Showing posts with label ಮರಾಠಿ. Show all posts
Showing posts with label ಮರಾಠಿ. Show all posts

Tuesday, March 04, 2014

ವಡ್ಡರ ವೇದನೆಯ ಎರಡು ಪ್ರಸಂಗಗಳು

ವಡ್ಡರ ವೇದನೆ (ಕಾದಂಬರಿ)
ಮೂಲ ಮರಾಠಿ : ಲಕ್ಷ್ಮಣ ಗಾಯಕವಾಡ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
---------------------------------------------
ದಿನಗಳು ಉರುಳುತ್ತಲೇ ಇದ್ದವು. ಈಗಾಗಲೆ ಅವರಿಬ್ಬರೂ ಪರಸ್ಪರ ನೋಡದಿದ್ದರೆ ಒಬ್ಬರಿಗೂ ನೆಮ್ಮದಿ ಎನಿಸುತ್ತಿರಲಿಲ್ಲ. ಒಂದು ದಿನ ಕ್ಲಾಸುಗಳೆಲ್ಲ ಮುಗಿದಿದ್ದವು. ತುಕಾರಾಮನನ್ನು ಭೇಟಿಯಾದ ಆಕೆ ತನಗೆ ಲೆಕ್ಕವೊಂದು ಬರುತ್ತಿಲ್ಲ ; ತಿಳಿಸಿಕೊಡಬೇಕು ಎಂದಳು. ಕಾಲೇಜಿನ ಬೆಲ್ ಆಗಿ ಅಳಿದುಳಿದವರು ಹೋದ ಮೇಲೆ ತುಕಾರಾಮ ಕ್ಲಾಸ್ ರೂಮಿನ ಕೊನೆಯ ಬೆಂಚಿನ ಮೇಲೆ ಅಭ್ಯಾಸ ಮಾಡುತ್ತಿರುವನಂತೆ ನಟಿಸುತ್ತ ಕುಳಿತ. ಎಲ್ಲ ಗೆಳತಿಯರ ಕಣ್ಣು ತಪ್ಪಿಸಿ ಸುನೀತಾ ಅಲ್ಲಿಗೆ ಬಂದು ತುಕಾರಾಮ ಹಿಡಿದುಕೊಂಡಿದ್ದ ಪುಸ್ತಕವನ್ನು ಕಿತ್ತಿಸೆದಳು. “ಯಾಕೋ ತುಕಾರಾಮ, ಯಾರ ಹಾದಿ ಕಾಯಕತ್ತಿ ?” ಎಂದು ನಕ್ಕಳು. ಆತ ಕೂಡ ನಗುತ್ತಲೆ, “ಅಲ್ಲss ನಿನ್ನ ಬಿಟ್ಟ ನಾ ಬ್ಯಾರೆ ಯಾರ್ ಹಾದಿ ಕಾಯ್ಲಿ ಹೇಳಲಾ ? ನಿನ್ನ ಆದೇಸ ಪಾಲ್ಸಾಕ ನಿನ್ನss ಕಾಯ್ಕೋತ ಕುಂತ್ಯಾನ ನೋಡ” ಎಂದ. ಕ್ಲಾಸ್ ರೂಮಿನ ಬಾಗಿಲು ಮುಂದೆ ಮಾಡಿ, ಕಿಟಕಿಗಳನ್ನೆಲ್ಲ ಬಂದ್ ಮಾಡಿ ಇಬ್ಬರೂ ಹಿಂದಿನ ಬೆಂಚಿನಲ್ಲಿ ಹೋಗಿ ಕುಳಿತರು. ಯಾರಾದರೂ ಬಂದರೆ ಅಭ್ಯಾಸ ಮಾಡುತ್ತಿರುವಂತೆ ಇರಬೇಕೆಂದು ಗಣಿತದ ಪುಸ್ತಕ, ವಹಿ, ಪೆನ್ನು ತೆಗೆದು ಬೆಂಚಿನ ಮೇಲೆ ಇಟ್ಟರು !
