Wednesday, November 30, 2011

ಮಡೆ ಸ್ನಾನದ ಉತ್ತರೀಯದಲ್ಲಿ : ನನ್ನ ಜನ ; ನನ್ನ ದೇಶದ ಜನ !

ಮೂಢರು ; ತಿಳಿಗೇಡಿಗಳು ಬದುಕುವುದಕ್ಕೆ ಏನೂ ಗೊತ್ತಿಲ್ಲದವರು ; ದೇವರು-ದಿಂಡಿರ ಹೆಸರಿನಲ್ಲಿ ಶೋಷಣೆ ಒಳಗಾದವರು ! ನನ್ನ ಜನ ; ನನ್ನ ದೇಶದ ಜನ ! ವಿತಂಡವಾದಿಗಳು ; ಸ್ವಾರ್ಥಿಗಳು ; ತಮ್ಮ ಹಿತಾಸಕ್ತಿಯನ್ನೇ ಉಸಿರಾಡುವವರು ಶೋಷಣೆ ಮಾಡುವ ಜನ ; ನನ್ನ ದೇಶದ ಜನ ! ದನಗಳಿಗೂ ಇವರಿಗೂ ಏನಾದರೂ ಅಂತರವಿದೆಯೇ ? ಸೂಳೆತನವನ್ನೂ ಮುಂದೊಂದು ದಿನ ಹಿಂದಿನಂತೆಯೇ ಸಾಮಾಜಿಕ ಸ್ವಾಸ್ಥ್ಯದ ಸಂಪ್ರದಾಯ  ಎಂದು ಮುಂದುವರಿಸಿಕೊಂಡು ಹೋಗುವಂಥವರು ! ಛೀ ! ಥೂ !

1 comment:

  1. ಒಂದೇಡೆ ಇಡೀ ವಿಶ್ವವೇ ಬೆಕ್ಕಸ ಬೆರಗಾಗುವಂತಹ ವೈಜ್ಞಾನಿಕ ಮುನ್ನಡೆಯೆಂದು ಬೊಂಬಡಾ ಹೊಡೆದುಕೊಳ್ಳುವ, ಚಿಲ್ಲರೆ ವಿಷಯಗಳಿಗೂ ವಿಶ್ವವನ್ನೇ ಆಹ್ವಾನಿಸುವ ಆರ್ಥಿಕ ಉದಾರೀಕರಣವೆಂಬ ಬೋಳೆ ಮಂತ್ರ ಜಪಿಸುವ ಸಮಕಾಲೀನ ಸಂದರ್ಭವೇ ಯಾಕೆ ನೀನಿಷ್ಟು ಕ್ರೂರನಾದೆ...ದೇವರು-ದಿಂಡಿರೆಂಬ ಕಾಲ್ಪನಿಕ ಜಗತ್ತಿನಲ್ಲಿ ತೇಲಾಡಿಸಿ ಭಾವನೆಗಳೊಂದಿಗೆ ಚೆಲ್ಲಾಟವಾಡುವ ವಿತಂಡಿಗಳ ಪಡೆ ಒಂದೆಡೆ ; ಅದನ್ನು ತಿಳಿಹೇಳಲು ಹೋದ ಶಿವರಾಮ್ ರಂತವರನ್ನು ರಕ್ಷಿಸದ ಸರ್ಕಾರವೇ...ಎಲ್ಲಿದೆ ನಿನ್ನ ಕಾನೂನು ಪಾಲನೆಯೆಂಬ ದಂಡವನ್ನು ಜಪಳಿಸಬಾರದೇ? ಮಡೆ ಸ್ನಾನವೆಂಬ ನೀಚ ಮತ್ತು ಹೊಲಸು ಪದ್ಧತಿಯ ಆರಾಧಕರೇ/ಪೋಷಕರೇ ನಿಮಗಾದರೂ ಬೀಳಲು ಬುದ್ಧಿ ಬೇಡವೇ? ನಾವೀಗ ಯಾವ ಕಾಲದಲ್ಲಿದ್ದೇವೆ ಎಂಬ ಕನಿಷ್ಟ ಅರಿವು-ಜ್ಞಾನ ಬೆಳೆಯುವುದು ಯಾವಾಗ ? ವರ್ಷಗಳಿಂದಲೂ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದ್ದರೂ ಲಜ್ಜಾಹೀನರಂತೆ ನೀವು ಎಂಜಲೆಲೆಯ ಮೇಲೆ ಹೊರಳಾಡಿ ಆಧುನಿಕ ಕಾಲದ ಗಂಭೀರ ಕಾಯಿಲೆಗಳ ಸೋಂಕನ್ನು ನಿಮ್ಮ ದೇಹ ಮೇಲೆ ಎಳೆದುಕೊಂಡಿದ್ದು ಎಷ್ಟು ಸರಿ ? ನೀವು ಇಂತಹ ಆಚರಣೆಗಳಿಗೆ ಮೈಯೊಡ್ಡಿಕೊಳ್ಳು ತಯಾರಿರುವತನಕ ಮೇಲ್ಜಾತಿಯವರು ಸಂಭ್ರಮದಿಂದ ಆಚರಣೆಗೆ ಸಮ್ಮತಿ ನೀಡುತ್ತಾರೆ. ಇನ್ನಾದರೂ ಆಧುನಿಕ ಕಾಲದ ವೈಜ್ಞಾನಿಕ ಆಲೋಚನೆಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಿರಿ...ನನ್ನಯ ಕಪ್ಪು ಜನರೇ...

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.