರಗೊಂಡ ಸುಳ್ಳು ನಂಬಿಕೆಗಳು, ಭೂತ-ಪ್ರೇತ-ಪಿಶಾಚಿ-ದೆವ್ವಗಳು, ಜ್ಯೋತಿಷ್ಯ, ಹಸ್ತಸಾಮುದ್ರಿಕ, ಶಕುನಗಳು, ಆಶೀರ್ವಾದ, ಶಾಪ, ಅಂಜನ, ಮುಹೂರ್ತ, ಸ್ವರ್ಗ-ನರಕ, ಪುನರ್ಜನ್ಮ, ಮಾಟ-ಮಂತ್ರ ಮೊದಲಾದವುಗಳು ಕೇವಲ ನಮ್ಮ ಭ್ರಮೆಗಳು ಮಾತ್ರ ಎಂದು ಸೋದಾರಹರಣೆಗಳ ಮೂಲಕ  ವಿಶ್ಲೇಷಿಸುವ ಅವರು, ಈ ಭ್ರಮೆಯನ್ನೇ ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಮಂದಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸುತ್ತಾರೆ.
    ಧ್ಯಾನದಿಂದ ಜ್ಞಾನೋದಯ ಎನ್ನುವದು ಒಂದು ಹಸಿಸುಳ್ಳು. ಅತೀಂದ್ರಿಯ ಧ್ಯಾನದಲ್ಲಿ ಕೆಲವರು ಕ್ರಿಪ್ಟೆಸ್ತೇಸಿಯಾ ಎಂಬ ನರವ್ಯಾಧಿಗೆ ಬಲಿಯಾಗಿರುವ ಸಾಧ್ಯತೆಗಳಿವೆ ಎಂಬುದನ್ನು ವಿಸ್ತಾರವಾಗಿ ಹೇಳುವ ಅವರು, ಮಾದಕ ವಸ್ತುಗಳೂ ಅದೇ ಕ್ರಿಯೆಯನ್ನು ಮನುಷ್ಯನಲ್ಲಿ ಉಂಟುಮಾಡುತ್ತವೆ ಎಂದೂ ಹೇಳುತ್ತಾರೆ. ಈ ಸ್ಥಿತಿಯಲ್ಲಿ ರೋಗಿ, ತನ್ನಲ್ಲಿ ಅತೀಂದ್ರಿಯ ಆಧ್ಯಾತ್ಮಿಕ ಹಾಗೂ ಮಂತ್ರಶಕ್ತಿಗಳಿವೆ ಎಂಬ ಮೂರ್ಖ ಭ್ರಾಂತಿಗೆ ಒಳಗಾಗುತ್ತಾನೆ. ಆದ್ದರಿಂದ ನಿದ್ರಾಜನಕ ಮದ್ದುಗಳಂತೆ ಧ್ಯಾನವನ್ನೂ ನಿಷೇಧಿಸಿ, ಅದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ.
    `ದೇವರು ದೆವ್ವ ವಿಜ್ಞಾನ' ಸಂಕಲನದಲ್ಲಿ ಕೇವಲ ಇಪ್ಪತ್ತೆರಡು ಲೇಖನಗಳಲ್ಲಿಯೇ ಇಷ್ಟೊಂದು ಮಾಹಿತಿಯಿರುವುದನ್ನು ಅರಿತಾಗ, ಡಾ. ಕೋವೂರ್ ಅವರ ಎಲ್ಲ ಬರಹಗಳನ್ನು ಅಧ್ಯಯನ ಮಾಡಿದಲ್ಲಿ ಇನ್ನೆಷ್ಟು ಮಾಹಿತಿಗಳು ಸಿಗಬಹುದು ; ವಿಚಾರ ಮಾಡಿ. ಈ ಪುಸ್ತಕದಲ್ಲಿರುವ ವಿಚಾರಗಳೇ ಮೂಢನಂಬಿಕೆಯ ಅಂಧಕಾರದಲ್ಲಿ ಸಿಲುಕಿರುವ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿವೆ.
                                                   *****

Monday, January 07, 2013

ಅಕ್ಷರಹೀನ ವಚನಕಾರರು ?


