Tuesday, July 31, 2012

ಮಂಗಳೂರ ಹಿಂಸೆಯಲ್ಲಿ ನಮ್ಮ ಪಾಲುದಾರಿಕೆ…



                                                                  -ಬಿ. ಶ್ರೀಪಾದ್ ಭಟ್ 

ಮಂಗಳೂರಿನಲ್ಲಿ ಅಟ್ಟಹಾಸ ಮೆರೆದ ‘ನೈತಿಕ ಪೊಲೀಸರು’

ನಿನ್ನೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಹುಡುಗರು ಹೆಣ್ಣುಮಕ್ಕಳ ಮೇಲೆ ನಡೆಸಿದ ಹಲ್ಲೆ ಅಮಾನವೀಯವಾದದ್ದು ಹಾಗೂ ಅತ್ಯಂತ ಕ್ರೌರ್ಯವಾದದ್ದು. ಆದರೆ ಇದು ಹೊಸದಾಗಿ ನಡೆಯುತ್ತಿದೆ ಎಂದು ನಾವು ಗಾಬರಿಗೊಂಡರೆ ಅದು ನಮ್ಮ ಆತ್ಮವಂಚನೆಯಷ್ಟೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಇದು ದೇಶಾದ್ಯಾಂತ ನೂರಾರು ಬಾರಿ ನಡೆದಿದೆ. ಈ ಮತೀಯವಾದಿ ಆರೆಸ್ಸೆಸ್ ಸಂಘಟನೆ “ಗರ್ವ್ ಸೆ ಕಹೋ ಹಂ ಹಿಂದೂ ಹೈ” ಎನ್ನುವ ಘೋಷಣೆಯನ್ನು ಹುಟ್ಟು ಹಾಕಿದಾಗಲೇ ಈ ಹಲ್ಲೆಯ ಕ್ರೌರ್ಯದ ಬೀಜಗಳು ಮೊಳಕೆಯೊಡೆದದ್ದು.. ನಂತರ “ಏಕ್ ಧಕ್ಕ ಔರ್ ದೋ” ಎನ್ನುವ ಫ್ಯಾಸಿಸ್ಟ್ ಮನಸ್ಥಿತಿ ಚಲನಶೀಲಗೊಂಡಾಗ ಈ ಕ್ರೌರ್ಯದ ಅನೇಕ ಮುಖಗಳು ಅನಾವರಣಗೊಂಡವು. ಈ ಬಗೆಯ ಕ್ರೌರ್ಯಕ್ಕೆ ನೀರೆರೆದು ಪೋಷಿಸಿದ ಅಡ್ವಾನಿ ಹಾಗೂ ಮತ್ತೊಬ್ಬ ಫ್ಯಾಸಿಸ್ಟ್ ನರೇಂದ್ರ ಮೋದಿ ಇಂದು ಭವಿಷ್ಯದ ಪ್ರಧಾನಿ ಪಟ್ಟದ ಸ್ಪರ್ಧೆಗಳು. ಇವರನ್ನು ಹಾಗೂ ಇವರ ಫ್ಯಾಸಿಸ್ಟ್ ಮಾತೃ ಪಕ್ಷ ಆರೆಸ್ಸೆಸ್ ಅನ್ನು ಸಹಿಸಿಕೊಂಡ ಘೋರವಾದ ತಪ್ಪಿಗೆ ಸಮಾಜ ಈ ಬಗೆಯ ಹಲ್ಲೆಗಳನ್ನು ಕಾಲಕಾಲಕ್ಕೆ ಎದುರುನೋಡಬಹುದು. ಇವರ ಹಿಂದುತ್ವದ ಕ್ರೌರ್ಯದ ಹುಸಿಚಿಂತನೆಗೆ ದೇಶವೊಂದರ, ರಾಜ್ಯವೊಂದರ ಸಾಂಸ್ಕೃತಿಕ ಸಮಾಜ ಹಾಗೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ವ್ಯವಸ್ಥೆ ತೆರಬೇಕಾದ ಬೆಲೆ ಅಪಾರವಾದದ್ದು. ಚಿಂತಕ ಗ್ರಾಮ್ಷಿ ಹೇಳಿದ ಹಾಗೆ “ನಾವು ಮೇಲ್ನೋಟಕ್ಕೆ ವೇದಾಂತಿಗಳಾಗಿಯೂ,ಸಿದ್ಧಾಂತವಾದಿಗಳಾಗಿ ಕಾಣಿಸಿಕೊಳ್ಳುತ್ತೇವೆ. ಆದರೆ ಈ ಮುಗ್ಧ ವೇದಾಂತಗಳೇ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ನಮ್ಮೊಳಗೆ ಫ್ಯಾಸಿಸ್ಟ್ ಸಂಸೃತಿಯನ್ನು ಹುಟ್ಟಿಹಾಕುತ್ತವೆ”. ಈ ಮಾತುಗಳು ನಾಗರಿಕ ಸಮಾಜದಲ್ಲಿ ಅತ್ಯಂತ ಕ್ರೌರ್ಯದಿಂದ ಅಸಹಾಯಕ ಹೆಣ್ಣುಮಕ್ಕಳ ಮೇಲೆ ಅನಾಗರಿಕವಾಗಿ ಹಲ್ಲೆ ನಡೆಸಿದ ಆ ಘಾತುಕ ಹುಡುಗರಿಗೂ ಅನ್ವಯಿಸುತ್ತದೆ, ಈ ಅಮಾನವೀಯ,ಅನಾಗರೀಕ ಹಲ್ಲೆಯನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಜನಸಾಮಾನ್ಯರಿಗೂ ಅನ್ವಯಿಸುತ್ತದೆ, ನಮ್ಮ ಕಾಲಘಟ್ಟದಲ್ಲಿ ಈ ತರಹದ ಅನಾಗರಿಕ ಘಟನೆಗಳು ನಡೆದಾಗಲೆಲ್ಲ ಅಸಹಾಯಕತೆಯಿಂದ ಪತ್ರಿಕಾ ಹೇಳಿಕೆಗಳ ಮೂಲಕ, ಲೇಖನಗಳ ಮೂಲಕ ಖಂಡಿಸುವ ನಮಗೂ ಅನ್ವಯಿಸುತ್ತದೆ.