ಇಡೀ ಕಾಲೇಜು ಸ್ಮಶಾನದಂತೆ ಮೌನವಾಗಿತ್ತು. ಇಬ್ಬರೂ ಕೈಕೈ ಹಿಚುಕುತ್ತ, ಕಾಲನ್ನು ಕಾಲಿನಿಂದ ಕೆರೆಯುತ್ತ ಕುಳಿತುಕೊಂಡಿದ್ದರು ! “ತುಕಾರಾಮಾ, ನೀ ಭಾssಳ ಮಸ್ತ ಅದಿ. ಕಲ್ಲಿನಂಥಾ ನಿನ್ನ ಮೈಯ್ಯಿ, ಗಟ್ಟಿಮುಟ್ಟಾಗಿರೋ ನಿನ್ನ ತೋಳು ನಂಗ ಭಾssಳ ಹಿಡಿಸ್ಯಾವು” ಎಂದ ಆಕೆ ಮೆಲ್ಲಗೆ ತನ್ನ ತುಟಿಯನ್ನು ಮುಂದೆ ತಂದು ಆತನ ಗಲ್ಲಕ್ಕೆ ಒತ್ತಿದಳು. ಆತನ ಮೈಯೆಲ್ಲ ಕರೆಂಟ್ ಹೊಡೆದಂತಹ ಅನುಭವವಾಯಿತು. ಆತ ತಡೆದುಕೊಳ್ಳದೇ ಆಕೆಯನ್ನು ಬಿಗಿಯಾಗಿ ತಬ್ಬಿಕೊಂಡು, “ಸುನೀತಾ, ನಿನ್ನ ಮೈ, ಬಿಡಿಸಿಟ್ಟ ಹತ್ತಿಗತೇ ಎಟ್ಟ ಮೆತ್ತಗ ಏತ್ಯೇ ? ನಿನ್ನ ಹೊಗಳಾಕ ನಂಗ ಬರೂದುಲ್ಲ. ಜಗತ್ತಿನ್ಯಾಗಿನ ಎಲ್ಲಾ ಚೆಲುವ ನಿನ್ನೊಳಗss ತುಂಬಕೊಂಡೇತಿ’ ಎಂದ
ಪ್ರೇಮದ ಕಾವು ಏರಿ ಕಾಮವಾಗಿ ಕೈ ಬೀಸಿ ಕರೆಯತೊಡಗಿತ್ತು ! ಆತ ಮೆಲ್ಲಗೆ ಆಕೆಯ ಮೊಲೆಗಳ ಮೇಲೆ ಕೈ ಇಟ್ಟು ಸವರಿದ ! ಗುಂಡುಗುಂಡಾಗಿದ್ದ ಅವು ಭೂಗೋಳದಲ್ಲಿ ಹೇಳುವ ಗೋಲಾಕಾರದ ಸಣ್ಣ ಸಣ್ಣ ಭೂಮಿಯಂತಿವೆ ಎಂದೆನಿಸಿತು. ಮೊಲೆಗಳನ್ನು ಸವರುತ್ತಿದ್ದವನು ಮೆಲ್ಲಗೆ ಒಳ ಕೈ ಹಾಕಿ ಹಿಚುಕತೊಡಗಿದ ! ಆಕೆಯ ಮೊಲೆಗಳ ಸ್ಪರ್ಷದ ಅಮಲಿನಲ್ಲಿ ಆತ ತನ್ನನ್ನೇ ಮರೆತುಬಿಟ್ಟ ! ಸುನೀತಾಳನ್ನು ಮೇಲೆಳೆದುಕೊಂಡು ಬಿಗಿಯಾಗಿ ತಬ್ಬಿಕೊಂಡ. ಆತನ ಕೈಗಳು, ಕೈ ಬೆರಳುಗಳು ಆಕೆಯ ಪ್ರತಿಯೊಂದು ಅಂಗವನ್ನು ತಡಕಾಡುತ್ತ, ಮುಟ್ಟುತ್ತ, ಹಿಚುಕುತ್ತ ಜಗ್ಗುತ್ತ ಆನಂದವನ್ನು ಅನುಭವಿಸುತ್ತಿದ್ದವು !
ತುಕಾರಾಮ ಮತ್ತು ಸುನೀತಾ ಪ್ರೇಮ-ಕಾಮದ ಪಾಕದಲ್ಲಿ ಎಷ್ಟೊಂದು ಮೈ ಮರೆತ್ತಿದ್ದರೆಂದರೆ ಕಾಲೇಜಿನ ಸಿಪಾಯಿ ಬಂದು ಕ್ಲಾಸ್ ರೂಮಿನ ಬಾಗಿಲಿಗೆ ಕೀಲಿ ಜಡಿದು ಹೋದದ್ದು ಕೂಡ ಅವರಿಗೆ ಗೊತ್ತಾಗಲಿಲ್ಲ. ಅವರಿಬ್ಬರೂ ಸಮಯ, ಸಮಾಜ, ಸಂಬಂಧಗಳೆಲ್ಲವನ್ನೂ ಮರೆತು, ಪ್ರಕೃತಿಯ ಇಚ್ಚೆಗೆ ಬದ್ಧರಾಗಿ ಪ್ರೇಮ-ಕಾಮದ ಆನಂದ ಪಡೆಯುವ ಉತ್ತುಂಗ ಶಿಖರವನ್ನೇರ ತೊಡಗಿದ್ದರು !

