Showing posts with label ಜಾತಿ. Show all posts
Showing posts with label ಜಾತಿ. Show all posts

Wednesday, October 02, 2013

ಬ್ರಾಹ್ಮಣ ಮೌಲ್ಯಗಳಿಗೆ ಹಿಂತಿರುಗಿದ ವೀರಶೈವ !

ವೀರಶೈವ-ಲಿಂಗಾಯತ ಬಗ್ಗೆ ಜೆ.ಪಿ. ಶೌಟನ್ ಅವರ ಅಧ್ಯಯನ 
( ಅನು : ಟಿ.ಆರ್. ಚಂದ್ರಶೇಖರ)

‘15ನೆಯ ಶತಮಾನದ ವೀರಶೈವದ ಬಗ್ಗೆ ತಿಳಿದುಕೊಳ್ಳಲು ತೋಂಟದ ಸಿದ್ಧಲಿಂಗೇಶ್ವರರ ವಚನಗಳು ಮುಖ್ಯ ಆಕರಗಳಾಗಿವೆ. ಈ ಆಕರದಲ್ಲೂ ಸಹ ವೀರಶೈವದ ಪ್ರಾರಂಭದ ಘಟ್ಟದಲ್ಲಿ ಪ್ರಧಾನವಾಗಿದ್ದ ಸಾಮಾಜಿಕ ವಿಚಾರಗಳಿಗೆ ಇಲ್ಲಿ ಕನಿಷ್ಟ ಗಮನವೂ ದೊರೆತಿಲ್ಲ. ಜಾತಿಗೆ ಸಂಬಂಧಿಸಿದಂತೆ ಸಿದ್ಧಲಿಂಗೇಶ್ವರರು ಸಾಂಪ್ರದಾಯಿಕ ಮಡಿ ಮೈಲಿಗೆ ವಿಚಾರಗಳಿಗೆ ಮೊರೆ ಹೋದಂತೆ ಕಾಣುತ್ತದೆ. ಜಾತಿ ತಾರತಮ್ಯದ ವಿವರವಾದ ವಿಶ್ಲೇಷಣೆಯಿರುವ ಇವರ ಏಕಮೇವ ವಚನವೊಂದರಲ್ಲಿ ಬಸವ ಮತ್ತು ಅವನ ಸಮಕಾಲೀನರು ಪ್ರಚುರಪಡಿಸಿದ್ದ ಸಮಾನತೆ ವಿಚಾರಕ್ಕೆ ಇಲ್ಲಿ ಅವಕಾಶವನ್ನೇ ನೀಡಿಲ್ಲ. ಜಾತಿಗೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯವಾದಿ ಬ್ರಾಹ್ಮಣ ಮೌಲ್ಯಗಳಿಗೆ ಹಿಂತಿರುಗಿದ ವೀರಶೈವವನ್ನು ರೂಪಿಸಿದವರೇ ಸಿದ್ಧಲಿಂಗೇಶ್ವರ.

ಬೊಂಬಾಯಿ ಶ್ರೇಷ್ಟ ನ್ಯಾಯಾಲಯವು 1879 ರಲ್ಲಿ ಒಂದು ತೀರ್ಪಿನಲ್ಲಿ ಲಿಂಗಾಯತರು ಶೂದ್ರರು ಎಂದು ಘೋಷಿಸಿತು. ಇದು ಲಿಂಗಾಯಿತರ ಪ್ರತಿಭಟನೆಗೆ ಕಾರಣವಾಯಿತು.

ಮೈಸೂರು ರಾಜ್ಯದಲ್ಲಿ ‘1891 ರ ಜನಗಣತಿ ಸಂದರ್ಭದಲ್ಲಿ ಲಿಂಗಾಯತರನ್ನು ಹಿಂದೂ ವರ್ಣ ವ್ಯವಸ್ಥೆಯ ನಾಲ್ಕನೇ ಸ್ಥಾನದ ಶೂದ್ರ ವರ್ಗವೆಂದು ವರ್ಗೀಕರಿಸಲು ಕ್ರಮ ಕೈಗೊಂಡಾಗ ತೀವ್ರವಾಗಿ ಪ್ರತಿಭಟನೆ ಉಂಟಾಯಿತು. ಲಿಂಗಾಯತರ ಅನೇಕ ಪ್ರಭಾವಿ ಗುಂಪುಗಳು ಕನಿಷ್ಟ ಪಕ್ಷ ತಮ್ಮನ್ನು ಲಿಂಗಾಯತ ಬ್ರಾಹ್ಮಣರೆಂದು ಪರಿಗಣಿಸಬೇಕೆಂದು ಒತ್ತಾಯಿಸಿತು. ... ... ... ... ... ... ... ...  ಶೂದ್ರರೆಂಬ ವರ್ಗೀಕರಣದಿಂದ ಉಂಟಾಗುವ ಅವಮಾನದಿಂದ ರಕ್ಷಣೆ ಕೋರಿ ನಿಯೋಗವೊಂದು ಮಹಾರಾಜರನ್ನು ಭೇಟಿ ಮಾಡಿತು. ರಾಜ ಸಂಸ್ಥಾನದ ಸರ್ಕಾರವು ಇವರ ಮನದ ಅಳಲನ್ನು ಭಾಗಶಃ ಒಪ್ಪಿಕೊಂಡು ಶೂದ್ರ ಸ್ಥಾನಮಾನವನ್ನು ಅಪ್ರಧಾನಗೊಳಿಸಿ ಅವರವರ ಒಳಪಂಗಡಗಳ ಹೆಸರುಗಳಿಂದಲೇ ವರ್ಗೀಕರಿಸುವ ಕ್ರಮ ಕೈಗೊಂಡಿತು. ಆದರೆ ‘ಲಿಂಗಾಯತ ಬ್ರಾಹ್ಮಣ’ ಎಂಬುದನ್ನು ಕೇವಲ ಖಾಸಗಿಯಾಗಿ ಬಳಸಲು ಅನುಮತಿ ನೀಡಿತು.

1901 ರ ಜನಗಣತಿ ಸಂದರ್ಭದಲ್ಲಿ ಅನೇಕ ಲಿಂಗಾಯತ ಕ್ರಿಯಾ ಸಮಿತಿಗಳು ಹುಟ್ಟಿಕೊಂಡವು. ಲಿಂಗಾಯತ ಸಮುದಾಯವನ್ನು ಸಾಂಪ್ರದಾಯಿಕ ಹಿಂದೂ ವರ್ಣ ವ್ಯವಸ್ಥೆಗೆ ಸಮಾನಾಂತರವಾಗಿ ವೀರಶೈವ ಬ್ರಾಹ್ಮಣ, ವೀರಶೈವ ಕ್ಷತ್ರಿಯ, ವೀರಶೈವ ವೈಶ್ಯ ಹಾಗೂ ವೀರಶೈವ ಶೂದ್ರರೆಂಬ ಹೊಸ ವರ್ಗೀಕರಣ ಯೋಜನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿತು. ... ... ... ... ... ... ... ... ... ... ... ... ... ... ... ... ... ... ಈ ಬಗೆಯ ಮೂಲಭೂತ ಬದಲಾವಣೆ ಒಳಗೊಂಡ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಸ್ಸು ಆಡಳಿತ ವ್ಯವಸ್ಥೆಗಿರಲಿಲ್ಲ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಸಮುದಾಯಕ್ಕೆ ವೈಭವದ ಸ್ಥಾನವನ್ನು ಒದಗಿಸುವ ಸಲುವಾಗಿ ಮತ್ತು ವೈದಿಕ ಸಂಸ್ಕøತ ಪಂಥದ ಜೊತೆಗಿನ ವೀರಶೈವದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಲಿಂಗಾಯತರು ಪ್ರಯತ್ನಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ 12ನೆಯ ಶತಮಾನದ ಕ್ರಾಂತಿಕಾರಿ ವಿಚಾರಕ್ಕೆ ಮತ್ತು ಬಸವನಿಗೆ ಯಾವುದೇ ಸ್ಥಾನ – ಮಹತ್ವ ನೀಡಲಿಲ್ಲ.

ವರ್ಣ ರಚನೆಗೆ ಪ್ರತಿಯಾಗಿ ಲಿಂಗಾಯತ ಸಮುದಾಯವನ್ನು ಒಂದು ಕಡೆಯಲ್ಲಿ ವೀರಶೈವ ಬ್ರಾಹ್ಮಣ ಮತ್ತು ಇನ್ನೊಂದು ಕಡೆ ವೀರಶೈವ ಶೂದ್ರ ಎಂಬ ಅನುಕ್ರಮ ಸ್ಥಾಪಿಸುವ ಪ್ರಯತ್ನಗಳ ಕಾಲ ಮುಗಿಯಿತು. ಲಿಂಗಾಯತ ಸಮುದಾಯವು ಹೆಚ್ಚು ಸಂವೃತಗೊಂಡಿದೆ ಎಂಬುದಕ್ಕೆ ಅಧಿಕೃತ ಆಧಾರಗಳಿವೆ. ವ್ಯಕ್ತಿಗತ ಮತಾಂತರ ಸಂಭವಿಸಬಹುದಾದರೂ ಸಹ ಜಾತಿಗಳೇ ಲಿಂಗಾಯತವಾಗಿ ಮತಾಂತರ ಹೊಂದುವ ಪರಿ ಇಂದು ಪೂರ್ಣವಾಗಿ ನಿಂತು ಹೋಗಿದೆ.

ಲಿಂಗಾಯತ ಸಮುದಾಯವು ಜಾತಿಯ ಎಲ್ಲ ಲಕ್ಷಣಗಳನ್ನೂ ಪ್ರದರ್ಶಿಸುತ್ತಿದೆ. ನಿಯಮದ ಪ್ರಕಾರ ಇಂದಿಗೂ ಅನ್ಯ ಜಾತಿಗಳ ಜೊತೆ ಆಹಾರ ಸ್ವೀಕಾರ ನಿಷಿದ್ಧ. ಆದರೆ ಇದು ಆಚರಣೆಯಲ್ಲಿ ಅಷ್ಟು ಕಟ್ಟುನಿಟ್ಟಾಗಿಲ್ಲ. ವಿವಾಹಗಳಲ್ಲಿ ತಮ್ಮದೇ ಜಾತಿಯೊಳಗೆ ಗಂಡು-ಹೆಣ್ಣುಗಳನ್ನು ಆರಿಸಲಾಗುತ್ತದೆ. ಉಳಿದೆಲ್ಲಾ ಜಾತಿಗಳಿಗಿಂತ ಲಿಂಗಾಯತರಲ್ಲಿ ಜಾತಿ ಮನೋಭಾವ ಅತಿಯಾಗಿದೆ ಎಂಬ ಹೆಗ್ಗಳಿಕೆಯೂ ಆ ಜಾತಿಗಿದೆ.

19ನೆಯ ಶತಮಾನದಲ್ಲಿ ಲಿಂಗಾಯತ ಸಮುದಾಯದಲ್ಲಿ ಕಂಡುಬಂದ ಛಿದ್ರೀಕರಣವು ಈಗ ಗತಕಾಲಕ್ಕೆ ಸೇರಿದ ಸಂಗತಿಯಾಗಿ ಬಿಟ್ಟಿತು. ಆದರೆ ಹುಟ್ಟಿನೊಂದಿಗೆ ಬಂದ ತರತಮಭಾವ ಇಂದಿಗೂ ಮುಂದುವರಿದಿದೆ. ಹೆಚ್ಚು ಕಡಿಮೆ ಲಿಂಗಾಯತ ಜಾತಿಯಲ್ಲಿ ಜನಿಸಿದವರನ್ನೆಲ್ಲಾ ಸಮಾಜವು ಲಿಂಗಾಯತ ಎಂದು ಪರಿಗಣಿಸುತ್ತಿದೆ. ಕರ್ನಾಟಕದಲ್ಲಿ ಅದೊಂದು ಸಂವೃತ ಸಮುದಾಯವಾಗಿ ಕಂಡು ಬಂದಿದೆ. ಹೀಗೆ ಜಾತಿಭೇದವನ್ನು ತಿರಸ್ಕರಿಸಿದ ಚಳುವಳಿಯೊಂದು ಅಂತಿಮ ಘಟ್ಟದಲ್ಲಿ ತಾನೇ ಒಂದು ಜಾತಿಯಾಗಿ ಬಿಟ್ಟಿತು.

Tuesday, January 08, 2013

ಡಾ. ಅಂಬೇಡ್ಕರ್ ಮತ್ತು ನಂತರ.....


                               ಡಾ. ಸಿದ್ರಾಮ ಕಾರಣಿಕ 


ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೌಲ್ವಿಕ ನೀತಿತತ್ವಗಳನ್ನು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಹೇಳುವ ಹೇರಳ ಜನ, ಆಚರಣೆ ಸಂದರ್ಭದಲ್ಲಿ ಮಾತ್ರ ಇರುವುದೇ ಇಲ್ಲ. ಸಂಪ್ರದಾಯಶೀಲ ಭಾರತದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿಯ ಹಲವು ಮುಖಗಳೇ ಮುಂದುವರಿದುಕೊಂಡು ಬಂದಿವೆ. ಇಂಥ ಹಲವು ವಿಕೃತಿಗಳಲ್ಲಿ ಜಾತಿಸೃಷ್ಟಿ ಕೂಡ ಒಂದು. ಜಾತಿ ವಿನಾಶದ ಹಾದಿಯಲ್ಲಿ ಹಲವಾರು ಸಂತರು, ಶರಣರು, ವಿಚಾರವಾದಿಗಳು, ಮಹಾತ್ಮರು, ಮುನ್ನಾಳುಗಳು ಹೋರಾಟ ಮಾಡಿದ್ದಾರೆ. ಆ ಹೋರಾಟಗಳ ಫಲ ಒಂದಿಷ್ಟು ಜಾಗೃತಿಯನ್ನೂ ಜನರಲ್ಲಿ ತುಂಬಿದ್ದು ನಿಜ. ಆದರೆ ಜಾತಿಯೆಂಬ ಭೂತ ವಿವಿಧ ರೂಪಗಳಲ್ಲಿ ಮತ್ತೇ ಮತ್ತೇ ಮುಖದೋರುತ್ತ ಹೇಂಕರಿಸುತ್ತಲೇ ಇದೆ. ಭಾರತ ದೇಶದಲ್ಲಿ ಈ ಜಾತಿಯ ಕಾರಣದಿಂದಲೇ ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು ಇನ್ನೂ ಬದುಕುಳಿದು ಭೂತಾಕಾರವಾಗಿ ಬೆಳೆಯುತ್ತಲೇ ಇವೆ ; ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.
    ಡಾ. ಬಾಬಾಸಾಹೇಬ ಅಂಬೇಡ್ಕರ್ ರು ಈ ಜಾತಿ ವಿನಾಶಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದವರು. ಹಿಂದೂ ಧರ್ಮದ ಸನಾತನ ಸಂಪ್ರದಾಯವನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಟುವಾಕ್ಯಗಳಿಂದ ಆ ಧರ್ಮದ ಅಂತರಂಗದಲ್ಲಿದ್ದ ಕೊಳಕನ್ನು ಬಿಚ್ಚಿಟ್ಟಿದ್ದಾರೆ. ಈ ಧರ್ಮದಲ್ಲಿ ಅ
ಸ್ಪೃಶ್ಯರೆನ್ನಿಸಿಕೊಂಡವರ ಬದುಕು ಹಸನಾಗಲು, ಅವರೆಲ್ಲ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲು ತಮ್ಮ ಕೊನೆ ಉಸಿರಿನವರೆಗೆ ಕ್ರಿಯಾಶೀಲರಾಗಿದ್ದ ಮಹಾನ್ ನೇತಾರ ಡಾ. ಬಾಬಾಸಾಹೇಬ ಅಂಬೇಡ್ಕರರು. ಅಸ್ಪೃಶ್ಯ ಅನುಭವಗಳಿಂದ ರೊಚ್ಚಿಗೆದ್ದ ಅವರು ಅಸ್ಪೃಶ್ಯನ ಗೋಳನ್ನು ಸ್ವತಃ ಕಂಡುಂಡವರು.
    `ಇಡೀ ದೇಶದ ಮೂಲೆ ಮೂಲೆ ಬಿಡದೆ ಎಲ್ಲೆಲ್ಲೂ ಅ
ಸ್ಪೃಶ್ಯನೆಂಬುವನು ಆತಂಕವನ್ನೆದುರಿಸುತ್ತಾನೆ. ಪಕ್ಷಪಾತಕ್ಕೆ ಸಿಕ್ಕು ನರಳುತ್ತಾನೆ. ಇಂಡಿಯಾದ ಈ ಅವಕಾಶಹೀನ ನಿರ್ಭಾಗ್ಯನಿಗೆ ಎಲ್ಲ ಕಡೆಯೂ ಅನ್ಯಾಯವೇ ಎದುರಾಗುತ್ತದೆ. ಸುತ್ತು ಕೋಟಲೆಗಳ ನೆರೆಯಲ್ಲಿ ಮೈ ಮುರಿದು ಗೆಯ್ಯುವ ಅಸ್ಪೃಶ್ಯರಿಗೆ ಮಾತ್ರವೇ ಈ ಕಟುಸತ್ಯ ಅರಿವಾಗಲು ಸಾಧ್ಯ.'1 ಎನ್ನುವ ಮೂಲಕ, ಅವರು ಈ ಅನುಭವಗಳ ಮೂಲಕವೇ ಎಚ್ಚರಾಗಿ ಎದ್ದು ನಿಂತು ತಮ್ಮ ಮೇಲೆ ನಡೆಯುವ ಅನ್ಯಾಯವನ್ನು ಮೆಟ್ಟಿ ನಿಲ್ಲಲು  ಅಸ್ಪೃಶ್ಯರು ಸಿದ್ಧರಾಗಬೇಕು ಎಂದು ಕರೆ ನೀಡುತ್ತಾರೆ. ಯಾಕೆಂದರೆ ಯಾವ ಮಹಾತ್ಮಾನಾಗಲೀ ಜಗದ್ಗುರುವಾಗಲೀ ನಿಮ್ಮನ್ನು ಉದ್ಧಾರ ಮಾಡಲಾರರು ; ನಿಮ್ಮ ಉದ್ಧಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕು ಎಂಬುದು ಅವರ ಸ್ಪಷ್ಟ ವಿಚಾರವಾಗಿತ್ತು. 
    ಜಾತಿಯಿಂದ ಮೇಲು ಎಂದುಕೊಂಡು ಮೆರೆಯುವ ಮಂದಿಗೂ ಕೂಡ ಡಾ. ಬಾಬಾಸಾಹೇಬ ಅಂಬೇಡ್ಕರರು ಎಚ್ಚರಿಕೆ ನೀಡುತ್ತಾರೆ : `ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿ ಸಾಧಿಸಲಾರಿರಿ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ, ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ, ಜಾತಿಯ ತಳಗಳನ್ನಿಟ್ಟುಕೊಂಡು ನೀವು ಏನನ್ನೂ ಕಟ್ಟಲಾರಿರಿ, ರಾಷ್ಟ್ರವನ್ನು ನಿರ್ಮಿಸಲಾರಿರಿ, ನೀತಿಯನ್ನು ನೆಲೆಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಅದು ಏನೇ ಆಗಿರಲಿ ಬಿರುಕು ಬಿಡುವುದು ; ಅಖಂಡವಾಗಿ ಉಳಿಯಲಾರದು.'2
    ಈ ಮಾತು ಕೆಲವರಿಗಾದರೂ ತಟ್ಟಿರಬಹುದು. ಜಾತಿಯ ಬಲೆಯಿಂದ ಬಿಡಿಸಿಕೊಂಡು ಹೊರಬರಲು ಬಹಳಷ್ಟು ಜನರಿಗೆ  ಸಾಧ್ಯವಾಗಲೇ ಇಲ್ಲ. ಅದು ಇಂದಿನವರೆಗೂ ಸಾಧ್ಯವಾಗಿಲ್ಲ ಎಂದರೆ  ಅಚ್ಚರಿ ಪಡುವ ಇಲ್ಲ. ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆಯಾಗುವುದು ಸಾಧ್ಯವೇ ಇಲ್ಲ ಎಂಬುದನ್ನು  ಮನಗಂಡ ಡಾ. ಬಾಬಾಸಾಹೇಬರು ಹೋರಾಟವನ್ನು ತೀವ್ರಗೊಳಿಸಿದರು. `ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು .............. ಹಿಂದೂ ಧರ್ಮವು ಸ್ವತಃ ಅಸ್ಪøಶ್ಯರ ವಿರುದ್ಧ ಅಸಮಾನತೆ ಹಾಗೂ ಅನ್ಯಾಯಗಳ ಸಾಕಾರ ರೂಪವಾಗಿದೆ. ಅದು ನ್ಯಾಯದ ಬಗ್ಗೆ ಉಪದೇಶ ನೀಡಿದರೆ ತನ್ನ ಅಸ್ತಿತ್ವದ ವಿರುದ್ಧ ಹೋದಂತೇ. ಇದು ಸಾಧ್ಯವಾಗುತ್ತದೆ ಎಂದು ಕನಸು ಕಾಣುವುದೂ ಒಂದೇ ಪವಾಡಕ್ಕೆ ಕಾಯುವುದೂ ಒಂದೇ'3
    ಹಿಂದೂ ಧರ್ಮದ ಕುತಂತ್ರ ಮತ್ತು ಒಳಸಂಚಿನ ವಿನ್ಯಾಸಗಳನ್ನು ಅಧ್ಯಯನ ಮಾಡಿ, ಅನುಭವದ ಮೂಲಕ ಕಂಡುಕೊಂಡ ಸತ್ಯ ಇದಾಗಿತ್ತು. ಡಾ. ಬಾಬಾಸಾಹೇಬರಿಗೆ ಹಿಂದೂ ಧರ್ಮದಲ್ಲಿರುವ ಪೊಳ್ಳುತನ, ನಯವಂಚಕತೆ ಮತ್ತು ಮೋಸಗಾರಿಕೆಗಳ ಪರಿಪೂರ್ಣ ಪರಿಚಯವಾಗಿತ್ತು. ಹೀಗಾಗಿಯೇ ಹೇಸಿಗೆ ಹುಟ್ಟಿಸುವಷ್ಟು ತಾರತಮ್ಯ ಹೊಂದಿದ ಸಮಾಜದ ವರ್ತನೆಯಿಂದ ಬೇಸತ್ತು ಅ
ಸ್ಪೃಶ್ಯರು ಹಿಂದೂಗಳಲ್ಲ ಎಂದು ಘೋಷಿಸಿಯೇ ಬಿಟ್ಟರು.
    `ಅ
ಸ್ಪೃಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳಿಗೆ ತಾವು ಮತ್ತು ಅಸ್ಪೃಶ್ಯರು ಒಂದೇ ಸಮಾಜಕ್ಕೆ ಸೇರಿದವರು ಎಂಬ ಭಾವನೆ ಬರುವುದಿಲ್ಲ. ಈ ಕಾರಣದಿಂದಾಗಿಯೇ ಅಸ್ಪೃಶ್ಯರೊಂದಿಗಿನ ಹಿಂದೂಗಳ ನಡವಳಿಕೆಯಲ್ಲಿ ಯಾವ ನೈತಿಕ ಕಾಳಜಿಗಳಿಲ್ಲದ ಅಸಡ್ಡೆ ವ್ಯಕ್ತವಾಗುತ್ತದೆ'4 ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹೀಗಾಗಿಯೇ ಹಿಂದೂ ಧರ್ಮ ತಮ್ಮದು ಎಂದು ಹೇಳಿಕೊಳ್ಳಲು ಯಾವ ಹೆಮ್ಮೆಯೂ ಇಲ್ಲ ; ಅದು ಸಾವಿನ ಪಾಶ ಎಂಬ ಅರಿವಿನಿಂದ ಹಿಂದೂ ಧರ್ಮವನ್ನು ತೊರೆಯಲು ಸಿದ್ಧರಾದರು. ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಎಂಬ ಹಣೆಪಟ್ಟಿ ಹೊತ್ತುಕೊಂಡ ರಾಜಕೀಯ ಪಕ್ಷವೊಂದರ ಪುಢಾರಿಯೊಬ್ಬ `ಡಾ. ಅಂಬೇಡ್ಕರರು ಹಿಂದೂ ಧರ್ಮದ ನಿಜವಾದ ಹೀರೋ' ಎಂಬ ಪ್ರಚಾರಕ್ಕೆ ತೊಡಗಿದ್ದ ! ಡಾ. ಬಾಬಾಸಾಹೇಬರನ್ನು ಅರ್ಥ ಮಾಡಿಕೊಳ್ಳಲಾರದ ಮೂರ್ಖತನವನ್ನು ಇದು ಸೂಚಿಸುತ್ತದೆ.
    ಸಮಾಜದಲ್ಲಿ ದಸ್ಯುಗಳಿಗಿಂತಲೂ ಕೀಳಾಗಿ ಅನ್ಯಾಯ, ಅವಮಾನ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದ ಅ
ಸ್ಪೃಶ್ಯರು, ಸನಾತನ ಹಿಂದೂ ಧರ್ಮದ ವಿಚಾರದಲ್ಲಿ  ಧರ್ಮಬಾಹಿರರು. ಇದ್ದೂ ಸತ್ತಂತೆ ಬದುಕುವುದಕ್ಕಿಂತ, ತಲೆಯೆತ್ತಿ ನಿಂತು, ಸ್ವಾಭಿಮಾನದೊಂದಿಗೆ  ಬದುಕುವ  ದಾರಿಯನ್ನು  ಡಾ. ಬಾಬಾಸಾಹೇಬರು ಹುಡುಕುತ್ತಿದ್ದರು. ಹಿಂದೂಗಳಲ್ಲಿ ಇರುವ ಕೊಳಕುತನ, ಕುಗೇಡಿತನ, ಕೊಳ್ಳುಬಾಕತನ ಮೊದಲಾದವುಗಳಿಂದ ಹೇಸಿಕೊಂಡ ಡಾ. ಬಾಬಾಸಾಹೇಬರು ಅಂಥ ಹೊಲಸಿನಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸುತ್ತಾರೆ ; ಹೊಸ ಬದುಕಿಗೆ ಹಾರೈಸುತ್ತಾರೆ.
    `ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನಪೂರ್ತಿ ಹೊಸದಾಗಬೇಕು. ಆದರೆ ಹೊಸ ಜೀವ ಹೆಣದ ದೇಹದಲ್ಲಿ ಹೋಗಲಾರದು. ಹೊಸ ಜೀವನಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವನ ಹುಟ್ಟಿ ಮಿಡಿಯಬೇಕಾದರೆ ಹಳೆಯದು ನಿಷ್ಕ್ರಿಯವಾಗಿ ಹೋಗಬೇಕು'5 ಎಂಬ ವಿಚಾರವನ್ನು ಪ್ರತಿಪಾದಿಸಿ ಅಂತಿಮವಾಗಿ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು.
    ಹಿಂದೂ ಧರ್ಮದಲ್ಲಿನ ಯಥಾಸ್ಥಿತಿವಾದ ಮತ್ತು ಸೋಗಲಾಡಿತನದಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರು ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಅದು ಅವರಿಗೆ ಅಂದಿನ ಅನಿವಾರ್ಯವೂ ಆಗಿತ್ತು. ಜಾತಿಯ ಸೂತಕದಿಂದ ಮುಕ್ತವಾಗಿ ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂದುಕೊಂಡ ಬಹಳಷ್ಟು ಅ
ಸ್ಪೃಶ್ಯರು ಡಾ. ಬಾಬಾಸಾಹೇಬಕಾಲದಲ್ಲಿ ಮತ್ತು ಆನಂತರದಲ್ಲಿ ಬೌದ್ಧ ಧರ್ಮವನ್ನು ಸೀಕರಿಸಿದರು ; ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ; ಇನ್ನೂ ಕೆಲವರು ಇಸ್ಲಾಂ ಧರ್ಮವನ್ನೂ ಅವಲಂಬಿಸಿದರು. ಇದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ವಾಸ್ತವ ಚಿತ್ರಣವನ್ನು ಗಮನಿಸಿದಾಗ ಹೀಗೆ ಮತಾಂತರವಾಗುತ್ತಿರುವವರು ಅತಂತ್ರರಾಗುತ್ತಿರುವುದು ಕಂಡು ಬರುತ್ತದೆ.
    ಭಾರತೀಯ ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿಯೂ ಕೂಡ ಜಾತಿಯ ಬೇರುಗಳು ಗಟ್ಟಿಗೊಳ್ಳುತ್ತಿವೆ. ಇದಕ್ಕೆ ಹಿಂದೂ ಧರ್ಮದ ಪ್ರಭಾವವೂ ಕಾರಣವಾಗಿರಬಹುದು. ಮತಾಂತರಗೊಂಡವರು ಅಲ್ಲಿ ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತಿದ್ದಾರೆ. ನವ ಬೌದ್ಧ, ನವ ಕ್ರಿಶ್ಚಿಯನ್ ಎನ್ನುವುದಾಗಲಿ ಅಥವಾ ದಲಿತ ಬೌದ್ಧರು, ದಲಿತ ಕ್ರಿಶ್ಚಿಯನ್ನರು ಎನ್ನುವುದಾಗಲಿ ಮೇಲು ನೋಟಕ್ಕೆ ಕಾಣಿಸಿಕೊಳ್ಳುವ ಪ್ರತ್ಯೇಕೀಕರಣಗಳು ! ಡಾ. ಬಾಬಾಸಾಹೇಬ ಅಂಬೇಡ್ಕರರು ಕಂಡ ಕನಸು ಇಂಥಲ್ಲಿ ನನಸಾಗದು. ಇಂಥ ಗೊಂದಲಗಳು ಅ
ಸ್ಪೃಶ್ಯರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಖಂಡಿತವಾಗಿಯೂ ಕಾಲ್ತೊಡಕುಗಳಾಗುತ್ತವೆ.
    ಹಿಂದೂ ಧರ್ಮದಲ್ಲಿನ ಜಾತಿ, ಮತಾಂತರಗೊಂಡ ಧರ್ಮದಲ್ಲಿನ ಪ್ರತ್ಯೇಕತೆ ಕಂಗೆಡಿಸುವ ಸಂಗತಿಗಳೇ ಆಗಿವೆ. ಹೀಗೆಂದುಕೊಂಡು ತೀರ ಹತಾಶರಾಗಬೇಕಾದ ಕಾರಣಗಳಿಲ್ಲ. ಇಂದು ಶಿಕ್ಷಣ ಮುಕ್ತವಾಗಿದೆ. ಅಕ್ಷರದ ಅರಿವಿನ ಮೂಲಕ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಜ್ಞಾವಂತರಾಗಬೇಕು. ಒಳಜಾತಿಗಳಲ್ಲಿ ಇರುವ ಭೇದ ಮರೆತು, ಸಂಬಂಧಗಳನ್ನು ಬೆಸೆಯಬೇಕು ; ಏಕತ್ವವನ್ನು ಸಾಧಿಸಬೇಕು. ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದೆ ಅವಕಾಶಗಳನ್ನು ಬಳಸಿಕೊಂಡು ಉನ್ನತಿಗೆ ಏರಬೇಕು. ರಾಜಕೀಯ ಶಕ್ತಿ ಪಡೆಯಬೇಕು. ಯಾರ ಕೃಪೆ, ದಾನಕ್ಕೆ ತಲೆಬಾಗದೇ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು. ಹೀಗಾದಾಗ ಮಾತ್ರ ಡಾ. ಬಾಬಾಸಾಹೇಬರು ಕಂಡ ಕನಸನ್ನು ನನಸು ಮಾಡುವುದರತ್ತ ಒಂದು ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.
ಅಡಿ ಟಿಪ್ಪಣಿಗಳು :
1. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು- 164
2.
ಅದೇ :
: ಪು-93
3. ಅದೇ : ಪು-529
4. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-5 : ಪು-150
5. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು-108
                                                                   *****