ಈ ಫ಼್ಯಾಸಿಸ್ಟ್ ಧೋರಣೆಗಳಿಂದ ಮುಕ್ತಿಗಾಗಿ ರಾಜಕೀಯ ಚಿಂತಕ ’ಗ್ರಾಮ್ಷಿ’ ಯು “ಸಾಂಸ್ಕೃತಿಕ ಯಜಮಾನ್ಯ”ವನ್ನು ಪ್ರತಿಪಾದಿಸುತ್ತಾನೆ (Cultural hegemony). ಈ ಸಾಂಸ್ಕೃತಿಕ ಯಜಮಾನ್ಯದಲ್ಲಿ ಗ್ರಾಮ್ಷಿಯು ದುಡಿಯುವ ವರ್ಗಗಳು ಕೇವಲ ಆರ್ಥಿಕ ಬೆಳವಣಿಗೆಯ ಮುಖಾಂತರವಾಗಲೀ, ಕೇವಲ ರಾಜಕೀಯ ಅಧಿಕಾರದ ಮುಖಾಂತರವಾಗಲೀ ಒಂದು ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ, ಬದಲಾಗಿ ಈ ದುಡಿಯುವ ಜನತೆ ಸಾಂಸ್ಕೃತಿಕವಾಗಿ ಬುದ್ಧಿಜೀವಿಗಳಾಗಿಯೂ ರೂಪಗೊಂಡಾಗ ಆಗ ವ್ಯವಸ್ಥೆಯಲ್ಲಿ ಸಮತೋಲನ, ಸಹನೆ ಒಡಮೂಡುತ್ತದೆ ಎಂದು ಚಿಂತಿಸುತ್ತಾನೆ. ಇಲ್ಲದೇ ಹೋದಲ್ಲಿ ಪಟ್ಟಭದ್ರ ಹಿತಾಸಕ್ತಿಯುಳ್ಳ ಪ್ರಭುತ್ವವು ತನ್ನದೇ ಆದ ಬೂರ್ಜ್ವಾ ಯಜಮಾನಿಕೆಯನ್ನು ಸಂಸ್ಕೃತಿಯ ಹೆಸರಿನಲ್ಲಿ ಸಮಾಜದ ಮೇಲೆ ಹೇರುತ್ತದೆ ಎಂದು ಗ್ರಾಮ್ಷಿಯ ಖಚಿತವಾದ ಅಭಿಪ್ರಾಯ.
ಇಂದು ದೇಶದಲ್ಲಿ, ನಿನ್ನೆ ಹಾಗೂ ನಿರಂತರವಾಗಿ ಕೆಲವು ವರ್ಷಗಳಿಂದ ಮಂಗಳೂರು ಹಾಗು ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ನಡೆದ ಹಲ್ಲೆಯ ಹಿಂದಿನ ಕ್ರೌರ್ಯದ ಮನಸ್ಥಿತಿಯನ್ನು ಈ ಸಾಂಸ್ಕೃತಿಕ ಯಜಮಾನ್ಯದ ಪರಿಭಾಷೆಯಲ್ಲಿ ಅರ್ಥೈಸಬೇಕು. ನಾವೆಲ್ಲ ನಮ್ಮ ನೆಲದ ಮಾನವೀಯ ಸಂಸ್ಕೃತಿಯನ್ನು, ಜೀವಪರವಾದ ಅವೈದಿಕ ಸಂಸ್ಕೃತಿಯ ಯಜಮಾನ್ಯವನ್ನು ವ್ಯವಸ್ಥೆಯೊಳಗೆ ಚಲನಶೀಲವಾಗಿ, ನಿರಂತರವಾಗಿ ನೆಲೆಗೊಳ್ಳಲು ಪ್ರಯತ್ನಿಸಿಲ್ಲದ ತಪ್ಪಿಗಾಗಿ ಇಂದು ಸಂಘಪರಿವಾರದ ವಿಕೃತಿ ಚಿಂತನೆಯನ್ನು ಮೈಗೂಡಿಸಿಕೊಂಡ ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ನಿರಂತರವಾದ ಹಲ್ಲೆ ಇಂದು ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ. ಇಲ್ಲಿ ಆಧುನಿಕ ಬುದ್ಧಿಜೀವಿಗಳು ಕೇವಲ ಮಾತುಗಾರರಾಗದೆ ಬಹಿರಂಗವಾಗಿ ಸಾಮಾನ್ಯ ಜನತೆಯೊಂದಿಗೆ ಬೆರೆತು ಅವರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸುವಲ್ಲಿ ಸೋತಂತಹ ಜಾಗದಲ್ಲಿ ಸಂಘಪರಿವಾರದ ವಿಕೃತಿ ಚಿಂತನೆಗಳು ಆ ಖಾಲಿಯಾದ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ ಹಾಗೂ ತಮ್ಮ ಯಜಮಾನಿಕೆಯನ್ನು ಪ್ರತಿಷ್ಠಾಪಿಸುತ್ತವೆ. ಇಂದು ಅಸಹಾಯಕ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ ಆ ಅನಾಗರಿಕ ಯುವಕರು, ಹಿಂದೂ ಸಂಘಟನೆಗಳು ಮತ್ತು ಜನಸಾಮಾನ್ಯರು ಆ ದುಷ್ಕೃತ್ಯವನ್ನು ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಕಾರಣ ನಮ್ಮೆಲ್ಲರ ಸಾಂಸ್ಕೃತಿಕ ನಿಷ್ಕ್ರಿಯತೆ ಮತ್ತು ಸಿನಿಕತೆ. ನಾವೆಲ್ಲ ಸಾಂಸ್ಕೃತಿಕವಾಗಿ ನಿಷ್ಕ್ರಿಯಗೊಂಡಾಗ ಸಂಘಪರಿವಾರ ಪ್ರೇರಿತ ಬಲು ಸುಲಭವಾಗಿ ಸರಳೀಕೃತಗೊಂಡ ದೇವರುಗಳನ್ನು, ನಂಬಿಕೆಗಳನ್ನು ಒಳಗೊಂಡ ಏಕರೂಪಿ ಕಲ್ಪಿತ ಹಿಂದೂ ಸಂಸ್ಕೃತಿ ಬಂದು ನೆಲೆಯೂರುತ್ತದೆ. ಇಂತಹ ವ್ಯವಸ್ಥೆಯಲ್ಲಿ ಒಂದು ಬಗೆಯ ಒಪ್ಪಿತ ಗುಲಾಮಿಗಿರಿ ನೆಲೆಗೊಳ್ಳುತ್ತದೆ. ಈ ಗುಲಾಮಿಗಿರಿ ಧರ್ಮವನ್ನು ಸಾರ್ವಜನಿಕವಾಗಿ ಚರ್ಚಿಯನ್ನು ಆರಂಭಿಸಲು ಪ್ರೇರೇಪಿಸುತ್ತದೆ. ಈ ಬಗೆಯ ಪಟ್ಟಭದ್ರ ನೆಲೆಯಲ್ಲಿ ಚರ್ಚೆಗೊಂಡ ಧಾರ್ಮಿಕತೆಯು ಕಡೆಗೆ ಸನಾತನ ಧರ್ಮಗಳ ಸಂಕೇತಗಳಾಗಿ ರೂಪಗೊಂಡು ಕ್ರಮೇಣವಾಗಿ ಜೀವವಿರೋಧಿ ಸಂಕೇತಗಾಗಿ ಬಿಡುತ್ತವೆ. ಆಗಲೇ ಗ್ರಾಮ್ಷಿ ಹೇಳಿದ ಹಾಗೆ ನಮ್ಮ ಕಾಲ ಬುಡದಲ್ಲಿ ನೆಲ ಕುಸಿಯುತ್ತಿದ್ದರೂ ನಾವು ಅದನ್ನು ಅರಿಯಲಾರದಷ್ಟು ಮೈಮರೆತಿರುತ್ತೇವೆ. ಆಗ ಈ ಜೀವ ವಿರೋಧಿ ಕ್ಷುಲ್ಲಕತನದ ಧಾರ್ಮಿಕತೆಯು ಕ್ರಮೇಣವಾಗಿ ಇಡೀ ಸಮಾಜವನ್ನು ವ್ಯಾಪಕವಾಗಿ ಆಕ್ರಮಿಸಿಕೊಂಡುಬಿಡುತ್ತದೆ. ಇದರ ಸಾಕ್ಷಿಯಾಗಿ ಮಂಗಳೂರಿನಲ್ಲಿ ನಡೆದ ಹಲ್ಲೆಯನ್ನು ಜನತೆಯು ಸಮರ್ಥಿಸಿಕೊಳ್ಳುವಂತಹ ಅನಾಗರಿಕ ಮಾನವವಿರೋಧಿ ವ್ಯವಸ್ಥೆ ಸೃಷ್ಟಿಗೊಂಡಿರುವುದು. ಇಲ್ಲಿ ’ದಯವೇ ಧರ್ಮದ ಮೂಲವಯ್ಯ’ ಎಂದು ಹೇಳಿದ ವಚನಕಾರರ ಜೀವಪರ ಮಾತುಗಳು ನಾಮಾವಶೇಷಗೊಳ್ಳುತ್ತವೆ. ಆಗ ಸಮಾಜದಲ್ಲಿ ಪ್ರಗತಿಪರರಾಗುವ ಹಂಬಲ ಮತ್ತು ತುಡಿತ ಕ್ರಮೇಣವಾಗಿ ಕಣ್ಮರೆಯಾಗುತ್ತದೆ.
ಇಂದು ಈ ಬಿಜೆಪಿ ಪಕ್ಷದ ಫ್ಯಾಸಿಸ್ಟ್ ಧೋರಣೆಗೆ, ಅದರ ದಿಕ್ಕು ತಪ್ಪಿದ ಭ್ರಷ್ಟ ಆಡಳಿತಕ್ಕೆ ವ್ಯಾಪಕವಾಗಿ ಖಂಡನೆಗಳು ವ್ಯಕ್ತವಾಗುತ್ತಿದೆ. ಆದರೆ ಈ ಅಸಹನೆ ಒಂದು ಜನಪರ ಚಳುವಳಿಯಾಗಿ ರೂಪಿತವಾಗುತ್ತಿಲ್ಲ. ಇದರ ದುರ್ಲಾಭವನ್ನು ಆಡಳಿತ ಪಕ್ಷಗಳು ಮತ್ತು ಸಮಾಜದ ಲುಂಪೆನ್ ಗುಂಪುಗಳು ಸರಿಯಾಗಿಯೇ ದುರುಪಯೋಗಪಡಿಸಿಕೊಳ್ಳುತ್ತವೆ. ನಾಗರಿಕ ಸಮಾಜದ ಈ ನಿಷ್ಕ್ರಿಯತೆಯ ಫಲವಾಗಿಯೇ ಮಂಗಳೂರಿನಲ್ಲಿ ಇಂತಹ ಅನಾಗರಿಕ ಕೃತ್ಯ ನಡೆದರೂ ಇಲ್ಲಿನ ಸೋ ಕಾಲ್ಡ್ ಸಂಭಾವಿತ ಮುಖ್ಯಮಂತ್ರಿ ನಗುತ್ತಲೇ ಸಮಾಧಾನದಿಂದ ಉತ್ತರಿಸುತ್ತಾರೆ. ಇಲ್ಲಿನ ಭ್ರಷ್ಟ ಗೃಹಮಂತ್ರಿಗಳು ಇದೇನು ಅಂತಹ ದೊಡ್ಡ ವಿಷಯವೇ ಎಂಬಂತೆ ಜಾರಿಕೊಳ್ಳುತ್ತಾರೆ. ಈ ಅಧಪತನಕ್ಕೆ ನಾವೆಲ್ಲ ನಮ್ಮೊಳಗಿನ ಭಯವನ್ನು, ಹಿಂಜರಿಕೆಯನ್ನು ಮತ್ತು ಸಿನಿಕತನವನ್ನು ಕಿತ್ತೊಗೆಯುವ ಮೂಲಕ ಉತ್ತರಿಸಬೇಕಾಗಿದೆ. ಇಲ್ಲಿ ಗಾಂಧಿ ಹೇಳಿದಂತೆ ಅಹಿಂಸೆಯೆಂದರೆ, ಮಾನವೀಯತೆಯೆಂದರೆ ಹಿಂಸಾಕೃತ್ಯಗಳಲ್ಲಿ ತೊಡಗದಿರುವುದಷ್ಟೇ ಅಲ್ಲ, ಈ ಹಿಂಸೆಯನ್ನು ವಿರೋಧಿಸುವುದು ಸಹ ಅಹಿಂಸೆಯಾಗುತ್ತದೆ. ಇಲ್ಲದಿದ್ದರೆ ಈ ಮೌನವು ಆ ದುಷ್ಕೃತ್ಯದಲ್ಲಿ ಪಾಲ್ಗೊಳ್ಳುವಿಕೆಯ ಲಕ್ಷಣವೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಿಪ್ತತೆ ಎಂದರೆ ಮೂಕ ಸಾಕ್ಷಿಗಳು ಮಾತ್ರವಲ್ಲ, ಈ ಹಿಂಸೆಯಲ್ಲಿ ಪಾಲುದಾರರೂ ಸಹ.

