Showing posts with label ಅಸ್ಪೃಶ್ಯತೆ. Show all posts
Showing posts with label ಅಸ್ಪೃಶ್ಯತೆ. Show all posts

Tuesday, September 22, 2015

नेपाल के संविधान लिखने की कलम : दलित महिला कृष्णा कुमारी परियार

दलित महिला लिख रही है संविधान
संजय ढकाल


बीबीसी संवाददाता, नेपाल
 मंगलवार, 10 अप्रैल, 2012 को 11:37 IST तक के समाचार

कृष्णा कुमार पेरियार आज नेपाल में सांसद हैं लेकिन दलित परिवार में पैदा होना उनके लिए मुश्किलों का सबब बना
पैंतालिस साल की कृष्णा कुमारी परियार एक आम नेपाली महिला दिखती हैं. रंगीन साड़ी, सिंदूर से भरी मांग, गले में लाल रंग की माला, हाथों में चूड़िया.. पहले इन हाथों में सिलाई मशीन घूमती रहती थी अब इन उंगलियों ने नेपाल के संविधान लिखने की कलम थामी है .
Krishnakumari Pariyar
नेपाल के सबसे ज़्यादा पिछड़े और दलित वर्ग में पैदा हुई कृष्णा कुमारी परियार आज नेपाल में सांसद हैं और संविधान निर्माण में अहम भूमिका निभा रही हैं.
इस जगह पहुंचने के लिए कृष्णा ने बहुत मुश्किल सफ़र तय किया है.
कृष्णा ने बीबीसी को बताया, “मैने बचपन से भेदभाव झेला है. स्कूल में मेरे कुछ साथी कहते थे कि मैं अछूत हूं. पर इस व्यवहार ने मुझे प्रेरित किया राजनीति में आने औऱ इस तरह की परंपराओं को उखाड़ फेंकने के लिए. मैं उन्हे कहती थी मेरे औऱ तुम्हारे ख़ून में कोई फर्क नहीं है. मैं कभी हतोत्साहित नहीं हुई.”
कृष्णा कुमार पेरियार की ये राजनीतिक यात्रा दरअसल दस साल की उम्र में ही शुरू हो गई जब वो अपने पिता के साथ राजनीतिक आंदोलनों में हिस्सा लेने जाया करती थीं लेकिन राजनीति ने उनकी निजी ज़िंदगी पर ख़ासा असर डाला.
कृष्णा के पति ने उनका साथ छोड़ दिया क्योंकि पति की इच्छा थी कि कृष्णा राजनीति छोड़ दें.
राजनीतिक समझ
"मैने बचपन से भेदभाव झेला है. स्कूल में मेरे कुछ साथी कहते थे कि मैं अछूत हूं. पर इस व्यवहार ने मुझे प्रेरित किया राजनीति में आने औऱ इस तरह की परंपराओं को उखाड़ फेंकने के लिए. मैं उन्हे कहती थी मेरे औऱ तुम्हारे ख़ून में कोई फर्क नहीं है. "

कृष्णा कुमारी परियार
एक दलित परिवार में पैदा होने के सच ने ज़िदगी में जो अनुभव कराए, कृष्णा को अपने राजनैतिक जीवन में उससे फ़ायदा हुआ क्योंकि वो अब बेहतर जानती थीं कि उन्हें क्या करना है.
नेपाली कांग्रेस की सांसद कृष्णा को चार साल पहले पार्टी द्वारा संविधान लिखने के काम के लिए मनोनीत किया गया. वे उस दिन हर जगह अखबार की सुर्खियों में थी. सिलाई मशीन के साथ उनकी तस्वीर हर जगह छपी पर अब उनकी पहचान बदल गई है.
कृष्णा दलितों को मुख्य धारा में जोड़ने के बारे में बहुत साफ़ तौर पर कहती हैं, “मेरी समझ से सिर्फ़ कोटा निश्चित करने से कुछ नहीं होगा. पिछड़ों औऱ दलितों को मुख्यधारा में शामिल करने और कोटा देने के लिए एक ठोस नीति और आनुपातिक प्रतिनिधित्व की ज़रूरत है. ये दरअसल आर्थिक रूप से क़मज़ोर लोगों को ही मिलना चाहिए. जिस दिन संविधान सभा नया संविधान बना लेगी वो मेरे लिए बहुत ख़ुशी का दिन होगा. मैं समझूंगी मैने वो ज़िम्मेदारी पूरी की जो लोगों ने मुझे सौंपी थी.”
निजी ज़िंदगी
राजनैतिक ख्वाबों को पूरा करने की दिशा में तो कृष्णा कुमारी परियार आगे बढ़ रही हैं लेकिन निजी ज़िंदगी में जो ख़ालीपन है उसके बारे में क्या सोचती हैं कृष्णा.
ख़ासकर तब जब उनके पति ने फिर एक होने की इच्छा भी ज़ाहिर की है तो क्या कृष्णा इस बारे में सोचने के लिए तैयार हैं?
कृष्णा कुछ शिकायत भरे लहजे में कहती हैं, "मैं सचमुच चाहती थी कि कोई उस वक्त मेरे साथ होता जब मेरे पति ने मुझे छोड़ना का फ़ैसला किया. वो भी तब जब मुझे देर रात लौटने के बाद अपने बच्चों को खाना खिलाना पड़ता था. उसने मुझे उस वक्त अकेले छोड़ दिया. अब मुझे उससे कुछ लेना देना नहीं है.”
कृष्णा अब भी सिंदूर लगाती जरूर है लेकिन उनके लिए अब निजी जीवन के कथित सुख के आगे बड़ा उद्देश्य है- दलितों को नेपाल के संविधान के ज़रिए समान अधिकार दिलाने की लंबी लड़ाई.


Wednesday, January 09, 2013

ರಾಘವಾಂಕನ ಹರಿಶ್ಚಂದ್ರ : ಒಂದು ಮರು ವಿವೇಚನೆ

                                                ಡಾ. ಸಿದ್ರಾಮ ಕಾರಣಿಕ
                       
   ಭಾರತೀಯ ಪುರಾಣ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬನಾದ ಹರಿಶ್ಚಂದ್ರ, ಸತ್ಯ ಹರಿಶ್ಚಂದ್ರನೆಂದೇ ಖ್ಯಾತಿ. ಕಾವ್ಯ ನಾಟಕಗಳಲ್ಲಿ ಆತ ಕಾಣಿಸಿಕೊಂಡು ಹಲವರಿಗೆ ಆದರ್ಶಪ್ರಾಯ. ಇಡೀ ಸಾಹಿತ್ಯದಲ್ಲಿ ಇದೊಂದು ವಿಸ್ಮಯ ಕೂಡ. ಹರಿಶ್ಚಂದ್ರನನ್ನು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಗುರುತಿಸಿದವನು ಕವಿ ರಾಘವಾಂಕ. ಕವಿಯ ಕಾವ್ಯದ ರೂಪ ಅತ್ಯಂತ ಮನಾಕರ್ಷಕವಾದುದು. ಕಾವ್ಯ ಕಟ್ಟುವ ಕಲೆ ರಾಘವಾಂಕನಿಗೆ ಜನ್ಮಜಾತ ಕರಗತ ಎನ್ನುವಷ್ಟರಮಟ್ಟಿಗೆ ಕಾವ್ಯದ ಹಿರಿಮೆ ಇದೆ. ಆದರೆ ಇದೆ ಮಾತನ್ನು ಕಾವ್ಯದ ವಸ್ತುವಿನ ಬಗ್ಗೆ ಹೇಳುವಂತಿಲ್ಲ. ಹರಿಶ್ಚಂದ್ರ ಕಾವ್ಯ ಬರೆಯುವುದರ ಉದ್ದೇಶ ಹರನ ಮಹಿಮೆಯನ್ನೂ ಆತನನ್ನು ನಂಬಿದವರಿಗೆ ಆತ ತೋರುವ ಕರುಣೆಯನ್ನೂ ವಿವರಿಸುವುದೇ ಆಗಿದೆ. ಹರಿಶ್ಚಂದ್ರನ ಕತೆ ಇಲ್ಲಿ ನೆಪ ಮಾತ್ರ. ಹೀಗಾಗಿ ಈ ಕಾವ್ಯದ ವಸ್ತು ಸೂತ್ರಬದ್ಧತೆಯನ್ನು ಕಳೆದುಕೊಂಡಿದೆ. ಇಲ್ಲಿ ಹರಿಶ್ಚಂದ್ರನ ಪಾತ್ರ ಮೇಲ್ಜಾತಿಯವನೆನ್ನಿಸಿಕೊಂಡ ಅರಸನೊಬ್ಬನ ಮಡಿವಂತಿಕೆಯನ್ನು ಮಾತ್ರ ಪ್ರತಿನಿಧಿಸುತ್ತದೆ. ಚಾತುರ್ವರ್ಣದ ಅಂಧಶೃದ್ಧೆಯಲ್ಲಿ ಕನಲುವ ಚಿತ್ರ ಇಲ್ಲಿದೆ. ಬಾಲಸಾಹಿತ್ಯದಲ್ಲಿ ಬಂದ ಕತೆಯನ್ನೇ ಓದಿಕೊಂಡು ಬಂದಿರುವವರಿಗೆ ಇದು ಒಲ್ಲದ ಸತ್ಯವೇ ! ರಾಘವಾಂಕನ ಹರಿಶ್ಚಂದ್ರ ಕಾವ್ಯ ಹರಿಶ್ಚಂದ್ರನ ಮಾನಸಿಕ ತೊಳಲಾಟವನ್ನು ಚಿತ್ರಿಸುವಲ್ಲಿ ಸಫಲತೆ ಕಂಡಿದೆ ಮತ್ತು ಮೊಗೆದಷ್ಟು ಹೊಸ ಹೊಸ ಅರ್ಥಗಳನ್ನು ಅನಾವರಣ ಮಾಡುತ್ತ ಸಾಗುತ್ತದೆ.
    ರಾಘವಾಂಕನ ಹರಿಶ್ಚಂದ್ರ, ವಿಶ್ವಾಮಿತ್ರ ಮತ್ತು ವಸಿಷ್ಠ ಎಂಬ ಎರಡು ಕೋಣಗಳ ನಡುವೆ ಸಿಕ್ಕಿಕೊಂಡ ಗಿಡ ಎಂಬ ಮಾತು ಸತ್ಯವಾದರೂ ವಸ್ತುಸ್ಥಿತಿ ಅರಿತ ಮೇಲಾದರೂ ಆ ಎರಡೂ ಕೋಣಗಳಿಂದ ಸಮದೂರ ಕಾಪಾಡಿಕೊಳ್ಳಲು ಸಾಧ್ಯವಿತ್ತು. ಆದರೆ ಆತ ಚಂಚಲ ವೃತ್ತಿಯಿಂದ ಚಲನೆಯನ್ನು ಕಳೆದುಕೊಳ್ಳುತ್ತಾನೆ. ಮನಃಶಾಸ್ತ್ರೀಯ ದೃಷ್ಟಯಿಂದ ಇಂಥ ವರ್ತನೆಯನ್ನು ಮಾನಸಿಕ ವಿಕಲ್ಪತೆ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಫೋಬಿಯಾ !
1. ಸತ್ಯ ಮತ್ತು ಹರಿಶ್ಚಂದ್ರ : ಸತ್ಯ ಎಂಬುದು ಶಿವ ಎಂಬರ್ಥವೂ ಇದೆ. ಇದಕ್ಕೆ ಮಂಗಳಕಾರಿ ಎಂಬ ಅನ್ಯೋಕ್ತಿಯೂ ಇದೆ. ರಾಘವಾಂಕನ ಹರಿಶ್ಚಂದ್ರ ಎಲ್ಲಿಯೂ ಈ ಸತ್ಯತನ ತೋರಿದ ಉಲ್ಲೇಖಗಳು ಸಿಗುವುದಿಲ್ಲ. ಸಾಂಪ್ರದಾಯಿಕ ನಂಬಿಕೆಗಳು ಮಾತ್ರ ಆತನನ್ನು ಸತ್ಯವಂತನೆಂದೇ ಪರಿಗಣಿಸುತ್ತವೆ. ಕೊಟ್ಟ ಮಾತಿಗೆ ತಪ್ಪಿ ನಡೆಯುವ ಆತನ ವರ್ತನೆ ಯಾವ ಸತ್ಯವನ್ನು ಅಥವಾ ಎಂಥ ಸತ್ಯವನ್ನು ಒಳಗೊಂಡಿದೆ ಎನ್ನವುದೇ ನಿಗೂಢ !
    ಹರಿಶ್ಚಂದ್ರ ದಿಟದ ವ್ಯಕ್ತಿಯಲ್ಲ ಎಂಬುದಕ್ಕೆ ವರುಣನಿಗೆ ಮಾತು ತಪ್ಪಿ ಜಲೋದರ ರೋಗಕ್ಕೆ  ಈಡಾದ ಪ್ರಕರಣವೇ ಸಾಕ್ಷಿ. ರಾಘವಾಂಕ ಇದನ್ನು ಚಿತ್ರಿಸಲು ಹೋಗದೇ ವಿಶ್ವಾಮಿತ್ರನ ಮೂಲಕ ಈ ಕತೆಯನ್ನು ಆಡಿಸಿದ್ದಾನೆ.
        ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ            
        ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ                
       ಧ್ವರಕೆ ಪಶುವಂ ಮಗನ ಮಾಡಲಾರದೆ ಮೋಹದಿಂದಜೀಗರ್ತ ಮುನಿಯ        
        ವರಸುತ ಶುನಶ್ಯೇಪನಂ ತಂದು ಯಾಗವಿಧಿ                
        ಗರಿದು ಬೇಳಲ್ಕೆ ಮನದಂದ ಪಾತಕನು ಭೂ               
      ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕೆಡೆನುಡಿದನು (2-19)
   