Saturday, January 05, 2013

Jhalkari Bai : Dalit woman with Jhaansi !

Laxmibai and Jhalkari Bai led the Durga Dal ( women’s army) recruits to repeatedly foil attacks by the British army. And but for the betrayal by one of Laxmibai’s generals, the Jhansi fort would have remained invincible for at least some more time. Ignored by mainsteam historians, Jhalkari — a dalit woman — has now emerged from oblivion and finds mention in works of local writers, which include an epic poem by Chokhelal Verma, Virangana Jhalkari Bai by Bhavani Shankar Visharad, and a biography by dalit scholar and Arunachal Pradesh Governor Mata Prasad.
Her appearance, which was strikingly similar to Laxmibai, helped the Jhansi army evolve a military strategy to deceive the British. But before all that, Jhalkari was an ordinary village girl in Bundelkhand who would take care of household chores besides tending cattle and collecting firewood from the jungle.
She once had an encounter with a tiger in the jungle and killed the beast with her axe. On another occasion, she challenged a gang of dacoits who raided the house of a village businessman and forced them to retreat.
As a mark of gratitude, the village organised her marriage with Pooran Kori who matched her in courage. Pooran was inducted into Laxmibai’s army and his fighting skills were soon recognised by her generals. Once on the occasion of Gauri Puja, Jhalakari with the other village women went to the Jhansi fort to pay homage to the queen.
Laxmibai was struck by Jhalkari’s uncanny resemblance to her. After being told about her courage, she ordered Jhalkari’s induction into the Durga Dal. Jhalkari, along with the other village women, was trained in shooting and igniting the cannons at a time when the Jhansi army was being strengthened to face any British intrusion.
The British did not allow the childless Laxmibai to adopt her successor, in a bid to bring the state under their control. However, her generals and the people of Jhansi rallied round the queen and resolved to take up arms against the British instead of surrendering to them.
During April 1858, from inside the Jhansi fort, the queen led her army and repulsed several attacks by the British and their native allies. One of her commanders, however, betrayed her and opened a well protected gate of the fort. When the fall of the fortress became imminent, her generals advised Laxmibai to escape with a handful of fighters. The Rani slipped away from Jhansi on horseback.
Jhalkari’s husband Pooran was killed defending the fort but instead of mourning her loss, she worked out a plan to deceive the British. She dressed up like Laxmibai and took command of the Jhansi army. After which she marched out of the fort towards the camp of British general Hugh Rose. On reaching the British enclave, she shouted that she wanted to meet the general. Rose and his men were exultant. Besides capturing Jhansi, the British thought they had caught the queen alive. When the general — thinking she was the queen — asked Jhalkari what should be done to her, she firmly said, "hang me."
Bundelkhand legend has it that her reply stunned the general, who said that if even one per cent of Indian women were like Jhalkari, the British would soon have to leave India.

Friday, January 04, 2013

Udham Singh, a revolutionary nationalist .....


                                                                                  From : apnaorg.com/articles/udhamsingh
Udham Singh, a revolutionary nationalist, was born Sher Singh on 26 December 1899, at Sunam, in the then princely state of Patiala. His father, Tahal Singh, was at that time working as a watchman on a railway crossing in the neighbouring village of Upall. Sher Singh lost his parents before he was seven years and was admitted along with his brother Mukta Singh to the Central Khalsa Orphanage at Amritsar on 24 October 1907. As both brothers were administered the Sikh initiatory rites at the Orphanage, they received new names, Sher Singh becoming Udham Singh and Mukta Singh Sadhu Singh. In 1917, Udham Singh's brother also died, leaving him alone in the world.

Udham Singh left the Orphanage after passing the matriculation examination in 1918. He was present in the Jallianvala Bag on the fateful Baisakhi day, 13 April 1919, when a peaceful assembly of people was fired upon by General Reginald Edward Harry Dyer, killing over one thousand people. The event which Udham Singh used to recall with anger and sorrow, turned him to the path of revolution. Soon after, he left India and went to the United States of America. He felt thrilled to learn about the militant activities of the Babar Akalis in the early 1920's, and returned home. He had secretly brought with him some revolvers and was arrested by the police in Amritsar, and sentenced to four years imprisonment under the Arms Act. On release in 1931, he returned to his native Sunam, but harassed by the local police, he once again returned to Amritsar and opened a shop as a signboard painter, assuming the name of Ram Muhammad Singh Azad. This name, which he was to use later in England, was adopted to emphasize the unity of all the religious communities in India in their struggle for political freedom.

Udham Singh was deeply influenced by the activities of Bhagat Singh and his revolutionary group. In 1935, when he was on a visit to Kashmlr, he was found carrying Bhagat Singh's portrait. He invariably referred to him as his guru. He loved to sing political songs, and was very fond of Ram Prasad Bismal, who was the leading poet of the revolutionaries. After staying for some months in Kashmlr, Udham Singh left India. He wandered about the continent for some time, and reached England by the mid-thirties. He was on the lookout for an opportunity to avenge the Jalliavala Bagh tragedy. The long-waited moment at last came on 13 March 1940. On that day, at 4.30 p.m. in the Caxton Hall, London, where a meeting of the East India Association was being held in conjunction with the Royal Central Asian Society, Udham Singh fired five to six shots from his pistol at Sir Michael O'Dwyer, who was governor of the Punjab when the Amritsar massacre had taken place. O'Dwyer was hit twice and fell to the ground dead and Lord Zetland, the Secretary of State for India, who was presiding over the meeting was injured. Udham Singh was overpowered with a smoking revolver. He in fact made no attempt to escape and continued saying that he had done his duty by his country.

On 1 April 1940, Udham Singh was formally charged with the murder of Sir Michael O'Dwyer. On 4 June 1940, he was committed to trial, at the Central Criminal Court, Old Bailey, before Justice Atkinson, who sentenced him to death. An appeal was filed on his behalf which was dismissed on 15 July 1940. On 31 July 1940, Udham Singh was hanged in Pentonville Prison in London.

Udham Singh was essentially a man of action and save his statement before the judge at his trial, there was no writing from his pen available to historians. Recently, letters written by him to Shiv Singh Jauhal during his days in prison after the shooting of Sir Michael O'Dwyer have been discovered and published. These letters show him as a man of great courage, with a sense of humour. He called himself a guest of His Majesty King George, and he looked upon death as a bride he was going to wed. By remaining cheerful to the last and going joyfully to the gallows, he followed the example of Bhagat Singh who had been his beau ideal. During the trial, Udham Singh had made a request that his ashes be sent back to his country, but this was not allowed. In 1975, however, the Government of India, at the instance of the Punjab Government, finally succeeded in bringing his ashes home. Lakhs of people gathered on the occasion to pay homage to his memory.

BIBLIOGRAPHY 
Copyright © Harbans Singh "The encyclopedia of Sikhism. "
The word "militant" on this document was replaced on the request of Mr. Bhupinder Singh (bhupinder787@yahoo.com).

Friday, October 19, 2012

Mulnivasis-Who and How ?

Balvinder Singh Mulnivasi

Some Sanskrit literature of Arya Brahmins, that is available today makes mention of some important aspects, related to Mulnivasis. According to this literature, in the ancient period there was heavy struggle between the Aryas
and the Mulnivasis.

This struggle is described in the Sanskrit literature. The terminology used for the Mulnivasis is Anarya, Dass, Dasyu, Asur, Rakshas, Ravan and Naga. These were the names given by Aryan invaders to the Mulnivasis. These are not praise-worthy names, but were used to abuse and condemn them.
Mulnivasi Sangh
Therefore, it is now proved that these Anarya, Dass, Dasyu, Asura, Rakshas and Danav are the original inhabitants of this country, who, are now referred in the constitution as Scheduled Castes and convert from them to religious minorities.
How can we say that these people are Mulnivasis?

This question can be answered in many ways and many reasons can be given, to call these people as Mulnivasis. One, these people were made untouchables and were driven out from the public life and were forced to live a wretched life of animals.
The Second section of the Mulnivasis are tribal people, who were forced to live in jungles and hills. Thus we can see that the Scheduled Castes are not Hindus, because they do not observe religious customs of Arya Brahmins. Arya-Brahmins call them Hindus, but have not granted them any rights of Hindus.

Hindu code bill was not applicable to the Scheduled Castes. Thus there is no similarity of conduct, thoughts, faith, belief, customs, religious tradition, language and way of life between Arya-Brahmins and Scheduled Castes / Scheduled Tribes.

The third big section, whom we call, Other Backward Class(OBC) is also Mulnivasis, because they have been deprived the right of holding power, acquiring property and possessing weapons(As per manusmruti). When these O.B.C. accepted the domination of Arya-Brahmins they granted them religious rights of Hindus, but adopted Puranic system for them, instead of Vedic system. From this, it is proved that this class is not Vedic. We can see that when rights were granted to O.B.C’s as per Mandal Commission, the Arya-Brahmins opposed it most. They tried to hatch a conspiracy against the objectives of the Mandal Commission and were successful in that.

From these SCs, STs and OBCs, who are the Mulnivasis have become Sikhs, Buddhists, Christians and Muslims. It means the 95% people of minorities are from this Mulnivasie castes. Arya-Brahmins call them foreigners, especially Muslims. Muslims are not foreigners, but are original inhabitants of this country. Thus we all are Mulnivasis. This is proved fact.
Struggle for liberation of Mulnivasis

When freedom struggle of our country was going on, we were dual slaves. The Arya Brahmins were slaves of British people and we, Mulnivasis (original inhabitants) were the slaves of the system established by them, in which we were made slaves, socially , culturally and religiously.
On 15th Aug. 1947, these Arya-Brahmins got freedom and became the masters and rulers of the country. And we, who were the slaves of the slaves are still slaves of these Arya-Brahmins. On 15th Aug. 1947, the country got the freedom, but the people of the country did not get this freedom. Only Arya brahmins got freedom and we, Mulnivasis are still their slaves.

Therefore, it is necessary to launch the struggle for the liberation of the Mulnivasis. Pride of the caste is the reason of our slavery and caste are invented by Arya Brahmins, through which they divided the Mulnivasis into 6000 small groups and perpetuated this division into them. Every caste is having its own caste people and there is ladder of high and low, based on graded inequality among these castes, they keep on fighting among themselves, instead of uniting themselves to fight against the common enemy. The Arya-Brahmins encourage and sponsor this fight. Because of this constant division of Mulnivasis of the country, they have become unfit for the resistance.

Along with this, another important aspect is that these Mulnivasis were prohibited from taking education, possessing weapons and acquiring property. Because of this, they became helpless, and hopeless and came to depend upon Arya-Brahmins. The brahmins took advantage of this dependency and made the Mulnivasis, slaves. When they were made slaves under Brahminical system, they could not save the independence of their country and along with them, India, their motherland also became slave.

Therefore, it is necessary to liberate the Mulnivasis and their motherland. It is necessary to free them from the system. Hence to achieve the objective of “Change of System” and to free the country from Arya-Brahmins, it has become necessary to launch the movement of their liberation of the Mulnivasis.
Point of view based on Social system

From the view point based on system, it can be seen that the Scheduled Castes, Scheduled Tribes, Other Backward Classes and Minorities are victims of the brahminical system. Therefore Mahatma Jyotirao Phule, Periyar Ramaswami and Dr. Babasaheb Ambedkar have fixed the objective of their movements to change this social System of inequality.
Therefore those who are suffering from this Social System, can only take active part in the movement of change of System. This is quite natural. There is no point in organising those communities, who were benefited by the System. Thus for changing the System of inequality, it is necessary to organise those communities, who were victims of the system, Therefore the Scheduled Castes, Scheduled Tribes, Other Backward classes and Minorities are being organised.
Aryan Brahmins are foreigners

If Scheduled castes, Scheduled Tribes, Other Backward Class and the minorities converted from them, who have been divided into 6000 castes, are the Mulnivasis of this country, then who are foreigners? We must find out an answer to this question. There is not much difference of opinion among historians on this point, that Aryans are foreigners. The only difference of opinion is on the issue of the country of their origin. On this issue

JAI MULNIVASI!

Saturday, September 15, 2012

ಗಾಂಧಿ-ಅಂಬೇಡ್ಕರ್ ಮತ್ತು ಪುಣೆ ಒಪ್ಪಂದ



-ಅನಿಲ ಹೊಸಮನಿ

ಸಾಮಾಜಿಕ ಸಮಾನತೆಯ ಆಂದೋಲನದ ಜೊತೆ ಜೊತೆಗೆ ದೇಶದ ರಾಜಕಾರಣದಲ್ಲಿ ಭಾಗವಹಿಸುವುದರ ಅಗತ್ಯತೆ ಡಾ.ಅಂಬೇಡ್ಕರರಿಗೆ ಮನವರಿಕೆಯಾಗಿತ್ತು. ಅಧಿಕಾರ ಪ್ರಾಪ್ತಿ ಮಾಡಿಕೊಳ್ಳದೆ ಗುರಿ ಸಾಧನೆ ಯಾಗದೆಂಬುದು ಅವರ ಅರಿವಿಗೆ ಬಂದಿತ್ತು. ಮಹಾಡ್ ಸತ್ಯಾಗ್ರಹ, ಮನುಸ್ಮತಿ ದಹನ, ಕಾಳಾರಾಮ ಮಂದಿರ ಪ್ರವೇಶ ಚಳವಳಿಗಳಿಂದ ಅಸ್ಪಶ್ಯರಲ್ಲಿ ಅಭೂತಪೂರ್ವ ಸಂಘಟನೆ ಮತ್ತು ಜಾಗೃತಿ ಮೂಡಿತ್ತು. ಆದರೆ ಇಷ್ಟರಿಂದಲೇ ಅವರಿಗೆ ಸಮಾಧಾನವಿರಲಿಲ್ಲ. ಅದಕ್ಕಾಗಿಯೇ ಅವರು ಅಖಿಲ ಭಾರತ ಬಹಿಷ್ಕೃತ ವರ್ಗಗಳ ಸಮಾವೇಶವನ್ನು ಆಯೋಜಿಸುವ ನಿರ್ಧಾರ ಮಾಡಿದರು. 1930ರ ಅಗಸ್ಟ್ 9 ಮತ್ತು 10ರಂದು ನಾಗಪುರದಲ್ಲಿ ಸಂಘಟಿಸಲಾದ ಪ್ರಥಮ ರಾಷ್ಟ್ರಮಟ್ಟದ ಅಧಿವೇಶನದ ಅಧ್ಯಕ್ಷತೆಯನ್ನು ಡಾ.ಅಂಬೇಡ್ಕರ್ ವಹಿಸಿದ್ದರು.
ವಿದರ್ಭ ಮತ್ತು ದೇಶದ ವಿವಿಧ ಭಾಗಗಳಿಂದ ಬಹುಸಂಖ್ಯೆಯ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಸ್ಪಶ್ಯರ ರಾಜಕೀಯ ಹಕ್ಕುಗಳನ್ನು ಪಡೆದು ಕೊಳ್ಳುವುದಕ್ಕೋಸ್ಕರ ಈ ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯಿತು. ಅಧ್ಯಕ್ಷ ಸ್ಥಾನದಿಂದ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಲ್ಲಿದ್ದ ಪ್ರತಿಯೊಬ್ಬರ ಮೇಲೂ ಗಾಢ ಪ್ರಭಾವ ಬೀರಿತು. ಅವರು ಹೇಳಿದರು- ನಮಗೆ ರಾಜಕೀಯ ಸ್ವಾತಂತ್ರವೂ ಬೇಕು, ಸಾಮಾಜಿಕ ಸಮಾನತೆ ಕೂಡ ಬೇಕು. ಸ್ವತಂತ್ರ ಭಾರತಕ್ಕೆ ಹೊಸ ರಾಜ್ಯ ಘಟನೆ ರೂಪಿಸು ವಾಗ ಅದರಲ್ಲಿ ನಮ್ಮ ಹಕ್ಕುಗಳು ನಮೂದಾಗಬೇಕು.
ಅಲ್ಪಸಂಖ್ಯಾತ ಮತ್ತು ದುರ್ಬಲರ ನಿರ್ಲಕ್ಷ ಮಾಡುವುದನ್ನು ನಾವು ಸಹಿಸುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ನಮಗೆ ಪ್ರತ್ಯೇಕ ಪ್ರತಿನಿಧಿತ್ವ ಬೇಕು. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಆಸ್ಪದ ನೀಡುವ ಸ್ವತಂತ್ರ ಮತದಾರ ಕ್ಷೇತ್ರಗಳು ಬೇಕು. ಅಂಥ ವ್ಯವಸ್ಥೆ ಹೊಸ ಸಂವಿಧಾನದಲ್ಲಿ ಇರಬೇಕು. ಅನೇಕ ವಿಷಯಗಳಲ್ಲಿ ಬ್ರಿಟಿಷ್ ಸರಕಾರವು ಅಸಹಾಯಕವಾಗಿದೆ ಮತ್ತು ಸವರ್ಣ ಹಿಂದೂ ಗಳು ಕೂಡ ನಮ್ಮನ್ನು ಬೆಂಬಲಿಸುವುದಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವು ಸ್ವತಂತ್ರ ವಾಗಿ ನಮ್ಮ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು. ನಮ್ಮ ಸ್ವತಂತ್ರ ಅಸ್ತಿತ್ವವನ್ನು ಭಾರತಕ್ಕೆ ತೋರಿಸಿಕೊಡಬೇಕು ಮತ್ತು ಇಂಗ್ಲಿಷ್ ಸರಕಾರವೂ ನಮ್ಮ ಸ್ವತಂತ್ರ ಅಸ್ತಿತ್ವವನ್ನು ಮಾನ್ಯ ಮಾಡಬೇಕು.