ಕೃಪೆ : ವರ್ತಮಾನ : (ಫೋಟೋ : ವಿಜಯ ಕರ್ನಾಟಕ)

Friday, July 27, 2012

ಮಾತ್ಗವಿತೆ-94

ಕಿರಿ ಕಿರಿ ಇಲ್ಲದ ಬದುಕು ಯಾತರದು ಗೆಳೆಯ
ಅರೆಬರೆ ಬೆಂದರೆ ಗಡಿಗೆ ತಡೆದುಕೊಳ್ಳದು ;
ಒಡೆದು ಹೋದಿತು ; ಮತ್ತೇ ಒಂದಾಗದಂತೆ !
ಸರಿಗಳ ಬೆಸ ಮಾಡುವವರ ನಡುವೆ ನಿಂತು
ಖುಷಿಯಿಂದರಿಬೇಕಲ್ಲದೇ ಕುಸಿಯಬಾರದು !

Wednesday, July 25, 2012

ವಡ್ಡರ ವೇದನೆ ; ನನ್ನ ಮಾತು !


'ಉಚಲ್ಯಾ' ಆತ್ಮಕತೆಯ ಮೂಲಕ ನಮ್ಮೆಲ್ಲರಿಗೆ ಪರಿಚಿತವಾಗಿರುವ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡ ಅವರ 'ವಡಾರ ವೇದನಾ' ಎನ್ನುವ ಕಾದಂಬರಿಯನ್ನು 'ವಡ್ಡರ ವೇದನೆ' ಎಂಬುದಾಗಿ ನಾನು ಕನ್ನಡೀಕರಿಸಿದ್ದೇನೆ. (ಕಣ್ವ ಪ್ರಕಾಶನ, ಬೆಂಗಳೂರು : 2011) ಆ ಕಾದಂಬರಿಯಲ್ಲಿ ನಾನು ಹೇಳಿದ ಮಾತುಗಳು ಇಲ್ಲಿವೆ ...