           ಇದು ವಿಶ್ವಾಮಿತ್ರ ಹುಟ್ಟಿಸಿಕೊಂಡು ಹೇಳಿದ್ದಲ್ಲ. ಆತ ಸತ್ಯದ ಅನಾವರಣ ಮಾಡಿದ್ದಾನೆ. ಹೀಗಾಗಿಯೇ ಈ ಮಾತಿಗೆ  ವಸಿಷ್ಠ ಯಾವುದೇ ನಿರಾಕರಣೆ ತೋರದೆ ತೇಲಿಸಿ ಮಾತನಾಡುತ್ತಾನೆ. ಮಗನಿಲ್ಲದೆ ಮುಕ್ತಿಯಿಲ್ಲ ಎಂಬ ನಂಬಿಕೆಯಿಂದಾಗಿ ವರುಣನ ವರದಿಂದ ಮಗನನ್ನು ಪಡೆದು ಮಾತಿಗೆ ತಪ್ಪುತ್ತಾನೆ. ಮಾಯದಬಲೆಯರನ್ನು ಹೊಡೆದೋಡಿಸಿದ ಮೇಲೆ ಕೆಂಡ ಕಾರುತ್ತ ಬರುವ ವಿಶ್ವಾಮಿತ್ರನ ಜತೆಯಲ್ಲಿಯ ಸಂವಾದ ಕೂಡ ಹರಿಶ್ಚಂದ್ರ ನುಡಿದಂತೆ ನಡೆಯುವ ವ್ಯಕ್ತಿಯಲ್ಲ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸುತ್ತದೆ.
        ಎಡೆವಿಡದೆ ಬೇಡಿ ಕಾಡುವಿರಾದಡಿನ್ನು ಕೇಳ್                
        ಕಡೆಗೆನ್ನ ಸರ್ವ ರಾಜ್ಯವನಾದಡಂ ನಿಮಗೆ                
        ಕೊಡಹಡೆವೆನೈಸಲ್ಲದೀಯೊಂದು ತೇಜಮಂ ಕೊಡೆ..... (8-32)
    ಎನ್ನುತ್ತಾನೆ. ಸರ್ವರಾಜ್ಯವನ್ನು ಧಾರೆ ಎರೆದು ಕೊಡುವುದಾಗಿ ಹೇಳುವ ಆತ, ಆನಂತರದಲ್ಲಿ ತಾನು ಹಾಗೇ ಹೇಳಿಯೇ ಇಲ್ಲ ಎಂದು ವಾದಿಸುವುದು ಸತ್ಯವಂತನ ಲಕ್ಷಣ ಹೇಗಾದೀತು ? ‘ನಾನಿತ್ತುದೇನಯ?’ ಎಂದು ಮರಳಿ ಪ್ರಶ್ನಿಸುವ ಮೂಲಕ ಜಾರಿಕೊಳ್ಳುತ್ತಾನೆ. ಹೀಗಾಗಿ ಹರಿಶ್ಚಂದ್ರ ಚಂಚಲ ಮನಸ್ಸಿನವನು ಎನ್ನದೇ ಅನ್ಯ ಮಾರ್ಗವಿಲ್ಲ. ‘ಹರಿಶ್ಚಂದ್ರಭೂನಾಥ ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ’ (2-20) ಎಂಬ ವಸಿಷ್ಠನ ಮಾತು ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ ಹಾಗೆಯೇ ಹಲವು ವಿಧದಿಂದ ರಾಜ್ಯವನ್ನು ಉಳಿಸಿಕೊಳ್ಳಲು ದೀನನಾಗಿ ವಿಶ್ವಾಮಿತ್ರನಲ್ಲಿ ಮೊರೆಯಿಡುವ ಹರಿಶ್ಚಂದ್ರನ ಪಾತ್ರ ಇಲ್ಲಿ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತದೆ. ವಿಶ್ವಾಮಿತ್ರನಂತಹ ಚಾಣಾಕ್ಷಮತಿ ಇಲ್ಲದೇ ಬೇರೆ ಪಾತ್ರ ಯಾವುದಾದರೂ ಅಲ್ಲಿದ್ದಿದ್ದರೆ ಹರಿಶ್ಚಂದ್ರ ತನ್ನ ಮಾತಿನ ಮೋಡಿಯಿಂದ ಮರುಳ ಮಾಡಿ ರಾಜ್ಯ ಉಳಿಸಿಕೊಳ್ಳುತ್ತಿದ್ದ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
    ಕಾಶಿ ನಗರದಲ್ಲಿ ಕೂಡ ಆತನ ವರ್ತನೆ  ಬದಲಾಗುವುದಿಲ್ಲ. ದಕ್ಷಿಣೆಯ ಹಣಕ್ಕಾಗಿ ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಮಾರುವ ಹರಿಶ್ಚಂದ್ರ ತನ್ನನ್ನೂ ಮಾರಾಟ ಮಾಡಿಕೊಳ್ಳಲು, ಗ್ರಾಹಕರನ್ನು ಕೂಗಿ ಕರೆಯುತ್ತಾನೆ. ಆದರೆ ಕೊಳ್ಳಲು ಬರುವ ವೀರಬಾಹುಕ ಕೇವಲ ಕೆಳಜಾತಿಯವ ಎಂಬ ಕಾರಣಕ್ಕಾಗಿಯೇ ತನ್ನನ್ನು ಮಾರಿಕೊಳ್ಳಲು ನಿರಾಕರಿಸುತ್ತಾನಲ್ಲದೇ ಕೊಳ್ಳಲು ಬಂದವನ ಮೇಲೆ ಕನಲಿ ಹರಿಹಾಯುವುದು ಆತನ ಮಾತಿಗೆ ತಪ್ಪುವ ಗುಣವನ್ನು ಮತ್ತೊಮ್ಮೆ ಪ್ರತಿನಿಧಿಸುತ್ತದೆ. ಹೀಗಾಗಿಯೇ ವೀರಬಾಹುಕ, ಹರಿಶ್ಚಂದ್ರನನ್ನು ‘ಹುಸಿಯಹೊಲೆಹೊರೆಕಾರ’ ಎಂದೇ ಸಂಬೋಧಿಸುವುದು ಉಚಿತವಾಗಿಯೇ ಇದೆ. ವ್ಯಾಪಾರದ ಸಂದರ್ಭದಲ್ಲಿ ಜಾತಿ, ಕುಲ, ಅಥವಾ ಇನ್ನಿತರ ಯಾವುದೇ ತೆರನಾದ ಭೇದಗಳನ್ನು ಪರಿಗಣಿಸಬಾರದು. ಗ್ರಾಹಕನಾದವ ವ್ಯಾಪಾರಿ ಹೇಳಿದ ದರ ಕೊಡಲು ಸಿದ್ಧನಾದರೆ ಯಾವುದೇ ತಕರಾರೂ ಇಲ್ಲದೇ ವ್ಯಾಪಾರ ಮಾಡಬೇಕಾಗುತ್ತದೆ. ಆದರೆ ಹರಿಶ್ಚಂದ್ರ ಇದಕ್ಕೆ ವ್ಯತಿರಿಕ್ತನಾಗಿ ವರ್ತಿಸುವ ಮೂಲಕ ತನ್ನ ಮಾತಿಗೆ ತಪ್ಪುವ ಗುಣವನ್ನು ಪ್ರದರ್ಶಿಸುತ್ತಾನೆ.
2. ವರ್ಣಧರ್ಮ ಮತ್ತು ಹರಿಶ್ಚಂದ್ರ : ರಾಘವಾಂಕನ ಹರಿಶ್ಚಂದ್ರ ವರ್ಣಧರ್ಮದ ಚೌಕಟ್ಟಿಗೆ ಒಳಗಾದವನು. ಅಷ್ಟೇ ಅಲ್ಲ, ಆ ತೆರನಾಗಿಯೇ ಎಲ್ಲರೂ ಬದುಕಬೇಕು ಎಂಬ ಕಠೋರ ಉಕ್ತಿ ಆತನದಾಗಿತ್ತು. ಇದು ಮೊಟ್ಟಮೊದಲ ಬಾರಿಗೆ ಅತ್ಯಂತ ಮಾರ್ಮಿಕವಾಗಿ ಮೂಡಿ ಬಂದದ್ದು ಮಾಯದಬಲೆಯರ ಪ್ರಸಂಗದಲ್ಲಿ. ಮೇಲು-ಕೀಳು ಜಾತಿ ಎಂಬ ವರ್ಗೀಕರಣದ ಮಡಿವಂತಿಕೆ ಹರಿಶ್ಚಂದ್ರನಲ್ಲಿದೆ. ಒಂದು ನಾಡಿನ ಒಬ್ಬ ಅರಸನಾಗಿ ಎಲ್ಲರನ್ನು ಸಮಾನಭಾವದಿಂದ ಕಾಣಬೇಕೆಂಬ ತತ್ವ ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕೊನೆಯಲ್ಲಿ ಬರುವ ವೀರಬಾಹುಕನ ಪ್ರಸಂಗದಲ್ಲೂ ಹರಿಶ್ಚಂದ್ರನ ಈ ಮಡಿವಂತಿಕೆಯ ವರ್ತನೆ ಪುನರಾವರ್ತಿತವಾಗುತ್ತದೆ.
    ಹೊಲತಿಯರು, ಅನಾಮಿಕೆಯರು, ಮಾಯದಬಲೆಯರು ಎಂಬ ಹೆಸರುಗಳಿಂದ ಕಾವ್ಯದಲ್ಲಿ  ಕಾಣಿಸಿಕೊಳ್ಳುವ ಈ ಯುವತಿಯರು ವಿಶ್ವಾಮಿತ್ರನ ಸೃಷ್ಟಿ. ಹಾಗೆಂದ ಕೂಡಲೇ ಅವರೇನು ಮಾಯಾ-ಮಂತ್ರಗಳಿಂದ ಜನ್ಮ ತಳೆದವರಲ್ಲ. ಯಾವುದೇ ಒಂದು ಹೆಣ್ಣಿನಲ್ಲಿ ವಿಶ್ವಾಮಿತ್ರನಿಗೆ ಹುಟ್ಟಿರಬಹುದಾದ ಮಕ್ಕಳೇ ಅವರಾಗಿದ್ದಾರೆ ಎಂಬುದನ್ನು ವಾಸ್ತವದ ಅರಿವಿರುವವರೆಲ್ಲರಿಗೂ ಸ್ಪಷ್ಟವಾಗಿರುವ ಅಂಶ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ ಬಂದೆವು ಎನ್ನುವ ಉಲ್ಲೇಖ ಇದನ್ನೇ ಸಾರುತ್ತದೆ. ಇಂಥ ಮಾಯದಬಲೆಯರನ್ನು ಹರಿಶ್ಚಂದ್ರ ಅಪಮಾನಗೊಳಿಸಿ, ಹೊಡೆದೊಡಿಸುವ ಕ್ರಿಯೆ ರಾಜನ ಮುಂಗೋಪಿತನಕ್ಕೆ ಸಾಕ್ಷಿಯಾಗುತ್ತದೆ ಮತ್ತು ಆತನ ಜಾತಿ ಬಗೆಗಿನ ವರ್ತನೆಯನ್ನು ಅನಾವರಣಗೊಳಿಸುತ್ತದೆ.
    ಹರಿಶ್ಚಂದ್ರ ಕಾಡಿನಲ್ಲಿ ಬೇಸತ್ತು, ದಣಿದು ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಯದಬಲೆಯರು ಅಲ್ಲಿಗೆ ಬಂದ ತಮ್ಮ ಮಧುರ ಗಾಯನದಿಂದ ಆತನ ಬೇಸರ ನೀಗುವಂತೆ ಮಾಡುತ್ತಾರೆ. ಇದರಿಂದ ಸಂತುಷ್ಟಗೊಂಡ ಹರಿಶ್ಚಂದ್ರ ಆಭರಣಗಳ ಕಾಣಿಕೆ ನೀಡಿದಾಗ ಅದನ್ನು ಸ್ವೀಕರಿಸಲೊಲ್ಲದ ಆ ಮಾನನಿಯರು ‘ಬಿರುಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮುತ್ತಿನ ಸತ್ತಿಗೆಯನ್ನು ಬಯಸುತ್ತಾರೆ. ಮುತ್ತಿನ ಸತ್ತಿಗೆ ರವಿಕುಲದ ಪ್ರತೀಕ. ಅದನ್ನು ಕೊಡಲಾಗದು ಎನ್ನುವ ಹರಿಶ್ಚಂದ್ರ ಅದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾನೆ. ಆಗ ಆ ಅನಾಮಿಕೆಯರು ಅದರ ಬದಲಾಗಿ ‘ವಲ್ಲಭನಾಗಿ ಚಿತ್ತದುಮ್ಮಳಿಕೆಯಂ ಕಳೆ’ ಎನ್ನುವ ಮೂಲಕ ಆತನ ರಾಣಿಯರಾಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ ಹರಿಶ್ಚಂದ್ರ ಅವರು ಕೀಳು ಕುಲದವರು ಎಂಬ ಒಂದೇ ಕಾರಣದಿಂದ ಅವರನ್ನು ತಿರಸ್ಕರಿಸುತ್ತಾನೆ. ಅವರು ಹಾಗೇ ಕೇಳಿದ್ದೇ ತಪ್ಪೆಂದು ವಾದಿಸುತ್ತಾನೆ. ‘ನಿಮಗೋಸಿಗೆನ್ನ ಕುಲಮಂ ಕೆಡಿಪೆನೆ’ ಎಂಬುದಾಗಿ ಪ್ರಶ್ನೆ ಎಸೆಯುತ್ತಾನೆ.
    ವರ್ಣಧರ್ಮದಲ್ಲಿ ಕೀಳು ಜಾತಿಯ ಹೆಣ್ಣುಗಳನ್ನು ಮದುವೆಯಾಗಲು ಯಾವುದೇ ತಕರಾರು ಇಲ್ಲ. ಆದರೆ ಹರಿಶ್ಚಂದ್ರ ವರ್ತಿಸುವ ರೀತಿ ತೀರ ವಿಚಿತ್ರವಾಗಿದೆ. ವೈದಿಕ ಧರ್ಮದ ನಿಯಮಾವಳಿಗಳಿಂದ ಕೂಡಿದ ಮನುಸ್ಮೃತಿಯೇ ಈ ಅನುಲೋಮ ವಿವಾಹಕ್ಕೆ ಮಾನ್ಯತೆ ನೀಡಿದೆ. ಆದರೆ ಕುಲದ ನೆಪವೊಡ್ಡಿ ಹರಿಶ್ಚಂದ್ರ ಆ ಅನಾಮಿಕೆಯರನ್ನು ತಿರಸ್ಕರಿಸುವ ಪರಿ ಬೇರೆ ಏನನ್ನೋ ಸೂಚಿಸುವಂತಿದೆ.
    ಜನಸಾಮಾನ್ಯರಲ್ಲಿ ಬೀಡು ಬಿಟ್ಟಿರುವ ಕಂದಾಚಾರಗಳ ಪ್ರತಿರೂಪ ಹರಿಶ್ಚಂದ್ರ ಎನ್ನಲಡ್ಡಿಯಿಲ್ಲ. ಆತನ ವರ್ತನೆಯೇ ಜಟೀಲ. ಕೀಳು ಕುಲದವರು ಅಸ್ಪೃಶ್ಯರೆಂದೇ ಭಾವಿಸುವ ವ್ಯಕ್ತಿ ಅವರನ್ನು ಹೇಗೆ ತಾನೆ ಮುಟ್ಟಿಯಾನು ? ಆ ಮಾಯದಬಲೆಯರನ್ನು ಮದುವೆಯಾಗುವಂತೆ ಸ್ವತಃ ವಿಶ್ವಾಮಿತ್ರನೇ ಬಂದು, ‘ಎನ್ನ ಬಸುರಿಂದ ಮೂಡಿರ್ದ ಕನ್ನೆಯರು’ (8/11) ಎಂದು ಹೇಳಿದರೂ ಹರಿಶ್ಚಂದ್ರನದು ಪುನರುಕ್ತಿಯಷ್ಟೆ ! ‘ಹೊಲತಿಯರ ನೆರೆವರೆ’ (8/14), ‘ಹೊಲತಿಯರನಿರಿಸಿಕೊ ಎಂದು ನೀಂ ಕರುಣಿಸಬಹುದೆ’ (8/23), ‘ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿಮಿತ್ತ ಹೋಹವನಲ್ಲ’ (8/20), ‘ಹೊಲೆಯರ ಸಂಗಮಂ ಮಾಡಿ ನಿಷ್ಕಾರಣಂ ಗೋರ ನರಕಾಳಿಯೊಳು ಬಿದ್ದು ಹೊರಳುವವನಲ್ಲ’ (8/27) ‘ಹೊಲತಿಯರ ಕೂಡಿ ನಡೆಯೆಂಬರೇ ಮುನಿಗಳು’ (8/20) ಎಂಬುದಾಗಿ ಪ್ರತಿಮಾತಿನ ಮೂಲಕ ಆ ಅನಾಮಿಕೆಯರನ್ನು ತಿರಸ್ಕರಿಸುತ್ತಾನೆ.
    ಈ ಮೊದಲೇ ಹೇಳಿದಂತೆ ಮಾಯದಬಲೆಯರು ವಿಶ್ವಾಮಿತ್ರನ ಅನೈತಿಕತೆಯ ಸಂತಾನವೇ ಆಗಿದ್ದಾರೆ. ವರ್ಣಧರ್ಮ ಅಂತಹ ವ್ಯಕ್ತಿಗಳ ಜೊತೆ ಸಂಬಂಧ ಬೆಳೆಸುವುದನ್ನು ನಿಷೇಧಿಸಿದೆ. ಈ ಕಾರಣವಾಗಿಯೇ ಹರಿಶ್ಚಂದ್ರ ಮಾತು ಮಾತಿಗೂ ಅವರು ಹೊಲತಿಯರು ಎಂದು ನುಡಿಯುತ್ತಾನೆ. ಅವರು ಬಹುಶಃ ವಿಶ್ವಾಮಿತ್ರನ ಕುಲೀನ ಹೆಣ್ಣುಗಳಾಗಿದ್ದರೆ ಹರಿಶ್ಚಂದ್ರ, ಅವರನ್ನು ಮದುವೆಯಾಗುತ್ತಿದ್ದನೇನೋ ? ಯಾಕೆಂದರೆ ದೇವಿಭಾಗವತದ ಪ್ರಕಾರ ಹರಿಶ್ಚಂದ್ರನಿಗೆ ನೂರು ಜನ ಹೆಂಡತಿಯರಿದ್ದರು. ಇನ್ನಿಬ್ಬರು ಹೆಚ್ಚಾಗುತ್ತಿರಲಿಲ್ಲ ಅಲ್ಲವೇ ?
3. ರಾಘವಾಂಕನ ದೃಷ್ಟಿ : ರಾಘವಾಂಕ ಕೂಡ ಜಾತಿಯ ಬಲೆಯಿಂದ ಹೊರಬಿದ್ದವನಲ್ಲ. ಕಾವ್ಯದ ವಸ್ತು ಹೇಗಿದ್ದರೂ ಅದನ್ನು ನಿರ್ವಹಿಸುವಲ್ಲಿ ಕವಿಯ ಪಾತ್ರ, ಮನೋಸ್ಥಿತಿ ಮುಖ್ಯವಾಗಿರುತ್ತದೆ. ಹೀಗಾಗಿ ಕವಿ ಇಲ್ಲಿ ಮಾಯದಬಲೆಯರ ಮೂಲಕ ಪಾಪದ ಫಲವಾಗಿ ಕೆಳಜಾತಿಯವರು ಹುಟ್ಟುತ್ತಾರೆ ಎಂಬ ವಾದ ಮುಂದಿಡುತ್ತಾನೆ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ (7/22) ಬಂದೆವೆ ಎನ್ನುವ ಮಾಯದಬಲೆಯರ ಮಾತು ಇದನ್ನು ದೃಢಪಡಿಸುತ್ತದೆ. ಆ ಕಾಲದ ವಿಚಾರ ಏನೇ ಇದ್ದರೂ ಕವಿಯ ಮನೋಭಾವ ಶರಣಕ್ರಾಂತಿಯಿಂದ ಪ್ರೇರಿತವಾಗಿದ್ದರೂ ಜಾತಿಯ ಮೇಲು-ಕೀಳಿನ ತಾರತಮ್ಯವನ್ನು ಕವಿ ನಿರಾಕರಿಸುವುದಿಲ್ಲ. ಬಹುಶಃ ರಾಘವಾಂಕನಿಗೆ ಹರಿಹರ ಏಟು ನೀಡಿ ಹಲ್ಲು ಮುರಿದದ್ದು ಈ ಪ್ರಸಂಗದ ಕಾರಣವಾಗಿಯೇ ಇರಬೇಕು. ರಾಘವಾಂಕನನ್ನು ಬಂಡಾಯ ಕವಿ, ಕ್ರಾಂತಿ ಕವಿ ಎಂದು ಹೊಗಳಿದವರು ಈ ವಿಚಾರವನ್ನು ಗಮನಿಸಿದಂತೆ ತೋರುವುದಿಲ್ಲ.
    ರಾಘವಾಂಕನ ಹರಿಶ್ಚಂದ್ರ, ಕಾವ್ಯದ ಕೊನೆಯವರೆಗೂ ಕೂಡ ಜಾತಿಯ ಬಗ್ಗೆ  ಇಟ್ಟುಕೊಂಡಿರುವ  ಮೇಲರಿಮೆಯನ್ನು  ಬಿಟ್ಟುಕೊಡುವುದಿಲ್ಲ. ಕಾಶಿ ಕ್ಷೇತ್ರದಲ್ಲಿ ತನ್ನ ಹೆಂಡತಿ-ಮಗನನ್ನು ಮಾರಿದ ಮೇಲೆ, ಋಣದ ಭಾರ ಕಡಿಮೆಯಾಗದೇ ಇದ್ದಾಗ ತನ್ನನ್ನು ತಾನು ಮಾರಿಕೊಳ್ಳಲು ತಯಾರಾಗುತ್ತಾನೆ. ಆತನನ್ನು ಖರೀದಿಸಲು ಬಂದ  ವೀರಬಾಹುಕನ ‘ಸಂಬಳಿಗೋಲು’ ಕಂಡು ಈತ ಹೊಲೆಯನೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಹರಿಶ್ಚಂದ್ರ ಆತನಿಗೆ ತನ್ನನ್ನು ಮಾರಿಕೊಳ್ಳುವುದಿಲ್ಲ ಎನ್ನುತ್ತಾನೆ.
     
ನಡುಗದಂಜದೆ ಹೆದರದೋಸರಿಸದೆಕಟಕಟ               
ಕಡೆಯ ಹೊಲೆಯು ಮೇರೆದಪ್ಪಿ ಬಂದೆನ್ನ ತ               
ನ್ನೊಡೆಯಂಗೆ ದಾಸನಾಗೀಗಗಳೆಂದೆಂಬುದಿದು ಕಾಲಗುಣವೀ ಎನ್ನನು       
ಎಡೆಗೊಂಡ ಕರ್ಮಫಲವೋ ಕಡೆಗೆ ಮೆಣಸು ಹುಳಿ           
ತಡೆ ಜೋಳದಿಂ ಕುಂದೆ ನೋಡು ನೋಡೆಂದು ಘುಡು ಘುಡಿಸಿ        
ಕೋಪಾಟೋಪದಿಂ ಜರಿದು ಝಕಿಸಿದನವನಿಪನನಾಮಿಕನನು (7/19)
    ಕ್ರಯ ಮಾಡಲು ಬಂದ ಗ್ರಾಹಕನ ಜಾತಿ ಹಿಡಿದು ಭ್ರಾಂತಿ ಕಳೆದುಕೊಂಡಂತೆ ವರ್ತಿಸುವ ಹರಿಶ್ಚಂದ್ರನ ದೃಷ್ಟಿ ಎಷ್ಟೊಂದು ಸಂಕುಚಿತವಾದುದಾಗಿದೆ ಎಂಬುದನ್ನು ಈ ಪದ್ಯ ತಿಳಿಸುತ್ತದೆ. ತಾನೀಗ ರಾಜನಲ್ಲವೆಂದು ಅರಿತೂ  ಪರರಾಜ್ಯದಲ್ಲಿ ಬಂದು ‘ಹೊನ್ನುಳ್ಳ ಧನಿಕರಾರಾದೊಡಂ ಕೊಂಬುವರ್ ಬನ್ನಿ’ ಎಂದು ಕೂಗಿದವನೂ ಹರಿಶ್ಚಂದ್ರನೇ ವೀರಬಾಹುಕ ಹೊಲೆಯ ಎಂದರಿತ ತಕ್ಷಣ ಕನಲುವ ಅವಶ್ಯಕತೆ ಏನಿತ್ತು ? ಇಂಥ ವರ್ತನೆಯನ್ನು ಗಮನಿಸಿಯೇ ವೀರಬಾಹುಕನೂ ಕನಲಿ, ‘ಹದುಳಿಪ್ಪ ನಾನು ಚಾಂಡಾಳನೋ ಹುಸಿಯ ಹೊಲೆಯಿಂ ಹೋರುವ ನೀನು ಚಾಂಡಾಳನೋ’ ಎಂದು ಹೇಳುವ ಮಾತಿನ ಏಟು ಬಹುಶಃ ಹರಿಶ್ಚಂದ್ರನಿಗೆ ತಾಗಿದಂತಿಲ್ಲ. ನುಡಿದಂತೆ ನಡೆಯದ ಹರಿಶ್ಚಂದ್ರ ಸತ್ಯವಂತನೆಂದು ಜಗತ್ತಿಗೆ ಹೇಗೆ ಪರಿಚಯವಾದನೋ ? ಆತನನ್ನು ‘ಹುಸಿಯ ಹೊಲೆಹೊರೆಕಾರ’ ಎಂದು ವೀರಬಾಹುಕ ಸಂಭೋದಿಸಿರುವುದು ಔಚಿತ್ಯಪೂರ್ಣವಾಗಿದೆ.
    ಹರಿಶ್ಚಂದ್ರನಲ್ಲಿಯ ಜಾತಿಯ ಮೇಲರಿಮೆ, ಆತ ತಿನ್ನುವ ಕೂಳಿಗೂ ವ್ಯಾಪಿಸಿದೆ. ಹೆಣದ ಪಡಿಯಕ್ಕಿಯನ್ನು ವೃಷಭಕ್ಕೆ ತಿನ್ನಿಸಿ ಅದು ಹಾಕಿದ ಸೆಗಣಿಯಲ್ಲಿ ಪಚನವಾಗದೇ ಉಳಿದ ಅಕ್ಕಿಯನ್ನು ಆರಿಸಿ ಅನ್ನ ಮಾಡಿ ತಿನ್ನುವ ಆತನ ವರ್ತನೆ ವಿಚಿತ್ರವೆನಿಸುತ್ತದೆ.
    ಜಲ ಪ್ರೋಕ್ಷಿಸಿ ಶುದ್ಧೀಕರಣ ಮಾಡಿದರೆ ಸಾಕು ಎಂದು ಮನುಸ್ಮೃತಿಯೇ ಹೇಳುತ್ತದೆ. ಅದೂ ಅಲ್ಲದೆ ಶುದ್ಧೀಕರಣದ ಅವಶ್ಯಕತೆಯಾದರೂ ಏನು ? ತಾನು ಮಾಡುವ ವೃತ್ತಿಗೆ ಲಭ್ಯತೆಯ ಆಧಾರದ ಮೇಲೆ ಬದುಕಬೇಕೆಂಬ ಕನಿಷ್ಟ ಆಲೋಚನೆಯಾದರೂ ಆತನಿಗೆ ಬೇಡವೇ ? ತಾನು ಮೇಲ್ಜಾತಿಯವ, ಮೇಲಾಗಿ ಅರಸ ಎನ್ನುವ ಮೇಲರಿಮೆ ಆತನಿಂದ ಕಳಚುವುದೇ ಇಲ್ಲ. ಅಂಬಲಿ ಉಣ್ಣುವಾತನಿಗೆ ಮೀಸೆ ತಿಕ್ಕುಲೊಬ್ಬ ಆಳು ಎಂಬಂತೆ ವೀರಬಾಹುಕನ ಆಳಾಗಿ ದುಡಿಯುವ ಹರಿಶ್ಚಂದ್ರನ ಸೇವೆ (ಕೈ-ಕಾಲು ಒತ್ತುವುದು, ಗೋಮಯ ಅಕ್ಕಿಯನ್ನು ಆರಿಸಿ ತರುವುದು ಇತ್ಯಾದಿ) ಮಾಡಲು ಸತ್ಯಕೀರ್ತಿ ಎಂಬ ಮಂತ್ರಿ  ಇದ್ದೇ ಇರುತ್ತಾನೆ. ತನ್ನನ್ನು ತಾನು ಮಾರಾಟ ಮಾಡಿಕೊಳ್ಳದೇ ಸತ್ಯಕೀರ್ತಿಯನ್ನು ಮಾರಿದ್ದರೂ ನಡೆಯುತ್ತಿತ್ತಲ್ಲವೇ ? ಬೆಂಕಿಗೆ ಆಹುತಿಯಾಗಲು ನಾ ಮೊದಲೆಂದು ಮುನ್ನುಗ್ಗುವ ಸತ್ಯಕೀರ್ತಿ ಮಾರಾಟದ ವಸ್ತುವಾಗಲು ಹರಿಶ್ಚಂದ್ರನ ಮಾತಿಗೆ ಇಲ್ಲವೆನ್ನುತ್ತಿದ್ದನೇ ?
    ಎಲ್ಲ ನಿಟ್ಟಿನಿಂದ  ನೋಡಿದಾಗಲೂ ಹರಿಶ್ಚಂದ್ರ ಸತ್ಯವಂತ ಎಂಬುದಾಗಲೀ ಆದರ್ಶ ಅರಸನಾಗಿಯಾಗಲೀ ಕಾಣಿಸುವುದೇ ಇಲ್ಲ. ಒಬ್ಬ ಮೇಲ್ಜಾತಿಯ ಕನವರಿಕೆಯಲ್ಲಿ ಮತಿವಿಕಲ್ಪಕ್ಕೆ ಒಳಗಾದ ವ್ಯಕ್ತಿಯಂತೆ ಕಾವ್ಯದಲ್ಲಿ ಆತನ ವರ್ತನೆ ಸ್ಪಷ್ಟವಾಗಿ ಬಿಂಬಿತವಾಗಿದೆ.                
               