ಇನ್ನೂ ಒಂದು ಮಹತ್ವದ ವಿಚಾರವನ್ನು ಡಾ.ಅಂಬೇಡ್ಕರ್ ಈ ಅಧಿವೇಶನದಲ್ಲಿ ಮಂಡಿಸಿದರು. ಅದೆಂದರೆ, 1) ಅಸ್ಪಶ್ಯರಿಗಾಗಿ ಮೀಸಲು ಮತಕ್ಷೇತ್ರಗಳು, 2) ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ. ಸರ್ವ ಸಾಮಾನ್ಯವಾಗಿ ಮೀಸಲು ಕ್ಷೇತ್ರಗಳಿರಲೆಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿತ್ತು. ಆದರೆ ಅನೇಕರು ಸಂಯುಕ್ತ ಮತದಾರ ಕ್ಷೇತ್ರಗಳಿರ ಬೇಕು ಎಂಬ ವಿಚಾರ ವ್ಯಕ್ತಪಡಿಸಿದರು. ಆದರೆ ಡಾ.ಅಂಬೇಡ್ಕರ್‌ರು ಆ ವಿಚಾರವನ್ನು ವಿರೋಧಿ ಸಿದರು. ಸಂಯುಕ್ತ ಮತದಾರ ಕ್ಷೇತ್ರಗಳಲ್ಲಿ ಸವರ್ಣ ಹಿಂದೂಗಳು ತಮ್ಮ ಗುಲಾಮ ಅಭ್ಯರ್ಥಿಯನ್ನು ಅಸ್ಪಶ್ಯರ ಮೇಲೆ ಹೇರುವ ರೆಂಬ ಭಯ ಅವರಿಗಿತ್ತು. ಮೀಸಲು ಮತಕ್ಷೇತ್ರ ಗಳು ಡಾ.ಅಂಬೇಡ್ಕರರು ಅತ್ಯಂತ ವಿಚಾರ ಪೂರ್ವಕವಾಗಿ ಮಂಡಿಸಿದ ವಿಷಯವಾಗಿತ್ತು.
ಮುಸಲ್ಮಾನರಿಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಕೊಡುವುದಾದರೆ ಅಸ್ಪಶ್ಯರಿಗೆ ಏಕೆ ಬೇಡ? ಇದು ಅವರ ನೇರ ಪ್ರಶ್ನೆಯಾಗಿತ್ತು. ಕುಡಿಯುವ ನೀರಿನ ಸಮಸ್ಯೆ, ಮಂದಿರ ಪ್ರವೇಶದಂತಹ ಸಾಮಾನ್ಯ ಸವಲತ್ತುಗಳನ್ನು ನೀಡುವುದಕ್ಕೆ ಹಿಂದೂ ಸನಾತನಿಗಳು ಹಿಂಜರಿಯುತ್ತಿರುವಾಗ, ಅಸ್ಪಶ್ಯರ ಹಿತರಕ್ಷಣೆ ಗಾಗಿ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನೇಕೆ ಕೇಳಬಾರದು? ಸಮಾಜವನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಬೇಕಾದರೆ, ಅದರ ಪ್ರತಿನಿಧಿಗಳು ಆಡಳಿತದಲ್ಲಿ ಇರುವುದು ಅಗತ್ಯ ವಿದೆ ಮತ್ತು ಅಸ್ಪಶ್ಯರು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತಿರಬೇಕು ಎಂಬುದು ಡಾ.ಅಂಬೇಡ್ಕರರ ಅಭಿಪ್ರಾಯ ವಾಗಿತ್ತು. ರಾಜಕೀಯ ಹಕ್ಕುಗಳ ಮಂಡನೆಯ ನಂತರ ಅಧಿವೇಶನ ಮುಕ್ತಾಯಗೊಂಡಿತು.
1930ರ ಸೆಪ್ಟಂಬರ್ ತಿಂಗಳಲ್ಲಿ ಇಂಗ್ಲಿಷ್ ಸರಕಾರವು ದುಂಡು ಮೇಜಿನ ಪರಿಷತ್ತಿಗೆ ಡಾ.ಅಂಬೇಡ್ಕರರನ್ನು ಆಮಂತ್ರಿಸಿತು. ಈ ಮುಖೇನ ಸರಕಾರವು ಡಾ.ಅಂಬೇಡ್ಕರ್ ಭಾರತದ ಅಸ್ಪಶ್ಯರ ಪ್ರತಿನಿಧಿಯೆಂದು ಮನ್ನಿಸಿತ್ತು. ಬ್ಯಾ.ಜಿನ್ನಾ, ಸಪ್ರು, ಜಯಕರ ಮತ್ತಿತರ ಗಣ್ಯರೊಂದಿಗೆ ಡಾ.ಅಂಬೇಡ್ಕರ್ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸುತ್ತಿದ್ದುದು ಮಹತ್ವದ ಸಂಗತಿಯಾ ಗಿತ್ತು. ಭಾರತದ ಹೊಸ ಸಂವಿಧಾನ ರಚಿಸು ವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುವ ನಿಟ್ಟಿನಲ್ಲಿ 12, ನವೆಂಬರ್ 1930ರಂದು ಲಂಡನ್‌ನಲ್ಲಿ ದುಂಡು ಮೇಜಿನ ಪರಿಷತ್ತು ನಡೆಯಲಿತ್ತು. ಇಂಗ್ಲೆಂಡಿನ ಅರಸು 5ನೆ ಜಾರ್ಜ್ ಈ ಪರಿಷತ್‌ನ ಉದ್ಘಾಟನೆ ನೆರವೇರಿಸಲಿದ್ದರು.

ನಾಗಪುರ ಅಧಿವೇಶನವು ಡಾ.ಅಂಬೇಡ್ಕರರ ವ್ಯಕ್ತಿತ್ವವನ್ನು ಹೆಚ್ಚಿಸಿತ್ತು. ಅದುವರೆಗೆ ಮಹಾ ರಾಷ್ಟ್ರದ ದಲಿತ ನೇತಾರರಾಗಿದ್ದ ಡಾ. ಅಂಬೇಡ್ಕರ್ ಈಗ ಇಡೀ ಭಾರತದ ದಲಿತರಿಗೆ ನಾಯಕರಾಗಿ ಮಾರ್ಪಟ್ಟರೆಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಹಕ್ಕುಗಳು ದೊರೆತ ಮಾತ್ರಕ್ಕೆ ಮಂತ್ರದಂಡ ತಿರುಗಿಸಿದಂತೆ ಬದಲಾವಣೆ ಆಗಲಾರದು ಎಂಬ ಅಭಿಪ್ರಾಯ ಅವರದಾಗಿತ್ತು. ಹಾಗೆಂದೇ ತಮ್ಮ ಅಭಿವೃದ್ಧಿಗೆ ಅಸ್ಪಶ್ಯರೇ ಸ್ವತಃ ಕಂಕಣಬದ್ಧರಾಗಬೇಕೆನ್ನುವುದು ಅವರ ನಂಬುಗೆಯಾಗಿತ್ತು. ಮೊಟ್ಟಮೊದಲಿಗೆ ಎಲ್ಲ ಅಸ್ಪಶ್ಯರು ವಿದ್ಯೆ ಪಡೆಯಬೇಕು, ತಮ್ಮ ಜೀವನಕ್ರಮ ಬದಲಿಸಿಕೊಳ್ಳಬೇಕು ಮತ್ತು ನಿರ್ಭಯರಾಗಬೇಕು. ಭಾರತದ ರಾಜಕಾರಣ ದಲ್ಲಿ ಅಸ್ಪಶ್ಯ ಸಮಾಜವು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಡಾ.ಅಂಬೇಡ್ಕರರು ತಮ್ಮ ವಿಚಾರಗಳನ್ನು ಮಂಡಿಸಿದರು. ಅವರ ಈ ವಿಚಾರ ಸರಣಿ ಜನಸಮುದಾಯದ ಮೇಲೆ ಗಾಢ ಪರಿಣಾಮ ಬೀರಿತು. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ ಚಳವಳಿ ವಿಸ್ತೃತವಾಗತೊಡಗಿತ್ತು. ಅಸ್ಪಶ್ಯ ಸಮಾಜದ ಆಸೆ-ಆಕಾಂಕ್ಷೆಗಳ ಕುರಿತ ಡಾ.ಅಂಬೇಡ್ಕರ್ ಬೇಡಿಕೆಗಳನ್ನು ಒಪ್ಪಿಕೊಂಡು, ಈ ಸಮುದಾಯಗಳನ್ನೂ ರಾಷ್ಟ್ರೀಯ ಮುಕ್ತಿ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡುವ ವಿಚಾರಗಳೂ ಕೇಳಿಬಂದವು. ಆದರೆ ಸ್ವಾತಂತ್ರಾನಂತರ ಕಾರ್ಮಿಕರ, ರೈತರ, ಅಸ್ಪಶ್ಯರ ಸ್ಥಾನವೇನು? ಎಂಬ ಪ್ರಶ್ನೆಗೆ ಮಹಾತ್ಮಾ ಗಾಂಧಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಲಿಲ್ಲ. ಸ್ವರಾಜ್ಯ ಪ್ರಾಪ್ತಿಯ ನಂತರ ಅಸ್ಪಶ್ಯರ ಸಮಸ್ಯೆಯ ಬಗ್ಗೆ ಯೋಚಿಸುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ತೆಗೆದುಕೊಂಡರು. ಇದಕ್ಕೆ ಕಾಂಗ್ರೆಸ್‌ನ ನೇತೃತ್ವ ಉಚ್ಚವರ್ಣೀಯರ ಮತ್ತು ಉಚ್ಚ ವರ್ಗಗಳ ಕೈಯಲ್ಲಿತ್ತೆಂಬುದೇ ಕಾರಣವಲ್ಲದೆ ಬೇರೇನಲ್ಲ.
4ನೆ ಅಕ್ಟೋಬರ್ 1930ರಂದು ಡಾ.ಅಂಬೇಡ್ಕರ್‌ರು ಮುಂಬೈ ಬಂದರಿನಿಂದ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ವಿದೇಶ ಪ್ರವಾಸ ಅವರಿಗೆ ಹೊಸದೇನೂ ಆಗಿರಲಿಲ್ಲ. ಅಮೇರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅವರು ಅನೇಕ ವರ್ಷಗಳವರೆಗೆ ಇದ್ದು, ತಮ್ಮ ಉನ್ನತ ಶಿಕ್ಷಣ ಪೂರೈಸಿದ್ದರು. ಹೆಸರಾಂತ ಪ್ರಾಧ್ಯಾಪಕರ ಮಾರ್ಗ ದರ್ಶನದ ಲಾಭವನ್ನು ಅವರು ಪಡೆದಿದ್ದರು. ಹೆಸರಾಂತ ವಿಶ್ವ ವಿದ್ಯಾಲಯದ ಪದವಿಗಳನ್ನು ಅವರು ತಮ್ಮ ಹೆಸರಿನ ಮುಂದೆ ಜೋಡಿಸಿಕೊಂಡಿದ್ದರು. ನಿಧಾನವಾಗಿ ಭಾರತದ ನಾಯಕರು ಲಂಡನ್ ತಲುಪತೊಡಗಿದ್ದರು.

ಮದ್ರಾಸ್‌ನ ರಾವ್ ಬಹುದ್ದೂರ್ ಕೂಡ ಅಂಬೇಡ್ಕರ್ ಜೊತೆಗಿದ್ದರು. ಮುಂಚೆಯೇ ನಿರ್ಧರಿಸಿದಂತೆ ನವೆಂಬರ್ 12, 1930ರಂದು ಇಂಗ್ಲೆಂಡ್ ದೊರೆ ದುಂಡು ಮೇಜು ಪರಿಷತ್ತನ್ನು ಉದ್ಘಾಟಿಸಿದರು. ಈ ದುಂಡು ಮೇಜಿನ ಪರಿಷತ್ತಿನಲ್ಲಿ ಡಾ.ಅಂಬೇಡ್ಕರ್ ಮಾಡಿದ ಭಾಷಣ ಅಭೂತಪೂರ್ವ. ಭಾರತದಲ್ಲಿ 4 ಕೋಟಿ 20 ಲಕ್ಷ ಅಸ್ಪಶ್ಯರಿದ್ದಾರೆ. ಈ ಸಂಖ್ಯೆಯು ಇಂಗ್ಲೆಂಡ್ ಅಥವಾ ಫ್ರಾನ್ಸ್ ಜನಸಂಖ್ಯೆಗಿಂತ ಜಾಸ್ತಿ. ಈ ಪೀಡಿತ ಮತ್ತು ಶೋಷಿತ ಜನರ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಅಸ್ಪಶ್ಯತೆ ಎಂದರೇನೆಂಬುದೇ ಜಗತ್ತಿನ ಅನ್ಯ ದೇಶಗಳಿಗೆ ತಿಳಿಯದು. ಯಾಕೆಂದರೆ ಇಂಥ ಅಮಾನುಷ ಆಚರಣೆ ಜಗತ್ತಿನ ಯಾವ ಭಾಗ ದಲ್ಲೂ ಇಲ್ಲ. ಇಂಗ್ಲೆಂಡ್ ಮತ್ತು ಅಮೇರಿಕ ಗಳಲ್ಲಿ ನಿಗ್ರೋ ಗುಲಾಮರ ಮಾರಾಟ-ಖರೀದಿ ಬಹಳ ಹಿಂದೆ ಆಚರಣೆಯಲ್ಲಿತ್ತು. ನಂತರ ಕಾನೂನು ಮೂಲಕ ಈ ಗುಲಾಮಗಿರಿ ಅಂತ್ಯಕಂಡಿತು. ಅಲ್ಲಿ ಗುಲಾಮಗಿರಿಯಿತ್ತೇ ವಿನಃ ಅಸ್ಪಶ್ಯತೆಯಿರಲಿಲ್ಲ.
ಗುಲಾಮರ ಸ್ಪರ್ಶ ಮಾಡುವುದಕ್ಕೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಭಾರತದ ಪರಿಸ್ಥಿತಿ ಬೇರೆಯೇ ಇದೆ ಎಂಬುದರ ಪರಿಚಯ ಮಾಡಿಕೊಟ್ಟರು. ಭಾರತೀಯ ಸೈನ್ಯದಲ್ಲಿ ಅಸ್ಪಶ್ಯರಿಗೆ ಪ್ರವೇಶವಿಲ್ಲ. ಪೊಲೀಸ್ ಖಾತೆಯಲ್ಲಿ ಮತ್ತು ಸರಕಾರಿ ನೌಕರಿಗಳು ಅವರಿಗೆ ಸಿಗುತ್ತಿಲ್ಲ. ಮಾನವೀಯ ಮರ್ಯಾದೆ ಪಡೆಯುವುದಕ್ಕೋಸ್ಕರ ಭಾರತದ ಐದನೇ ಒಂದು ಭಾಗದಷ್ಟು ಜನರು ಹೋರಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ದೇವಾಲಯಗಳಲ್ಲಿ ಅವರಿಗೆ ಪ್ರವೇಶ ನಿಷೇಧಿಸಲಾಗಿದೆ. ಗಾಂಧಿ ಮತ್ತು ಅಂಬೇಡ್ಕರ್‌ರವರ ಈ ವೈಚಾರಿಕ ಸಂಘರ್ಷವು ವಿಕೋಪಕ್ಕೆ ತಿರುಗಿತು. ಗಾಂಧಿಯಾದರೋ ಈ ಸಂಬಂಧ ತಮ್ಮ ಪ್ರಾಣತ್ಯಾಗ ಮಾಡಲೂ ಸಿದ್ಧರಾಗಿ ದ್ದರು.
ಗಾಂಧೀಜಿ ಪ್ರಾಣ ಉಳಿಸುವಂತೆ ಅಂಬೇಡ್ಕರ್‌ರ ಮೇಲೆ ಒತ್ತಡಗಳು ಬರಲಾರಂಭಿಸಿದವು. ಉಪವಾಸ ಸತ್ಯಾಗ್ರಹ ಒಂದೊಂದೇ ದಿನ ಹೆಚ್ಚುತ್ತಾ ಹೋದಂತೆ ಗಾಂಧೀಜಿ ಆರೋಗ್ಯ ಹದಗೆಡಲಾರಂಭಿಸಿತು. ಇಡೀ ದೇಶವೇ ಚಿಂತೆಯಲ್ಲಿ ಮುಳುಗಿತು. ಕೊನೆಗೆ ಡಾ.ಅಂಬೇಡ್ಕರರು ಗಾಂಧಿಯನ್ನು ಭೇಟಿ ಮಾಡಿದರು. ಪರಸ್ಪರ ಮಾತುಕತೆಯ ನಂತರ ಪ್ರತ್ಯೇಕ ಮತದಾರ ಕ್ಷೇತ್ರಗಳನ್ನು ಬಿಟ್ಟುಕೊಡಲು ಡಾ.ಅಂಬೇಡ್ಕರ್ ಒಪ್ಪಿ ಕೊಂಡರು. ಗಾಂಧೀಜಿ ಉಪವಾಸ ಕೊನೆಗೊಳಿಸಿದರು. ಈ ಒಪ್ಪಂದವೇ ಪುಣೆ ಒಪ್ಪಂದ ಎಂದು ಜನಜನಿತವಾಯಿತು. ಒಬ್ಬ ಅಸ್ಪಶ್ಯ ಗಾಂಧೀಜಿಯ ಪ್ರಾಣ ಉಳಿಸಿದರೆ, ಒಬ್ಬ ಬ್ರಾಹ್ಮಣ ಕೈಯಲ್ಲಿ ಪಿಸ್ತೂಲು ಹಿಡಿದು ಹತ್ಯೆ ಮಾಡಿದನು.

Tuesday, September 04, 2012

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ !

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ


 ”ಜಾತಿಯ ಗೋಡೆಯನ್ನು ಕೆಡವಿ”
‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.
ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.
ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:
ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.
ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.
ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.
ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.
ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :
ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.
ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.
ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.
ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.
ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.
ಕೇವಲ ಆಂತರಿಕ ಸಮಸ್ಯೆಗಳೆ? :
ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.
ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.
ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.
ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.
ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ : ವರ್ತಮಾನ

Saturday, July 21, 2012

ಜಾತಿಸೂತಕ ಆತಂಕಗಳು !


