Wednesday, November 27, 2013

ವಚನ-34

ಹಾದರದ ಲಾಡಿ ಬಿಗಿದುಕೊಳ್ಳುತ್ತ
ಹಾದಿ ಮ್ಯಾಗಳ ಹಾದರಕ್ಕೆ ಹೇಸಿ ಹೌಹಾರಿ
ಹುಯಿಲಿಡುವ ಹುಚ್ಚಪ್ಪಗಳಿರಾ
ಹಾದಿ-ಬೀದಿ ಬಿಟ್ಟು ನಡುಮನೆಯ ಹಾದರಿಗರ
ಹಸಿ-ಪಿಸಿಗಳ ನೆನಪ ಮಾಡಿಕೊಳ್ಳಿ
ಹೇಳುವಾತನ ಹೇಲುತನಕ್ಕೆ ಕಿವಿಯಾದೊಡೆ 
ಕಾರಣಿಕ ಸಿದ್ಧರಾಮ ಅಲ್ಲಮ-ಅಕ್ಕನಿಗೂ ಹಾದರ ಹುಟ್ಟಿಸಬಲ್ಲರು !
ಹಾರೈಸು ನಿತ್ಯದ ನಿಜ ಬದುಕಿಗೆ !

Monday, November 25, 2013

ಮಾತ್ಗವಿತೆ-159

ಚೆಲುವಾದ ತೊಟ್ಟುಗಳ ತಡುವಿಕೆಯಲ್ಲಿ
ಮೆಲುವಾದ ಹಿತವೇನು ?
ಗತಸಾಹಸಗಳ ನೆನಪಲಿ
ಹುಸಿಗೇಡಿತನದ ಚಪಲ !

Saturday, November 23, 2013

ವಚನ-33

ಬಡತನ ಶಾಪ ಎಂದುಕೊಂಡವರು ಯಾರು ? 
ಪುಟಿ ನೆಗೆದು ಶಾಪವೆಂದುಕೊಂಡವರ ಮುಂದೆ 
ಸೆಟೆದು ನಿಲ್ಲಬೇಕಲ್ಲದೆ ಅಳುವುದು ತರವಲ್ಲ ; 
ತೆಗಿ ತೆಗಿ ನಿನ್ನ ಡಮರುಗದ ನಾದಕ್ಕೆ 
ಆವ ಶಬುದ ಎದುರಾಗಿ ನಿಲುವುದು ?
ಅದಾವ ಶಾಪ ಸಂಗ ಬಯಸಬಲ್ಲದು ?
ಹಂಗೆ ಹೇಳುವ ಹೇಸಿಯೋ ಕಸಿಗೊಂಡಾನು
ಇಲ್ಲವೆ ಕಸಿವಿಸಿಗೊಂಡಾನು 
ಕಾರಣಿಕ ಸಿದ್ಧರಾಮ ತಿಳಿವಿನೊಳಗಲ್ಲದೆ
ಮರೆವಿನವನಲ್ಲ !

Friday, November 22, 2013

ಮಾತ್ಗವಿತೆ-158

ಆ ರಾತ್ರಿ ನೆನಪಿರಬೇಕಲ್ಲ...
ಒಂದೇ ಹಾಸಿಗೆಯ ಮೇಲೆ ಮಲಗಿದಾಗಲೂ
ಇಬ್ಬರ ಮೈಗಳ ಕಾವು ಏರುತ್ತಿದ್ದರೂ
ಮೈಗೆ ಮೈ ತಾಗಿಸದೇ ಅಂಚಿಗೆ ಸರಿದು
ನಿದ್ದೆ ಬರದ ಹೊರಳಾಟ !
ಹೊರಗೆ ಆರ್ಭಟದ ಮಳೆ ಜೋರಾದಾಗ
ಒಳಗೆ ಜುಮುಗುಟ್ಟುವ ಚಳಿ 
ಮುಂದೆ............
ಲಿಂಗಾಂಗ ಸಾಮರಸ್ಯ !