                                        *******

Tuesday, January 08, 2013

ಡಾ. ಅಂಬೇಡ್ಕರ್ ಮತ್ತು ನಂತರ.....


                               ಡಾ. ಸಿದ್ರಾಮ ಕಾರಣಿಕ 


ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೌಲ್ವಿಕ ನೀತಿತತ್ವಗಳನ್ನು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಹೇಳುವ ಹೇರಳ ಜನ, ಆಚರಣೆ ಸಂದರ್ಭದಲ್ಲಿ ಮಾತ್ರ ಇರುವುದೇ ಇಲ್ಲ. ಸಂಪ್ರದಾಯಶೀಲ ಭಾರತದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿಯ ಹಲವು ಮುಖಗಳೇ ಮುಂದುವರಿದುಕೊಂಡು ಬಂದಿವೆ. ಇಂಥ ಹಲವು ವಿಕೃತಿಗಳಲ್ಲಿ ಜಾತಿಸೃಷ್ಟಿ ಕೂಡ ಒಂದು. ಜಾತಿ ವಿನಾಶದ ಹಾದಿಯಲ್ಲಿ ಹಲವಾರು ಸಂತರು, ಶರಣರು, ವಿಚಾರವಾದಿಗಳು, ಮಹಾತ್ಮರು, ಮುನ್ನಾಳುಗಳು ಹೋರಾಟ ಮಾಡಿದ್ದಾರೆ. ಆ ಹೋರಾಟಗಳ ಫಲ ಒಂದಿಷ್ಟು ಜಾಗೃತಿಯನ್ನೂ ಜನರಲ್ಲಿ ತುಂಬಿದ್ದು ನಿಜ. ಆದರೆ ಜಾತಿಯೆಂಬ ಭೂತ ವಿವಿಧ ರೂಪಗಳಲ್ಲಿ ಮತ್ತೇ ಮತ್ತೇ ಮುಖದೋರುತ್ತ ಹೇಂಕರಿಸುತ್ತಲೇ ಇದೆ. ಭಾರತ ದೇಶದಲ್ಲಿ ಈ ಜಾತಿಯ ಕಾರಣದಿಂದಲೇ ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು ಇನ್ನೂ ಬದುಕುಳಿದು ಭೂತಾಕಾರವಾಗಿ ಬೆಳೆಯುತ್ತಲೇ ಇವೆ ; ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.
    ಡಾ. ಬಾಬಾಸಾಹೇಬ ಅಂಬೇಡ್ಕರ್ ರು ಈ ಜಾತಿ ವಿನಾಶಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದವರು. ಹಿಂದೂ ಧರ್ಮದ ಸನಾತನ ಸಂಪ್ರದಾಯವನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಟುವಾಕ್ಯಗಳಿಂದ ಆ ಧರ್ಮದ ಅಂತರಂಗದಲ್ಲಿದ್ದ ಕೊಳಕನ್ನು ಬಿಚ್ಚಿಟ್ಟಿದ್ದಾರೆ. ಈ ಧರ್ಮದಲ್ಲಿ ಅ
ಸ್ಪೃಶ್ಯರೆನ್ನಿಸಿಕೊಂಡವರ ಬದುಕು ಹಸನಾಗಲು, ಅವರೆಲ್ಲ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲು ತಮ್ಮ ಕೊನೆ ಉಸಿರಿನವರೆಗೆ ಕ್ರಿಯಾಶೀಲರಾಗಿದ್ದ ಮಹಾನ್ ನೇತಾರ ಡಾ. ಬಾಬಾಸಾಹೇಬ ಅಂಬೇಡ್ಕರರು. ಅಸ್ಪೃಶ್ಯ ಅನುಭವಗಳಿಂದ ರೊಚ್ಚಿಗೆದ್ದ ಅವರು ಅಸ್ಪೃಶ್ಯನ ಗೋಳನ್ನು ಸ್ವತಃ ಕಂಡುಂಡವರು.
    `ಇಡೀ ದೇಶದ ಮೂಲೆ ಮೂಲೆ ಬಿಡದೆ ಎಲ್ಲೆಲ್ಲೂ ಅ
ಸ್ಪೃಶ್ಯನೆಂಬುವನು ಆತಂಕವನ್ನೆದುರಿಸುತ್ತಾನೆ. ಪಕ್ಷಪಾತಕ್ಕೆ ಸಿಕ್ಕು ನರಳುತ್ತಾನೆ. ಇಂಡಿಯಾದ ಈ ಅವಕಾಶಹೀನ ನಿರ್ಭಾಗ್ಯನಿಗೆ ಎಲ್ಲ ಕಡೆಯೂ ಅನ್ಯಾಯವೇ ಎದುರಾಗುತ್ತದೆ. ಸುತ್ತು ಕೋಟಲೆಗಳ ನೆರೆಯಲ್ಲಿ ಮೈ ಮುರಿದು ಗೆಯ್ಯುವ ಅಸ್ಪೃಶ್ಯರಿಗೆ ಮಾತ್ರವೇ ಈ ಕಟುಸತ್ಯ ಅರಿವಾಗಲು ಸಾಧ್ಯ.'1 ಎನ್ನುವ ಮೂಲಕ, ಅವರು ಈ ಅನುಭವಗಳ ಮೂಲಕವೇ ಎಚ್ಚರಾಗಿ ಎದ್ದು ನಿಂತು ತಮ್ಮ ಮೇಲೆ ನಡೆಯುವ ಅನ್ಯಾಯವನ್ನು ಮೆಟ್ಟಿ ನಿಲ್ಲಲು  ಅಸ್ಪೃಶ್ಯರು ಸಿದ್ಧರಾಗಬೇಕು ಎಂದು ಕರೆ ನೀಡುತ್ತಾರೆ. ಯಾಕೆಂದರೆ ಯಾವ ಮಹಾತ್ಮಾನಾಗಲೀ ಜಗದ್ಗುರುವಾಗಲೀ ನಿಮ್ಮನ್ನು ಉದ್ಧಾರ ಮಾಡಲಾರರು ; ನಿಮ್ಮ ಉದ್ಧಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕು ಎಂಬುದು ಅವರ ಸ್ಪಷ್ಟ ವಿಚಾರವಾಗಿತ್ತು. 
    ಜಾತಿಯಿಂದ ಮೇಲು ಎಂದುಕೊಂಡು ಮೆರೆಯುವ ಮಂದಿಗೂ ಕೂಡ ಡಾ. ಬಾಬಾಸಾಹೇಬ ಅಂಬೇಡ್ಕರರು ಎಚ್ಚರಿಕೆ ನೀಡುತ್ತಾರೆ : `ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿ ಸಾಧಿಸಲಾರಿರಿ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ, ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ, ಜಾತಿಯ ತಳಗಳನ್ನಿಟ್ಟುಕೊಂಡು ನೀವು ಏನನ್ನೂ ಕಟ್ಟಲಾರಿರಿ, ರಾಷ್ಟ್ರವನ್ನು ನಿರ್ಮಿಸಲಾರಿರಿ, ನೀತಿಯನ್ನು ನೆಲೆಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಅದು ಏನೇ ಆಗಿರಲಿ ಬಿರುಕು ಬಿಡುವುದು ; ಅಖಂಡವಾಗಿ ಉಳಿಯಲಾರದು.'2
    ಈ ಮಾತು ಕೆಲವರಿಗಾದರೂ ತಟ್ಟಿರಬಹುದು. ಜಾತಿಯ ಬಲೆಯಿಂದ ಬಿಡಿಸಿಕೊಂಡು ಹೊರಬರಲು ಬಹಳಷ್ಟು ಜನರಿಗೆ  ಸಾಧ್ಯವಾಗಲೇ ಇಲ್ಲ. ಅದು ಇಂದಿನವರೆಗೂ ಸಾಧ್ಯವಾಗಿಲ್ಲ ಎಂದರೆ  ಅಚ್ಚರಿ ಪಡುವ ಇಲ್ಲ. ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆಯಾಗುವುದು ಸಾಧ್ಯವೇ ಇಲ್ಲ ಎಂಬುದನ್ನು  ಮನಗಂಡ ಡಾ. ಬಾಬಾಸಾಹೇಬರು ಹೋರಾಟವನ್ನು ತೀವ್ರಗೊಳಿಸಿದರು. `ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು .............. ಹಿಂದೂ ಧರ್ಮವು ಸ್ವತಃ ಅಸ್ಪøಶ್ಯರ ವಿರುದ್ಧ ಅಸಮಾನತೆ ಹಾಗೂ ಅನ್ಯಾಯಗಳ ಸಾಕಾರ ರೂಪವಾಗಿದೆ. ಅದು ನ್ಯಾಯದ ಬಗ್ಗೆ ಉಪದೇಶ ನೀಡಿದರೆ ತನ್ನ ಅಸ್ತಿತ್ವದ ವಿರುದ್ಧ ಹೋದಂತೇ. ಇದು ಸಾಧ್ಯವಾಗುತ್ತದೆ ಎಂದು ಕನಸು ಕಾಣುವುದೂ ಒಂದೇ ಪವಾಡಕ್ಕೆ ಕಾಯುವುದೂ ಒಂದೇ'3
    ಹಿಂದೂ ಧರ್ಮದ ಕುತಂತ್ರ ಮತ್ತು ಒಳಸಂಚಿನ ವಿನ್ಯಾಸಗಳನ್ನು ಅಧ್ಯಯನ ಮಾಡಿ, ಅನುಭವದ ಮೂಲಕ ಕಂಡುಕೊಂಡ ಸತ್ಯ ಇದಾಗಿತ್ತು. ಡಾ. ಬಾಬಾಸಾಹೇಬರಿಗೆ ಹಿಂದೂ ಧರ್ಮದಲ್ಲಿರುವ ಪೊಳ್ಳುತನ, ನಯವಂಚಕತೆ ಮತ್ತು ಮೋಸಗಾರಿಕೆಗಳ ಪರಿಪೂರ್ಣ ಪರಿಚಯವಾಗಿತ್ತು. ಹೀಗಾಗಿಯೇ ಹೇಸಿಗೆ ಹುಟ್ಟಿಸುವಷ್ಟು ತಾರತಮ್ಯ ಹೊಂದಿದ ಸಮಾಜದ ವರ್ತನೆಯಿಂದ ಬೇಸತ್ತು ಅ
ಸ್ಪೃಶ್ಯರು ಹಿಂದೂಗಳಲ್ಲ ಎಂದು ಘೋಷಿಸಿಯೇ ಬಿಟ್ಟರು.
    `ಅ
ಸ್ಪೃಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳಿಗೆ ತಾವು ಮತ್ತು ಅಸ್ಪೃಶ್ಯರು ಒಂದೇ ಸಮಾಜಕ್ಕೆ ಸೇರಿದವರು ಎಂಬ ಭಾವನೆ ಬರುವುದಿಲ್ಲ. ಈ ಕಾರಣದಿಂದಾಗಿಯೇ ಅಸ್ಪೃಶ್ಯರೊಂದಿಗಿನ ಹಿಂದೂಗಳ ನಡವಳಿಕೆಯಲ್ಲಿ ಯಾವ ನೈತಿಕ ಕಾಳಜಿಗಳಿಲ್ಲದ ಅಸಡ್ಡೆ ವ್ಯಕ್ತವಾಗುತ್ತದೆ'4 ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹೀಗಾಗಿಯೇ ಹಿಂದೂ ಧರ್ಮ ತಮ್ಮದು ಎಂದು ಹೇಳಿಕೊಳ್ಳಲು ಯಾವ ಹೆಮ್ಮೆಯೂ ಇಲ್ಲ ; ಅದು ಸಾವಿನ ಪಾಶ ಎಂಬ ಅರಿವಿನಿಂದ ಹಿಂದೂ ಧರ್ಮವನ್ನು ತೊರೆಯಲು ಸಿದ್ಧರಾದರು. ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಎಂಬ ಹಣೆಪಟ್ಟಿ ಹೊತ್ತುಕೊಂಡ ರಾಜಕೀಯ ಪಕ್ಷವೊಂದರ ಪುಢಾರಿಯೊಬ್ಬ `ಡಾ. ಅಂಬೇಡ್ಕರರು ಹಿಂದೂ ಧರ್ಮದ ನಿಜವಾದ ಹೀರೋ' ಎಂಬ ಪ್ರಚಾರಕ್ಕೆ ತೊಡಗಿದ್ದ ! ಡಾ. ಬಾಬಾಸಾಹೇಬರನ್ನು ಅರ್ಥ ಮಾಡಿಕೊಳ್ಳಲಾರದ ಮೂರ್ಖತನವನ್ನು ಇದು ಸೂಚಿಸುತ್ತದೆ.
    ಸಮಾಜದಲ್ಲಿ ದಸ್ಯುಗಳಿಗಿಂತಲೂ ಕೀಳಾಗಿ ಅನ್ಯಾಯ, ಅವಮಾನ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದ ಅ
ಸ್ಪೃಶ್ಯರು, ಸನಾತನ ಹಿಂದೂ ಧರ್ಮದ ವಿಚಾರದಲ್ಲಿ  ಧರ್ಮಬಾಹಿರರು. ಇದ್ದೂ ಸತ್ತಂತೆ ಬದುಕುವುದಕ್ಕಿಂತ, ತಲೆಯೆತ್ತಿ ನಿಂತು, ಸ್ವಾಭಿಮಾನದೊಂದಿಗೆ  ಬದುಕುವ  ದಾರಿಯನ್ನು  ಡಾ. ಬಾಬಾಸಾಹೇಬರು ಹುಡುಕುತ್ತಿದ್ದರು. ಹಿಂದೂಗಳಲ್ಲಿ ಇರುವ ಕೊಳಕುತನ, ಕುಗೇಡಿತನ, ಕೊಳ್ಳುಬಾಕತನ ಮೊದಲಾದವುಗಳಿಂದ ಹೇಸಿಕೊಂಡ ಡಾ. ಬಾಬಾಸಾಹೇಬರು ಅಂಥ ಹೊಲಸಿನಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸುತ್ತಾರೆ ; ಹೊಸ ಬದುಕಿಗೆ ಹಾರೈಸುತ್ತಾರೆ.
    `ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನಪೂರ್ತಿ ಹೊಸದಾಗಬೇಕು. ಆದರೆ ಹೊಸ ಜೀವ ಹೆಣದ ದೇಹದಲ್ಲಿ ಹೋಗಲಾರದು. ಹೊಸ ಜೀವನಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವನ ಹುಟ್ಟಿ ಮಿಡಿಯಬೇಕಾದರೆ ಹಳೆಯದು ನಿಷ್ಕ್ರಿಯವಾಗಿ ಹೋಗಬೇಕು'5 ಎಂಬ ವಿಚಾರವನ್ನು ಪ್ರತಿಪಾದಿಸಿ ಅಂತಿಮವಾಗಿ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು.
    ಹಿಂದೂ ಧರ್ಮದಲ್ಲಿನ ಯಥಾಸ್ಥಿತಿವಾದ ಮತ್ತು ಸೋಗಲಾಡಿತನದಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರು ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಅದು ಅವರಿಗೆ ಅಂದಿನ ಅನಿವಾರ್ಯವೂ ಆಗಿತ್ತು. ಜಾತಿಯ ಸೂತಕದಿಂದ ಮುಕ್ತವಾಗಿ ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂದುಕೊಂಡ ಬಹಳಷ್ಟು ಅ
ಸ್ಪೃಶ್ಯರು ಡಾ. ಬಾಬಾಸಾಹೇಬಕಾಲದಲ್ಲಿ ಮತ್ತು ಆನಂತರದಲ್ಲಿ ಬೌದ್ಧ ಧರ್ಮವನ್ನು ಸೀಕರಿಸಿದರು ; ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ; ಇನ್ನೂ ಕೆಲವರು ಇಸ್ಲಾಂ ಧರ್ಮವನ್ನೂ ಅವಲಂಬಿಸಿದರು. ಇದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ವಾಸ್ತವ ಚಿತ್ರಣವನ್ನು ಗಮನಿಸಿದಾಗ ಹೀಗೆ ಮತಾಂತರವಾಗುತ್ತಿರುವವರು ಅತಂತ್ರರಾಗುತ್ತಿರುವುದು ಕಂಡು ಬರುತ್ತದೆ.
    ಭಾರತೀಯ ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿಯೂ ಕೂಡ ಜಾತಿಯ ಬೇರುಗಳು ಗಟ್ಟಿಗೊಳ್ಳುತ್ತಿವೆ. ಇದಕ್ಕೆ ಹಿಂದೂ ಧರ್ಮದ ಪ್ರಭಾವವೂ ಕಾರಣವಾಗಿರಬಹುದು. ಮತಾಂತರಗೊಂಡವರು ಅಲ್ಲಿ ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತಿದ್ದಾರೆ. ನವ ಬೌದ್ಧ, ನವ ಕ್ರಿಶ್ಚಿಯನ್ ಎನ್ನುವುದಾಗಲಿ ಅಥವಾ ದಲಿತ ಬೌದ್ಧರು, ದಲಿತ ಕ್ರಿಶ್ಚಿಯನ್ನರು ಎನ್ನುವುದಾಗಲಿ ಮೇಲು ನೋಟಕ್ಕೆ ಕಾಣಿಸಿಕೊಳ್ಳುವ ಪ್ರತ್ಯೇಕೀಕರಣಗಳು ! ಡಾ. ಬಾಬಾಸಾಹೇಬ ಅಂಬೇಡ್ಕರರು ಕಂಡ ಕನಸು ಇಂಥಲ್ಲಿ ನನಸಾಗದು. ಇಂಥ ಗೊಂದಲಗಳು ಅ
ಸ್ಪೃಶ್ಯರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಖಂಡಿತವಾಗಿಯೂ ಕಾಲ್ತೊಡಕುಗಳಾಗುತ್ತವೆ.
    ಹಿಂದೂ ಧರ್ಮದಲ್ಲಿನ ಜಾತಿ, ಮತಾಂತರಗೊಂಡ ಧರ್ಮದಲ್ಲಿನ ಪ್ರತ್ಯೇಕತೆ ಕಂಗೆಡಿಸುವ ಸಂಗತಿಗಳೇ ಆಗಿವೆ. ಹೀಗೆಂದುಕೊಂಡು ತೀರ ಹತಾಶರಾಗಬೇಕಾದ ಕಾರಣಗಳಿಲ್ಲ. ಇಂದು ಶಿಕ್ಷಣ ಮುಕ್ತವಾಗಿದೆ. ಅಕ್ಷರದ ಅರಿವಿನ ಮೂಲಕ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಜ್ಞಾವಂತರಾಗಬೇಕು. ಒಳಜಾತಿಗಳಲ್ಲಿ ಇರುವ ಭೇದ ಮರೆತು, ಸಂಬಂಧಗಳನ್ನು ಬೆಸೆಯಬೇಕು ; ಏಕತ್ವವನ್ನು ಸಾಧಿಸಬೇಕು. ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದೆ ಅವಕಾಶಗಳನ್ನು ಬಳಸಿಕೊಂಡು ಉನ್ನತಿಗೆ ಏರಬೇಕು. ರಾಜಕೀಯ ಶಕ್ತಿ ಪಡೆಯಬೇಕು. ಯಾರ ಕೃಪೆ, ದಾನಕ್ಕೆ ತಲೆಬಾಗದೇ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು. ಹೀಗಾದಾಗ ಮಾತ್ರ ಡಾ. ಬಾಬಾಸಾಹೇಬರು ಕಂಡ ಕನಸನ್ನು ನನಸು ಮಾಡುವುದರತ್ತ ಒಂದು ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.
ಅಡಿ ಟಿಪ್ಪಣಿಗಳು :
1. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು- 164
2.
ಅದೇ :
: ಪು-93
3. ಅದೇ : ಪು-529
4. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-5 : ಪು-150
5. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು-108
                                                                   *****

Sunday, November 04, 2012

ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಎಂಬ ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ !



- ರಘೋತ್ತಮ ಹೊ.ಬ, ಚಾಮರಾಜನಗರ

ಇತ್ತೀಚೆಗೆ ಅಥವಾ 1950 ಜನವರಿ 26ರಿಂದಲೂ ಈ ದೇಶದಲ್ಲಿ ಒಂದು ಷಡ್ಯಂತ್ರ ನಡೆಯುತ್ತಾ ಬಂದಿದೆ. ಅದು ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಎಂಬ ಪಟ್ಟದಿಂದ ಕೆಳಕ್ಕಿಳಿಸುವುದು! ಅರುಣ್ ಶೌರಿ ಇರಬಹುದು ಅಥವಾ ಮತ್ಯಾರೋ ಆರ್ಯ ಶೂರ ಇರಬಹುದು, ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ. ಅಂಬೇಡ್ಕರ ರಿಂದ ಸಂವಿಧಾನ ಶಿಲ್ಪಿ ಎಂಬ ಟೈಟಲ್ಲನ್ನು ಕಿತ್ತುಕೊಳ್ಳುವುದು ಅಥವಾ ಅವರು ಸಂವಿಧಾನ ಬರೆದೇ ಇಲ್ಲ ಎಂದು ಸಾಧಿಸಿ ತೋರಿಸುವುದು!

ಇದು ಎಷ್ಟು ಸಾಧ್ಯ? ಅಥವಾ ಎಷ್ಟು ಅಸಾಧ್ಯ? ಅದನ್ನು ಕಾಲವೇ ನಿರ್ಣಯಿಸುತ್ತಿದೆ. ಯಾಕೆಂದರೆ ಹಿಂದೆಲ್ಲಾ ಇದು ಅಂದರೆ ಅವರು ಇವರು ಎನ್ನುವುದು ಅಥವಾ ಇವರು ಅವರೇ ಅಲ್ಲ ಎಂದು ಸಾಧಿಸಿ ತೋರಿಸುವುದು ಅಥವಾ ಸಾಧಿಸಿಯೇ ಬಿಡುವುದು ಆಗಾಗ ನಡೆಯುತ್ತಾ ಬಂದಿದೆ. ಉದಾ: ಬುದ್ಧನನ್ನು ವಿಷ್ಣು ಎನ್ನುವುದು, ಶಿವಾಜಿಯನ್ನು ಮುಸ್ಲಿಂ ದ್ವೇಷಿ ಎನ್ನುವುದು ಇತ್ಯಾದಿ.

ಹಾಗಿದ್ದರೆ ಹೀಗೆಯೇ ಅಂದರೆ ಬುದ್ಧನನ್ನು ವಿಷ್ಣು ಎಂದ ಹಾಗೆ ಸಂವಿಧಾನ ಶಿಲ್ಪಿ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸಲು ಸಾಧ್ಯವೇ? ಜನಸಾಮಾನ್ಯರೆ ಇದನ್ನು ತೀರ್ಮಾನಿಸಬೇಕು.ಯಾಕೆಂದರೆ ತಮಗೆ ಬೇಕೆಂದವರನ್ನು ಇಂದ್ರ ಚಂದ್ರ ಎನ್ನುವುದು, ತಮಗೆ ಬೇಡ ಎಂದವರನ್ನು ಹೀಗಳೆವುದು, ಇದು ಈ ದೇಶದ ಬ್ರಾಹ್ಮಣವಾದಿ ಚರಿತ್ರಕಾರರು ಮಾಡಿಕೊಂಡು ಬಂದಿರುವ ಪದ್ಧತಿ. ಅಂತಹ ಪದ್ಧತಿಯ ಮುಂದುವರಿದ ಭಾಗವಾಗಿಯೇ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಅಲ್ಲ ಎಂದು ಸಾಧಿಸುವ ಈ ವ್ಯರ್ಥಾಲಾಪ. ಅಂದಹಾಗೆ ಅದುನಡೆದಿರುವುದು ಸುಭಾಷ್ ಕಶ್ಯಪ್ ಎಂಬ ಸಂವಿಧಾನ ತಜ್ಞ ಎನಿಸಿಕೊಂಡವರು ಬರೆದಿರುವ “Our Constitution”  ಎಂಬ ಕೃತಿಯಲ್ಲಿ.ಹಾಗೆ ಸಾಧಿಸ ಹೊರಟವರು ಮೊದಲು ಹೇಳುವುದು ಸಂವಿಧಾನದ ಪ್ರಥಮ ಕರಡನ್ನು ಸಿದ್ಧಪಡಿಸಿದವರು ಬಿ.ಎನ್.ರಾವ್ ಎಂಬವವರು ಎಂದು!

ಅಂದರೆ ಆಗಸ್ಟ್ 29, 1947ರಂದು ಕರಡು ಸಮಿತಿ ರಚಿಸಲ್ಪಟ್ಟರೆ ಅದು ರಚಿಸಲ್ಪಟ್ಟ ಒಂದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ 1947ರಲ್ಲಿ ಅದರ ಸದಸ್ಯರಲ್ಲೋರ್ವರಾದ ಬಿ.ಎನ್.ರಾವ್‌ರವರು ಪ್ರಥಮ ಕರಡು ರಚಿಸಿದರಂತೆ, ಅವರು ರಚಿಸಿದ ಕರಡನ್ನು ಅಂಬೇಡ್ಕರ್ ನೇತೃತ್ವದ ಸಮಿತಿ ಬರೀ ಪರಿಶೀಲಿಸಿತಂತೆ! ಇದು ಸುಭಾಷ್ ಕಶ್ಯಪ್‌ರಂತಹ ಬ್ರಾಹ್ಮಣ ಚರಿತ್ರಾಕಾರರ ಅಂಬೋಣ. ಆದರೆ ಅದೇ ಸುಭಾಷ್ ಕಶ್ಯಪ್ ತಮ್ಮ“Our Constitution” ಕೃತಿಯ ಅದೇ ಪುಟಗಳಲ್ಲಿ ಅಂಬೇಡ್ಕರರ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾರೆ.

ಆ ಹೇಳಿಕೆಯಲ್ಲಿ ಸ್ವತಃ ಅಂಬೇಡ್ಕರರೇ 1947 ಆಗಸ್ಟ್‌ರಿಂದ 1949 ಅಕ್ಟೋಬರ್‌ವರೆಗೆ ಕರಡು ಸಮಿತಿ ಅನೇಕ ಸಭೆಗಳನ್ನು ನಡೆಸಿ ಸಂವಿಧಾನದ ಕರಡಿನ ಅಂತಿಮ ಪ್ರತಿಯನ್ನು 1949 ನವೆಂಬರ್ ತಿಂಗಳಲ್ಲಿ ಸಂವಿಧಾನ ಸಭೆಗೆ ಸಲ್ಲಿಸಿತು ಎನ್ನುತ್ತಾರೆ. ಹಾಗಿದ್ದರೆ 1949 ನವೆಂಬರ್ ತಿಂಗಳಲ್ಲಿ, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಸಂವಿಧಾನ ಸಿದ್ಧಗೊಂಡಿತೆಂದರೆ ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರಿಗೆ ತಾನೆ? ಅಂದಹಾಗೆ 1947ರ ಆರಂಭದಲ್ಲಿ ಕೇಳಿಬರುವ ಬಿ.ಎನ್.ರಾವ್ ಎಂಬವವರ ಹೆಸರು ಸಂವಿಧಾನ ರಚಿಸಲು ತೆಗೆದುಕೊಂಡ ಮುಂದಿನ ಆ ಎರಡು ವರ್ಷಗಳ ಸಮಯದಲ್ಲಿ ಅಂದರೆ 1948, 1949ರಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ! (ಇತ್ತೀಚೆಗೆ ಹಿಂದುತ್ವವಾದಿಗಳಿಂದ ಕೇಳಿ ಬರುತ್ತಿರುವುದನ್ನೊರತು ಪಡಿಸಿದರೆ!).

ಇದಕ್ಕೆ ಪೂರಕವಾಗಿ ಸಂವಿಧಾನ ಸಭೆಯಲ್ಲಿ ಮಾತನಾಡಿರುವ ಸಮಿತಿಯ ಸದಸ್ಯ ಟಿ.ಟಿ.ಕೃಷ್ಣಮಾಚಾರಿಯವರು ಹೇಳಿರುವುದನ್ನು ನೋಡಿ ಸಂವಿಧಾನದ ಕರಡು ಸಮಿತಿಯಲ್ಲಿದ್ದ ಒಬ್ಬರು ತೀರಿಕೊಂಡರು, ಅವರ ಸ್ಥಾನಕ್ಕೆ ಮರುನೇಮಕ ಆಗಲಿಲ್ಲ. ಒಂದಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರಿಗೆ ಕರಡು ರಚನೆ ಕಾರ್ಯದಲ್ಲಿ ಭಾಗವಹಿಸಲಾಗಲಿಲ್ಲ. ಮಗದೊಬ್ಬರು ಸದಸ್ಯರು ದಿಲ್ಲಿಯಿಂದ ದೂರದಲ್ಲಿದ್ದುದರಿಂದ ಅವರು ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಸಂವಿಧಾನ ರಚನೆಯ ಪೂರ್ಣ ಜವಾಬ್ದಾರಿ ಅಂಬೇಡ್ಕರರ ಮೇಲೆ ಬಿದ್ದಿತು. ಅಂದಹಾಗೆ ಕೃಷ್ಣಾಮಾಚಾರಿಯವರ ಹೇಳಿಕೆಯ ಪ್ರಕಾರ ಸುಭಾಷ್ ಕಶ್ಯಪ್‌ರವರು ಹೇಳಿರುವ ಕರಡು ಸಮಿತಿ ಸದಸ್ಯರಾದ ಆ ಬಿ.ಎನ್.ರಾವ್ ಎಲ್ಲಿ ಹೋದರು? ವಿದೇಶಕ್ಕೋ ಅಥವಾ ನೇರ ಸ್ವರ್ಗಕ್ಕೋ?

ಅಂಬೇಡ್ಕರರು ಸಂವಿಧಾನ ಶಿಲ್ಪಿ ಅಲ್ಲ ಎಂದು ಹೇಳುವವರು ಇದನ್ನು ಸ್ಪಷ್ಟಪಡಿಸಬೇಕು.ಸಂವಿಧಾನ ಅರ್ಪಿತವಾದ ಆ ಸಂಧರ್ಭದಲ್ಲಿ ಅಂದರೆ ನವೆಂಬರ್ 26,1949ರಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ಪ್ರಸಾದ್‌ರವರು ಡಾ.ಅಂಬೇಡ್ಕರ್‌ರವರಿಗೆ ಸಂವಿಧಾನ ರಚಿಸಲು ಪೂರ್ಣ ಸ್ವಾತಂತ್ರ ನೀಡಿದ್ದಿದ್ದರೆ, ಅವರು ಖಂಡಿತವಾಗಿಯೂ ತಮ್ಮದೇ ಆದ ಮತ್ತು ಭಿನ್ನವಾದ ಸಂವಿಧಾನವನ್ನು ಈ ದೇಶಕ್ಕೆ ನೀಡುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಂದಹಾಗೆ ರಾಜೇಂದ್ರ ಪ್ರಸಾದರ ಈ ಹೇಳಿಕೆ ಅರ್ಥೈಸುವುದೇನನ್ನು? ಸಂವಿಧಾನ ರಚಿಸುವ ಪೂರ್ಣ ಹೊಣೆ ಅಂಬೇಡ್ಕರರ ಮೇಲೆ ಬಿದ್ದಿತ್ತು ಆದರೆ ಅವರಿಗೆ ಕೆಲವು ತಡೆಗಳಿದ್ದವು ಎಂದು ತಾನೆ? ಅದೇನೆ ಇರಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದು ಘಂಟಾಘೋಷವಾಗಿ ಹೇಳಲು ಡಾ.ಬಾಬು ರಾಜೇಂದ್ರಪ್ರಸಾದ್ ಮತ್ತು ಟಿ.ಟಿ.ಕೃಷ್ಣಾಮಾಚಾರಿಯವರ ಇದಿಷ್ಟು ಹೇಳಿಕೆ ಮಾತ್ರ ಸಾಕು.

ಯಾಕೆಂದರೆ ಇವರಿಬ್ಬರು ಸಂವಿಧಾನದ ರಚನೆಯ ಜೊತೆ ಜೊತೆಯಲ್ಲೆ ಬೆಳೆದವರು, ಅರುಣ್ ಶೌರಿ ಮತ್ತು ಸುಭಾಷ್ ಕಶ್ಯಪ್‌ರ ಹಾಗೆ ಅದನ್ನು ಅದರ ಇತಿಹಾಸವನ್ನು ದೂರದಿಂದ ಹಿಂದುತ್ವದ ದೃಷ್ಟಿಯಿಂದ ಕೆದಕಿದವರಲ್ಲ! ಮುಂದುವರಿದು ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯದ ಬಗ್ಗೆ ಆಕ್ಷೇಪಿಸುವವರು ಹೇಳುವುದು ಸಂವಿಧಾನ ಎಂಬುದು ಕತೆಯಲ್ಲ, ಕಾದಂಬರಿಯಲ್ಲ ಅದನ್ನು ಅಂಬೇಡ್ಕರರೊಬ್ಬರೇ ಬರೆದಿದ್ದಾರೆ ಎನ್ನುವುದು ಎಷ್ಟು ಸರಿ? ಎಂದು. ನಿಜ, ಸಂವಿಧಾನ ಕತೆಯಲ್ಲ, ಕಾದಂಬರಿಯೂ ಅಲ್ಲ. ಹಾಗೆಯೇ ಸ್ವಾತಂತ್ರ ಎಂಬುದೂ ಕೂಡ ಕಡ್ಲೆಪುರಿಯಲ್ಲ! ಏಕೆಂದರೆ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ.

ಇದನ್ನು ಯಾರೂ ಗಾಂಧೀಜಿ ಸ್ವಾತಂತ್ರವನ್ನು ಯಾವಾಗ, ಯಾವ ಟೈಮಲ್ಲಿ, ಯಾರ ಕೈಗೆ ತಂದುಕೊಟ್ಟರು ಎಂದು ಎಲ್ಲಿಯೂ ಪ್ರಶ್ನಿಸುವುದಿಲ್ಲ! ಅಂಬೇಡ್ಕರ್‌ರವರು ರಚಿಸಿದ ಸಂವಿಧಾನಕ್ಕೆ ಸಾಕ್ಷಿಯಾಗಿ ಸಂವಿಧಾನದ ಆ ಮೂಲ ಪ್ರತಿ ಇದೆ. ಅದರ ರಚನೆಯ ಹೊಣೆ ಹೊತ್ತ ಕರಡು ಸಮಿತಿಯ ಅಧ್ಯಕ್ಷರು ಅವರು ಎಂಬುದಕ್ಕೆ ದಾಖಲೆ ಇದೆ. ಆದರೆ ಗಾಂಧೀಜಿ ಸ್ವಾತಂತ್ರ ತಂದುಕೊಟ್ಟರೆಂಬುದಕ್ಕೆ ಏನು ದಾಖಲೆ ಇದೆ? ಹಾಗೆ ಹೇಳುವುದಾದರೆ ದೇಶಕ್ಕೆ ಸ್ವಾತಂತ್ರ ಬಂದ ದಿನ ಗಾಂಧೀಜಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಇರಲೇ ಇಲ್ಲ. ದೂರದ ಕಲ್ಕತ್ತಾದಲ್ಲಿ ಇದ್ದರು! ಹಾಗಿದ್ದರೂ ಈ ದೇಶ ಅವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಒಪ್ಪಿಕೊಂಡಿಲ್ಲವೆ?

ಗಾಂಧೀಜಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂಬುದನ್ನು ಒಪ್ಪಿಕೊಳ್ಳಬಹುದಾದರೆ ಅಂಬೇಡ್ಕರರನ್ನು ಸಂವಿಧಾನಶಿಲ್ಪಿ ಎಂದು ಒಪ್ಪಿಕೊಳ್ಳಲು ಏನಡ್ಡಿ? ಯಾಕೆ, ಅಂಬೇಡ್ಕರರು ಅಸ್ಪಶ್ಯರು ಎಂಬ ಕಾರಣಕ್ಕೆ ಅವರಿಗೆ ಅಂತಹ ಗೌರವವನ್ನು ನೀಡಲು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಾಗುತ್ತಿಲ್ಲವೆ? ಸತ್ಯ ಹೇಳಿದರೆ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನೇರವಾಗಿ ಹೇಳಲಿ, ಅಂಬೇಡ್ಕರ್ ಅಸ್ಪಶ್ಯರು ; ಆದ್ದರಿಂದ ಅವರು ಸಂವಿಧಾನ ಶಿಲ್ಪಿಯಲ್ಲ ಎಂದು !
ಕೃಪೆ : ವಾರ್ತಾಭಾರತಿ
  
 

Sunday, June 10, 2012

ಇದು ದಲಿತರ ಭದ್ರತೆಯ ಬದುಕೆ !?




- ಸುಭಾಶ್‌ ಗಟಾದೆ

ಇದು ದಲಿತರ ಭದ್ರತೆಯ ಬದುಕೆ!?
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಹಾಲಿ ಅಧ್ಯಕ್ಷ ನ್ಯಾ.ಕೆ.ಜಿ. ಬಾಲಕೃಷ್ಣನ್ ನಿವೃತ್ತಿಯ ಬಳಿಕ ತಪ್ಪು ಕಾರಣಗಳಿಗಾಗಿ ಈಗಾಗಲೇ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡುವ ಮೂಲಕ ಅವರು ತನ್ನ ಟೀಕಾಕಾರರಿಗೆ ಮತ್ತಷ್ಟು ಗ್ರಾಸ ಒದಗಿಸಿ ದರು. ದಲಿತರ ಏಳಿಗೆಗಾಗಿ ಗುಜರಾತ್ ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಪ್ರಶಂಸೆಯ ಸುರಿಮಳೆಗೈದರು. ಅಷ್ಟೇ ಅಲ್ಲ, ಇತರ ಹಲವಾರು ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್‌ನಲ್ಲಿ ದಲಿತರ ಭವಿಷ್ಯ ಭದ್ರವಾಗಿದೆ ಎಂದು ಗುಣಗಾನ ಮಾಡಿದರು. ಆದರೆ, ಇದು ದಲಿತ ಚಿಂತಕರನ್ನು ಕೆರಳಿಸಿದೆ. ಇದು 2002ರ ಗುಜರಾತ್ ಹಿಂಸಾಚಾರದ ಹಿನ್ನೆಲೆಯಲ್ಲಿ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿರುವ ರಾಜ್ಯ ಸರಕಾರಕ್ಕೆ ಕ್ಲೀನ್‌ಚಿಟ್ ನೀಡುವ ಹಾಗೂ ಅದರ ಕಳಂಕವನ್ನು ತೊಡೆದುಹಾಕುವ ಕ್ರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಬಹಿರಂಗ ವಿಚಾರಣೆ ನಡೆಸುವ ಆಯೋಗದ ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣನ್ ಗುಜರಾತ್‌ಗೆ ಎರಡು ದಿನಗಳ (ಮಾರ್ಚ್ 14-15) ಭೇಟಿ ನೀಡಿದ್ದರು. ಇದು ಕೆ. ಬಿ. ಸಕ್ಸೇನ ಸಮಿತಿಯ ಮಹತ್ವದ ಶಿಫಾರಸುಗಳ ಪೈಕಿ ಒಂದಾಗಿದೆ.

ಕೆಲವು ವರ್ಷಗಳ ಹಿಂದೆ ಸಮಿತಿಯು ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ವರದಿಯೊಂದನ್ನು ಸಲ್ಲಿಸಿತ್ತು.ಕೆಲವು ಸಮಯದ ಹಿಂದೆ ಆಯೋಗ ಈ ಮಾದರಿಯ ತನ್ನ ಮೊದಲ ಬಹಿರಂಗ ವಿಚಾರಣೆಯನ್ನು ಒಡಿಶಾದಲ್ಲಿ ನಡೆಸಿತ್ತು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನ್ಯಾ.ಬಾಲಕೃಷ್ಣನ್ ಗುಜರಾತ್ ಸರಕಾರದ ಮೇಲೆ ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು.ಆದರೆ, ದಲಿತರ ನೈಜ ಬದುಕು ಬೇರೆಯದೇ ಆದ ಚಿತ್ರಣ ನೀಡಿತು.ಗುಜರಾತ್‌ನ ವಿವಿಧ ಭಾಗಗಳಿಂದ ಬಂದಿದ್ದ ದಲಿತರು ದೂರುಗಳ ಮಹಾಪೂರವನ್ನೇ ಹರಿಸಿದರು. ದೂರು ಸಲ್ಲಿಸುವ ವೇಳೆ ಪೊಲೀಸರಿಂದ ಅಸಹಕಾರ, ಸರಕಾರಿ ಅಧಿಕಾರಿಗಳ ನಿರ್ಲಕ್ಷ, ಪುನರ್ವಸತಿಯ ಕೊರತೆ ಮುಂತಾದವುಗಳತ್ತ ಅವರು ಬೆಟ್ಟು ಮಾಡಿದರು.