ಡಾ. ಸಿದ್ರಾಮ ಕಾರಣಿಕ
ಭಾರತೀಯ ಸಮಾಜದಲ್ಲಿ ಸನಾತನಾವಾದಿ ಬೇರುಗಳು ಸಡಿಲುಗೊಳ್ಳುವಂತೆ ಘರ್ಜಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು. ಅವರ ವೈಚಾರಿಕ ಸಿದ್ಧಾಂತಗಳು, , ವಸ್ತುನಿಷ್ಟ ವಿಮರ್ಶೆಗಳು, ವೈಜ್ಞಾನಿಕ ವ್ಯಾಖ್ಯಾನಗಳು ಭಾರತ ದೇಶದ ವೈದಿಕ ಸಂಪ್ರದಾಯವನ್ನು ಅಲುಗಾಡಿಸಿದ್ದು ನಿಜ. ಆದರೆ ವರ್ತಮಾನದಲ್ಲಿ ನಿಂತುಕೊಂಡು ಇಂದಿನ ವ್ಯವಸ್ಥೆಯನ್ನು ಅವಲೋಕಿಸಿದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದ ಸಾರ್ಥಕತೆಗೆ ಅಡ್ಡಗಾಲಾಗಿ ನಿಂತ ದೊಡ್ಡ ಪಡೆಯೊಂದು ರೂಪ ಬದಲಾಯಿಸುತ್ತ ಮುಂದುವರಿಯುತ್ತಿರುವ ವಾಸ್ತವ ಕಣ್ಣಿಗೆ ರಾಚುತ್ತದೆ.
ಜಾತಿಯನ್ನು ಮೂಲವಾಗಿಟ್ಟುಕೊಂಡು ಸದಾ ಸಂಶಯ ಮತ್ತು ಅಪನಂಬಿಕೆಗಳ ಮೂಲಕ ದಲಿತರನ್ನು ಇಂದಿಗೂ ವ್ಯವಸ್ಥಿತವಾಗಿ ತುಳಿಯುವ ಹುನ್ನಾರಗಳು ನಿರಾಂತಕವಾಗಿ ನಿರಂತರವಾಗಿ ನಡೆಯುತ್ತಿರುವುದು ಈ ದೇಶದ ಸನಾತನಿ ಸಂಪ್ರದಾಯದ ಶೋಕಿಯಾಗುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಆತಂಕಕಾರಿಯಾಗಿದೆ. ಮನುಷ್ಯನನ್ನು, ಮನುಷ್ಯನನ್ನಾಗಿ ಪರಿಗಣಿಸದ ಧರ್ಮಗಳಿಗೆ ಜೋತು ಬಿದ್ದ ಮಂದಿಯು ಹೊಸ ಹೊಸ ಪರಿಕ್ರಮಗಳ ಮೂಲಕ ಜಾತಿ ವ್ಯವಸ್ಥೆಯನ್ನು ಚಾಲ್ತಿಯಲ್ಲಿ ಇಟ್ಟಿರುವುದು ವಾಸ್ತವದ ವರ್ತಮಾನ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಬದಲಾವಣೆಗಳಿಗೂ ಆಸ್ಪದ ಇರಬಾರದು ಎಂಬ ಆಸಕ್ತಿಯನ್ನೇ ಇಟ್ಟುಕೊಂಡು ವರ್ತಿಸುವುದನ್ನು ಕಂಡುಂಡು ವಿವೇಚಿಸಿದಾಗ ವಿಷಾದ ತುಂಬಿಕೊಳ್ಳುತ್ತಲೇ ಆವೇಶದ ವಿಚಾರಗಳೂ ಮನದಲ್ಲಿ ಮೂಡುತ್ತವೆ.
ಪಾಶ್ಚಾತ್ಯರ ಪ್ರಭಾವ ಮತ್ತು ಸಂಪರ್ಕದಿಂದಾಗಿ ಭಾರತೀಯ ಸಮಾಜದಲ್ಲಿ ತುಂಬ ಕ್ರಾಂತಿಕಾರಿ ಎನಿಸುವಷ್ಟರಮಟ್ಟಿಗಿನ ಬದಲಾವಣೆಗಳೇನೋ ಆಗಿವೆ ನಿಜ. ಆದರೆ ಭಾರತೀಯ ಮನಸ್ಸುಗಳು ಮಾತ್ರ ಬದಲಾಗಿಲ್ಲ. ತೋರಿಕೆಯ ಹೂಟಗಳು ಹಲವು ಒಳಗೊಳಗೇ ಜಾತಿಯನ್ನು ಬಲವಾಗಿ ಹಿಡಿದುಕೊಂಡು ಹಠ ಹಿಡಿದಂತೆ ಕುಳಿತುಕೊಂಡಿರುವುದು ಸುಳ್ಳಲ್ಲ. ‘ಜಾತಿಯಿಂದ ಹಿಂದೂಗಳ ನೀತಿ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿದೆ ; ಹೃದಯ ವೈಶಾಲ್ಯತೆಯನ್ನು ಹಾಳು ಮಾಡಿದೆ ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ  ಮಾಡಿದೆ. ಹಿಂದುವಿನ ಸಮಾಜ  ಹಾಗೂ ಹೊಣೆಗಾರಿಕೆ ಅವರ ಜಾತಿಗೆ ಸೀಮಿತವಾದವು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ’ (ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು : ಸಂಪುಟ-5 : ಪು-) ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಯಾಕೆ ಮತ್ತೇ ಮತ್ತೇ ಪ್ರಸ್ತುತವಾಗುತ್ತವೆ ಎಂದರೆ ಪರಿಸ್ಥಿತಿಗಳು ಹಾಗಿವೆ. ಜಾತಿಯೆಂಬುದು ಒಂದು ಸೂತಕ ಎಂದು ಭಾವಿಸಿರುವ ಬಹಳಷ್ಟು ಮಂದಿ, ಆ ಜಾತಿಯೇ ಬಹಳಷ್ಟು ಅವಘಡಗಳನ್ನು ಸೃಷ್ಟಿಸಿದೆ ಎಂಬುದನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ.
ಶಿಕ್ಷಣದ ಹಕ್ಕು ದೊರೆತಾಗ ದಲಿತರು ಒಂದಿಷ್ಟು ಅತ್ತ ವಾಲಿಕೊಂಡು ಒಂದಿಷ್ಟು ಕಲಿತು, ಉದ್ಯೋಗ ಮಾಡುತ್ತ ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಳ್ಳಲು ದಾಪುಗಾಲು ಇಡುತ್ತಿರುವುದು ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಂಪಾದಿಸುತ್ತಿರುವುದನ್ನು ಗಮನಿಸಿದಾಗ ಭಾರತೀಯ ಸಮಾಜವು ನಿಜವಾಗಿಯೂ ಬದಲಾಗಿಯೇ ಬಿಟ್ಟಿತು ಎಂದು ಭ್ರಮಿಸಿದವರೂ ಸಂಭ್ರಮಿಸಿದವರೂ ಇದ್ದಾರೆ. ಆದರೆ ವಾಸ್ತವ ಹಾಗಿಲ್ಲ ಎಂದರೆ ಅಚ್ಚರಿಯಾದೀತು ! ದಲಿತನೊಬ್ಬ ಶಿಕ್ಷಣ ಪಡೆದುಕೊಂಡು ಉನ್ನತ ಹಂತ ತಲುಪಿದರೂ ವೈದಿಕಶಾಹಿ ಹೇರಿದ ಜಾತಿ ಸೂತಕ ಆತನನ್ನು ಬಿಡಲಾರದು. ಈ ದೇಶದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಆತನೊಡನೆ ಗೌರವಪೂರ್ವಕವಾಗಿ ಸಂಪರ್ಕ ಸಾಧಿಸುತ್ತಾರೆ ಎಂಬುದು ನಿಜವಾಗಿದ್ದರೂ ಅವರ ಮನದ ಮೂಲೆಯಲ್ಲಿ ಜಾತಿ ಮನೆ ಮಾಡಿ ಕುಳಿತ್ತಿರುತ್ತದೆ. ಹೊರಗೆ ಏನೆಲ್ಲ ಮಾಡಿದರೂ ದಲಿತನೊಬ್ಬ ತಮ್ಮ ಮನೆಗೆ ಬಂದಾಗ ಮೇಲ್ಜಾತಿಯವರೆನಿಸಿಕೊಂಡವರ ಚಟುವಟಿಕೆಗಳು ಆಚರಣೆಗಳ ಹೆಸರಿನಲ್ಲಿ ‘ದೂರ’ ಇಡುವ ವರ್ತನೆಗಳಲ್ಲಿ ವ್ಯಕ್ತವಾಗುತ್ತವೆ. ಮನಸ್ಸುಗಳು ಇಂದಿಗೂ ಬದಲಾಗಿಲ್ಲ ಎನ್ನುವುದು ಈ ಕಾರಣಕ್ಕಾಗಿಯೇ.
ಇದು ಶಿಕ್ಷಣ ಪಡೆದ, ಉದ್ಯೋಗದಲ್ಲಿರುವ, ಆರ್ಥಿಕವಾಗಿ ಸಬಲರಾಗಿರುವ, ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಂಡಿರುವ ದಲಿತರನ್ನು ನಡೆಯಿಸಿಕೊಳ್ಳುವ ಪರಿಯಾದರೆ ಅಕ್ಷರದ ಅರಿವಿಲ್ಲದ, ಆರ್ಥಿಕವಾಗಿ ತೀರ ಕೆಳಮಟ್ಟದಲ್ಲಿರುವ ದಲಿತರು ಈ ದೇಶದಲ್ಲಿ ಬಹುಸಂಖ್ಯಾತರಾಗಿದ್ದು, ಇವರ ಬದುಕು ಇಂದಿಗೂ ಬದಲಾವಣೆಯಾಗಿಲ್ಲ. ಮೇಲ್ಜಾತಿಯವರೆನಿಸಿಕೊಂಡವರ ಶೋಷಣೆಗೆ ಇವರು ನಿರಂತರವಾಗಿ ಬಲಿಯಾಗುತ್ತಲೇ ಇದ್ದಾರೆ. ಇನ್ನೂ ಕೆಲವು ಕಡೆ ಅಸ್ಪೃಶ್ಯತೆ ತುಂಬ ಘೋರವಾಗಿಯೇ ಆಚರಣೆಯಲ್ಲಿದೆ. ಕುಡಿಯುವ ನೀರು, ತಿನ್ನುವ ಅನ್ನ, ಪೂಜಿಸುವ ದೈವಗಳ ಸಂದರ್ಭದಲ್ಲಿ ಇನ್ನೂ ಮೇಲು-ಕೀಳುತನ, ಮಡಿ-ಮೈಲಿಗೆಗಳು ಕಾಣಿಸಿಕೊಳ್ಳುತ್ತಲೇ ಇವೆ. ದಿನವೂ ದಿನಪತ್ರಿಕೆ ಓದುವವರಿಗೆ, ಟ.ವಿ. ನೋಡುಗರಿಗೆ ಈ ಸುದ್ದಿಗಳ ಮಾಹಿತಿ ಇದ್ದೇ ಇದೆ ; ಇದಕ್ಕೆ ಬೇರೊಂದು ಉದಾಹರಣೆ ನೀಡುವ ಅವಶ್ಯಕತೆಯಿಲ್ಲ. ದಲಿತರನ್ನು ಬಹಿಷ್ಕಾರ ಹಾಕುವುದು, ಸಾರ್ವಜನಿಕವಾಗಿ ಅವಮಾನಿಸುವುದು, ಗುಂಡಾಗಿರಿ ಮಾಡಿ ಹಲ್ಲೆ ಮಾಡುವುದು, ನಿರ್ದಾಕ್ಷಣ್ಯವಾಗಿ ದಲಿತರ ಮಾರಣಹೋಮ ನಡೆಸುವುದು, ದಲಿತ ಮಹಿಳೆಯರನ್ನು ಬೆತ್ತಲೆ ಮಾಡುವುದು ಇಲ್ಲವೆ ಅತ್ಯಾಚಾರ ಮಾಡುವುದು ಇನ್ನೂ ನಿರಂತರವಾಗಿವೆ ಎಂದರೆ ಪ್ರಜಾಪ್ರಭುತ್ವದ ಈ ದೇಶದ ಪ್ರಜೆಗಳಿಗೆ ನಾಚಿಕೆಯಾಗಬೇಕು !
ಇವೆಲ್ಲವುಗಳ ನಡುವೆ ಮಾನಸಿಕ ಗುಲಾಮಗಿರಿಯನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವ ದಲಿತರೂ ಇದ್ದಾರೆ. ಅವರು ಕಲಿತವರಿರಬಹುದು, ಸ್ಥಿತಿವಂತರಿರಬಹುದು ಅಥವಾ ಏನೇನೂ ಇಲ್ಲದವರೂ ಆಗಿರಬಹುದು. ಈ ಮಾನಸಿಕ ಗುಲಾಮಗಿರಿಗೆ ಈಡಾಗಿರುವ ದಲಿತರು ಸಾಮಾಜಿಕ ಬದಲಾವಣೆಯನ್ನು ಬಯಸುವ ಸಂದರ್ಭದಲ್ಲಿ ತುಂಬ ಅಪಾಯಕಾರಿ. ತಮ್ಮದೇ ತಪ್ಪು ಎಂಬ ತಲಾಂತರದ ಕರ್ಮ ಸಿದ್ಧಾಂತಕ್ಕೆ ಬಲಿಯಾಗಿರುವ ಇಂಥ ದಲಿತರನ್ನು ಎಚ್ಚರಗೊಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ. ಯಾಕೆಂದರೆ ಮೇಲ್ಜಾತಿಯವರೆನಿಸಿಕೊಂಡವರೊಂದಿಗೆ ಗುರುತಿಸಿಕೊಳ್ಳುವ ಬಲಿತ ದಲಿತರೂ ಭೂಮಿತತ್ವವನ್ನು ಮರೆಯುತ್ತಾರೆ ಮತ್ತು ತಾವು ದಲಿತರೆಂದು ಹೇಳಿಕೊಳ್ಳಲು ಸಹ ಸಂಕೋಚಪಡುತ್ತಾರೆ. ಕನಿಷ್ಟ ದಲಿತರನ್ನು ಆದಷ್ಟು ದೂರ ಇಡುವ ಪ್ರಯತ್ನವನ್ನೂ ಬಲಿತ ದಲಿತರು ಮಾಡುತ್ತಾರೆ. ಬಲಿತ ದಲಿತರ ಈ ಗುಪ್ತ ಗುಲಾಮಗಿರಿಯಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ದೂರೀಕರಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ ಮತ್ತು ನಡೆಯುತ್ತಿವೆ.
ಹೀಗಾಗಿಯೇ ಈ ದೇಶದಲ್ಲಿ ದಲಿತರು ಇನ್ನೂ ಶೋಷಣೆಯ ಅನುಭೋಗಿಗಳೇ ಆಗಿದ್ದಾರೆ. ತಿದ್ದಿಕೊಳ್ಳದಿದ್ದರೆ ಆ ಶೋಷಣೆ ಮುಂದುವರಿಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಮೇಲ್ಜಾತಿಯವರೆನಿಸಿಕೊಂಡವರು ದಲಿತರಲ್ಲಿ ಬಹಿಷ್ಕಾರದ ಭಯವನ್ನು ಬಿತ್ತುತ್ತಾರೆ ಮಾತ್ರವಲ್ಲ ಭಂಡತನಕ್ಕಿಳಿದು ಮೇಲ್ಮೆಯನ್ನು ಸಾಧಿಸಿಕೊಳ್ಳುತ್ತಾರೆ.
ಇದೆಲ್ಲವುಗಳ ಜೊತೆಗೆ ಇತ್ತೀಚೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಪರಾಕ್ರಮವನ್ನೂ ಸಾಧನೆ-ಸಿದ್ಧಿಯನ್ನೂ ಅಲ್ಲಗೆಳೆಯುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಆಗಿದೆ. ಇದಕ್ಕೆ ಕೇವಲ ದಲಿತೇತರರು ಮಾತ್ರವಲ್ಲ ಬಲಿತ ದಲಿತರೂ ಕಾರಣಕರ್ತರು ಎನ್ನುವುದು ಇನ್ನಷ್ಟು ಆತಂಕಕಾರಿಯಾದ ಸಂಗತಿಯೇ ಆಗಿದೆ. ಯಾರೋ ಒಬ್ಬರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದವರಲ್ಲಿ ಒಬ್ಬರೇ ಹೊರತು ಇಡೀ ಸಂವಿಧಾನ ರಚನೆಯನ್ನು ಅವರು ಮಾಡಿಲ್ಲ ಎಂಬುದನ್ನು ಮಾಧ್ಯಮಗಳಲ್ಲಿ ಹರಿಯಬಿಟ್ಟು ತಮ್ಮ ಉರಿಯನ್ನು ತಣ್ಣಗಾಗಿಸಿಕೊಳ್ಳುವಲ್ಲಿ ತೃಪ್ತಿಪಟ್ಟುಕೊಂಡರೆ, ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಾಷ್ಟ್ರವಿರೋಧಿ ಎನಿಸುವ ಕಾರ್ಯ ಮಾಡಿದ್ದಾರೆ ಎಂಬ ಪುಕಾರು ಎಬ್ಬಿಸುತ್ತಿದ್ದಾರೆ. ಮತ್ತೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೋರಾಟ 1930 ಆಸುಪಾಸಿನಲ್ಲಿ ಆರಂಭವಾಯಿತು ಎಂದು ಘೋಷಿಸಿ ಬೇರೆಯವರ ತಲೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ !
ಇವೆಲ್ಲವುಗಳಿಗಿಂತಲೂ ಹೇಯವಾದ ನಡುವಳಿಕೆ ಎಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಇಂದಿಗೂ ತಮ್ಮ ಶುದ್ಧ ವೈರಿ ಎಂದು ಭಾವಿಸುವ ಗುಂಪೊಂದು ಡಾ. ಬಾಬಾಸಾಹೇಬರ ಅಂಬೇಡ್ಕರ್ ಅವರ ವಿಚಾರಗಳನ್ನು ತಿರುಚುತ್ತ, ಅವರ ಮೂರ್ತಿಗಳನ್ನು, ಸ್ಮಾರಕಗಳನ್ನು ಭಗ್ನಗೊಳಿಸುವಲ್ಲಿ ‘ಆತ್ಮ’ ತೃಪ್ತಿಯನ್ನು ಅನುಭವಿಸುತ್ತ ವಿಜ್ರಂಭಿಸುವ ಸ್ವರತಿಗೆ ಮುಂದಾಗುತ್ತಿರುವುದು ! ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ‘ಹೊಲೆಯ’ ಎಂಬುದನ್ನಷ್ಟೇ ಪರಿಗಣಿಸಿ, ಅವರ ಇಡೀ ಸಾಧನೆಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ‘ಸಂಘಟನೆ’ ಮಾಡಿಕೊಂಡು ಹುಯಿಲೆಬ್ಬಿಸುತ್ತ ದಲಿತ ಶಕ್ತಿಯನ್ನು ಹಾಳು ಮಾಡುವಲ್ಲಿ ಸಾಫಲ್ಯ ಸಾಧಿಸುವ ಹಠಮಾರಿತನದಲ್ಲಿ ಅಂಡಲೆಯುತ್ತಿದ್ದಾರೆ !
ಇಂಥವುಗಳೆಲ್ಲ ಯಾಕೆ ನಡೆಯುತ್ತಿವೆ ಎಂದರೆ ಅದು ನಮ್ಮಲ್ಲಿ ಇರುವ ಅರಿವಿನ ಅಭಾವ ಎನ್ನಬೇಕಾಗುತ್ತದೆ. ಅರಿವಿನ ಅಭಾವದಿಂದ ಉದ್ಭವಿಸಿದ ಅಸಹನೆಯೇ ಇಷ್ಟಕ್ಕೆಲ್ಲ ಕಾರಣ ಎನ್ನದೆ ಬೇರೆ ಮಾರ್ಗವಿಲ್ಲ. ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂಘರ್ಷ-ಸಮನ್ವಯ ಸಿದ್ಧಾಂತ, ಸಾಂಘಿಕ ಬದುಕಿನ ಸದಾಶಯಗಳ ಫಲಾನುಭವಿಗಳಾಗಿರುವ ಬಹಳಷ್ಟು ಮಂದಿ ಬಲಿತ ದಲಿತರು ಉಂಡ ತಾಟಿನಲ್ಲೇ ಹೇಸಿಗೆ ಮಾಡಿಕೊಂಡು ಉಳ್ಳಾಡುತ್ತಿರುವುದು ಕೂಡ ಇಂತಹ ಅವಘಡಗಳಿಗೆ ಕೆಂಪು ಹಾಸಿಗೆ ಹಾಸಿದಂತಾಗಿದೆ !
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರ ಪರವಾಗಿ ಮಾತ್ರ ಹೋರಾಟ ಮಾಡಲಿಲ್ಲ. ದಲಿತ ಅಸ್ಮಿತೆಯ ಹೋರಾಟದೊಂದಿಗೆ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಪರವಾಗಿಯೂ ಬಹುದೊಡ್ಡ ಚಳುವಳಿಯನ್ನು ಹುಟ್ಟು ಹಾಕಿದವರು. ಈ ದೇಶದ ಪ್ರತಿಯೊಬ್ಬ ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿಯೂ ಹೋರಾಟ ಮಾಡಿ ಯಶಸ್ಸು ಗಳಿಸಿದವರು. ಜೊತೆಗೆ ಮಹಾತ್ಮ ಫುಲೆಯವರು ಆರಂಭಿಸಿದ ರೈತರ ಪರವಾದ ಉಗ್ರ ಹೋರಾಟವನ್ನೂ ಮಾಡಿ ನ್ಯಾಯ ದೊರಕಿಸಿ ಕೊಡುವ ಕೈಂಕರ್ಯ ತೊಟ್ಟವರು. ಇವೆಲ್ಲವುಗಳನ್ನೂ ಮರೆ ಮಾಚಿ ಸುಳ್ಳು ಸುದ್ದಿಯನ್ನು ಹರಡುತ್ತಿರುವ ಕೆಲವು ಮನೋವಿಕಲ್ಪಕ್ಕೆ ಒಳಗಾದ ಜನರ ಚಟುವಟಿಕೆಗಳು ತೀರ ಅಕ್ಷಮ್ಯ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಡಿದ ಸಾಧನೆ-ಸಿದ್ಧಿಗಳ ಅರಿವನ್ನು ಅಥವಾ ಕನಿಷ್ಟ ಪರಿಚಯವನ್ನಾದರೂ ಕಿಲುಬುಗಟ್ಟಿರುವ ಇಡೀ ಭಾರತೀಯ ಸಮಾಜಕ್ಕೆ ತಿಳಿಯಪಡಿಸುವ ಜವಾಬ್ದಾರಿಯನ್ನು ಪ್ರಜ್ಞಾವಂತರಾದವರೆಲ್ಲರೂ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅರ್ಥವಾಯಿತು ಅಂದುಕೊಂಡಿದ್ದೇನೆ !

Sunday, June 10, 2012

ಇದು ದಲಿತರ ಭದ್ರತೆಯ ಬದುಕೆ !?




- ಸುಭಾಶ್‌ ಗಟಾದೆ

ಇದು ದಲಿತರ ಭದ್ರತೆಯ ಬದುಕೆ!?
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಹಾಲಿ ಅಧ್ಯಕ್ಷ ನ್ಯಾ.ಕೆ.ಜಿ. ಬಾಲಕೃಷ್ಣನ್ ನಿವೃತ್ತಿಯ ಬಳಿಕ ತಪ್ಪು ಕಾರಣಗಳಿಗಾಗಿ ಈಗಾಗಲೇ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡುವ ಮೂಲಕ ಅವರು ತನ್ನ ಟೀಕಾಕಾರರಿಗೆ ಮತ್ತಷ್ಟು ಗ್ರಾಸ ಒದಗಿಸಿ ದರು. ದಲಿತರ ಏಳಿಗೆಗಾಗಿ ಗುಜರಾತ್ ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಪ್ರಶಂಸೆಯ ಸುರಿಮಳೆಗೈದರು. ಅಷ್ಟೇ ಅಲ್ಲ, ಇತರ ಹಲವಾರು ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್‌ನಲ್ಲಿ ದಲಿತರ ಭವಿಷ್ಯ ಭದ್ರವಾಗಿದೆ ಎಂದು ಗುಣಗಾನ ಮಾಡಿದರು. ಆದರೆ, ಇದು ದಲಿತ ಚಿಂತಕರನ್ನು ಕೆರಳಿಸಿದೆ. ಇದು 2002ರ ಗುಜರಾತ್ ಹಿಂಸಾಚಾರದ ಹಿನ್ನೆಲೆಯಲ್ಲಿ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿರುವ ರಾಜ್ಯ ಸರಕಾರಕ್ಕೆ ಕ್ಲೀನ್‌ಚಿಟ್ ನೀಡುವ ಹಾಗೂ ಅದರ ಕಳಂಕವನ್ನು ತೊಡೆದುಹಾಕುವ ಕ್ರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಬಹಿರಂಗ ವಿಚಾರಣೆ ನಡೆಸುವ ಆಯೋಗದ ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣನ್ ಗುಜರಾತ್‌ಗೆ ಎರಡು ದಿನಗಳ (ಮಾರ್ಚ್ 14-15) ಭೇಟಿ ನೀಡಿದ್ದರು. ಇದು ಕೆ. ಬಿ. ಸಕ್ಸೇನ ಸಮಿತಿಯ ಮಹತ್ವದ ಶಿಫಾರಸುಗಳ ಪೈಕಿ ಒಂದಾಗಿದೆ.

ಕೆಲವು ವರ್ಷಗಳ ಹಿಂದೆ ಸಮಿತಿಯು ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ವರದಿಯೊಂದನ್ನು ಸಲ್ಲಿಸಿತ್ತು.ಕೆಲವು ಸಮಯದ ಹಿಂದೆ ಆಯೋಗ ಈ ಮಾದರಿಯ ತನ್ನ ಮೊದಲ ಬಹಿರಂಗ ವಿಚಾರಣೆಯನ್ನು ಒಡಿಶಾದಲ್ಲಿ ನಡೆಸಿತ್ತು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನ್ಯಾ.ಬಾಲಕೃಷ್ಣನ್ ಗುಜರಾತ್ ಸರಕಾರದ ಮೇಲೆ ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು.ಆದರೆ, ದಲಿತರ ನೈಜ ಬದುಕು ಬೇರೆಯದೇ ಆದ ಚಿತ್ರಣ ನೀಡಿತು.ಗುಜರಾತ್‌ನ ವಿವಿಧ ಭಾಗಗಳಿಂದ ಬಂದಿದ್ದ ದಲಿತರು ದೂರುಗಳ ಮಹಾಪೂರವನ್ನೇ ಹರಿಸಿದರು. ದೂರು ಸಲ್ಲಿಸುವ ವೇಳೆ ಪೊಲೀಸರಿಂದ ಅಸಹಕಾರ, ಸರಕಾರಿ ಅಧಿಕಾರಿಗಳ ನಿರ್ಲಕ್ಷ, ಪುನರ್ವಸತಿಯ ಕೊರತೆ ಮುಂತಾದವುಗಳತ್ತ ಅವರು ಬೆಟ್ಟು ಮಾಡಿದರು.

ಗ್ರಾಮಾಧಿಕಾರಿಯಾಗಿರುವ ಸಾನಂದ್ ಸಮೀಪದ ಕುಂಡ್ಲ ಗ್ರಾಮದ ನಿವಾಸಿ ಹಾಗೂ ದಲಿತ ಸುರೇಶ್ ಜಾದವ್, 2009ರಲ್ಲಿ ತನ್ನ ಗ್ರಾಮದಲ್ಲಿ ದೇವಸ್ಥಾನವೊಂದು ನಿರ್ಮಾಣಗೊಂಡ ಬಳಿಕ ತಾನು ಯಾವ ರೀತಿಯ ಸಾಮಾಜಿಕ ಬಹಿಷ್ಕಾರ ಎದುರಿಸಿದೆ ಎಂಬುದನ್ನು ವಿವರಿಸಿದರು.ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ವನ್ನು ನಿರ್ಮಿಸಲಾಗಿತ್ತು.ದೇವಸ್ಥಾನ ನಿರ್ಮಾಣಕ್ಕೆ ಎಲ್ಲರಂತೆ ಸುರೇಶ್ ಜಾದವ್ ಕೂಡ ದೇಣಿಗೆ ನೀಡಿದ್ದರು. ಆದರೆ, ದೇವಸ್ಥಾನ ಆರಂಭಗೊಂಡ ಬಳಿಕ ಅದನ್ನು ಪ್ರವೇಶಿಸಲು ಜಾದವ್‌ಗೆ ಅನುಮತಿ ನೀಡಲಿಲ್ಲ. ಅದನ್ನು ಪ್ರತಿಭಟಿಸಿದಾಗ ಅವರು ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು.
ಅಹ್ಮದಾಬಾದ್‌ನಿಂದ 100 ಕಿ.ಮೀ. ದೂರ ದಲ್ಲಿರುವ ಸಬರ್‌ಕಾಂತ ಜಿಲ್ಲೆಯ ತಾಜುಪುರ ಗ್ರಾಮದಲ್ಲಿ ಎಪ್ರಿಲ್‌ನಲ್ಲಿ ದಲಿತ ಕುಟುಂಬ ವೊಂದರಲ್ಲಿ ಮದುವೆಯಿತ್ತು.ಕುಟುಂಬವು ಮದುವೆ ಮೆರವಣಿಗೆ ನಡೆಸಲು ಮುಂದಾ ದಾಗ ಇತರ ಸಮುದಾಯಗಳ ಜನರು ತಡೆಯೊಡ್ಡಿದರು.ಪೊಲೀಸ್ ರಕ್ಷಣೆಯ ಹೊರತಾಗಿಯೂ ಮೆರವಣಿಗೆ ಮೇಲೆ ಆಕ್ರಮಣ ನಡೆಸಲಾಯಿತು ಹಾಗೂ ಕಲ್ಲು ತೂರಲಾಯಿತು.‘‘ದೂರು ನೀಡುವಾಗ ಪೊಲೀಸರು ಮೇಲ್ಜಾತಿಯವರ ಪರವಾಗಿ ನಿಂತರು’’ ಎಂದು ದಲಿತ ಕಾರ್ಯಕರ್ತ ಸಂಜಯ್ ಪಾರ್ಮರ್ ಆರೋಪಿಸಿದರು.

1,589 ಗ್ರಾಮಗಳಲ್ಲಿ ತಾನು ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಸ್ವಯಂಸೇವಾ ಸಂಘಟನೆ ‘ನೌಸರ್ಜನ್’ನ ಪ್ರತಿನಿಧಿಯೊಬ್ಬರು ಹಂಚಿಕೊಂಡರು. ಸಮೀಕ್ಷೆ ನಡೆಸಲಾದ ಗ್ರಾಮಗಳ ಪೈಕಿ 98 ಶೇ. ಗ್ರಾಮಗಳಲ್ಲಿ ಅಸ್ಪಶತೆ ಆಚರಣೆ ಇನ್ನೂ ಜಾರಿಯಲ್ಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಪ್ರಕಾರ,ದಲಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳ ಉಸ್ತುವಾರಿಯನ್ನು ರಾಜ್ಯ ಮಟ್ಟದ ಸಮಿತಿಯೊಂದು ನಡೆಸಬೇಕು. ಹಾಗೂ ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ಸೇರಬೇಕು. ವರ್ಷಕ್ಕೆ ಎರಡು ಸಭೆಗಳನ್ನು ಬಿಡಿ, ಸಮಿತಿ ಕಳೆದ 17 ವರ್ಷಗಳಲ್ಲಿ ಕೇವಲ ಆರು ಬಾರಿ ಸಭೆ ಸೇರಿದೆ. ದಲಿತ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಒಂದು ವಿಶೇಷ ನ್ಯಾಯಾಲಯ ಮತ್ತು ಒಂದು ವಿಶೇಷ ಪಬ್ಲಿಕ್ ಪ್ರಾಸಿ ಕ್ಯೂಟರ್ ನೇಮಿಸಬೇಕೆಂದು ಈ ಕಾಯ್ದೆ ಹೇಳುತ್ತದೆ. ಆದರೆ, ಇದಕ್ಕೆ ತನ್ನ ಬಳಿ ಹಣವಿಲ್ಲ ಎಂದು ಸರಕಾರ ಹೇಳುತ್ತದೆ.

