Sunday, June 30, 2013

ವಚನ-29

ತೊಡೆಯೇರಿದ ತಾಂಬೂಲದ ಹೆಣ್ಣು
ಕಣ್ಣು ಕತ್ತಲು ಬರುವಷ್ಟು ರಸ ಹೀರಿದ ರಭಸಕ್ಕೆ
ಕಸಿವಿಸಿಗೊಳ್ಳುವ ಸರದಿಯಲ್ಲಿದ್ದೂ ಸರಸದ ಬಯಕೆ
ಪುಟಿನಗೆಯುವಿಕೆಗೆ ಬರೀ ದೇಹ ಕಾರಣವಲ್ಲ
ಕಾರಣಿಕ ಸಿದ್ಧರಾಮ ಅಲ್ಲಿದೆ ಬಯಸದೇ ಬಂದ ಬಂಧವೂ
ದೆಸೆ ದೆಸೆಗೆ ತಡವಿ ಮಾಯಾಮೃಗದ ಹಸಿತನ !

Sunday, June 16, 2013

ಮಾತ್ಗವಿತೆ-132

ಆಸೆಗಾಗಿ ಕೊಂದವರು ಕೋಟಿ
ತೀಟೆಗಾಗಿ ಕೊಂದವರು ಕೋಟಿ
'ಜೀ' ಎನ್ನಲು ಸಿದ್ಧವಿಲ್ಲವೆಂದಾದರೆ
ಕೊಲ್ಲುವವರು ಕೋಟಿ ಕೊಟಿ !
ಕೊಂದವರಿಗೆ ಬೇರು ಗೊತ್ತಿಲ್ಲ
ಮತ್ತೇ
ಚಿಗುರುವಿಕೆ ಸುರುವಿದೆ
ಮರಳುವ ಅರಳುವ ಹಂಬಲವಿದೆ !

Tuesday, June 04, 2013

ಕುಡಿಯೊಡೆಯಲು ತೊಡೆ ಬೇಕಲ್ಲ !

ಡಾ. ಸಿದ್ರಾಮ ಕಾರಣಿಕ 
ತೊಡೆಯ ಮೇಲಿನ ಚಿತ್ತಾರ
ಕತ್ತಲು ಕವಿದಾಗಲೂ ಕಂಡ ಸೋಜಿಗ !
ಅದೇನು ಚಿತ್ತಾರವೋ  ಹಸೆಯೋ ?

ಹಸಿದುಕೊಂಡಾತಂಗೆ ಸಮಯವಿಲ್ಲ !
ಸರಸ ವಿರಸದ ಸಲ್ಲಾಪವಿಲ್ಲ
ಬರೀ ಚರ್ಮಕ್ಕೆ ಚರ್ಮ ಅಂಟುವ
ಚರಮಭಾವದ ನರಮಾನುಸ !
ಕರೆಯ ಸಾಕರಿಸಿ  ನಾಚುವ
ಬರೀ ಮೈಗೆ ಅಂಟಿದ ಚರ್ಮ !
ಗುರಿ ಇಲ್ಲದ ಬದುಕು ಅಲ್ಲ ; ಇದೆ
ಮಳೆ ಹನಿಯುವಾಗ ಬಿತ್ತಬೇಕಲ್ಲ !
ಬೀಜಕ್ಕೆ ಬೆಳೆ ಬಯಸುವಿಕೆ ಸಹಜ
ಕುಡಿಯೊಡೆಯಲು ತೊಡೆ ಬೇಕಲ್ಲ !


Monday, June 03, 2013

ವಚನ-28

ಮರಸುಂದು ಹಿಡಿಸಿದ ಸುಸ್ತು, ಆಯಾಸ
ಅನಾಯಾಸ ಸಾಹಸವಲ್ಲ
ಸೆರುಗು ಹಿಡಿದು ಸಲ್ಲಲಿತದ ಸಲ್ಲಾಪ
ಕಡು ಕಷ್ಟ ಎಂದು ಬಗೆದರೆ
ಸಂಸಾರದ ಹುಟ್ಟು ಸಾವಿಗೆ ಮೂರ್ಖ
ಕಾರಣಿಕ ಸಿದ್ಧರಾಮ ಪಪ್ಪಾಯಿಯೊಳಗಣ
ಬೀಜವಾಗಿರುವೆ ನಿಮ್ಮ ಸಂಗಾತ !

ವಚನ-27

ಅವರಿದ್ದ ಮನೆಯ ಮಾಳಿಗೆ ಮಳೆಗೆ ಹಾಳು
ಇವರಿದ್ದ ಮನೆಯ ಜಾಳಿಗೆಯ ಗೂಡು
ತಾನಿದ್ದ ಮನೆಯ ಐಭೋಗ ಬೇರಲ್ಲ
ತೊಡೆ ಮೇಲಿನ ಚೋಳಿಗೆ ವಿಷವಿಲ್ಲ ಎಂದೊಡೆ
ಕಾರಣಿಕ ಸಿದ್ಧರಾಮ ಹಾವು ಹೊಕ್ಕರೂ
ಕಾವೇರುವ ಜನ ಇವರು, ಮರುಳಾಗಬೇಡ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.