*****
ಶಂಕರ ದಯನೀಯವಾಗಿ, ಪರಿಪರಿಯಿಂದ ವಿನಂತಿ ಮಾಡಿಕೊಂಡ. “ಮಾಸ್ತರ, ನಮ್ಮ ಹುಡ್ಗ್ನ ಕಡಿಂದ ತಪ್ಪಾಗಿದ್ರ ಹೊಟ್ಟ್ಯಾಗ ಹಾಕ್ಕೋರ್ರಿ. ಹಕನಾಕss ಅಂವ್ನ ಬದ್ನಾಮಿ ಮಾಡಬ್ಯಾಡ್ರಿ. ಅಂವ್ಯಾನಭೀ ತಪ್ಪss ಮಾಡಿಲ್ಲssತ ನಾ ಹೇಳೂದುಲ್ರಿ ... ಅಲ್ರಿ ಮಾಸ್ತರ, ಅಂವ್ನ ಜೋಡಿ ಇದ್ದ ಪೋರಿನ ಯಾಕ ಕರಿಸಿಲ್ರಿ ನೀವಾ ? ಇದ್ಯಾನ ಬರೋಬ್ಬರಿ ಅಲ್ಲ ತೆಗಿರಿ... ನಾವ ಹೊಟ್ಟಿ-ಬಟ್ಟಿ ಅನೂಲಿ ಮಾಡಕೊಂದ ನನ್ನ ಮಗ್ಗ ಸಾಲಿ ಕಲ್ಸತೇವ್ರಿ…. ಯ್ಯಾನರೇ ಇರ್ಲಿ ಬಿಡ್ರಿ ... ... ಇದೊಂದು ಸತೀ ನನ್ನ ಮಗನ ಮಾಫ ಮಾಡ್ರಿ. ನನ್ನ ಮಗ್ಗ ಕಾಲೇಜ್ ಕಲ್ಯಾಕ ಅನವ ಮಾಡ್ಯಕೊಡ್ರಿ... ...“ ಎಂದು ಬಾಯಿಗೆ ಬಂದುದ್ದನೆಲ್ಲ ಶಂಕರ ಮಾತನಾಡುತ್ತಲೇ ಇದ್ದ.
ನಡುವೆಯೇ ಬಾಯಿ ಹಾಕಿದ ಪ್ರಿನ್ಸಿಪಾಲ್, “ನೋಡ್ರಿ, ಮೀಟಿಂಗನ್ಯಾಗ ಎಲ್ಲಾ ಡಿಸ್ಕಸ್ ಮಾಡಿ ತೀರ್ಮಾನ ಮಾಡೇ ನಿಮ್ಮ ಮಗನ ಕಡೀ ತಪ್ಪದ ಮಾಡಬಾರ್ದಂಥಾ ದೊಡ್ಡ ಗುನ್ಹಾ ಅದು. ಅಂವ್ಗ ದಂಡಾ ಹಾಕಿ, ಶಿಕ್ಷಾ ಕೊಡಲಿಲ್ಲಂದ್ರ ನಮ್ಮ ಕಾಲೇಜನ್ಯಾಗ ಶಿಸ್ತ ಅನ್ನೂದss ಉಳಿಯುದಿಲ್ಲ. ದಂಡಾ ತುಂಬ್ರ್ರಿ ; ಇಲ್ಲಂದ್ರ ಮಗನ ಕರ್ಕೊಂಡ ಮನಿಗಿ ಹೋಗ್ರಿ” ಎಂದು ದಬಾಯಿಸತೊಡಗಿದ. ಹೊರಗೆ ಕಿಟಕಿ ಸುತ್ತೆಲೆಲ್ಲ ವಿದ್ಯಾರ್ಥಿಗಳು ಮುತ್ತಿಕೊಂಡು ಒಳಗೆ ನಡೆದಿರುವ ಪ್ರಸಂಗವನ್ನು ಕುತೂಹಲದಿಂದ ನೋಡುತ್ತಿದ್ದರು. ತುಕಾರಾಮ ಕೂಡ ಬಾಗಿಲ ಹೊರಗೆ ಚಿಂತೆಯಲ್ಲಿ ನಿಂತಿದ್ದ !
ಪ್ರಿನ್ಸಪಾಲ್‍ನ ಮಾತು ಕೇಳಿ ಶಂಕರನ ಸಿಟ್ಟು ನೆತ್ತಿಗೇರುತ್ತಿತ್ತು. ಅದನ್ನು ತಡೆದುಕೊಳ್ಳುವ ಪ್ರಯತ್ನದಲ್ಲಿಯೇ ಆತ, “ಮಾಸ್ತರ್ರ, ಹಲ್ಕಟ್ ಕೆಲ್ಸಾ ಮಾಡಿದ ಅಪವಾದ ಹೊರ್ಸಿ ನನ್ನ ಮಗ್ಗ ಆssಟ ಯಾಕ ದಂಡಾ ಹಾಕ್ತೇರಿ ? ... ಮಾಸ್ತರ್ರss ಶಾರದಾಗಿನ ಹಿಕ್ಮತ್ ನಂಗೂ ಗೊತ್ತೇತಿ... ಈಗ್ಯಾನ ... ಐದನೂರಾ ಐವತ್ತೊಂದ ರುಪಾಯಿ ತುಂಬಾಕss ಬೇಕssತ ನಿಣ್ರ್ಯಾ ಮಾಡೇರಿ ?...” ಎಂದಾಗ ಪ್ರಿನ್ಸಿಪಾಲ್, “ಹೌದರಿ, ಅದss ಕೋನಿ ನಿರ್ಣಯಾ. ದಂಡಾ ಕಟ್ಟೂಲ್ಲದ ನಿಮ್ಮ ಹುಡುಗ ಕ್ಲಾಸಿಗೀ ಕುಂತಕೊಳ್ಳು ಹಾಂಗಿಲ್ಲ” ಎಂದ.
“ನೋಡ್ರಿ ಮಾಸ್ತರ್ರ, ನಾ ನಿಮ್ಮಗತೆ ಕಲ್ತಾಂವೂ ಅಲ್ಲ ; ತಿಳಿದಾಂವೂ ಅಲ್ಲ. ನಾ ಒಬ್ಬ ಬಡುವ ವಡ್ರ ಅಡಾನಿ ಮನಿಸ್ಯಾ. ಆದರ ನಂಗ ಯ್ಯಾನಭೀ ಹೇಳಿದರ ನಡಿತೇತಿ ಅssತ ತಿಳ್ಕೂಬ್ಯಾಡ್ರಿ. ನಂಗೂ ಎಲ್ಲಾ ಗೊತ್ತೇತಿ... ಹೋಗ್ಲಿ ಬಿಡ್ರಿ, ನಾ ದಂಡಾ ತುಂಬಾಕ ಕಬೂಲಿ ಅದ್ಯಾನ... ಆದರ ನನ್ನ ಮಗ್ಗ ನೀವೆಲ್ಲಾರೂ ಸೇರಿ ಅರ್ಧೂಟ್ ಮಾಡೇರಿ ! ಅದಕ್ಕ ಯ್ಯಾನ ಮಾಡ್ತೇರಿ ?” ಎಂದು ಶಂಕರ ದಿಟ್ಟತನದಿಂದಲೇ ಹೇಳಿದ. ಪ್ರಿನ್ಸಿಪಾಲ್‍ನಿಗೆ ಏನೊಂದೂ ತಿಳಿಯದೇ “ಅರ್ಧೂಟ ಅಂದ್ರ ಏನ್ರಿ ? ಈ ನಿಮ್ಮ ಭಾಷಾ ನಮಗ ಆರ್ಥ ಆಗೂದಿಲ್ಲ. ಒಂದೀಸ ತಿಳಿಯಾಂಗ ಹೇಳ್ರಿ” ಎಂದ.