2006ರಲ್ಲಿ ಬನಸ್ಕಾಂತ ಜಿಲ್ಲೆಯಲ್ಲಿ ತಾನು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ದೌರ್ಜನ್ಯ) ಆಗಿದ್ದಾಗ ದಲಿತರ ವಿರುದ್ಧದ 1,000ಕ್ಕೂ ಅಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾಗ ಹಿರಿಯ ಅಧಿಕಾರಿಗಳು ತನಗೆ ಹೇಗೆ ಕಿರುಕುಳ ನೀಡಿದರು ಎಂಬುದನ್ನು ಅಮಾನತುಗೊಂಡ ಡಿಎಸ್‌ಪಿ ಎಸ್.ಕೆ.ಮಕ್ವಾನ್ ಬಹಿರಂಗ ವಿಚಾರಣೆಯ ವೇಳೆ ನ್ಯಾಯಾಧೀಶರಿಗೆ ಹೇಳಿದರು.ತಾನು ಕರ್ತವ್ಯ ನಿರ್ವಹಿಸುವುದರಿಂದ ಹಾಗೂ ಆರೋಪಿಗಳನ್ನು ಹಿಡಿಯುವುದರಿಂದ ತನ್ನನ್ನು ಪ್ರತಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಸ್ಥಳೀಯ ಅಧಿಕಾರಿಗಳ ಕುರಿತು ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ ಏಕೈಕ ಕಾರಣಕ್ಕಾಗಿ ಪೊಲೀಸರು ತನಗೆ ಯಾವ ರೀತಿ ಕಿರುಕುಳ ನೀಡಿದರು ಎಂಬ ಬಗ್ಗೆ ಭಾವ ನಗರದ ಲಾಲ್‌ಜಿ ಮಕ್ವಾನ ಎನ್‌ಎಚ್‌ಆರ್‌ಸಿ ಸಮಿತಿಗೆ ವಿವರಿಸಿದರು. ತನ್ನ ಗಂಡ ಮೇಲ್ಜಾತಿಯ ಜನರಿಂದ ಕೊಲೆ ಯಾಗಿದ್ದು ಪೊಲೀಸರು ಈ ಬಗ್ಗೆ ನಿರ್ಲಕ್ಷ ವಹಿಸಿ ದ್ದಾರೆ ಎಂದು ರಜುಲಾ ತಾಲೂಕಿನ ಮೀನಾಬೆನ್ ಮಕ್ವಾನ ಹೇಳಿದರು.
ಗೋರಜ್ ಮತ್ತು ರೆತಾಲ್ ಗ್ರಾಮಗಳಲ್ಲಿ ದಲಿತರನ್ನು ಬಲವಂತವಾಗಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ ಹಾಗೂ ಅವರ ವಿರುದ್ಧ ಸಾಮಾಜಿಕ ಬಹಿಷ್ಕಾರ ವಿಧಿಸಲಾಗುತ್ತಿದೆ. ಆದರೆ ಈ ಬಗ್ಗೆ ದೂರು ನೀಡಿದರೂ ಅಹ್ಮದಾಬಾದ್ ಗ್ರಾಮೀಣ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾನಂದ್ ಗ್ರಾಮದ ದಲಿತರು ದೂರಿದರು. ಸಮುದಾಯದ ವ್ಯಕ್ತಿ ಯೊಬ್ಬನ ಹತ್ಯೆಯಾದಾಗ ಅದರ ವಿರುದ್ಧ ತಾನು ಜನರನ್ನು ಸಂಘಟಿಸಿದುದಕ್ಕಾಗಿ ತನ್ನನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕಿಸಲಾಯಿತು ಎಂದು ಸಾನಂದ್ ಗ್ರಾಮದ ದಲಿತ ಸಮುದಾಯದ ನಾಯಕ ಬಾಬು ವನಿಯಾ ಆರೋಪಿಸಿದರು.ಕಳೆದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ 167 ಸ್ವಚ್ಛತಾ ಕಾರ್ಮಿಕರ ಸಾವು ಸಂಭವಿಸಿದೆ ಎಂದು ರಾಜ್ಯದಲ್ಲಿ ಸ್ವಚ್ಛತಾ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪುರುಷೋತ್ತಮ್ ವೇಲಾ ಹೇಳಿದರು. ಆದಾಗ್ಯೂ, ರಾಜ್ಯದಲ್ಲಿ ಭೂಗತ ಚರಂಡಿಗಳನ್ನು ಸ್ವಚ್ಛ ಮಾಡುವುದಕ್ಕಾಗಿ ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸುವ ವ್ಯವಸ್ಥೆ ಈಗಲೂ ಮುಂದುವರಿದಿದೆ ಎಂದರು.

ಪೂರ್ವ ತಯಾರಿಯ ಕೊರತೆ
ಬಹಿರಂಗ ವಿಚಾರಣೆಯನ್ನು ಏರ್ಪಡಿಸುವ ಭರದಲ್ಲಿ ಆಯೋಗ ಪೂರ್ವ ತಯಾರಿ ಮಾಡದಿರುವುದು ಎದ್ದು ಕಾಣುತ್ತಿತ್ತು. ಆಯೋಗದ 2009ರ ವರದಿಯೇ ಹೇಳು ವಂತೆ, ದೇಶಾದ್ಯಂತ ದಾಖಲಾದ ಒಟ್ಟು 94,559 ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಪೈಕಿ 3,813 ಗುಜರಾತ್ ರಾಜ್ಯದಲ್ಲೇ ಘಟಿಸಿವೆ. ಗುಜರಾತ್ ಈ ಪಟ್ಟಿಯಲ್ಲಿ ಉತ್ತರಪ್ರದೇಶ ಮತ್ತು ದಿಲ್ಲಿಗಳಿಗಿಂತ ಮಾತ್ರ ಕೆಳಗಿದೆ.ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆಯು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಗೆ ಸಲ್ಲಿಸಿದ 23 ಪುಟಗಳ ರಹಸ್ಯ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಕುಲಗೆಡಿಸಿದ ಹಲವಾರು ದೃಷ್ಟಾಂತಗಳನ್ನು ನೀಡಿದೆ. ಈ ಕಾಯ್ದೆಯನ್ವಯ ರಾಜ್ಯದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಕೇವಲ 2.5 ಶೇ. ಹಾಗೂ ದೋಷಮುಕ್ತರಾದವರ ಪ್ರಮಾಣ 97.5 ಶೇ.

ಇದು ಪೊಲೀಸರು ತನಿಖೆಯನ್ನು ಯಾವ ರೀತಿ ನಡೆಸುತ್ತಾರೆ ಹಾಗೂ ವಿಚಾರಣೆಗಳ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹೇಗೆ ಪ್ರತಿಕೂಲವಾಗಿ ವರ್ತಿಸುತ್ತಾರೆ ಎಂಬು ದನ್ನು ಸೂಚಿಸುತ್ತದೆ.ಈ ಕಾಯ್ದೆಯಡಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವಿಚಾರಣೆ ಯನ್ನು ಡಿವೈಎಸ್‌ಪಿ ದರ್ಜೆಗಿಂತ ಕೆಳಗಿನ ಅಧಿಕಾರಿಗಳು ಮಾಡುವಂತಿಲ್ಲ. ಆದರೆ, 4,000ಕ್ಕೂ ಅಧಿಕ ಇಂಥ ಪ್ರಕರಣಗಳ ವಿಚಾರಣೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಅಥವಾ ಸಬ್ ಇನ್ಸ್‌ಪೆಕ್ಟರ್‌ಗಳು ನಡೆಸಿದ್ದಾರೆ. ಸಂತ್ರಸ್ತರನ್ನು ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರು ಎಂದು ಗುರುತಿಸದ ಹಿನ್ನೆಲೆಯಲ್ಲಿ ಆರೋಪಿಗಳು ದೋಷ ಮುಕ್ತರಾಗುತ್ತಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಸಂತ್ರಸ್ತರ ಜಾತಿ ಪ್ರಮಾಣಪತ್ರಗಳನ್ನು ಲಗತ್ತಿಸದಿರುವುದೇ ಕಾರಣವಾಗಿದೆ.ದಲಿತ ದೌರ್ಜನ್ಯ ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ.ದಲಿತ ದೌರ್ಜನ್ಯ ಕಾಯ್ದೆ ಪ್ರಕಾರ ಸುಳ್ಳು ದೂರು ದಾಖಲಿಸುತ್ತಿರುವುದೇ ಆರೋಪಿಗಳ ಭಾರೀ ಪ್ರಮಾಣದ ದೋಷಮುಕ್ತಿಗೆ ಕಾರಣ ಎಂಬುದಾಗಿ ಸಾರ್ವಜನಿಕವಾಗಿ ವ್ಯಾಖ್ಯಾನಿಸಲಾಗುತ್ತಿದೆ.ಆದರೆ, ಈ ಬಗ್ಗೆ ಅಧ್ಯಯನ ನಡೆಸಿದ ಸಾಮಾಜಿಕ ನ್ಯಾಯ ಸಮಿತಿಯ ಕಾರ್ಯದರ್ಶಿ ವಜಿಭಾಯ್ ಪಟೇಲ್, ವಿಚಾರಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಹಲವು ಲೋಪದೋಷಗಳತ್ತ ಬೆಟ್ಟು ಮಾಡಿದೆ.

ಸರಕಾರದ ಶಾಮೀಲಾತಿಯೇ ಪ್ರಕರಣಗಳು ವಿಫಲವಾಗಲು ಕಾರಣ ಎಂಬುದಾಗಿ ಅದು ಸಾಧಿಸಿ ತೋರಿಸಿದೆ. ಇದಕ್ಕಾಗಿ ವಜಿಭಾಯ್ 400 ತೀರ್ಪುಗಳ ವ್ಯವಸ್ಥಿತ ಅಧ್ಯಯನ ನಡೆಸಿದ್ದರು.ಅವರ ಅಧ್ಯಯನದ ಮುಖ್ಯಾಂಶಗಳನ್ನು ‘ಕಮ್ಯುನಲಿಸಂ ಕಾಂಬ್ಯಾಟ್’ನಲ್ಲಿ ಬರೆದ ಲೇಖನವೊಂದರಲ್ಲಿ (ಮಾರ್ಚ್ 2005) ತೀಸ್ತಾ ಸೆಟಲ್ವಾದ್ ಹೀಗೆ ನೀಡಿದ್ದಾರೆ.

• 95 ಶೇಕಡಕ್ಕೂ ಅಧಿಕ ಪ್ರಕರಣಗಳಲ್ಲಿ ತನಿಖೆ ಮತ್ತು ಪ್ರಾಸಿಕ್ಯೂಶನ್ ಅವಧಿಯ ಲ್ಲಿನ ತಾಂತ್ರಿಕ ದೋಷದಿಂದಾಗಿ ಆರೋಪಿಗಳ ದೋಷಮುಕ್ತಿಯಾಗುತ್ತಿದೆ. ಉಳಿದ 5 ಶೇ. ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಸರಕಾರ ಉಲ್ಲಂಘಿಸುತ್ತಿದೆ.ಹೆಚ್ಚಿನ ಸಂದರ್ಭಗಳಲ್ಲಿ ಐಪಿಸಿಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಆದರೆ, ದಲಿತ ದೌರ್ಜನ್ಯ ಪ್ರಕರಣಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು ಸಾಬೀತಾಗುತ್ತಿಲ್ಲ. ಹಾಗಾಗಿ, ಈ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಮುಂದುವರಿಯುವಲ್ಲಿ ವ್ಯವಸ್ಥಿತ ಪಕ್ಷಪಾತ ಎದ್ದು ಕಾಣುತ್ತಿದೆ.

•ರಾಜ್ಯ ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಮನೋಭಾವದ ಪರಿಣಾಮವಾಗಿ ದಲಿತ ದೌರ್ಜನ್ಯ ಕಾಯ್ದೆಯಡಿ ಕೊಲೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳು ಬಿಡುಗಡೆ ಗೊಳ್ಳುತ್ತಿದ್ದಾರೆ.

•ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಆರೋಪಿಗಳ ದೋಷಮುಕ್ತಿಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಇದೇ ಕಾಯ್ದೆಯಡಿಯಲ್ಲಿ ಸ್ಥಾಪನೆಗೊಂಡ ವಿಶೇಷ ನ್ಯಾಯಾಲಯಗಳ ಹಲವು ತೀರ್ಪುಗಳು ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷದ ವಿರುದ್ಧ ಛೀಮಾರಿ ಹಾಕಿವೆ ಹಾಗೂ ಕ್ರಮ ಜಾರಿ ವರದಿಯನ್ನು ನಿರ್ದಿಷ್ಟ ಸಮಯದಲ್ಲಿ ಸಲ್ಲಿಸುವಂತೆಯೂ ಸೂಚಿಸಿವೆ.

• ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ಯಾವುದೇ ಸರಕಾರಿ ಸೇವಕನೊಬ್ಬ ಈ ಕಾಯ್ದೆಯ ಪ್ರಕಾರ ತಾನು ಮಾಡಬೇಕಾದ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರೆ ಅಂಥ ನೌಕರನಿಗೆ ಆರು ತಿಂಗಳ ಸೆರೆಮನೆ ವಾಸ (ಇದನ್ನು ಒಂದು ವರ್ಷಕ್ಕೂ ವಿಸ್ತರಿಸಬಹುದು) ವಿಧಿಸಬೇಕು ಎಂದು ಕಾಯ್ದೆ ಹೇಳುತ್ತದೆ. ನ್ಯಾಯಾಲಯಗಳು ನೀಡಿರುವ 95 ಶೇಕಡ ತೀರ್ಪುಗಳು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ ಛೀಮಾರಿ ಹಾಕಿವೆ. ಆದರೆ, ಗುಜರಾತ್ ಸರಕಾರ ಇಂಥ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸುವ ಬದಲು ಭಡ್ತಿ ನೀಡಿ ಗೌರವಿಸುತ್ತಿದೆ.

ಹಲವು ವಿಧಗಳು
ಸರಕಾರಿ ಯಂತ್ರ ಆರೋಪಿಗಳೊಂದಿಗೆ ಹಲವು ವಿಧಗಳಲ್ಲಿ ಶಾಮೀಲಾಗಿ ಅವರು ದೋಷಮುಕ್ತಗೊಳ್ಳುವಂತೆ ಮಾಡುತ್ತಿದೆ. ಅವುಗಳೆಂದರೆ-
• ಪ್ರಕರಣಗಳನ್ನು ಕೆಳದರ್ಜೆಯ ಅಧಿಕಾರಿಗಳು ನಡೆಸಿದ ಕಾರಣಕ್ಕಾಗಿ ಆರೋಪಿಗಳ ದೋಷಮುಕ್ತಿ: 1995ರ ಈ ಕಾಯ್ದೆಯನ್ವಯ ದಾಖಲಾದ ದೂರುಗಳನ್ನು ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳು ನಡೆಸಬೇಕು. ತಮ್ಮ ವರದಿಗಳನ್ನು ಅವರು ನೇರವಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಬೇಕು. ಪ್ರಕರ ಣದ ತನಿಖೆಯನ್ನು ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಿಂತ ಕೆಳ ದರ್ಜೆಯ ಅಧಿಕಾರಿಗಳು ನಡೆಸಿದ್ದಾರೆ ಎಂಬ ಕಾರಣ ಕ್ಕಾಗಿಯೇ 95 ಶೇ. ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗುತ್ತದೆ.

• ಪೊಲೀಸರು ಜಾತಿ ಪ್ರಮಾಣಪತ್ರವನ್ನು ಲಗತ್ತಿಸಿಲ್ಲ ಎನ್ನುವ ಕಾರಣಕ್ಕಾಗಿ ಖುಲಾಸೆ: ದಲಿತ ದೌರ್ಜನ್ಯ ಕಾಯ್ದೆ ಯ ಪ್ರಕಾರ ದಾಖಲಾದ ದೂರಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ನೀಡುವ ದೂರುದಾರನ ಜಾತಿ ಪ್ರಮಾಣಪತ್ರ ವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ದೂರುದಾರನ ಜಾತಿ ಪ್ರಮಾಣಪತ್ರವನ್ನು ತನಿಖಾಧಿಕಾರಿ ಲಗತ್ತಿಸಿಲ್ಲ ಎಂಬ ಕಾರಣಕ್ಕಾಗಿ ಹಲವು ಅತ್ಯಾಚಾರ ಪ್ರಕರಣದ ಆರೋಪಿಗಳು ಖುಲಾಸೆಗೊಂಡಿದ್ದಾರೆ.

• ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷ:ಈ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕ ಕಡ್ಡಾಯ. ಆದರೆ, ಈ ಪ್ರಾಸಿಕ್ಯೂಟರ್‌ಗಳು ದೂರುದಾರ ರಿಗೆ ಪ್ರತಿಕೂಲವಾಗಿ ವರ್ತಿಸುತ್ತಿರುವುದು ಮೊಕದ್ದಮೆಗಳು ಬಿದ್ದು ಹೋಗಲು ಕಾರಣವಾಗಿದೆ.ಇಂಥ ಪ್ರಾಸಿಕ್ಯೂಟರ್ ಗಳ ತಂತ್ರಗಾರಿಕೆಯಿಂದಾಗಿ ಮೊಕದ್ದಮೆಯೊಂದು ವಿಚಾರಣೆಯ ಹಂತ ತಲುಪುವಾಗ ವರ್ಷಗಳೇ ಉರುಳುತ್ತವೆ. ಸಂತ್ರಸ್ತ/ದೂರುದಾರ ಸಾಕ್ಷ ನುಡಿಯಲು ಕಟಕಟೆಗೆ ತಲುಪುವಾಗ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಯಾರೆಂಬುದೇ ಗೊತ್ತಿರುವುದಿಲ್ಲ.

ಕಾಯ್ದೆಯ ವಿಶೇಷ ವಿಧಿಗಳನ್ನು ಜಾರಿ ಗೊಳಿಸುವುದನ್ನು ತಡೆಯಲು ಹಾಗೂ ಆ ಮೂಲಕ ಮೊಕದ್ದಮೆಗಳನ್ನು ದುರ್ಬಲ ಗೊಳಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ನಡೆಸುವ ಉದ್ದೇಶಪೂರ್ವಕ ಪ್ರಯತ್ನಗಳನ್ನು ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಖಂಡಿಸಿವೆ.

ಈ ಕಾಯ್ದೆಯ ಬಗ್ಗೆ ಗುಜ ರಾತ್ ಸರಕಾರ ನಿರಾಸಕ್ತಿ ಹೊಂದಿ ರುವುದು ಹಾಗೂ ಅದರನ್ವಯ ದಾಖಲಾದ ದೌರ್ಜನ್ಯಗಳ ಆರೋಪಿಗಳನ್ನು ಶಿಕ್ಷಿಸಲು ಇಚ್ಛಾಶಕ್ತಿಯ ಕೊರತೆ ಹೊಂದಿರುವುದು ಕಾಯ್ದೆಯನ್ನು ಅರ್ಥಹೀನಗೊಳಿಸಿದೆ. ಅದೂ ಅಲ್ಲದೆ, ದಲಿತರು ಮತ್ತು ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ರಚಿಸಲಾಗಿರುವ ರಾಜ್ಯ ಸರಕಾರದ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಯಾಗಿವೆ. ಹಾಗಾಗಿ, ಸಾಮಾಜಿಕ ನ್ಯಾಯ ಕ್ರಮಗಳನ್ನು ಜಾರಿಗೊಳಿಸುವುದು ಭಾರೀ ಸವಾಲಿನ ಸಂಗತಿಯಾಗಿದೆ. ಇಲಾಖೆಯಲ್ಲಿ 300 ಹುದ್ದೆಗಳು ಖಾಲಿಯಾಗಿವೆ.

ದಲಿತರ ಬಗ್ಗೆ ಅನಾದರ
ಬೃಹತ್ ಸ್ವರೂಪದ ಕಾನೂನು ವ್ಯವಸ್ಥೆ ಮತ್ತು ಕಾನೂನುಗಳ ಸರಮಾಲೆ ಇರುವ ಹೊರತಾಗಿಯೂ ನ್ಯಾಯ ಮರೀಚಿಕೆಯಾಗಿರುವುದು ದಲಿತರನ್ನು ಸಮಾಜ ಹೇಗೆ ಕಾಣುತ್ತಿದೆ ಹಾಗೂ ಅವರ ಹಕ್ಕುಗಳಿಗೆ ಯಾವ ರೀತಿಯ ಗೌರವ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ.ಇಲ್ಲಿ ದಲಿತರು ಭಾರೀ ಪ್ರಮಾಣದ ತಾರತಮ್ಯ ಎದುರಿಸುತ್ತಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಅವರಿಗೆ ಶ್ಮಶಾನ ಜಾಗವನ್ನು ನಿರಾಕರಿಸಲಾಗುತ್ತದೆ, ಹೊರವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಬಲವಂತಪಡಿಸಲಾಗುತ್ತದೆ ಹಾಗೂ ಮೀಸಲಾತಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಅನುದಾನರಹಿತ ಶಾಲೆಗಳಿಗೆ ದಲಿತರನ್ನು ಶಿಕ್ಷಕರಾಗಿ ನೇಮಿಸುತ್ತಿಲ್ಲ ಎನ್ನುವುದು ಚರ್ಚಾರ್ಹ ವಿಷಯವಾಗಿದೆ. ಗುಜರಾತ್ ರಾಜ್ಯ ಸೆಕೆಂಡರಿ ಮತ್ತು ಹಯರ್ ಸೆಕೆಂಡರಿ ಶಿಕ್ಷಣ ಮಂಡಳಿಯ ವೆಬ್‌ಸೈಟ್ ಪ್ರಕಾರ, ರಾಜ್ಯದಲ್ಲಿ 3255 ಅನುದಾನರಹಿತ ಶಾಲೆಗಳಿವೆ. 

ಈ ಶಾಲೆಗಳ ನಡುವೆ ಹಲವಾರು ಸಾಮ್ಯತೆ ಗಳಿರಬಹುದು.ಆದರೆ, ಎದ್ದು ತೋರುವಂಥ ಒಂದು ಸಾಮ್ಯತೆಯೆಂದರೆ ಇವುಗಳು 1972ರ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿ ಸುತ್ತಿವೆ.ಶಿಕ್ಷಣ ಕಾಯ್ದೆಯ ವಿಧಿಗಳನ್ನು ಪಾಲಿ ಸುವುದು ಕಡ್ಡಾಯವಾಗಿದ್ದರೂ ಯಾವುದೇ ಶಾಲೆಗಳು ಇದನ್ನು ಪಾಲಿ ಸುವ ಗೊಡವೆಗೆ ಹೋಗುತ್ತಿಲ್ಲ.ಈ ಕಾಯ್ದೆಯ ಪ್ರಕಾರ, ಅನು ದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳು ನೇಮಕಾತಿಯ ವೇಳೆ ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು. ಈ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ದಲಿತ ಶಿಕ್ಷಕರಿದ್ದಾರೆ.

ಶಿಕ್ಷಣ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದುಪಡಿಸ ಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ, ಈ ಶಾಲೆಗಳಿಗೆ ಅನುದಾನ ನೀಡುತ್ತಿಲ್ಲ ವಾದುದರಿಂದ ಮೀಸಲಾತಿಯನ್ನು ಅನುಸರಿಸುವಂತೆ ಅವುಗಳನ್ನು ಬಲವಂತಪಡಿಸುವ ಹಾಗಿಲ್ಲ ಎಂದು ಸರಕಾರ ಹೇಳುತ್ತದೆ.

