Showing posts with label Shrinivas Bhalerao. Show all posts
Showing posts with label Shrinivas Bhalerao. Show all posts

Thursday, May 02, 2013

ಮರಾಠಿ ದಲಿತ ಲೇಖಕ ಶ್ರೀನಿವಾಸ ಭಾಲೇರಾವ್

ನಾಗವಂಶಜ ದಲಿತರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ?' ಕೃತಿಯ ಮೂಲ ಮರಾಠಿ ಲೇಖಕ ಶ್ರೀನಿವಾಸ ಭಾಲೇರಾವ್


ಮರಾಠಿ ಸಾಹಿತ್ಯ ನಿರ್ಮಿತಿಯಲ್ಲಿ ದಾಪುಗಾಲು ಇಡುತ್ತಿರುವ ಶ್ರೀನಿವಾಸ ಭಾಲೇರಾವ್ ಅವರು ದಲಿತ ಚಿಂತನೆಯನ್ನು ಮುಕ್ತವಾಗಿ ಪಸರಿಸಬಲ್ಲ ಮತ್ತು ಪ್ರಚಾರಿಸಬಲ್ಲ ವ್ಯಕ್ತಿ. ಪರಿಪೂರ್ಣವಾದ ಪ್ರಜ್ಞೆ, ಸತತ ಪ್ರಯತ್ನ ಮತ್ತು ಸಾಧಿಸುವ ಹಠ ಮುಪ್ಪರಿಗೊಂಡ ಭಾಲೇರಾವ ಅವರು ನಿರ್ಭಿಡೆಯಿಂದ ಲೇಖನಿಯನ್ನು ಝಳಪಳಿಸುವ ಕ್ರಾಂತಿಕಾರಿ ನಿಲುವಿನವರು.
ಪುಣೆಯ ಕರ್ವೆ ರಸ್ತೆಯಲ್ಲಿರುವ ಅಭಿನವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಭಾಲೇರಾವ ಅವರು ತಮ್ಮ ಸಹೋದ್ಯೋಗಿಗಳಿಗೂ ವಿದ್ಯಾರ್ಥಿ ಸಮುದಾಯಕ್ಕೂ ಪ್ರೀತಿಪಾತ್ರ ಗುರೂಜೀ ಆಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣ ಮತ್ತು ಅವರನ್ನು ವೈಚಾರಿಕವಾಗಿ ಪ್ರಬುದ್ಧಗೊಳಿಸುವ ಭಾಲೇರಾವ್ ಅವರ ಕಾರ್ಯಶೈಲಿ ನಿಜಕ್ಕೂ ಮೆಚ್ಚಿಕೆ ಗಳಿಸಿದೆ.
ಕೋಠೂನ ಆಲಾ ? (ಎಲ್ಲಿಂದ ಬಂದರು ?), ನಾಗವಂಶಿಯಾನಿ ತುಮಚೀ ಅಸ್ಮಿತಾ ಗೇಲಿ ಕೋಠೆ ? (ನಾಗವಂಶಜರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ?), ಸ್ತ್ರೀರತ್ನ ಸಾವಿತ್ರಿಬಾಯಿ ಫುಲೆ, ಲೋಕೋತ್ತರ ಸಂತ ಗಾಡಗೆಬಾಬಾ, ರಾಜರ್ಷಿ ಶಾಹು ಮಹಾರಾಜ, ಮಿ ಸಾಹೇಬಾಂಚಿ ರಮಾ (ನಾನು ಸಾಹೇಬರ ರಮಾ), ಸಮ್ರಾಟ ಅಶೋಕ, ದಿ ಬ್ರಿಗೆಡಿಯರ್, ವಿಚಾರಾನಿ ಫುಟಲೆ ಪಂಖ (ವಿಚಾರದಿಂದ ಮೊಳೆತ ರೆಕ್ಕೆ) ಎಂಬ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ.
ಅಧ್ಯಯನಶೀಲ ಮತ್ತು ಚಿಂತನಶೀಲ ಅಧ್ಯಾಪಕ-ಲೇಖಕ ಆಗಿರುವ ಶ್ರೀನಿವಾಸ ಭಾಲೇರಾವ್ ಅವರು ಒಂದರ್ಥದಲ್ಲಿ ಕ್ರಾಂತಿಯ ಕಿಡಿಯೇ ಆಗಿದ್ದಾರೆ. ಪ್ರಸ್ತುತ ಲೇಖನವು ದಲಿತರ ಸ್ವಾಭಿಮಾನವನ್ನು ಬಡೆದೆಬ್ಬಿಸುವ ನಿಟ್ಟಿನಲ್ಲಿ ತುಂಬ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಮರಾಠಿಯಲ್ಲಿ ಈ ಕೃತಿ ಹತ್ತು ಮುದ್ರಣಗಳನ್ನು ಕಂಡಿದೆ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.