ಗ್ರಾಮಾಧಿಕಾರಿಯಾಗಿರುವ ಸಾನಂದ್ ಸಮೀಪದ ಕುಂಡ್ಲ ಗ್ರಾಮದ ನಿವಾಸಿ ಹಾಗೂ ದಲಿತ ಸುರೇಶ್ ಜಾದವ್, 2009ರಲ್ಲಿ ತನ್ನ ಗ್ರಾಮದಲ್ಲಿ ದೇವಸ್ಥಾನವೊಂದು ನಿರ್ಮಾಣಗೊಂಡ ಬಳಿಕ ತಾನು ಯಾವ ರೀತಿಯ ಸಾಮಾಜಿಕ ಬಹಿಷ್ಕಾರ ಎದುರಿಸಿದೆ ಎಂಬುದನ್ನು ವಿವರಿಸಿದರು.ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ವನ್ನು ನಿರ್ಮಿಸಲಾಗಿತ್ತು.ದೇವಸ್ಥಾನ ನಿರ್ಮಾಣಕ್ಕೆ ಎಲ್ಲರಂತೆ ಸುರೇಶ್ ಜಾದವ್ ಕೂಡ ದೇಣಿಗೆ ನೀಡಿದ್ದರು. ಆದರೆ, ದೇವಸ್ಥಾನ ಆರಂಭಗೊಂಡ ಬಳಿಕ ಅದನ್ನು ಪ್ರವೇಶಿಸಲು ಜಾದವ್‌ಗೆ ಅನುಮತಿ ನೀಡಲಿಲ್ಲ. ಅದನ್ನು ಪ್ರತಿಭಟಿಸಿದಾಗ ಅವರು ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು.
ಅಹ್ಮದಾಬಾದ್‌ನಿಂದ 100 ಕಿ.ಮೀ. ದೂರ ದಲ್ಲಿರುವ ಸಬರ್‌ಕಾಂತ ಜಿಲ್ಲೆಯ ತಾಜುಪುರ ಗ್ರಾಮದಲ್ಲಿ ಎಪ್ರಿಲ್‌ನಲ್ಲಿ ದಲಿತ ಕುಟುಂಬ ವೊಂದರಲ್ಲಿ ಮದುವೆಯಿತ್ತು.ಕುಟುಂಬವು ಮದುವೆ ಮೆರವಣಿಗೆ ನಡೆಸಲು ಮುಂದಾ ದಾಗ ಇತರ ಸಮುದಾಯಗಳ ಜನರು ತಡೆಯೊಡ್ಡಿದರು.ಪೊಲೀಸ್ ರಕ್ಷಣೆಯ ಹೊರತಾಗಿಯೂ ಮೆರವಣಿಗೆ ಮೇಲೆ ಆಕ್ರಮಣ ನಡೆಸಲಾಯಿತು ಹಾಗೂ ಕಲ್ಲು ತೂರಲಾಯಿತು.‘‘ದೂರು ನೀಡುವಾಗ ಪೊಲೀಸರು ಮೇಲ್ಜಾತಿಯವರ ಪರವಾಗಿ ನಿಂತರು’’ ಎಂದು ದಲಿತ ಕಾರ್ಯಕರ್ತ ಸಂಜಯ್ ಪಾರ್ಮರ್ ಆರೋಪಿಸಿದರು.

1,589 ಗ್ರಾಮಗಳಲ್ಲಿ ತಾನು ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಸ್ವಯಂಸೇವಾ ಸಂಘಟನೆ ‘ನೌಸರ್ಜನ್’ನ ಪ್ರತಿನಿಧಿಯೊಬ್ಬರು ಹಂಚಿಕೊಂಡರು. ಸಮೀಕ್ಷೆ ನಡೆಸಲಾದ ಗ್ರಾಮಗಳ ಪೈಕಿ 98 ಶೇ. ಗ್ರಾಮಗಳಲ್ಲಿ ಅಸ್ಪಶತೆ ಆಚರಣೆ ಇನ್ನೂ ಜಾರಿಯಲ್ಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಪ್ರಕಾರ,ದಲಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳ ಉಸ್ತುವಾರಿಯನ್ನು ರಾಜ್ಯ ಮಟ್ಟದ ಸಮಿತಿಯೊಂದು ನಡೆಸಬೇಕು. ಹಾಗೂ ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ಸೇರಬೇಕು. ವರ್ಷಕ್ಕೆ ಎರಡು ಸಭೆಗಳನ್ನು ಬಿಡಿ, ಸಮಿತಿ ಕಳೆದ 17 ವರ್ಷಗಳಲ್ಲಿ ಕೇವಲ ಆರು ಬಾರಿ ಸಭೆ ಸೇರಿದೆ. ದಲಿತ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಒಂದು ವಿಶೇಷ ನ್ಯಾಯಾಲಯ ಮತ್ತು ಒಂದು ವಿಶೇಷ ಪಬ್ಲಿಕ್ ಪ್ರಾಸಿ ಕ್ಯೂಟರ್ ನೇಮಿಸಬೇಕೆಂದು ಈ ಕಾಯ್ದೆ ಹೇಳುತ್ತದೆ. ಆದರೆ, ಇದಕ್ಕೆ ತನ್ನ ಬಳಿ ಹಣವಿಲ್ಲ ಎಂದು ಸರಕಾರ ಹೇಳುತ್ತದೆ.

2006ರಲ್ಲಿ ಬನಸ್ಕಾಂತ ಜಿಲ್ಲೆಯಲ್ಲಿ ತಾನು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ದೌರ್ಜನ್ಯ) ಆಗಿದ್ದಾಗ ದಲಿತರ ವಿರುದ್ಧದ 1,000ಕ್ಕೂ ಅಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾಗ ಹಿರಿಯ ಅಧಿಕಾರಿಗಳು ತನಗೆ ಹೇಗೆ ಕಿರುಕುಳ ನೀಡಿದರು ಎಂಬುದನ್ನು ಅಮಾನತುಗೊಂಡ ಡಿಎಸ್‌ಪಿ ಎಸ್.ಕೆ.ಮಕ್ವಾನ್ ಬಹಿರಂಗ ವಿಚಾರಣೆಯ ವೇಳೆ ನ್ಯಾಯಾಧೀಶರಿಗೆ ಹೇಳಿದರು.ತಾನು ಕರ್ತವ್ಯ ನಿರ್ವಹಿಸುವುದರಿಂದ ಹಾಗೂ ಆರೋಪಿಗಳನ್ನು ಹಿಡಿಯುವುದರಿಂದ ತನ್ನನ್ನು ಪ್ರತಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಸ್ಥಳೀಯ ಅಧಿಕಾರಿಗಳ ಕುರಿತು ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ ಏಕೈಕ ಕಾರಣಕ್ಕಾಗಿ ಪೊಲೀಸರು ತನಗೆ ಯಾವ ರೀತಿ ಕಿರುಕುಳ ನೀಡಿದರು ಎಂಬ ಬಗ್ಗೆ ಭಾವ ನಗರದ ಲಾಲ್‌ಜಿ ಮಕ್ವಾನ ಎನ್‌ಎಚ್‌ಆರ್‌ಸಿ ಸಮಿತಿಗೆ ವಿವರಿಸಿದರು. ತನ್ನ ಗಂಡ ಮೇಲ್ಜಾತಿಯ ಜನರಿಂದ ಕೊಲೆ ಯಾಗಿದ್ದು ಪೊಲೀಸರು ಈ ಬಗ್ಗೆ ನಿರ್ಲಕ್ಷ ವಹಿಸಿ ದ್ದಾರೆ ಎಂದು ರಜುಲಾ ತಾಲೂಕಿನ ಮೀನಾಬೆನ್ ಮಕ್ವಾನ ಹೇಳಿದರು.
ಗೋರಜ್ ಮತ್ತು ರೆತಾಲ್ ಗ್ರಾಮಗಳಲ್ಲಿ ದಲಿತರನ್ನು ಬಲವಂತವಾಗಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ ಹಾಗೂ ಅವರ ವಿರುದ್ಧ ಸಾಮಾಜಿಕ ಬಹಿಷ್ಕಾರ ವಿಧಿಸಲಾಗುತ್ತಿದೆ. ಆದರೆ ಈ ಬಗ್ಗೆ ದೂರು ನೀಡಿದರೂ ಅಹ್ಮದಾಬಾದ್ ಗ್ರಾಮೀಣ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾನಂದ್ ಗ್ರಾಮದ ದಲಿತರು ದೂರಿದರು. ಸಮುದಾಯದ ವ್ಯಕ್ತಿ ಯೊಬ್ಬನ ಹತ್ಯೆಯಾದಾಗ ಅದರ ವಿರುದ್ಧ ತಾನು ಜನರನ್ನು ಸಂಘಟಿಸಿದುದಕ್ಕಾಗಿ ತನ್ನನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕಿಸಲಾಯಿತು ಎಂದು ಸಾನಂದ್ ಗ್ರಾಮದ ದಲಿತ ಸಮುದಾಯದ ನಾಯಕ ಬಾಬು ವನಿಯಾ ಆರೋಪಿಸಿದರು.ಕಳೆದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ 167 ಸ್ವಚ್ಛತಾ ಕಾರ್ಮಿಕರ ಸಾವು ಸಂಭವಿಸಿದೆ ಎಂದು ರಾಜ್ಯದಲ್ಲಿ ಸ್ವಚ್ಛತಾ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪುರುಷೋತ್ತಮ್ ವೇಲಾ ಹೇಳಿದರು. ಆದಾಗ್ಯೂ, ರಾಜ್ಯದಲ್ಲಿ ಭೂಗತ ಚರಂಡಿಗಳನ್ನು ಸ್ವಚ್ಛ ಮಾಡುವುದಕ್ಕಾಗಿ ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸುವ ವ್ಯವಸ್ಥೆ ಈಗಲೂ ಮುಂದುವರಿದಿದೆ ಎಂದರು.

ಪೂರ್ವ ತಯಾರಿಯ ಕೊರತೆ
ಬಹಿರಂಗ ವಿಚಾರಣೆಯನ್ನು ಏರ್ಪಡಿಸುವ ಭರದಲ್ಲಿ ಆಯೋಗ ಪೂರ್ವ ತಯಾರಿ ಮಾಡದಿರುವುದು ಎದ್ದು ಕಾಣುತ್ತಿತ್ತು. ಆಯೋಗದ 2009ರ ವರದಿಯೇ ಹೇಳು ವಂತೆ, ದೇಶಾದ್ಯಂತ ದಾಖಲಾದ ಒಟ್ಟು 94,559 ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಪೈಕಿ 3,813 ಗುಜರಾತ್ ರಾಜ್ಯದಲ್ಲೇ ಘಟಿಸಿವೆ. ಗುಜರಾತ್ ಈ ಪಟ್ಟಿಯಲ್ಲಿ ಉತ್ತರಪ್ರದೇಶ ಮತ್ತು ದಿಲ್ಲಿಗಳಿಗಿಂತ ಮಾತ್ರ ಕೆಳಗಿದೆ.ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆಯು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಗೆ ಸಲ್ಲಿಸಿದ 23 ಪುಟಗಳ ರಹಸ್ಯ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಕುಲಗೆಡಿಸಿದ ಹಲವಾರು ದೃಷ್ಟಾಂತಗಳನ್ನು ನೀಡಿದೆ. ಈ ಕಾಯ್ದೆಯನ್ವಯ ರಾಜ್ಯದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಕೇವಲ 2.5 ಶೇ. ಹಾಗೂ ದೋಷಮುಕ್ತರಾದವರ ಪ್ರಮಾಣ 97.5 ಶೇ.

ಇದು ಪೊಲೀಸರು ತನಿಖೆಯನ್ನು ಯಾವ ರೀತಿ ನಡೆಸುತ್ತಾರೆ ಹಾಗೂ ವಿಚಾರಣೆಗಳ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹೇಗೆ ಪ್ರತಿಕೂಲವಾಗಿ ವರ್ತಿಸುತ್ತಾರೆ ಎಂಬು ದನ್ನು ಸೂಚಿಸುತ್ತದೆ.ಈ ಕಾಯ್ದೆಯಡಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವಿಚಾರಣೆ ಯನ್ನು ಡಿವೈಎಸ್‌ಪಿ ದರ್ಜೆಗಿಂತ ಕೆಳಗಿನ ಅಧಿಕಾರಿಗಳು ಮಾಡುವಂತಿಲ್ಲ. ಆದರೆ, 4,000ಕ್ಕೂ ಅಧಿಕ ಇಂಥ ಪ್ರಕರಣಗಳ ವಿಚಾರಣೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಅಥವಾ ಸಬ್ ಇನ್ಸ್‌ಪೆಕ್ಟರ್‌ಗಳು ನಡೆಸಿದ್ದಾರೆ. ಸಂತ್ರಸ್ತರನ್ನು ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರು ಎಂದು ಗುರುತಿಸದ ಹಿನ್ನೆಲೆಯಲ್ಲಿ ಆರೋಪಿಗಳು ದೋಷ ಮುಕ್ತರಾಗುತ್ತಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಸಂತ್ರಸ್ತರ ಜಾತಿ ಪ್ರಮಾಣಪತ್ರಗಳನ್ನು ಲಗತ್ತಿಸದಿರುವುದೇ ಕಾರಣವಾಗಿದೆ.ದಲಿತ ದೌರ್ಜನ್ಯ ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ.ದಲಿತ ದೌರ್ಜನ್ಯ ಕಾಯ್ದೆ ಪ್ರಕಾರ ಸುಳ್ಳು ದೂರು ದಾಖಲಿಸುತ್ತಿರುವುದೇ ಆರೋಪಿಗಳ ಭಾರೀ ಪ್ರಮಾಣದ ದೋಷಮುಕ್ತಿಗೆ ಕಾರಣ ಎಂಬುದಾಗಿ ಸಾರ್ವಜನಿಕವಾಗಿ ವ್ಯಾಖ್ಯಾನಿಸಲಾಗುತ್ತಿದೆ.ಆದರೆ, ಈ ಬಗ್ಗೆ ಅಧ್ಯಯನ ನಡೆಸಿದ ಸಾಮಾಜಿಕ ನ್ಯಾಯ ಸಮಿತಿಯ ಕಾರ್ಯದರ್ಶಿ ವಜಿಭಾಯ್ ಪಟೇಲ್, ವಿಚಾರಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಹಲವು ಲೋಪದೋಷಗಳತ್ತ ಬೆಟ್ಟು ಮಾಡಿದೆ.

ಸರಕಾರದ ಶಾಮೀಲಾತಿಯೇ ಪ್ರಕರಣಗಳು ವಿಫಲವಾಗಲು ಕಾರಣ ಎಂಬುದಾಗಿ ಅದು ಸಾಧಿಸಿ ತೋರಿಸಿದೆ. ಇದಕ್ಕಾಗಿ ವಜಿಭಾಯ್ 400 ತೀರ್ಪುಗಳ ವ್ಯವಸ್ಥಿತ ಅಧ್ಯಯನ ನಡೆಸಿದ್ದರು.ಅವರ ಅಧ್ಯಯನದ ಮುಖ್ಯಾಂಶಗಳನ್ನು ‘ಕಮ್ಯುನಲಿಸಂ ಕಾಂಬ್ಯಾಟ್’ನಲ್ಲಿ ಬರೆದ ಲೇಖನವೊಂದರಲ್ಲಿ (ಮಾರ್ಚ್ 2005) ತೀಸ್ತಾ ಸೆಟಲ್ವಾದ್ ಹೀಗೆ ನೀಡಿದ್ದಾರೆ.

• 95 ಶೇಕಡಕ್ಕೂ ಅಧಿಕ ಪ್ರಕರಣಗಳಲ್ಲಿ ತನಿಖೆ ಮತ್ತು ಪ್ರಾಸಿಕ್ಯೂಶನ್ ಅವಧಿಯ ಲ್ಲಿನ ತಾಂತ್ರಿಕ ದೋಷದಿಂದಾಗಿ ಆರೋಪಿಗಳ ದೋಷಮುಕ್ತಿಯಾಗುತ್ತಿದೆ. ಉಳಿದ 5 ಶೇ. ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಸರಕಾರ ಉಲ್ಲಂಘಿಸುತ್ತಿದೆ.ಹೆಚ್ಚಿನ ಸಂದರ್ಭಗಳಲ್ಲಿ ಐಪಿಸಿಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಆದರೆ, ದಲಿತ ದೌರ್ಜನ್ಯ ಪ್ರಕರಣಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು ಸಾಬೀತಾಗುತ್ತಿಲ್ಲ. ಹಾಗಾಗಿ, ಈ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಮುಂದುವರಿಯುವಲ್ಲಿ ವ್ಯವಸ್ಥಿತ ಪಕ್ಷಪಾತ ಎದ್ದು ಕಾಣುತ್ತಿದೆ.

•ರಾಜ್ಯ ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಮನೋಭಾವದ ಪರಿಣಾಮವಾಗಿ ದಲಿತ ದೌರ್ಜನ್ಯ ಕಾಯ್ದೆಯಡಿ ಕೊಲೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳು ಬಿಡುಗಡೆ ಗೊಳ್ಳುತ್ತಿದ್ದಾರೆ.

•ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಆರೋಪಿಗಳ ದೋಷಮುಕ್ತಿಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಇದೇ ಕಾಯ್ದೆಯಡಿಯಲ್ಲಿ ಸ್ಥಾಪನೆಗೊಂಡ ವಿಶೇಷ ನ್ಯಾಯಾಲಯಗಳ ಹಲವು ತೀರ್ಪುಗಳು ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷದ ವಿರುದ್ಧ ಛೀಮಾರಿ ಹಾಕಿವೆ ಹಾಗೂ ಕ್ರಮ ಜಾರಿ ವರದಿಯನ್ನು ನಿರ್ದಿಷ್ಟ ಸಮಯದಲ್ಲಿ ಸಲ್ಲಿಸುವಂತೆಯೂ ಸೂಚಿಸಿವೆ.

• ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ಯಾವುದೇ ಸರಕಾರಿ ಸೇವಕನೊಬ್ಬ ಈ ಕಾಯ್ದೆಯ ಪ್ರಕಾರ ತಾನು ಮಾಡಬೇಕಾದ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರೆ ಅಂಥ ನೌಕರನಿಗೆ ಆರು ತಿಂಗಳ ಸೆರೆಮನೆ ವಾಸ (ಇದನ್ನು ಒಂದು ವರ್ಷಕ್ಕೂ ವಿಸ್ತರಿಸಬಹುದು) ವಿಧಿಸಬೇಕು ಎಂದು ಕಾಯ್ದೆ ಹೇಳುತ್ತದೆ. ನ್ಯಾಯಾಲಯಗಳು ನೀಡಿರುವ 95 ಶೇಕಡ ತೀರ್ಪುಗಳು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ ಛೀಮಾರಿ ಹಾಕಿವೆ. ಆದರೆ, ಗುಜರಾತ್ ಸರಕಾರ ಇಂಥ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸುವ ಬದಲು ಭಡ್ತಿ ನೀಡಿ ಗೌರವಿಸುತ್ತಿದೆ.

ಹಲವು ವಿಧಗಳು
ಸರಕಾರಿ ಯಂತ್ರ ಆರೋಪಿಗಳೊಂದಿಗೆ ಹಲವು ವಿಧಗಳಲ್ಲಿ ಶಾಮೀಲಾಗಿ ಅವರು ದೋಷಮುಕ್ತಗೊಳ್ಳುವಂತೆ ಮಾಡುತ್ತಿದೆ. ಅವುಗಳೆಂದರೆ-
• ಪ್ರಕರಣಗಳನ್ನು ಕೆಳದರ್ಜೆಯ ಅಧಿಕಾರಿಗಳು ನಡೆಸಿದ ಕಾರಣಕ್ಕಾಗಿ ಆರೋಪಿಗಳ ದೋಷಮುಕ್ತಿ: 1995ರ ಈ ಕಾಯ್ದೆಯನ್ವಯ ದಾಖಲಾದ ದೂರುಗಳನ್ನು ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳು ನಡೆಸಬೇಕು. ತಮ್ಮ ವರದಿಗಳನ್ನು ಅವರು ನೇರವಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಬೇಕು. ಪ್ರಕರ ಣದ ತನಿಖೆಯನ್ನು ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಿಂತ ಕೆಳ ದರ್ಜೆಯ ಅಧಿಕಾರಿಗಳು ನಡೆಸಿದ್ದಾರೆ ಎಂಬ ಕಾರಣ ಕ್ಕಾಗಿಯೇ 95 ಶೇ. ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗುತ್ತದೆ.