ಸೃಜನ ಮತ್ತು ಸೃಜನೇತರ ಎಂದು ವಿಭಾಗಿಸಿ ಸಾಹಿತ್ಯವನ್ನು ಅಧ್ಯಯನ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಅದನ್ನೇ ಮುಂದಿಟ್ಟುಕೊಂಡು ಅದು ಹೆಚ್ಚು ; ಇದು ಕಡಿಮೆ ಎನ್ನುವಂತಹ ವಾದಗಳಿಗೆ ಜೋತು ಬಿದ್ದರೆ ಅದು ಕೇವಲ ಒಣ ಹರಟೆಯಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅನುವಾದವನ್ನು ಸೃಜನೇತರ ಸಾಹಿತ್ಯವೆಂದು ಅಲ್ಲಗಳೆಯುವ, ಅನನುಮಾನಿಸುವ, ಅವಹೇಳನ ಮಾಡುವ, ಅಣಕಿಸಿ ಕಿಚಿಪಿಚಿ ಎನ್ನುವವರಿಗೆ ಈ ಮಾತನ್ನು ಅನ್ವಯಿಸಿ ಹೇಳಲಾಗಿದೆ. ಅನುವಾದವೂ ಒಂದು ಕಲೆಯಾಗಿರುವಾಗ ಅದನ್ನು ಸೃಜನೇತರ ಎನ್ನುವುದು ಏಕೆ ಎಂಬುದೇ ತಿಳಿಯುತ್ತಿಲ್ಲ. ಅನುವಾದವೂ ಕೂಡ ಒಂದು ಸೃಜನಶೀಲವಾದ ಸಾಹಿತ್ಯವೇ ಆಗಿದೆ. ಸ್ವತಃ ಬರೆಯುವುದು ಶ್ರೇಷ್ಟವೆಂದೂ ಬೇರೆ ಭಾಷೆಯಿಂದ ಅನುವಾದ ಮಾಡುವುದು ಕನಿಷ್ಟವೆಂದು ಪರಿಭಾವಿಸುವಿಕೆ ಕೇವಲ ಮೂರ್ಖತನವಾಗುತ್ತದೆ ಅಷ್ಟೆ.
ಅನುವಾದವನ್ನು ಯಾರು ಬೇಕಾದರೂ ಮಾಡಬಹುದು ಎಂಬ ಕಲ್ಪನೆಯೇ ತಪ್ಪು. ಒಬ್ಬ ಅನುವಾದಕ ತನ್ನ ಸಂಸ್ಕೃತಿಯ ಜೊತೆಗೆ ಅನುವಾದಿಸಬೇಕಾದ ಕೃತಿಯಲ್ಲಿರುವ ಸಂಸ್ಕೃತಿಯನ್ನೂ ಅರಿಯಬೇಕಾಗುತ್ತದೆ. ಕೇವಲ ಅರಿಯುವುದು ಮಾತ್ರವಲ್ಲ ; ಅದರಲ್ಲಿ ಪರಕಾಯ ಪ್ರವೇಶ ಪಡೆಯಬೇಕಾಗುತ್ತದೆ. ಭಿನ್ನ ಸಂಸ್ಕೃತಿ ಮತ್ತು ಭಾಷೆಯ ಜಾಯಮಾನವನ್ನು ಅರಿಯದೇ ಮಾಡುವ ಅನುವಾದ, ಅನುವಾದ ಎನಿಸಿಕೊಳ್ಳಲಾರದು. ಒಳ್ಳೆಯ ಅನುವಾದ ಈ ಗ್ರಹಿಕೆಯನ್ನು ಅನುಸರಿಸುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಾಹಿತ್ಯ ಅನುವಾದವಾಗುವಾಗ ಮೂಲ ಲೇಖಕನ ಅನುಭವಗಳ ಮೂಲವನ್ನೂ ತಿಳಿದುಕೊಳ್ಳುವ ಪ್ರಯತ್ನವನ್ನು ಅನುವಾದಕ ಮಾಡಬೇಕಾಗಿರುತ್ತದೆ.
ಮೂಲಕೃತಿಯ ಸಂಸ್ಕೃತಿಯ ಅರಿವು, ಪ್ರಾದೇಶಿಕ, ಸಾಮಾಜಿಕ, ಮತ್ತು ಜನಾಂಗೀಯ ಭಾಷೆಗಳ ಅಧ್ಯಯನ ಮೊದಲಾದ ಅಂಶಗಳನ್ನು ಒಬ್ಬ ಅನುವಾದಕ ಹೊಂದಿದ್ದು, ಸ್ವಭಾಷೆಯಲ್ಲಿ ಅದನ್ನು ತನ್ನದಾಗಿಸಿಕೊಳ್ಳುವ ಕಾರ್ಯತತ್ಪರತೆ ಮೊದಲಾದ ಅಂಶಗಳು ಒಬ್ಬ ಅನುವಾದಕನಲ್ಲಿ ಇದ್ದರೆ ಉತ್ಕೃಷ್ಟವಾದ ಅನುವಾದವೊಂದು ಹೊರಬರಲು ಸಾಧ್ಯವಾಗುತ್ತದೆ. ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿಯೇ ನಾನು ಮರಾಠಿಯನ್ನು ಕನ್ನಡೀಕರಿಸುತ್ತೇನೆ.