Thursday, November 21, 2013

ಮಾತ್ಗವಿತೆ-157

ನಿನ್ನ ಗುಲಗುಂಜಿ ತೂಕದ ಪ್ರೀತಿಗೆ
ನನ್ನ ದೇಹವಾಂಛೆಯೂ ಗುಡ್ಡದಷ್ಟಿತ್ತು !
ದಗಲುಬಾಜಿತನವಂತೂ ಅಲ್ಲ ಎಂಬುದು ನಿನಗೂ ಗೊತ್ತು
ನೀನು ಮೊದಲೋ ನಾನು ಮೊದಲೋ
ಪ್ರಶ್ನೆಗೆ ಉತ್ತರ ಗೊತ್ತಿಲ್ಲ !
ನಿನಗೋ........
ಗೊತ್ತಿದ್ದರೂ ಹೇಳಲೊಲ್ಲೆ !

Thursday, November 14, 2013

ನಾನು-ನೀನು ಮತ್ತು ಕ್ರಾಂತಿ...


ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಬರೆದ ಪಾಡಿನ ಹಾಡು ಹೀಗಿದೆ ;

ಡಾ. ಸಿದ್ರಾಮ ಕಾರಣಿಕ
--------------------------------
ನನ್ನನ್ನೀಗ ಕಾಡಬೇಡ ಗೆಳತಿ
ನಾನೀಗ ಕ್ರಾಂತಿಯ ಬೆನ್ನ ಹತ್ತಿರುವೆ
ಆಕೆಯ ತೋಳ್ತೆಕ್ಕೆಯಲ್ಲಿ  ಸಿಲುಕಿ
ಸುಖದ ಸವಿಯಲ್ಲಿರುವೆ !

ನನ್ನನ್ನೀಗ ಕಾಡಬೇಡ ಗೆಳತಿ
ನಿನ್ನ ನೆನಪು ಮರುಕಳಿಸಿದರೂ
ಕ್ರಾಂತಿಯ ಬಿಸಿಯಪ್ಪುಗೆ
ನರನಾಡಿಗಳಲ್ಲಿ ತುಸು ನೆಮ್ಮದಿಗೆ
ಅನುವಾಗಿ ನಿನ್ನ ಚಿತ್ರ ಅಸ್ಪಷ್ಟವಾಗುತ್ತಿದೆ !

ಗೆಳತಿ, ಕ್ರಾಂತಿಯ ಬಗೆಗಿನ ನಿನ್ನ ಮತ್ಸರ
ಸಮಝಾಯಿಸಿಗೆ ನಿನ್ನ ನಿರುತ್ತರ ಮೌನ
ಅಳು - ಜಗಳ ಅತಿರೇಕಕ್ಕೇರಿದಾಗ
ಓಹ್ ! ನಾನು ಕ್ರಾಂತಿಯನ್ನು ಬಿಡಲಾರೆ ಗೆಳತಿ !

ತೀವ್ರ ಭಾವನೆಗಳ ಬದಿಗೊತ್ತು ; ಕ್ಷಣಕಾಲ
ಕ್ರಾಂತಿಯ ನಡೆಯನ್ನು ನೋಡು ; ಗುರುತಿಸು !
ನಾನು ನಿನಗೆ ಬೇಕು ; ನನಗೆ ಕ್ರಾಂತಿ ಬೇಕು
ಅಬಸೋತಾದರೆ ನೀನೂ ಬೇಕು
ಯೋಚಿಸು ಗೆಳತಿ ಆಯ್ಕೆ ನಿನ್ನದು !

