ಬಲಿತ ದಲಿತರ ಬಗ್ಗೆ ಮತ್ತು ದರಿದ್ರ ದಲಿತರ ಬಗ್ಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ತುಂಬ ಖೇದವಿತ್ತು. ಅದಕ್ಕೇ ಅವರು ಹೇಳುತ್ತಿದ್ದರು : ನಾನು ಮುನ್ನಡಿಸಿಕೊಂಡ ರಥವನ್ನು ಸಾಧ್ಯವಾದರೆ ಮುಂದೆ ತೆಗೆದುಕೊಂಡು ಹೋಗಿ. ಸಾಧ್ಯವಾಗದಿದ್ದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ. ಆದರೆ ಹಿಂದಕ್ಕೆ ಮಾತ್ರ ಎಳೆಯಬೇಡಿ ; ಸರಿಸಬೇಡಿ ! ಈ ಚಿತ್ರದ ಮೂಲಕ ಆ ಮಾತಿಗೊಂದು ಮೂರ್ತರೂಪ :
Showing posts with label ಸ್ವಾಭಿಮಾನ. Show all posts
Showing posts with label ಸ್ವಾಭಿಮಾನ. Show all posts
Thursday, October 17, 2013
Tuesday, August 20, 2013
ಅಂಬೇಡ್ಕರ ಅವರನ್ನು ಅರಿಯದವರಿಗೆ.....
ಡಾ. ಸಿದ್ರಾಮ ಕಾರಣಿಕ
ಮೊನ್ನೆ ಸ್ನೇಹಿತರೊಬ್ಬರು ಮಲಗುವ ಸಮಯದಲ್ಲಿ (ನನ್ನ ಮಲಗುವ ಸಮಯವಲ್ಲ ; ಯಾಕೆಂದರೆ ನಾನು ಮಲಗುವುದೇ ನಸುಕಿನ ಜಾವದಲ್ಲಿ. ಫೋನು ಮಾಡಿದ್ದು ಅವರು ಮಲಗುವ ಸಮಯದಲ್ಲಿ) ಮೊಬೈಲಿಗೆ ರಿಂಗಾಯಿಸಿ ಮಾತನಾಡಿದರು. ನನಗೆ ಅಚ್ಚರಿ ಎನಿಸಲಿಲ್ಲ. ಯಾಕೆಂದರೆ ನಾನು ಮೊಬೈಲಿಗೆ ಸಿಗುವುದೇ ಇಂಥ ಹೊತ್ತಿನಲ್ಲಿ ! ಸ್ನೇಹಿತರು ಬಹುಶಃ ಕುಡಿದುಕೊಂಡೇ ಮಾತನಾಡುತ್ತಿದ್ದಾರೆ ಎಂದು ನಾನು ಎಣಿಕೆ ಹಾಕಿದೆ. ಅವರು ಹೇಳುತ್ತಿದ್ದರು, “ಬ್ರದರ್, ದಲಿತ ಸಾಹಿತ್ಯದ ಬರವಣಿಗೆಗಳಲ್ಲಿ ಎಲ್ಲರೂ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ತೀರ ಕೆಳಗು ಮಾಡಿ ಬರೆಯಲಾಗುತ್ತಿದೆ. ಇದು ತಪ್ಪು. ಇದಕ್ಕಾಗಿಯೇ ನಾವು ಚಳುವಳಿ ಮಾಡಬೇಕಾಗುತ್ತದೆ...”
ಇದು ನನಗೂ ಅಚ್ಚರಿಯೇ ಸರಿ ! ಫೋನು ಮಾಡಿದ ಸ್ನೇಹಿತ ದಲಿತ ಸಂಘಟನೆಯಲ್ಲಿ ಗುರುತಿಸಿಕೊಂಡವರು, ಕೆಲವು ಹೋರಾಟ ಮಾಡಿದವರು. ಏನೂ ಇಲ್ಲದಾದಾಗ ಮನೆಯಲ್ಲಿ ಮುಸುಕು ಹಾಕಿಕೊಂಡು ಮಲಗುವಂಥವರು ; ಇಲ್ಲವೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ತಲೆ ಹಾಕಿ ಪತ್ರಿಕೆಗಳಲ್ಲಿ ಹೆಸರು ಮಾಡಿರುವಂಥವರು !
ಇಂತಿಪ್ಪ ಸ್ನೇಹಿತರು ಮೊಬೈಲಿನಲ್ಲಿ ಮಾತನಾಡುತ್ತಲೇ ಇದ್ದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ವಿಷಯವಾಗಿ ಬರೆಯುವಾಗ ದಲಿತ ಲೇಖಕರು, ಅಂಬೇಡ್ಕರ್ರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆಯೇ ಹೆಚ್ಚು ಬರೆದು ಅಂಬೇಡ್ಕರ್ ಅವರನ್ನು ಒಂದಿಷ್ಟು ‘ಕೆಳಗು’ ಮಾಡುತ್ತಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಛತ್ರಪತಿ ಶಾಹು ಮಹಾರಾಜ, ಬಡೋದೆಯ ಗಾಯಕವಾಡ, ಮೈಸೂರಿನ ಒಡೆಯರು ಮೊದಲಾದ ರಾಜರ ಬಗ್ಗೆ, ದೇವರಾಯ ಇಂಗಳೆ ಮೊದಲಾದ ಹಿರಿಯರ ಬಗ್ಗೆ ಹೆಚ್ಚು ಬರೆದು ಅಂಬೇಡ್ಕರ್ ಅವರ ಬಗ್ಗೆ ಕಮ್ಮಿ ಬರೆಯಲಾಗುತ್ತಿದೆ ಎಂಬುದು ಅವರ ಅಂಬೋಣ. ಆದರೆ ಇದಕ್ಕೂ ಮಿಗಿಲಾಗಿ ಅವರು ಹೇಳಿದ ಇನ್ನೊಂದು ಮಾತು ನನಗೆ ತುಂಬ ಕೆಡುಕು ಎನಿಸಿತು. ಮಹಾತಾಯಿ ರಮಾಯಿ ಬಗ್ಗೆ ಹೇಳುವಾಗಲೂ ನೀವು ಅಂಬೇಡ್ಕರ್ ಅವರನ್ನು ‘ಕೆಳಗು’ ಮಾಡುತ್ತೀರಿ ಎಂಬುದು ಅವರ ಕಾಳಜಿ ! ಹಾಗಾದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಓದಿ ತಿಳಿದುಕೊಂಡಷ್ಟು ನಾವು ರಮಾಯಿ ಬಗ್ಗೆ ಏನು ತಿಳಿದುಕೊಂಡಿದ್ದೇವೆ ? ಅಥವಾ ತಿಳಿದುಕೊಳ್ಳಲು ಎಂದಾದರೂ ಆಸಕ್ತಿ ತಳೆದಿದ್ದೇವೆಯೇ ? ಸ್ನೇಹಿತರ ಮಾತಿಗೆ ಪ್ರತಿಯಾಗಿ ನಾನು ಈ ಉತ್ತರವನ್ನು ನೀಡಲೇಬೇಕಾಗುತ್ತದೆ. ಯಾಕೆಂದರೆ ಅವರು ನನ್ನನ್ನೂ ನನ್ನ ಸಾಹಿತ್ಯವನ್ನೂ ಕುರಿತಾಗಿಯೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ !
ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೀ ಹೆಸರಲ್ಲ ; ಅದು ನನ್ನ ಉಸಿರು. ಅದು ಬೆಂಕಿ ಕೆಂಡ ; ಯಾರಾದರೂ ಆಕ್ಷೇಪಿಸಿದ್ದರೆ ಸುಟ್ಟು ಬಿಡುವಷ್ಟು ಪ್ರಖರ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳ, ಹೋರಾಟದ ಬದುಕಿನ ಅರಿವಿಲ್ಲದೆ ಮಾತನಾಡುವುದು ನಿಜವಾಗಿಯೂ ಮೂರ್ಖತನವೇ ಸರಿ. ಅರ್ಧ ಓದು ಹಾಳು ಮಾಡುತ್ತದೆ ಎಂಬ ಮಾತು ಸತ್ಯವೆನಿಸುತ್ತದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಹೋರಾಟ, ಚಳುವಳಿ ಮಾಡುವ ಕೆಲ ವ್ಯಕ್ತಿಗಳು ವಾಸ್ತವದಲ್ಲಿ ಎಷ್ಟರಮಟ್ಟಿಗೆ ಅದಕ್ಕೆ ಬದ್ಧರಾಗಿದ್ದಾರೆ ಎಂಬುದು ನನ್ನ ಪ್ರಶ್ನೆ. ಹೀಗಾಗಿಯೇ ಬಲಿತ ದಲಿತರ ಬಗ್ಗೆ ಹೇಳಿದಂತೆಯೇ ಇಂಥ ದರಿದ್ರ ದಲಿತರ ಬಗ್ಗೆಯೂ ನಾವು ದಾಖಲಿಸಲೇಬೇಕಿದೆ. ಇಂಥವರು ಬರೀ ಡಾ. ಬಾಬಾಸಾಹೇಬ ಅಂಬೇಡ್ಕರ್ ಮಾತ್ರವಲ್ಲ, ಇಡೀ ದಲಿತ ಜನಾಂಗವನ್ನೇ ಅಪಹಾಸ್ಯ ಮಾಡುವವರಿಗೆ ಹಾದಿ ಮಾಡಿ ಕೊಡುತ್ತಾರೆ ಎಂದರೆ ತಪ್ಪಾಗಲಾರದು.
Saturday, January 05, 2013
Jhalkari Bai : Dalit woman with Jhaansi !
Laxmibai and Jhalkari Bai led the Durga
Dal ( women’s army) recruits to repeatedly foil attacks by the British
army. And but for the betrayal by one of Laxmibai’s generals, the Jhansi
fort would have remained invincible for at least some more time.
Ignored by mainsteam historians, Jhalkari — a dalit woman — has now
emerged from oblivion and finds mention in works of local writers, which
include an epic poem by Chokhelal Verma, Virangana Jhalkari Bai by
Bhavani Shankar Visharad, and a biography by dalit scholar and Arunachal
Pradesh Governor Mata Prasad.
Her appearance, which was strikingly
similar to Laxmibai, helped the Jhansi army evolve a military strategy
to deceive the British. But before all that, Jhalkari was an ordinary
village girl in Bundelkhand who would take care of household chores
besides tending cattle and collecting firewood from the jungle.
She once had an encounter with a tiger
in the jungle and killed the beast with her axe. On another occasion,
she challenged a gang of dacoits who raided the house of a village
businessman and forced them to retreat.
As a mark of gratitude, the village
organised her marriage with Pooran Kori who matched her in courage.
Pooran was inducted into Laxmibai’s army and his fighting skills were
soon recognised by her generals. Once on the occasion of Gauri Puja,
Jhalakari with the other village women went to the Jhansi fort to pay
homage to the queen.
Laxmibai was struck by Jhalkari’s
uncanny resemblance to her. After being told about her courage, she
ordered Jhalkari’s induction into the Durga Dal. Jhalkari, along with
the other village women, was trained in shooting and igniting the
cannons at a time when the Jhansi army was being strengthened to face
any British intrusion.
The British did not allow the childless
Laxmibai to adopt her successor, in a bid to bring the state under their
control. However, her generals and the people of Jhansi rallied round
the queen and resolved to take up arms against the British instead of
surrendering to them.
During April 1858, from inside the
Jhansi fort, the queen led her army and repulsed several attacks by the
British and their native allies. One of her commanders, however,
betrayed her and opened a well protected gate of the fort. When the fall
of the fortress became imminent, her generals advised Laxmibai to
escape with a handful of fighters. The Rani slipped away from Jhansi on
horseback.
Jhalkari’s husband Pooran was killed
defending the fort but instead of mourning her loss, she worked out a
plan to deceive the British. She dressed up like Laxmibai and took
command of the Jhansi army. After which she marched out of the fort
towards the camp of British general Hugh Rose. On reaching the British
enclave, she shouted that she wanted to meet the general. Rose and his
men were exultant. Besides capturing Jhansi, the British thought they
had caught the queen alive. When the general — thinking she was the
queen — asked Jhalkari what should be done to her, she firmly said, "hang me."
Bundelkhand legend has it that her reply
stunned the general, who said that if even one per cent of Indian women
were like Jhalkari, the British would soon have to leave India.
Friday, January 04, 2013
Udham Singh, a revolutionary nationalist .....