                                ಡಾ. ಸಿದ್ರಾಮ ಕಾರಣಿಕ
                           
    ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸಂಭವಿಸಿತು. ಜಾತಿ-ಜಾತಿಗಳಲ್ಲಿದ್ದ ಅಂತರವನ್ನು ದೂರ ಮಾಡಿ, ಪುರೋಹಿತಶಾಹಿ ವರ್ಗದ ವಿರುದ್ಧ ಸಿಡಿದು ನಿಂತು ಮಾಡಿದ ಕ್ರಾಂತಿಯ ಹೆಜ್ಜೆ ಯಾವತ್ತಿಗೂ ಅನುಕರಣೀಯವೇ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯ ಕೂಡ ಅಕ್ಷರ ಕಲಿತು ವಚನ ರಚಿಸಿದರು ಎಂಬುದು ಒಪ್ಪತಕ್ಕ ಮಾತು ಅಲ್ಲ ; ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ. ಹೀಗೆ ಹೇಳುತ್ತಿರುವುದನ್ನು ಒಪ್ಪದ ಕೆಲ `ಬುದ್ಧಿಜೀವಿಗಳು', `ಪಂಡಿತರು', ವಿದ್ವಾಂಸರು' ಅಪಸ್ವರ ಎತ್ತಿ ಹಾಡಲು ಸುರು ಮಾಡಬಹುದು ! ಈ ವಾದವು ಪರಾಂಪರಾಗತ ನಂಬಿಕೆಯೊಂದನ್ನು ಬುಡಮೇಲು ಮಾಡುವ ಹುನ್ನಾರ ಎಂದು ಹುಯಿಲೆಬ್ಬಿಸಬಹುದು ! ಆದರೆ ವಾಸ್ತವ ವಾಸ್ತವೇ ! ಇತಿಹಾಸದ ಸತ್ಯವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
    ವೈದಿಕ ಧರ್ಮದಲ್ಲಿ ದಲಿತರು, ಶೂದ್ರರು ಅಕ್ಷರ ಕಲಿಯುವಿಕೆಯನ್ನು ನಿರಾಕರಿಸಲಾಗಿದೆ. ಕೇವಲ ಪಠನ ಮಾಡಿದರೆ ಸಾಕು ನಾಲಿಗೆಯನ್ನೇ ಕಿತ್ತಿ ಹಾಕುವ, ವೇದ-ಮಂತ್ರಗಳನ್ನು ಕೇಳಿದರೆ ಸಾಕು ಕಿವಿಯಲ್ಲಿ ಕಾದ ಸೀಸವನ್ನು ಸುರಿಯುವ ಪದ್ಧತಿಯನ್ನು ಪ್ರಾಚೀನ ಕಾಲದಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ಪರಿಕ್ರಮಕ್ಕೆ ಹನ್ನೆರಡನೇ ಶತಮಾನವೂ ಕೂಡ ಹೊರತಾಗಿರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಬಸವಣ್ಣ ತೋರಿದ ಕ್ರಾಂತಿಕಾರಿ ನಿಲುವಿಗೆ ಸನಾತನವಾದಿಗಳು ತೋರಿದ ತೀವ್ರ ವಿರೋಧವನ್ನು ಗಮನಿಸಬೇಕು. ಹೀಗೆಲ್ಲ ಇರುವಾಗ ಒಂದು ಸೀಮಿತ ಅವಧಿಯಲ್ಲಿ ಅಕ್ಷರ ಹೀನ ದಲಿತರು, ಶೂದ್ರರು ಮತ್ತು ಮಹಿಳೆಯರು ಅಕ್ಷರ ಕಲಿತು ಪಾಂಡಿತ್ಯ ಗಳಿಸಿದರು ಎಂದರೆ ಅದೇನು ಪವಾಡವೇ ?
    `ಪುರುಷರೇ ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಆ ಕಾಲದಲ್ಲಿ ನೂರಾರು ಜನ ಸ್ತ್ರೀಯರು, ಅದರಲ್ಲೂ ದಲಿತ ವರ್ಗದ ಸ್ತ್ರೀಯರು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುವುದುರ ಮೂಲಕ ಬಹುದೊಡ್ಡ ಪ್ರಸಾರ ಮಾಧ್ಯಮವೊಂದು ವರಿಷ್ಠರ ವಜ್ರಮುಷ್ಠಿಯಿಂದ ಕನಿಷ್ಠ ವರ್ಗದ ಪುರುಷರ ಕೈಗೆ, ಸ್ತ್ರೀಯರ ಕೈಗೂ ಇಳಿದು ಬಂದದ್ದು ತೀವ್ರ ಗಮನಿಸಬೇಕಾದ ಅಂಶವಾಗಿದೆ.'1 ಎನ್ನುವ ಡಾ. ಎಂ. ಎಂ. ಕಲ್ಬುರ್ಗಿಯವರ ಮಾತಿನಲ್ಲಿರುವ `ಸಾಹಿತ್ಯ ನಿರ್ಮಿತಿ' ಬಂದದ್ದು ಕೇವಲ ಅನುಭಾವದಿಂದಾಗಿಯೇ ಹೊರತು ಅಕ್ಷರಜ್ಞಾನದಿಂದ ಅಲ್ಲವೇ ಅಲ್ಲ.
    `........ಪ್ರಾಚೀನ ಮಹಿಳಾ ಶಿಕ್ಷಣವನ್ನು ಗಮನಿಸಿದರೆ ಹೆಣ್ಣು ಸಾಂಸ್ಕøತಿಕವಾಗಿ ದಾಖಲಾಗಿರುವುದು ಗಮನಾರ್ಹ ವಸ್ತವಾಗಿದೆಯೇ ಹೊರತು ವಿದ್ಯಾವತಿಯಾಗಿ ಅಲ್ಲ'2 ಎನ್ನುವ ಡಾ. ಚೆನ್ನಕ್ಕ ಪಾವಟೆಯವರ ಮಾತುಗಳನ್ನು ದಲಿತ ಮತ್ತು ಶೂದ್ರರಿಗೂ ಅನ್ವಯಿಸಿಕೊಂಡು ಅವಲೋಕಿಸಿದಾಗ ಲೇಖನದ ಈ ವಾದಕ್ಕೆ ಸಾಕ್ಷ್ಯ ದೊರೆಯುತ್ತದೆ. ಆದರೆ ಈ ಮಟ್ಟಿಗಿನ ವಾದವನ್ನು ಬೆಳೆಸಲು ಬಹಳಷ್ಟು ಜನ ಹಿಂಜರಿಯುವುದೇ ಹೆಚ್ಚು. ಮತಾಂಧತೆಯ ಭಾರತದಲ್ಲಿ ಇದು ಸಹಜ ಕೂಡ !
    `ಯಾವ ದಲಿತರು ಅಜ್ಞಾನಿಗಳಾಗಿದ್ದರೋ ಅಂಥವರು ವಚನ ಚಳುವಳಿಯ ಸಂದರ್ಭದಲ್ಲಿ ವಿಚಾರವಂತರಾದರು. ವಿಚಾರವಾದಕ್ಕೆ ವ್ಯಾಖ್ಯೆಯನ್ನು ಬರೆದರು. ಯಾರನ್ನು ಈ ವ್ಯವಸ್ಥೆಯಲ್ಲಿ ಪಶು-ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿತ್ತೋ ಅಂತಹವರೇ ಹೊಸ ಸಂಸ್ಕøತಿಯ ಹರಿಕಾರರಾದರು. ಯಾರು ಭಯದಿಂದ ತತ್ತರಿಸಿ, ಕೀಳರಿಮೆಯಿಂದ ಮುದುಡಿಕೊಂಡಿದ್ದರೋ ಅಂಥವರೇ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಝಳಪಳಿಸುವ ಖಡ್ಗಗಳಾದರು. ಇದು ವಚನ ಚಳುವಳಿಯ ಅತ್ಯಂತ ಮಹತ್ವದ ಸಾಧನೆ.'3 ಎನ್ನುವ   ಡಾ. ಬಸವರಾಜ ಸಬರದ ಅವರ ವಿವರಣೆ ಪಾರಂಪರಿಕವಾಗಿ ಪ್ರಚುರಪಡಿಸುತ್ತ ಬಂದಿರುವಂಥದ್ದೇ ಆಗಿದೆ. ಈ ಮೊದಲು ನಾವು ಕೂಡ ಈ ವಿಚಾರವನ್ನೇ ಅಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದೇವು. ಆದರೆ ಇಲ್ಲಿರುವ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದಾಗ ವಚನ ಚಳುವಳಿ ಮೌಖಿಕ ಪರಂಪರೆಯ ಸಾಧನೆಯೇ ಆಗಿದೆ ಎಂಬುದು ಸಾಧಿತ ಅಂಶವಾಗಿ ಹೊರಹೊಮ್ಮುತ್ತದೆ.
    ಬಸವಣ್ಣನ ನಾಯಕತ್ವದಲ್ಲಿ ಜಾಗೃತಿ ಅಭಿಯಾನ ಆರಂಭವಾದಾಗ ಕೆಲವು ದಲಿತರು, ಶೂದ್ರರು ಮತ್ತು ಮಹಿಳೆಯರು ಸಾಂಪ್ರದಾಯಿಕ ಸಮಾಜವನ್ನು ಧಿಕ್ಕರಿಸಿ, ಹೊಸ ಸಮಾಜದ ಅಸ್ತಿತ್ವಕ್ಕಾಗಿ ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದರಷ್ಟೇ ಅಲ್ಲ, ತಮ್ಮ ವಿಚಾರಗಳನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಇನ್ನುಳಿದ ತಮ್ಮ ಬಾಂಧವರಿಗೆ ಅರಿವನ್ನುಂಟು ಮಾಡಲು ಮುಂದಾದರು. ಆದರೆ ಅವರಿಗೆ ಅಕ್ಷರದ ಅರಿವು ಇರಲಿಲ್ಲ. ಅವರ ಹೆಸರಿನಲ್ಲಿರುವ ವಚನಗಳು ಬೇರೆ ಯಾರೋ ಲಿಪೀಕರಣ ಮಾಡಿದರ ಫಲ ಮಾತ್ರ. ಆದರೆ ಆ ವಚನಗಳಲ್ಲಿ ಇರುವ ವಿಚಾರ ಮಾತ್ರ ಆ ವಚನಕಾರರದೇ ಆಗಿದೆ. ಅಂದರೆ ವಚನಕಾರರೆಲ್ಲ ಪ್ರಾಜ್ಞರೇ ಆಗಿದ್ದರೂ ಅಕ್ಷರವನ್ನು ಬಲ್ಲವರಾಗಿರಲಿಲ್ಲ.
    ಜಾನಪದ ಪರಂಪರೆಯನ್ನು ಗಮನಿಸಿದಾಗ ಈ ಪ್ರಕ್ರಿಯೆ ಬಹು ಹಿಂದಿನಿಂದಲೇ ಹೊರಹೊಮ್ಮಿ ಬಂದಿದೆ ಎನ್ನುವದು ಸ್ಪಷ್ಟವಾಗುತ್ತದೆ. ಈ ವಿಚಾರದಿಂದ ಜನಪದರು ಸೃಷ್ಟಿಸಿದ ಜಾನಪದ ಸಾಹಿತ್ಯ ಕೂಡ ಗಟ್ಟಿಕಾಳೇ ಆಗಿದೆ ಎನ್ನುವುದು ಸಾಬೀತಾಗುತ್ತದೆ. ಹೀಗಾಗಿ ಹನ್ನೆರಡನೇ ಶತಮಾನದ ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಆಯ್ದ ಕೆಲವರನ್ನು ಬಿಟ್ಟರೆ ಇನ್ನುಳಿದವರೆಲ್ಲ ಮೌಖಿಕ ಪರಂಪರೆಯವರು ಎಂಬುದು ಖಚಿತ.
    ಈ ವಾದಕ್ಕೆ ಇನ್ನಷ್ಟು ನಿಖರತೆಯನ್ನು ನೀಡಲು ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ಅವರನ್ನು ಅಧ್ಯಯನ ಮಾಡಬೇಕಾಗುತ್ತದೆ. ಯಾವುದೇ ಪುರಾಣ, ಕಥೆ, ಐತಿಹ್ಯ ತೆಗೆದು ನೋಡಿದರೂ ಅವುಗಳಲ್ಲಿ ಈ ಇಬ್ಬರು ಒಂದೇ ಕಡೆ ಹೆಚ್ಚು ಕಾಲ ಸ್ಥಾಯಿಯಾಗಿ ನೆಲೆ ನಿಂತವರಲ್ಲ ಎಂಬ ಪ್ರಸ್ತಾಪ ಕಂಡು ಬರುತ್ತದೆ. ಮಾಯಾ ಮೋಹವನ್ನೇ ತಿರಸ್ಕರಿಸಿ, ವಿಚಿತ್ರ ವೇಷದಲ್ಲಿ ದೇಶ ಸಂಚಾರ ಮಾಡಿದ ಅಲ್ಲಮ ಮತ್ತು ಭವದ ಬದುಕನ್ನೇ ತಿರಸ್ಕರಿಸಿ, ಕೇಶಾಂಬರಿಯಾಗಿ ಸಂಚಾರ ಮಾಡಿದ ಅಕ್ಕಮಹಾದೇವಿ ಜಂಗಮತ್ವವನ್ನು ಅಪ್ಪಿಕೊಂಡವರು. ಇಂದು ಇಲ್ಲಿದ್ದರೆ ನಾಳೆ ಮತ್ತೆಲ್ಲೋ ! ಅಲೆದಾಟದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದ ಇವರು ಸಂದರ್ಭಕ್ಕೆ ತಕ್ಕಂತೆ ಅನುಭಾವದ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಬಿತ್ತರಿಸುತ್ತ ಹೋಗಿದ್ದಾರೆ. ಅವೆಲ್ಲ ಅವರು ಬರೆದಿಟ್ಟ ವಿಚಾರಗಳಲ್ಲ ಅಥವಾ ಆನಂತರದಲ್ಲಿ ಅವುಗಳನ್ನು ಬರೆದುಕೊಂಡವರೂ ಅಲ್ಲ. ಬರೆದಿಡುವುದು ಸಾಧ್ಯವೂ ಇರಲಿಲ್ಲ.
    ಇದಕ್ಕೆ ಪೂರಕವಾಗಿ ಒಂದು ಮೂಲಭೂತವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಕೇಳಲೇಬೇಕಾಗುತ್ತದೆ ; ಅಲೆದಾಟದಲ್ಲಿದ್ದ ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ತಾವಾಡಿದ ಮಾತುಗಳನ್ನು ಬರೆದಿಟ್ಟುಕೊಳ್ಳಲು ತಮ್ಮ ಹತ್ತಿರ ಬರೆಯುವ ಹಾಳೆ, ತಾಳೆಗರಿ, ಲೆಕ್ಕಣಿಕೆ, ದೌತಿಗಳನ್ನು ಖಾಯಮ್ಮಾಗಿ ಇಟ್ಟುಕೊಂಡಿರುತ್ತಿದ್ದರೆ ? ಅನುಭಾವದ ವಿಚಾರಗಳನ್ನು ಹೇಳಿಯಾದ ಮೇಲೆ ಅವುಗಳನ್ನು ಲಿಪಿಬದ್ಧಗೊಳಿಸುತ್ತಿದ್ದರೆ ? ಹಾಗಾದರೆ ಅವರು ತಾವು ಬರೆದ ವಚನಗಳನ್ನು ಎಲ್ಲಿ ಸಂಗ್ರಹಿಸಿ ಇಡುತ್ತಿದ್ದರು ? ತಮ್ಮ ಜೊತೆಯಲ್ಲಿಯೇ ಗಂಟು ಕಟ್ಟಿಕೊಂಡು ತಿರುಗುತ್ತಿದ್ದರೆ ? ಅರಿವೆಯ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ಇವರು ಹೀಗೆಲ್ಲ ಮಾಡಲು ಸಾಧ್ಯವೇ ?
    ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೇ ಇಲ್ಲ. ಅದೂ ಅಲ್ಲದೇ `ಅಕ್ಕನ ದಿಗಂಬರತ್ವವನ್ನು ಕುರಿತ ಚರ್ಚೆ-ಪ್ರತಿಚರ್ಚೆಯನ್ನು ಬೆಳೆಯಿಸಿದ `ಶೂನ್ಯ ಸಂಪಾದನೆ'ಗಳಲ್ಲಿ ಬಂದಿರುವ ಅಲ್ಲಮನ ಹಾಗೂ ಅಕ್ಕನ ಉಕ್ತಿಗಳು (ವಚನಗಳು) ಈ ಸಂದರ್ಭದ ನಾಟಕೀಯತೆಗಾಗಿ ನಿರ್ಮಿತಿಯಾದವುಗಳೇ ಹೊರತು ಅವು ಅಲ್ಲಮ ಹಾಗೂ ಅಕ್ಕನ `ಮೂಲ ವಚನ'ಗಳಾಗಿರಲಾರವು.'4 ಎನ್ನುವ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾತಿನಲ್ಲಿ ವಚನಗಳನ್ನು ಬರೆದಿರುವ ಬಗ್ಗೆ ಗುಮಾನಿ ಇದೆ. ಆ ಸಂದರ್ಭದಲ್ಲಷ್ಟೇ ಅಲ್ಲ ಅವರ ಹೆಸರಿನಲ್ಲಿರುವ ಯಾವ ವಚನಗಳೂ ಅವರ ಮೂಲ ವಚನಗಳೇ ಅಲ್ಲ. ಯಾಕೆಂದರೆ ಅವರು ಮೌಖಿಕ ಪರಂಪರೆಯ ಪ್ರತಿನಿಧಿಗಳು.
    ಹಾಗಾದರೆ ವಚನಗಳನ್ನು ಲಿಪೀಕರಣ ಮಾಡಿದ್ದು ಯಾರು ಎಂಬ ಪ್ರಶ್ನೆ ಕೂಡ ಇಲ್ಲಿ ತಲೆ ತಿನ್ನುತ್ತದೆ. ಅದಕ್ಕೆ ಉತ್ತರವೂ ಇದೆ. ಪ್ರಾಚೀನ ಕಾಲದಲ್ಲಿ ಬರವಣಿಗೆ ಒಂದು ನಿರ್ದಿಷ್ಟ ಜಾತಿಯ ಕೆಲಸವಾಗಿತ್ತು. ಅವರು ಇತರರು (ಬರವಣಿಗೆಯ ಚೌಕಟ್ಟಿಗೆ ಸಂಬಂಧಿಸಿದವರು) ಹೇಳಿದ್ದನ್ನು ಲಿಪಿಬದ್ಧಗೊಳಿಸುತ್ತಿದ್ದರು. ಇದು ಒಂದು ವೃತ್ತಿಯೇ ಆಗಿತ್ತೆಂದರೆ ತಪ್ಪಾಗುವುದಿಲ್ಲ. ಇದರ ಜೊತೆಗೆ ಈ ಲಿಪೀಕರಣ ವ್ಯಕ್ತಿಯೊಬ್ಬನ ಆಸಕ್ತಿ ಕೂಡ ಆಗಿತ್ತು. ಬುದ್ಧನ ಕಾಲದಲ್ಲಿ ಬುದ್ಧನ ಆಚಾರ-ವಿಚಾರಗಳನ್ನು, ಬೋಧನೆಗಳನ್ನು ಬರೆದಿಡಲು `ಭಾಣಕರು' ಎನ್ನುವವರು ಇದ್ದರು. ಹನ್ನೆರಡನೇ ಶತಮಾನದಲ್ಲಿ ಕೂಡ ಇಂಥ ಪದ್ಧತಿ ಚಾಲ್ತಿಯಲ್ಲಿರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬಾರದು.
    ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಬರೆದಿಡುವ ಕಾಯಕದವರೂ ಇದ್ದರು. `ಪ್ರತಿಯೊಂದು ವಚನವೂ ಆಯಾ ವಚನಕಾರನ ಇಷ್ಟ ದೈವದ ಸಾಕ್ಷಿಯಲ್ಲಿ ನುಡಿದ ಮಾತು'5 ಆಗಿರುವುದರಿಂದ ಆ ವಚನಕಾರ ತನ್ನ ಮಾತನ್ನು ಇಷ್ಟದೈವದ ಹೆಸರಿನೊಂದಿಗೆ ನುಡಿಯುತ್ತಿದ್ದರಿರಬೇಕು. ಇಲ್ಲವೆ ವಚನಕಾರನ ಇಷ್ಟದೇವದ ಹೆಸರುಗಳನ್ನು ಅರಿತ ಲಿಪಿಕಾರ ವಚನಕಾರನ ಮಾತಿನ ಕೊನೆಯಲ್ಲಿ ಸೇರಿಸಿ ಬರೆಯುವ ರೂಢಿ ಇಟ್ಟುಕೊಂಡಿರಬೇಕು. ಇದನ್ನೇ ನಾವು ಮುದ್ರಿಕೆಗಳು ಎನ್ನುವುದು. ಈ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಅಧ್ಯಯನಗಳು ನಡೆಯಬೇಕಿದೆ. ಆವಾಗ ಮೂಲ ಹಸ್ತಪ್ರತಿಯ ಲಿಪಿಕಾರ ಯಾರು ಎನ್ನುವುದು ತಿಳಿಯಲು ಸಾದ್ಯವಾಗಬಹುದು.
    ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿಯರ ವಚನಗಳಿಗೆ ಈ ಮಾತು ಸರಿ ಹೊಂದಲಾರದು. ಅವರು ಅನುಭವ ಮಂಟಪದಲ್ಲಿದ್ದಾಗ ಅವರ ನುಡಿಗಳನ್ನು ಲಿಪಿಬದ್ಧಗೊಳಿಸಿರುವ ಲಿಪಿಕಾರ ಇಷ್ಟದೈವದ ಸೇರಿಸಿದ್ದರೆ, ಅವರು ಜಂಗಮತ್ವವನ್ನು ಹೊಂದಿ ನಿರಂತರ ತಿರುಗಾಟದಲ್ಲಿ ಇದ್ದಾಗ ಅವರ ಅಂಕಿತ ಅವರ ವಚನಗಳಿಗೆ ಹೇಗೆ ಬಂತು ಎಂಬ ಪ್ರಶ್ನೆಯೂ ವಿದ್ವಾಂಸರಿಂದ ಉದ್ಭವಿಸುತ್ತದೆ.
    ಇದಕ್ಕೂ ಸರಳವಾದ ಉತ್ತರವಿದೆ. ಮೇಲೆ ಹೇಳಿದಂತೆ ಇವರು ನುಡಿಯನ್ನು ಮುಗಿಸಬೇಕಾದರೆ ಇಷ್ಟದೈವದ ಹೆಸರನ್ನು ಹೇಳುತ್ತಿರಬೇಕು. ಹೀಗೆ ಅವರು ಹೇಳುತ್ತ ಹೋದಂತೆ ಆಸಕ್ತರಾಗಿರುವ ಕೆಲವು ಜನರು ಅವರ ವಿಚಾರಗಳಿಂದ ಪ್ರಭಾವಿತರಾಗಿ ಯಥಾವತ್ ಅಲ್ಲದಿದ್ದರೂ ನುಡಿಯ ಸಾರ ಮತ್ತು ಅಂಕಿತವನ್ನು ಲಿಪಿಬದ್ಧಗೊಳಿಸಿರಬೇಕು. ಈ ಕಾರಣದಿಂದಲೇ ವಚನಗಳ ಸಂಖ್ಯೆಯನ್ನು ನಿರ್ಣಯಿಸುವ ಕಾರ್ಯ ಇಂದಿಗೂ ಕಷ್ಟದಾಯಕವಾಗಿಯೇ ಇದೆ. ಯಾಕೆಂದರೆ ಭಿನ್ನ ಅಂಕಿತಗಳು ಇರುವ ಒಂದೇ ರೀತಿಯ ವಚನಗಳೂ ಇಂದು ನಮ್ಮ ನಡುವೆ ಇವೆ.ಯಾವುದು ಯಾರ ವಚನ ಎನ್ನುವುದನ್ನು ನಿರ್ಣಯಿಸುವಲ್ಲಿ ಇನ್ನೂ ಗೊಂದಲಗಳಿವೆ.  ಲಿಪಿಕಾರ ಮತ್ತು ಪ್ರತಿ ಲಿಪಿಕಾರನ ತಪ್ಪಿನಿಂದಲೇ ಇಂತಹ ಅವಘಡಗಳು ಸಂಭವಿಸಿವೆ.
    ಇದಕ್ಕಿಂತ ಮುಖ್ಯವಾಗಿ ವಚನಗಳನ್ನು ಸಾಮಾನ್ಯವಾಗಿ ನುಡಿ, ಮಾತು, ಸೂಳ್ನುಡಿ ಮೊದಲಾದವುಗಳಿಂದಲೇ ಸೂಚಿಸಲಾಗಿದೆ ಹೊರತು ಬೇರೆ ರೀತಿಯಲ್ಲಿ ಹೇಳಿಲ್ಲ. `ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುದಾಗಿ ಹೇಳಲಾಗಿದೆಯೇ ಹೊರತು `ಬರೆದರೆ.....' ಎಂದು ಹೇಳಲಾಗಿಲ್ಲ. ಈ ವಾದ ತುಂಬ ಬಾಲಿಶ ಎನಿಸಬಹುದಾದರೂ ಕೂಡ ಅದೇ ಸತ್ಯವನ್ನು ತೋರುವ ಮಾರ್ಗವೂ ಆಗಬಲ್ಲದು ಎಂಬುದನ್ನು ಮಾತ್ರ ನಾವು ಮರೆಯುವಂತಿಲ್ಲ.
    ಈ ಎಲ್ಲ ಅಂಶಗಳನ್ನು ಅರ್ಥಪೂರ್ಣವಾಗಿ ಮನನ ಮಾಡಿಕೊಂಡು ಮಥಿಸಿದಾಗ ವಚನಕಾರರೆಲ್ಲರೂ ಅಕ್ಷರ ಕಲಿತವರಾಗಿರಲಿಲ್ಲ ಎಂಬ ವಾದ ಸಾಧಿತವಾಗುತ್ತದೆ. ಹೀಗಾಗಿ ವಚನ ಸಾಹಿತ್ಯ ಮೌಖಿಕ ಪರಂಪರೆಯ ಜಾನಪದ ಸಾಹಿತ್ಯ ಎಂದು ಪರಿಗಣಿಸಲು ಯಾವುದೇ ಅಡ್ಡಿಗಳಿಲ್ಲ ಅಲ್ಲವೇ ?

ಅಡಿ ಟಿಪ್ಪಣಿಗಳು :
1. ಮಾರ್ಗ ಸಂ-1 : ಡಾ. ಎಂ.ಎಂ.ಕಲ್ಬುರ್ಗಿ : 1995 : ಪು-260
2. ಅನುಗ್ರಹ : ಡಾ. ಚೆನ್ನಕ್ಕ ಪಾವಟೆ : 1999 : ಪು-217
3. ಸಮುದಾಯ ಮತ್ತು ಸಂಸ್ಕøತಿ : ಡಾ. ಬಸವರಾಜ ಸಬರದ : 2002 : ಪು-130
4. ಸಾಹಿತ್ಯ ವಿಮರ್ಶೆ-1992 : ಸಂ-ಡಾ. ರಹಮತ್ ತರೀಕೆರೆ : 1993 : (ಅಡಿ ಟಿಪ್ಪಣಿ)      ಪು-124
                    ********

Friday, January 04, 2013

ಮೋದಿಗೆ ಉತ್ತರ ಉವೈಸಿಯಲ್ಲ ...