ದಲಿತ ಸೊಸೈಟಿಗಳು
ನಗರಗಳಲ್ಲಿ ದಲಿತರ ವಿರುದ್ಧ ‘ಒಂದು ರೀತಿಯ ವರ್ಣಭೇದ ನೀತಿ’ಯನ್ನು ಅನುಸರಿಸುತ್ತಿರುವುದು ಎಲ್ಲ ಮಟ್ಟಗಳಲ್ಲಿ ಗೋಚರಿಸುತ್ತಿದೆ. ವಿವಿಧ ವರ್ಗಗಳ ಜನರು ವಾಸಿಸುವ ಸ್ಥಳಗಳಲ್ಲಿ ದಲಿತನೊಬ್ಬ ಮನೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ. ದಲಿತನೊಬ್ಬ ಮನೆಗಾಗಿ ಮೇಲ್ಜಾತಿಯ ಬಿಲ್ಡರ್‌ನನ್ನು ಸಂಪರ್ಕಿಸಿದರೆ ಒಂದೋ ಆತನಿಗೆ ನೇರವಾಗಿ ಇಲ್ಲ ಎಂದು ಹೇಳಲಾಗುತ್ತದೆ, ಇಲ್ಲವೇ ಪರೋಕ್ಷವಾಗಿ ನಿರಾಕರಿಸಲಾಗುತ್ತದೆ. ಮನೆ ಹುಡುಕುವ ದಲಿತನ ಹಣಕಾಸು ಹಿನ್ನೆಲೆ ಉತ್ತಮವಾಗಿದ್ದರೂ ಹೀಗೆ ಮಾಡಲಾಗುತ್ತದೆ. ಒಂದೇ ಒಂದು ದಲಿತ ಕುಟುಂಬಕ್ಕೆ ಆಸ್ತಿ ಮಾರಿದರೂ ಅದು ಬಿಲ್ಡರ್‌ಗಳು ಅಥವಾ ರಿಯಲ್ ಎಸ್ಟೇಟ್ ಏಜೆಂಟ್‌ಗಳ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಬಹುಶಃ ಇದು ಸಮಾಜದಲ್ಲಿ ಆಳವಾಗಿ ಬೇರೂರಿರುವ ವರ್ಣ/ಜಾತಿ ಮನೋಭಾವದ ಸೂಚನೆಯಾಗಿದೆ. 2002ರ ಗುಜರಾತ್ ಹತ್ಯಾಕಾಂಡ ಬಳಿಕ ಈ ಮನೋಭಾವ ಪುನರುಜ್ಜೀವನಗೊಂಡಿದೆ ಎಂಬಂತೆ ಭಾಸವಾಗುತ್ತಿದೆ. ಉದಾಹರಣೆಗೆ, ಅಹ್ಮದಾಬಾದ್‌ನಲ್ಲಿ ಈಚೆಗೆ ‘ದಲಿತರಿಗಾಗಿ ಮಾತ್ರ ರೆಸಿಡೆನ್ಶಿಯಲ್ ಸೊಸೈಟಿ’ಗಳು ತಲೆಯೆ ತ್ತುತ್ತಿವೆ. ಈ ಮಾದರಿಯ 300 ಸೊಸೈಟಿಗಳು ಸ್ಥಾಪನೆಯಾ ಗಿವೆ. ಇದು ಆಯ್ಕೆಯಲ್ಲ, ಅನಿವಾರ್ಯ ಎಂದು ‘ಇಂಡಿ ಯನ್ ಎಕ್ಸ್‌ಪ್ರೆಸ್’ (ಜೂನ್ 17, 2007)ನ ವರದಿ ಯೊಂದು ಹೇಳುತ್ತದೆ.

‘‘ಮೇಲ್ಜಾತಿಯ ಜನರು ವಾಸಿಸುವ ಸ್ಥಳಗಳಲ್ಲಿ ಮನೆ ಖರೀದಿಸಲು ದಲಿತನೊಬ್ಬನಿಗೆ ಸಾಮರ್ಥ್ಯವಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಬಿಲ್ಡರ್‌ಗಳು ಮತ್ತು ಮಾರಾಟಗಾರರು ಅವರಿಗೆ ಮನೆಗಳನ್ನು ನಿರಾಕರಿಸುತ್ತಾರೆ’’ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ವಲೇರ ಹೇಳುತ್ತಾರೆ.ಅವರು ರಾಮ್‌ದೇವ್‌ನಗರದ ದಲಿತ ಸೊಸೈಟಿಯೊಂದರಲ್ಲಿ ವಾಸಿಸುತ್ತಿದ್ದಾರೆ.ಈ ಪ್ರವೃತ್ತಿ 1982ರಲ್ಲಿ ನಡೆದ ಮೀಸಲಾತಿ ವಿರೋಧಿ ಚಳವಳಿಯ ಬಳಿಕ ಆರಂಭವಾಯಿತು ಎಂದು ಕೆಲವು ಸಮಾಜ ವಿಜ್ಞಾನಿಗಳು ಹೇಳುತ್ತಾರೆ.ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಜಾತಿ ಮತ್ತು ವರ್ಗ ತಾರತಮ್ಯ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ ಎಂಬುದನ್ನು ಅವರು ಒಪ್ಪುತ್ತಾರೆ. ಈ ಪ್ರವೃತ್ತಿಯನ್ನು ಅಹ್ಮದಾಬಾದ್‌ನ ಭವ್ಯ ಪ್ರದೇಶಗಳಾದ ಪಶ್ಚಿಮ ಅಹ್ಮದಾಬಾದ್‌ನ ಸೆಟಲೈಟ್, ವಸ್ತ್ರಪುರ, ಬೊದಕ್‌ದೆವ್, ಅಂಬವಾಡಿ ಮುಂತಾದ ಪ್ರದೇಶಗಳಲ್ಲೂ ಕಾಣಬಹುದು.

‘‘ನಗರದಲ್ಲಿ 300ಕ್ಕೂ ಅಧಿಕ ದಲಿತ ಸೊಸೈಟಿಗಳಿವೆ. ಚಾಂದ್‌ಖೇಡವೊಂದರಲ್ಲೆ 200 ಸೊಸೈಟಿಗಳಿವೆ. ಅವುಗಳ ಪೈಕಿ ಹೆಚ್ಚಿನವು 2002ರ ಹತ್ಯಾಕಾಂಡದ ಬಳಿಕ ಸ್ಥಾಪನೆ ಯಾದವು. ಗಲಭೆಯ ಸಂದರ್ಭದಲ್ಲಿ ಜನರು ಗೋಮತಿಪುರ, ಬಾಪುನಗರ್ ಮತ್ತು ದಾನಿಲಿಮ್ಡ ಪ್ರದೇಶಗಳಿಂದ ಹೊರ ಹೋಗಿದ್ದು ಈಗ ಸಾಮೂಹಿಕವಾಗಿ ಸೊಸೈಟಿಗಳಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿ ದಲಿತ ಸೊಸೈಟಿಗಳನ್ನು ಮಾತ್ರ ನಿರ್ಮಿಸುವ ಗುತ್ತಿಗೆದಾರನ್ನೂ ಕಾಣಬಹುದಾಗಿದೆ’’ ಎಂದು ಸಾಮಾಜಿಕ ರಾಜಕೀಯ ಕಾರ್ಯಕರ್ತ ಅಚ್ಯುತ್ ಯಾಗ್ನಿಕ್ ಹೇಳುತ್ತಾರೆ.

‘ಹಿಂದೂ ರಾಷ್ಟ್ರ’ದಲ್ಲಿ ಜೀವಂತವಿರುವ ದಲಿತರಿಗೆ ಘನತೆಯಿಂದ ಬದುಕುವ ಸ್ಥಳವೇ ಇಲ್ಲದಿರುವಾಗ, ಸತ್ತವರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ.2001ರಲ್ಲಿ ನರೇಶ್ ಸೋಳಂಕಿಯ ಅಕ್ಕನ ಎರಡೂವರೆ ವರ್ಷದ ಮಗು ಮೃತಪಟ್ಟಿತು. ಬಣಸ್‌ಕಾಂತ ಜಿಲ್ಲೆಯ ಪಾಲನ್‌ಪುರ ಬ್ಲಾಕ್‌ನ ಹುಡ ಗ್ರಾಮದಲ್ಲಿ ವಾಸಿಸುವ ಕುಟುಂಬವು ಸಮುದಾಯದ ಸ್ಮಶಾನದಲ್ಲಿ ಮಗುವನ್ನು ದಫನ ಮಾಡಿತು. ಆದರೆ, ಅದೇ ಗ್ರಾಮದ ಪಟೇಲ್ ಸಮುದಾ ಯದ ವ್ಯಕ್ತಿಯೊಬ್ಬ ಟ್ರಾಕ್ಟರ್ ಮೂಲಕ ಮಗುವಿನ ಮೃತ ದೇಹವನ್ನು ಅಗೆದು ತೆಗೆದನು ಎಂಬ ಸುದ್ದಿ ದುಃಖತಪ್ತ ಕುಟುಂಬ ಮನೆ ತಲುಪುವ ಮೊದಲೆ ತಿಳಿದುಬಂತು. ಅದಕ್ಕೆ ಕಾರಣವೆಂದರೆ, ಆ ವ್ಯಕ್ತಿ ಶ್ಮಶಾನಕ್ಕೆ ಸಮೀಪದ ಭೂಮಿ ಯನ್ನು ಅತಿಕ್ರಮಿಸಿದ್ದ. ಶ್ಮಶಾನದಲ್ಲಿ ಮಗುವಿನ ಹೆಣ ದಫನ ಮಾಡಿದುದಕ್ಕಾಗಿ ಆತ ಆಕ್ರೋಶಿತನಾಗಿದ್ದ.

ಈ ಘಟನೆ ನಡೆದು ಸುದೀರ್ಘ 11ವರ್ಷಗಳೇ ಕಳೆದರೂ ಶ್ಮಶಾನ ಸ್ಥಳಕ್ಕಾಗಿ ಹೂಡ ಗ್ರಾಮದ ದಲಿತರು ಇನ್ನೂ ಕಾಯುತ್ತಿದ್ದಾರೆ.ಆದರೆ, ಅವರಿಗೆ ಜಾಗ ನೀಡಲು ಜಿಲ್ಲಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಇನ್ನೂ ಮನಸ್ಸು ಮಾಡಿಲ್ಲ. ಕಳೆದ ವರ್ಷ ವೃದ್ಧನೊಬ್ಬ ಸತ್ತಾಗ ದೇಹವನ್ನು ಪಕ್ಕದ ಹಳ್ಳಿಗೆ ಹೊತ್ತುಕೊಂಡು ಹೋಗಿ ದಫನ ಮಾಡಬೇಕಾಯಿತು. ಅದೃಷ್ಟವಶಾತ್ ಅಲ್ಲಿ ಪ್ರತ್ಯೇಕ ಶ್ಮಶಾನವಿತ್ತು.

ಗುಜರಾತ್ ರಾಜ್ಯ ಗ್ರಾಮಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಮಂಚ ನಡೆಸಿದ ಸಮೀಕ್ಷೆಯ ಪ್ರಕಾರ, ಗುಜರಾತ್‌ನ 657 ಗ್ರಾಮಗಳ ಪೈಕಿ 397 ಗ್ರಾಮಗಳಲ್ಲಿ ದಲಿತರಿಗೆ ಅಧಿಕೃತ ಶ್ಮಶಾನಗಳಿಲ್ಲ. ಅದೂ ಅಲ್ಲದೆ, ಶ್ಮಶಾನ ಕ್ಕಾಗಿ ಭೂಮಿ ಲಭಿಸಿದ 260 ಗ್ರಾಮಗಳ ಪೈಕಿ 94 ಗ್ರಾಮ ಗಳಲ್ಲಿ ಶ್ಮಶಾನ ಭೂಮಿಯನ್ನು ಮೇಲ್ಜಾತಿಯ ಬಲಿಷ್ಠ ಜಾತಿಗಳ ಜನರು ಅತಿಕ್ರಮಿಸಿಕೊಂಡಿದ್ದಾರೆ. 26ಗ್ರಾಮಗಳಲ್ಲಿನ ಶ್ಮಶಾನ ತಗ್ಗು ಸ್ಥಳಗಳಲ್ಲಿದೆ ಹಾಗಾಗಿ,ಮಳೆಗಾಲದಲ್ಲಿ ಜಲಾವೃತವಾಗಿರುತ್ತದೆ.

ಮುಸ್ಲಿಮರದೂ ಅದೇ ಸಮಸ್ಯೆ
ಮೃತರನ್ನು ದಫನಗೊಳಿಸುವ ವಿಷಯ ಬಂದಾಗ ಗುಜರಾತ್‌ನಲ್ಲಿ ದಲಿತರು ಮತ್ತು ಮುಸ್ಲಿಮರು ಸಮಾನ ದುಃಖಿಗಳು. ಇಲ್ಲಿ ದಲಿತ ರಂತೆ ಮುಸ್ಲಿಮರ ದಫನ ಭೂಮಿಗಳನ್ನೂ ಪ್ರಭಾವ ಶಾಲಿ ಜಾತಿಗಳ ಜನರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಜರಾತ್ ಹೈಕೋರ್ಟ್, ಪಟಾನ್‌ನಲ್ಲಿರುವ ಮುಸ್ಲಿಮರ ದಫನ ಭೂಮಿ ಯನ್ನು ಅತಿಕ್ರಮಣದಾರ ರಿಂದ ರಕ್ಷಿಸಲು ಪೊಲೀಸರನ್ನು ನಿಯೋಜಿಸುವಂತೆ ಆದೇಶ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ನೈಜ ಪರಿಸ್ಥಿತಿ
ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಬಹಿರಂಗ ವಿಚಾರಣೆಯ ಕೊನೆಯ ವೇಳೆಗೆ ‘ಭವ್ಯ ಗುಜರಾತ್ (ವೈಬ್ರಾಂಟ್ ಗುಜರಾತ್)’ನ ಅಸಲಿ ಮುಖ ಹೊರಬಿತ್ತು. ರಾಜ್ಯ ಸರಕಾರದ ದೊಡ್ಡ ದೊಡ್ಡ ಹೇಳಿಕೆಗಳ ಹೊರತಾಗಿಯೂ ಇಲ್ಲಿ ಹೆಚ್ಚಿನ ಸಂಖ್ಯೆಯ ದಲಿತರು ಎರಡನೆ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ.