“ಮಾಸ್ತರ್ರss ನಾವ ಎತ್ತಕ ನೀರ ಕುಡಸಾಕ ಹೋಳಿಗೆ ಕರ್ಕೋಂಡ್ ಹೋಗತ್ಯಾವರಿ ! ಹೊಳ್ಯಾಗ ಇಳ್ದ ನೀರಡಿಸಿದ ಎತ್ತಾ ನೀರಡಿಕಿ ಇಂಗೂತಕಾ ಕುಡಿತೇತಿ. ಆಗ ಯಾರರೆ ನೀರಾಗ ಕಲ್ಲ ಒಗದ್ರ, ಗದ್ಲಾ ಮಾಡ್ಯರ ಎತ್ತಾ ಅಂಜಿಕಿಸಿ ನೀರ ಕುಡ್ಕೋದ ಬಿಟ್ಟ ಓಡಿ ಹೋತೇತ್ರಿ. ಅದರ ನೀರಡಿಕೀ ಇನ್ನಾ ಇಂಗಿರುದುಲ್ಲ. ನಾವ ಮತ್ತ ಅದನ ಜುಲುಮಿಲೆ ಕರ್ಕೊಂಡ್ ಬಂದ ನೀರ ಕುಡ್ಸಬೇಕಾತೇತಿ. ಅದ ನೀರ ಕುಡ್ಯಾಗ, ಯಾರರೇ ಮತ್ತss ನೀರಾಗ ಕಲ್ಲ ಒಗಿದಾಂಗ, ಗದ್ಲಾ ಮಾಡದಾಂಗ ಕಾಯ್ಬೇಕಾತೇತಿ. ಆವಾಗ ಎತ್ತಾ ಹೊಟ್ತುಂಬ ನೀರ ಕುಡ್ದ, ತನ್ನಿಂತಾನss ಹೊಳಿ ಬಿಟ್ಟ ಮ್ಯಾಗ ಬರ್ತೇತಿ. ಎತ್ತಗ ಹೆಂಗ ಬುಚಕುಳಾ (ಅರ್ಧೂಟ್) ಆಗತೇತ್ಯಲಾ ಹಂಗ ನಮ್ಮ ಹುಡಗ್ಗss ಆಗೇತಿ. ನಮ್ಮ ಹುಡ್ಗ ಮತ್ತ ಆ ಪೋರಿ ಒಳಗ ಇರಬೇಕಾರ ನೀವ ಬಾಕ್ಲಾ ತಗ್ದ ಅಡ್ಡಗಾಲ ಹಾಕಿ, ನನ್ನ ಮಗ್ಗ ಬುಚಕುಳಾ ಮಾಡೇರಿ. ಅದಕ್ಕ ಐದ್ನೂರಾ ಐವತ್ತೊಂದು ರುಪಾಯಿ ದಂಡಾ ಕಟ್ಟ ಅಂತಿರಿ ! ನನ್ನ ಮಗಾ ಹೇಳ್ತಾನು, ತಾ ಪೋರಿ ಸಂಗಾಟ ಯ್ಯಾನಭೀ ಮಾಡಲ್ಲಿssತ ! ನೀವಂತಿರೀ ಅಂವಾ ಮಾಡ್ಯಾನ ದಂಡಾ ಕಟ್ರಿ ಅssತ ! ಮಾಸ್ತರ್ರ, ನಾ ತಿಳಿದಾಂವ ಅಲ್ಲ, ಆದ್ರಭಿ ನನ್ನ ಅನುನಕೀ ಹಿಂಗೇತ್ಯಲಾ, ನನ್ನ ಮಗಾ ಯ್ಯಾನಭೀ ಮಾಡೂಲ್ಲದss ಆ ಪೋರಿ ಸಂಗಾಟ ಖೋಲ್ಯಾಗ ಇರಾನಾ ದಂಡಾ ಹಾಕ್ಕ್ಯರಲಾ ? ಒಂದ್ ಸಲಾ ಖೋಲ್ಯಾಗ ಇರಾಕss ನೀವ ಅssಟ್ ದಂಡಾ ಹಾಕತೇರ್ಯಲಾ ? ಹಂಗಾರ ನಾ ಹೇಳ್ಕೇಳಿ ವಡ್ರ ಮನಸ್ಯಾ, ಮಾಯಲೇ ಬಂದ್ರ ತಲಿಮ್ಯಾಗಿನ ಪಟಗಾ ಸುದ್ದಾ ಕುಡತ್ಯಾನ ! ನಾವ್ ಒಮ್ಮೀ ಜಿದ್ದಿಗಿ ಬಿದ್ದ್ಯೂ ಅಂದ್ರ ಏಕ್ ಮಾರ್ ದೋ ತುಕಾಡಾ ! ನೋಡ್ರಿ ಮಾಸ್ತರ, ನಾ ಇನ್ನಾ ಐದ್ನೂರಾ ಐವತ್ತೊಂದ ರುಪಾಯಿ ಹೆಚ್ಚss ಕುಡತ್ಯಾನ ತುಗೋರಿ ! ಆದರ ಇನ್ನೊಮ್ಮಿ ಆ ಪೋರಿ ಮತ್ತ ನನ್ನ ಮಗನ್ನ ಅದss ಖೋಲ್ಯಾಗ ಬಿಟ್ಟ ಕೀಲಿ ಹಾಕ್ರಿ ! ಮಗಾ ಯ್ಯಾನಾ ಮಾಡೋದೇತಿ ಅದ್ನ ಮಾಡಿ ಸಮಾಧಾನ್ರೇ ಆಗ್ಲಿ ! ಆದದ್ದss ಇನ್ನೊಮ್ಮಿ ಆಗ್ಲಿ. ನಾ ಡಬಲ್ ರೊಕ್ಕಾ ಕುಡಾಕ ತಯಾರಿದ್ಯಾನ. ಆದ್ರ ಸುಮ್ಮ ಸುಮ್ಮ ಯ್ಯಾನೂ ಮಾಡೂಲ್ಲದss ನಮ್ಮ ಮಗನ ಮಯ್ ಮ್ಯಾಲ ಹೇಲ ಚಲ್ಲೂದಕ ನಾ ಬಿಡು ಪೈಕಿಯಲ್ಲ” ಎಂದು ಒಂದೇ ಸಮನೇ ಮಾತನಾಡಿದ.