ಬಶೀರ್ ಬಿ.ಎಂ.
ವಾರ್ತಾಭಾರತಿ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯ ಸಂಪಾದಕೀಯ
ಖಾಲಿ ಮಡಕೆಯೊಳಗೆ ಒಂದು ಸಣ್ಣ ಕಲ್ಲು ಹಾಕಿದರೂ ಅದು ಭಾರೀ ಸದ್ದು ಮಾಡುತ್ತದೆ. ರಾಜಕಾರಣಿಗಳಿಗೆ ಇದು ಚೆನ್ನಾಗಿ ಅನ್ವಯಿಸುತ್ತದೆ. ಉದ್ವಿಗ್ನಕಾರಿ, ಪ್ರಚೋದನ ಕಾರಿ ಭಾಷಣ ಮಾಡುವವರನ್ನೆಲ್ಲ ನಾವು ಈ ಖಾಲಿ ಮಡಕೆಗಳಿಗೆ ಹೋಲಿಸಬಹುದಾಗಿದೆ. ಇಂತಹ ಖಾಲಿಗಳೇ ಈ ದೇಶವನ್ನು ಅವನತಿಯೆಡೆಗೆ ನಡೆಸುತ್ತಾ ಬಂದಿದ್ದಾರೆ. ಪ್ರವೀಣ್ ತೊಗಾಡಿಯಾರಿಂದ ಹಿಡಿದು, ವರುಣ್ ಗಾಂಧಿಯವರ ವರೆಗೆ, ಇಂತಹ ಪ್ರಚೋದನಾಕಾರಿ ಭಾಷಣಗಳಿಂದ ಈ ದೇಶಕ್ಕಾದ ನಷ್ಟ ಅಷ್ಟಿಷ್ಟಲ್ಲ. ಇವರ ಭಾಷಣದಲ್ಲಿ ಅದೇನೋ ಇದೆ ಜನ ಹುಚ್ಚೆದ್ದು ಚಪ್ಪಾಳೆ ತಟ್ಟುತ್ತಾರೆ. ಅಮರೇರಿದವರಂತೆ ವರ್ತಿಸು ತ್ತಾರೆ. ಆದರೆ ಏರಿದ ಅಮಲು ಇಳಿದಾಗ, ಎಲ್ಲವೂ ಮುಗಿದಿರುತ್ತದೆ. ಇಂತಹ ಪ್ರಚೋದನಕಾರಿ ಭಾಷಣಗಳ ಮೂಲಕವೇ ದೇಶದಲ್ಲಿ ಹೆಚ್ಚಿನ ಕೋಮುಗಲಭೆಗಳು ಸಂಭವಿಸಿವೆ. ಗುಜರಾತ್ ಗಲಭೆಗೆ ಮುನ್ನ, ಪ್ರವೀಣ್ ತೊಗಾಡಿಯಾ ಮಾಡಿದ ಭಾಷಣ ಅಲ್ಲಿನ ಜನರನ್ನು ಹುಚ್ಚರನ್ನಾಗಿ ಮಾಡಿತು. ಮುಂದೆ ಅದು ಭಾರೀ ಕೋಮುಗಲಭೆಗಳಿಗೆ ಕಾರಣವಾಯಿತು. ಮುಂಬಯಿ ಗಲಭೆಯಿಂದ ಹಿಡಿದು ಸುರತ್ಕಲ್ ಗಲಭೆಗಳವರೆಗೆ ನಾವು ಅವಲೋಕಿಸುತ್ತಾ ಬಂದರೆ, ಖಾಲಿ ಮಡಕೆಗಳ ಪ್ರಚೋದನಕಾರಿ ಭಾಷಣಗಳೇ ಜನರನ್ನು ಹಾದಿ ತಪ್ಪಿಸಿದವು. ಹಿಂಸೆಗಳಿಗೆ ಕಾರಣವಾದವು. ರಾಜದಲ್ಲಿ ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂತಹವರು ನಾಯಕರಾದುದು, ಇಂತಹ ವಿಷಪೂರಿತ ಭಾಷಣಗಳನ್ನು ಕಕ್ಕುವ ಮೂಲಕ. ಯಾವುದೇ ಮಾರಕ ಆಯುಧಗಳಿಗಿಂತ, ಯಾವುದೇ ಮಾದಕ ದ್ರವ್ಯಗಳಿಗಿಂತ ಹೆಚ್ಚು ಅಪಾಯಕಾರಿ ಈ ಭಾಷಣಗಳು.

ಇದೀಗ ಹೈದರಾಬಾದ್‌ನಲ್ಲಿ ಶಾಸಕನೊಬ್ಬ ಇಂತಹದೇ ಭಾಷಣವನ್ನು ಮಾಡುವ ಮೂಲಕ, ತನ್ನನ್ನು ತಾನು ಮುಸ್ಲಿಮರ ನಾಯಕನಾಗಿ ಬಿಂಬಿಸಲು ಹೊರಟಿದ್ದಾನೆ. ಆತನ ಹೆಸರು ಅಕ್ಬರುದ್ದೀನ್ ಉವೈಸಿ. ಅಖಿಲ ಭಾರತ ಮಜ್ಸಿಸ್ ಎ ಇತ್ತೆಹಾದ್ ಮುಸ್ಲಿಮೀನ್(ಎಂಐಎಂ) ವರಿಷ್ಠ ಅಸಾಸುದ್ದೀನ್ ಉವೈಸಿಯವರ ಸೋದರ ಈತ. ಮೋದಿಯವರನ್ನು ಕಟುವಾಗಿ ಟೀಕಿಸುವ ನೆಪದಲ್ಲಿ, ಈತ ಪರೋಕ್ಷವಾಗಿ ತನ್ನ ಭಾಷಣದಲ್ಲಿ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಆಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಪೊಲೀಸರಿಗೆ ಕೆಲವು ನಿಮಿಷ ಬಿಡುವು ಕೊಟ್ಟರೆ, ಈತ ಅದೇನೋ ಮಾಡಿ ತೋರಿಸುತಾರಂತೆ. ಈತ ಕಕ್ಕಿದ ವಿಷಕಾರಿ ಭಾಷಣ ಇದೀಗ ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿದೆ. ಈತನ ಭಾಷಣವನ್ನು ಮುಂದಿಟ್ಟುಕೊಂಡು, ಸಂಘ ಪರಿವಾರದ ಕೆಲವು ವಿಷಪೂರಿತ ಹಾವುಗಳು ಹೆಡೆ ಬಿಚ್ಚಲು ಮುಂದಾಗಿವೆೆ. ಈತನಿಗೆ ಭಾಷಣ ಮಾಡಿ ಮುಗಿಸಲು ಕೆಲವು ನಿಮಿಷಗಳು ಸಾಕಾಗಿರಬಹುದು. ಆದರೆ ಉಳಿಸಿ ಹೋದ ಪರಿಣಾಮವನ್ನು ಈ ದೇಶದ ಅಲ್ಪಸಂಖ್ಯಾತರು ವರ್ಷವಿಡೀ ಅನುಭವಿಸ ಬೇಕಾಗುತ್ತದೆ.

ಈ ದೇಶದಲ್ಲಿ ಮುಸ್ಲಿಮ್ ನಾಯಕರಿಗೆ ಮಾತನಾಡಲು ಬೇಕಾದಷ್ಟು ಮುಸ್ಲಿಮರ ಸಮಸ್ಯೆಗಳಿವೆ. ಶಿಕ್ಷಣ, ಬಡತನ, ಅನಾರೋಗ್ಯ ಸೇರಿದಂತೆ ಮುಸ್ಲಿಮರ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳು ಒಂದೋ ಎರಡೋ. ಭಾರತೀಯ ಮುಸ್ಲಿಮರನ್ನು ಸಾಚಾರ್ ಸಮಿತಿ ಆಧುನಿಕ ದಿನಗಳ ನವ ದಲಿತರು ಎಂದು ಕರೆದಿದೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಮೇಲೆತ್ತಲು ಮುಸ್ಲಿಮ್ ನಾಯಕರ ಪಾತ್ರ ಬಹುದೊಡ್ಡದಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಎಂಬ ಖಾತೆಯಲ್ಲಿ ಎಂಎಲ್‌ಎ, ಎಂಪಿಗಳಾದ ನಾಯಕರು ಬೀದಿಗಿಳಿದು ಹೋರಾಟ ಮಾಡಿದ್ದಿದ್ದರೆ, ತಮ್ಮ ಸಮುದಾಯದ ಏಳಿಗೆಗಾಗಿ ತನು ಮನ ಧನವನ್ನು ಮೀಸಲಿಟ್ಟು ಕೆಲಸ ಮಾಡಿದ್ದರೆ ದೇಶದ ಮುಸ್ಲಿಮರ ಸ್ಥಿತಿ ಈ ರೀತಿ ದಯನೀಯವಾಗುತ್ತಿರಲಿಲ್ಲ. ಮೋದಿಯ ವರಂಥವರು ಬಾಲ ಬಿಚ್ಚುವುದಕ್ಕೂ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಇಂದು ಮುಸ್ಲಿಮ್ ನಾಯಕರೇ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುತ್ತಿರುವುದರಿಂದ, ಅವರ ಸ್ಥಿತಿ ಹೃದಯವಿದ್ರಾವಕವಾಗಿದೆ. ಉವೈಸಿ ಸಾರ್ವಜನಿಕವಾಗಿ ಮೋದಿಯವ ರನ್ನು ಟೀಕಿಸುವ ಮೊದಲು, ತಾನು ಮುಸ್ಲಿಮರಿಗಾಗಿ, ಮುಸ್ಲಿಮರ ಅಭಿವೃದ್ಧಿಗಾಗಿ ಏನನ್ನು ಮಾಡಿದ್ದೇನೆ ಎನ್ನುವುದನ್ನು ಹೇಳಬೇಕಾಗಿತ್ತು. ಇತರ ಜಾತಿ, ಧರ್ಮಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವುದರಿಂದ, ಮುಸ್ಲಿಮರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಅದರಿಂದ ಅವರು ಇನ್ನಷ್ಟು ಅನ್ಯಾಯಕ್ಕೊಳಗಾಗಬೇಕಾಗುತ್ತದೆ. ಉವೈಸಿಯ ಉದ್ವಿಗ್ನಕಾರಿ ಭಾಷಣವು ಪರೋಕ್ಷವಾಗಿ ಮೋದಿ, ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯಾಗಳನ್ನು ಸಮರ್ಥಿಸಿ ದಂತಾಗುತ್ತದೆ. ಒಂದು ರೀತಿಯಲ್ಲಿ ಉವೈಸಿ ಭಾಷಣದಿಂದ ಸಂಘಪರಿವಾರದ ಮಂದಿ ಸಂತೋಷದಿಂದ ಕುಣಿದಾಡಿದ್ದಾರೆ. ಈ ಭಾಷಣದೆಡೆಗೆ ಬೊಟ್ಟು ಮಾಡಿ, ಕೋಮುವಾದವನ್ನು ಹರಡಲು ಇವರಿಗೆ ಪರವಾನಿಗೆ ಸಿಕ್ಕಿದಂತಾಗಿದೆ. ಮುಸ್ಲಿಮರ ಕುರಿತಂತೆ ಯಾವುದೇ ಅಭಿವೃದ್ಧಿಯ ಮುನ್ನೋಟವಿಲ್ಲದ ಉವೈಸಿಯಂತಹವರು, ಮುಸ್ಲಿಮ್ ಸಮುದಾಯದ ನಡುವೆ ಆತ್ಮವಿಶ್ವಾಸ ತುಂಬುವ ಬದಲು ಅವರನ್ನು ಇನ್ನಷ್ಟು ಅನ್ಯಾಯದೆಡೆಗೆ ತಳ್ಳಿದ್ದಾರೆ. ಅಕ್ಬರುದ್ದೀನ್ ಉವೈಸಿ ಒಬ್ಬ ವಿಧಾನಸಭಾ ಶಾಸಕ. ಅವರಿಗೆ ಅವರದೇ ಜವಾಬ್ದಾರಿಗಳಿವೆ. ಹೊಣೆಗಾರಿಕೆಗಳಿವೆ. ಆದರೆ ಅದನ್ನು ಮರೆತು, ಜನರನ್ನು ಆಕರ್ಷಿಸಲು ಸಾರ್ವಜನಿಕವಾಗಿ ಉದ್ವಿಗ್ನಕಾರಿ ಮಾತನಾಡಿದುದು ಅಕ್ಷಮ್ಯ ಅಪರಾಧ. ಅವರ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

ಮೋದಿಯವ ರಂತಹ ಕೋಮುವಾದಿನಾಯಕರಿಗೆ ಪ್ರತಿ ಕೋಮುವಾದ ಉತ್ತರವಲ್ಲ. ಬದಲಿಗೆ, ಈ ದೇಶದ ಜಾತ್ಯತೀತತೆಯನ್ನು ಗಟ್ಟಿ ಮಾಡಿಕೊಂಡು, ಹಿಂದೂ, ಮುಸ್ಲಿಮ್ ಕ್ರೈಸ್ತರನ್ನು ಒಟ್ಟುಗೂಡಿಸುವುದೇ ಮೋದಿಯ ವರಿಗೆ ಈ ದೇಶ, ಸಂವಿಧಾನ ನೀಡುವ ಪ್ರತಿ ಉತ್ತರ. ಹಾಗಾದಲ್ಲಿ ಈ ದೇಶ ಎಂದೆಂದೂ ಅಖಂಡವಾಗಿ ಉಳಿದೀತು. ಅಭಿವೃದ್ಧಿಯತ್ತ ಮುನ್ನಡೆದೀತು.

 

Thursday, November 08, 2012

ಡಾ. ಅಂಬೇಡ್ಕರ್ ಬರೆಯುವ ಮೊದಲೇ ಭಾರತಕ್ಕೆ ಒಂದು ಸಂವಿಧಾನ ರಚನೆಯಾಗಿತ್ತು. ಆದರೆ ...?



ಸುರೇಂದ್ರ ಉಗಾರೆ, ವಕೀಲರು, ರಾಯಬಾಗ (ಬೆಳಗಾವಿ)
               
