Showing posts with label ಆದಿಪುರಾಣ. Show all posts
Showing posts with label ಆದಿಪುರಾಣ. Show all posts

Monday, July 09, 2012

ಪಂಪನ ಆದಿಪುರಾಣದ ಮಾಗಧ

ಪಂಪನ ಆದಿಪುರಾಣದ ದ್ವಾದಶಾಶ್ವಾಸದಲ್ಲಿ ಬರುವ ಮಾಗಧನ ಮಾತು. ಭರತನಿಗೆ ಎದುರಾಗಿ ನಿಲ್ಲುವ ಎದೆಗಾರಿಕೆಯ ಮಾಗಧ, ಭರತನಿಗೆ ಶರಣಾಗಬೇಕು ಎಂಬ ತನ್ನ ಆಸ್ಥಾನದ ಹಿರಿಯರು ಹೇಳಿದಾಗ ಮಾರುತ್ತರ ನೀಡುವ ಆತ,
 

'ಕುಲದ ಚಲದಾಯದರಿವಿನ
ಕಲಿತನದುನ್ನತಿಯನಲಸದೀ ಸುರಸಭೆಯೊಳ್ /
ಪಲವಾಡುವೆನ್ನ ನಾಲಗೆ
ಬಲಸ್ಥನೊರ್ವಂಗೆ ಜೀಯ ದೇವೆಂದಪುದೇ
/' (12-101)

ಎಂದಿರುವುದು ಸ್ವಾಭಿಮಾನಿಯೊಬ್ಬನ ಉಕ್ತಿಯೇ ಆಗಿದೆ.

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.