ಈ ಮಾತು ಕೇಳಿ ಸಭೆಯಲ್ಲಿ ಇದ್ದವರ ಬುಡ ಬೆದರಿದವು !

Wednesday, December 04, 2013

ಕೃತಿಚೌರ್ಯ : ನನ್ನ ಅನುಭವ


ಡಾ. ಸಿದ್ರಾಮ ಕಾರಣಿಕ
(ಯುಗಾರಂಭ ಅನುವಾದದ ಬಗೆಗೆ ವಿಚಿತ್ರವಾದ ಕೆಲವು ಸತ್ಯಗಳು)


... ವಿಷಯ ತುಂಬ ಸ್ವಾರಸ್ಯಕರವಾದುದು. ಯಾವುದನ್ನು ನಾನು ನಿರೀಕ್ಷಿಸಿರಲಿಲ್ಲವೋ ಅದೇ ಆಗಿತ್ತು ! ಮರಾಠಿಯಲ್ಲಿ ಡಾ. ವಿನೋದ ಗಾಯಕವಾಡ ಅವರು ಮಹಾತ್ಮಾ ಫುಲೆಯವರ ಬಗ್ಗೆ ಕಾದಂಬರಿಯನ್ನು ಬರೆಯುತ್ತಿರುವುದಾಗಿಯೂ ಅದನ್ನು ಕನ್ನಡದಲ್ಲಿ ನಾನು ಮಾಡಬೇಕೆಂದೂ ಒತ್ತಾಯಿಸಿದರು. ಅದೂ ಹಸ್ತಪ್ರತಿಯಲ್ಲೇ ಇರುವ ಕೃತಿ. ನಾನೂ ಒಪ್ಪಿಕೊಂಡೆ. ಹದಿನೈದು ದಿನ ನಿರಂತರ ಕೆಲಸ ಮಾಡಿದೆ. 27ನೇ ಮಾರ್ಚ್ 2008 ರಂದು ಅನುವಾದವನ್ನೂ ಮಾಡಿ, ಡಿಟಿಪಿಯನ್ನೂ ಮಾಡಿ ಪ್ರಕಟಣೆಗೆ ಸಿದ್ಧ ಮಾಡಿದೆ. ಎರಡು ಸಿ.ಡಿ.ಗಳಲ್ಲಿ ರೈಟ್ ಮಾಡಿ ಡಾ. ಗಾಯಕವಾಡ ಅವರಿಗೂ ನೀಡಿದೆ. ಅವರು ಅವುಗಳನ್ನು ಬೆಂಗಳೂರಿಗೆ ಪ್ರಕಟಣೆಗೆಂದು ಕಳುಹಿಸಿ ಕೊಟ್ಟೆ ಎಂದು ಹೇಳಿದರು. ಬಹು ದಿನಗಳಾದರೂ ಪುಸ್ತಕ ಪ್ರಕಟವಾಗಲಿಲ್ಲ. ಆಗ ಮತ್ತೇ ನಾನು ಮೇಲಿಂದ ಮೇಲೆ ಡಾ. ಗಾಯಕವಾಡ ಅವರನ್ನು ಕೇಳುತ್ತಲೇ ಇದ್ದೆ. ಕೊನೆಗೂ ಅವರು ಹೇಳಿದ್ದು ಏನೆಂದರೆ ಪ್ರಕಟಣೆಯ ಜವಾಬ್ದಾರಿ ಹೊತ್ತ ವ್ಯಕ್ತಿ ನುಣುಚಿಕೊಂಡರಂತೆ !
ಆಮೇಲೆ ನಾನೂ ಸುಮ್ಮನಾದೆ. ಆದರೆ ಈ ವರ್ಷ ಅಂದರೆ ನಾನು ಅನುವಾದ ಮಾಡಿದ ಎರಡು ವರ್ಷಗಳ ನಂತರ ನನಗೆ ಒಂದು ಆಘಾತದ ಸುದ್ದಿ ತಿಳಿಯಿತು. ಮಹಾತ್ಮಾ ಫುಲೆಯವರ ಬಗ್ಗೆ ಬೆಂಗಳೂರಿನ ಮಹನೀಯರೊಬ್ಬರು ಕೃತಿಯನ್ನು ರಚಿಸಿ, ಪ್ರಕಟಪಡಿಸಿದ್ದಾರೆ. ಅದನ್ನು ಓದಿದೆ. ಯಾಕೋ ಸಂಶಯ ! ಓದುತ್ತ ಹೋದಂತೆ ನನ್ನ ಸಂಶಯ ಬಲಗೊಂಡಿತು. ಹೌದು. ಆ ಕೃತಿ ನನ್ನ ಅನುವಾದದ ಮಾದರಿಯಲ್ಲೇ ಇದೆ. ಅಲ್ಲಿ ಬರುವ ಸಂಭಾಷಣೆಗಳು ನಾನೇ ಬರೆದವುಗಳು ಎಂಬುದು ನನಗೆ ದೃಢವಾಯಿತು ! ಯಾಕೆಂದರೆ ನನ್ನ ಶೈಲಿ ನನಗೆ ಗೊತ್ತಾಗುವುದಿಲ್ಲವೇ ? ಅನುವಾದವಾದರೂ ನಾನು ಬಳಸುವ ಶಬ್ದಗಳು, ನುಡಿಗಟ್ಟುಗಳು ಭಿನ್ನವೇ ಆಗಿರುತ್ತವೆ. ಅನುವಾದ ಎನ್ನುವುದಕ್ಕಿಂತಲೂ ಕೆಲವೊಂದಿಷ್ಟು ವಿಚಾರಗಳನ್ನೂ ಹೆಚ್ಚಿನ ವಿವರಗಳನ್ನೂ ನಾನು ಬಳಸಿಕೊಂಡಿರುತ್ತೇನೆ. ಇದನ್ನು ಹಲವರಲ್ಲಿ ನಾನು ಪ್ರಸ್ತಾಪ ಮಾಡಿದೆ. ಯಾವುದೋ ಗುಮಾನಿಯಿಂದ ಮೂಲ ಲೇಖಕರನ್ನೂ ಸಂಪರ್ಕಸಿದೆ. ಅವರೂ ತಮಗೇನೂ ತಿಳಿದಿಲ್ಲ ಎಂದರು. ಕೃತಿಚೌರ್ಯ ನಡೆದಿರುವುದಂತೂ ಸ್ಪಷ್ಟವಾಗಿತ್ತು. ಆದರೆ ಅದನ್ನೇ ದೊಡ್ಡದನ್ನಾಗಿ ಮಾಡುವ ವಿಚಾರ ನನ್ನದಾಗಿರಲಿಲ್ಲ. ಹೀಗಾಗಿ ರೂಪ ಪ್ರಕಾಶನದ ಆತ್ಮೀಯ ಮಹೇಶ ಅವರನ್ನು ಸಂಪರ್ಕಿಸಿದೆ. ಅವರು ಕೃತಿಯನ್ನು ಪ್ರಕಟಿಸಲು ಮುಂದೆ ಬಂದರು. 
ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಕೃತಿಚೌರ್ಯ ಮಾಡುವವರು ಹೇಗೆ ಎಲ್ಲ ಕಡೆ ತುಂಬಿಕೊಂಡಿದ್ದಾರೆ ಎಂಬುದನ್ನು ತಿಳಿಸಲಿಕ್ಕೆಂದು ಎಂದರೆ ಆಶ್ಚರ್ಯವಾದೀತು ! ಯಥಾವತ್ತ ನಕಲು ಮಾಡದೇ ಅಲ್ಲಲ್ಲಿ ಕೆಲ ಬದಲಾವಣೆಗಳನ್ನು ಮಾಡಿ, ಯಾರದೋ ಪುಸ್ತಕವನ್ನು ಇನ್ನ್ಯಾರೋ ತಮ್ಮ ಹೆಸರಿನಲ್ಲಿ ಪ್ರಕಟಸುವುದು ಮತ್ತು ಹೆಸರು ಮಾಡುವುದು ಎಷ್ಟು ಸರಿ. ಈ ಬಗ್ಗೆ ಯಾರೇ ಬಂದರೂ ಮುಖಾಮುಖಿ ಉತ್ತರ ನೀಡಲೂ ನಾನು ಸಿದ್ಧನಾಗಿಯೇ ಇದ್ದೇನೆ. ಆದರೂ ಮಹಾತ್ಮ ಜ್ಯೋತಿಬಾ ಫುಲೆಯವರ ಬಗ್ಗೆ ಇರುವ ಈ ಕಾದಂಬರಿ ಕನ್ನಡದಲ್ಲಿ ಮೊಟ್ಟ ಮೊದಲನೆಯದು ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಇಚ್ಚೆ ಪಡುತ್ತೇನೆ.

Wednesday, October 30, 2013

ಸಾಯಿ ಬಾಬಾ ಮಹಾ ಕಾದಂಬರಿ : ಪ್ರತಿಗಳಿಗೆ ಸಂಪರ್ಕಿಸಿ

ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ.

ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.