ಕೃಪೆ : ವಾರ್ತಾಭಾರತಿ

Friday, March 16, 2012

ಜಾತಿ ವಿನಾಶ ಮತ್ತು ಹಾವನೂರು ವರದಿ

- ಪ್ರೊ. ಎಂ.ಡಿ. ನಂಜುಂಡಸ್ವಾಮಿ
ಶ್ರೀ ಹಾವನೂರ್‌‌‌‌‍ರವರ ಅಧ್ಯಕ್ಷತೆಯಲ್ಲಿ ಸಲ್ಲಿಸಲಾಗಿರುವ ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆ ಇತ್ತೀಚೆಗೆ ಟೀಕೆಗಳು ಕೇಳಿಬರುತ್ತಿವೆ. ಇದರಲ್ಲಿ ವೀರಶೈವರು ಮತ್ತು ಮರಾಠರು ತಮ್ಮನ್ನು ಮುಂದುವರಿದವರೆಂದು ಪರಿಗಣಿಸಿರುವುದು ತಮಗೆ ಅನ್ಯಾಯವಾಗಿದೆಯೆಂದು ಹೇಳುತ್ತಿದ್ದಾರೆ. ವೈಜ್ಞಾನಿಕವಾಗಿ ಜನಸಂಖ್ಯೆಯಲ್ಲಿ ನಿಗದಿಪಡಿಸದೆ, ತಮ್ಮ ಶೇಕಡಾ 90 ಭಾಗ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆಂದೂ ಶೇಕಡಾ 70 ಭಾಗಕ್ಕಿಂತ ಹೆಚ್ಚು ಜನರು ಕೃಷಿ ಕಾರ್ಮಿಕರೆಂದೂ, ಹೀಗಿದ್ದರೂ ತಮ್ಮನ್ನು ಹಿಂದುಳಿದವರೆಂದು ಪರಿಗಣಿಸದೆ ಅನ್ಯಾಯವಾಗಿದೆಯೆಂದೂ ವೀರಶೈವರು ದೂರುತ್ತಿದ್ದಾರೆ. ವೀರಶೈವರಲ್ಲಿ ಕೆಲವರನ್ನು ಮಾತ್ರ ಹಿಂದುಳಿದವರೆಂದೂ, ಮಿಕ್ಕವರನ್ನು ಮುಂದುವರಿದವರೆಂದೂ ಆಯೋಗ ಪರಿಗಣಿಸಿ ವೀರಶೈವರಲ್ಲಿ ಒಡಕನ್ನು ತರಲು ಪ್ರಯತ್ನಿಸಿದೆಯೆಂದೂ ದೂರಲಾಗುತ್ತಿದೆ.
ಈ ಎಲ್ಲ ದೂರುಗಳಿಗೂ ಹಿನ್ನೆಲೆಯಲ್ಲಿರುವ ಮುಖ್ಯ ಕಾರಣಗಳು ಇಷ್ಟು: ಭಾರತದ ಜಾತಿಪದ್ಧತಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು; ಜಾತಿ ವಿನಾಶದ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲದಿರುವುದು; ಹಾವನೂರರ ವರದಿಯನ್ನು ನಿಷ್ಪಕ್ಷಪಾತದಿಂದ ಅರ್ಥಮಾಡಿಕೊಂಡಿಲ್ಲದಿರುವುದು; ಹಾವನೂರರು ಸಂವಿಧಾನದ ನಿಯಮವನ್ನು ವಿಶ್ಲೇಷಣೆ ಮಾಡಿರುವ ನ್ಯಾಯ ತೀರ್ಪುಗಳ ಚೌಕಟ್ಟಿನಲ್ಲಿ ವರದಿ ತಯಾರಿಸಿದ್ದಾರೆ ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಂಡಿಲ್ಲದಿರುವುದು; ಜಾತಿ ಅಂಶಗಳು ಸಿಕ್ಕದಂತೆ ಮಾಡಿರುವ ಕೇಂದ್ರ ಸರ್ಕಾರದ ಕುತಂತ್ರದ ಬಗ್ಗೆ ಅರಿವಿಲ್ಲದಿರುವುದು; ಹಾಗೂ ನ್ಯಾಯಾಲಯಗಳು ಮಾಡಿರುವ ಕುತಂತ್ರಗಳನ್ನು ಗಮನಿಸಿಲ್ಲದಿರುವುದು. ಈ ಕಾರಣಗಳಿಂದಾಗಿ ವಿನಾಶದಲ್ಲಿ ಆಸಕ್ತಿಯಿರುವವರಿಗೆ ಹಾಗೂ ಸಮಾನತೆಯ ಹೋರಾಟದಲ್ಲಿ ಆಸಕ್ತಿ ಇರುವವರಿಗೆ ಈ ಕೆಳಕಂಡ ಕೆಲವು ಅಂಶಗಳನ್ನು ಗಮನಕ್ಕೆ ತರುವುದು ಈ ಲೇಖನದ ಉದ್ದಿಶ್ಯ.
1. ಹಿಂದುಳಿದ ವರ್ಗಗಳಿಗೆ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಹಾವನೂರರ ಆಯೋಗಕ್ಕೆ ಇದ್ದ ಅಡತಡೆಗಳು ಕೇಂದ್ರ ಸರ್ಕಾರ  ಮತ್ತು ಶ್ರೇಷ್ಠ ನ್ಯಾಯಾಲಯದ ತೀರ್ಮಾನಗಳು. ಕೇಂದ್ರ ಸರ್ಕಾರ ನಿಮ್ನ ವರ್ಗಗಳಿಗೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ಯಾವ ನಿಖರವಾದ ನೀತಿಯ ಆಧಾರವೂ ಇಲ್ಲದೆ 18% ಅವಕಾಶಗಳನ್ನು ಮೀಸಲಿಟ್ಟಿತು. (ಶತಮಾನಗಳಿಂದ ಆಗಿರುವ ವಂಚನೆಯ ದೃಷ್ಟಿಯಿಂದ ಇದು ನ್ಯಾಯವಾದ ಕ್ರಮವೇ ಆಗಿದೆ.) ನಂತರ ಶ್ರೇಷ್ಠ ನ್ಯಾಯಾಲಯವು 50% ಮಾತ್ರ ಮೀಸಲಿಡಬೇಕೆಂದೂ, ಉಳಿದ 50% ಸಾಮರ್ಥ್ಯ ((Merit Pool) ಕ್ಷೇತ್ರಕ್ಕೆ ಪ್ರತ್ಯೇಕವಿಡಬೇಕೆಂದೂ ಹೇಳಿತು. (ಬಾಲಾಜಿ ಮೊಕದ್ದಮೆ, AIR, 1963 ಸುಪ್ರೀಂಕೋರ್ಟ್ ಪುಟ 649). ಇದರಿಂದಾಗಿ ಆಯೋಗಕ್ಕುಳಿದ ಸ್ಥಾನಗಳು 32% ಮಾತ್ರ. ಈ ಅವಕಾಶಗಳನ್ನು ಅದು 83% ಜನರಿಗೆ ಹಂಚುವ ಕೆಲಸ ಮಾಡಿದೆ. ಇದು ಹೇಗೆಂದರೆ ಸಾಮರ್ಥ್ಯ  ಕ್ಷೇತ್ರದ 50% ಸ್ಥಾನಗಳನ್ನೂ ಕೇವಲ ಪರೀಕ್ಷೆಯಲ್ಲಿ ಪಡೆದ ಅಂಕಿ-ಅಂಶಗಳ ಆಧಾರದ ಮೇಲೆ 4% ಬ್ರಾಹ್ಮಣರೇ ಪಡೆಯುತ್ತಿರುವ ಪರಿಸರದಲ್ಲಿ ಮತ್ತೆ ಕೇಂದ್ರ ಮೀಸಲಿಟ್ಟ 18% ಸ್ಥಾನಗಳನ್ನು 13% ನಿಮ್ನವರ್ಗ ಹಾಗೂ ಪರಿಶಿಷ್ಟ ಜನಾಂಗಗಳು ಪಡೆದ ಮೇಲೆ ಉಳಿಯುವ 32% ಸ್ಥಾನಗಳು 83% ಜನರಿಗೆ ಉಳಿಯುತ್ತವೆ.
2. ಮಿಕ್ಕೆಲ್ಲ ಜಾತಿಗಳಲ್ಲಿ ಒಗ್ಗಟ್ಟಿಲ್ಲದಂತೆ ನೋಡಿಕೊಂಡು ತನ್ನ ಪ್ರತಿಷ್ಠೆಯನ್ನು ಮುಂದುವರಿಸಿಕೊಂಡು ಹೋಗುವ ಪುರೋಹಿತಶಾಹಿಯ ಕುತಂತ್ರವೇ ಜಾತಿ ಪದ್ಧತಿ. ಶೂದ್ರರಲ್ಲಿ ಹರಿಜನರನ್ನು ಮತ್ತು ಇತರ ಶೂದ್ರರನ್ನು ಒಡೆಯಲು ಹಾಗೂ ಡಾ. ಅಂಬೇಡ್ಕರರ ಬೆಂಬಲ ಸಹಾನುಭೂತಿ ಪಡೆಯಲು ಮಾಡಿದ ಮೊದಲ ಕುತಂತ್ರ ಅವರಿಗೆ ಮಾತ್ರ ಮೀಸಲು ಸ್ಥಾನ ಕೊಟ್ಟಿದ್ದು. ಅನಂತರ ಈ ಗೊಂದಲದಿಂದ ತನ್ನ ವರ್ಗ ತಪ್ಪಿಸಿಕೊಂಡು ಹಾಯಾಗಿರಲು ಸಾಮರ್ಥ್ಯ -ಕ್ಷೇತ್ರದ ಜಾಲವನ್ನು ಸೃಷ್ಟಿಸಿದ್ದು ಆ ವರ್ಗದ ಎರಡನೇ ಕುತಂತ್ರ. ಇದಕ್ಕಿಂತ ಹೆಚ್ಚಿನ ಪರಿಣಾಮಕಾರಿಯಾದ ಕುತಂತ್ರವನ್ನು ಕೂಡ ಶ್ರೇಷ್ಠ ನ್ಯಾಯಾಲಯ ಮಾಡಿದೆ. ಇದೇನೆಂದರೆ ನಿಜವಾಗಿಯೂ ಹಿಂದುಳಿದ ವರ್ಗಗಳನ್ನು ಮುಂದುವರಿದ ವರ್ಗವೆಂದು ಪರಿಗಣಿಸುವಂತೆ ಅದು ಒದಗಿಸಿರುವ ಸೂತ್ರ. ಉದಾಹರಣೆಗೆ, ಮೇಲ್ಕಂಡ ಬಾಲಾಜಿ ಮೊಕದ್ದಮೆಯಲ್ಲಿ ನಾಗನಗೌಡ ಸಮಿತಿಯವರು 1000ಕ್ಕೆ 6.9 ಜನರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳಲ್ಲಿರುವುದನ್ನು ರಾಜ್ಯ ಸರಾಸರಿ (State Average) ಎಂದು ಗುಣಿಸಿ, ಯಾವುದೇ ಜಾತಿಯ ಜನಸಂಖ್ಯೆಯಲ್ಲಿ 6.9ಕ್ಕಿಂತ ಸ್ವಲ್ಪ ಕಡಿಮೆ ಜನರು ಹೈಸ್ಕೂಲು ತರಗತಿಯಲ್ಲಿದ್ದರೆ ಆ ಜಾತಿ ಹಿಂದುಳಿದದ್ದು ಎನ್ನುವ ಸೂತ್ರವನ್ನು ಅಳವಡಿಸಿದ್ದನ್ನು ವಿಶ್ಲೇಷಿಸುತ್ತಾ ಶ್ರೇಷ್ಠ ನ್ಯಾಯಾಲಯವು 6.9ಕ್ಕಿಂತ ಸ್ವಲ್ಪ ಕಡಿಮೆಯಿದ್ದರೂ ಆ ಜಾತಿಯನ್ನು ಹಿಂದುಳಿದಿದ್ದೆಂದು ಹೇಳಲು ಸಾಧ್ಯವಿಲ್ಲವೆಂದೂ, 6.9ರ ಅರ್ಧಕ್ಕಿಂತಲೂ ಕಡಿಮೆಯಿರುವ ಅಂದರೆ ಜಾತಿಯ 1000 ಜನರಲ್ಲಿ 2.45 ಜನರು ಹೈಸ್ಕೂಲಿನಲ್ಲಿದ್ದರೆ ಅಂತಹ ಜಾತಿಯನ್ನು ಹಿಂದುಳಿದದ್ದೆಂದು ಪರಿಗಣಿಸಬಹುದೆಂದೂ ಹೇಳಿದೆ.
ಹಾವನೂರರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳನ್ನು ತೆಗೆದುಕೊಂಡರೆ ಬಹಳಷ್ಟು ಜಾತಿಗಳನ್ನು ಮುಂದುವರಿದವರೆಂದು ಹೇಳಬೇಕಾಗುತ್ತದೆಯಾದ್ದರಿಂದ, ಎಸ್.ಎಸ್.ಎಲ್.ಸಿ. ಅಂಕಿಅಂಶದ ಆಧಾರದ ಮೇಲೆ ರಾಜ್ಯ ಸರಾಸರಿಯಾದ 1000 ಜನರಿಗೆ 1.69 ಜನರು ಯಾವುದೇ ಜಾತಿಯಲ್ಲಿ ಮೆಟ್ರಿಕ್‍ನಲ್ಲಿದ್ದರೆ ಆ ಜಾತಿ ಮುಂದುವರಿದದ್ದು ಎನ್ನುವ ಸೂತ್ರ ಅಳವಡಿಸಿದ್ದಾರೆ. ವೀರಶೈವರು ಹಾಗೂ ರಾಜ್ಯ ಸರಾಸರಿಯನ್ನು ಮೀರಿದರೆ ಅದಕ್ಕೆ ಹಾವನೂರರು ಏನು ಮಾಡಲೂ ಸಾಧ್ಯವಿಲ್ಲ. ನಿಜವಾಗಿಯೂ, ಬಹುಸಂಖ್ಯಾತ ಗ್ರಾಮಾಂತರದ ವೀರಶೈವರು ಹರಿಜನರಷ್ಟೇ ದುಃಸ್ಥಿತಿಯಲ್ಲಿರುವುದು ನಿಜವಾದರೂ, ಶ್ರೇಷ್ಠ ನ್ಯಾಯಾಲಯದ ಸೂತ್ರದಂತೆ ಅದನ್ನೇ ಪಾಲಿಸಬೇಕಾಗಿ ಬಂದ ಹಾವನೂರರ  ಸೂತ್ರದಂತೆ ಮುಂದುವರೆದವರೆಂದು ಕರೆಯಲ್ಪಡುತ್ತಾರೆ.
ಇವೆರಡೂ  ಸೂತ್ರಗಳು ತಿರಸ್ಕರಿಸಲು ಅರ್ಹವಾದವು. (ಆದರೆ ನ್ಯಾಯಾಲಯದಲ್ಲಿ ಇವು ತಿರಸ್ಕೃತವಾಗುವುದಿಲ್ಲ.) ಏಕೆಂದರೆ, 300ಕ್ಕೊಬ್ಬ ಹೈಸ್ಕೂಲ್ ಓದಿರುವ ಜಾತಿ ಮುಂದುವರಿದದ್ದು ಎನ್ನುವ ನ್ಯಾಯಾಲಯಗಳು 2000ಕ್ಕೆ 3 ಜನ ಓದಿನ ಜಾತಿಯನ್ನು ಮುಂದುವರಿದದ್ದು ಎಂದು ಹೇಳಿಯೇ ಹೇಳುತ್ತವೆ. 0.16% ಶೈಕ್ಷಣಿಕ ಮುಂದುವರಿಕೆ ಯಾವ ಪ್ರಗತಿಯ ಸೂಚಿಯಲ್ಲ. ಇದಲ್ಲದೆ, ರಾಜ್ಯ ಸರಾಸರಿ ಕೂಡ ತಲಾ ಪ್ರತಿ ಆದಾಯದ ಗುಣಿತದಷ್ಟೇ ದೋಷ ಪೂರಿತವಾದದ್ದು. ಬಿರ್ಲಾ ಮತ್ತು ಹರಿಜನನೊಬ್ಬನ ಆದಾಯದ ಸರಾಸರಿಯು ತಲಾ ಆದಾಯವಾಗುವುದಾದರೆ, ಬ್ರಾಹ್ಮಣ ಹಾಗೂ ಕ್ರೈಸ್ತರ ಪೂರ್ವ ಸಾಕ್ಷರತೆ ಮತ್ತು ಹರಿಜನರ ಅನಕ್ಷರತೆಯ ಸರಾಸರಿಯು ರಾಜ್ಯ ಸರಾಸರಿ ಆಗುತ್ತದೆ.
3. ಶ್ರೇಷ್ಠ ನ್ಯಾಯಾಲಯದ ಕುತಂತ್ರಗಳ ಜೊತೆಗೆ ಕೇಂದ್ರ ಸರ್ಕಾರ ಕೂಡ ತನ್ನದೊಂದು ಕುತಂತ್ರದೊಂದಿಗೆ ಷಾಮೀಲಾಗಿದೆ. ಸಂವಿಧಾನದ ಮೀಸಲು ಸ್ಥಾನಗಳ ವಿತರಣೆಗೆ ಅವಶ್ಯಕವಾಗಿ ಬೇಕಾದ ಅಂಕಿಅಂಶಗಳೇ ಸಿಗದಂತೆ ತನ್ನ ಜನಗಣತಿ (Census) ಕೆಲಸದಲ್ಲಿ ಅದು ಜಾತಿ ವಿವರಗಳನ್ನು ಶೇಖರಿಸುವುದನ್ನೇ ಸಂಪೂರ್ಣ ಕೈಬಿಟ್ಟಿದೆ. ಜಾತ್ಯತೀತತೆಯ ಪ್ರವರ್ತಕ ಎಂಬ ಸೋಗಿನಲ್ಲಿ ಕೇಂದ್ರ ಸರ್ಕಾರ ಇಡೀ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಅಂಕಿಅಂಶಗಳೇ ದುರ್ಲಭವಾಗುವಂತೆ ಮಾಡಿದೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಅಂಕಿಅಂಶಗಳೂ ಕೂಡ ದೊರಕುತ್ತಿಲ್ಲದ ಸನ್ನಿವೇಶದಲ್ಲಿ ಹಾವನೂರರ ಆಯೋಗ ಸಾಮಾಜಿಕ- ಆರ್ಥಿಕ ಸಮೀಕ್ಷೆ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ಮೇಲಾದರೂ ರಾಜ್ಯ ಸರ್ಕಾರವೇ ಪ್ರತಿ ಜಾತಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸಂಗ್ರಹಿಸಲು ಪ್ರಯತ್ನಿಸಬೇಕೆಂದೂ ಆಯೋಗ ಶಿಫಾರಸ್ಸು ಮಾಡಿದೆ. ಜನಗಣತಿಯನ್ನು ರಾಜ್ಯ ಪಟ್ಟಿ (State list)ಗೆ ಸೇರಿಸಲು ಹೋರಾಟ ಆಗಬೇಕಾಗಿದೆ.
4. ಸಮಾನತೆಗಾಗಿ ಹೋರಾಡುವವರು ಮೇಲಿನ ಅಂಶಗಳನ್ನು ಗಮನದದಲ್ಲಿಟ್ಟುಕೊಂಡು ತಮ್ಮ ಹೋರಾಟವನ್ನು ರೂಪಿಸಿಕೊಳ್ಳಬೇಕು. ಸಾಮರ್ಥ್ಯದ ಹೆಸರಿನಲ್ಲಿ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಅಸಮರ್ಥ ಪುರೋಹಿತ ವರ್ಗ ಈ ದೇಶವನ್ನು ಅಧೋಗತಿಗೆ ಇಳಿಸಿರುವ ಸಂದರ್ಭದಲ್ಲಿ ಸಮಾನ ವಿತರಣೆಗೆ ಬೇಕಾದ ಅಂಕಿ-ಅಂಶಗಳನ್ನೇ ಬಚ್ಚಿಟ್ಟಿರುವಾಗ, ಹಾಗೂ ರಾಜ್ಯ-ಸರಾಸರಿ ಎಂಬ ಶೋಚನೀಯ ಸೂತ್ರವನ್ನು ಜಾರಿಗೆ ತಂದಿರುವಾಗ ಹಿಂದುಳಿದವರ ಹೋರಾಟದ ಸ್ವರೂಪ ಬದಲಾಗಬೇಕು.
5. ಆದ್ದರಿಂದ, ಹಿಂದುಳಿದವರು ಈಗ ಸಿಕ್ಕುವ ಅಂಕಿಅಂಶಗಳ ಆಧಾರದ ಮೇಲೆಯೇ ಹೋರಾಟ ರೂಪಿಸಲು ಪ್ರಯತ್ನಿಸಬೇಕು. ಇದು ಸಾಧ್ಯ. ಕೆಳಕಂಡ ಎರಡು ದಾರಿಗಳಲ್ಲಿ ಯಾವುದಾದರೂ ಒಂದು ದಾರಿಯನ್ನು ಹೋರಾಟ ಆರಿಸಿಕೊಳ್ಳಬಹುದು.
ಅ) ಹಾವನೂರರೇ ಹೇಳುವಂತೆ `ಜಾತಿ-ಜಾತಿಯ ನಡುವಿನ ಫಲಿತಾಂಶವೇ ಸಮಾನತಾ ಸಾಧನೆಯ ಯಶಸ್ಸು’ (ವರದಿ ಪುಟ6) ಎನ್ನುವ ಸೂತ್ರದ ಆಧಾರದ ಮೇಲೆ ಫಲಿತಾಂಶ ಪ್ರತಿ ಜಾತಿಯಲ್ಲಿ ಎಷ್ಟಿರಬೇಕು ಎನ್ನುವುದನ್ನು ಮೊದಲು ಗುಣಿಸಬೇಕು. ಪೂರ್ಣ ಸಾಕ್ಷರತೆ ಮತ್ತು ಪೂರ್ಣ ಉದ್ಯೋಗ ಪಡೆದಿರುವ ಬ್ರಾಹ್ಮಣ ಜಾತಿಯನ್ನು ನಾವು ಫಲಿತಾಂಶದ ಸೂಚಿಯಾಗಿ ತೆಗೆದುಕೊಳ್ಳಬೇಕು. (ಇಲ್ಲಿರುವ ಅಂಕಿ-ಅಂಶ ಕೇವಲ ಸರ್ಕಾರದ ಸೇವೆಯಲ್ಲಿರುವ ಬ್ರಾಹ್ಮಣರದ್ದು. ಖಾಸಗಿ ಕ್ಷೇತ್ರವೂ ಪೂರ್ಣ ಅವರಿಗೇ ಮೀಸಲಾಗಿದ್ದರೂ ಕೂಡ ಇರುವ ಅಂಕಿ ಅಂಶದ ಆಧಾರದ ಮೇಲೆ ಹೋರಾಟ ಪ್ರಾರಂಭವಾಗಬಹುದು.) ವಸ್ತುಸ್ಥಿತಿ ಹೀಗಿದೆ :
ಮುಖ್ಯಜಾತಿಗಳು ಜನಸಂಖ್ಯೆ ಮೆಟ್ರಿಕ್ ತೇರ್ಗಡೆ ಆದವರು 1972 (4ನೇ ವರ್ಗ ಬಿಟ್ಟು) ಸರ್ಕಾರಿ ನೌಕರಿಗಳಲ್ಲಿರುವವರು.
ಬ್ರಾಹ್ಮಣರು  4.23  13,113   36,235
ಲಿಂಗಾಯಿತರು(ಮುಂದುವರಿದ) 22.00  10,224   39,408
ಒಕ್ಕಲಿಗರು 11.82 3,764  19,189
ಕುರುಬರು 6.77  927   5,185
ನಿಮ್ನ ವರ್ಗಗಳು  13.63  2,203 16,461
ಮುಸ್ಲಿಮರು 10.63  3,517  20,727
ಕ್ರೈಸ್ತರು 2.09  2,928  8,009
ಇತರ ಹಿಂದುಳಿದ  ವರ್ಗಗಳು  29.32  14,383  60,810
ರಾಜ್ಯದ  ಒಟ್ಟು  100.00  50,759  1,98,015
ಸಮಾನ ಫಲಿತಾಂಶವನ್ನು ಬ್ರಾಹ್ಮಣ ಜಾತಿಯನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಎಷ್ಟರಮಟ್ಟಿಗೆ ಎಲ್ಲ ಜಾತಿಗಳೂ ಹಿಂದುಳಿದಿವೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಜಾತಿಗಳಿಗೆ ನ್ಯಾಯವಾಗಿ ದೊರೆಯಬೇಕಾದ ಅವಕಾಶಗಳನ್ನು ಯಾರು ಅಪಹರಿಸುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ಎಲ್ಲ ಜಾತಿಗಳಿಗೂ ದೊರೆಯಬೇಕಾದ ಅವಕಾಶಗಳು ಮುಂದಿನ ಪುಟದ ಮೇಲ್ಗಡೆ ಇವೆ.
ಈ ಅಂಕಿಅಂಶಗಳನ್ನು ನೋಡಿದರೆ ಸಮಾನ  ಫಲಿತಾಂಶ ಸಾಧನೆಗೆ ಈಗಿರುವ ರಾಜ್ಯ ವ್ಯವಸ್ಥೆಯಲ್ಲಿರುವ ಶಿಕ್ಷಣ ಸೌಲಭ್ಯವನ್ನು ಸುಮಾರು 600% ಮತ್ತು ಉದ್ಯೋಗ ಸೌಲಭ್ಯವನ್ನು ಸುಮಾರು 500% ಹೆಚ್ಚಿಸಬೇಕಾಗುತ್ತದೆ. ವರ್ಷಕ್ಕೆ 1% ಆರ್ಥಿಕ ಪ್ರಗತಿಯ ಈಗಿನ ಯೋಜನಾಕ್ರಮದಿಂದ ಈ ಕೆಲಸ ಮಾಡಲು ಸುಮಾರು 250 ವರ್ಷವಾದರೂ ಬೇಕು. ಆದ್ದರಿಂದ ಸಮಾನ ಫಲಿತಾಂಶವನ್ನು ತಕ್ಷಣದಲ್ಲಿ ಸಾಧಿಸಬೇಕಾದರೆ ಈಗಿರುವ ಸೌಲಭ್ಯಗಳನ್ನೇ  ಜನಸಂಖ್ಯೆಯ ಆಧಾರದ ಮೇಲೆ ವಿತರಣೆ ಮಾಡಬೇಕು.
ಪ್ರಮುಖ ಜಾತಿಗಳು  ಮೆಟ್ರಿಕ್  ಶಿಕ್ಷಿತರು  ಇರಬೇಕಾದ  ಸಂಖ್ಯೆ  ಸರ್ಕಾರಿ ನೌಕರಿಯಲ್ಲಿ ಇರಬೇಕಾದ  ಸಂಖ್ಯೆ
(ಬ್ರಾಹ್ಮಣರು) (13,113) (36,235)
ಲಿಂಗಾಯಿತರು  68,187  1,88,422
ಒಕ್ಕಲಿಗರು 26,585  1,01,095
ಕುರುಬರು  19,669  54,352
ನಿಮ್ನ ವರ್ಗಗಳು  39,339  1,81,175
ಮುಸ್ಲಿಮರು  32,782 9 ,587
ಕೈಸ್ತರು 6,425 17,755
ಇತರ ಹಿಂದುಳಿದ  ವರ್ಗಗಳು  90,479  2,50,021
ರಾಜ್ಯದ  ಒಟ್ಟು 2,96,579 9,19,642
ಹಿಂದುಳಿದ ವರ್ಗಗಳ ಅವಕಾಶಗಳನ್ನು ಯಾವ ಯಾವ ವರ್ಗದವರು ಅಪಹರಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯುವುದು, ಹಾಗೂ ಯಾವ ಯಾವ ವರ್ಗದವರಿಗೆ ಎಷ್ಟು ಪ್ರಮಾಣದಲ್ಲಿ ವಂಚನೆ ನಡೆಯುತ್ತಿದೆ ಎನ್ನುವುದು ಕೂಡ ಸ್ಪಷ್ಟವಾಗುತ್ತದೆ.
ಜನಸಂಖ್ಯೆಯ ಆಧಾರದ ಮೇಲೆ ಉದ್ಯೋಗ ಸೌಲಭ್ಯಗಳ ವಿತರಣೆಯ ವಿವರಗಳಿಗೆ ಈ ಪಟ್ಟಿ ನೋಡಿ:-
ಪ್ರಮುಖ ಜಾತಿಗಳು ಶೇಕಡಾ ಜನಸಂಖ್ಯೆ ನೌಕರಿ ಹೊಂದಿರುವುದು ನೌಕರಿ ನ್ಯಾಯವಾಗಿ ಸಿಕ್ಕಬೇಕಾದ್ದು
ಬ್ರಾಹ್ಮಣರು 4.23 36,235 8,373
ಲಿಂಗಾಯಿತರು 22.00 39,408  42,560
ಒಕ್ಕಲಿಗರು  11.82 19,189 23,403
 ಕುರುಬರು  6.77  5,185  13,404
 ನಿಮ್ನ ವರ್ಗಗಳು  13.14 16,461 26,017
 ಮುಸ್ಲಿಮರು 10.63 20,727  21,047
 ಕೈಸ್ತರು 2.09 8,009 4,138
 ಇತರ ಹಿಂದುಳಿದ ವರ್ಗಗಳು  29.32 60,810  58,053
ರಾಜ್ಯದ ಒಟ್ಟು 1,98,015 ಉದ್ಯೋಗಗಳಲ್ಲಿ (4ನೇ ವರ್ಗ ಬಿಟ್ಟು) ಈ ಅಂಕಿ ಅಂಶಗಳು  ನಮ್ಮ ಸಮಾಜದ ಹಲವಾರು ವೈಚಿತ್ರ್ಯಗಳನ್ನು ಹೊರಗೆಡಹುತ್ತವೆ. ಅದರಲ್ಲಿ ಮುಖ್ಯವಾಗಿ ಬಹುಸಂಖ್ಯಾತ ಜಾತಿಗಳಿಗಾಗಿರುವ ಮೋಸ ಬ್ರಾಹ್ಮಣ ಜಾತಿ ಪಡೆದುಕೊಂಡಿರುವ ಲಾಭ ಎನ್ನುವುದು ಸ್ಪಷ್ಟವಾಗುತ್ತದೆ. ಅದು ಸುಮಾರು 450% ರಷ್ಟು ಹೆಚ್ಚಿನ ಲಾಭ ಪಡೆಯುತ್ತಿದೆ.