From : apnaorg.com/articles/udhamsingh
Udham Singh, a revolutionary nationalist, was born Sher Singh on 26 December 1899, at Sunam, in the then princely state of Patiala. His father, Tahal Singh, was at that time working as a watchman on a railway crossing in the neighbouring village of Upall. Sher Singh lost his parents before he was seven years and was admitted along with his brother Mukta Singh to the Central Khalsa Orphanage at Amritsar on 24 October 1907. As both brothers were administered the Sikh initiatory rites at the Orphanage, they received new names, Sher Singh becoming Udham Singh and Mukta Singh Sadhu Singh. In 1917, Udham Singh's brother also died, leaving him alone in the world.Udham Singh left the Orphanage after passing the matriculation examination in 1918. He was present in the Jallianvala Bag on the fateful Baisakhi day, 13 April 1919, when a peaceful assembly of people was fired upon by General Reginald Edward Harry Dyer, killing over one thousand people. The event which Udham Singh used to recall with anger and sorrow, turned him to the path of revolution. Soon after, he left India and went to the United States of America. He felt thrilled to learn about the militant activities of the Babar Akalis in the early 1920's, and returned home. He had secretly brought with him some revolvers and was arrested by the police in Amritsar, and sentenced to four years imprisonment under the Arms Act. On release in 1931, he returned to his native Sunam, but harassed by the local police, he once again returned to Amritsar and opened a shop as a signboard painter, assuming the name of Ram Muhammad Singh Azad. This name, which he was to use later in England, was adopted to emphasize the unity of all the religious communities in India in their struggle for political freedom.
Udham Singh was deeply influenced by the activities of Bhagat Singh and his revolutionary group. In 1935, when he was on a visit to Kashmlr, he was found carrying Bhagat Singh's portrait. He invariably referred to him as his guru. He loved to sing political songs, and was very fond of Ram Prasad Bismal, who was the leading poet of the revolutionaries. After staying for some months in Kashmlr, Udham Singh left India. He wandered about the continent for some time, and reached England by the mid-thirties. He was on the lookout for an opportunity to avenge the Jalliavala Bagh tragedy. The long-waited moment at last came on 13 March 1940. On that day, at 4.30 p.m. in the Caxton Hall, London, where a meeting of the East India Association was being held in conjunction with the Royal Central Asian Society, Udham Singh fired five to six shots from his pistol at Sir Michael O'Dwyer, who was governor of the Punjab when the Amritsar massacre had taken place. O'Dwyer was hit twice and fell to the ground dead and Lord Zetland, the Secretary of State for India, who was presiding over the meeting was injured. Udham Singh was overpowered with a smoking revolver. He in fact made no attempt to escape and continued saying that he had done his duty by his country.
On 1 April 1940, Udham Singh was formally charged with the murder of Sir Michael O'Dwyer. On 4 June 1940, he was committed to trial, at the Central Criminal Court, Old Bailey, before Justice Atkinson, who sentenced him to death. An appeal was filed on his behalf which was dismissed on 15 July 1940. On 31 July 1940, Udham Singh was hanged in Pentonville Prison in London.
Udham Singh was essentially a man of action and save his statement before the judge at his trial, there was no writing from his pen available to historians. Recently, letters written by him to Shiv Singh Jauhal during his days in prison after the shooting of Sir Michael O'Dwyer have been discovered and published. These letters show him as a man of great courage, with a sense of humour. He called himself a guest of His Majesty King George, and he looked upon death as a bride he was going to wed. By remaining cheerful to the last and going joyfully to the gallows, he followed the example of Bhagat Singh who had been his beau ideal. During the trial, Udham Singh had made a request that his ashes be sent back to his country, but this was not allowed. In 1975, however, the Government of India, at the instance of the Punjab Government, finally succeeded in bringing his ashes home. Lakhs of people gathered on the occasion to pay homage to his memory.
BIBLIOGRAPHY
Copyright © Harbans Singh "The encyclopedia of Sikhism. "
The word "militant" on this document was replaced on the request of Mr. Bhupinder Singh (bhupinder787@yahoo.com).
Monday, July 09, 2012
ಪಂಪನ ಆದಿಪುರಾಣದ ಮಾಗಧ
ಪಂಪನ ಆದಿಪುರಾಣದ ದ್ವಾದಶಾಶ್ವಾಸದಲ್ಲಿ ಬರುವ ಮಾಗಧನ ಮಾತು. ಭರತನಿಗೆ ಎದುರಾಗಿ ನಿಲ್ಲುವ ಎದೆಗಾರಿಕೆಯ ಮಾಗಧ, ಭರತನಿಗೆ ಶರಣಾಗಬೇಕು ಎಂಬ ತನ್ನ ಆಸ್ಥಾನದ ಹಿರಿಯರು ಹೇಳಿದಾಗ ಮಾರುತ್ತರ ನೀಡುವ ಆತ,
'ಕುಲದ ಚಲದಾಯದರಿವಿನ
ಕಲಿತನದುನ್ನತಿಯನಲಸದೀ ಸುರಸಭೆಯೊಳ್ /
ಪಲವಾಡುವೆನ್ನ ನಾಲಗೆ
ಬಲಸ್ಥನೊರ್ವಂಗೆ ಜೀಯ ದೇವೆಂದಪುದೇ /' (12-101)
ಎಂದಿರುವುದು ಸ್ವಾಭಿಮಾನಿಯೊಬ್ಬನ ಉಕ್ತಿಯೇ ಆಗಿದೆ.
'ಕುಲದ ಚಲದಾಯದರಿವಿನ
ಕಲಿತನದುನ್ನತಿಯನಲಸದೀ ಸುರಸಭೆಯೊಳ್ /
ಪಲವಾಡುವೆನ್ನ ನಾಲಗೆ
ಬಲಸ್ಥನೊರ್ವಂಗೆ ಜೀಯ ದೇವೆಂದಪುದೇ /' (12-101)
ಎಂದಿರುವುದು ಸ್ವಾಭಿಮಾನಿಯೊಬ್ಬನ ಉಕ್ತಿಯೇ ಆಗಿದೆ.
Tuesday, January 10, 2012
ಮಳೆಯೆಂದರೆ ಅದು ಬರೀ ಮಳೆಯಲ್ಲ !
ಮಳೆಯೆಂದರೆ ಬರೀ ಮಳೆಯಲ್ಲ !
ಬೆಳೆ ಹಾಳು ಮಾಡಬೇಕು !
ಕೋಟೆ ಕೊತ್ತಲುಗಳನ್ನು ಕೆಡುವಬೇಕು !
ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ
ಪೂಜೆ-ಪೂಜಾರಿ, ಎಲ್ಲ ...
ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು !
ಹೆಂಗಸು, ಗಂಡಸು, ಮಕ್ಕಳು, ಮುದುಕರೆನ್ನದೇ
ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ
ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು !
ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ !
ಸುರಿಯಬೇಕು ಧೋ ಧೋ ಎಂದು !
ಎಲ್ಲವೂ ಕೊಚ್ಚಿಕೊಂಡು
ಭೂಮಿಯ ಮೇಲೆ ಏನೂ ಇಲ್ಲವಾದಾಗ
ಹೊಸ ಜೀವಿಗಳ ಉಗಮವಾಗಬೇಕು !
ಅಲ್ಲಿ ಮೇಲು ಕೀಳಿನ ತಿಳಿಗೇಡಿ
ತನಕ್ಕೆ ಅವಕಾಶ ಇರದು !
ಹಾಳುಮೂಳಗಳಿಗೆ ಮೂಲವಿರದು !
ಬದುಕು ಮಾತ್ರ ನಿರ್ಭೀತವಾಗಿರುತ್ತದೆ !
ಮನುಷ್ಯ ಮನುಷ್ಯನನ್ನು
ಮನುಷ್ಯನೆಂದೇ ಪರಿಗಣಿಸುತ್ತಾನೆ !
ಬಾಂಧವ್ಯಗಳ ಹೊಸ ಮನ್ವಂತರ
ಆರಂಭವಾಗುತ್ತದೆ !
ಡಾ. ಸಿದ್ರಾಮ ಕಾರಣಿಕ
(ಮರಾಠಿ ಕವಿತೆಯೊಂದರ ಪ್ರಭಾವದಿಂದ)
Monday, December 19, 2011
ಮಹಾತಾಯಿ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ ಭಾಷಣಗಳು
ಮೂಲ ಮರಾಠಿಯಲ್ಲಿ ರಾಜರತ್ನ ಠೋಸರ ಅವರು ಸಂಪಾದಿಸಿರುವ ಈ ಭಾಷಣಗಳನ್ನು ಮುಂಬಾಯಿಯ ವಿನಿಮಯ ಪ್ರಕಾಶನದವರು 06-12-2010 ರಂದು ಪ್ರಕಟಿಸಿದ್ದಾರೆ. ಅವುಗಳನ್ನು ನಾನು ಕನ್ನಡೀಕರಿಸಿ ನೀಡುತ್ತಿದ್ದೇನೆ.
*****
*****
ಆ ದಿನದ ಬೆಳಗು ತುಂಬ ಉತ್ಸಾಹದಿಂದಲೇ ಮೂಡಿಬಂತು. ಇಂದು ಮಹಾಮಾತೆ ರಮಾಯೀ ಭೀಮರಾವ್ ಅಂಬೇಡ್ಕರ್ ಸಮಾಜದ ಮಹಿಳಾ ಮಂಡಲದಲ್ಲಿ ಭಾಷಣ ಮಾಡುವವರಿದ್ದರು. ಮನೆಯ ಎಲ್ಲ ಕೆಲಸಗಳನ್ನು ಮುಗಿಸಿದ ರಮಾಯಿ ಸಂಜೆ ಆಗಮಿಸಿದ ಮಹಿಳಾ ಮಂಡಳದ ಇಬ್ಬರು ಹೆಣ್ಣುಮಕ್ಕಳೊಂದಿಗೆ ನಡೆದಳು. ಹಾಗೆ ಹೋಗುವುದಕ್ಕಿಂತ ಮುಂಚೆ ಆಕೆ ತನ್ನ ಮಾವನ (ಸುಬೇದಾರ ರಾಮಜೀ) ಪ್ರತಿಮೆಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಳು. ಮನಸ್ಸಿನಲ್ಲಿಯೇ ತನ್ನ ಪತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸಿದಳು. ಮಹಿಳಾ ಮಂಡಲದ ಸಭೆಯ ವೇದಿಕೆಯೇರಿದ ರಮಾಯಿ ಮಾತನಾಡತೊಡಗಿದಳು.
"ನನ್ನ ಆತ್ಮೀಯ ತಾಯಂದಿರೆ ಮತ್ತು ಸಹೋದರಿಯರೆ,
ಇಂದು ನಾನು ಮೊಟ್ಟಮೊದಲ ಬಾರಿಗೆ ಮಾತನಾಡಲು ನಿಂತಿದ್ದೇನೆ. ಮಾತಾಡುವಾಗ ಏನಾದರೂ ತಪ್ಪು-ತಡೆಗಳುಂಟಾದರೆ ತಿದ್ದಿಕೊಳ್ಳಿ. ನಾವು ಪ್ರತಿನಿತ್ಯದ ಬದುಕಿನಲ್ಲಿ ನೋಡುವುದೇನೆಂದರೆ, ಪತಿ ಯಾವ ಕಾರ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುತ್ತಾನೋ ಆ ಭಾರವನ್ನು ಸಹಧರ್ಮಿಣಿಯಾಗಿ ಪತ್ನಿಯರೂ ಹೆಗಲು ಕೊಟ್ಟು ಹೊತ್ತುಕೊಳ್ಳಬೇಕಾಗುತ್ತದೆ. ಇಂಥ ಅನುಭವಗಳು ನನ್ನ ಬದುಕಿನಲ್ಲಿ ಸಾಕಷ್ಟು ಇವೆ ಎಂದು ನನಗನ್ನಿಸುತ್ತದೆ. (ಜನಸಮುದಾಯದ ಕರತಾಡನ)
ನನ್ನಂತಹ ಮದುವೆಯಾಗಿರುವ ಹೆಣ್ಣಿಗೆ ಪತಿಸೇವೆಯ ಹೊರತು ಈ ಜಗತ್ತಿನಲ್ಲಿ ಮತ್ತೇ ಕೆಲವು ಸೇವಾಕಾರ್ಯಗಳು ಇವೆ ಎಂಬ ಅರಿವು ಇಲ್ಲಿಯವರೆಗೆ ನನಗಿರಲಿಲ್ಲ. ಆದರೆ ಇಂದು ಈ ಭವ್ಯ ವೇದಿಕೆಯ ಮೇಲೆ ನಿಂತು, ಸೇರಿರುವ ಬಹುದೊಡ್ಡ ಸಂಖ್ಯೆಯ ಜನಸಮುದಾಯವನ್ನು ಕಂಡಾಗ ನನಗನ್ನಿಸುತ್ತಿದೆ ; 'ಸಕಲರಲ್ಲೂ ಅರಿವು ತುಂಬಿಯೇ ಬಿಡಬೇಕು' (ಶಹಾಣೆ ಕರೂಣಿ ಸೋಡಾವೆ ಸಕಲಜನ)..... (ಜನಸಮುದಾಯ ಉತ್ಸಾಹದಿಂದ ಚಪ್ಪಾಳೆ ತಟ್ಟುತ್ತಲೇ ಘೋಷಣೆ ಕೂಗತೊಡಗಿದರು ; ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
