Showing posts with label Ambedkar. Show all posts
Showing posts with label Ambedkar. Show all posts

Sunday, August 31, 2014

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಕೆಡಿಸುವ ಹುನ್ನಾರ !





ದಲಿತರ ವಿಷಯವನ್ನು ಎತ್ತಿಕೊಂಡು ರಾಜ್ಯ ಸರಕಾರವನ್ನು ವಿರೋಧಿಸಿ ಒಂದು ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಮಾಡಿ ಕೆಲವು ಸಮಸ್ಯೆಗಳ ಬಗ್ಗೆ ಸರಕಾರ ತೀವ್ರವಾಗಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದು ಸರಿಯಾದರೂ ಅಲ್ಲಿರುವ ಮುಖಂಡರ ಹೇಳಿಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಿದ್ದು ಸರಿಯಲ್ಲ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ (ದಿನಾಂಕ : 28-08-2014 : ನಮ್ಮ ಮಹಾನಗರ) ಈ ಸುದ್ದಿ ಪ್ರಕಟವಾಗಿದೆ.
‘ಗೋಮಾತೆಯನ್ನು ಪೂಜ್ಯನೀಯವಾಗಿ ಕಾಣುವ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೂ ಕೂಡ ಗೋ ಹತ್ಯೆ ನಿಷೇಧ ಜಾರಿಗೆ ಬಂದಿಲ್ಲ. ಕಾರಣ ರಾಜ್ಯ ಸರಕಾರ ಆದಷ್ಟು ಬೇಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಗೋಹತ್ಯೆ ನಿಷೇಧ'ದ ಬಗ್ಗೆ ಎಲ್ಲಿಯೂ ಹೇಳಿದ ಬಗ್ಗೆ ನಮಗಂತೂ ಗೊತ್ತಿಲ್ಲ. ಪ್ರತಿಭಟನೆ ಮಾಡಿದ ಪಕ್ಷದವರು ಅದನ್ನು ಹೇಳಿದರೆ ನಮಗೆ ಒಂದಿಷ್ಟು ಜ್ಞಾನ ಲಭ್ಯವಾಗುತ್ತದೆ. ಇಲ್ಲವಾದರೆ ಸುಳ್ಳು ಹೇಳುವ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ
ಅವಶ್ಯಕತೆಯಿಲ್ಲ ; ಹಾಗೇನಾದರೂ ಮಾಡಿದರೆ ಇತಿಹಾಸವನ್ನು ಮರೆಮಾಚುವ ಮಂದಿಯ ವಿರುದ್ಧ ಕೆಂಡ ಕಾರಲೇ ಬೇಕಾಗುತ್ತದೆ. ಯಾವ ಹಿಂದೂ ಧರ್ಮವನ್ನು ಪ್ರತಿಭಟಿಸಿ, ವಿರೋಧಿಸಿ, ಹೊಸದೊಂದು ಇತಿಹಾಸ ನಿರ್ಮಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು, ಅವರು ಹೇಳದೇ ಇರುವ ಸಂಗತಿಗಳನ್ನು ಅವರ ತಲೆಗೆ ಕಟ್ಟಿ ಅಪಪ್ರಚಾರ ಮಾಡುವ ಉಮೇದಿನಲ್ಲಿ
ಇರುವ ಮಂದಿಯನ್ನು ತಹಬಂದಿಗೆ ತರುವ ಹೋರಾಟ ಇನ್ನಷ್ಟು ತೀವ್ರವಾಗುವ ಅನಿವಾರ್ಯತೆ ಇದೆ.

Wednesday, January 15, 2014

ಅಂಬೇಡ್ಕರ್ ಅವರ ಮೊಮ್ಮಕ್ಕಳ ಬ್ರಾಹ್ಮಣತ್ವ ಸ್ವೀಕಾರ ?