ಭಾರತ 1947ರಲ್ಲಿ ಸ್ವತಂತ್ರವಾಯಿತಾದರೂ  1950ರಲ್ಲಿ ಸಂವಿಧಾನ ಜಾರಿಯಲ್ಲಿ ಬಂದಿತ್ತು. ಈ ಸಂವಿಧಾನ ಡಾ// ಅಂಬೇಡ್ಕರ ಮುಖಂಡತ್ವದಲ್ಲಿ ರಚನೆಯಾಗಿರುವ ವಿಷಯ ಭಾರತೀಯರಿಗೆಲ್ಲ ಗೊತ್ತಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಕೈ ಹಾಕಿ ದಲಿತರ ವಿರೋದಿ ಕಟ್ಟಿಕೊಂಡವರು ಅನೇಕರು ಇದ್ದಾರೆ. ಯಾವ ವಿಷಯಕ್ಕಾಗಿ ತಿದ್ದುಪಡಿ ? ಅಥವಾ ದಲಿತನೊಬ್ಬನಿಂದ ರಚಿತವಾಗಿದೆ ಎಂಬ ಕಾರಣಕ್ಕಾಗಿಯೇ ? ಇಂತಹ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಸಂವಿಧಾನ ತಿದ್ದುಪಡಿಮಾಡಲು ಹೊರಟಿರುವ ಗಣ್ಯಮಾನ್ಯರೆ, ಭಾರತದ  ಇತಿಹಾಸದ ಪುಟಗಳನ್ನು ತೆಗೆದು ಓದಿರಿ. ಡಾ// ಅಂಬೇಡ್ಕರಗಿಂತ  20 ವರ್ಷಗಳ ಮೊದಲೇ ಭಾರತಕ್ಕೊಂದು ಸಂವಿಧಾನ ರಚನೆಯಾಗಿತ್ತು. ಆದರೆ, ಸಿಖ್ ರ ಹಾಗೂ ಮುಸ್ಲಿಂರ ವಿರೋದಿಂದ ದು ಹುಟ್ಟಿದ ದಿನವೆ ಮಣ್ಣು ಮಾಡುವ ಪ್ರಸಂಗ ಬಂದಿತ್ತು. ಸಂವಿಧಾನ ರಚನೆ ಮಾಡಲು ಹೋಗಿ ಕೋಮಿನ ಪಟ್ಟ ಕಟ್ಟಿಕೊಂಡು ಸಂವಿಧಾನ ಎಂಬ ಪದ ಬಿಟ್ಟು ವರದಿ ಎಂಬ ಸಂವಿಧಾನವನ್ನು ತಯಾರಿಸಿ ಹೆಸರು ಕೆಡಿಸಿಕೊಂಡ ಪುಣ್ಯಾತ್ಮನ ಇತಿಹಾಸ ನಿಮಗೆ ಗೊತ್ತಿದೆಯೇ ?  ಆ ಪುಣ್ಯಾತ್ಮನೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂದೆ ಮೋತಿಲಾಲ ನೆಹರು !
ಇಂಗ್ಲೆಂಡ ಸರಕಾರ ಭಾರತೀಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ 1919ರಲ್ಲಿ ಮಂಟೆಗೊ ಜೇಮ್ಸ ಪೊರ್ಡ ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಭಾರತೀಯರಿಗೆ ತೃಪ್ತಿ ನೀಡಲ್ಲಿಲ್ಲ, ನಿರಾಸೆಗೊಂಡ ಭಾರತೀಯರು ಸ್ವತಂತ್ರ ಚಳುವಳಿಯನ್ನು ತೀವ್ರಗೊಳಿಸಿದರು. ಆದರು ಬ್ರಿಟಿಷರು 1919ರ ಕಾಯ್ದೆಯ ವಿಫಲತೆಯನ್ನು ತಿಳಿಯಲು ಮತ್ತು ಭಾರತಿಯರ ಆಸೆಗೆ ಸ್ಪಂದಿಸಲು ಇಂಗ್ಲೆಂಡಿನಲ್ಲಿ ಸೈಮನ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿತು. ಈ ಆಯೋಗದಲ್ಲಿ ಏಳೂ ಜನ ಬಿಳಿಯರು ಇದ್ದುದ್ದರಿಂದ ಭಾರತೀಯ ಸ್ವತಂತ್ರ ಹೋರಾಟಗಾರರು ಈ ಆಯೋಗವನ್ನು ವಿರೋಧಿಸಿದರು ಮತ್ತು ಆಯೋಗ ಭಾರತಕ್ಕೆ ಬಂದರೆ ಭಾರತದ ತುಂಬ ಪ್ರತಿಭಟನೆ ಮಾಡುವುದಾಗಿ ಬ್ರಿಟಿಷರನ್ನು ಎಚ್ಚರಿಸಿದ್ದರು. ಅವಾಗ ಭಾರತದ ಇಂಗ್ಲೆಂಡಿನ ಕಾರ್ಯದರ್ಶಿಯಾಗಿದ್ದ ಲಾರ್ಡ ಬರ್ಕೆನ ಹೆಡ್ 1925 ಜುಲೈ 7ರಂದು ಭಾರತೀಯರು ತಮ್ಮ ಬೃಹತ್ ದೇಶಕ್ಕೆ ತಾವೇ ಸಂವಿಧಾನ ರಚಿಸುವುದಾದರೆ ರಚಿಸಲಿ ಎಂದು ಭಾರತೀಯರಿಗೆ ಸವಾಲು ಹಾಕಿದ್ದನು !
ಭಾರತದ ಕಾರ್ಯದರ್ಶಿಯ ಸವಾಲನ್ನು ಎದುರಿಸಲು ಮತ್ತು ಭಾರತೀಯರಿಗೆ ಸಂವಿಧಾನ ರಚಿಸುವ ಸಾಮರ್ಥ್ಯವಿದೆ ಎಂದು ತೋರಿಸುವ ಸಲುವಾಗಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ 1928ರಲ್ಲಿ ಬಾಂಬೆಯಲ್ಲಿ ಮೋತಿಲಾಲ್ ನೆಹರೂ ಮುಖಂಡತ್ವದಲ್ಲಿ ಸಮಿತಿಯೊಂದನ್ನು ರಚಿಸಿತು, ಈ ಸಮಿತಿಯಲ್ಲಿ 10 ಜನ ಸದಸ್ಯರಿದ್ದರು ಇವರಲ್ಲಿ ಮುಸ್ಲಿಂ ಮತ್ತು ಸಿಖರು ಇದ್ದರು ಹಾಗೂ ಪಂಡಿತ ಜವಾಹರಲಾಲ ನೆಹರೂರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಭಾರತೀಯರಿಗೆ ತಕ್ಕಂತಹ ಸಂವಿಧಾನ ರಚನೆ ಕಾರ್ಯ ಭರದಿಂದ ಸಾಗಿತ್ತು. ನಂತರ ಡಿಸೆಂಬರ[1928] ತಿಂಗಳಲ್ಲಿ ಕಲ್ಕತ್ತಾದ ಅಧಿವೇಶನದಲ್ಲಿ ಮೋತಿಲಾಲ್ ನೆಹರೂರವರು ಕೋಮಿಗೆ ಸಂಬಂಧಿಸಿದಂತೆ ಭಾಷಣ ಮಾಡಿದರು. ಅದೇ ಅಧಿವೇಶನದಲ್ಲಿ ಸಿಖರು, ಮುಸ್ಲಿಂರು ಮೋತಿಲಾಲರ ಭಾಷಣ ವಿರೋಧಿಸಿ ಸಂವಿಧಾನ ಜಾರಿಯಾಗದಂತೆ ಪ್ರತಿಭಟಿಸಲು ತಯಾರಿ ನಡೆಸಿದರು. ಕೊನೆಗೆ, ಇಂತಹ ವಿರೋದ ನಡುವೆಯೇ ಲಾಹೋರ ಅಧೀವೇಶನದಲ್ಲಿ ಆಯೋಗ ತಯಾರಿಸಿದ ಸಂವಿಧಾನವನ್ನು ಅಂಗೀಕರಿಸಿದರು. ಈ ಅಂಗೀಕಾರದ ವಿರುದ್ದ ಸಿಖ್ ಜನಾಂಗದವರು, ಕಾಂಗ್ರೆಸಿನ ಮುಸ್ಲಿಂರು ಹಾಗೂ ಮಹಮದ್ ಅಲಿ ಜಿನ್ನಾ ಮೊದಲಾದವರ ವಿರೋಧದಿಂದಾಗಿ 14 ಅಂಶಗಳ ಸಂವಿಧಾನದಲ್ಲಿ ಸೇರಪಡೆ ಪಟ್ಟಿಯಿಂದಾಗಿ  ಮೋತಿಲಾಲ ನೆಹರೂರವರು ತಯಾರಿಸಿದ ಸಂವಿಧಾನ ಅಂಗೀಕರಿಸಿದ ದಿನವೇ ಮಣ್ಣು ಕೊಡಬೇಕಾಯಿತು !
ಹೀಗೆ ಭಾರತದ ಇತಿಹಾಸದಲ್ಲಿ ಭಾರತೀಯರ ಆಸೆಗಳಿಗೆ ಅನುಗುಣವಾಗಿ ಸಂವಿಧಾನ ಬರೆಯಲು ಹೋಗಿ, ಕೋಮುಗಳನ್ನು ಸೃಷ್ಟಿಸುವವರೇ ಆಗಿದ್ದಾರೆ. ಇಂತಹವರು ಸಂವಿಧಾನ ಬರೆಯಲು ಅರ್ಹರೆ ಒಂದೇ ಒಂದು ಸಲ ಯೋಚಿಸಿ.  ಇತಿಹಾಸದಲ್ಲಿ ಮೋತಿಲಾಲ ನೆಹರು ಬರೆದಿರುವ ಸಂವಿಧಾನವನ್ನು  'ನೆಹರೂ ವರದಿ' ಎಂದು ಕರೆಯುತ್ತಾರೆ !  ಅಷ್ಟಕ್ಕೂ ಡಾ// ಅಂಬೇಡ್ಕರ ಕರಡು ರಚನಾ ಸಮಿತಿಯ ಅಧ್ಯಕ್ಷರು, ಇವರ ಜೊತೆ ಎಲ್ಲಾ ಜಾತಿಯ ಸದಸ್ಯರಿದ್ದರು. ಸಂವಿಧಾನ ಜಾರಿಯಾಗುವ ಸಮಯದಲ್ಲಿ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ, ಕರಡು ರಚನೆ ಮಾಡುವುದು ಡಾ// ಅಂಬೇಡ್ಕರವರಿಂದ ಮಾತ್ರ ಸಾಧ್ಯ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಪಂಡಿತ ಜವಾಹರಲಾಲ ನೆಹರೂ ಕೂಡಾ ಸಂವಿಧಾನ ಬರೆಯುವ ಸಾಮರ್ಥ್ಯ ಇತ್ತು ಎಂದಾದರೆ ಸಂವಿಧಾನ ಬರೆಯಲಿಲ್ಲ ಏಕೆ ? ಅಪ್ಪ ಮೋತಿಲಾಲ ನೆಹರೂ ಸಿಖ್ ವಿರೋಟ್ಟಿಕೊಂಡು ಸಂವಿಧಾನ ಶಿಲ್ಪಿ ಎಂಬ ಪಟ್ಟ ಕಳೆದುಕೊಂಡರೆ, ಮಗ ಜವಾಹರ ಲಾಲ ನೆಹರೂ ಇಂಗ್ಲೆಂಡಿನ ಔತಣ ಕೂಟದಲ್ಲಿ ತನ್ನಷ್ಟಕ್ಕೆ ತಾನೇ ಕುಳಿತಿದ್ದ ಜಿನ್ನಾನನ್ನು ಕೆಣಕಿ ಪಾಕೀಸ್ತಾನದ ರಚನೆಗೆ ಕಾರಣನಾದ ಇತಿಹಾಸವಿದೆ ! ಇಂತಹ ನಾಯಕರು ಸಂವಿಧಾನ ಬರೆದರೆ ಹೇಗಿರುತ್ತೆ ಎನ್ನುವ ಕಲ್ಪನೆ ಮಾಡಲು ಸಾಧ್ಯವೆ ? ಸಾಮರ್ಥ್ಯದ ಜೊತೆ ಹೊಂದಾಣಿಕೆಯು ಇರಬೇಕು. ಈ ಗುಣ ಜವಾಹರಲಾಲ ನೆಹರೂಗೆ ಇರಲಿಲ್ಲ. ನೆಹರೂ ಸಂವಿಧಾನ ಬರೆಯದಿದ್ದರೇನು ಲಾಹೋರ ಅಧಿವೇಶದಲ್ಲಿ ತಂದೆ ಮೋತಿಲಾಲ ಬರೆದ ಸಂವಿಧಾನದ ಅಂಗೀಕಾರದ ದಿನದ ನೆನಪಿಗಾಗಿ ಜನೇವರಿ 26ರಂದು ಈಗಿನ ಸಂವಿಧಾನವನ್ನು ಅಂಗೀಕರಿಸಲಾಯಿತಲ್ಲವೆ ?

Wednesday, October 31, 2012

ಮತ್ತೇ ನಾವು ಆಂಡಯ್ಯ ಆಗುವುದು ಬೇಡ !