ನನಗೆ ಇಂತಹ ಜೈಕಾರ ಹಾಕಬೇಡಿ. ಇನ್ನೂ ನಾನು ನಿಮಗಾಗಿ ಏನನ್ನೂ ಮಾಡಿದವಳಲ್ಲ. ಆ ಬಗ್ಗೆ ನನಗೆ ವಿಷಾದವೆನಿಸುತ್ತದೆ. ಇರಲಿ. ನಮ್ಮೆಲ್ಲರ ಮುಂದಾಳು ಡಾ. ಬಾಬಾಸಾಹೇಬ ಅಂಬೇಡ್ಕರರು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ ; ನಾವು ಹೆಣ್ಣುಮಕ್ಕಳೆಲ್ಲ ಮುಂದೆ ಬಂದು, ಸಮಾಜದ ಕ್ರಾಂತಿ-ಚಳುವಳಿಯಲ್ಲಿ, ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳಲ್ಲಿ ಭಾಗಿಯಾಗಬೇಕು. ಯಾಕೆಂದರೆ ಹೆಣ್ಣುಮಕ್ಕಳು ಏಕನಿಷ್ಠರಾಗಿರುತ್ತಾರೆ. ಯಾವುದೇ ಚಳುವಳಿಯಲ್ಲಿ ಹೆಣ್ಣುಮಕ್ಕಳು ಸಹಭಾಗಿಯಾಗಬೇಕು. ಇದರ ಹೊರತಾಗಿ ಚಳುವಳಿಯ ಹೆಜ್ಜೆ ಮುಂದೆ ಸಾಗುವುದಿಲ್ಲ. ........ (ಜನರಿಂದ ಪ್ರಚಂಡ ಕರತಾಡನ)
ಜಗತ್ತಿನ ಕ್ರಾಂತಿ-ಚಳುವಳಿ ಯಾವುದರ ಮೇಲೆ ನಡೆಯುತ್ತವೆ ? ತ್ಯಾಗದ ಮೇಲೆ ..... ಅದು ಎಂಥದ್ದೇ ತ್ಯಾಗ ಇರಲಿ .... ಚಳುವಳಿಗಾರರು ಎಷ್ಟೋ ಅಗ್ನಿದಿವ್ಯ ಹಾದು ಬರಬೇಕಾಗುತ್ತದೆ. ಇಲ್ಲದಿದ್ದರೆ ಬಯಸಿದ ಬಂಗಾರ ದೊರೆಯಲಾರದು. ಈ ಬಗ್ಗೆ ಒಮ್ಮೆ ಡಾ. ಅಂಬೇಡ್ಕರ ಅವರು ಹೇಳಿದ ಒಂದು ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. ಇದು ಗ್ರೀಕ್ ಪುರಾಣದಲ್ಲಿ ಬರುವ ಕತೆ.
ಡಿಮೇಟರ್ ಹೆಸರಿನ ದೇವತೆಯೊಬ್ಬಾಕೆ ಮನುಷ್ಯರೂಪ ಧರಿಸಿ ಭೂಮಿಗೆ ಬಂದಳು. ಆಕೆಯನ್ನು ಅಲ್ಲಿಯ ರಾಣಿಯೊಬ್ಬಳು ದಾಸಿಯನ್ನಾಗಿ ಇಟ್ಟುಕೊಂಡು ತನ್ನ ಬಾಲಕ ಮಗನ ಉಸ್ತುವಾರಿ ನೋಡಿಕೊಂಡಿರಲು ಹೇಳಿದಳು. ರಾಣಿಯ ಆ ಮಗನನ್ನು 'ದೇವ'ನನ್ನಾಗಿಸಬೇಕು ಎಂಬ ಹಂಬಲ ಆ ದೇವತೆಗೆ ಉಂಟಾಯಿತು. ಹೀಗಾಗಿ ಆಕೆ ದಿನವೂ ರಾತ್ರಿ ಎಲ್ಲರೂ ಮಲಗಿಕೊಂಡ ಮೇಲೆ ಎಲ್ಲ ಬಾಗಿಲು-ಕಿಟಕಿಗಳನ್ನು ಮುಚ್ಚುತ್ತಿದ್ದಳು. ತೊಟ್ಟಿಲಲ್ಲಿ ಮಲಗಿದ ಮಗುವನ್ನು ಹೊರತೆಗೆದು, ಅದರ ಮೈಮೇಲಿನ ಬಟ್ಟೆಗಳನ್ನೆಲ್ಲ ಬಿಚ್ಚಿ ಹಾಕಿ ಬಿಸಿ ಬೂದಿಯ ಮೇಲೆ ಒಂದಿಷ್ಟು ಕಾಲ ಆ ಮಗುವನ್ನು ಮಲಗಿಸುತ್ತಿದ್ದಳು ! ಕ್ರಮೇಣ ಬೆಂಕಿಯ ಬಿಸಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಆ ಮಗುವಿಗೆ ಬಂತು. ಅದರ ಬಲ ವೃದ್ಧಿಸತೊಡಗಿತು. ಆ ಮಗುವಿನಲ್ಲಿ ಅತ್ಯಂತ ತೇಜಸ್ವಿಯಾದ ದೈವೀ ಅಂಶ ವಿಕಸಿತವಾಗತೊಡಗಿತ್ತು. ಆದರೆ ಒಂದು ರಾತ್ರಿ ಆ ಮಗುವಿನ ತಾಯಿ ರಾಣಿ ಅಚಾನಕ್ಕಾಗಿ ಆ ಕೋಣೆಯನ್ನು ಹೊಕ್ಕಳು. ಅಲ್ಲಿ ನಡೆಯುತ್ತಿದ್ದುದ್ದನ್ನೆಲ್ಲ ಕಣ್ಣಾರೆ ಕಂಡ ಆಕೆ ತುಂಬ ನೊಂದುಕೊಂಡಳು. ಆಕೆ ತಕ್ಷಣ ತನ್ನ ಮಗುವನ್ನು ಒಲೆಯ ಮೇಲಿನಿಂದ ಎತ್ತಿ ಎದೆಗವಚಿಕೊಂಡಳು. ಆ ರಾಣಿಗೆ ಆಕೆಯ ಮಗುವೇನೋ ದೊರೆಯಿತು. ಆದರೆ ಸಾಮರ್ಥ್ಯಶಾಲಿ ದೇವನಾಗಬೇಕಿದ್ದ ದೇವನನ್ನೇ ಆಕೆ ಕಳೆದುಕೊಂಡಳು ..... !
