Showing posts with label ಬಸವ. Show all posts
Showing posts with label ಬಸವ. Show all posts

Friday, December 02, 2011

ನಮಗಿನ್ನೂ ಬಸವ ಅರ್ಥವೇ ಆಗಿಲ್ಲ !


ಡಾ. ಸಿದ್ರಾಮ ಕಾರಣಿಕ 
ನಾಚಿಕೆಯಾಗುತ್ತಿದೆ ಸ್ವಾಮಿ
ಬಸವ ಮತ್ತೊಮ್ಮೆ ಹುಟ್ಟಿ ಬಾ ಎನ್ನಲು !
ಯಾಕೆಂದರೆ ಬಸವ
ನಮಗಿನ್ನೂ ಅರ್ಥವೇ ಆಗಿಲ್ಲ !
ಮತ-ಧರ್ಮ-ಜಾತಿಗಳ
ಜೋಕಾಲಿ ಜೀಕುತ್ತಿರುವ
ನಮಗೆಲ್ಲ ಬಸವ ಬರೀ
ಹೆಸರಾಗಿದ್ದಾನೆ ; ಉಸಿರಾಗಿಲ್ಲ !
ಅರಿವಿನ ಮರುವೆಯಿಂದ
ಮೆರೆಯುವ ನಮಗೆಲ್ಲ
ಬಸವ ಇನ್ನೂ ಅರ್ಥವೇ ಆಗಿಲ್ಲ !
ಇಂದು,
ಬಸವ ಎತ್ತಾಗಿದ್ದಾನೆ
ಮತ್ತೇ ಕೆಲವರಿಗೆ
ಮುತ್ತಿನ ಸತ್ತಿಗೆಯಾಗಿದ್ದಾನೆ
ಕಲ್ಲಾಗಿ-ಮಣ್ಣಾಗಿ ನಿಂತಿರೋ
ಬಸವ ಮಾರಾಟದ ಸರಕಾಗಿದ್ದಾನೆ !
ಬಸವ ಇಂದು ಲಿಂಗವಾಗಿದ್ದಾನೆ
ಅಂಗಹೀನನಾಗುತ್ತಿದ್ದಾನೆ !
ಅಂತರಂಗ-ಬಹಿರಂಗ ಶುದ್ಧಿ
ಇಲ್ಲದವರ ನಡುವೆ ಕಂಗಾಲಾಗಿದ್ದಾನೆ !
ಮತಿಯಿಲ್ಲದ ಮಂದಿಯ
ನಡುವೆ ಮಾತಿಲ್ಲದೇ ಮೂಕನಾಗಿದ್ದಾನೆ !
ಯಾಕೆಂದರೆ
ಬಸವ ನಮಗೆ
ಇನ್ನೂ ಅರ್ಥವೇ ಆಗಿಲ್ಲ !
ಬಸವ ಎಂದರೆ ಎತ್ತ
ಲ್ಲ ; ಬರೀ ಮತ್ತೂ ಅಲ್ಲ !
ಬಸವ ಎಂದರೆ
ಸಮಬದುಕಿನ ತತ್ವ ;
ಮನುಷ್ಯರನ್ನು ಮನುಷ್ಯರನ್ನಾಗಿ
ನೋಡುವ ಸಾಧನೆಯ ಸತ್ವ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.