ಡಾ. ಸಿದ್ರಾಮ ಕಾರಣಿಕ 
 
ಕನ್ನಡ ಶಾಸ್ತ್ರಕ್ಕೆ ಯಾರು ಎಂದರೆ ನಾವು ಬಹಳ ಹಿಂದೆ ಶಂಕರಭಟ್ಟರು ಎನ್ನುತ್ತಿದ್ದೇವು ! ಆದರೆ ಇಂದು ಶಂಕರ ಭಟ್ ಅವರು ಬರೆಯುತ್ತಿರುವುದನ್ನು ಕಂಡಾಗ ಯಾಕೋ ನಮಗೇ ಮುಜುಗರು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳೇ ಹುಟ್ಟುವುದಿಲ್ಲ ! ಹಾಗೆ ಪ್ರಶ್ನೆಗಳು ಹುಟ್ಟದಿದ್ದರೆ ನಾವು ಮನುಷ್ಯರು ಅನ್ನಿಸಿಕೊಳ್ಳುವುದಕ್ಕೆ, ನಮಗೂ ಒಂದು ವ್ಯಕ್ತಿತ್ವ ಇದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ಉಜಿರೆಯಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಸೇರಿದ ನಮ್ಮಲ್ಲಿ ಒಂದು ಪ್ರಶ್ನೆ ಹೀಗಿತ್ತು. ಶಂಕರ ಭಟ್ಟರು ಬರೆಯುತ್ತಾರೆ. ಅವರಿಗೆ ಕನ್ನಡದ ವ್ಯಾಕರಣ ಮತ್ತು ಶಾಸ್ತ್ರಗಳ ಪರಿಚಯವಿದೆ. ಆದರೂ ಅಸಂಬದ್ಧವಾಗಿ ಬರೆಯತ್ತಾರೆ ಮತ್ತು ಅದಕ್ಕೆ ಉತ್ತರವನ್ನು ಕೇಳಿದರೆ ಅವರು ಏನನ್ನೂ ಹೇಳುವುದಿಲ್ಲ ! ಅಂದರೆ ಅವರು ಬರೆದ ಪುಸ್ತಕದ ಬಗ್ಗೆಯೇ ವಿಮರ್ಶೆ ನಡೆದಾಗಲೂ, ಪ್ರೀತಿಯಿಂದ ಆ ‘ಕಾರ್ಯ’ಕ್ಕೆ ಅವರನ್ನು ಆಹ್ವಾನಿಸಿದರೂ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ !
ರವಿವಾರದ ವಿಜಯ ಕರ್ನಾಟಕದಲ್ಲಿ (9-9-2012) ಶಂಕರಭಟ್ಟ ಅವರು ಒಂದು ಲೇಖನ ಬರೆದಿದ್ದಾರೆ. ಅದರ ಶೀರ್ಷಿಕೆ ‘ಓದುವ ಹಾಗೆಯೇ ಬರೆಯುವುದು’ ಎಂದಿದೆ. ಅಂದರೆ ಸಂಸ್ಕøತದಿಂದ ಎರವಲು ಪಡೆದ ಪದಗಳನ್ನು ನಾವು ಯಾವ ರೀತಿ ಉಚ್ಚರಿಸುತ್ತೇವೆಯೋ ಅದೇ ರೀತಿಯಲ್ಲಿ ಬರೆಯಬೇಕೆಂದು ಸೂಚಿಸುತ್ತಾರೆ ! ಇದು ಆಂಡಯ್ಯನ ವಾದ ಎಂದರೂ ನಡೆಯುತ್ತದೆ ! ಶಂಕರಭಟ್ಟರು ಹಿರಿಯರು, ವಿದ್ವಾಂಸರು ಎನ್ನುವುದು ಬೇರೆ ಮಾತು. ಆದರೆ ಅದನ್ನೇ ಮುಂದು ಮಾಡಿಕೊಂಡು ಕನ್ನಡಿಗರನ್ನು ಹಾದಿ ತಪ್ಪಿಸುವ ನಡೆಯನ್ನು ಅವರು ಮುಂದುವರಿಸಿರುವುದು ಮಾತ್ರ ಸಮಂಜಸವೆಂದು ತೋರುತ್ತಿಲ್ಲ !
ಶಂಕರ ಭಟ್ಟರು ನಮ್ಮನ್ನು ಒಂದು ರೀತಿಯಲ್ಲಿ ಕನ್‍ಫ್ಯೂಜ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ ನನಗೆ ! ಜನಸಾಮಾನ್ಯರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಳ್ಳದ ಮತ್ತು ಆ ಬಗ್ಗೆ ಅನುಭವ ಇಲ್ಲದಿರುವ ಅವರು ತಮ್ಮ ಗೂಡಿನೊಳಗೆ ಕುಳಿತುಕೊಂಡು ತಮಗೆ ತೋಚಿದಂತೆ ವಿಚಾರಗಳನ್ನು ಹರಿಯಬಿಡುತ್ತಿರುವುದು ಸರ್ವಥಾ ಸರಿಯಲ್ಲ. ಯಾಕೆಂದರೆ ಅವರು ಉಪಯೋಗಿಸುವ ಕನ್ನಡ ಪದಗಳೇ ಒಮ್ಮೊಮ್ಮೆ ಕನ್ನಡಿಗರಿಗೆ ಅರ್ಥವಾಗಲಾರವು ! ‘ತಿಳಿವಿಗರು’, ‘ಹೊರಪಡಿಕೆಗಳು’, ‘ಎತ್ತುಗೆ’, ‘ಬರಿಗೆ’  ಮೊದಲಾದ ಪದಗಳು ಜನಸಾಮಾನ್ಯರಿಗೆ ಹೇಗೆ ಅರ್ಥವಾಗುತ್ತವೆ ? ನಿಮ್ಮ ಬುದ್ಧಿಶಕ್ತಿ ಅಪಾರವಾಗಿರಬಹುದು. ಆದರೆ ಅದನ್ನು ದಯವಿಟ್ಟು ಜನಸಾಮಾನ್ಯರ ಮೇಲೆ ಹೇರಬೇಡಿ !
ಇಡೀ ಲೇಖನವನ್ನು ಕಂಡಾಗ ಸಂಸ್ಕøತ ಭಾಷೆಯ ಅಕ್ಷರಗಳನ್ನು ಬಳಕೆ ಮಾಡುವುದರ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಆದರೆ ತಾವೇ ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಬಳಸುತ್ತಾರೆ ! ‘ಸುಲಭ>ಸುಲಬ, ಖುಷಿ>ಕುಶಿ, ಪೂಜ್ಯಭಾ>ಪೂಜ್ಯಬಾವ ಮೊದಲಾಗಿ ಬಳಸಿದ್ದಾರೆ. ಇದು ಕನ್ನಡ ಪ್ರೇಮವೇ ? ‘... ಮಾರ್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು’ ಎನ್ನುವ ಅವರಿಗೆ ತಾವು ಮಾಡುತ್ತಿರುವುದೂ ತೊಡಕಿನ ಸೃಷ್ಟಿಯೇ ಅಂತ ಯಾಕೆ ಅನ್ನಿಸುತ್ತಿಲ್ಲ ? ಮಹಾಪ್ರಾಣವನ್ನು ತಿರಸ್ಕರಿಸುವ ಮೂಲಕ ಬಳಕೆಯಲ್ಲಿರುವ ಕನ್ನಡ ಪದಗಳ ಅರ್ಥವ್ಯತ್ಯಾಸವಾಗುವುದಿಲ್ಲವೆ ? ನಾನು ಬದಲಾವಣೆಯ ಗಾಳಿ ಬೀಸುತ್ತಿದ್ದೇನೆ ಎಂದು ಅವರು ತಿಳಿದುಕೊಂಡಿದ್ದರೆ ಯಾಕೋ ಸಮಂಜಸವೆನಿಸಲಾರದು ! ಆಡುಭಾಷೆಯನ್ನು ಹದಗೆಡಿಸಿ ಕ್ಲಿಷ್ಟ ಮಾಡುವ ಪರಿ ಒಂದು ರೀತಿಯಲ್ಲಿ ನಗುವನ್ನೂ ತರುತ್ತದೆ !
ಶಂಕರ ಭಟ್ಟರ ಲೇಖನವಷ್ಟೇ ಅಲ್ಲ. ಸಿದ್ಧರಾಜು ಬೋರೇಗೌಡ ಅವರ ಲೇಖನ ‘ಬಾರತದವರು ಅಮೆರಿಕಾದವರಿಂದ ಆಳಗ್ಗಳೆ ಮತ್ತು ಆಳೀಳಿಗೆಯ ಪಾಟ’ (ವಿಜಯ ಕರ್ನಾಟಕ : 19-09-2012) ಕೂಡ ಇದೇ ರೀತಿಯ ಗೊಂದಲಗಳನ್ನು ಹುಟ್ಟು ಹಾಕುವಂತಿದೆ. ಯಾಕೆಂದರೆ ಲೇಖಕರು ಕನ್ನಡ ಲಿಪಿ ಸುದಾರಣೆಯಲ್ಲಿ ನುಡಿಯರಿಗೆ ಶಂಕರ ಬಟ್ಟರ ಶಾಲೆಗೆ ಸೇರಿದವರು. ಅಮೆರಿಕಾದ ಸ್ಕ್ರಿಪ್ಟ್ಸ್ ಅರಕೆ ಸಂಸ್ತೆಯಲ್ಲಿ ಬುಡಕಣಗಳ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ ! ಇವರು ಬಳಸುವ ಪದಗಳು ಕೂಡ ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ಇಲ್ಲ. ಶೀರ್ಷಿಕೆಯಲ್ಲಿಯೇ ಇರುವ ಆಳಗ್ಗಳೆ, ಆಳೀಳಿಗೆ ಹಾಗೂ ಲೇಖನದಲ್ಲಿ ಬಂದಿರುವ ಒಪ್ಪುಕೂಟ, ಮೇಟಿಯಾಳ್ಕೆ, ಆಳ್ಕೆ, ಈಳಿಗೆ, ಬೇರ್ಮೆ ಹಲತನ, ಹೆಗ್ಗಳ, ಮಿಂಬಲೆ ಮೊದಲಾದ ಪದಗಳನ್ನು ಒತ್ತಾಯಪೂರ್ವಕವಾಗಿಯೋ ಇಲ್ಲವೆ ಹಾಗೆ ಬರೆಯಲೇ ಬೇಕು ಎಂಬ ಹಠದಿಂದಲೋ ಉಪಯೋಗಿಸಿದ್ದಾರೆ !
ಸಿದ್ಧರಾಜು ಅವರೇ ಲೇಖನದಲ್ಲಿ ಒಂದು ಕಡೆ ‘ಹೆಚ್ಚೆಣಿಕೆಯವರ ತೀಟೆಗಾಗಿ ಕೊರೆಯೆಣಿಕೆಯವರನ್ನು ತೊಂದರೆಗೀಡು ಮಾಡುವುದು ಆಳಾಳ್ಕೆಯಾಗದು’ ಎನ್ನುತ್ತಾರೆ. ಹಾಗಾದರೆ ಶಂಕರಭಟ್ಟರು ಮತ್ತು ಅವರ ಅನುಯಾಯಿಗಳಾದ ಸಿದ್ಧರಾಜು ಅವರು ಮಾಡುತ್ತಿರುವುದದರೂ ಏನು ? ಕನ್ನಡದ ಬಗ್ಗೆ ತುಂಬ ಕಾಳಜಿ ಇದೆ. ಅದು ಉಳಿಯಬೇಕು, ಬೆಳೆಯಬೇಕು ಎಂಬುದು ಎಲ್ಲ ಕನ್ನಡಿಗರ ಆಶಯವಾಗಿರುತ್ತದೆ. ಆದರೆ ಅದನ್ನು ಹೀಗೇ ಇರಬೇಕು ಎಂದು ನಿರ್ದೇಶನ ಮಾಡಿ ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ ! ಶಂಕರ ಭಟ್ಟರಂತೂ ‘ಅಕ್ಷರ’ವನ್ನು ‘ಬರಿಗೆ’ ಎಂದೇ ಕರೆಯಲು ಆರಂಭಿಸಿದ್ದಾರೆ ! ಭಾಷೆಯೊಂದರಲ್ಲಿ ಕಡಿಮೆ ಅಕ್ಷರಗಳಿದ್ದಷ್ಟೂ ಆ ಭಾಷೆ ಬೆಳವಣಿಗೆ ಹೊಂದುತ್ತದೆ ಎಂಬ ವಿಚಾರವನ್ನು (ವಿ.ಕ. 21-10-2012) ಪ್ರತಿಪಾದಿಸತೊಡಗಿದ್ದಾರೆ. ಇಲ್ಲಿ ಹೊಸದೇನೂ ಇಲ್ಲ. ಕನ್ನಡದ್ದೇ ಎನ್ನುವ ಪದಗಳನ್ನು ಬಿಟ್ಟರೆ ವಿಚಾರವೆಲ್ಲ ಹಳೆಯದೇ. ಕೇಶಿರಾಜ ಕೂಡ ಅಕ್ಷರಗಳನ್ನು ಕಡಿಮೆ ಮಾಡಲು ಹೆಣಗಾಡಿದ್ದಾನೆ ; ಭಾಷಾಶಾಸ್ತ್ರಜ್ಞರೂ ಈ ಬಗ್ಗೆ ಈಗಾಗಲೇ ಚರ್ಚೆ ನಡೆಯಿಸಿದ್ದಾರೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅಕ್ಷರಗಳು ರೂಪುಗೊಂಡಿರುತ್ತವೆ. ಈ ವಿಚಾರವನ್ನು ಶಂಕರ ಭಟ್ಟರು ಯಾಕೆ ಮರೆತಿದ್ದಾರೋ ತಿಳಿಯದು. ಸಮಸ್ಕøತದಲ್ಲಿ ಕಡಿಮೆ ಅಕ್ಷರಗಳಿರುವುದನ್ನು ಹೇಳಿರುವ ಅವರು ಅದೇ ದೇವನಾಗರಿ ಲಿಪಿಯನ್ನು ಬಳಸಿಕೊಂಡು ಬೆಳೆದು ಬಂದಿರುವ ಹಿಂದಿ, ಮರಾಠಿ ಬಗ್ಗೆ ಮಾತನಾಡುವುದಿಲ್ಲ. ಮರಾಠಿ ಅಥವಾ ಹಿಂದಿಯಲ್ಲಿ ‘ಇ, ಈ, ಉ, ಊ’ ಇವೆಯಾದರೂ ‘ಎ, ಒ’ಗಳು ಇಲ್ಲ. ಹೀಗಾಗಿಯೇ ಮರಾಠಿಗರು ಮಾತನಾಡುವಾಗ ‘ಹೆಡ್ಮಾಸ್ಟರ್’ ಎನ್ನುವುದನ್ನು ‘ಹೇಡಮಾಸ್ಟರ್’ ಎಂದೇ ಉಚ್ಛರಿಸುತ್ತಾರೆ. ಹಾಗೆಯೇ ‘ಒದರುವ’ ಎಂಬುದನ್ನು ‘ಓದರುವ’ ಎಂದೇ ಮಾತಿನಲ್ಲೂ ಬರವಣಿಗೆಯಲ್ಲೂ ಬಳಸುತ್ತಾರೆ. ಹೀಗಾದಾಗ ಆಯಾ ಪ್ರದೇಶದ ಭಾಷೆಗಳ ಮಿತಿಯನ್ನು ತಿಳಿದುಕೊಂಡಿರಬೇಕು. ಕೇವಲ ಆಡುಮಾತುಗಳನ್ನೇ ಇಟ್ಟುಕೊಂಡು ವಾದಕ್ಕೆ ಇಳಿಯುವ ಶಂಕರ ಭಟ್ಟರು ಇಂಥ ಸೂಕ್ಷ್ಮಗಳನ್ನೂ ಅರಿತಿರಬೇಕಾಗುತ್ತದೆ. ಅಕ್ಷರಗಳು ಹೆಚ್ಚೋ, ಕಡಿಮೆಯೋ ಎಂಬುದು ಭಾಷಾ ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ ಎಂಬುದನ್ನು ಮೊದಲು ಅವರು ಗಮನಿಸಬೇಕು. ಚೀನಿ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಂತ ಚೀನಿ ಭಾಷೆ ನಶಿಸಿದೆಯೆ ? ಇಲ್ಲ. ಇವತ್ತು ಆ ದೇಶದ ಪ್ರತಿಯೊಂದು ಉತ್ಪನ್ನಗಳ ಮೇಲೆ ಆ ಭಾಷೆಯ ಬಳಕೆ ಇದೆ. ಕನ್ನಡಕ್ಕೆ ಕುತ್ತು ಇರುವುದು ಇಂಥಲ್ಲಿಯೇ ! ವಿನಃ ಶಂಕರ ಭಟ್ಟರು ಅಥವಾ ಅವರ ಅನುಯಾಯಿಗಳು ಹೇಳುವ ಕಾರಣಗಳಿಂದಲ್ಲ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ. ಒಂದು ನಾಡಿನ ಭಾಷೆಯೊಂದು ಅನ್ನ ಕೊಡುವ ತಾಕತ್ತು ಹೊಂದಿರಬೇಕು ; ಆ ನಾಡಿನಲ್ಲಿ ಉತ್ಪನ್ನವಾಗುವ ಎಲ್ಲ ವಸ್ತುಗಳ ಮೇಲೆ ಅಲ್ಲಿಯ ಭಾಷೆಯೇ ಪ್ರಮುಖವಾಗಿ ಕಾಣಿಸಬೇಕು. ಅಂದಾಗ ಮಾತ್ರ ಆ ನಾಡಿನ ಭಾಷೆ ಉಳಿಯುತ್ತದೆ ; ಬೆಳೆಯುತ್ತದೆ. ಒಣ ವೇದಾಂತಕ್ಕಿಂತ ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ.
ಇದೆಲ್ಲ ಬಿಟ್ಟು ಅಕ್ಷರಗಳನ್ನು ಕಡಿಮೆ ಮಾಡಬೇಕು. ಪದಗಳನ್ನು ‘ಹೀಗೆ’ ಪರಿವರ್ತಿಸಿಕೊಳ್ಳಬೇಕು ಎಂಬುದೆಲ್ಲ ಪ್ರಚಾರಕ್ಕಾಗಿ ಮಾಡುವ ಒಂದು ಗಿಮಿಕ್ಕಾಗಿ ತೋರುತ್ತದೆ ! ಇದರಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ‘ಎಲ್ಲರ ಕನ್ನಡ’ ಎಂದು ಹೇಳುತ್ತಲೇ ಕನ್ನಡವನ್ನು ತೀರ ಸಂಕೀರ್ಣಗೊಳಿಸಿ ಹಾಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಅಂಥವರಿಗೆ ವೇದಿಕೆ ಒದಗಿಸುವ ವೇದಿಕೆಗಳೂ ಕೂಡ ನಿಷ್ಪಕ್ಷಪಾತದಿಂದ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕು.
ಹೀಗೇ ಇರಬೇಕು. ಹೀಗೆಯೇ ಬರಬೇಕು ; ಬರೆಯಬೇಕು ಎಂಬ ವಿಚಾರಗಳನ್ನೇ ಇಟ್ಟುಕೊಂಡಿದ್ದ ಆಂಡಯ್ಯ ಕೂಡ ಕಬ್ಬಿಗರ ಕಾವ ಬರೆದ. ಆದರೆ ಅದರ ಪ್ರಭಾವ ಏನಾಯಿತು ? ಏನಾದರೂ ಬದಲಾವಣೆ ಸಾಧ್ಯವಾಯಿತೇ. ಈಗ ‘ಕಬ್ಬಿಗರ ಕಾವ’ ಅರ್ಥ ಮಾಡಿಕೊಳ್ಳುವವರೆಷ್ಟು ಇದ್ದಾರೆ ? ಇಂಥ ವಿಷಯಗಳನ್ನೆಲ್ಲ ಮನಗಾಣದೇ ವಿಚಾರಗಳನ್ನು, ಅಭಿಪ್ರಾಯಗಳನ್ನು ಹೇರುವುದು ಸರ್ವಥಾ ಸರಿಯಲ್ಲ. ಬಹುಶಃ ಆಂಡಯ್ಯನ ಅನುಯಾಯಿಗಳು ಇನ್ನೂ ಇದ್ದಾರೆ ಎನ್ನುವುದೇ ಸೋಜಿಗ ! ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

Friday, October 19, 2012

Mulnivasis-Who and How ?

Balvinder Singh Mulnivasi

Some Sanskrit literature of Arya Brahmins, that is available today makes mention of some important aspects, related to Mulnivasis. According to this literature, in the ancient period there was heavy struggle between the Aryas
and the Mulnivasis.

This struggle is described in the Sanskrit literature. The terminology used for the Mulnivasis is Anarya, Dass, Dasyu, Asur, Rakshas, Ravan and Naga. These were the names given by Aryan invaders to the Mulnivasis. These are not praise-worthy names, but were used to abuse and condemn them.
Mulnivasi Sangh
Therefore, it is now proved that these Anarya, Dass, Dasyu, Asura, Rakshas and Danav are the original inhabitants of this country, who, are now referred in the constitution as Scheduled Castes and convert from them to religious minorities.
How can we say that these people are Mulnivasis?

This question can be answered in many ways and many reasons can be given, to call these people as Mulnivasis. One, these people were made untouchables and were driven out from the public life and were forced to live a wretched life of animals.
The Second section of the Mulnivasis are tribal people, who were forced to live in jungles and hills. Thus we can see that the Scheduled Castes are not Hindus, because they do not observe religious customs of Arya Brahmins. Arya-Brahmins call them Hindus, but have not granted them any rights of Hindus.