ಈ ಕತೆಯ ತಾತ್ಪರ್ಯ ಇಷ್ಟೆ ; ಕುಲುಮೆಯಲ್ಲಿ ಕಾಯದೆ ದೇವತನ ಬರುವುದಿಲ್ಲ. ಬೆಂಕಿ, ಮನುಷ್ಯನನ್ನು ಶುದ್ಧಿಗೊಳಿಸುತ್ತದೆ ಮತ್ತು ಮನುಷ್ಯನಲ್ಲಿ ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಅಸ್ಪೃಶ್ಯ ಎನಿಸಿಕೊಂಡಿರುವವರು ಕಡುಕಷ್ಟ ಮತ್ತು ತ್ಯಾಗದ ಅಗ್ನಿದಿವ್ಯ ಸಹಿಸದೇ ಉದ್ಧಾರವಾಗಲಾರರು. ನೀವು ನಿಮ್ಮನ್ನು ಅಸ್ಪೃಶ್ಯ, ಕೀಳು ಎಂದುಕೊಳ್ಳಬೇಡಿ. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ. 'ಮಗನಾಗಬೇಕು ತೇಜ ; ಮೂರು ಲೋಕದಲ್ಲೂ ಇರಬೇಕು ಆತನದೇ ಧ್ವಜ' ಎಂಬ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು ಇನ್ನುಮುಂದೆ ನಮ್ಮ ಮಕ್ಕಳನ್ನು ಬೆಳೆಸಬೇಕು. ಅದರಲ್ಲೇ ನಮ್ಮ ಉದ್ಧಾರವಿದೆ. ಇಷ್ಟು ಹೇಳಿ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ" (ಪ್ರಚಂಡ ಕರತಾಡನ. ಜಯಘೋಷ 'ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರಿಗೆ ಜಯವಾಗಲಿ)
*****
ದಲಿತರ ಅವ್ವ : ರಮಾಯಿಯ ಎರಡನೆಯ ಮತ್ತು ಅಂತಿಮ ಭಾಷಣ :
ಆ ದಿನ 29ನೇ ಜನೇವರಿ 1932 !
ಡಾ. ಬಾಬಾಸಾಹೇಬ ಅಂಬೇಡ್ಕರರು ಕುಳಿತ್ತಿದ್ದ ಲಂಡನ್ನಿನ ಹಡಗು ಬೆಳಿಗ್ಗೆ ಸರಿಯಾಗಿ ಆರು ಗಂಟೆಗೆ ಮುಂಬಾಯಿಯ ಬಂದರಿಗೆ ಬಂದು ತಲುಪಿತು. ಸೇರಿದ ಸಾವಿರಾರು ಅನುಯಾಯಿಗಳ ಹೃದಯ ಆನಂದದಿಂದ ತುಂಬಿ ತುಳುಕಿತು !
ಆ ದಿನ ನಸುಕಿನಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರ ನಿಷ್ಟಾವಂತ ಅನುಯಾಯಿಗಳೂ, ಸಂಬಂಧಿಕರೂ ಹಾಗೂ ಹಿತಚಿಂತಕರು ಡಾ. ಬಾಬಾಸಾಹೇಬ ಅಂಬೇಡ್ಕರರ ಹಾದಿಯನ್ನು ತುಂಬ ಉತ್ಸಾಹಿತರಾಗಿಯೇ ಕಾಯುತ್ತಿದ್ದರು. ಪ್ರತಿಯೊಬ್ಬರೂ ಕೈಯಲ್ಲಿ ಹೂಮಾಲೆ-ಹೂಗುಚ್ಛ ಹಿಡಿದುಕೊಂಡು ನಸುಕಿನ ಚಳಿಗೂ ಅಂಜದೆ ಶಾಂತವಾಗಿಯೇ ಕಾಲಿಡಲೂ ಜಾಗವಿಲ್ಲದಂತೆ ಕಿಕ್ಕಿರಿದು ನಿಂತಿದ್ದರು.
ಆ ಜನಸಂದಣಿಯಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರ ಧರ್ಮಪತ್ನಿ ದಲಿತರ ಅವ್ವ ರಮಾಯಿ ನಿಂತಿದ್ದಳು !
ಸುವಾಸಿತ ಹೂವಿನಿಂದ ಮಾಡಲ್ಪಟ್ಟ ಮಾಲೆಯನ್ನು ಆಕೆ ಹಿಡಿದುಕೊಂಡು ತನ್ನ 'ಸಾಹೇಬ'ರನ್ನು ಎದುರುಗೊಳ್ಳಲು ನಿಂತಿದ್ದಳು !
ತನ್ನ ಸಾಹೇಬನನ್ನು ಯಾವಾಗ ಕಣ್ಣು ತುಂಬಿಕೊಳ್ಳುತ್ತೇನೆಯೋ ಎಂಬ ಕಾತರದಲ್ಲಿ ಆಕೆ ಇದ್ದಳು !
ಅಷ್ಟರಲ್ಲಿ ಗದ್ದಲ, ಜಯಕಾರ ಸುರುವಾದವು. ಡಾ. ಬಾಬಾಸಾಹೇಬ ಅಂಬೇಡ್ಕರರು ಹಡಗಿನಿಂದ ಇಳಿದು ಬರುತ್ತಿದ್ದರು. ಗಗನಭೇದಿ ಘೋಷಣೆ ಮುಳುಗತೊಡಗಿದವು !
'ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ !
ಅಂಬೇಡ್ಕರ್ ಅಂಬೇಡ್ಕರ್ ... ದಲಿತರ ದೇವ ಅಂಬೇಡ್ಕರ್ !!
ಮೊಟ್ಟಮೊದಲು ಸಮತಾ ಸೈನಿಕ ದಳವು ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಹಾರ ಹಾಕಿ ಗೌರವ ವಂದನೆ ಸಲ್ಲಿಸಿತು.