ಡಾ. ಬಾಬಾಸಾಹೇಬ ಅಂಬೇಡ್ಕರ್
ಡಾ. ಸಿದ್ರಾಮ ಕಾರಣಿಕ
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರಖರ ವೈಚಾರಿಕತೆಯ ಅರಿವು ಅವರ ಜೊತೆಗೆಯೇ ಹೋಯಿತೇನೋ ಎನಿಸುತ್ತದೆ. 'ಇಲ್ಲಿಯವರೆಗೆ ನಾನು ಎಳೆದು ತಂದಿರುವ ರಥವನ್ನು ಸಾಧ್ಯವಾದರೆ ಮುಂದಕ್ಕೆ ಒಯ್ಯಿರಿ. ಇಲ್ಲವಾದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ. ಆದರೆ ದಯವಿಟ್ಟು ಹಿಂದಕ್ಕೆ ಮಾತ್ರ ತಳ್ಳಬೇಡಿ' ಎಂಬ ವಿಚಾರ ಕೇವಲ ವೇದಿಕೆಯ ಮಾತಾಗಿ ಇಂದು ಉಳಿದುಕೊಂಡಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಬೆಳೆದ ಎಷ್ಟೋ ಮಂದಿ ಇಂದು ಆ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬೇರೆಯವರು ಯಾಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಕ್ಕಳೇ ಇಂದು ಬ್ರಾಹ್ಮಣತ್ವವನ್ನು ಪೋಷಿಸುತ್ತಿದ್ದಾರೆ. ದೇವಾಲಯಗಳಲ್ಲಿ ಹೋಮ-ಹವನ, ಪೂಜೆ ಮಾಡುವುದಷ್ಟೇ ಅಲ್ಲ ; 'ರಾಜಗೃಹ'ದಲ್ಲೂ ಆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಮನಸ್ಸು ಸಂತಾಪಿತಗೊಳ್ಳುತ್ತಿದೆ.
 
ಇಂಥ ಸಂಗತಿಗಳನ್ನು ಖಂಡಿಸಲೇ ಬೇಕಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿ ಬೇಡವಾಗಿದ್ದರೆ ಅವರ ಹೆಸರನ್ನೂ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ !

Saturday, December 07, 2013

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತ... ...