Hindu code bill was not applicable to the Scheduled Castes. Thus there is no similarity of conduct, thoughts, faith, belief, customs, religious tradition, language and way of life between Arya-Brahmins and Scheduled Castes / Scheduled Tribes.

The third big section, whom we call, Other Backward Class(OBC) is also Mulnivasis, because they have been deprived the right of holding power, acquiring property and possessing weapons(As per manusmruti). When these O.B.C. accepted the domination of Arya-Brahmins they granted them religious rights of Hindus, but adopted Puranic system for them, instead of Vedic system. From this, it is proved that this class is not Vedic. We can see that when rights were granted to O.B.C’s as per Mandal Commission, the Arya-Brahmins opposed it most. They tried to hatch a conspiracy against the objectives of the Mandal Commission and were successful in that.

From these SCs, STs and OBCs, who are the Mulnivasis have become Sikhs, Buddhists, Christians and Muslims. It means the 95% people of minorities are from this Mulnivasie castes. Arya-Brahmins call them foreigners, especially Muslims. Muslims are not foreigners, but are original inhabitants of this country. Thus we all are Mulnivasis. This is proved fact.
Struggle for liberation of Mulnivasis

When freedom struggle of our country was going on, we were dual slaves. The Arya Brahmins were slaves of British people and we, Mulnivasis (original inhabitants) were the slaves of the system established by them, in which we were made slaves, socially , culturally and religiously.
On 15th Aug. 1947, these Arya-Brahmins got freedom and became the masters and rulers of the country. And we, who were the slaves of the slaves are still slaves of these Arya-Brahmins. On 15th Aug. 1947, the country got the freedom, but the people of the country did not get this freedom. Only Arya brahmins got freedom and we, Mulnivasis are still their slaves.

Therefore, it is necessary to launch the struggle for the liberation of the Mulnivasis. Pride of the caste is the reason of our slavery and caste are invented by Arya Brahmins, through which they divided the Mulnivasis into 6000 small groups and perpetuated this division into them. Every caste is having its own caste people and there is ladder of high and low, based on graded inequality among these castes, they keep on fighting among themselves, instead of uniting themselves to fight against the common enemy. The Arya-Brahmins encourage and sponsor this fight. Because of this constant division of Mulnivasis of the country, they have become unfit for the resistance.

Along with this, another important aspect is that these Mulnivasis were prohibited from taking education, possessing weapons and acquiring property. Because of this, they became helpless, and hopeless and came to depend upon Arya-Brahmins. The brahmins took advantage of this dependency and made the Mulnivasis, slaves. When they were made slaves under Brahminical system, they could not save the independence of their country and along with them, India, their motherland also became slave.

Therefore, it is necessary to liberate the Mulnivasis and their motherland. It is necessary to free them from the system. Hence to achieve the objective of “Change of System” and to free the country from Arya-Brahmins, it has become necessary to launch the movement of their liberation of the Mulnivasis.
Point of view based on Social system

From the view point based on system, it can be seen that the Scheduled Castes, Scheduled Tribes, Other Backward Classes and Minorities are victims of the brahminical system. Therefore Mahatma Jyotirao Phule, Periyar Ramaswami and Dr. Babasaheb Ambedkar have fixed the objective of their movements to change this social System of inequality.
Therefore those who are suffering from this Social System, can only take active part in the movement of change of System. This is quite natural. There is no point in organising those communities, who were benefited by the System. Thus for changing the System of inequality, it is necessary to organise those communities, who were victims of the system, Therefore the Scheduled Castes, Scheduled Tribes, Other Backward classes and Minorities are being organised.
Aryan Brahmins are foreigners

If Scheduled castes, Scheduled Tribes, Other Backward Class and the minorities converted from them, who have been divided into 6000 castes, are the Mulnivasis of this country, then who are foreigners? We must find out an answer to this question. There is not much difference of opinion among historians on this point, that Aryans are foreigners. The only difference of opinion is on the issue of the country of their origin. On this issue

JAI MULNIVASI!

Saturday, September 15, 2012

ಗಾಂಧಿ-ಅಂಬೇಡ್ಕರ್ ಮತ್ತು ಪುಣೆ ಒಪ್ಪಂದ



-ಅನಿಲ ಹೊಸಮನಿ

ಸಾಮಾಜಿಕ ಸಮಾನತೆಯ ಆಂದೋಲನದ ಜೊತೆ ಜೊತೆಗೆ ದೇಶದ ರಾಜಕಾರಣದಲ್ಲಿ ಭಾಗವಹಿಸುವುದರ ಅಗತ್ಯತೆ ಡಾ.ಅಂಬೇಡ್ಕರರಿಗೆ ಮನವರಿಕೆಯಾಗಿತ್ತು. ಅಧಿಕಾರ ಪ್ರಾಪ್ತಿ ಮಾಡಿಕೊಳ್ಳದೆ ಗುರಿ ಸಾಧನೆ ಯಾಗದೆಂಬುದು ಅವರ ಅರಿವಿಗೆ ಬಂದಿತ್ತು. ಮಹಾಡ್ ಸತ್ಯಾಗ್ರಹ, ಮನುಸ್ಮತಿ ದಹನ, ಕಾಳಾರಾಮ ಮಂದಿರ ಪ್ರವೇಶ ಚಳವಳಿಗಳಿಂದ ಅಸ್ಪಶ್ಯರಲ್ಲಿ ಅಭೂತಪೂರ್ವ ಸಂಘಟನೆ ಮತ್ತು ಜಾಗೃತಿ ಮೂಡಿತ್ತು. ಆದರೆ ಇಷ್ಟರಿಂದಲೇ ಅವರಿಗೆ ಸಮಾಧಾನವಿರಲಿಲ್ಲ. ಅದಕ್ಕಾಗಿಯೇ ಅವರು ಅಖಿಲ ಭಾರತ ಬಹಿಷ್ಕೃತ ವರ್ಗಗಳ ಸಮಾವೇಶವನ್ನು ಆಯೋಜಿಸುವ ನಿರ್ಧಾರ ಮಾಡಿದರು. 1930ರ ಅಗಸ್ಟ್ 9 ಮತ್ತು 10ರಂದು ನಾಗಪುರದಲ್ಲಿ ಸಂಘಟಿಸಲಾದ ಪ್ರಥಮ ರಾಷ್ಟ್ರಮಟ್ಟದ ಅಧಿವೇಶನದ ಅಧ್ಯಕ್ಷತೆಯನ್ನು ಡಾ.ಅಂಬೇಡ್ಕರ್ ವಹಿಸಿದ್ದರು.
ವಿದರ್ಭ ಮತ್ತು ದೇಶದ ವಿವಿಧ ಭಾಗಗಳಿಂದ ಬಹುಸಂಖ್ಯೆಯ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಸ್ಪಶ್ಯರ ರಾಜಕೀಯ ಹಕ್ಕುಗಳನ್ನು ಪಡೆದು ಕೊಳ್ಳುವುದಕ್ಕೋಸ್ಕರ ಈ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಿತು. ಅಧ್ಯಕ್ಷ ಸ್ಥಾನದಿಂದ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಲ್ಲಿದ್ದ ಪ್ರತಿಯೊಬ್ಬರ ಮೇಲೂ ಗಾಢ ಪ್ರಭಾವ ಬೀರಿತು. ಅವರು ಹೇಳಿದರು- ನಮಗೆ ರಾಜಕೀಯ ಸ್ವಾತಂತ್ರವೂ ಬೇಕು, ಸಾಮಾಜಿಕ ಸಮಾನತೆ ಕೂಡ ಬೇಕು. ಸ್ವತಂತ್ರ ಭಾರತಕ್ಕೆ ಹೊಸ ರಾಜ್ಯ ಘಟನೆ ರೂಪಿಸು ವಾಗ ಅದರಲ್ಲಿ ನಮ್ಮ ಹಕ್ಕುಗಳು ನಮೂದಾಗಬೇಕು.
ಅಲ್ಪಸಂಖ್ಯಾತ ಮತ್ತು ದುರ್ಬಲರ ನಿರ್ಲಕ್ಷ ಮಾಡುವುದನ್ನು ನಾವು ಸಹಿಸುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ನಮಗೆ ಪ್ರತ್ಯೇಕ ಪ್ರತಿನಿಧಿತ್ವ ಬೇಕು. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಆಸ್ಪದ ನೀಡುವ ಸ್ವತಂತ್ರ ಮತದಾರ ಕ್ಷೇತ್ರಗಳು ಬೇಕು. ಅಂಥ ವ್ಯವಸ್ಥೆ ಹೊಸ ಸಂವಿಧಾನದಲ್ಲಿ ಇರಬೇಕು. ಅನೇಕ ವಿಷಯಗಳಲ್ಲಿ ಬ್ರಿಟಿಷ್ ಸರಕಾರವು ಅಸಹಾಯಕವಾಗಿದೆ ಮತ್ತು ಸವರ್ಣ ಹಿಂದೂ ಗಳು ಕೂಡ ನಮ್ಮನ್ನು ಬೆಂಬಲಿಸುವುದಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವು ಸ್ವತಂತ್ರ ವಾಗಿ ನಮ್ಮ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು. ನಮ್ಮ ಸ್ವತಂತ್ರ ಅಸ್ತಿತ್ವವನ್ನು ಭಾರತಕ್ಕೆ ತೋರಿಸಿಕೊಡಬೇಕು ಮತ್ತು ಇಂಗ್ಲಿಷ್ ಸರಕಾರವೂ ನಮ್ಮ ಸ್ವತಂತ್ರ ಅಸ್ತಿತ್ವವನ್ನು ಮಾನ್ಯ ಮಾಡಬೇಕು.

ಇನ್ನೂ ಒಂದು ಮಹತ್ವದ ವಿಚಾರವನ್ನು ಡಾ.ಅಂಬೇಡ್ಕರ್ ಈ ಅಧಿವೇಶನದಲ್ಲಿ ಮಂಡಿಸಿದರು. ಅದೆಂದರೆ, 1) ಅಸ್ಪಶ್ಯರಿಗಾಗಿ ಮೀಸಲು ಮತಕ್ಷೇತ್ರಗಳು, 2) ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ. ಸರ್ವ ಸಾಮಾನ್ಯವಾಗಿ ಮೀಸಲು ಕ್ಷೇತ್ರಗಳಿರಲೆಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿತ್ತು. ಆದರೆ ಅನೇಕರು ಸಂಯುಕ್ತ ಮತದಾರ ಕ್ಷೇತ್ರಗಳಿರ ಬೇಕು ಎಂಬ ವಿಚಾರ ವ್ಯಕ್ತಪಡಿಸಿದರು. ಆದರೆ ಡಾ.ಅಂಬೇಡ್ಕರ್‌ರು ಆ ವಿಚಾರವನ್ನು ವಿರೋಧಿ ಸಿದರು. ಸಂಯುಕ್ತ ಮತದಾರ ಕ್ಷೇತ್ರಗಳಲ್ಲಿ ಸವರ್ಣ ಹಿಂದೂಗಳು ತಮ್ಮ ಗುಲಾಮ ಅಭ್ಯರ್ಥಿಯನ್ನು ಅಸ್ಪಶ್ಯರ ಮೇಲೆ ಹೇರುವ ರೆಂಬ ಭಯ ಅವರಿಗಿತ್ತು. ಮೀಸಲು ಮತಕ್ಷೇತ್ರ ಗಳು ಡಾ.ಅಂಬೇಡ್ಕರರು ಅತ್ಯಂತ ವಿಚಾರ ಪೂರ್ವಕವಾಗಿ ಮಂಡಿಸಿದ ವಿಷಯವಾಗಿತ್ತು.
ಮುಸಲ್ಮಾನರಿಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಕೊಡುವುದಾದರೆ ಅಸ್ಪಶ್ಯರಿಗೆ ಏಕೆ ಬೇಡ? ಇದು ಅವರ ನೇರ ಪ್ರಶ್ನೆಯಾಗಿತ್ತು. ಕುಡಿಯುವ ನೀರಿನ ಸಮಸ್ಯೆ, ಮಂದಿರ ಪ್ರವೇಶದಂತಹ ಸಾಮಾನ್ಯ ಸವಲತ್ತುಗಳನ್ನು ನೀಡುವುದಕ್ಕೆ ಹಿಂದೂ ಸನಾತನಿಗಳು ಹಿಂಜರಿಯುತ್ತಿರುವಾಗ, ಅಸ್ಪಶ್ಯರ ಹಿತರಕ್ಷಣೆ ಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನೇಕೆ ಕೇಳಬಾರದು? ಸಮಾಜವನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಬೇಕಾದರೆ, ಅದರ ಪ್ರತಿನಿಧಿಗಳು ಆಡಳಿತದಲ್ಲಿ ಇರುವುದು ಅಗತ್ಯ ವಿದೆ ಮತ್ತು ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತಿರಬೇಕು ಎಂಬುದು ಡಾ.ಅಂಬೇಡ್ಕರರ ಅಭಿಪ್ರಾಯ ವಾಗಿತ್ತು. ರಾಜಕೀಯ ಹಕ್ಕುಗಳ ಮಂಡನೆಯ ನಂತರ ಅಧಿವೇಶನ ಮುಕ್ತಾಯಗೊಂಡಿತು.
1930ರ ಸೆಪ್ಟಂಬರ್ ತಿಂಗಳಲ್ಲಿ ಇಂಗ್ಲಿಷ್ ಸರಕಾರವು ದುಂಡು ಮೇಜಿನ ಪರಿಷತ್ತಿಗೆ ಡಾ.ಅಂಬೇಡ್ಕರರನ್ನು ಆಮಂತ್ರಿಸಿತು. ಈ ಮುಖೇನ ಸರಕಾರವು ಡಾ.ಅಂಬೇಡ್ಕರ್ ಭಾರತದ ಅಸ್ಪಶ್ಯರ ಪ್ರತಿನಿಧಿಯೆಂದು ಮನ್ನಿಸಿತ್ತು. ಬ್ಯಾ.ಜಿನ್ನಾ, ಸಪ್ರು, ಜಯಕರ ಮತ್ತಿತರ ಗಣ್ಯರೊಂದಿಗೆ ಡಾ.ಅಂಬೇಡ್ಕರ್ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸುತ್ತಿದ್ದುದು ಮಹತ್ವದ ಸಂಗತಿಯಾ ಗಿತ್ತು. ಭಾರತದ ಹೊಸ ಸಂವಿಧಾನ ರಚಿಸು ವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವ ನಿಟ್ಟಿನಲ್ಲಿ 12, ನವೆಂಬರ್ 1930ರಂದು ಲಂಡನ್‌ನಲ್ಲಿ ದುಂಡು ಮೇಜಿನ ಪರಿಷತ್ತು ನಡೆಯಲಿತ್ತು. ಇಂಗ್ಲೆಂಡಿನ ಅರಸು 5ನೆ ಜಾರ್ಜ್ ಈ ಪರಿಷತ್‌ನ ಉದ್ಘಾಟನೆ ನೆರವೇರಿಸಲಿದ್ದರು.