(ಮೋಡ ಕಟ್ಟೇತಿ ಕವನ ಸಂಕಲನದಿಂದ)

Friday, November 08, 2013

ಮಾತ್ಗವಿತೆ-156

ತೊಡೆ ಮೇಲೆ ತಲೆಯಿಟ್ಟು
ಹೀಗ್ಹೀಗೆ ಎಂದು ಹೇಳಿದಾಗೆಲ್ಲ
ಹಾಗ್ಹಾಗೆ ಎಂದು ಹಾರಿಕೆಯನ್ನೇ ಮುಂದು ಮಾಡಿ
ಹೋಗಿ ಬರುವ ಹಾದಿಯನ್ನೂ ಹಾಳು ಮಾಡಿದ
ಹಾಳುಮೂಳ ನೀನು !
ಅಳಿಸಿದ ಅಕ್ಷರಗಳ ಮೇಲೆ ಕಣ್ಣನೀರ ಹನಿಗಳ
ಕಳವಳವೂ ಕಾಣಲಿಲ್ಲವೆ ನಿನಗೆ ?

Monday, November 04, 2013

ಬಿಳಿ ಕಾಗದ ಇದು ಬರೀ ಕಾಗದ ... !

ಬಿಳಿ ಕಾಗದ ಇದು ಬರೀ ಕಾಗದ
ಮೂಡಿಸು ನೀನು ಬಣ್ಣದ ಚಿತ್ತಾರ
ಒಲವು ಚೆಲವು ಕಾಣಲೇ ಇಲ್ಲ
ಸೆಲೆಯ ಜಲವು ಚಿಮ್ಮಲೇ ಇಲ್ಲ
ಹೊತ್ತಿದ ಜ್ವಾಲೆ ನಂದಲೇ ಇಲ್ಲ
ಬತ್ತಿದ ಬಾವಿ ತುಂಬಲೇ ಇಲ್ಲ //1//

ಬಿಕ್ಕಿದ ದುಃಖ ಬಯಲಿಗೆ ಇಲ್ಲ
ಕುಕ್ಕುವ ಕಣ್ಣೊಳು ಕಾಂತಿಯು ಇಲ್ಲ
ಮಿಕ್ಕಿದ ಮಾತು ಅರಳಲೇ ಇಲ್ಲ
ದಕ್ಕಿದ ಬೀಜ ಚಿಗುರಲೇ ಇಲ್ಲ ! //2//


ನಾನು ಸುಮಾರು 1998 ರಲ್ಲಿ ಬರೆದ ಪದ್ಯ (ನನ್ನ ಮೋಡ ಕಟ್ಟೇತಿ ಕವನ ಸಂಕಲನದಲ್ಲಿ ಇದೆ) ನೆನಪಾಯಿತು. ಈ ಹಾಡಿಗೆ ನಾನೇ ಸ್ವರ ಸಂಯೋಜನೆ ಮಾಡಿ, ಖಂಜರಿ ಹಿಡಿದು ತಾಳ ಹಾಕಿ ಹಾಡುತ್ತಿದ್ದೆ ! ಮಿತ್ರ ಮಂಡಲಿಗಾಗಿ ದಾಖಲಿಸಿದ್ದೇನೆ. ಓದಿಕೊಳ್ಳಿ ; ಇಲ್ಲವೆ ಹಾಡಿಕೊಳ್ಳಿ !

|| बळीराजा ||

-महात्मा जोतीराव फुले

आमुच्या देशीचे अतुल स्वामी वीर ||
होते रणधीर ||मरुत्यास ||
बळीस्थानी आले शूर भैरोबा ||
खंडोबा,जोतिबा || महासुभा ||१||

सद् गुणी पुतळा राजा मुळ बळी ||
दशहरा,दिवाळी ||आठविती ||२||

क्षत्रिय भार्या "इडा पीडा जाओ ||
बळी राज्य येवो "||अशा का बा ?||३||

आर्य भट आले,सुवर्ण लुटिले ||
क्षत्री दास केले ||बापमत्ता ||४||

वामन का घाली बळी रसातळी ||
प्रश्न जोतीमाळी ||करी भटा ||५||


ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.