ಡಾ. ಸಿದ್ರಾಮ ಕಾರಣಿಕ

‘ಪ್ರಜಾಪ್ರಭುತ್ವವು ಸಫಲವಾಗಬೇಕಾದರೆ ಸಮಾಜದಲ್ಲಿ ಕಣ್ಣು ಕುಕ್ಕುವ ಅಸಮಾನತೆ ಇರಬಾರದು. ದಬ್ಬಾಳಿಕೆ ಮಾಡುವ ವರ್ಗವಿರಬಾರದು. ದಮನಕ್ಕೆ ಒಳಗಾದ ವರ್ಗವೂ ಇರಬಾರದು. ಎಲ್ಲ ಸೌಲಭ್ಯಗಳನ್ನು ಹೊಂದಿ ಬರೀ ಸುಖದಲ್ಲೇ ಇರುವಂಥವರೂ ಇರಬಾರದು ಮತ್ತು ಕೇವಲ ಕಷ್ಟಗಳನ್ನೇ ಅನುಭವಿಸುವಂಥವರೂ ಇರಬಾರದು’ ಎನ್ನುವ ಮೂಲಕ ಸಾಮಾಜಿಕ ಸಮಾನತೆಯ ಕ್ರಾಂತಿಯನ್ನು ಮೊಳಗಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರರು ನೆನಪಾಗುವುದು ಅವರ ಕ್ರಾಂತಿಯ ಇಂಥ ನಡೆ ಮತ್ತು ನುಡಿಗಳಿಂದಲೇ. ನೋವಿನಲ್ಲೂ ನಲಿವು ಕಂಡ ಈ ದೇಶದ ಮಹಾನ್ ಪುರುಷ ಅವರು. ಸುಸಂಬದ್ಧವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ ಮಹಾನ್ ಚೇತನ ಅವರು. ಸ್ವಾಭಿಮಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಕೆಚ್ಚೆದೆಯ ಹೋರಾಟಗಾರ ಅವರು. ಅವರ ದಿಟ್ಟತನದ ಹೋರಾಟ, ದಣಿವರಿಯದ ಚಳುವಳಿ ಇಂದಿಗೂ ಹೋರಾಟಗಾರರ ದಾರಿದೀಪ.
ಇಂಥ ಹೋರಾಟಗಾರನ ಬದುಕಿನಲ್ಲಿ ಬಹುಪಾಲು ನೋವುಗಳೇ ತುಂಬಿದ್ದವು. ಅವು ಯಾವಾಗಲೂ ಅವರನ್ನು ಕಾಡುತ್ತಲೇ ಇದ್ದವು. ಕೆಲವು ಸಲ ಅವರು ಮಾನಸಿಕವಾಗಿ ಜರ್ಜಿರಿತರಾಗಿದ್ದರು. 1908 ರಲ್ಲಿ ಮಾತೋಶ್ರೀ ರಮಾಯಿಯೊಂದಿಗೆ ವಿವಾಹವಾಯಿತು. ಮುಂದೆ ಹುಟ್ಟಿದ ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ಒಂದು, ಒಂದುವರೆ ವರ್ಷಗಳಲ್ಲೇ ತೀರಿಕೊಂಡಿದ್ದು ಅವರಿಗೆ ಆಘಾತವನ್ನುಂಟು ಮಾಡಿತ್ತು. ಮೊದಲ ಮಗ ಯಶವಂತನನ್ನು ಹೊರತುಪಡಿಸಿದರೆ, ರಮೇಶ, ಇಂದುಮತಿ, ಗಂಗಾಧರ, ರಾಜರತ್ನ ಇನ್ನಿಲ್ಲವಾಗಿದ್ದರು. ಹಾಗಾಗಿಯೇ ಯಶವಂತನನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಯಾವುದಕ್ಕೂ ಹೆಚ್ಚು ಒತ್ತಾಯಿಸಲಿಲ್ಲ. ಇರುವ ಒಬ್ಬ ಮಗನಾದರೂ ಕಣ್ಣಮುಂದೆ ಸುಖವಾಗಿ ಇರಲಿ ಎಂಬುದು ಅವರ ಆಶಯವಾಗಿತ್ತು. 1935 ರಲ್ಲಿ ಮಾತೋಶ್ರೀ ರಮಾಯಿ ತೀರಿಕೊಂಡಾಗಲಂತೂ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ತಾನು ನೆಚ್ಚಿದ ಹೆಂಡತಿ, ತನ್ನನ್ನು, ತನ್ನ ಸಂಸಾರವನ್ನು ಸಂಭಾಳಿಸಿದ ಮಹಾಮಾತೆ ಇನ್ನಿಲ್ಲವಾದಾಗ ಅವರ ರೋಧನ ಮುಗಿಲು ಮುಟ್ಟಿತ್ತು. ಎಷ್ಟೋ ಸಲ ರಮಾಯಿಯನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಹೋಗಿ ಮನಸ್ಸು ಬಿಚ್ಚಿ ಕಣ್ಣೀರು ಹಾಕುತ್ತಿದ್ದರು. ಆನಂತರದಲ್ಲಿ ಸುಧಾರಿಸಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಮತ್ತೇ ಹೋರಾಟದ ಹಾದಿಗೆ ಮರಳಿದರು.
ದಲಿತರು ಸ್ವಾಭಿಮಾನಿಯಾಗಿ ಬದುಕಬೇಕು. ಸಾಮಾಜಿಕವಾಗಿ ಸಮಾನತೆಯಿಂದ ನಳಿನಳಿಸಬೇಕು ಎಂಬ ವಿಚಾರದಿಂದ ಬಿಡುವಿಲ್ಲದ ಹೋರಾಟ ಅವರದಾಗಿತ್ತು. ಕೆಲವು ಸಂಘಟನೆಗಳನ್ನು ಕಟ್ಟಿ ಬೆಳೆಸಿದಂತೆ ರಾಜಕೀಯ ಪಕ್ಷಗಳನ್ನೂ ಕಟ್ಟಿದರು. ಕೇಂದ್ರ ಸರಕಾರದಲ್ಲಿ ಮಂತ್ರಿಯೂ ಆದರು. ಆದರೆ ಪಟ್ಟಭದ್ರರ ಸಚಿವ ಸಂಪುಟದಲ್ಲಿ ಅವರು ಬಹಳ ಕಾಲ ಇರಲಾಗಲಿಲ್ಲ. ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಂಪ್ರದಾಯಿಕ ಜನರನ್ನು ಅವರು ಎದುರಿಸಿದರು. ಇನ್ನೊಂದು ಮಹತ್ವದ ವಿಚಾರವೆಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಜೊತೆ ಹೆಜ್ಜೆ ಹಾಕಬೇಕಾದ ಎಷ್ಟೋ ದಲಿತ-ದಮನಿತರೂ ದ್ವೇಷವನ್ನು ಸಾಧಿಸತೊಡಗಿದ್ದು ! ಎರಡೂ ಕಡೆಯ ವಿರೋಧಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ತಕ್ಕ ಪ್ರತಿಕ್ರಿಯೆ ನೀಡುತ್ತಲೇ ದೃಢವಾಗಿ ನಿಂತರು. ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ವಿರುದ್ಧ ನಿರಂತರವಾಗಿ ಮಸಲತ್ತು ನಡೆಸಿಯೇ ಇದ್ದರು. ಆದರೆ ಯಾವುದಕ್ಕೂ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಧೃತಿಗೆಡಲಿಲ್ಲ. ಆದರೂ ಚುನಾವಣೆಗಳಲ್ಲಿ ಅವರು ಸೋಲು ಅನುಭವಿಸಬೇಕಾಯಿತು.
ಈ ಎಲ್ಲ ಸಂಗತಿಗಳ ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಆರ್ಥಿಕ ಪರಿಸ್ಥಿತಿ ಕೂಡ ತುಂಬ ಹದಗೆಟ್ಟಿತ್ತು. ಆದರೂ ಹೋರಾಟದ ಹಾದಿಯನ್ನು ಬಿಡದೇ ಸಾಲ ಮಾಡಿಕೊಂಡೇ ದಲಿತ-ದಮನಿತರ ಹಕ್ಕಿಗಾಗಿ ಹೋರಾಟ ನಡೆಸಿದರು ; ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ದಲಿತ-ದಮನಿತರ ಆಶಾಕಿರಣವಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 6ನೆಯ ಡಿಸೆಂಬರ್ 1956 ರಂದು ದೆಹಲಿಯಲ್ಲಿ ತೀರಿಕೊಂಡಾಗ ಅವರು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಐದು ವರ್ಷಗಳೂ ಗತಿಸಿರಲಿಲ್ಲ. ಅವರ ಪಾರ್ಥಿವ ಶರೀರವನ್ನು ಮುಂಬಾಯಿಗೆ ತೆಗೆದುಕೊಂಡು ಹೋಗಲು ಮನೆಯಲ್ಲಿ ಹಣವೇ ಇರಲಿಲ್ಲ ! ಈ ದೇಶದ ಸಂವಿಧಾನ ರಚಿಸಿದ ಮಹಾನ್ ಚಿಂತಕ ಎಂಬುದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದ ಅಂದಿನ ಸಾರಿಗೆ ಮತ್ತು ಸಂಪರ್ಕ ಖಾತೆಯ ಮಂತ್ರಿಗಳು ದೇಹ ಸಾಗಿಸಲು ಹಣ ಬರಿಸುವಂತೆ ಕೇಳಿದ್ದರು ; ಆ ಮಂತ್ರಿ ಕೂಡ ದಲಿತರೇ ಆಗಿದ್ದರು ಎಂಬುದು ಮಾತ್ರ ಇತಿಹಾಸದ ವ್ಯಂಗ್ಯ ! ಇದು ಈ ದೇಶದ ರಾಜಕೀಯ ಸಂವಿಧಾನಶಿಲ್ಪಿಗೆ ತೋರಿದ ಅಗೌರವ ಕೂಡ.
‘ಜನರು ಆದರ್ಶಗಳಿಗಾಗಿ ಭವಿಷ್ಯದತ್ತ ನೋಡುವ ಬದಲು ಇತಿಹಾಸದತ್ತ ನೋಡಬೇಕು. ಜನರು ಸ್ವತಂತ್ರವಾಗಿ ಚಿಂತನೆ ಮಾಡದೆ, ಅನುಭವಗಳಿಂದ ಪಾಠ ಕಲಿಯದೇ ಕರಾಳಮಾರ್ಗದಲ್ಲಿ ನಡೆಯುತ್ತಿರುವುದು ಅಜ್ಞಾನವೇ ಸರಿ. ಇದು ಪ್ರಜಾಪ್ರಭುತ್ವದ ದುರಂತ’ ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ಮಾತುಗಳು ಇಂದಿಗೂ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಬಲ್ಲವು.
ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಕ್ರಾಂತಿಸೂರ್ಯ. ತಮ್ಮನ್ನೇ ಸುಟ್ಟುಕೊಂಡು ಜಗತ್ತಿಗೆ ಬೆಳಕು ನೀಡಿದ ನಿಜಸೂರ್ಯ. 65ನೆಯ ವಯಸ್ಸಿನಲ್ಲಿಯೇ ಅವರ ಮಹಾಪರಿನಿರ್ವಾಣವಾಯಿತು. ಕ್ರಾಂತಿಸೂರ್ಯ ಅಸ್ತಂಗತನಾದಾಗ ದಲಿತ-ದಮನಿತರ ಪಾಲಿಗೆ ಕತ್ತಲೆ ಕವಿಯಿತು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ವಿಚಾರಗಳು ಇಂದಿಗೂ ನಮ್ಮೆಲ್ಲರ ಪಾಲಿನ ಸ್ಫೂರ್ತಿಯ ಸೆಲೆಗಳಾಗಿವೆ. ಆ ಮೂಲಕ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂದುಕೊಳ್ಳುವ ಮನಸ್ಸು ನಮ್ಮದಾಗಬೇಕು. 