• ಪೊಲೀಸರು ಜಾತಿ ಪ್ರಮಾಣಪತ್ರವನ್ನು ಲಗತ್ತಿಸಿಲ್ಲ ಎನ್ನುವ ಕಾರಣಕ್ಕಾಗಿ ಖುಲಾಸೆ: ದಲಿತ ದೌರ್ಜನ್ಯ ಕಾಯ್ದೆ ಯ ಪ್ರಕಾರ ದಾಖಲಾದ ದೂರಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ನೀಡುವ ದೂರುದಾರನ ಜಾತಿ ಪ್ರಮಾಣಪತ್ರ ವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ದೂರುದಾರನ ಜಾತಿ ಪ್ರಮಾಣಪತ್ರವನ್ನು ತನಿಖಾಧಿಕಾರಿ ಲಗತ್ತಿಸಿಲ್ಲ ಎಂಬ ಕಾರಣಕ್ಕಾಗಿ ಹಲವು ಅತ್ಯಾಚಾರ ಪ್ರಕರಣದ ಆರೋಪಿಗಳು ಖುಲಾಸೆಗೊಂಡಿದ್ದಾರೆ.

• ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷ:ಈ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕ ಕಡ್ಡಾಯ. ಆದರೆ, ಈ ಪ್ರಾಸಿಕ್ಯೂಟರ್‌ಗಳು ದೂರುದಾರ ರಿಗೆ ಪ್ರತಿಕೂಲವಾಗಿ ವರ್ತಿಸುತ್ತಿರುವುದು ಮೊಕದ್ದಮೆಗಳು ಬಿದ್ದು ಹೋಗಲು ಕಾರಣವಾಗಿದೆ.ಇಂಥ ಪ್ರಾಸಿಕ್ಯೂಟರ್ ಗಳ ತಂತ್ರಗಾರಿಕೆಯಿಂದಾಗಿ ಮೊಕದ್ದಮೆಯೊಂದು ವಿಚಾರಣೆಯ ಹಂತ ತಲುಪುವಾಗ ವರ್ಷಗಳೇ ಉರುಳುತ್ತವೆ. ಸಂತ್ರಸ್ತ/ದೂರುದಾರ ಸಾಕ್ಷ ನುಡಿಯಲು ಕಟಕಟೆಗೆ ತಲುಪುವಾಗ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಯಾರೆಂಬುದೇ ಗೊತ್ತಿರುವುದಿಲ್ಲ.

ಕಾಯ್ದೆಯ ವಿಶೇಷ ವಿಧಿಗಳನ್ನು ಜಾರಿ ಗೊಳಿಸುವುದನ್ನು ತಡೆಯಲು ಹಾಗೂ ಆ ಮೂಲಕ ಮೊಕದ್ದಮೆಗಳನ್ನು ದುರ್ಬಲ ಗೊಳಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ನಡೆಸುವ ಉದ್ದೇಶಪೂರ್ವಕ ಪ್ರಯತ್ನಗಳನ್ನು ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಖಂಡಿಸಿವೆ.

ಈ ಕಾಯ್ದೆಯ ಬಗ್ಗೆ ಗುಜ ರಾತ್ ಸರಕಾರ ನಿರಾಸಕ್ತಿ ಹೊಂದಿ ರುವುದು ಹಾಗೂ ಅದರನ್ವಯ ದಾಖಲಾದ ದೌರ್ಜನ್ಯಗಳ ಆರೋಪಿಗಳನ್ನು ಶಿಕ್ಷಿಸಲು ಇಚ್ಛಾಶಕ್ತಿಯ ಕೊರತೆ ಹೊಂದಿರುವುದು ಕಾಯ್ದೆಯನ್ನು ಅರ್ಥಹೀನಗೊಳಿಸಿದೆ. ಅದೂ ಅಲ್ಲದೆ, ದಲಿತರು ಮತ್ತು ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ರಚಿಸಲಾಗಿರುವ ರಾಜ್ಯ ಸರಕಾರದ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಯಾಗಿವೆ. ಹಾಗಾಗಿ, ಸಾಮಾಜಿಕ ನ್ಯಾಯ ಕ್ರಮಗಳನ್ನು ಜಾರಿಗೊಳಿಸುವುದು ಭಾರೀ ಸವಾಲಿನ ಸಂಗತಿಯಾಗಿದೆ. ಇಲಾಖೆಯಲ್ಲಿ 300 ಹುದ್ದೆಗಳು ಖಾಲಿಯಾಗಿವೆ.

ದಲಿತರ ಬಗ್ಗೆ ಅನಾದರ
ಬೃಹತ್ ಸ್ವರೂಪದ ಕಾನೂನು ವ್ಯವಸ್ಥೆ ಮತ್ತು ಕಾನೂನುಗಳ ಸರಮಾಲೆ ಇರುವ ಹೊರತಾಗಿಯೂ ನ್ಯಾಯ ಮರೀಚಿಕೆಯಾಗಿರುವುದು ದಲಿತರನ್ನು ಸಮಾಜ ಹೇಗೆ ಕಾಣುತ್ತಿದೆ ಹಾಗೂ ಅವರ ಹಕ್ಕುಗಳಿಗೆ ಯಾವ ರೀತಿಯ ಗೌರವ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ.ಇಲ್ಲಿ ದಲಿತರು ಭಾರೀ ಪ್ರಮಾಣದ ತಾರತಮ್ಯ ಎದುರಿಸುತ್ತಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಅವರಿಗೆ ಶ್ಮಶಾನ ಜಾಗವನ್ನು ನಿರಾಕರಿಸಲಾಗುತ್ತದೆ, ಹೊರವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಬಲವಂತಪಡಿಸಲಾಗುತ್ತದೆ ಹಾಗೂ ಮೀಸಲಾತಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಅನುದಾನರಹಿತ ಶಾಲೆಗಳಿಗೆ ದಲಿತರನ್ನು ಶಿಕ್ಷಕರಾಗಿ ನೇಮಿಸುತ್ತಿಲ್ಲ ಎನ್ನುವುದು ಚರ್ಚಾರ್ಹ ವಿಷಯವಾಗಿದೆ. ಗುಜರಾತ್ ರಾಜ್ಯ ಸೆಕೆಂಡರಿ ಮತ್ತು ಹಯರ್ ಸೆಕೆಂಡರಿ ಶಿಕ್ಷಣ ಮಂಡಳಿಯ ವೆಬ್‌ಸೈಟ್ ಪ್ರಕಾರ, ರಾಜ್ಯದಲ್ಲಿ 3255 ಅನುದಾನರಹಿತ ಶಾಲೆಗಳಿವೆ. 

ಈ ಶಾಲೆಗಳ ನಡುವೆ ಹಲವಾರು ಸಾಮ್ಯತೆ ಗಳಿರಬಹುದು.ಆದರೆ, ಎದ್ದು ತೋರುವಂಥ ಒಂದು ಸಾಮ್ಯತೆಯೆಂದರೆ ಇವುಗಳು 1972ರ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿ ಸುತ್ತಿವೆ.ಶಿಕ್ಷಣ ಕಾಯ್ದೆಯ ವಿಧಿಗಳನ್ನು ಪಾಲಿ ಸುವುದು ಕಡ್ಡಾಯವಾಗಿದ್ದರೂ ಯಾವುದೇ ಶಾಲೆಗಳು ಇದನ್ನು ಪಾಲಿ ಸುವ ಗೊಡವೆಗೆ ಹೋಗುತ್ತಿಲ್ಲ.ಈ ಕಾಯ್ದೆಯ ಪ್ರಕಾರ, ಅನು ದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳು ನೇಮಕಾತಿಯ ವೇಳೆ ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು. ಈ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ದಲಿತ ಶಿಕ್ಷಕರಿದ್ದಾರೆ.

ಶಿಕ್ಷಣ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದುಪಡಿಸ ಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ, ಈ ಶಾಲೆಗಳಿಗೆ ಅನುದಾನ ನೀಡುತ್ತಿಲ್ಲ ವಾದುದರಿಂದ ಮೀಸಲಾತಿಯನ್ನು ಅನುಸರಿಸುವಂತೆ ಅವುಗಳನ್ನು ಬಲವಂತಪಡಿಸುವ ಹಾಗಿಲ್ಲ ಎಂದು ಸರಕಾರ ಹೇಳುತ್ತದೆ.

ದಲಿತ ಸೊಸೈಟಿಗಳು
ನಗರಗಳಲ್ಲಿ ದಲಿತರ ವಿರುದ್ಧ ‘ಒಂದು ರೀತಿಯ ವರ್ಣಭೇದ ನೀತಿ’ಯನ್ನು ಅನುಸರಿಸುತ್ತಿರುವುದು ಎಲ್ಲ ಮಟ್ಟಗಳಲ್ಲಿ ಗೋಚರಿಸುತ್ತಿದೆ. ವಿವಿಧ ವರ್ಗಗಳ ಜನರು ವಾಸಿಸುವ ಸ್ಥಳಗಳಲ್ಲಿ ದಲಿತನೊಬ್ಬ ಮನೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ. ದಲಿತನೊಬ್ಬ ಮನೆಗಾಗಿ ಮೇಲ್ಜಾತಿಯ ಬಿಲ್ಡರ್‌ನನ್ನು ಸಂಪರ್ಕಿಸಿದರೆ ಒಂದೋ ಆತನಿಗೆ ನೇರವಾಗಿ ಇಲ್ಲ ಎಂದು ಹೇಳಲಾಗುತ್ತದೆ, ಇಲ್ಲವೇ ಪರೋಕ್ಷವಾಗಿ ನಿರಾಕರಿಸಲಾಗುತ್ತದೆ. ಮನೆ ಹುಡುಕುವ ದಲಿತನ ಹಣಕಾಸು ಹಿನ್ನೆಲೆ ಉತ್ತಮವಾಗಿದ್ದರೂ ಹೀಗೆ ಮಾಡಲಾಗುತ್ತದೆ. ಒಂದೇ ಒಂದು ದಲಿತ ಕುಟುಂಬಕ್ಕೆ ಆಸ್ತಿ ಮಾರಿದರೂ ಅದು ಬಿಲ್ಡರ್‌ಗಳು ಅಥವಾ ರಿಯಲ್ ಎಸ್ಟೇಟ್ ಏಜೆಂಟ್‌ಗಳ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಬಹುಶಃ ಇದು ಸಮಾಜದಲ್ಲಿ ಆಳವಾಗಿ ಬೇರೂರಿರುವ ವರ್ಣ/ಜಾತಿ ಮನೋಭಾವದ ಸೂಚನೆಯಾಗಿದೆ. 2002ರ ಗುಜರಾತ್ ಹತ್ಯಾಕಾಂಡ ಬಳಿಕ ಈ ಮನೋಭಾವ ಪುನರುಜ್ಜೀವನಗೊಂಡಿದೆ ಎಂಬಂತೆ ಭಾಸವಾಗುತ್ತಿದೆ. ಉದಾಹರಣೆಗೆ, ಅಹ್ಮದಾಬಾದ್‌ನಲ್ಲಿ ಈಚೆಗೆ ‘ದಲಿತರಿಗಾಗಿ ಮಾತ್ರ ರೆಸಿಡೆನ್ಶಿಯಲ್ ಸೊಸೈಟಿ’ಗಳು ತಲೆಯೆ ತ್ತುತ್ತಿವೆ. ಈ ಮಾದರಿಯ 300 ಸೊಸೈಟಿಗಳು ಸ್ಥಾಪನೆಯಾ ಗಿವೆ. ಇದು ಆಯ್ಕೆಯಲ್ಲ, ಅನಿವಾರ್ಯ ಎಂದು ‘ಇಂಡಿ ಯನ್ ಎಕ್ಸ್‌ಪ್ರೆಸ್’ (ಜೂನ್ 17, 2007)ನ ವರದಿ ಯೊಂದು ಹೇಳುತ್ತದೆ.

‘‘ಮೇಲ್ಜಾತಿಯ ಜನರು ವಾಸಿಸುವ ಸ್ಥಳಗಳಲ್ಲಿ ಮನೆ ಖರೀದಿಸಲು ದಲಿತನೊಬ್ಬನಿಗೆ ಸಾಮರ್ಥ್ಯವಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಬಿಲ್ಡರ್‌ಗಳು ಮತ್ತು ಮಾರಾಟಗಾರರು ಅವರಿಗೆ ಮನೆಗಳನ್ನು ನಿರಾಕರಿಸುತ್ತಾರೆ’’ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ವಲೇರ ಹೇಳುತ್ತಾರೆ.ಅವರು ರಾಮ್‌ದೇವ್‌ನಗರದ ದಲಿತ ಸೊಸೈಟಿಯೊಂದರಲ್ಲಿ ವಾಸಿಸುತ್ತಿದ್ದಾರೆ.ಈ ಪ್ರವೃತ್ತಿ 1982ರಲ್ಲಿ ನಡೆದ ಮೀಸಲಾತಿ ವಿರೋಧಿ ಚಳವಳಿಯ ಬಳಿಕ ಆರಂಭವಾಯಿತು ಎಂದು ಕೆಲವು ಸಮಾಜ ವಿಜ್ಞಾನಿಗಳು ಹೇಳುತ್ತಾರೆ.ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಜಾತಿ ಮತ್ತು ವರ್ಗ ತಾರತಮ್ಯ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ ಎಂಬುದನ್ನು ಅವರು ಒಪ್ಪುತ್ತಾರೆ. ಈ ಪ್ರವೃತ್ತಿಯನ್ನು ಅಹ್ಮದಾಬಾದ್‌ನ ಭವ್ಯ ಪ್ರದೇಶಗಳಾದ ಪಶ್ಚಿಮ ಅಹ್ಮದಾಬಾದ್‌ನ ಸೆಟಲೈಟ್, ವಸ್ತ್ರಪುರ, ಬೊದಕ್‌ದೆವ್, ಅಂಬವಾಡಿ ಮುಂತಾದ ಪ್ರದೇಶಗಳಲ್ಲೂ ಕಾಣಬಹುದು.

‘‘ನಗರದಲ್ಲಿ 300ಕ್ಕೂ ಅಧಿಕ ದಲಿತ ಸೊಸೈಟಿಗಳಿವೆ. ಚಾಂದ್‌ಖೇಡವೊಂದರಲ್ಲೆ 200 ಸೊಸೈಟಿಗಳಿವೆ. ಅವುಗಳ ಪೈಕಿ ಹೆಚ್ಚಿನವು 2002ರ ಹತ್ಯಾಕಾಂಡದ ಬಳಿಕ ಸ್ಥಾಪನೆ ಯಾದವು. ಗಲಭೆಯ ಸಂದರ್ಭದಲ್ಲಿ ಜನರು ಗೋಮತಿಪುರ, ಬಾಪುನಗರ್ ಮತ್ತು ದಾನಿಲಿಮ್ಡ ಪ್ರದೇಶಗಳಿಂದ ಹೊರ ಹೋಗಿದ್ದು ಈಗ ಸಾಮೂಹಿಕವಾಗಿ ಸೊಸೈಟಿಗಳಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿ ದಲಿತ ಸೊಸೈಟಿಗಳನ್ನು ಮಾತ್ರ ನಿರ್ಮಿಸುವ ಗುತ್ತಿಗೆದಾರನ್ನೂ ಕಾಣಬಹುದಾಗಿದೆ’’ ಎಂದು ಸಾಮಾಜಿಕ ರಾಜಕೀಯ ಕಾರ್ಯಕರ್ತ ಅಚ್ಯುತ್ ಯಾಗ್ನಿಕ್ ಹೇಳುತ್ತಾರೆ.

‘ಹಿಂದೂ ರಾಷ್ಟ್ರ’ದಲ್ಲಿ ಜೀವಂತವಿರುವ ದಲಿತರಿಗೆ ಘನತೆಯಿಂದ ಬದುಕುವ ಸ್ಥಳವೇ ಇಲ್ಲದಿರುವಾಗ, ಸತ್ತವರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ.2001ರಲ್ಲಿ ನರೇಶ್ ಸೋಳಂಕಿಯ ಅಕ್ಕನ ಎರಡೂವರೆ ವರ್ಷದ ಮಗು ಮೃತಪಟ್ಟಿತು. ಬಣಸ್‌ಕಾಂತ ಜಿಲ್ಲೆಯ ಪಾಲನ್‌ಪುರ ಬ್ಲಾಕ್‌ನ ಹುಡ ಗ್ರಾಮದಲ್ಲಿ ವಾಸಿಸುವ ಕುಟುಂಬವು ಸಮುದಾಯದ ಸ್ಮಶಾನದಲ್ಲಿ ಮಗುವನ್ನು ದಫನ ಮಾಡಿತು. ಆದರೆ, ಅದೇ ಗ್ರಾಮದ ಪಟೇಲ್ ಸಮುದಾ ಯದ ವ್ಯಕ್ತಿಯೊಬ್ಬ ಟ್ರಾಕ್ಟರ್ ಮೂಲಕ ಮಗುವಿನ ಮೃತ ದೇಹವನ್ನು ಅಗೆದು ತೆಗೆದನು ಎಂಬ ಸುದ್ದಿ ದುಃಖತಪ್ತ ಕುಟುಂಬ ಮನೆ ತಲುಪುವ ಮೊದಲೆ ತಿಳಿದುಬಂತು. ಅದಕ್ಕೆ ಕಾರಣವೆಂದರೆ, ಆ ವ್ಯಕ್ತಿ ಶ್ಮಶಾನಕ್ಕೆ ಸಮೀಪದ ಭೂಮಿ ಯನ್ನು ಅತಿಕ್ರಮಿಸಿದ್ದ. ಶ್ಮಶಾನದಲ್ಲಿ ಮಗುವಿನ ಹೆಣ ದಫನ ಮಾಡಿದುದಕ್ಕಾಗಿ ಆತ ಆಕ್ರೋಶಿತನಾಗಿದ್ದ.

ಈ ಘಟನೆ ನಡೆದು ಸುದೀರ್ಘ 11ವರ್ಷಗಳೇ ಕಳೆದರೂ ಶ್ಮಶಾನ ಸ್ಥಳಕ್ಕಾಗಿ ಹೂಡ ಗ್ರಾಮದ ದಲಿತರು ಇನ್ನೂ ಕಾಯುತ್ತಿದ್ದಾರೆ.ಆದರೆ, ಅವರಿಗೆ ಜಾಗ ನೀಡಲು ಜಿಲ್ಲಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಇನ್ನೂ ಮನಸ್ಸು ಮಾಡಿಲ್ಲ. ಕಳೆದ ವರ್ಷ ವೃದ್ಧನೊಬ್ಬ ಸತ್ತಾಗ ದೇಹವನ್ನು ಪಕ್ಕದ ಹಳ್ಳಿಗೆ ಹೊತ್ತುಕೊಂಡು ಹೋಗಿ ದಫನ ಮಾಡಬೇಕಾಯಿತು. ಅದೃಷ್ಟವಶಾತ್ ಅಲ್ಲಿ ಪ್ರತ್ಯೇಕ ಶ್ಮಶಾನವಿತ್ತು.

ಗುಜರಾತ್ ರಾಜ್ಯ ಗ್ರಾಮಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಮಂಚ ನಡೆಸಿದ ಸಮೀಕ್ಷೆಯ ಪ್ರಕಾರ, ಗುಜರಾತ್‌ನ 657 ಗ್ರಾಮಗಳ ಪೈಕಿ 397 ಗ್ರಾಮಗಳಲ್ಲಿ ದಲಿತರಿಗೆ ಅಧಿಕೃತ ಶ್ಮಶಾನಗಳಿಲ್ಲ. ಅದೂ ಅಲ್ಲದೆ, ಶ್ಮಶಾನ ಕ್ಕಾಗಿ ಭೂಮಿ ಲಭಿಸಿದ 260 ಗ್ರಾಮಗಳ ಪೈಕಿ 94 ಗ್ರಾಮ ಗಳಲ್ಲಿ ಶ್ಮಶಾನ ಭೂಮಿಯನ್ನು ಮೇಲ್ಜಾತಿಯ ಬಲಿಷ್ಠ ಜಾತಿಗಳ ಜನರು ಅತಿಕ್ರಮಿಸಿಕೊಂಡಿದ್ದಾರೆ. 26ಗ್ರಾಮಗಳಲ್ಲಿನ ಶ್ಮಶಾನ ತಗ್ಗು ಸ್ಥಳಗಳಲ್ಲಿದೆ ಹಾಗಾಗಿ,ಮಳೆಗಾಲದಲ್ಲಿ ಜಲಾವೃತವಾಗಿರುತ್ತದೆ.