ನಾನು ಕನ್ನಡಕ್ಕೆ ಅನುವಾದಿಸಿರುವ ಮೂಲ ಮರಾಠಿಯ ಸಾಯಿಬಾಬಾ ಮಹಾ ಕಾದಂಬರಿ ಸಧ್ಯ ಮಾರಾಟಕ್ಕಿದೆ. ಪ್ರತಿಗಳನ್ನು ಬಯಸುವವರು ದಯವಿಟ್ಟು ಮೊಬೈಲ್ ಸಂಖ್ಯೆ : 90 35 34 30 31 ಗೆ SMS ಮೂಲಕ ತಮ್ಮ ವಿಳಾಸ ನೀಡಿ.
ಕೃತಿಯ ಪುಟಗಳು :  612+9  (ಕಿಂಗ್ ಸೈಜ್), ಬೆಲೆ- ರೂ. 450/-  (ಅಂಚೆ ವೆಚ್ಚ ಪ್ರತ್ಯೇಕ)
ಕೃತಿಯ ಪುಟಗಳು : 612+9 (ಕಿಂಗ್ ಸೈಜ್), ಬೆಲೆ- ರೂ. 450/- (ಅಂಚೆ ವೆಚ್ಚ ಪ್ರತ್ಯೇಕ)

Sunday, September 15, 2013

डॉ. बाबासाहेब आंबेडकरांना बौध्द सोडून इतर दलितांनी स्वीकारले आहे का..?


निलेश ठेगे

डॉ. बाबासाहेब आंबेडकरांनी अनेक आघाडयांवरून संघर्ष केला. प्रचंड लिखाण केले. वारंवार भारतात आलेल्या कमिशनना निवेदने सादर केली. अस्पृश्यांना अन्यायाच्या विरोधी लढा देण्यासाठी तयार केले. साऊथबरो कमिटी, सायमन कमिशन, गोलमेज परिषदांना त्यांनी सादर केलेली निवेदने जर बघितली तर अस्पृश्यांच्या सबळीकरणासाठी विकासासाठी त्यांची बांधीलकी तळमळ लक्षात येते. अस्पृश्यांना डिप्रेसड वर्गाना गुलामीच्या लाचारीच्या गर्तेतून बाहेर काढून अन्यायाविरुध्द लढाईस तयार करणे हे त्यांच्या लढयाचे मुख्य उद्दिष्ट होते. सामाजिक स्वातंत्र्य आणि राजकीय सबळीकरण विकास या तीन बाबी मागासलेल्या समुहांना मिळाल्या पाहीजेत यासाठी बाबासाहेबांनी प्रयत्न केले. 

अनु.जाती, जमाती, गरीब,अल्पसंख्यांक महिलांच्या सर्वसमावेशक विकासासाठी बाबासाहेबांनी १९१९ ते १९५४ दरम्यान वेळोवेळी शासनाला निवेदन देऊन जातीच्या आधारावरून होत असलेल्या भेदभावावर तोडगा काढण्यात यावा असे सुचविले. मे १९२८ ला सायमन कमिशनला दोन निवेदने दिली. गोलमेज परिषदेत दोन १९३०-१९३२ अस्पृश्यांच्या मागण्यासंबंधी अभ्यासपूर्ण निवेदने दिली. १९४० च्या दरम्यान आजच्या आरक्षण धोरणाचा आधार डॉ. आंबेडकरांनी तयार केला भारत स्वतंत्र झाल्यानंतर आरक्षण धोरणाला मूर्त स्वरुप प्राप्त झाले. बाबासाहेबांनी भारत देशाची जलनीती ( water policy ) नौकानयन विकासाचे सर्वसमावेशक प्रारुप ( inclusive development model ) मांडले ते राबविले. भारताच्या लोकसंख्या धोरणविषयीचे विचार १९३७ ला मांडले वाढत्या लोकसंख्येची समस्या हाताळण्यासाठी उपाय योजना सूचविल्या. ते देशाच्या सर्वसमावेशक विकासाचे शिल्पकार होते. अशी 'व्हिजन'आणि 'सर्वस्पर्शी परिप्रेक्ष्य' असतानाही त्यांना देशातील सर्व जनतेने स्विकारले का? हा खरा कळीचा मुद्दा आहे. 