Thursday, October 17, 2013

ಬಲಿತ ದಲಿತರೂ ಮತ್ತು ದರಿದ್ರ ದಲಿತರೂ....






ಬಲಿತ ದಲಿತರ ಬಗ್ಗೆ ಮತ್ತು ದರಿದ್ರ ದಲಿತರ ಬಗ್ಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ತುಂಬ ಖೇದವಿತ್ತು. ಅದಕ್ಕೇ ಅವರು ಹೇಳುತ್ತಿದ್ದರು : ನಾನು ಮುನ್ನಡಿಸಿಕೊಂಡ ರಥವನ್ನು ಸಾಧ್ಯವಾದರೆ ಮುಂದೆ ತೆಗೆದುಕೊಂಡು ಹೋಗಿ. ಸಾಧ್ಯವಾಗದಿದ್ದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ. ಆದರೆ ಹಿಂದಕ್ಕೆ ಮಾತ್ರ  ಎಳೆಯಬೇಡಿ ; ಸರಿಸಬೇಡಿ ! ಈ ಚಿತ್ರದ ಮೂಲಕ ಆ ಮಾತಿಗೊಂದು ಮೂರ್ತರೂಪ :

Sunday, September 15, 2013

डॉ. बाबासाहेब आंबेडकरांना बौध्द सोडून इतर दलितांनी स्वीकारले आहे का..?


निलेश ठेगे

डॉ. बाबासाहेब आंबेडकरांनी अनेक आघाडयांवरून संघर्ष केला. प्रचंड लिखाण केले. वारंवार भारतात आलेल्या कमिशनना निवेदने सादर केली. अस्पृश्यांना अन्यायाच्या विरोधी लढा देण्यासाठी तयार केले. साऊथबरो कमिटी, सायमन कमिशन, गोलमेज परिषदांना त्यांनी सादर केलेली निवेदने जर बघितली तर अस्पृश्यांच्या सबळीकरणासाठी विकासासाठी त्यांची बांधीलकी तळमळ लक्षात येते. अस्पृश्यांना डिप्रेसड वर्गाना गुलामीच्या लाचारीच्या गर्तेतून बाहेर काढून अन्यायाविरुध्द लढाईस तयार करणे हे त्यांच्या लढयाचे मुख्य उद्दिष्ट होते. सामाजिक स्वातंत्र्य आणि राजकीय सबळीकरण विकास या तीन बाबी मागासलेल्या समुहांना मिळाल्या पाहीजेत यासाठी बाबासाहेबांनी प्रयत्न केले. 

