Wednesday, November 16, 2011

ವಚನ-7

ಚೆಂದಕ್ಕೆ ಚಂದ್ರಮನೇ ಬೇಕು ಅಂತಲ್ಲ
ಗೊಂದಲ ಗೂಡಿನ ಮನದ ಕೊಳೆಯನ್ನು
ಕಳೆಯಬೇಕು ; ಬೆಳೆಯಬೇಕು !
ಬಾಳು ಭವಣೆಯಲ್ಲ ; ಸದಾ ಕೊನರುವ ಕೊರಡು !
ಮರಡು ತಲೆಗೆರಡು ಕೊಡುವ ಕಾರಣಿಕ ಸಿದ್ಧರಾಮ
ಮೂಗಿಗಿಂತ ಮೂಗುತಿ ಭಾರದ ಬಡಿವಾರ ಬೇಡ !

2 comments:

  1. ಸೂರ್ಯ ಮಲಗಿದರೆ ಕತ್ತಲಾಗುತ್ತದೆ
    ಚಂದ್ರ ಮಲಗಿದರೆ ಬೆಳಕಾಗುತ್ತದೆ
    ಆದರೆ...
    ನಾನು ಮಲಗಿದರೆ ?
    ನಿದ್ದೆ ಬರುತ್ತದೆ...
    ಪ್ರಯತ್ನಿಸಬೇಕು
    ಯಾಕಂದ್ರೆ
    ಆರೋಗ್ಯಕ್ಕೆ ಒಳ್ಳೆಯದು !!!

    ReplyDelete
  2. ನಿಜ !
    ಮನವೆಂಬ ಗೊಂದಲ ಗೂಡಿನಲ್ಲಿಯ ಕಳೆಯೆಂಬ ಕೊಳೆಯನಳಿಸಲು
    ಚಂದಮಾಮನ ಹಂಗೇಕೆ?
    ಬಾಳೊಂದು ಭಾವಗೀತೆ ; ಸದಾ ಸ್ವರಗಳನ್ನು ಸಂಯೋಜಿಸುತ್ತಿರಬೇಕು !
    ಪೆಟ್ಟಿನಿಂದ ತನ್ನಿಂತಾನೆ ಸರಿದಾರಿಗೆ ಸರಿಯುವ ಮೆದುಳ ಮಲ್ಲರಿಗೆ ಹೇಳಲೇನು !
    ಮೂಗಿಲ್ಲದವರ ಊರಲ್ಲಿ ಮೊಂಡುಮೂಗಿನವಳದೇ ದಿಮಾಕೆಂಬುದು ಸುಳ್ಳಲ್ಲ !
    ಊರಿಗೊಬ್ಬಳೇ ಪದ್ಮಾವತಿಯೆಂಬುದು ದಿಟ !

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.