ಮುಸ್ಲಿಮರದೂ ಅದೇ ಸಮಸ್ಯೆ
ಮೃತರನ್ನು ದಫನಗೊಳಿಸುವ ವಿಷಯ ಬಂದಾಗ ಗುಜರಾತ್‌ನಲ್ಲಿ ದಲಿತರು ಮತ್ತು ಮುಸ್ಲಿಮರು ಸಮಾನ ದುಃಖಿಗಳು. ಇಲ್ಲಿ ದಲಿತ ರಂತೆ ಮುಸ್ಲಿಮರ ದಫನ ಭೂಮಿಗಳನ್ನೂ ಪ್ರಭಾವ ಶಾಲಿ ಜಾತಿಗಳ ಜನರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಜರಾತ್ ಹೈಕೋರ್ಟ್, ಪಟಾನ್‌ನಲ್ಲಿರುವ ಮುಸ್ಲಿಮರ ದಫನ ಭೂಮಿ ಯನ್ನು ಅತಿಕ್ರಮಣದಾರ ರಿಂದ ರಕ್ಷಿಸಲು ಪೊಲೀಸರನ್ನು ನಿಯೋಜಿಸುವಂತೆ ಆದೇಶ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ನೈಜ ಪರಿಸ್ಥಿತಿ
ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಬಹಿರಂಗ ವಿಚಾರಣೆಯ ಕೊನೆಯ ವೇಳೆಗೆ ‘ಭವ್ಯ ಗುಜರಾತ್ (ವೈಬ್ರಾಂಟ್ ಗುಜರಾತ್)’ನ ಅಸಲಿ ಮುಖ ಹೊರಬಿತ್ತು. ರಾಜ್ಯ ಸರಕಾರದ ದೊಡ್ಡ ದೊಡ್ಡ ಹೇಳಿಕೆಗಳ ಹೊರತಾಗಿಯೂ ಇಲ್ಲಿ ಹೆಚ್ಚಿನ ಸಂಖ್ಯೆಯ ದಲಿತರು ಎರಡನೆ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ.

ಕೃಪೆ : ವಾರ್ತಾಭಾರತಿ

Tuesday, January 31, 2012

ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಹಿಂದೂ ಧರ್ಮ !



ಮೂಲ: ಗೈಲ್ ಓಮ್ವೆಟ್
ಸಂಗ್ರಹಾನುವಾದ: ನಾ.ದಿವಾಕರ


ಡಾ.ಬಿ.ಆರ್. ಅಂಬೇಡ್ಕರ್
ಸಾಮಾನ್ಯವಾಗಿ ಅಂಬೇಡ್ಕರ್ ಹೆಸರಿತ್ತಿದರೆ ಮೂಗು ಮುರಿಯುವ ಮೇಲ್ಜಾತಿಯವರ ಮನದಾಳದಲ್ಲಿ ಅಂಬೇಡ್ಕರ್ ಬಗ್ಗೆ ಇರುವ ದ್ವೇಷ ವೈಷಮ್ಯಗಳಿಗೆ ಮೀಸಲಾತಿ ನೀತಿಯೂ ಒಂದು ಕಾರಣ. ಮೀಸಲಾತಿ ನೀತಿಯ ಪರಿಣಾಮವಾಗಿ ನಮಗೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ನಮಗಿಂತಲೂ ಕಡಿಮೆ ಆಂಕ ಗಳಿಸಿದವರಿಗೂ ಸೀಟು ದೊರೆಯುತ್ತದೆ ಎಂದು ವಾದಿಸುವ ಪ್ರತಿಭೆಯ ಸಮರ್ಥಕರಲ್ಲಿ ಮೀಸಲಾತಿ ಒಂದು ಸಾಮಾಜಿಕ ತೊಡಕು. ಈ ಆಕ್ರೋಶಗಳು ಮೇಲ್ನೋಟಕ್ಕೆ ಕಾಣದಿದ್ದರೂ ಆಂತರ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದವರ ಬಗ್ಗೆ ಇರುವ ಅಸಡ್ಡೆ ಅನುಭವಿಸಿದವರಿಗೆ ಮಾತ್ರ ವೇದ್ಯವಾಗುತ್ತದೆ. ಮೇಲ್ಜಾತಿಯವರ, ವಿಶೇಷವಾಗಿ ದ್ವಿಜ ಸಂಪ್ರದಾಯದವರ ಮನದಾಳದಲ್ಲಿನ ಈ ಮನೋಭಾವದ ಹಿಂದೆಯೇ ಅಂಬೇಡ್ಕರ್ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಸುಪ್ತವಾಗಿರುವುದು ಸ್ಪಷ್ಟ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಇದೆಯೇ ಎನ್ನುವುದಕ್ಕಿಂತಲೂ, ತಪ್ಪು ಕಲ್ಪನೆಗಳಿಂದ ಉದ್ಭವಿಸುವ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟುವ ದೃಷ್ಟಿಯಿಂದ ವಾಸ್ತವವನ್ನು ಗ್ರಹಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಈ ಲೇಖನ.    


ತಮ್ಮ ಯೌವ್ವನಾವಸ್ಥೆಯಲ್ಲೇ ಅಂಬೇಡ್ಕರ್ ಅವರು ತಮ್ಮ ಸಮುದಾಯದ ನಾಯಕರಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಅವರ ತಂದೆಯೂ ಮಗನನ್ನು ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದರು. ತನ್ನ ವ್ಯಾಸಂಗದೊಂದಿಗೇ ಸಮಾಜಸೇವೆಯನ್ನೂ ಮುಂದುವರೆಸುವುದಾಗಿ ಅಂಬೇಡ್ಕರ್ ಬರೋಡದ ಮಹಾರಾಜರಿಗೆ ಆಶ್ವಾಸನೆ ನೀಡಿದ್ದರು. ಒಂದು ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಅತ್ಯುನ್ನತ ಮಟ್ಟದ ವ್ಯಾಸಂಗವನ್ನು ಲಂಡನ್ನಿನಲ್ಲಿ ಮುಗಿಸಿ ೧೯೨೦ರಲ್ಲಿ ಭಾರತಕ್ಕೆ ಹಿಂದಿರುಗಿದಾಗ , ಜೀವನೋಪಾಯಕ್ಕಾಗಿ ಸಂಪಾದಿಸುವುದರೊಡನೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದೂ ಅಂಬೇಡ್ಕರ್‌ಗೆ ಅನಿವಾರ್ಯವಾಗಿತ್ತು.


ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಚಳುವಳಿ ತೀವ್ರತೆ ಪಡೆದುಕೊಂಡಿತ್ತು. ಸೋವಿಯತ್ ಸಂಘದಲ್ಲಿ ನಡೆದ ಶ್ರಮಿಕ ವರ್ಗಗಳ ಕ್ರಾಂತಿಯಿಂದ ಪ್ರೇರೇಪಿತವಾದ ಕಾರ್ಮಿಕ ಚಳುವಳಿ ಚಿಗುರೊಡೆಯುತ್ತಿತ್ತು. ಇದೇ ವೇಳೆಯಲ್ಲಿ ಹೆಚ್ಚು ಸಂಘಟಿತವಲ್ಲದ, ಸಿದ್ಧಾಂತ ಮತ್ತು ನಾಯಕತ್ವಗಳಿಗಾಗಿ ಹುಡುಕಾಡುತ್ತಿದ್ದ ಬಲಿಷ್ಟವಾದ ಜಾತಿ ದಮನಿತರ ಚಳುವಳಿಯೂ ವ್ಯಾಪಕವಾಗಿ ಹರಡಿತ್ತು. ಮಾರ್ಕ್ಸ್‌ವಾದಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಬಲ ಚಳುವಳಿಗಳ ಬೆನ್ನಲ್ಲೇ ದಲಿತರು ಮತ್ತು ಬ್ರಾಹ್ಮಣೇತರರ ಚಳುವಳಿಗಳು ತೀವ್ರತೆ ಪಡೆದುಕೊಂಡು ರಾಜಕೀಯ ರಂಗ ಪ್ರವೇಶಿಸಿದ್ದವು. ಹತ್ತೊಂಬತ್ತನೆಯ ಶತಮಾನದಿಂದಲೇ ದೇಶಾದ್ಯಂತ ದಲಿತ ಚಳುವಳಿಗಳು ಪ್ರಾರಂಭವಾಗಿದ್ದವು. ಶಿಕ್ಷಣಕ್ಕಾಗಿ, ವ್ಯವಸಾಯ ಭೂಮಿಗಾಗಿ, ದೇವಾಲಯ ಪ್ರವೇಶಕ್ಕಾಗಿ, ಸಾರ್ವಜನಿಕ ಸೌಲಭ್ಯಗಳ ಮುಕ್ತ ಉಪಯೋಗಕ್ಕಾಗಿ ಹೋರಾಟಗಳು ರೂಪುಗೊಂಡಿದ್ದವು. ಅನೇಕ ಸಮಾಜ ಸುಧಾರಣಾ ಸಂಸ್ಥೆಗಳು, ಕ್ರೈಸ್ತ ಮಿಷನರಿಗಳು ಈ ಹೋರಾಟಗಳಿಗೆ ನೈತಿಕ ಬೆಂಬಲ ನೀಡಿದ್ದವು. ೧೮೭೫ರಲ್ಲಿ ಸ್ಥಾಪಿತವಾದ ಮಹಾತ್ಮ ಜ್ಯೋತಿ ಬಾ ಫುಲೆಯವರ ಸತ್ಯ ಶೋಧಕ ಸಮಾಜ್ ಮಹಾರಾಷ್ಟ್ರದ ದಲಿತರಿಗೆ ಬೆಂಗಾವಲಾಗಿತ್ತು. ಮಹರ್ ಸಮುದಾಯದ ಜನತೆ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಹೋರಾಟ ಕೈಗೊಂಡಿದ್ದರು. ಅಲ್ಪ ಸ್ವಲ್ಪ ಆದಾಯವನ್ನು ಹೊಂದಿದ್ದ ಮಹರ್ ಸಮುದಾಯ ಮಹಾರಾಷ್ಟ್ರದ ಪ್ರಥಮ ಸಂಘಟಿತ ಶೋಷಿತ ಸಮುದಾಯವಾಗಿತ್ತು. ಸಾರ್ವಜನಿಕ ಕೆರೆಗಳ ನೀರನ್ನು ಉಪಯೋಗಿಸಲು ಅನೇಕ ಹೋರಾಟಗಳು ನಡೆದಿದ್ದವು.


೧೯೧೭-೧೮ರ ನಂತರದಲ್ಲಿ ರಾಷ್ಟ್ರವಾದಿ ಚಳುವಳಿಯೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಾರಂಭಿಸಿತ್ತು. ೧೯೧೬ರ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಅಸ್ಪೃಶ್ಯತೆಯ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಬಲವಾದ ಸಮಾಜ ಸುಧಾರಕ ಸಂಘಟನೆ ಹಿಂದುಳಿದ ವರ್ಗಗಳ ಮಂಡಳಿ ಮೇಲ್ಜಾತಿಯ ವಿಥಲ್ ರಾಮ್‌ಜಿ ಶಿಂಧೆಯವರ ನೇತೃತ್ವದಲ್ಲಿ ಹಿಂದೂ ಧರ್ಮದ ಸುಧಾರಣೆಗಾಗಿ ಶ್ರಮಿಸುತ್ತಿತ್ತು. ಮಹಾರಾಷ್ಟ್ರದ ಬ್ರಾಹ್ಮಣೇತರ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಶಿಂಧೆ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದರು. ಮೇಲ್ಜಾತಿಯವರ ಸುಧಾರಣಾ ಯತ್ನಗಳು ಅಸ್ಪೃಶ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮೂರು ಸಂದರ್ಭಗಳಲ್ಲಿ ವ್ಯಕ್ತವಾಗಿದ್ದವು. ೧೯೧೭-೧೮ರ ಅವಧಿಯಲ್ಲಿ ನಡೆದ ಮೂರು ಅಸ್ಪೃಶ್ಯತಾ ನಿವಾರಣಾ ಸಮಾವೇಶಗಳಲ್ಲಿ ಅಂಬೇಡ್ಕರ್ ಅವರನ್ನು ಸನ್ಮಾನಿಸುವ ಯೋಚನೆ ಫಲಪ್ರದವಾಗಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ನೀಡಿದ್ದ ಸುಧಾರಣಾ ಶಿಫಾರಸ್ಸುಗಳನ್ನು ಇಲ್ಲಿ ಬೆಂಬಲಿಸಲಾಗಿತ್ತು. ಎರಡನೇ ಸಮಾವೇಶದಲ್ಲಿ ದಲಿತರ ಮತಾಂತರವನ್ನು ವಿರೋಧಿಸಲಾಗಿತ್ತು. ಮೂರನೆಯ ಸಮಾವೇಶದಲ್ಲಿ ಗಾಂಧೀಜಿಯವರು ಉಪಸ್ಥಿತರಿದ್ದರೂ ಅಸ್ಪೃಶ್ಯ ಸಮುದಾಯಗಳನ್ನು ಪ್ರತಿನಿಧಿಸುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.


ಏತನ್ಮಧ್ಯೆ ಪ್ರಬಲವಾಗಿ ಬೆಳೆಯುತ್ತಿದ್ದ ಬ್ರಾಹ್ಮಣೇತರ ಚಳುವಳಿಗಳು ಅಸ್ಪೃಶ್ಯರ ಬೆಂಬಲ ಗಳಿಸಿದ್ದವು. ಸತ್ಯ ಶೋಧಕ ಸಮಾಜ ಬಹುತೇಕ ಗ್ರಾಮಗಳಲ್ಲಿ ಕಾರ್ಯನಿರತವಾಗಿತ್ತು. ಬ್ರಾಹ್ಮಣರ ಅಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ ಈ ಸಂಘಟನೆ ಶೂದ್ರರು ಮತ್ತು ಅತಿ ಶೂದ್ರರು(ದಲಿತರು) ಭಾರತದ ಮೂಲ ನಿವಾಸಿಗಳೆಂದೂ, ಆರ್ಯರ ಆಗಮನದ ನಂತರ ಗುಲಾಮಗಿರಿಗೆ ಒಳಗಾದರೆಂದೂ ಪ್ರತಿಪಾದಿಸಿತ್ತು. ಈ ಪ್ರತಿಪಾದನೆ ಬ್ರಾಹ್ಮಣೇತರ ಚಳುವಳಿಗಳ ಮೂಲಮಂತ್ರವಾಗಿ ಪರಿಣಮಿಸಿ, ಮದ್ರಾಸಿನಲ್ಲಿ ಪ್ರಬಲವಾಗಿದ್ದ ಚಳುವಳಿಗಳಿಗೂ ವೇದಿಕೆಯನ್ನು ಒದಗಿಸಿತ್ತು. ೧೯೧೭ರ ವೇಳೆಗೆ ಬ್ರಾಹ್ಮಣೇತರ ಚಳುವಳಿಗಳು ರಾಜಕೀಯ ಪ್ರವೇಶ ಮಾಡಿದ್ದವು. ಕೊಲ್ಹಾಪುರದ ಮಹಾರಾಜ ಶಾಹು ಛತ್ರಪತಿ ಕ್ಷತ್ರಿಯನೆಂಬ ಅಹಮಿಕೆಯಿಂದ ಆಳಿದರೂ, ಬ್ರಾಹ್ಮಣ್ಯದ ವಿರೋಧಿಯಾಗಿದ್ದುದು, ಮಹಾರಾಷ್ಟ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿತ್ತು. ಅನೇಕ ಬ್ರಾಹ್ಮಣೇತರರು ಆಡಳಿತ ಕಛೇರಿಗಳಲ್ಲಿ ನೇಮಕಗೊಂಡರು. ಇದೇ ಅವಧಿಯಲ್ಲೇ ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯೂ ಜಾರಿಗೆ ಬಂದಿತ್ತು. ಶಾಹು ಮಹಾರಾಜರು ಅಸ್ಪೃಶ್ಯರಿಗೆ ಪ್ರತ್ಯೇಕ ಹಾಸ್ಟೆಲುಗಳನ್ನು ನಿರ್ಮಿಸಿದ್ದೇ ಅಲ್ಲದೆ  ಸಣ್ಣ ಚಹಾ ಮಳಿಗೆಗಳನ್ನು ಸ್ಥಾಪಿಸಲೂ ನೆರವು ನೀಡಿದ್ದರು.


ಬಹುತೇಕ ಬ್ರಾಹ್ಮಣರ ನೇತೃತ್ವದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಚಳುವಳಿಗಳು ಯುವಕ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಶಿಂಧೆ ಮುಂತಾದ ನಾಯಕರು ತಮ್ಮ ಅಸ್ಪೃಶ್ಯತಾ ವಿರೋಧಿ ಚಳುವಳಿಯಲ್ಲಿ ಅಸ್ಪೃಶ್ಯರಿಗೆ ಯಾವುದೇ ಅವಕಾಶ ನೀಡದಿದ್ದುದು ಮತ್ತು ಅಸ್ಪೃಶ್ಯರೊಡನೆ ಸಹಭೋಜನದಲ್ಲಿ ಪಾಲ್ಗೊಳ್ಳದಿದ್ದುದು ಅಂಬೇಡ್ಕರ್ ಅವರನ್ನು ಶಾಹು ಮಹರಾಜರ ಕಡೆಗೆ ಸೆಳೆದಿತ್ತು. ೧೯೨೦ರಲ್ಲಿ ಪ್ರಥಮ ಬಾರಿಗೆ ಶಾಹು ಮಹಾರಾಜರನ್ನು ಭೇಟಿಯಾದ ಅಂಬೇಡ್ಕರ್, ಅವರು ಅಸ್ಪೃಶ್ಯರೊಡನೆ ಬೆರೆಯುತ್ತಿದ್ದುದನ್ನು ಕಂಡು ಅವರಿಂದ ಪ್ರಭಾವಿತರಾಗಿದ್ದರು. ೧೯೨೦ರ ಮಾನ್‌ಗಾಂವ್ ಸಮಾವೇಶದಲ್ಲಿ ಅಂಬೇಡ್ಕರ್ ಅವರನ್ನು ಸತ್ಕರಿಸಿದ ಶಾಹು ಮಹಾರಾಜ್ ಅಂಬೇಡ್ಕರ್ ಅವರಿಗೆ ಧನಸಹಾಯ ಮಾಡಿದ್ದೂ ಅಲ್ಲದೆ ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೂ ಕಳುಹಿಸಿದ್ದರು. ತನ್ನನ್ನು ಸಮಾನ ಮನೋಭಾವದಿಂದ ಕಾಣುತ್ತಿದ್ದ ಶಾಹು ಅವರೊಡನೆ ಅಂಬೇಡ್ಕರ್ ಮುಕ್ತವಾಗಿ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವಾದದ ಬಗ್ಗೆ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಮತ್ತು ಶಾಹು ಮಹಾರಾಜ್ ಎದುರಿಸುತ್ತಿದ್ದ ಅಪಮಾನಗಳು ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ, ಈರ್ವರಲ್ಲೂ ಸಮಾನ ಮನೋಭಾವ ವ್ಯಕ್ತವಾಗುತ್ತಿತ್ತು. ಹಾಗಾಗಿಯೇ ತಮ್ಮ ಪ್ರಾರಂಭಿಕ ದಿನಗಳಲ್ಲಿ ಬ್ರಾಹ್ಮಣರಿಂದ ಹೆಚ್ಚಿನ ಬೆಂಬಲ ಗಳಿಸಿದರೂ, ಅಂಬೇಡ್ಕರ್ ಅವರಿಗೆ ಬ್ರಾಹ್ಮಣೇತರರಲ್ಲಿ ಹೆಚ್ಚಿನ ಸಾಂಗತ್ಯ ಗೋಚರಿಸುತ್ತಿತ್ತು.


೧೯೨೩ರಲ್ಲಿ ಲಂಡನ್‌ನಿಂದ ಹಿಂದಿರುಗಿದ ಬಳಿಕ ಅಂಬೇಡ್ಕರ್ ಅವರ ಕಾರ್ಯವೈಖರಿಯೇ ಬದಲಾಗಿತ್ತು. ಅವರ ಮನೆಯ ಮುಂದೆ ಜಮಾಯಿಸುತ್ತಿದ್ದ ಸಮುದಾಯದ ಜತೆ ಕಾರ್ಯ ಚಟುವಟಿಕೆಗಳಿಗಾಗಿ ಚಡಪಡಿಸುತ್ತಿದ್ದರು. ಈ ಸಂದರ್ಭದಲ್ಲೇ ಅಂಬೇಡ್ಕರ್ ೧೯೨೪ರ ಮಾರ್ಚಿ ೯ರಂದು ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯಲ್ಲಿ ಚಮನ್‌ಲಾಲ್ ಸೆಟಲ್‌ವಾಡ್, ಕೆ.ಎಫ್. ನಾರಿಮನ್ ಮುಂತಾದವರು ಸಕ್ರಿಯರಾಗಿದ್ದರು. ಶಿಕ್ಷಣ, ಆರ್ಥಿಕ ಪ್ರಗತಿ, ದಮನಿತ ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆ ಈ ಸಭಾದ ಮುಖ್ಯ ಧ್ಯೇಯಗಳಾಗಿದ್ದವು. ಈ ಸಂಘಟನೆಯ ಮೂಲಕ ಸಮೂಹ ನಾಯಕರಾಗಿ ಬೆಳೆದ ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿಯೂ ಹೊರಹೊಮ್ಮಿದ್ದರು. ಅಧಿಕಾರಶಾಹಿಯಲ್ಲಿ ಅಧಿಪತ್ಯ ಸಾಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ತೀವ್ರವಾಗಿ ಖಂಡಿಸುತ್ತಲೇ, ಅಸ್ಪೃಶ್ಯರಿಗೆ ಮತ್ತು ಶೂದ್ರರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಂಬೇಡ್ಕರ್ ಸಮರ್ಥಿಸುತ್ತಿದ್ದರು. ಇದೇ ವೇಳೆಗೆ ಶಾಸನ ಸಮಿತಿಯಲ್ಲೂ ಅಸ್ಪೃಶ್ಯರ ಪರವಾದ ದನಿ ಮೊಳಗಲಾರಂಭಿಸಿತ್ತು. ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರಿಗೆ ಮುಕ್ತವಾಗಿಸಲು ಶಾಸನವನ್ನು ಹೊರಡಿಸಲಾಯಿತು. ೧೯೨೬ರಲ್ಲಿ ಬಾಂಬೆ ಶಾಸನ ಸಮಿತಿಗೆ ನೇಮಿಸಲ್ಪಟ್ಟ ಅಂಬೇಡ್ಕರ್ ಸಮಿತಿಯ ಅನೇಕ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಅಸ್ಪೃಶ್ಯರ ಸಮಸ್ಯೆಗಳನ್ನು ಮುಂದಿಡುತ್ತಿದ್ದರು.