अनु.जाती, जमाती, गरीब,अल्पसंख्यांक महिलांच्या सर्वसमावेशक विकासासाठी बाबासाहेबांनी १९१९ ते १९५४ दरम्यान वेळोवेळी शासनाला निवेदन देऊन जातीच्या आधारावरून होत असलेल्या भेदभावावर तोडगा काढण्यात यावा असे सुचविले. मे १९२८ ला सायमन कमिशनला दोन निवेदने दिली. गोलमेज परिषदेत दोन १९३०-१९३२ अस्पृश्यांच्या मागण्यासंबंधी अभ्यासपूर्ण निवेदने दिली. १९४० च्या दरम्यान आजच्या आरक्षण धोरणाचा आधार डॉ. आंबेडकरांनी तयार केला भारत स्वतंत्र झाल्यानंतर आरक्षण धोरणाला मूर्त स्वरुप प्राप्त झाले. बाबासाहेबांनी भारत देशाची जलनीती ( water policy ) नौकानयन विकासाचे सर्वसमावेशक प्रारुप ( inclusive development model ) मांडले ते राबविले. भारताच्या लोकसंख्या धोरणविषयीचे विचार १९३७ ला मांडले वाढत्या लोकसंख्येची समस्या हाताळण्यासाठी उपाय योजना सूचविल्या. ते देशाच्या सर्वसमावेशक विकासाचे शिल्पकार होते. अशी 'व्हिजन'आणि 'सर्वस्पर्शी परिप्रेक्ष्य' असतानाही त्यांना देशातील सर्व जनतेने स्विकारले का? हा खरा कळीचा मुद्दा आहे. 

भारतीय घटनेचे शिल्पकार, दलितांचे एवं पिछडे वर्गोंके मसीहा याच विचाराने लोक त्यांना संबोधतात. महाराष्ट्रात ५९ अनु जाती आहेत. त्यातील प्रमुख जाती म्हणजे महार (नवबौध्द) मातंग, चांभार, ढोर आणि होलर या आहेत. बौध्द वगळता इतर चार जातीनी बाबासाहेबांना सामुदायीक पातळीवरुन मान्य केले का? याचे उत्तर दुदैवाने नकारार्थी आहे. पण त्याची कारणे आपण समजून घ्यायला हवीत. बाबासाहेबांच्या महापरिनिर्वाणानंतर त्यांची मंडळी तीन विशिष्ट प्रकारे आठवण काढतात. ) सरकारी-दरबारी त्यांची आठवण निघते. भारतीय घटनेचे ते शिल्पकार होते. दलितांचे कैवारी उध्दारकर्ते होते अशी बोळवण केली जाते. समता, स्वातंत्र्य, बंधुभाव सामाजिक न्यायाच्या तत्वानुसार भारतीय समाजाची पुनर्बाधणी करण्यासाठीचे त्यांचे योगदान याकडे जाणीवपूर्वक डोळेझाक केली जाते. त्यांना victim of reductionism केले जाते. हे दलितेत्तर मंडळीकडून होते हे वेगळे सांगायला नको. बाबासाहेबंची जयंती साजरी करणे म्हणजे एक ritual चा भाग झाला आहे. ) डावे-उजवे, भगवे या राजकीय पक्षांना बाबासाहेबांच्या विचारप्रणालीची ' Allergy ' झाली आहे. डावे पक्ष बाबासाहेबांना Caste leader म्हणूनच संबोधतात. उजव्या पक्षांनी डॉ. आंबेडकरांना हिंदुत्वाच्या माहोलमध्ये Co-opt करण्याचा प्रयत्न केला. त्यांच्या नावाचे राजकारण केलं गेलं. राष्ट्र उभारणीच्या त्यांच्या विचारांची थट्टा केली गेली. ) तिस-या प्रकारात बाबासाहेबांची आठवण काढणारी दलित मंडळी आहेत. बाबासाहेबांना ते ' Symbol of revolt ' म्हणूनच स्वीकारतात. देशपातळीवर दलित जनतेनी त्यांना स्विकारले आहे. ही जनता आंबेडकरांच्या योगदानाचा, सिध्दांताचा विचारांचा वापर करतात. त्यांच्या छोटया मोठया प्रश्नांची तड लावण्यासाठी आंबेडकरी प्रेरणा हीच त्यांची शक्ती आहे. खऱ्या अर्थाने ही सामान्य जनता बाबासाहेबांची अनुयाची आहे. बाकीच्या अनुयायांविषयी बोललेलच बरं