ನೋಡು ನೋಡುವಷ್ಟರಲ್ಲಿಯೇ ಹೂಮಾಲೆಗಳನ್ನು ಹಿಡಿದು ನಿಂತಿದ್ದ ಜನಸಮೂಹ ನಾ ಮುಂದು ತಾ ಮುಂದು ಎಂದು ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಸುತ್ತುವರಿಯಿತು ! ಅಪರಿಮಿತ ಭಕ್ತಿ, ಪ್ರೇಮ ಮತ್ತು ನಿಷ್ಟೆಯ ಸಂಕೇತವಾಗಿ ಹೂಮಾಲೆಗಳು ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳನ್ನು ಅಲಂಕರಿಸಿದವು. ರಮಾಯಿ ಮಾತ್ರ ಈ ಎಲ್ಲ ಗದ್ದಲದಿಂದ ಒಂದಿಷ್ಟು ದೂರವೇ ಉಳಿದಿದ್ದಳು ! ತನ್ನ 'ಸಾಹೇಬ'ನ ಮೇಲೆ ಸೂಸುತ್ತಿದ್ದ ಅಪಾರ ಜನರ ಅಪರಿಮಿತ ಪರಿಶುದ್ಧ ಪ್ರೇಮವನ್ನು ಆಕೆ ಮೊದಲ ಬಾರಿ ನೋಡುತ್ತಿದ್ದಳು ! ನೋಡುತ್ತ ನೋಡುತ್ತ ಆಕೆಯ ಕಣ್ಣಾಲಿಗಳು ತುಂಬಿದವು ! ಆನಂದಭಾಷ್ಟ ಉದರಿದವು !
ಎಲ್ಲರೂ ಮಾಲೆ ಹಾಕಿ ಮುಗಿದಾದ ಮೇಲೆ ರಮಾಯಿ ಕೊನೆಯವಳಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರ ಬಳಿಗೆ ಹೋದಳು !
ಅಖಂಡವಾಗಿ ನಿಂತ ಡಾ. ಬಾಬಾಸಾಹೇಬ ಅಂಬೇಡ್ಕರರು !
ರಮಾಯಿ ತಲೆಯೆತ್ತಿ ಕೂಡ ನೋಡಲಿಲ್ಲ !
ಕೈಯಲ್ಲಿರುವ ಸುವಾಸಿತ ಮಾಲೆಯನ್ನು ಆಕೆ ಡಾ. ಬಾಬಾಸಾಹೇಬ ಅಂಬೇಡ್ಕರರ ಕೊರಳಿಗೆ ಹಾಕಿದಳು !
ಆದರೆ ಆಕೆ ದೃಷ್ಟಿ ಮಾತ್ರ ಅವರ ಪದತಲದಲ್ಲಿಯೇ ಇತ್ತು !
ಹಗಲು-ರಾತ್ರಿಯೆನ್ನದೆ ಯಾವ ಮೂರ್ತಿಯ ಸೇವೆಯನ್ನು ಮಾಡಿದ್ದಳೋ ಅದೇ ಇಂದು ಎದುರಿಗೇ ನಿಂತಿದ್ದರೂ ಆಕೆ ಕಣ್ಣೆತ್ತಿಯೂ ಕೂಡ ನೋಡಲಿಲ್ಲ !
ಹಾಗೆ ನೋಡುವುದಕ್ಕೆ ಆಕೆಯ ನಾಚಿಕೆ ಸ್ವಭಾವ ಮತ್ತು ಆಕೆ ಬಾಳಿದ ಸಂಸ್ಕಾರಗಳು ಅನುಮತಿಸಿರಲಿಕ್ಕಿಲ್ಲ !
ಆದರೆ....... !
ಈ ಹೃದಯಂಗಮವಾದ ಪ್ರಸಂಗವನ್ನು ನೋಡಿದ ಆಗ ಜನತಾ ಪತ್ರಿಕೆಯ ಸಂಪಾದಕರಾಗಿದ್ದ ಸಹಸ್ರಬುದ್ಧೆಯವರ ಚಾಣಾಕ್ಷ ಕಣ್ಣುಗಳು ಮರೆಯಲು ಸಾಧ್ಯವೇ ಇರಲಿಲ್ಲ !
ಸಹಸ್ರಬುದ್ಧೆಯವರು ಸಹಜವಾಗಿಯೇ ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಕೊನೆಯಲ್ಲಿ ಮಾಲೆ ಹಾಕಿದ್ದು ಮತ್ತು ಮಾಲೆ ಹಾಕುವಾಗ ತಲೆಯೆತ್ತಿ ನೋಡದಿರುವುದಕ್ಕೆ ಕಾರಣ ಏನು ಎಂದು ರಮಾಯಿಗೆ ಕೇಳಿಯೇ ಬಿಟ್ಟರು !
ರಮಾಯಿಗೆ ಏನು ಹೇಳಬೇಕೆಂದು ಒಂದು ಕ್ಷಣ ತೋಚಲಿಲ್ಲ ! ಸಭೆಯಲ್ಲಿ ಮಾತನಾಡಬೇಕೆಂದರೆ ತನಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ ! ಮಾತನಾಡದಿದ್ದರೆ ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರತಿಷ್ಠೆಗೆ ಧಕ್ಕೆ ಬರಬಹುದು ! ಹಾಗೆ ನೋಡಿದರೆ ರಮಾಯಿಯೇನೂ ಅರಿಯದ ಹೆಣ್ಣುಮಗಳಲ್ಲ ! ಆಕೆ ನಿಜವಾಗಿಯೂ ಚತುರಳೂ ಬುದ್ಧಿವಂತಳೂ ಆಗಿದ್ದಳು ! ಮರುಕ್ಷಣವೇ ಆಕೆಯ ಮೈಯಲ್ಲಿ ಮಿಂಚು ಹರಿದಾಡಿದ ಅನುಭವವಾಯಿತು. ಆಗ ಆಕೆ ತಡ ಮಾಡಲಿಲ್ಲ ; ತಟ್ಟನೇ ಎದ್ದು ಬಂದು ಮಾತನಾಡಲು ಆರಂಭಿಸಿದಳು !