ಮರಾಠಿ ದಲಿತ ಸಾಹಿತ್ಯದಲ್ಲಿ ಪ್ರಮುಖವಾಗಿರುವ ಲಕ್ಷ್ಮಣ ಗಾಯಕವಾಡ ಅವರನ್ನು ನಾನು ಭೇಟಿಯಾದಾಗ ಅವರು ವೊಟ್ಟವೊದಲು ಸೂಚಿಸಿದ್ದು ಅವರ ಆತ್ಮಚರಿತ್ರೆ ‘ಉಚಲ್ಯಾ’ವನ್ನು ಮತ್ತೊಮ್ಮೆ ಅನುವಾದಿಸಬೇಕೆಂದು. ಆದರೆ ಈಗಾಗಲೇ ಅದು ಕನ್ನಡಕ್ಕೆ ಬಂದಿರುವುದರಿಂದ ನಾನು ನಿರಾಕರಿಸಿದೆ.  ಆದರೂ ಅವರು ಒತ್ತಾಯ ಮುಂದುವರಿದೇ ಇತ್ತು. ಈಗಲೂ ಫೋನಿಸಿದಾಗ ಅವರು ಅದನ್ನೇ ಹೇಳುತ್ತಾರೆ. ಆಗ ನಾನೇ ಒಂದು ಪ್ರಸ್ತಾಪ ಮಾಡಿ ‘ಉಚಲ್ಯಾ’ ಬಂದ ನಂತರ ಆದ ಅನುಭವಗಳನ್ನೇ ಬರೆಯಿರಿ ; ಬೇಕಾದರೆ ನಾನು ಅದನ್ನು ‘ಆಪ್ಟರ್ ಉಚಲ್ಯಾ’ ಎಂದು ಹೆಸರಿಸಿ ಅನುವಾದ ಮಾಡುತ್ತೇನೆ ಎಂದೆ. ಆಗ ಅವರು ತಮ್ಮ ಮತ್ತೊಂದು ಕೃತಿ, ‘ವಡಾರ ವೇದನಾ’ ಅನುವಾದ ಮಾಡುವಂತೆ ಹೇಳಿದರು. ನಾನು ಖುಷಿಯಿಂದಲೇ ಒಪ್ಪಿಕೊಂಡೆ.
ವಡಾರ ವೇದನಾ ಕಾದಂಬರಿಯನ್ನು ನಾನು ಓದುತ್ತ ಹೋದಂತೆಲ್ಲ ಮೊದ ಮೊದಲು ನನಗೆ ರೋಮಾಂಚನವೇ ಆಯಿತು. ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟಿನ ವಡ್ಡರ ಸಮಾಜದ ಬಗ್ಗೆ ಇರುವ ಕಾದಂಬರಿಯಲ್ಲಿ ಆ ಸಮಾಜದ ಸಂಸ್ಕೃತಿಯ ಚಿತ್ರಣವೂ ಸೇರಿದೆ. ಅನುವಾದಕ್ಕಿಳಿದಾಗ ಒಂದಿಷ್ಟು ಹಿಂಜರಿಕೆ ಕೂಡ ಆಯಿತು. ಯಾಕೆಂದರೆ ಕಾದಂಬರಿಯಲ್ಲಿ ಹೆಚ್ಚಾಗಿ ಬಳಕೆಯಾಗಿದ್ದು ಗ್ರಾಮ್ಯ ಮರಾಠಿ ಭಾಷೆ ಅನ್ನುವುದಕ್ಕಿಂತ ತಳಮಟ್ಟದ ಸಮಾಜವೊಂದರ ಆಡುನುಡಿ ಎನ್ನುವುದು ಸಮಂಜಸವಾದೀತು. ಗೊಂದಲ ಹುಟ್ಟಿಸುವ ಕೆಲ ಕ್ಲಿಷ್ಟ ಪದಗಳು ಯಾವ ಡಿಕ್ಷನರಿಯಲ್ಲಿ ಹುಡುಕಿದರೂ ಸಿಗಲಾರವು. ಜೊತೆಗೆ ಅಲ್ಲಲ್ಲಿ ಮರಾಠಿ ಮಿಶ್ರಿತ ವಡ್ಡರ ಸಮಾಜದ ತೆಲುಗು ಭಾಷೆ ಬೇರೆ !
ನಾನು ಹಠ ಬಿಡಲಿಲ್ಲ ; ಸೋಲು ಒಪ್ಪಿಕೊಳ್ಳುವ ಜಾಯಮಾನವೇ ನನ್ನದಲ್ಲ.  ಕನ್ನಡ-ಮರಾಠಿ ಗಡಿಭಾಗದವನಾದ ನನಗೆ ಮರಾಠಿ ಗ್ರಾಮ್ಯದ ಅನುಭವ ಇತ್ತು. ಜನಾಂಗೀಯ ಭಾಷೆಯ ಒಡನಾಟವೂ ಇತ್ತು. ಜೊತೆಗೆ ತೆಲುಗು ಭಾಷೆಯನ್ನೂ ಅಲ್ಪ-ಸ್ವಲ್ಪ ಕಲಿತಿದ್ದೆ. ಯಾರಾದರೂ ಸಿಕ್ಕರೆ ‘ಏಮ ಚೆಪ್ಪತಾವು ಚೆಪ್ಪು’ ಎಂದೇ ಮಾತನ್ನು ಆರಂಭಿಸುವ ಪರಿಪಾಠವೂ ಬೆಳೆದು ಬಂದಿತ್ತು. ಹೀಗೆ ಎಲ್ಲವೂ ಸಕಾರಾತ್ಮಕ ಅಂಶಗಳಿದ್ದುದ್ದರಿಂದಲೇ ನಾನು ತುಂಬ ಎದೆಗಾರಿಕೆಯಿಂದಲೇ ಅನುವಾದಕ್ಕೆ ಇಳಿದೆ. ಎಲ್ಲ ಸರಾಗವಾಯಿತು ; ಸಾಂಗವಾಗಿ ನೆರವೇರಿತು. ಅನುವಾದಿಸಿದ ಮೇಲೆ ಮತ್ತೊಮ್ಮೆ ಓದಿ ತಿದ್ದುಪಾಟು ಮಾಡಿದೆ. ಮಹಾರಾಷ್ಟ್ರ ನೆಲದಲ್ಲಿ ನಡೆದ ಕನ್ನಡ ಕಥೆಯೇನೋ ಎನ್ನುವಷ್ಟರ ಮಟ್ಟಿಗೆ ಅದನ್ನು ಕಟ್ಟಿದ್ದೇನೆ ಎಂಬ ಸಾರ್ಥಕ ಭಾವವೂ ಮನದಲ್ಲಿ ಸುಳಿದಾಡಿತು.