महाराष्ट्रातील बौध्देत्तर दलितांनी बाबासाहेबांची विचारप्रणाली नेतृत्त्व स्विकारले का? याचे उत्तर 'हो' आणि 'नाही' असेच आहे. डॉ. आंबेडकरांना का स्विकारले नाही? या उत्तरासाठी आपल्याला मातंग, ढोर, चांभार होलर या प्रमुख जातींचे जाती व्यवस्थेच्या उतरंडीमध्ये 'स्थान' काय होते हे बघावे लागेल. वरील चार जातींना गावगाडयात पारंपारिक व्यवसाय होता. पारंपारिक कला कुसर हाती असल्याने आर्थिक आधार त्यांना होता. म्हणून 'जात आणि व्यवसाय' यांच्यात सातत्य राहिले. त्यामुळे त्यांचे स्थलांतर mass based वर झाले नाही. या जातींनी 'सांस्कृतिकरणाची' प्रक्रिया अवलंबवीली. या उलट नवबौध्दांनी बाबासाहेबांच्या लढयाला नेतृत्वाला विद्युतगतीने सामुदायीक समुच्चयाने प्रतिसाद दिला. दर्जा वाढविण्यासाठी सांस्कृतीकरणाच्या प्रक्रिये ऐवजी political means वापरले. परिणामी, त्यांच्या सामाजिक गतीशिलतेसाठी, इतर घटकांव्यतिरिक्त, डॉ. बाबासाहोंचा role महत्वाचा घटक राहीला आहे. यावर खूप संशोधन झाले आहे. वरील प्रकारच्या तपशीलात गेल्यास तीन प्रकारच्या images निर्माण झाल्याचे लक्षात येते.महार/नवबौध्दांनी अंगीकारलेली Aggressive strategy ,ढोर-चांभारांची imitative strategy आणि मातंगाची depressive revivalist strategy. बौध्द समुदाय प्रत्येक front वर आक्रमक Aggressive राहिला म्हणून सामाजिक गतीशिलता जास्त प्रमाणात आली.चांभार-मातंग समुदायात सामाजिक गतीशिलता हिंदू समाज व्यवस्थेच्या मुल्य व्यवस्थेच्या आधीन राहूनच आली.

बौध्दांनी डॉ.आंबेडकरांकडे Role Model म्हणूनच बघितले. 'शिका, संघटीत व्हा संघर्ष करा' या घोषणेला भरभरून प्रतिसाद दिला.अनेक संघर्षात त्यानी खूप किमंतही मोजली.पण अन्यायाविरूध्द समुच्चयाने लढण्याची ताकद त्याच्यात निर्माण झाली.आपण अन्यायाविरूध्द लढू शकतो ही मनाची तयारी झाली. हे केवळ आंबेडकरांच्या नेतृत्वामुळे शक्य झाले आहे. ज्या मंडळींनी सामुहीक समुच्चयाने डॉ.आंबेडकरांना स्वीकारले त्यांनी आंबेडकरीचे आज किती वाटे पाडलेत? तरी ते स्वतःला आपण बिनीचे आंबेडकरवादी आहोत असे समजतात ना? बौध्देत्तर दलितांच्या आंबेडकरी निष्ठा पदोपदी तपासण्यासाठी ते परीक्षकाची भूमिका घेतात. हा असा अधिकार त्यांना कसा काय प्राप्त होतो? हा एक वेगळा संशोधनाचा विषय आहे. दुदैव हे आहे की, ना सवर्णानी ना दलित अनुयायांनी बाबासाहेबांना digest केलं. digest केलं नाही तर कृतीकार्यक्रम व्यवहारात कसा आणणार? फक्त ritual म्हणून किंवा भावनात्मक पातळीवर बाबासाहेब स्विकारण्याचे दिवस केव्हाचे संपले आहेत, हे लोकांना का कळत नाही ही फार मोठी शोकांतिका आहे.

From : Prabodhan, marathi Magazine 

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.