6. ಹೀಗಾಗಿರುವುದಕ್ಕೆ ಮುಖ್ಯ ಕಾರಣ ಸಾಮರ್ಥ್ಯ ((Merit)ವನ್ನು ಅಳತೆಮಾಡಲು ನಾವು ಇಟ್ಟುಕೊಂಡಿರುವ ಸೂತ್ರ. ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಒದರುವುದು ಸಾಮರ್ಥ್ಯ ಎನ್ನಿಸಿಕೊಂಡಿದೆ. ವೇದಗಳನ್ನು ಬಾಯಿಪಾಠ ಮಾಡಿ ಮರುಪಠನ ಮಾಡುವುದು ಸಾಮರ್ಥ್ಯ ಎನ್ನಿಸಿಕೊಂಡಿದೆ. ಬ್ರಾಹ್ಮಣರು ಸಮರ್ಥರು ಎನ್ನುವ ನಂಬಿಕೆ ಹಿಂದಿನಿಂದ ಬಂದಿವೆ. ಆದರೆ, ಅವರ ಸಾಮರ್ಥ್ಯ ಸೀಮಿತ. ಮಿಕ್ಕೆಲ್ಲ ಕ್ಷೇತ್ರದಲ್ಲಿ ಅವರು ಅಸಮರ್ಥರಾದ್ದರಿಂದಲೇ ಅಂತಹವರು ದೇಶದ ಎಲ್ಲ ಕ್ಷೇತ್ರಗಳನ್ನೂ ತಮ್ಮದಾಗಿಸಿಕೊಂಡಿರುವುದರಿಂದಲೇ ಭಾರತ ಮೂರನೇ ದರ್ಜೆ ದೇಶವಾಗಿರುವುದು. ಔದ್ಯೋಗಿಕ ಸಾಮರ್ಥ್ಯವೇ ಬೇರೆ. ಇದು ದೇಶದ ದಿನನಿತ್ಯ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಔದ್ಯೋಗಿಕ ಜಾತಿಗಳ ಜನರಲ್ಲಿ ಮಾತ್ರ ಕಾಣಲು ಸಾಧ್ಯ.
ಇದಲ್ಲದೆ, ಸೀಮಿತ ಉದ್ಯೋಗಾವಕಾಶದ ಭಾರತದ ವಿಕೃತ ಆರ್ಥಿಕ ವ್ಯವಸ್ಥೆಯಲ್ಲಿ ನಿರುದ್ಯೋಗಿಗಳಾಗಿರುವ ಆದರೆ ಸಮರ್ಥರಾದ ಅಭ್ಯರ್ಥಿ ಅಭ್ಯರ್ಥಿಗಳ ಹೆಚ್ಚಳ ಎಲ್ಲಾ ಜಾತಿಗಳಲ್ಲೂ ಇರುವುದು ಸರ್ವವಿದಿತ. ಹೀಗಿರುವಾಗ ಪರೀಕ್ಷೆಯ ಅಂಕಗಳ ಮೇಲೆ ತೀರ್ಮಾನಿಸುವ ಶೇಕಡಾ 50 ಭಾಗ  ಸಾಮರ್ಥ್ಯ ಕ್ಷೇತ್ರ (Merit Pool) ರದ್ದಾಗಬೇಕು. ಸಮಾನ ಫಲಿತಾಂಶ ಹಾಗೂ ದಕ್ಷತೆಗಳನ್ನು ಸಾಧಿಸಲು ಇರುವ ಮಾರ್ಗ ಇದೊಂದೇ. ಅದೇನೆಂದರೆ, ಜನಸಂಖ್ಯೆಯ ಆಧಾರದ ಮೇಲೆ ಅವಕಾಶಗಳನ್ನು ಆಯಾ ಜಾತಿಯ ಪ್ರಮಾಣಕ್ಕನುಗುಣವಾಗಿ (Reservation According to Proportion of Population) ಮೀಸಲಿಡಬೇಕು ಹಾಗೂ ಆಯಾ ಜಾತಿಗಳೊಳಗೇ  ಸಾಮರ್ಥ್ಯ ಕ್ಷೇತ್ರ ( Merit Pool in each Caste) ರಚಿಸಿ, ಸಮರ್ಥರಿಗೆ 50 ಭಾಗ ಆದ್ಯತೆ ಕೊಟ್ಟು ಉಳಿದ 50 ಭಾಗವನ್ನು ಇತರ ಸೂತ್ರಗಳ ಆಧಾರದ ಮೇಲೆ ಹಂಚಬೇಕು.
7. ಇಂತಹ ಸೂತ್ರದಿಂದ ಜಾತೀಯತೆ ಮುಂದುವರಿಯುತ್ತದೆಂದು ಢೋಂಗಿ ಸಮದರ್ಶಿಗಳು ಗುಲ್ಲೆಬ್ಬಿಸುತ್ತಾರೆ. ಆದರೆ, ಒಂದು ಜಾತಿ ತನ್ನ ಜಾತಿ ಲಕ್ಷಣಗಳನ್ನು ಕಳೆದುಕೊಳ್ಳಬೇಕಾದರೆ ಅದು ಕೆಲವು ಕನಿಷ್ಟ ಸಾಧನೆಗಳನ್ನು ಮಾಡಬೇಕಾಗುತ್ತದೆ. ಜಾತಿಯ ಔದ್ಯೋಗಿಕ ಸಾಮರ್ಥ್ಯ್ ದಿಂದ ಭಿನ್ನವಾದ ಸಾಮರ್ಥ್ಯವನ್ನು ಅದು ಬೇರೆಲ್ಲ  ಕ್ಷೇತ್ರದಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದು ಸಮಂಜಸ ಪ್ರಮಾಣವನ್ನು ನಾವು ನಿಗದಿ ಮಾಡಬಹುದು.
ಯಾವುದೇ ಜಾತಿಯ 50 ಭಾಗ ಶಾಲಾ ವಯಸ್ಕ ಜನಸಂಖ್ಯೆ ಮೆಟ್ರಿಕ್ ಪಾಸಾಗುವ ಹಂತ ಮುಟ್ಟಿದಾಗ, ಮತ್ತು 50 ಭಾಗ ಉದ್ಯೋಗ ವಯಸ್ಕ-ಜನಸಂಖ್ಯೆ ಜಾತಿ-ಉದ್ಯೋಗದಿಂದ ಭಿನ್ನವಾದ ಕ್ಷೇತ್ರಗಳಲ್ಲಿ ಉದ್ಯೋಗಸ್ಥರಾದಾಗ ಆ ಜಾತಿಯನ್ನು ಮುಂದುವರಿದ ಜಾತಿ ಎಂದು ಘೋಷಿಸುವುದು. ದೇಶದ ದಕ್ಷತೆಗೆ 50% ಭಾಗ ಮೀಸಲಿಡಬೇಕು ಎನ್ನುವ ವಾದವನ್ನು ಒಪ್ಪುವವರೂ ಒಂದು ಜಾತಿಯ ಮುಂದುವರಿಕೆಗೂ ಇದೇ ಸೂತ್ರವನ್ನು ಒಪ್ಪಬೇಕಾಗುತ್ತದೆ.
8. ಮೇಲಿನ ಸೂತ್ರಗಳನ್ನು ರಾಷ್ಟ್ರದ ಬಹುಮುಖ  ಸಾಮರ್ಥ್ಯದ ಬಗ್ಗೆ ಕಳಕಳಿ ಇರುವ ಯಾವುದೇ ಉತ್ತಮ ಜಾತಿಯೂ ಒಪ್ಪಲೇಬೇಕು. ಆದರೆ ಅವು ಒಪ್ಪುತ್ತಿಲ್ಲ. ಏಕೆಂದರೆ, ಉತ್ತಮ ಜಾತಿಗಳು ಇದರಿಂದ ಅಲ್ಪಕಾಲಿಕ ಅನ್ಯಾಯವನ್ನು ಅನುಭವಿಸಬೇಕಾಗುತ್ತದೆ. ಶತಮಾನಗಳಿಂದ ಇತರ ಜಾತಿಗಳಿಗೆ ಅವು ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಅವಕ್ಕೆ ಇಚ್ಛೆಯಿಲ್ಲ.
ಆದ್ದರಿಂದಲೇ, ಅವು ಹಿಂದುಳಿದಿರುವಿಕೆಯನ್ನು ಆರ್ಥಿಕ ಆಧಾರದ (Economic Backwardness) ಮೇಲೆ ನಿರ್ಣಯಿಸಬೇಕು ಎನ್ನುವ ಕೂಗನ್ನು ಎಬ್ಬಿಸುತ್ತಿರುವುದು. ವಿಶೇಷಾವಕಾಶದ ಸೂತ್ರಗಳನ್ನೇ ವಿರೋಧಿಸುವ ಈ ಶಕ್ತಿಗಳು ಜಾತ್ಯತೀತ ಮುಖವಾಡವನ್ನು ಹಾಕಿಕೊಂಡು ಅಲ್ಪಸ್ವಲ್ಪ ಸೌಲಭ್ಯಗಳನ್ನು ಪಡೆಯುತ್ತಿರುವ ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಮೋಸ ಮಾಡಲು ಹಂಚಿಕೆ ನಡೆಸಿದ್ದಾರೆ. ವೀರಶೈವರೂ ಕೂಡ, ತಾವೂ ಮುಂದುವರಿದವರಿರಬಹುದೆಂಬ ಅನುಮಾನದಲ್ಲಿಯೋ, ಅಥವಾ ತಮಗೆ ಸಿಕ್ಕಿರುವ ಪ್ರಾತಿನಿಧ್ಯ ಹೆಚ್ಚೇನೋ ಎನ್ನುವ ಅನುಮಾನದಿಂದಲೋ, ಅಥವಾ ಉತ್ತಮ ಜಾತಿಯವರ ಸನಾತನವಾದಿ ಕುತಂತ್ರವನ್ನೇ ಉಪಯೋಗಿಸುವ ಸಲುವಾಗಿಯೋ ಇದೇ ಕೂಗನ್ನು ಹಾಕುವುದಕ್ಕೆ ಪ್ರಾರಂಭಿಸಿರಬಹುದು. ಅವರ ಹೋರಾಟದ ಅಸ್ಪಷ್ಟತೆಯಿಂದಾಗಿ ಅವರ ನಿಜವಾದ ಮರ್ಮ ಗೊತ್ತಾಗುತ್ತಿಲ್ಲ.
ಆರ್ಥಿಕ ಹಿಂದುಳಿದಿರುವಿಕೆಯನ್ನು ಸೂತ್ರವನ್ನಾಗಿ ಒಪ್ಪಿದರೆ ಜಾತಿ ಪದ್ಧತಿ ಹಾಗೂ ಅಸಮಾನತೆಗಳು ಮುಂದುವರಿಯುತ್ತವೆ. ಹತ್ತು ಸಾವಿರ ಕುರಿಗಳಿರುವ ಒಬ್ಬ ಕುರುಬನ ಮಗನಿಗೂ ಯಾವ ಆಸ್ತಿಯೂ ಇಲ್ಲದ ಶ್ಯಾನುಭೋಗನ ಮಗನಿಗೂ ಸಮಾನವಕಾಶ ಕೊಟ್ಟರೆ ಅಸಮಾನತೆ ಮುಂದುವರಿಯುತ್ತದೆ. (1977 – 78ರ ಸಾಲಿನಲ್ಲಿ ಹಾವನೂರರು ವಿಶೇಷ ವರ್ಗ (Special Category)ಕ್ಕೆ ಕೊಟ್ಟಿರುವ ಸೌಲಭ್ಯಗಳು ಮೆಡಿಕಲ್ ಸೀಟು ಹಂಚಿಕೆಯಲ್ಲಿ ಎಲ್ಲವೂ ಬ್ರಾಹ್ಮಣ ವಿದ್ಯಾರ್ಥಿಗಳಿಗೇ ಸಿಕ್ಕಿವೆ.)
ಈ ಸೂತ್ರವನ್ನು ಒಪ್ಪಿದರೆ ಢೋಂಗಿ ಸಾಮಥ್ರ್ಯ ಕ್ಷೇತ್ರ ರಚಿಸಿಕೊಂಡು 50% ಭಾಗ ಅವಕಾಶಗಳನ್ನು ಅಪಹರಿಸುತ್ತಿರುವ ಉತ್ತಮ ಜಾತಿಗಳು ಬಡತನದ ಸರ್ಟಿಫಿಕೇಟುಗಳ ಮೂಲಕ ಇನ್ನೂ ಶೇಕಡಾ 20-30 ಭಾಗ ಜಾಗಗಳನ್ನು ಅಪಹರಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಹರಿಜನರಿಗೆ ಸರ್ಟಿಫಿಕೇಟುಗಳು ಸಿಕ್ಕುವುದೂ ಕಷ್ಟವಾಗುತ್ತದೆ. ಇತ್ತೀಚೆಗೆ ಶ್ರೀ ಜಗಜೀವನರಾಮ್ರವರು ಇದನ್ನೇ ಹೇಳಿದ್ದು ಸತ್ಯವಾದ ವಿಷಯ. ಅವರು ಹರಿಜನರಾದದ್ದರಿಂದ ಅವರಿಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಿಂದುಳಿದ ವರ್ಗಗಳು ಈ ಆರ್ಥಿಕ ಹಿಂದುಳಿದಿರುವಿಕೆಯ ಸೂತ್ರವನ್ನು ಬಲವಾಗಿ ವಿರೋಧಿಸಬೇಕು.
9. ಇದಕ್ಕಿಂತ ಮುಖ್ಯವಾಗಿ ಉತ್ತಮ ಜಾತಿಯವರು ಮಾಡಿರುವ ಕುತಂತ್ರ ಮತ್ತೊಂದಿದೆ. ರಾಜ್ಯ ಮಟ್ಟದಲ್ಲಿ ಹಿಂದುಳಿದ ವರ್ಗಗಳು ಕಡಿದಾಡಿಕೊಳ್ಳುವಂತೆ ಮಾಡಿ, ಕೇಂದ್ರ ಸೇವಾ ಕ್ಷೇತ್ರ (Central Services)ಗಳಲ್ಲಿ ಅವರಿಗೆ ಯಾವ ಮೀಸಲು ಸ್ಥಾನವನ್ನೂ ಕೊಡದೇ 27 ವರ್ಷಗಳು ಕಾಲಹರಣ ಮಾಡಿ ಅಲ್ಲಿನ ಎಲ್ಲ ಅವಕಾಶಗಳನ್ನೂ ತಾನೇ ತೆಗೆದುಕೊಂಡಿವೆ. ಕಾಲೇಲ್ಕರ್ ಆಯೋಗದ ವರದಿಯನ್ನು ಮೂಲೆಗೆಸೆದಿವೆ. ಈ ಬಗ್ಗೆ ವೀರಶೈವರಾಗಲೀ, ಯಾವುದೇ ಹಿಂದುಳಿದ ವರ್ಗವಾಗಲೀ ಪ್ರತಿಭಟನೆ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳ ಹಿಂದುಳಿದ ವರ್ಗಗಳ ಯುವಜನರು ನಿರುದ್ಯೋಗಿಗಳಾಗಿರುವುದಕ್ಕೆ ಇದೊಂದು ಬಹು ದೊಡ್ಡ ಕಾರಣ.
ಇದರ  ಜೊತೆಗೇ, ಖಾಸಗಿ ಉದ್ಯಮ (Private Sector)ಗಳೂ ಉತ್ತಮ ಜಾತಿಯವರ ಪೂರ್ಣ ಸ್ವಾಮ್ಯವಾಗಿರುವುದರ ಬಗ್ಗೆ ಕೂಡ ಹಿಂದುಳಿದ ವರ್ಗಗಳು ಎಚ್ಚರಗೊಳ್ಳಬೇಕು. ಕೇಂದ್ರ ಸೇವಾಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಜನಸಂಖ್ಯಾ ಪ್ರಮಾಣದ ಮೀಸಲು ಸ್ಥಾನಕ್ಕೆ ಹೋರಾಡಬೇಕು.
10. ಮೇಲೆ ಹೇಳಿದ ವಿಷಯಗಳೆಲ್ಲ ಮೇಲ್ಮೈಯಲ್ಲಿ ಕಾಣುವ ಸತ್ಯಗಳು, ಇವುಗಳಿಗೆಲ್ಲ ಮೂಲಕಾರಣಗಳಾದ ಆರ್ಥಿಕ ರಾಜಕೀಯ ವ್ಯವಸ್ಥೆ ಜಾತಿ ಪದ್ಧತಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಅವಕಾಶಗಳನ್ನು ಸೀಮಿತಗೊಳಿಸುವ ಶಕ್ತಿಯಾಗಿದೆ. ವಿವರಿಸಿದಲ್ಲಿ ಇವು, ಬಂಡವಾಳಶಾಹಿ ಆಸ್ತಿ ಸಂಬಂಧಗಳು, ಜನರಿಗೆ ತಿಳಿಯದ ಭಾಷೆಯಲ್ಲಿ ರಾಜ್ಯ ವ್ಯವಹಾರ, ನಿರುದ್ಯೋಗ ಸೃಷ್ಟಿಸುವ ಬೃಹತ್ ಕೈಗಾರಿಕಾ ಯಂತ್ರಗಳು, ಬಹುಸಂಖ್ಯಾತರು ಮೇಲೇಳದಂತೆ ಮಾಡುವ ಕೃಷಿಕ್ಷೇತ್ರದ ನಿರ್ಲಕ್ಷ್ಯ, ಬಹುಸಂಖ್ಯಾತ ಕೃಷಿಕರು ಯಥಾಸ್ಥಿತಿಯಲ್ಲಿರುವಂತೆ ಮಾಡುವ ಬೆಲೆ ನೀತಿ, ಬಹುಸಂಖ್ಯಾತರನ್ನು ಕೇವಲ ಪ್ರೇಕ್ಷಕರನ್ನಾಗಿಸುವ ರಾಜಕೀಯ ಕೇಂದ್ರೀಕರಣ, ದೈಹಿಕ ಶ್ರಮ ಹಾಗೂ ಮಾನಸಿಕ ಶ್ರಮಕ್ಕಿರುವ ಮೌಲ್ಯದ ವ್ಯತ್ಯಾಸ ಇತ್ಯಾದಿ ಕಾರಣಗಳು ಜಾತಿಗಳು ಜಡವಾಗಿಯೇ ಇರುವಂತೆ ಹಾಗೂ ದೇಶ ಮುಂದೆ ಹೋಗದಂತೆ ಹಿಡಿದಿಟ್ಟಿವೆ. ಸಾಮಾಜಿಕ ಕ್ರಾಂತಿಗಾಗಿ ಹೋರಾಡುವವರು ಅದಕ್ಕೆ ಪೂರಕವಾದ ಆರ್ಥಿಕ -ರಾಜಕೀಯ ಕ್ರಾಂತಿಗೂ ಶ್ರಮಿಸದಿದ್ದಲ್ಲಿ ಜಾತಿವಿನಾಶ ಸಾಧ್ಯವಿಲ್ಲ. ಬುದ್ಧ-ಬಸವರು ಸೋಲಲು ಮೂಲ ಕಾರಣ ಇದೇ ಆಗಿದೆ.
11. ಸಮಾನತೆಗಾಗಿ ಹೋರಾಡುವ ಯಾರೇ ಆಗಲಿ, ವಿಶೇಷವಾಗಿ ಕಲ್ಯಾಣದ ಬಸವಣ್ಣನ ಶಿಷ್ಯರಾದ ವೀರಶೈವರು ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟು ಕೆಳಗಿನ ಕನಿಷ್ಠ ಕಾರ್ಯಕ್ರಮದೊಂದಿಗೆ ತಮ್ಮ ಹೋರಾಟವನ್ನು ಪ್ರಾರಂಭಿಸಬೇಕು. ಶೀಘ್ರ ಕಾರ್ಯಕ್ರಮವಾಗಿ:
  • ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾತಿ ಅಂಕಿ ಅಂಶಗಳನ್ನು, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಂಕಿ ಅಂಶಗಳನ್ನು, ಶಾಲಾ ವಯಸ್ಕ ಹಾಗೂ ಉದ್ಯೋಗ ವಯಸ್ಕರ ಅಂಕಿ ಅಂಶಗಳನ್ನು ಶೇಖರಿಸಲು;
  • ಈಗಿರುವ ಢೋಂಗಿ ಸಾಮರ್ಥ್ಯ್ ಕ್ಷೇತ್ರ (Merit Pool)ದ ರದ್ದಿಗಾಗಿ;
  • ಜಾತಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳ  ಮೀಸಲು ಹಾಗೂ ಆಯಾ ಜಾತಿಗಳಲ್ಲೇ ಸಾಮಥ್ರ್ಯ ಕ್ಷೇತ್ರದ ರಚನೆಗಾಗಿ;
  • ಯಾವುದೇ ಜಾತಿಯ ಶಾಲಾವಯಸ್ಕರಲ್ಲಿ  ಶೇಕಡಾ 50ಭಾಗ ಮೆಟ್ರಿಕ್ ಪಾಸಾದವರು ಹಾಗೂ ಉದ್ಯೋಗ ವಯಸ್ಕರಲ್ಲಿ 50 ಭಾಗ ಜನರು ಜಾತಿ – ಕಸುಬನ್ನು ಬಿಟ್ಟು ಬೇರೆ ವೃತ್ತಿ ಮಾಡುತ್ತಿರುವವರು ಇದ್ದಲ್ಲಿ ಅಂತಹ ಜಾತಿಯನ್ನು ಮುಂದುವರೆದದ್ದೆಂದು ಘೋಷಿಸುವ ಸೂತ್ರಕ್ಕಾಗಿ;
  • ಅಖಿಲ ಭಾರತ ಹಿಂದುಳಿದ ವರ್ಗಗಳ ಆಯೋಗ ರಚನೆಗಾಗಿ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಕೇಂದ್ರ ಸೇವಾ ಕ್ಷೇತ್ರಗಳಲ್ಲೂ ಮೀಸಲು ಸ್ಥಾನಕ್ಕಾಗಿ;
  • ಇದಲ್ಲದೆ  ಜಾತಿ ವಿನಾಶದ ದೂರಕಾಲಿಕ ಕಾರ್ಯಕ್ರಮವಾಗಿ
  • ಹಿಂದಿ ಅಥವಾ ಇಂಗ್ಲಿಷಿಗೆ ಬದಲು ಎಲ್ಲ ಹಂತ ಎಲ್ಲ ಕ್ಷೇತ್ರಗಳಲ್ಲಿ ಜನ ಭಾಷೆ (ಮಾತೃಭಾಷೆ)ಯ ಬಳಕೆಗಾಗಿ;
  • ಎಲ್ಲ ಕ್ಷೇತ್ರಗಳಲ್ಲಿ ಮಾನವ ಶ್ರಮದ  ಸಮಾನ ಮೌಲ್ಯೀಕರಣಕ್ಕಾಗಿ;
  • ಮಾನವ ಶಕ್ತಿಯನ್ನು ತಿರಸ್ಕರಿಸುವ ಬೃಹತ್ ಯಂತ್ರಗಳ ಬದಲು ಮಾನವ ಶಕ್ತಿಯನ್ನು ಬಳಸಿಕೊಳ್ಳುವ ಸಣ್ಣ  ಯಂತ್ರಗಳಿಗಾಗಿ;
  • ಜಾತಿ ಸೃಷ್ಟಿಸುವ ಬಂಡವಾಳಶಾಹಿ ಆಸ್ತಿ ವ್ಯವಸ್ಥೆಯ ಬದಲು ಜಾತಿ ವಿನಾಶಕ್ಕೆ  ಪೂರಕವಾಗುವ, ಉತ್ಪಾದನೆ ಸಾಮಾಜೀಕರಣವಾಗಿರುವ ಉತ್ಪಾದನಾ ಆಸ್ತಿಯ ಸಾಮಾಜೀಕರಣಕ್ಕಾಗಿ;
  • ಯೋಜನಾ ವೆಚ್ಚದ ಶೇ.80 ಭಾಗವನ್ನು ಶೇ.80 ಭಾಗ ಜನರು ಅವಲಂಬಿಸಿರುವ ಕೃಷಿ ಕ್ಷೇತ್ರಕ್ಕೆ ಮೀಸಲಿಡಲು.
  • ಕೈಗಾರಿಕಾ ವಸ್ತುಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿಮಾಡುವಂತೆಯೇ ಕೃಷಿ ಉತ್ಪಾದನೆಗೂ ಬೆಲೆ ನಿಗದಿ ಮಾಡಲು;
  • ಗ್ರಾಮಮಟ್ಟದ ಜನರೂ ಸಮಾನ ಪಾತ್ರ ವಹಿಸುವಂತೆ ಯೋಜನಾ ಹಾಗೂ ರಾಜಕೀಯ ವಿಕೇಂದ್ರೀಕರಣಕ್ಕಾಗಿ.
ಈ ಮೇಲ್ಕಂಡ ಕಾರ್ಯಕ್ರಮವನ್ನು ಹಾವನೂರರೂ  ಸಲಹೆ ಮಾಡಿದ್ದಾರೆ. ವೀರಶೈವ ಮುಖಂಡರಾಗಲೀ  ಬೇರೆ ಹಿಂದುಳಿದವರ ನಾಯಕರಾಗಲೀ ಇದನ್ನು ಗಮನಿಸಿಲ್ಲ. ಹಾಗೆಯೇ, ವೀರಶೈವರಲ್ಲಿ ಒಡಕನ್ನು ತರಲಿಕ್ಕೆ ಯಾವ ಆದಿ ಶಂಕರಾಚಾರ್ಯನೂ  ಎದ್ದು ಬಂದಂತೆ ಕಂಡುಬರುತ್ತಿಲ್ಲ. ವೀರಶೈವರ ಒಡಕಿಗೆ ಅವರೇ ಕಾರಣರು.  ಹಲವಾರು ಉಪಜಾತಿಗಳನ್ನು ಸೃಷ್ಟಿಸಿಕೊಂಡು ಪ್ರತಿಯೊಂದಕ್ಕೆ ಮಠ ಜಗದ್ಗುರುಗಳನ್ನು ಸೃಷ್ಟಿಸಿಕೊಂಡಿರುವುದಕ್ಕೆ ಯಾರು ಕಾರಣರು? ಉಪಜಾತಿಗಳ ನಡುವೆ ವಿವಾಹ ನಡೆಸಬೇಕೆಂದು ಕಳೆದ ವೀರಶೈವ ಮಹಾ ಸಮ್ಮೇಳನದಲ್ಲಿ ನಿರ್ಣಯ ಮಾಡಿದವರು ಯಾರು? ನಾವು ಅತಿ ವರ್ಣಾಶ್ರಮಿಗಳು, ನಮ್ಮ ಬಗ್ಗೆ ಅಲ್ಲಸಲ್ಲದ ಟೀಕೆಗಳನ್ನು ಮಾಡಿದ್ದಾರೆಂದು ಇತರರನ್ನು ದೂರುವ ಬದಲು ಜಾತಿ ಸಮಸ್ಯೆಯ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಬೇಕಾದದ್ದೂ ಆನಂತರ ಸರಿಯಾದ ದಿಕ್ಕಿನಲ್ಲಿ ಹೋರಾಟ ರೂಪಿಸಿಕೊಳ್ಳಬೇಕಾದದ್ದು ವೀರಶೈವರ ಜವಾಬ್ದಾರಿ. ಅವರ ಇತ್ತೀಚಿನ ನಿಲುವು ಕಲ್ಯಾಣದ ಬಸವಣ್ಣನಿಗೆ ಕಲ್ಯಾಣಕಾರಿಯಾಗಿಯೇನೂ ಇಲ್ಲ.
ಕಲ್ಯಾಣದ ಬಸವಣ್ಣನ ಸಮಾನತಾ ಆಂದೋಲನ ಪ್ರಾರಂಭಿಸಬೇಕೆಂಬ ನಿಜವಾದ ಇಚ್ಛೆ ವೀರಶೈವರಿಗಿದ್ದರೆ ಅವರಿಗಿರುವ ಮಾರ್ಗಗಳು ಎರಡು: ಉಪಜಾತಿಗಳ ಬೇರೆ ಬೇರೆ ಬಾವುಟ ಹಾರಿಸುತ್ತಿರುವ ಎಲ್ಲ ಮಠಾಧೀಶರೂ ಮಠಗಳೂ ವಿಲೀನಗೊಂಡು ಒಂದೇ ಬಾವುಟದಡಿಯಲ್ಲಿ ಸೇರಿ ತಮ್ಮ ನವಪುರೋಹಿತಶಾಹಿಗೆ ಚರಮಗೀತೆ ಹಾಡಬೇಕು. ದೇಹವೇ ದೇಗುಲ, ಕಾಯಕವೇ ಕೈಲಾಸ ಎನ್ನುವ ಪುರೋಹಿತಶಾಹಿ-ವಿರೋಧಿಗಳಿಗೆ ಇದು ಕಷ್ಟವಾಗಬಾರದು. ಇದಕ್ಕೆ ಮಠಾಧೀಶರುಗಳು ಒಪ್ಪದಿದ್ದಲ್ಲಿ, ಬಸವಣ್ಣನ ನಿಜವಾದ ಶಿಷ್ಯರುಗಳೆಲ್ಲ ಒಂದಾಗಿ ಈ ಮಠ ಮಾನ್ಯಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕು. ಇವೆರಡೂ ಶೀಘ್ರದಲ್ಲಿಯೇ ನಡೆಯದಿದ್ದಲ್ಲಿ ಕರ್ನಾಟಕದ ವೀರಶೈವರು ಕೇವಲ ಜಾತಿವಾದಿಗಳಾಗಿದ್ದಾರೆ; ಬಸವಣ್ಣನ ಜಾತಿ-ವಿನಾಶ ಆಂದೋಲನವನ್ನು ಮರೆತಿದ್ದಾರೆ ಎಂದು ಯಾರಾದರೂ ಹೇಳಲೇ ಬೇಕಾಗುತ್ತದೆ.
ಈ ಲೇಖನ ಎಲ್ಲ ಹಿಂದುಳಿದ ವರ್ಗಗಳನ್ನೂ ಉದ್ದೇಶಿಸಿ ಬರೆದದ್ದು. ವೀರಶೈವರ ಹಾಹಾಕಾರದ ಸನ್ನಿವೇಶದಲ್ಲಿ ಅವರಿಗೆ ಹೇಳಿರುವ ಕಿವಿಮಾತುಗಳನ್ನು ಎಲ್ಲ ಹಿಂದುಳಿದವರೂ ಗಮನಕ್ಕೆ ತೆಗೆದುಕೊಂಡು ಸ್ಪಷ್ಟ ಹೋರಾಟಕ್ಕೆ ಸಿದ್ಧವಾಗಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು ಅವರಿಂದ ವರ್ತಮಾನ ಬ್ಲಾಗ್ ಪ್ರಕಟಿಸಿದ ಲೇಖನ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.