भारतीय घटनेचे शिल्पकार, दलितांचे एवं पिछडे वर्गोंके मसीहा याच विचाराने लोक त्यांना संबोधतात. महाराष्ट्रात ५९ अनु जाती आहेत. त्यातील प्रमुख जाती म्हणजे महार (नवबौध्द) मातंग, चांभार, ढोर आणि होलर या आहेत. बौध्द वगळता इतर चार जातीनी बाबासाहेबांना सामुदायीक पातळीवरुन मान्य केले का? याचे उत्तर दुदैवाने नकारार्थी आहे. पण त्याची कारणे आपण समजून घ्यायला हवीत. बाबासाहेबांच्या महापरिनिर्वाणानंतर त्यांची मंडळी तीन विशिष्ट प्रकारे आठवण काढतात. ) सरकारी-दरबारी त्यांची आठवण निघते. भारतीय घटनेचे ते शिल्पकार होते. दलितांचे कैवारी उध्दारकर्ते होते अशी बोळवण केली जाते. समता, स्वातंत्र्य, बंधुभाव सामाजिक न्यायाच्या तत्वानुसार भारतीय समाजाची पुनर्बाधणी करण्यासाठीचे त्यांचे योगदान याकडे जाणीवपूर्वक डोळेझाक केली जाते. त्यांना victim of reductionism केले जाते. हे दलितेत्तर मंडळीकडून होते हे वेगळे सांगायला नको. बाबासाहेबंची जयंती साजरी करणे म्हणजे एक ritual चा भाग झाला आहे. ) डावे-उजवे, भगवे या राजकीय पक्षांना बाबासाहेबांच्या विचारप्रणालीची ' Allergy ' झाली आहे. डावे पक्ष बाबासाहेबांना Caste leader म्हणूनच संबोधतात. उजव्या पक्षांनी डॉ. आंबेडकरांना हिंदुत्वाच्या माहोलमध्ये Co-opt करण्याचा प्रयत्न केला. त्यांच्या नावाचे राजकारण केलं गेलं. राष्ट्र उभारणीच्या त्यांच्या विचारांची थट्टा केली गेली. ) तिस-या प्रकारात बाबासाहेबांची आठवण काढणारी दलित मंडळी आहेत. बाबासाहेबांना ते ' Symbol of revolt ' म्हणूनच स्वीकारतात. देशपातळीवर दलित जनतेनी त्यांना स्विकारले आहे. ही जनता आंबेडकरांच्या योगदानाचा, सिध्दांताचा विचारांचा वापर करतात. त्यांच्या छोटया मोठया प्रश्नांची तड लावण्यासाठी आंबेडकरी प्रेरणा हीच त्यांची शक्ती आहे. खऱ्या अर्थाने ही सामान्य जनता बाबासाहेबांची अनुयाची आहे. बाकीच्या अनुयायांविषयी बोललेलच बरं

महाराष्ट्रातील बौध्देत्तर दलितांनी बाबासाहेबांची विचारप्रणाली नेतृत्त्व स्विकारले का? याचे उत्तर 'हो' आणि 'नाही' असेच आहे. डॉ. आंबेडकरांना का स्विकारले नाही? या उत्तरासाठी आपल्याला मातंग, ढोर, चांभार होलर या प्रमुख जातींचे जाती व्यवस्थेच्या उतरंडीमध्ये 'स्थान' काय होते हे बघावे लागेल. वरील चार जातींना गावगाडयात पारंपारिक व्यवसाय होता. पारंपारिक कला कुसर हाती असल्याने आर्थिक आधार त्यांना होता. म्हणून 'जात आणि व्यवसाय' यांच्यात सातत्य राहिले. त्यामुळे त्यांचे स्थलांतर mass based वर झाले नाही. या जातींनी 'सांस्कृतिकरणाची' प्रक्रिया अवलंबवीली. या उलट नवबौध्दांनी बाबासाहेबांच्या लढयाला नेतृत्वाला विद्युतगतीने सामुदायीक समुच्चयाने प्रतिसाद दिला. दर्जा वाढविण्यासाठी सांस्कृतीकरणाच्या प्रक्रिये ऐवजी political means वापरले. परिणामी, त्यांच्या सामाजिक गतीशिलतेसाठी, इतर घटकांव्यतिरिक्त, डॉ. बाबासाहोंचा role महत्वाचा घटक राहीला आहे. यावर खूप संशोधन झाले आहे. वरील प्रकारच्या तपशीलात गेल्यास तीन प्रकारच्या images निर्माण झाल्याचे लक्षात येते.महार/नवबौध्दांनी अंगीकारलेली Aggressive strategy ,ढोर-चांभारांची imitative strategy आणि मातंगाची depressive revivalist strategy. बौध्द समुदाय प्रत्येक front वर आक्रमक Aggressive राहिला म्हणून सामाजिक गतीशिलता जास्त प्रमाणात आली.चांभार-मातंग समुदायात सामाजिक गतीशिलता हिंदू समाज व्यवस्थेच्या मुल्य व्यवस्थेच्या आधीन राहूनच आली.

बौध्दांनी डॉ.आंबेडकरांकडे Role Model म्हणूनच बघितले. 'शिका, संघटीत व्हा संघर्ष करा' या घोषणेला भरभरून प्रतिसाद दिला.अनेक संघर्षात त्यानी खूप किमंतही मोजली.पण अन्यायाविरूध्द समुच्चयाने लढण्याची ताकद त्याच्यात निर्माण झाली.आपण अन्यायाविरूध्द लढू शकतो ही मनाची तयारी झाली. हे केवळ आंबेडकरांच्या नेतृत्वामुळे शक्य झाले आहे. ज्या मंडळींनी सामुहीक समुच्चयाने डॉ.आंबेडकरांना स्वीकारले त्यांनी आंबेडकरीचे आज किती वाटे पाडलेत? तरी ते स्वतःला आपण बिनीचे आंबेडकरवादी आहोत असे समजतात ना? बौध्देत्तर दलितांच्या आंबेडकरी निष्ठा पदोपदी तपासण्यासाठी ते परीक्षकाची भूमिका घेतात. हा असा अधिकार त्यांना कसा काय प्राप्त होतो? हा एक वेगळा संशोधनाचा विषय आहे. दुदैव हे आहे की, ना सवर्णानी ना दलित अनुयायांनी बाबासाहेबांना digest केलं. digest केलं नाही तर कृतीकार्यक्रम व्यवहारात कसा आणणार? फक्त ritual म्हणून किंवा भावनात्मक पातळीवर बाबासाहेब स्विकारण्याचे दिवस केव्हाचे संपले आहेत, हे लोकांना का कळत नाही ही फार मोठी शोकांतिका आहे.

From : Prabodhan, marathi Magazine 

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.