(ಈ ಅನುವಾದಿತ ಕಾದಂಬರಿಗೆ ಅಮೂಲ್ಯವಾದ ಮುನ್ನುಡಿಯನ್ನು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಲ್ಲೇಪುರಂ ವೆಂಕಟೇಶ ಅವರು ಬರೆದಿದ್ದಾರೆ)

Sunday, July 22, 2012

ಮರಾಠಿ ಹಿರಿಯ ಬರಹಗಾರ ಉತ್ತಮ ಕಾಂಬಳೆ

ಡಾ. ಸಿದ್ರಾಮ ಕಾರಣಿಕ

(ಮರಾಠಿಯ ಶ್ರೇಷ್ಟ ಹಿರಿಯ ಸಾಹಿತಿ, ವಿಚಾರವಾದಿ, ವಿಮರ್ಶಕ ಉತ್ತಮ ಕಾಂಬಳೆಯವರ 'ದೇವದಾಸಿ ಮತ್ತು ಬೆತ್ತಲೆ ಸೇವೆ' ಕೃತಿಯನ್ನು ಮರಾಠಿಯಿಂದ ಅನುವಾದ ಮಾಡಿದಾಗ ನಾನು ಬರೆದ ಮೊದಲ ಮಾತುಗಳು)


“ಹಲೋ ಸರ್... ನಾನು, ಧಾರವಾಡದಿಂದ ಡಾ. ಸಿದ್ರಾಮ ಕಾರಣಿಕ’”
“ಹೇಳ್ರಿ ಸಿದ್ರಾಮ, ಆರಾಮಾಗಿದ್ದೀರಿ ?”
“ಆರಾಮಾಗಿದ್ದೇನ್ರಿ ಸರ್. ನಿಮಗ ಅಭಿನಂದನೆಗಳು ಸರ್”
“ಥ್ಯಾಂಕ್ಸ್... ಭಾಳ ಸಂತೋಷ ಆತು”
“ಇದು ನಮಗೆ ಸಂದ ಜಯ ಸರ್”
“ಹೌದ... ಹೌದ್ರಿ... ಥ್ಯಾಂಕ್ಯೂ ಥ್ಯಾಂಕ್ಯೂ ... ಏಳನೇ ತಾರೀಕಕ ನಾ ಬೆಳಗಾಂವಕ ಬರಾಕತ್ತೇನಿ. ಸಾಧ್ಯ ಆದ್ರ ಬರ್ರಿ”
“ಬರತೇನ್ರಿ ಸರ್. ತಮ್ಮ ಪುಸ್ತಕದ ಅನುವಾದ ಮುಗಿದಿದೆ ಸರ್. ಡಿಸೆಂಬರ್ದೊಳಗ ಬಿಡುಗಡೆ ಆಗ್ತೇತಿ.”
“ಹೌದಾ ! ಭಾಳ ಖುಷಿ ಆತು ಥ್ಯಾಂಕ್ಯೂ ...”
“ಸರ್, ಮತ್ತೊಮ್ಮಿ ನಿಮಗ ಅಭಿನಂದನೆಗಳು”
“ಥ್ಯಾಂಕ್ಯೂ ಥ್ಯಾಂಕ್ಯೂ ...”
*****
ಇದು ಉತ್ತಮ ಕಾಂಬಳೆಯವರು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರೊಂದಿಗೆ ನಾನು ಮಾತನಾಡಿದ ಪ್ರಸಂಗ. ಹೌದು ಉತ್ತಮ ಕಾಂಬಳೆಯವರು ತುಂಬ ಎತ್ತರದ ವ್ಯಕ್ತಿತ್ವ ಉಳ್ಳವರು. ತಕ್ಷಣವೇ ಆತ್ಮೀಯರಾಗಿ ಬಿಡುತ್ತಾರೆ. ಮರಾಠಿ ಸಾಹಿತ್ಯದಲ್ಲಿ ತುಂಬ ಹೆಸರು ಮಾಡಿರುವ ಅವರ ನಯ-ವಿನಯ, ಆತ್ಮೀಯತೆ, ವಿಚಾರಶೀಲತೆ, ತೀವ್ರವಾದ ವೈಚಾರಿಕತೆ ದಂಗು ಬಡಿಸುವಂಥದ್ದು.
ಸುಮಾರು ತಿಂಗಳಗಳ ಹಿಂದೆ ಉತ್ತಮ ಕಾಂಬಳೆಯವರ ‘ದೇವದಾಸಿ ಆಣೀ ನಗ್ನಪೂಜಾ’ ಎಂಬ ಸಂಶೋಧನಾತ್ಮಕ ಕೃತಿಯನ್ನು ನಾನು ಅನುವಾದ ಮಾಡತೊಡಗಿದ್ದೆ. ಆಗಲೂ ಅವರೊಂದಿಗೆ ಮಾತನಾಡಿದ್ದೆ. ನನ್ನ ಆಗ್ರಹದಿಂದ ತಮ್ಮ ಫೋಟೋವನ್ನೂ, ಬಯೋಡಾಟಾವನ್ನೂ ನನಗೆ ಕಳುಹಿಸಿ ಕೊಟ್ಟರಲ್ಲದೇ ಮುಂಬಾಯಿಯ ಪ್ರಕಾಶನದ ವತಿಯಿಂದ ಮತ್ತೊಂದು ಕೃತಿಯ ಪ್ರತಿಯನ್ನೂ ಚಿತ್ರಗಳನ್ನು ಒಳಗೊಂಡ ಸಿ.ಡಿ.ಯನ್ನೂ ಕಳುಹಿಸಿಕೊಟ್ಟರು. ಅವರ ಆತ್ಮೀಯತೆಗೆ, ಸಹಕಾರಕ್ಕೆ ಬರೆಯಬೇಕೆಂದರೂ ಪದಗಳು ದಕ್ಕುವುದಿಲ್ಲ !
ಮೂಲತಃ ಕರ್ನಾಟಕದವರೇ ಆದ ಉತ್ತಮ ಕಾಂಬಳೆಯವರು ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗುಪ್ಪಿ ಎಂಬ ಗ್ರಾಮ ಅವರ ಹುಟ್ಟೂರು. ತೀರ ಬಡತನದ ಕುಟುಂಬ ಶಾಲೆ ಕಲಿಯಬೇಕೆಂಬ ಅವರಿಗೆ ಆರ್ಥಿಕ ಅಡಚಣೆ ತುಂಬ ಇತ್ತು. ಕೆಲವು ದಿನ ಹಮಾಲಿ ಮಾಡಿದರು ; ಕೆಲವು ದಿನ ಗೋಡೆ ಕಟ್ಟುವ ಗೌಂಡಿಗಳ ಕೈ ಕೆಳಗೆ ಆಳಾಗಿ ದುಡಿದರು ; ದಿನಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡದಾಗಿ ಒದರುತ್ತ ಮಾರುವ ಹುಡುಗ ಆಗಿದ್ದರು ! ಸೇಲ್ಸ್ಮನ್ ಆಗಿದ್ದವರು ; ಕೆಲವೊಂದಿಷ್ಟು ದಿನ ಯಾವುದೋ ಡಾಕ್ಟರರಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡಿದ್ದೂ ಇದೆ ! ಇಷ್ಟೆಲ್ಲ ಮಾಡುತ್ತಲೇ ಶಿಕ್ಷಣ ಪೂರೈಸಿದ ಉತ್ತಮ ಕಾಂಬಳೆಯವರ ಬದುಕು ಹೋರಾಟದ ಹಾದಿ. ಅವರು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಾಗ ಅನುಭವಿಸಿದ ಆನಂದ ಹೇಳತೀರದಷ್ಟು ! ಯಾಕೆಂದರೆ ಅವರ ಮನೆತನದಲ್ಲಿಯೇ ಶಾಲೆ ಕಲಿತ ವೊದಲ ವ್ಯಕ್ತಿ ಅವರು !
ಬದುಕಿನ ಹಾದಿಯನ್ನು ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ಒಂದು ದಿನಪತ್ರಿಕೆಯ ಸಾಮಾನ್ಯ ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡ ಉತ್ತಮ ಕಾಂಬಳೆಯವರು ಇಂದು ಮರಾಠಿಯ ಪ್ರಮುಖ ದಿನಪತ್ರಿಕೆ `ಸಕಾಳ’ ಸಮೂಹದ ಪ್ರಧಾನ ಸಂಪಾದಕರಾಗಿದ್ದಾರೆ ! ಹತ್ತು ಪೈಸೆ ಕಮಿಶನ್ ಸಿಗುತ್ತದೆ ಎಂದು ಪತ್ರಿಕೆಗಳ ಕಟ್ಟನ್ನು ಹಿಡಿದು ಒದರುತ್ತ ಪತ್ರಿಕೆ ಮಾರುತ್ತಿದ್ದ ಹುಡುಗನೊಬ್ಬ ಇಂದು ಪ್ರಮುಖ ಪತ್ರಿಕೆಯೊಂದ ಮುಖ್ಯಸ್ಥನಾಗುತ್ತಾನೆ ಎಂದರೆ ಅದಕ್ಕೆ ಆತನ ಪ್ರಯತ್ನ, ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯನ್ನು ಸಾಧಿಸುವ ಛಲವೇ ಕಾರಣ. ಇದು ಉತ್ತಮ ಕಾಂಬಳೆಯವರ ಬದುಕಿನ ಪರಿ. ಅಷ್ಟೇ ಅಲ್ಲ ಸಾಹಿತ್ಯ ಕ್ಷೇತ್ರದಲ್ಲೂ ಅವರ ಕೃಷಿ ಬಹುದೊಡ್ಡದು. ಇದೀಗ  81ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರೆ ಅವರ ಕಾರ್ಯವ್ಯಾಪ್ತಿ ಕಣ್ಮುಂದೆ ಸುಳಿಯಬಲ್ಲದು.
ಇಲ್ಲಿಯವರೆಗೆ ಎರಡು ಕಾದಂಬರಿಗಳು, ಐದು ಕಥಾಸಂಕಲನಗಳು, ಐದು ಸಂಶೋಧನಾತ್ಮಕ ಕೃತಿಗಳು, ಎರಡು ಕಾವ್ಯ ಸಂಕಲನಗಳು, ಏಳು ಸಂಪಾದಿತ ಕೃತಿಗಳು, ತಮ್ಮ ಆತ್ಮಕತೆಯನ್ನೇ ಹೊಂದಿರುವ ಮೂರು ಕೃತಿಗಳು ಹೀಗೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಉತ್ತಮ ಕಾಂಬಳೆಯವರು ರಚಿಸಿದ್ದಾರೆ ಎಂದರೆ ಬರವಣಿಗೆಯ ಅಗಾಧತೆ ಅರಿವಿಗೆ ನಿಲುಕುತ್ತದೆ.
ಪತ್ರಕರ್ತನಾಗಿ 23 ಮತ್ತು ಸಾಹಿತಿಯಾಗಿ 30 ಒಟ್ಟು ನಲವತ್ಮೂರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸಧ್ಯ ಮಹಾರಾಷ್ಟ್ರದ ನಾಶಿಕದಲ್ಲಿ `ಚಾರ್ವಾಕಾಶಯ’ ಹೆಸರಿನ ಮನೆಯಲ್ಲಿ ವಾಸವಾಗಿರುವ ಉತ್ತಮ ಕಾಂಬಳೆಯವರು ಸವ್ಮೋಹಕ ವ್ಯಕ್ತಿತ್ವದವರಾಗಿದ್ದಾರೆ.