ಇದೇ ಸಂದರ್ಭದಲ್ಲಿ ಅಸ್ಪೃಶ್ಯರ ಮಹತ್ತರ ಹೋರಾಟವೊಂದು ರೂಪುಗೊಳ್ಳುತ್ತಿತ್ತು. ಮಾನವನ ಅತ್ಯಮೂಲ್ಯ ಅವಶ್ಯಕತೆಯಾದ ನೀರು ಅಸ್ಪೃಶ್ಯರಿಗೆ ಅಲಭ್ಯವಾಗಿತ್ತು. ಕಾರಣ ಮೇಲ್ಜಾತಿಯವರು ಅಸ್ಪೃಶ್ಯರನ್ನು ಅಶುದ್ಧರೆಂದು ಪರಿಗಣಿಸುತ್ತಿದ್ದರು. ಕೊಂಕಣ ಪ್ರಾಂತ್ಯದ ಮಹಾಡ್ ಎಂಬ ಸಣ್ಣ ಪಟ್ಟಣದಲ್ಲಿ ಪುರಸಭೆ ಸಾರ್ವಜನಿಕ ಕೆರೆಯನ್ನು ಅಸ್ಪೃಶ್ಯರಿಗೂ ಮುಕ್ತವಾಗಿಸಿ ಆದೇಶ ಹೊರಡಿಸಿತ್ತು. ಈ ಪಟ್ಟಣದಲ್ಲಿ ಮುಂಬೈನಿಂದ ವಲಸೆ ಬರುವ ದಲಿತರು, ಮೇಲ್ಜಾತಿಗಳವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬೇಡ್ಕರ್ ಅವರಿಗೆ ದಲಿತರು ಮಾತ್ರವಲ್ಲದೆ ಪ್ರಗತಿಪರ ಮೇಲ್ಜಾತಿಯವರ ಬೆಂಬಲವೂ ಇತ್ತು. ಇವರಲ್ಲಿ ಅನಂತರಾವ್ ಚಿತ್ರೆ, ಸುರೇಂದ್ರನಾಥ್ ಟಿಪ್ಸೆ, ಸಹಸ್ರಬುದ್ಧಿ , ಎನ್.ಎಂ.ಜೋಷಿ ಪ್ರಮುಖರಾಗಿದ್ದರು.


೧೯೨೭ರ ಮಾರ್ಚಿ ೧೯-೨೦ರಂದು ಬಹಿಷ್ಕೃತ ಹಿತರಕ್ಷಣಾ ಸಭೆಯು ಮಹಾಡ್‌ನಲ್ಲಿ ಜಿಲ್ಲಾ ಸಮಾವೇಶ ಏರ್ಪಡಿಸಿತ್ತು. ಸಮಾವೇಶದ ಎರಡನೇ ದಿನ ಚಿತ್ರೆಯವರ ಸೂಚನೆಯ ಮೇರೆಗೆ ಸಾರ್ವಜನಿಕ ಕೆರೆಯಲ್ಲಿ ಅಸ್ಪೃಶ್ಯರು ನೀರು ಕುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ೧೫೦೦ಕ್ಕೂ ಹೆಚ್ಚು ಜನ ನೀರು ಕುಡಿಯಲಾರಂಭಿಸಿದರು.  ಈ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಮೇಲ್ಜಾತಿ ಹಿಂದೂಗಳು ಎಲ್ಲೆಂದರಲ್ಲಿ ಜಮಾಯಿಸಲಾರಂಭಿಸಿದರು. ದಲಿತರು ದೇವಾಲಯಕ್ಕೂ ಪ್ರವೇಶಿಸುತ್ತಾರೆಂಬ ಭೀತಿಯಿಂದ ಮೇಲ್ಜಾತಿ ಹಿಂದೂಗಳು ಅಸ್ಪೃಶ್ಯರ ಮೇಲೆ ಆಕ್ರಮಣ ಆರಂಭಿಸಿದರು. ಆಕ್ರಮಣದಲ್ಲಿ ಅನೇಕ ಅಸ್ಪೃಶ್ಯರು ಏಟು ತಿನ್ನಬೇಕಾಯಿತು. ನಂತರ ಬ್ರಾಹ್ಮಣರು ಕೆರೆಯ ಶುದ್ಧೀಕರಣ ಕ್ರಿಯೆಯನ್ನು ಏರ್ಪಡಿಸಿದ್ದರು.


ಈ ಪ್ರಕರಣ ಮತ್ತು ಆಕ್ರಮಣ ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಉಂಟುಮಾಡಿತ್ತು. ದಲಿತ ಸಮುದಾಯದ ಹೋರಾಟಗಳಿಗೆ ಮಹಾಡ್ ಒಂದು ಲಾಂಛನ ಕೇಂದ್ರವಾಗಿ ಪರಿಣಮಿಸಿತು. ದೇಶಾದ್ಯಂತ ದಲಿತ ಸಮುದಾಯಗಳಿಗೆ ಈ ಹೋರಾಟ ಹೊಸ ಹುರುಪು ತಂದಿತ್ತಿತು. ೧೯೨೭ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ನೀರಿನ ಹಕ್ಕಿಗಾಗಿ ಸತ್ಯಾಗ್ರಹ ಸಮಾವೇಶ ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪ್ರಾರಂಭವಾದ ಬಹಿಷ್ಕೃತ ಭಾರತ್ ಪತ್ರಿಕೆ ಅಸ್ಪೃಶ್ಯರ ಅನೇಕ ಸಮಸ್ಯೆಗಳನ್ನು ಪ್ರಕಟಿಸಲಾರಂಭಿಸಿತು. ಆರ್ಯ ಸಮಾಜದ ಶುದ್ಧೀಕರಣ ಚಳುವಳಿಯನ್ನು ಈ ಪತ್ರಿಕೆಯ ಮೂಲಕ ಖಂಡಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಜಾತಿ ರಹಿತ ಆರ್ಯ ಸಮಾಜದ ಸ್ಥಾಪನೆಗಾಗಿ ನಡೆಯುತ್ತಿದ್ದ ಶುದ್ಧೀಕರಣ ಕ್ರಿಯೆ ಕ್ರಮೇಣ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಯತ್ನವಾಗಿ ಮಾರ್ಪಟ್ಟಿದ್ದು ತೀವ್ರ ಟೀಕೆಗೊಳಗಾಯಿತು. ಇದೇ ಸಂದರ್ಭದಲ್ಲಿ ಕೆಲವು ನಾಯಕರು ಸತ್ಯಾಗ್ರಹ ಸಮಾವೇಶದಲ್ಲಿ ಯಾವುದೇ ಬ್ರಾಹ್ಮಣರಿಗೆ ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು. ಆದರೆ ಈ ವಾದವನ್ನು ತಿರಸ್ಕರಿಸಿದ ಅಂಬೇಡ್ಕರ್ ನಮ್ಮ ಚಳುವಳಿಯು ಬ್ರಾಹ್ಮಣ್ಯದ ವಿರುದ್ಧ ಮತ್ತು ಬ್ರಾಹ್ಮಣ ಧರ್ಮದ ವಿರುದ್ಧವೇ ಹೊರತು, ಬ್ರಾಹ್ಮಣರ ವಿರುದ್ಧವಲ್ಲ ಎಂದು ಹೇಳಿದ್ದರು. ನಂತರದಲ್ಲಿ ಮತಾಂತರದ ಪ್ರಶ್ನೆ ಉದ್ಭವಿಸಿದಾಗ, ಇಸ್ಲಾಂಗೆ ಮತಾಂತರ ಹೊಂದುವ ಸಲಹೆಗಳೂ ಕೇಳಿಬಂದವು. ಆದರೆ ಅಂಬೇಡ್ಕರ್ ಅವರು ಮೊದಲು ನಾವು ಹಿಂದೂ ಧರ್ಮಕ್ಕೆ ಸೇರಿದವರೇ ಇಲ್ಲವೇ ಎಂದು ನಿರ್ಧರಿಸೋಣ ಎಂದು ಹೇಳುವ ಮೂಲಕ ಇಡೀ ಚರ್ಚೆಗೆ ಹೊಸ ಆಯಾಮವನ್ನು ಒದಗಿಸಿದ್ದರು.


೧೯೨೭ರ ಡಿಸೆಂಬರ್ ೨೩ರಂದು ಸತ್ಯಾಗ್ರಹ ಸಮಾವೇಶದ ವೇಳೆಗೆ ಮಹಾಡ್‌ನಲ್ಲಿ ೧೫ ಸಾವಿರಕ್ಕೂ ಹೆಚ್ಚು ದಲಿತರು ಸೇರಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಕೆರೆಯನ್ನು ನೀರನ್ನು ಬಳಸದಂತೆ ನಿಷೇದಾಜ್ಞೆ ಹೊರಡಿಸಿದ್ದರು. ಈ ಆಜ್ಞೆಯನ್ನು ಪಾಲಿಸಿದ ಅಂಬೇಡ್ಕರ್ ವಿಚಲಿತರಾಗದೆ, ಮತ್ತೊಂದು ವಿಶಿಷ್ಟ ಹೋರಾಟವನ್ನು ಹಮ್ಮಿಕೊಂಡಿದ್ದರು. ಪುರೋಹಿತಶಾಹಿ ಹಿಂದೂ ಧರ್ಮದ ಪವಿತ್ರ ಶಾಸನ ಗ್ರಂಥವಾದ ಮನುಸ್ಮೃತಿಯನ್ನು ದಹಿಸುವ ಕಾರ್ಯಕ್ರಮವನ್ನು ಅಂಬೇಡ್ಕರ್ ಏರ್ಪಡಿಸಿದರು. ಈ ನಿರ್ಣಯವನ್ನು ಮಂಡಿಸಿದವರು ಸಹಸ್ರಬುದ್ಧಿ ಎಂಬ ಬ್ರಾಹ್ಮಣರಾದರೆ, ಅನುಮೋದಿಸಿದವರು ಚಂಬಾರರಾದ ರಾಜಭೋಜ್ ಅವರಾಗಿದ್ದರು. ಸಮಾವೇಶದ ಪ್ರಥಮ ದಿನದ ರಾತ್ರಿ ಮನುಸ್ಮೃತಿಯನ್ನು ದಹಿಸಲಾಗಿತ್ತು. ಮೂರನೆಯ ದಿನ ಆಕ್ರಮಣಶೀಲ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಭಕ್ತಿ ಸಂತರು, ಗಾಂಧೀಜಿ, ಅಗರ್‌ಕರ್ ಮತ್ತು ಶಾಹುಮಹಾರಾಜ್ ಅವರ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು. ನಂತರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಂಬೇಡ್ಕರ್ ಅಸ್ಪೃಶ್ಯ ಮಹಿಳೆಯರನ್ನು ಕುರಿತು, ಕೆಳಜಾತಿಗಳಂತೆ ಬೆಳ್ಳಿಯ ಒಡವೆಗಳನ್ನು ಧರಿಸುವ ಪವೃತ್ತಿಯನ್ನು ಕೈಬಿಟ್ಟು  ತಮ್ಮ ಜಾತಿ ಸಂಕೇತಗಳು ಗೋಚರಿಸದಂತೆ, ಮೇಲ್ಜಾತಿಯವರ ರೀತಿ ಉಡುಪು ಧರಿಸಲು, ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಲು ಕರೆ ನೀಡಿದ್ದರು. ಈ ಹಂತದಿಂದ ಮಹಾಡ್ ಅಂಬೇಡ್ಕರ್ ಅವರ ಹೋರಾಟಗಳ ಕೇಂದ್ರ ಬಿಂದುವಾಯಿತು. ಅಸ್ಪೃಶ್ಯರ ಭಾಗವಹಿಸುವಿಕೆ ಮತ್ತು ಕೆಲವು ಮೇಲ್ಜಾತಿಯವರ ಬೆಂಬಲ ಅಂಬೇಡ್ಕರ್‌ಗೆ ಪ್ರೋತ್ಸಾಹದಾಯಕವಾಗಿತ್ತು.

ಹಿಂದೂ ಧರ್ಮದ ಪವಿತ್ರ ಶಾಸ್ತ್ರದ ವಿರುದ್ಧ ನಡೆದ ಈ ಸಂಘರ್ಷದೊಡನೆಯೇ, ಸಾರ್ವಜನಿಕ ಸ್ಥಳಗಳನ್ನು ಮತ್ತು ಅವಕಾಶಗಳನ್ನು ಬಳಸುವಲ್ಲಿ ದಲಿತರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟಗಳು ತೀವ್ರವಾಗತೊಡಗಿತು. ೧೯೨೦ರ ದಶಕದಲ್ಲಿ ಅಸ್ಪೃಶ್ಯರಲ್ಲಿ ತಮ್ಮ  ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಲಾರಂಭಿಸಿತು. ಗುರುವಾಯೂರಿನಲ್ಲಿ ದೇವಾಲಯದ ಮುಂದೆ ಹಾದು ಹೋಗುವ ರಸ್ತೆಯಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ದಲಿತರು ಈ ರಸ್ತೆಯನ್ನು ಹಾದು ಹೋಗುವ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಪುಣೆಯ ಪಾರ್ವತಿ ದೇವಸ್ಥಾನ ಮತ್ತು ನಾಸಿಕ್‌ನಲ್ಲಿರುವ ರಾಮ ದೇವಾಲಯದಲ್ಲೂ ದಲಿತರ ಪ್ರವೇಶಕ್ಕಾಗಿ ಹೋರಾಟ ರೂಪುಗೊಂಡಿತು. ಈ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಅಂಬೇಡ್ಕರ್ ಸೆಕ್ಯುಲರ್ ಪ್ರಜಾ ಹಕ್ಕುಗಳಿಗಾಗಿ ಮತ್ತು ಹಿಂದೂ ಧರ್ಮದ ನಿರಾಕರಣೆಗಾಗಿ ವೇದಿಕೆ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲೇ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಗಾಂಧೀಜಿಯವರ ಯತ್ನಗಳನ್ನು ಅಂಬೇಡ್ಕರ್ ತೀವ್ರವಾಗಿ ಟೀಕಿಸಲಾರಂಭಿಸಿದರು.

ನಾಸಿಕ್ ಸತ್ಯಾಗ್ರಹದಲ್ಲಿ ಅಂಬೇಡ್ಕರ್ಈ ಹಂತದಲ್ಲಿ ಆರ್ಯರ ಆಗಮನದ ವಾದವನ್ನು ಸಂಪೂರ್ಣವಾಗಿ ಒಪ್ಪದ ಅಂಬೇಡ್ಕರ್ ಹಿಂದೂ ಧರ್ಮವನ್ನೂ ಸಂಪೂರ್ಣವಾಗಿ ಖಂಡಿಸುತ್ತಿರಲಿಲ್ಲ. ಬದಲಾಗಿ ಭಕ್ತಿಪಂಥ, ತುಕಾರಾಂ, ಜ್ಞಾನೇಶ್ವರ್ ಮುಂತಾದ ಸಮಾಜ ಸುಧಾರಕರ ಬಗ್ಗೆ ಗಾಢವಾದ ಅಧ್ಯಯನವನ್ನು ಆರಂಭಿಸಿದ್ದರು. ತಮ್ಮದೇ ಆದ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಮಂಡಿಸುವ ಧ್ಯೇಯವನ್ನು ಹೊಂದಿದ್ದ ಅಂಬೇಡ್ಕರ್ ತಮ್ಮ ಅಧ್ಯಯನ ಮತ್ತು ಅನುಭವಗಳನ್ನೇ ಆಧಾರವಾಗಿರಿಸಿಕೊಂಡಿದ್ದರು. ತಮ್ಮ ತಂದೆಯವರ ಕಬೀರ್ ಪಂಥದ ಅನುಭವಗಳನ್ನು ಅಭ್ಯಸಿಸುತ್ತ ಕಬೀರ್‌ದಾಸ್ ಅವರ ತೀವ್ರಗಾಮಿತ್ವ ಹೇಗೆ ಬ್ರಾಹ್ಮಣವಾದದ ಚೌಕಟ್ಟಿನಲ್ಲಿ ಸಿಲುಕಿಹೋಗಿತ್ತು ಎಂಬ ಅಂಶವನ್ನೂ ಅಂಬೇಡ್ಕರ್ ಗ್ರಹಿಸಿದ್ದರು. ಅವರ ಮುಂದಿನ ಚಿಂತನಾ ಕ್ರಮವೂ ಇದರಿಂದಲೇ ಪ್ರಭಾವಿತವಾಗಿತ್ತು.


ಮುಂಬೈ ಶಾಸನ ಸಮಿತಿಯಲ್ಲಿ ಅಂಬೇಡ್ಕರ್ ಪ್ರಬಲ ದನಿಯಾಗಿ ಹೊರಹೊಮ್ಮಿದ್ದರು. ಅಸ್ಪೃಶ್ಯರ ಪರವಾದ ಅನೇಕ ಶಾಸನಗಳನ್ನು ಅನುಷ್ಟಾನಗೊಳಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದರು. ೧೯೨೭ರ ಸೆಪ್ಟೆಂಬರ್‌ನಲ್ಲಿ, ಮೇಲ್ಜಾತಿಯ ಹಿಂದೂಗಳು, ಕ್ರೈಸ್ತರು, ಅಸ್ಪೃಶ್ಯರನ್ನೊಳಗೊಂಡ ಸಮತಾ ಸಮಾಜ್ ಸಂಘವನ್ನು ಸ್ಥಾಪಿಸಿದ ಅಂಬೇಡ್ಕರ್ ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕಾಗಿ ಪ್ರಚಾರ ಕೈಗೊಂಡಿದ್ದರು. ಅಂತರ್ಜಾತಿ ವಿವಾಹದ ಕಾರ್ಯಕ್ರಮ ಫಲಪ್ರದವಾಗಲಿಲ್ಲ. ಈ ಹಂತದಲ್ಲಿ ಅಸ್ಪೃಶ್ಯರ ವಿವಾಹದಲ್ಲಿ, ಮನಃಪೂರ್ವಕವಾಗಿ ಅಲ್ಲದಿದ್ದರೂ, ಸಂದರ್ಭಕ್ಕನುಗುಣವಾಗಿ ವೈದಿಕ ಸಂಪ್ರದಾಯಗಳನ್ನು ಅನುಸರಿಸಲೂ ಸೂಚಿಸಿದ್ದರು. ಬಹುಶಃ ಈ ಹಂತದಲ್ಲಿ ಅಂಬೇಡ್ಕರ್ ಹಿಂದೂ ಧರ್ಮದ ಎಲ್ಲ ಸ್ವರೂಪಗಳನ್ನು ವಿರೋಧಿಸುತ್ತಿರಲಿಲ್ಲ ಎನಿಸುತ್ತದೆ.


ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಕೈಗೊಂಡ ಹೋರಾಟಗಳು ಹಿಂದೂ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ನಿಟ್ಟಿನಲ್ಲಿ ಸಾಗಿದ್ದು ಈಗ ಇತಿಹಾಸ. ಆದರೆ ಜಾತಿವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಪಷ್ಟತೆ ಇದ್ದು, ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಕಟಪಡಿಸುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ. ಅಂಬೇಡ್ಕರ್ ಬ್ರಾಹ್ಮಣ ದ್ವೇಷಿ, ದಲಿತರ ಪರ ಎಂದಾಕ್ಷಣ ಬ್ರಾಹ್ಮಣ ವಿರೋಧಿ ಎಂದು ಆರ್ಥೈಸುವ ಆಧುನಿಕ ಚಿಂತಕರು ಈ ಸತ್ಯವನ್ನು ಗ್ರಹಿಸಿದರೆ ಒಳಿತು. 

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.