Monday, October 06, 2014

ಮಾತ್ಗವಿತೆ-175

ಜೀರ್ಣವಾಗುವಂತಿದ್ದರೆ ತಿನ್ನಬೇಕು
ಜೀರ್ಣವಾಗುವಷ್ಟೇ ತಿನ್ನಬೇಕು
ಬಕಾಬೋರಲು ಬಿದ್ದು ಉಳ್ಳಾಡಿದರೆ
ಬಳ್ಳೊಳ್ಳಿ ಮೂಗಿಗೆ ಇಡುವವರು ಇದ್ದಾರೆ
ಎಂಬ ಎಚ್ಚರಿಕೆಯಾದರೂ ಇರಬೇಕು !
ಧಿಮಾಕಿಗೆ ದೀಡಪೈಸೆಯ ಕಿಮ್ಮತ್ತೂ ಇಲ್ಲ !

ವಚನ-40

ಅದೆಂಥ ಗಾಳಿ !
ತೂರಿಕೊಂಡವರೂ
ಮಾರಿಕೊಂಡವರೂ
ನಡುವೆ ಆಣೆ ಲೆಕ್ಕ ಇಟ್ಟುಕೊಂಡವರೂ
ಸುಗ್ಗಿ ಮಾಡುವಾಗಲೇ
ಬೀಸಿತಲ್ಲಾ !
ತಂಗಾಳಿ ಎನಿಸಿದ್ದು ಸುಳಿಗಾಳಿ, 
ಬಿರುಗಾಳಿ, ಎದುರ್ಗಾಳಿಯಾಗಿ
ಬಗ್ಗು ಬಡಿಯುತ್ತಿದೆಯಲ್ಲ !
ಸಿಡಿಲಾಗಿ ಸಿಡಿದು ಜೋರು ಮಳೆಯಾದರೆ
ಬೆಳೆದದ್ದು ಮುಗ್ಗು ಹಿಡಿಯದಿರದೇ ?
ಕಾರಣಿಕ ಸಿದ್ಧರಾಮ ಕಾಲಕ್ಕೆ ಕಾಲನ ಭಯ ಇಲ್ಲ !  

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.