ನಾಗಪುರ ಅಧಿವೇಶನವು ಡಾ.ಅಂಬೇಡ್ಕರರ ವ್ಯಕ್ತಿತ್ವವನ್ನು ಹೆಚ್ಚಿಸಿತ್ತು. ಅದುವರೆಗೆ ಮಹಾ ರಾಷ್ಟ್ರದ ದಲಿತ ನೇತಾರರಾಗಿದ್ದ ಡಾ. ಅಂಬೇಡ್ಕರ್ ಈಗ ಇಡೀ ಭಾರತದ ದಲಿತರಿಗೆ ನಾಯಕರಾಗಿ ಮಾರ್ಪಟ್ಟರೆಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಹಕ್ಕುಗಳು ದೊರೆತ ಮಾತ್ರಕ್ಕೆ ಮಂತ್ರದಂಡ ತಿರುಗಿಸಿದಂತೆ ಬದಲಾವಣೆ ಆಗಲಾರದು ಎಂಬ ಅಭಿಪ್ರಾಯ ಅವರದಾಗಿತ್ತು. ಹಾಗೆಂದೇ ತಮ್ಮ ಅಭಿವೃದ್ಧಿಗೆ ಅಸ್ಪಶ್ಯರೇ ಸ್ವತಃ ಕಂಕಣಬದ್ಧರಾಗಬೇಕೆನ್ನುವುದು ಅವರ ನಂಬುಗೆಯಾಗಿತ್ತು. ಮೊಟ್ಟಮೊದಲಿಗೆ ಎಲ್ಲ ಅಸ್ಪಶ್ಯರು ವಿದ್ಯೆ ಪಡೆಯಬೇಕು, ತಮ್ಮ ಜೀವನಕ್ರಮ ಬದಲಿಸಿಕೊಳ್ಳಬೇಕು ಮತ್ತು ನಿರ್ಭಯರಾಗಬೇಕು. ಭಾರತದ ರಾಜಕಾರಣ ದಲ್ಲಿ ಅಸ್ಪಶ್ಯ ಸಮಾಜವು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಡಾ.ಅಂಬೇಡ್ಕರರು ತಮ್ಮ ವಿಚಾರಗಳನ್ನು ಮಂಡಿಸಿದರು. ಅವರ ಈ ವಿಚಾರ ಸರಣಿ ಜನಸಮುದಾಯದ ಮೇಲೆ ಗಾಢ ಪರಿಣಾಮ ಬೀರಿತು. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ ಚಳವಳಿ ವಿಸ್ತೃತವಾಗತೊಡಗಿತ್ತು. ಅಸ್ಪಶ್ಯ ಸಮಾಜದ ಆಸೆ-ಆಕಾಂಕ್ಷೆಗಳ ಕುರಿತ ಡಾ.ಅಂಬೇಡ್ಕರ್ ಬೇಡಿಕೆಗಳನ್ನು ಒಪ್ಪಿಕೊಂಡು, ಈ ಸಮುದಾಯಗಳನ್ನೂ ರಾಷ್ಟ್ರೀಯ ಮುಕ್ತಿ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡುವ ವಿಚಾರಗಳೂ ಕೇಳಿಬಂದವು. ಆದರೆ ಸ್ವಾತಂತ್ರಾನಂತರ ಕಾರ್ಮಿಕರ, ರೈತರ, ಅಸ್ಪಶ್ಯರ ಸ್ಥಾನವೇನು? ಎಂಬ ಪ್ರಶ್ನೆಗೆ ಮಹಾತ್ಮಾ ಗಾಂಧಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಲಿಲ್ಲ. ಸ್ವರಾಜ್ಯ ಪ್ರಾಪ್ತಿಯ ನಂತರ ಅಸ್ಪಶ್ಯರ ಸಮಸ್ಯೆಯ ಬಗ್ಗೆ ಯೋಚಿಸುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ತೆಗೆದುಕೊಂಡರು. ಇದಕ್ಕೆ ಕಾಂಗ್ರೆಸ್‌ನ ನೇತೃತ್ವ ಉಚ್ಚವರ್ಣೀಯರ ಮತ್ತು ಉಚ್ಚ ವರ್ಗಗಳ ಕೈಯಲ್ಲಿತ್ತೆಂಬುದೇ ಕಾರಣವಲ್ಲದೆ ಬೇರೇನಲ್ಲ.
4ನೆ ಅಕ್ಟೋಬರ್ 1930ರಂದು ಡಾ.ಅಂಬೇಡ್ಕರ್‌ರು ಮುಂಬೈ ಬಂದರಿನಿಂದ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ವಿದೇಶ ಪ್ರವಾಸ ಅವರಿಗೆ ಹೊಸದೇನೂ ಆಗಿರಲಿಲ್ಲ. ಅಮೇರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅವರು ಅನೇಕ ವರ್ಷಗಳವರೆಗೆ ಇದ್ದು, ತಮ್ಮ ಉನ್ನತ ಶಿಕ್ಷಣ ಪೂರೈಸಿದ್ದರು. ಹೆಸರಾಂತ ಪ್ರಾಧ್ಯಾಪಕರ ಮಾರ್ಗ ದರ್ಶನದ ಲಾಭವನ್ನು ಅವರು ಪಡೆದಿದ್ದರು. ಹೆಸರಾಂತ ವಿಶ್ವ ವಿದ್ಯಾಲಯದ ಪದವಿಗಳನ್ನು ಅವರು ತಮ್ಮ ಹೆಸರಿನ ಮುಂದೆ ಜೋಡಿಸಿಕೊಂಡಿದ್ದರು. ನಿಧಾನವಾಗಿ ಭಾರತದ ನಾಯಕರು ಲಂಡನ್ ತಲುಪತೊಡಗಿದ್ದರು.

ಮದ್ರಾಸ್‌ನ ರಾವ್ ಬಹುದ್ದೂರ್ ಕೂಡ ಅಂಬೇಡ್ಕರ್ ಜೊತೆಗಿದ್ದರು. ಮುಂಚೆಯೇ ನಿರ್ಧರಿಸಿದಂತೆ ನವೆಂಬರ್ 12, 1930ರಂದು ಇಂಗ್ಲೆಂಡ್ ದೊರೆ ದುಂಡು ಮೇಜು ಪರಿಷತ್ತನ್ನು ಉದ್ಘಾಟಿಸಿದರು. ಈ ದುಂಡು ಮೇಜಿನ ಪರಿಷತ್ತಿನಲ್ಲಿ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಭೂತಪೂರ್ವ. ಭಾರತದಲ್ಲಿ 4 ಕೋಟಿ 20 ಲಕ್ಷ ಅಸ್ಪಶ್ಯರಿದ್ದಾರೆ. ಈ ಸಂಖ್ಯೆಯು ಇಂಗ್ಲೆಂಡ್ ಅಥವಾ ಫ್ರಾನ್ಸ್ ಜನಸಂಖ್ಯೆಗಿಂತ ಜಾಸ್ತಿ. ಈ ಪೀಡಿತ ಮತ್ತು ಶೋಷಿತ ಜನರ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಅಸ್ಪಶ್ಯತೆ ಎಂದರೇನೆಂಬುದೇ ಜಗತ್ತಿನ ಅನ್ಯ ದೇಶಗಳಿಗೆ ತಿಳಿಯದು. ಯಾಕೆಂದರೆ ಇಂಥ ಅಮಾನುಷ ಆಚರಣೆ ಜಗತ್ತಿನ ಯಾವ ಭಾಗ ದಲ್ಲೂ ಇಲ್ಲ. ಇಂಗ್ಲೆಂಡ್ ಮತ್ತು ಅಮೇರಿಕ ಗಳಲ್ಲಿ ನಿಗ್ರೋ ಗುಲಾಮರ ಮಾರಾಟ-ಖರೀದಿ ಬಹಳ ಹಿಂದೆ ಆಚರಣೆಯಲ್ಲಿತ್ತು. ನಂತರ ಕಾನೂನು ಮೂಲಕ ಈ ಗುಲಾಮಗಿರಿ ಅಂತ್ಯಕಂಡಿತು. ಅಲ್ಲಿ ಗುಲಾಮಗಿರಿಯಿತ್ತೇ ವಿನಃ ಅಸ್ಪಶ್ಯತೆಯಿರಲಿಲ್ಲ.
ಗುಲಾಮರ ಸ್ಪರ್ಶ ಮಾಡುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಭಾರತದ ಪರಿಸ್ಥಿತಿ ಬೇರೆಯೇ ಇದೆ ಎಂಬುದರ ಪರಿಚಯ ಮಾಡಿಕೊಟ್ಟರು. ಭಾರತೀಯ ಸೈನ್ಯದಲ್ಲಿ ಅಸ್ಪಶ್ಯರಿಗೆ ಪ್ರವೇಶವಿಲ್ಲ. ಪೊಲೀಸ್ ಖಾತೆಯಲ್ಲಿ ಮತ್ತು ಸರಕಾರಿ ನೌಕರಿಗಳು ಅವರಿಗೆ ಸಿಗುತ್ತಿಲ್ಲ. ಮಾನವೀಯ ಮರ್ಯಾದೆ ಪಡೆಯುವುದಕ್ಕೋಸ್ಕರ ಭಾರತದ ಐದನೇ ಒಂದು ಭಾಗದಷ್ಟು ಜನರು ಹೋರಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ದೇವಾಲಯಗಳಲ್ಲಿ ಅವರಿಗೆ ಪ್ರವೇಶ ನಿಷೇಧಿಸಲಾಗಿದೆ. ಗಾಂಧಿ ಮತ್ತು ಅಂಬೇಡ್ಕರ್‌ರವರ ಈ ವೈಚಾರಿಕ ಸಂಘರ್ಷವು ವಿಕೋಪಕ್ಕೆ ತಿರುಗಿತು. ಗಾಂಧಿಯಾದರೋ ಈ ಸಂಬಂಧ ತಮ್ಮ ಪ್ರಾಣತ್ಯಾಗ ಮಾಡಲೂ ಸಿದ್ಧರಾಗಿ ದ್ದರು.
ಗಾಂಧೀಜಿ ಪ್ರಾಣ ಉಳಿಸುವಂತೆ ಅಂಬೇಡ್ಕರ್‌ರ ಮೇಲೆ ಒತ್ತಡಗಳು ಬರಲಾರಂಭಿಸಿದವು. ಉಪವಾಸ ಸತ್ಯಾಗ್ರಹ ಒಂದೊಂದೇ ದಿನ ಹೆಚ್ಚುತ್ತಾ ಹೋದಂತೆ ಗಾಂಧೀಜಿ ಆರೋಗ್ಯ ಹದಗೆಡಲಾರಂಭಿಸಿತು. ಇಡೀ ದೇಶವೇ ಚಿಂತೆಯಲ್ಲಿ ಮುಳುಗಿತು. ಕೊನೆಗೆ ಡಾ.ಅಂಬೇಡ್ಕರರು ಗಾಂಧಿಯನ್ನು ಭೇಟಿ ಮಾಡಿದರು. ಪರಸ್ಪರ ಮಾತುಕತೆಯ ನಂತರ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಬಿಟ್ಟುಕೊಡಲು ಡಾ.ಅಂಬೇಡ್ಕರ್ ಒಪ್ಪಿ ಕೊಂಡರು. ಗಾಂಧೀಜಿ ಉಪವಾಸ ಕೊನೆಗೊಳಿಸಿದರು. ಈ ಒಪ್ಪಂದವೇ ಪುಣೆ ಒಪ್ಪಂದ ಎಂದು ಜನಜನಿತವಾಯಿತು. ಒಬ್ಬ ಅಸ್ಪಶ್ಯ ಗಾಂಧೀಜಿಯ ಪ್ರಾಣ ಉಳಿಸಿದರೆ, ಒಬ್ಬ ಬ್ರಾಹ್ಮಣ ಕೈಯಲ್ಲಿ ಪಿಸ್ತೂಲು ಹಿಡಿದು ಹತ್ಯೆ ಮಾಡಿದನು.

Saturday, September 08, 2012

ಸಮಾಜ ಒಡೆಯುವ ಹುನ್ನಾರ

 * ಡಾ. ಸಿದ್ರಾಮ ಕಾರಣಿಕ
ಏಜಾಜ್ ಆಶ್ರಫ್ ಅವರು ತುಂಬ ಓದಿಕೊಂಡಿರಬಹುದು. ಹಲವಾರು ವಿಷಯಗಳನ್ನು ತಿಳಿದುಕೊಂಡಿರಬಹುದು. ಆದರೆ ಭಾರತೀಯ ಮನೋಸ್ಥಿತಿಗಳ ನಿಜವಾದ ಅರಿವು ಇಟ್ಟುಕೊಳ್ಳದೇ ಲೇಖನಿಯನ್ನು ಆಡಿಸುವ, ಹಾದಿ ತಪ್ಪಿಸುವ ವಿಚಾರವನ್ನು ಇಟ್ಟುಕೊಂಡಿರುವುದಂತೂ ಸ್ಪಷ್ಟ ! ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ದಿನಾಂಕ : 31-08-2012 ರಂದು ಪತ್ರಕರ್ತ ಏಜಾಜ್ ಆಶ್ರಫ್ ಅವರು ವಿ.ಪಿ.ಸಿಂಗ್ ಮತ್ತು ಮಹಾನ್ ಭಾರತೀಯರು' ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನವು ತುಂಬ ಮಾರ್ಮಿಕವಾಗಿ ಮೂಡಿ ಬಂದಿದೆ. ಆದರೆ ವಿಷಯವನ್ನು ವಿಶ್ಲೇಷಣೆ ಮಾಡುವಾಗ ಬರಹಗಾರ ಯಾವುದನ್ನೋ ಮನಸ್ಸಿನಲ್ಲಿ ಗುಪ್ತವಾಗಿಟ್ಟುಕೊಂಡು, ತಲೆ ಕೆಡಿಸಿಕೊಂಡು ಲಂಗು-ಲಗಾಮಿಲ್ಲದೆ ತಮ್ಮ ವಿಚಾರ ಲಹರಿಯನ್ನು ಹರಿಯ ಬಿಟ್ಟಿದ್ದಾರೆ.

ಸಿಎನ್‌ಎನ್-ಐಬಿಎನ್, ಹಿಸ್ಟರಿ ಟಿವಿ 18, ಔಟ್‌ಲುಕ್ ಕೈಗೊಂಡ ಮಹಾತ್ಮಾ ಗಾಂಧಿಯ ನಂತರ ಅತಿಮಾನ್ಯ ಭಾರತೀಯ' ಎಂಬ ಹುಡುಕಾಟದಲ್ಲಿ ಮೊಟ್ಟ ಮೊದಲು ಹೆಸರು ಇರುವುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರದು. ಹಾಗೇ ನೋಡಿದರೆ, ಗಾಂಧಿಗಿಂತ ಒಂದು ಕೈ ಮೇಲಾಗಿಯೇ ಸಾಧನೆ ಮಾಡಿದವರು ಅಂಬೇಡ್ಕರ್. ಸ್ವತಂತ್ರ ಭಾರತದ ಅತಿಮಾನ್ಯ ಭಾರತೀಯ' ಎಂದು ಹೆಸರು ನೀಡಿ ಹುಡುಕಾಟ ನಡೆಸಿದ್ದರೂ ಅಂಬೇಡ್ಕರ್ ಅವರೇ ಮೊದಲಿಗರಾಗಿ ಇರುತ್ತಿದ್ದರು. ಆದರೆ ತಿಳಿಯಲಾರದವರು ಮಾಡಿದ ಅಥವಾ ತಿಳಿದೂ ತಿಳಿದು ಮಾಡಿದ ಮಹಾನ್ ಶೋಧ ಇದು ಎಂದು ಭಾವಿಸಿಕೊಂಡಿರುವ ಏಜಾಜ್ ಆಶ್ರಫ್ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನೇ ಗುರಿಯಾಗಿಸಿಕೊಂಡು ಈ ಲೇಖನ ಬರೆದಿರುವಂತೆ ತೋರುತ್ತದೆ. ಇಲ್ಲಿ ಅವರೇ ಹೇಳುವ ಹಾಗೆ ಸಾಧಾರಣವಾಗಿ ರಾಜಕೀಯ ಪೂರ್ವಾಗ್ರಹಗಳು ಕಾಣಿಸುತ್ತವೆ !'