"ಅಧ್ಯಕ್ಷಮಹೋದಯರೇ, ನನ್ನ ಪತಿಮಹಾದೇವರೆ ಹಾಗೂ ಇಲ್ಲಿ ಸೇರಿರುವ ನನ್ನ ಬಂಧು-ಭಗಿನಿಯರೆ,
ಈಗ ತಾನೆ ಸಹಸ್ರಬುದ್ಧೆ ಸಾಹೇಬರು ನನಗೆ ಕೇಳಿರುವ ಎರಡು ಪ್ರಶ್ನೆಗಳಿಗೆ ಉತ್ತರ ನೀಡಲು ನಾನು ಮಾತನಾಡಲೇಬೇಕಿದೆ. ಅದಕ್ಕಾಗಿಯೇ ಎದ್ದಿರುವೆ. ಯಾರು ಸಾಹೇಬರನ್ನು ಯಾವಾಗಲೋ ಒಮ್ಮೆ ಕ್ವಚಿತ್ತಾಗಿ ನೋಡುತ್ತಾರೋ ಅವರೆಲ್ಲ ಅವರನ್ನು ನೋಡಲಿ ... ನಾನೋ ಹಗಲು-ರಾತ್ರಿ ಸಾಹೇಬರ ದರ್ಶನ ಪಡೆದು ತೃಪ್ತಳಾದವಳು. ಆದ್ದರಿಂದ ಎಲ್ಲರೂ ಮೊದಲು ಮಾಲೆ ಹಾಕಿದ ಮೇಲೆ ನಾನು ಕೊನೆಯಲ್ಲಿ ಮಾಲೆ ಹಾಕಿದೆ. ಇದು ನಿಮಗೆಲ್ಲ ಗೊತ್ತು. ಇನ್ನು ಡಾ. ಅಂಬೇಡ್ಕರ್ ಸಾಹೇಬರು ಬಡಬಗ್ಗರ-ದೀನದಲಿತರ ಉದ್ದಾರಕ್ಕಾಗಿ ಪಣ ತೊಟ್ಟು ನಿಂತವರು. ನಾನು ಅವರ ಧರ್ಮಪತ್ನಿ. ಅವರ ಸಾಧನೆಗೆ ನನ್ನ ದೃಷ್ಟಿ ತಾಗಬಾರದೆಂಬ ಒಂದೇ ಉದ್ದೇಶದಿಂದ ನಾನು ಅವರ ಮುಖವನ್ನು ನೋಡದೇ ಬರೀ ಅವರ ಪಾದಗಳನ್ನು ಕಣ್ಣು ತುಂಬಿಕೊಂಡೆ.
ಈಗ ಹೇಳಿ ಬಂಧುಗಳೇ, ನಾನು ನೀಡಿದ ಉತ್ತರ ಸರಿಯೇ ? ಸರಿಯಾಗಿಯೇ ಇದ್ದೀತು ಮತ್ತು ಅದು ನಿಮ್ಮೆಲ್ಲರ ಜೊತೆ ಸಹಸ್ರಬುದ್ಧೆಯವರಿಗೂ ಸರಿತೋರಿದೆ ಎಂದು ನಂಬಿ ನಾನು ನನ್ನ ಈ ಭಾಷಣವನ್ನು ಮುಗಿಸುತ್ತೇನೆ. (ಪ್ರಚಂಡ ಕರತಾಡನ ಮತ್ತು ಜಯಕಾರ)
ರಮಾಯಿಯ ಭಾಷಣ ಮುಗಿದ ಮೇಲೆ ಡಾ. ಬಾಬಾಸಾಹೇಬ ಅಂಬೇಡ್ಕರರು ಕೆಲವು ಮಾತುಗಳನ್ನಾಡಲು ಎದ್ದು ನಿಂತರು. ಸರಿಯಾಗಿಯೇ ಮಾತನ್ನು ಆರಂಭಿಸಿದ ಅವರು ಹೇಳತೊಡಗಿದರು ;
"ಬಂಧುಗಳೇ, ದುಂಡುಮೇಜು ಪರಿಷತ್ತಿನಲ್ಲಿ ಸಾಧಿಸಿದ ಸಾಧನೆ ನನ್ನದಲ್ಲ ; ಅದು ಇಲ್ಲಿ ಸೇರಿರುವ ನನ್ನ ಎಲ್ಲ ಅಸಂಖ್ಯಾತ ಬಂಧು-ಭಗಿನಿಯರ ಸಾಧನೆ. ದುಂಡು ಮೇಜು ಪರಿಷತ್ತಿನಲ್ಲಿ ನಾನು ನಿರ್ವಹಿಸಿದ ಪಾತ್ರ ಕುರಿತು ಹಿಂದೂಗಳ ಭಾವಿ ಸಂತತಿ ನನ್ನನ್ನು ರಾಷ್ಟ್ರದ್ರೋಹಿ ಎಂದು ಬಗೆಯಬಹುದು ಎಂಬುದನ್ನು ಬಲ್ಲೆ. ಈಗ ನಾನು ಏನನ್ನೂ ಹೆಚ್ಚು ಹೇಳುವುದಿಲ್ಲ. ಆದರೂ ಈ ಮೊದಲು ಮಾತನಾಡಿದ ಸೌ. ಮೋಹಿತೆಬಾಯಿಯವರು ಸೌ. ರಮಾಬಾಯಿ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೆ ನಾನು ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುವುದು ಒಳಿತು ; ಇಂದಿಗೂ ಸೌ. ಮೋಹಿತೆಬಾಯಿಯವರು ಹೇಳಿದರಲ್ಲಿ ಒಂದನ್ನೂ ನನಗೆ ಈ ನಿಮ್ಮ ಆಯೀಸಾಹೇಬ ಹೇಳಿಲ್ಲ..... (ನಗು) ........ ನಿಮ್ಮ ಆಯೀಸಾಹೇಬರು ಬಹುದೊಡ್ಡ ಭಾಗೀರಥಿಯಾಗಿದ್ದಾರೆ ಎಂಬುದು ನನಗೆ ಇದೀಗಲೇ ಗೊತ್ತಾಗಿದ್ದು. ಅದು ಸರಿಯೇ ನಿಮ್ಮ ಆಯೀಸಾಹೇಬರು ನಿಜವಾಗಿಯೂ ಭಾಗ್ಯದ ಭಾಗೀರಥಿಯೇ ಆಗಿದ್ದಾರೆ ! ..... (ನಗು.... ಸಮೂಹದ ಕರತಾಡನ ಮತ್ತು ಪ್ರಚಂಡವಾದ ಜಯಘೋಷ ನಿರಂತರವಾಗಿತ್ತು : ಡಾ. ಬಾಬಾಸಾಹೇಬ ಅಂಬೇಡ್ಕರ ಕೀ ಜೈ ! ದಲಿತರ ಅವ್ವ ರಮಾಯಿಗೆ ಜಯವಾಗಲಿ !)
ಅನುವಾದ : ಡಾ. ಸಿದ್ರಾಮ ಕಾರಣಿಕ
Subscribe to:
Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...


