Wednesday, February 25, 2015

ಮಾತ್ಗವಿತೆ-179

ಕುದಿ ಕುದಿವ ಯಾತನೆಯ
ಅನುಭವ ಇರುವಲ್ಲಿ
ಬೆದೆ ಬಂದಂತೆ ಕಾರಿಕೊಳ್ಳುವ
ಉರವಣಿಗೆ ತರವಲ್ಲ
ಹಂಚಿಕೊಂಡು ಹಗುರಾಗಬೇಕು
ಅದೂ ಸಾಧ್ಯವಾಗದಿದ್ದರೆ
ಮುಚ್ಚಿಕೊಂಡು ಸುಮ್ಮಿರಬೇಕು !

ವಚನ-42

ಬೊಲ್ಲನಾಗಿದ್ದರೆ ಕುಮಾರ ರಾಮನ
ಸಾಂಗತ್ಯ ಅಂತ ಸುಮ್ಮಿರಬೋದಿತ್ತು
ತಲ್ಲಣಗೊಂಡಿದ್ದರೆ ಸಮಾಧಾನಿಸಬೋದಿತ್ತು
ಮಲ್ಲನಾಗಿದ್ದರೆ ಅಖಾಡದಲ್ಲಿಯೇ ಕೆಡವಬೋದಿತ್ತು
ಸೊಲ್ಲು ಕೇಳಿ ಸುಖಾಸುಮ್ಮ ಓಡಿ ಹೋಗುವ
ಬೆಲ್ಲ ಮಾತುಗಳ ಹೊಲ್ಲಗಳ ಹರಿಹಾಯ್ದು ಪರಿಣಾಮವಿಲ್ಲ
ಕಾರಣಿಕ ಸಿದ್ಧರಾಮ ತಿಳಿ ತಿಳಿಯಾಗು
ಹೊಲಬುಗೆಟ್ಟವರು ಹಾದರದಲ್ಲಿದ್ದಾರೆ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.