ಇಡೀ ಲೇಖನದಲ್ಲಿ ವಿ.ಪಿ. ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪ್ರತ್ಯೇಕಿಸುವ ಕೆಲಸವನ್ನು ಲೇಖನದಲ್ಲಿ ಮಾಡಲಾಗಿದೆ. 'ನೂರು ಗಣ್ಯ ವ್ಯಕ್ತಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೊದಲಿಗರಾದರು. ಗಣ್ಯ ವ್ಯಕ್ತಿಗಳನ್ನು ಜಾತಿ ಮಸೂರದಲ್ಲಿ ನೋಡದಿದ್ದರೂ ಸಹ ಅಂಬೇಡ್ಕರ್ ಜನಪ್ರಿಯ ಅನುಮೋದನೆಯನ್ನು ಶ್ಲಾಘಿಸಿ ಸಮರ್ಥಿಸಿಕೊಳ್ಳಬಹುದು' ಎಂದು ಆರಂಭದಲ್ಲಿ ಹೇಳುವ ಲೇಖಕರು, ಆನಂತರದಲ್ಲಿ ಸಮಕಾಲೀನ ರಾಷ್ಟ್ರೀಯ ಸಂದರ್ಭದಲ್ಲಿ ಯಾವುದೇ ಪ್ರಮಾಣದಲ್ಲಾಗಲೀ, ಅಂಬೇಡ್ಕರ್‌ರಿಗೆ ಭಾರತ ರತ್ನ' ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಡುವ ಮೂಲಕ ಅವರನ್ನು ದಲಿತರ ದೇವತೆಯನ್ನಾಗಿ ಮಾಡಿದ ವಿಪಿ ಸಿಂಗ್ ಅವರ ಹೆಸರನ್ನು ಸಿಎನ್‌ಎನ್ ಐಬಿಎನ್ ಸಿದ್ಧಪಡಿಸಿದ ನೂರು ಜನರ ಪಟ್ಟಿಯಲ್ಲಿ ಸೇರಿಸದೇ ಇರುವುದು ದೊಡ್ಡ ವಿಪರ್ಯಾಸ' ಎನ್ನುತ್ತಾರೆ. ಅಷ್ಟೇ ಅಲ್ಲ ಇಂದು ನಾವು ವಿಪಿ ಸಿಂಗ್ ಅವರನ್ನು ರಾಜಕೀಯವಾಗಿ ಒಪ್ಪಿಕೊಳ್ಳುವುದಕ್ಕಿಂತ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದು ಅನುಕೂಲಕರವಿರಬಹುದೇ ?' ಎಂಬುದಾಗಿ ಪ್ರಶ್ನೆ ಎಸೆದಿದ್ದಾರೆ !

ಏಜಾಜ್ ಆಶ್ರಫ್ ಅವರ ಒಟ್ಟು ಲೇಖನದಲ್ಲಿ ವಿಪಿ ಸಿಂಗ್ ಅವರನ್ನು ಮರೆತ ಬಗ್ಗೆ ಖೇದವಿದೆ. ಸಿಂಗ್ ಅವರ ಕಾರ್ಯ ವೈಖರಿಯನ್ನು ಸಾಧ್ಯಂತವಾಗಿ ಅವರು ಬಿಡಿಸಿ ಇಟ್ಟಿದ್ದಾರೆ. ಯಾವುದೇ ಸಂದರ್ಭದಲ್ಲಿ ವಿಪಿ ಸಿಂಗ್ ಅವರನ್ನು ನಾವು ವಿರೋಧಿಸಲು ಕಾರಣಗಳೇ ಇಲ್ಲ. ರಾಜಕೀಯದಲ್ಲಿ ಇಡೀ ದೇಶ ಮೆಚ್ಚುವ ಕೆಲಸ ಮಾಡಿದವರು ಸಿಂಗ್. ಅವರ ಬಗ್ಗೆ ಗೌರವವಿದೆ. ಆದರೆ ಏಜಾಜ್ ಅವರಂಥವರು ಪರೋಕ್ಷವಾಗಿ ಆ ಭೇದಗಳನ್ನು ಹುಟ್ಟು ಹಾಕುವಂತಿದೆ. ಅವರು ಇನ್ನುಳಿದ ಯಾರ ಹೆಸರನ್ನಾದರೂ ತೆಗೆದುಕೊಂಡು ಚರ್ಚೆ ಮಾಡಬಹುದಿತ್ತು. ಸಮಾಜವನ್ನು ಸೂಕ್ಷ್ಮವಾಗಿ ಒಡೆಯುವ ಹುನ್ನಾರ ಏಜಾಜ್ ಅವರ ಮನದಲ್ಲಿ ಮನೆ ಮಾಡಿರುವುದು ಮೇಲುನೋಟಕ್ಕೆ ಕಂಡುಬರುವ ಸತ್ಯ.

ವಿಪಿ ಸಿಂಗ್ ಅವರ ಆಡಳಿತಾವಧಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ' ದೊರೆತದ್ದು, ಕೆ.ಆರ್. ನಾರಾಯಣನ್ ಅವರು ರಾಷ್ಟ್ರಪತಿಯಾದುದ್ದನ್ನು ತಳಕು ಹಾಕಿ ನೋಡಿರುವ ಕ್ರಮವಂತೂ ಏಜಾಜ್ ಅವರ ಕೆಳಮಟ್ಟದ ವಿಚಾರ ಸರಣಿಯೇ ಆಗಿದೆ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ.

ಗುಪ್ತ ಗುಲಾಮಗಿರಿಯಲ್ಲಿ ಇನ್ನೂ ಇರಬೇಕೆಂಬ ಮಾತು ಅವರ ಇಡೀ ಲೇಖನ ಪ್ರತಿನಿಸುತ್ತದೆ. ಪರಿಪೂರ್ಣವಾಗಿ ಅಂಬೇಡ್ಕರ್ ಅವರನ್ನು ಅರಿತುಕೊಳ್ಳದೇ ಮನಸ್ಸಿಗೆ ಬಂದುದನ್ನು ಗೀಚುವ ಮೂಲಕ ಒಂದೀಡಿ ಸಮಾಜದ ದಿಕ್ಕೂ ತಪ್ಪಿಸುವ ಏಜಾಜ್ ಅವರ ಪರಿಕ್ರಮ ನಿಜಕ್ಕೂ ವಿಪರ್ಯಾಸ !

Wednesday, September 05, 2012

ಸಿನೆಮಾ ಮುಗಿದಮೇಲೆ ಚೇತನಾ ಬರೆದದ್ದು

                                      ಚೇತನಾ ತೀರ್ಥಹಳ್ಳಿ 

ಅಗೋ ಅಲ್ಲಿ.. !
ಕೆಂಪುಕೋಟೆಯ ಮೇಲೆ ಹೀಗೊಬ್ಬ ಪಾಪ!
ಹೆಜ್ಜೆ ಮುಂದೆ ಹೆಜ್ಜೆ ಇಟ್ಟು ನಡೆಯುತ್ತಿದ್ದ. ‘ಘೋಷ’ದ ತಾಳಕ್ಕೆ ತಪ್ಪಬಾರದ ಕಾಳಜಿ ಜೊತೆಗೆ! ಅವನ ಕೈಲೊಂದು ಕಮಲದ ಹೂವು.
‘ಗರ್ದೀ’, ‘ದರ್ದೀ’... ‘ಗರ್ದೀ’, ‘ದರ್ದೀ’... ಎಂದೆನ್ನುತ್ತ ಒಂದೊಂದೆ ಪಕಳೆಗಳನ್ನು ಕೆಳಗೆಸೆಯುತ್ತಿದ್ದ. ಕೋಟೆ ಮೇಲಿನ ಕಾಂಪೌಂಡು ಮುಗಿಯುವ ಹೊತ್ತಿಗೆ ಉದುರಿಸುವ ಪಕಳೆ ‘ಗರ್ದೀ’ಯಾಗಿದ್ದರೆ ತನಗೆ ಖುರ್ಚಿ ಗ್ಯಾರೆಂಟಿ!
‘ಇಲ್ಲವಾದರೆ?’- ಯೋಚಿಸುವ ಉಸಾಬರಿಗೇ ಹೋಗಿರಲಿಲ್ಲ...

ಹಾಗೆ ಪಕಳೆ ಬೀಳಿಸುತ್ತ, ನಡೆಯುತ್ತ ನಡೆಯುತ್ತ ಕಾಂಪೌಂಡು ಇನ್ನೂ ಅಷ್ಟುದ್ದ ಇದೆ ಅನ್ನುವಾಗ...
ಕೈಯಲ್ಲಿನ ಕಮಲ ದಳವೇ ಖಾಲಿ!!
ಆತ ತ್ರಿಶಂಕುವಿನ ಹಾಗೆ ನಿಂತುಬಿಟ್ಟ...

******

ಇನ್ನೊಂಚೂರು ಈಚೆ... ಸ್ವಲ್ಪ ಆಚೆ...
ಸರ್ಕಸ್ ಕಂಪೆನಿಯೊಂದು ಗುಡಾರ ಹೂಡಿತ್ತು. ಕೆಂಪು ಟೀಶರ್ಟಿನ ರಿಂಗ್ ಮಾಸ್ಟರ್, ಆನೆಗೆ ‘ಸಿಟ್’ ‘ಸ್ಟ್ಯಾಂಡ್’ ಕಸರತ್ತು ಮಾಡಿಸಲು ಹೆಣಗಾಡುತ್ತಿದ್ದ. ಅವನ ಪರದಾಟಕ್ಕೆ ನಗಲು ತೋಚದ ಜೋಕರ್, ಗಡದ್ದು ಉಂಡು ಮಲಗಿಬಿಟ್ಟಿದ್ದ.

ಈ ಆನೆಯೋ! ಒಂದಕ್ಕೆ ಹನ್ನೊಂದು ಮಾಡುತ್ತ, ನಖರಾ ಆಡುತ್ತ, ಬೇಕೆಂದೇ ಕಾಡುತ್ತ ಹೈರಾಣು ಮಾಡಿತ್ತು. ತಾನು ರೇಸಿಗೆ ಸೇರಿದ್ದೇ ಸಾಧನೆಯೆನ್ನುತ್ತ ಬೀಗತೊಡಗಿತ್ತು. ರಿಂಗ್ ಮಾಸ್ಟರನ್ನ ಕಾಡಲಂತಲೇ ಸಿಟ್ ಅಂದಾಗ ಸ್ಟ್ಯಾಂಡಾಗಿ, ಸ್ಟ್ಯಾಂಡ್ ಅಂದಾಗ ‘ಸಿಟ್ಟು’ಕೊಂಡು ದೊಂಬರಾಟ ನಡೆಸಿತ್ತು.

ತಾಲೀಮು ನಡೆದಿದ್ದಾಗಲೇ ಧಬಾರನೆ ಕಿವಿ ಹಾರುವ ಸದ್ದು!
ಆನೆ ಕನಸಿನ ಖುರ್ಚಿ ಮುರಿದುಬಿದ್ದಿತ್ತು...

******

ಈ ಎಲ್ಲ ಸಂತೆಯಿಂದ ಹೊರಗೆ, ಅಲ್ಲಿ ಅಮ್ಮಾಯಿಯೊಬ್ಬಳು ಹಣೆಗೆ ಲಾಲ್ ಗಂಧ ತೀಡುತ್ತ ಕುಂತಿದ್ದಳು. ಮ್ಯೂಸಿಕಲ್ ಛೇರಿನಲ್ಲಿ ಮೈಹೊತ್ತು ಓಡಲಾಗದ ಸಂಕಟ ಅವಳಿಗೆ. ಆದರೇನು? ತನ್ನ ದಾಳದ ಪಾಳಿಗಾಗಿ ಕಾದುಕೊಂಡಿದ್ದಳು.

ಆ ದಿನಕ್ಕೆ ತಾನು ಯಾವ ಸೀರೆ, ಯಾವ ಚಪ್ಪಲಿ, ಯಾವ ಪರ್ಫ್ಯೂಮು, ಯಾವ ವ್ಯಾನಿಟಿ...
ಆಯ್ದುಕೊಳ್ಳುವ ಗಲಿಬಿಲಿಯಲ್ಲಿ ಪಗಡೆಹಾಸು ಎತ್ತಿಟ್ಟಿದ್ದು ಅವಳಿಗೆ ಗೊತ್ತೇ ಆಗಲಿಲ್ಲ!

********

ಇನ್ನೀಗ ಅಂವ ಕೆಂಪು ಕೋಟೆಯಿಂದಿಳಿದು ಬಂದ. “ಕಡಿಮೆ ದಳದ ಕಮಲ ಸರಬರಾಜಾಗಿದ್ದು ಗುಜರಾತಿನಿಂದ"- ಇಂಟೆಲಿಜೆನ್ಸ್ ರಿಪೋರ್ಟು!
ನಗು ಹೊತ್ತ ಮುಖವಾಡಗಳು ಹಾದಿಗುಂಟ ಬಿದ್ದಿದ್ದವು. ಇಕ್ಕೆಲದ ಇಟ್ಟಿಗೆ ಸಾಲು ಸಾಲು, ಉಳಿದ ಕಮಲ ದಂಟಿಗೆ ಸ್ಮಾರಕ ಕಟ್ಟಲು ಕಾಯ್ತಿದ್ದವು...

ಇತ್ತ ಸರ್ಕಸ್ ಕಂಪೆನಿಯ ಕಂಬ ಉರುಳಿಬಿದ್ದಿತ್ತು. ಆಟ ಬರಖಾಸ್ತುಗೊಂಡು ಎಲ್ಲರೂ ತಂತಮ್ಮ ಗಂಟು ಕಟ್ಟತೊಡಗಿದರು.
ಜೋಕರ್ ಮಾತ್ರ, “ಇನ್ನೂ ಐದು ವರ್ಷ ಇಲ್ಲೇ ಮಲಗಬೇಕಲ್ಲ?" ಅನ್ನುತ್ತಾ ಚಾಪೆ ಕೊಡವಿಕೊಂಡ...

******

ಅಲ್ಲಿ, ನಂ.೧೦, ಜನಪಥದ ರಾಣೀವಾಸದಲ್ಲಿ ಸಂಭ್ರಮವೋ ಸಂಭ್ರಮ. ರಾಣಿಯ ಕಿರೀಟ ಭದ್ರ ನಿಂತಿತ್ತು. ಮಹಾಮಂತ್ರಿಯ... ಅಲ್ಲಲ್ಲ... ಪ್ರಧಾನ ಮಂತ್ರಿಯ ಸಾಧನೆ, ಕೋಟೆ ಉಳಿಸಿಕೊಟ್ಟಿತ್ತು.

ಅದರಲ್ಲಿನ್ನು ಯುವ ರಾಜ ಸುಭದ್ರ. ಮಹರಾಜನಾಗುವವರೆಗೆ ಎಲ್ಲವೂ ನಿರುಮ್ಮಳ!

******

ಈ ಚೂರು ಚೂರು ಚಿತ್ರಗಳನ್ನ ತೇಪೆ ಹಾಕಿ ಅವನೊಬ್ಬ ಸಿನೆಮಾ ತೆಗೆದ. ಎಲ್ಲ ಮುಗಿದು, ಮೇಕಪ್ಪು ತೊಟ್ಟಿದ್ದವರು ಮುಖ ತೊಳೆದುಕೊಂಡರು. ಬಣ್ಣಗಳು ಕರಗಿ ಕೊಚ್ಚೆಯಾಗಿ ಹರಿಯಿತು.
ಕಾಯ್ದಿಟ್ಟ ಟಿಕೀಟುಗಳಲ್ಲಿ ಅರ್ಧ ಮಾತ್ರ ತುಂಬಿ, ಎಲ್ಲ ಖಾಲಿ ಖಾಲಿ...

ನೋಡ ಬಂದವರು ಬಟ್ಟೆ ಹರಕೊಂಡು ಓಡಿಹೋದರು. ಹಾಗೇ ಉಳಿದವರು ಹುಚ್ಚು ಹತ್ತಿ ತಲೆ ಚಚ್ಚಿಕೊಂಡರು.

ಥಿಯೇಟರಿನತ್ತ ಮುಖ ಮಾಡದವರು ಮಾತ್ರ ಯಾವತ್ತಿನ ಹಾಗೆ ಹರಟುತ್ತ, ಉಗಿದ ಚೂಯಿಂಗಮ್ಮು ಜಗಿಯುತ್ತ ಕುಳಿತುಬಿಟ್ಟರು !

ಕೃಪೆ : ಕೆಂಡಸಂಪಿಗೆ

Tuesday, September 04, 2012

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ !

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ


 ”ಜಾತಿಯ ಗೋಡೆಯನ್ನು ಕೆಡವಿ”
‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.
ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.
ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:
ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.
ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.
ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.
ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.
ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :
ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.
ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.
ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.
ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.
ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.
ಕೇವಲ ಆಂತರಿಕ ಸಮಸ್ಯೆಗಳೆ? :
ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.
ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.
ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.
ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.
ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ : ವರ್ತಮಾನ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.