Tuesday, November 22, 2011

ವಚನ-13

ಅಂದುಕೊಂಡದ್ದು ಆಗಲಿಲ್ಲ ಎಂಬ ಕನವರಿಕೆಯಲ್ಲಿ
ಬೀಡುಬೀಸಾಗಿ ಬಸವಿಳಿದು ಬಂಗಾರದ ಬದುಕು
ಕಳಕೊಂಡವರ ಕಂಡ ಮೇಲೂ ಕೂಸಿಗೆ
ಕುಲಾವಿ ತೊಡಿಸುವ ಇರಾದೆಯ ಮಂದಿಯ ಕಂಡು
ನಾಚುವ ಮರುಳನಾರು ಕಾರಣಿಕ ಸಿದ್ಧರಾಮ
ಬಂಕೆಗಳಿಗೆ ಬೆಂಕಿ ಹೊತ್ತಿಸಿಕೊಳ್ಳುವುದು ಬೇಡ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.