Saturday, July 21, 2012

ಜಾತಿಸೂತಕ ಆತಂಕಗಳು !


ಡಾ. ಸಿದ್ರಾಮ ಕಾರಣಿಕ
ಭಾರತೀಯ ಸಮಾಜದಲ್ಲಿ ಸನಾತನಾವಾದಿ ಬೇರುಗಳು ಸಡಿಲುಗೊಳ್ಳುವಂತೆ ಘರ್ಜಿಸಿದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು. ಅವರ ವೈಚಾರಿಕ ಸಿದ್ಧಾಂತಗಳು, , ವಸ್ತುನಿಷ್ಟ ವಿಮರ್ಶೆಗಳು, ವೈಜ್ಞಾನಿಕ ವ್ಯಾಖ್ಯಾನಗಳು ಭಾರತ ದೇಶದ ವೈದಿಕ ಸಂಪ್ರದಾಯವನ್ನು ಅಲುಗಾಡಿಸಿದ್ದು ನಿಜ. ಆದರೆ ವರ್ತಮಾನದಲ್ಲಿ ನಿಂತುಕೊಂಡು ಇಂದಿನ ವ್ಯವಸ್ಥೆಯನ್ನು ಅವಲೋಕಿಸಿದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದ ಸಾರ್ಥಕತೆಗೆ ಅಡ್ಡಗಾಲಾಗಿ ನಿಂತ ದೊಡ್ಡ ಪಡೆಯೊಂದು ರೂಪ ಬದಲಾಯಿಸುತ್ತ ಮುಂದುವರಿಯುತ್ತಿರುವ ವಾಸ್ತವ ಕಣ್ಣಿಗೆ ರಾಚುತ್ತದೆ.
ಜಾತಿಯನ್ನು ಮೂಲವಾಗಿಟ್ಟುಕೊಂಡು ಸದಾ ಸಂಶಯ ಮತ್ತು ಅಪನಂಬಿಕೆಗಳ ಮೂಲಕ ದಲಿತರನ್ನು ಇಂದಿಗೂ ವ್ಯವಸ್ಥಿತವಾಗಿ ತುಳಿಯುವ ಹುನ್ನಾರಗಳು ನಿರಾಂತಕವಾಗಿ ನಿರಂತರವಾಗಿ ನಡೆಯುತ್ತಿರುವುದು ಈ ದೇಶದ ಸನಾತನಿ ಸಂಪ್ರದಾಯದ ಶೋಕಿಯಾಗುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಆತಂಕಕಾರಿಯಾಗಿದೆ. ಮನುಷ್ಯನನ್ನು, ಮನುಷ್ಯನನ್ನಾಗಿ ಪರಿಗಣಿಸದ ಧರ್ಮಗಳಿಗೆ ಜೋತು ಬಿದ್ದ ಮಂದಿಯು ಹೊಸ ಹೊಸ ಪರಿಕ್ರಮಗಳ ಮೂಲಕ ಜಾತಿ ವ್ಯವಸ್ಥೆಯನ್ನು ಚಾಲ್ತಿಯಲ್ಲಿ ಇಟ್ಟಿರುವುದು ವಾಸ್ತವದ ವರ್ತಮಾನ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಬದಲಾವಣೆಗಳಿಗೂ ಆಸ್ಪದ ಇರಬಾರದು ಎಂಬ ಆಸಕ್ತಿಯನ್ನೇ ಇಟ್ಟುಕೊಂಡು ವರ್ತಿಸುವುದನ್ನು ಕಂಡುಂಡು ವಿವೇಚಿಸಿದಾಗ ವಿಷಾದ ತುಂಬಿಕೊಳ್ಳುತ್ತಲೇ ಆವೇಶದ ವಿಚಾರಗಳೂ ಮನದಲ್ಲಿ ಮೂಡುತ್ತವೆ.
ಪಾಶ್ಚಾತ್ಯರ ಪ್ರಭಾವ ಮತ್ತು ಸಂಪರ್ಕದಿಂದಾಗಿ ಭಾರತೀಯ ಸಮಾಜದಲ್ಲಿ ತುಂಬ ಕ್ರಾಂತಿಕಾರಿ ಎನಿಸುವಷ್ಟರಮಟ್ಟಿಗಿನ ಬದಲಾವಣೆಗಳೇನೋ ಆಗಿವೆ ನಿಜ. ಆದರೆ ಭಾರತೀಯ ಮನಸ್ಸುಗಳು ಮಾತ್ರ ಬದಲಾಗಿಲ್ಲ. ತೋರಿಕೆಯ ಹೂಟಗಳು ಹಲವು ಒಳಗೊಳಗೇ ಜಾತಿಯನ್ನು ಬಲವಾಗಿ ಹಿಡಿದುಕೊಂಡು ಹಠ ಹಿಡಿದಂತೆ ಕುಳಿತುಕೊಂಡಿರುವುದು ಸುಳ್ಳಲ್ಲ. ‘ಜಾತಿಯಿಂದ ಹಿಂದೂಗಳ ನೀತಿ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿದೆ ; ಹೃದಯ ವೈಶಾಲ್ಯತೆಯನ್ನು ಹಾಳು ಮಾಡಿದೆ ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ  ಮಾಡಿದೆ. ಹಿಂದುವಿನ ಸಮಾಜ  ಹಾಗೂ ಹೊಣೆಗಾರಿಕೆ ಅವರ ಜಾತಿಗೆ ಸೀಮಿತವಾದವು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ’ (ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು : ಸಂಪುಟ-5 : ಪು-) ಎನ್ನುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಯಾಕೆ ಮತ್ತೇ ಮತ್ತೇ ಪ್ರಸ್ತುತವಾಗುತ್ತವೆ ಎಂದರೆ ಪರಿಸ್ಥಿತಿಗಳು ಹಾಗಿವೆ. ಜಾತಿಯೆಂಬುದು ಒಂದು ಸೂತಕ ಎಂದು ಭಾವಿಸಿರುವ ಬಹಳಷ್ಟು ಮಂದಿ, ಆ ಜಾತಿಯೇ ಬಹಳಷ್ಟು ಅವಘಡಗಳನ್ನು ಸೃಷ್ಟಿಸಿದೆ ಎಂಬುದನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ.
ಶಿಕ್ಷಣದ ಹಕ್ಕು ದೊರೆತಾಗ ದಲಿತರು ಒಂದಿಷ್ಟು ಅತ್ತ ವಾಲಿಕೊಂಡು ಒಂದಿಷ್ಟು ಕಲಿತು, ಉದ್ಯೋಗ ಮಾಡುತ್ತ ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಳ್ಳಲು ದಾಪುಗಾಲು ಇಡುತ್ತಿರುವುದು ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಂಪಾದಿಸುತ್ತಿರುವುದನ್ನು ಗಮನಿಸಿದಾಗ ಭಾರತೀಯ ಸಮಾಜವು ನಿಜವಾಗಿಯೂ ಬದಲಾಗಿಯೇ ಬಿಟ್ಟಿತು ಎಂದು ಭ್ರಮಿಸಿದವರೂ ಸಂಭ್ರಮಿಸಿದವರೂ ಇದ್ದಾರೆ. ಆದರೆ ವಾಸ್ತವ ಹಾಗಿಲ್ಲ ಎಂದರೆ ಅಚ್ಚರಿಯಾದೀತು ! ದಲಿತನೊಬ್ಬ ಶಿಕ್ಷಣ ಪಡೆದುಕೊಂಡು ಉನ್ನತ ಹಂತ ತಲುಪಿದರೂ ವೈದಿಕಶಾಹಿ ಹೇರಿದ ಜಾತಿ ಸೂತಕ ಆತನನ್ನು ಬಿಡಲಾರದು. ಈ ದೇಶದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಆತನೊಡನೆ ಗೌರವಪೂರ್ವಕವಾಗಿ ಸಂಪರ್ಕ ಸಾಧಿಸುತ್ತಾರೆ ಎಂಬುದು ನಿಜವಾಗಿದ್ದರೂ ಅವರ ಮನದ ಮೂಲೆಯಲ್ಲಿ ಜಾತಿ ಮನೆ ಮಾಡಿ ಕುಳಿತ್ತಿರುತ್ತದೆ. ಹೊರಗೆ ಏನೆಲ್ಲ ಮಾಡಿದರೂ ದಲಿತನೊಬ್ಬ ತಮ್ಮ ಮನೆಗೆ ಬಂದಾಗ ಮೇಲ್ಜಾತಿಯವರೆನಿಸಿಕೊಂಡವರ ಚಟುವಟಿಕೆಗಳು ಆಚರಣೆಗಳ ಹೆಸರಿನಲ್ಲಿ ‘ದೂರ’ ಇಡುವ ವರ್ತನೆಗಳಲ್ಲಿ ವ್ಯಕ್ತವಾಗುತ್ತವೆ. ಮನಸ್ಸುಗಳು ಇಂದಿಗೂ ಬದಲಾಗಿಲ್ಲ ಎನ್ನುವುದು ಈ ಕಾರಣಕ್ಕಾಗಿಯೇ.
ಇದು ಶಿಕ್ಷಣ ಪಡೆದ, ಉದ್ಯೋಗದಲ್ಲಿರುವ, ಆರ್ಥಿಕವಾಗಿ ಸಬಲರಾಗಿರುವ, ಒಳ್ಳೆಯ ಬದುಕನ್ನು ತಮ್ಮದಾಗಿಸಿಕೊಂಡಿರುವ ದಲಿತರನ್ನು ನಡೆಯಿಸಿಕೊಳ್ಳುವ ಪರಿಯಾದರೆ ಅಕ್ಷರದ ಅರಿವಿಲ್ಲದ, ಆರ್ಥಿಕವಾಗಿ ತೀರ ಕೆಳಮಟ್ಟದಲ್ಲಿರುವ ದಲಿತರು ಈ ದೇಶದಲ್ಲಿ ಬಹುಸಂಖ್ಯಾತರಾಗಿದ್ದು, ಇವರ ಬದುಕು ಇಂದಿಗೂ ಬದಲಾವಣೆಯಾಗಿಲ್ಲ. ಮೇಲ್ಜಾತಿಯವರೆನಿಸಿಕೊಂಡವರ ಶೋಷಣೆಗೆ ಇವರು ನಿರಂತರವಾಗಿ ಬಲಿಯಾಗುತ್ತಲೇ ಇದ್ದಾರೆ. ಇನ್ನೂ ಕೆಲವು ಕಡೆ ಅಸ್ಪೃಶ್ಯತೆ ತುಂಬ ಘೋರವಾಗಿಯೇ ಆಚರಣೆಯಲ್ಲಿದೆ. ಕುಡಿಯುವ ನೀರು, ತಿನ್ನುವ ಅನ್ನ, ಪೂಜಿಸುವ ದೈವಗಳ ಸಂದರ್ಭದಲ್ಲಿ ಇನ್ನೂ ಮೇಲು-ಕೀಳುತನ, ಮಡಿ-ಮೈಲಿಗೆಗಳು ಕಾಣಿಸಿಕೊಳ್ಳುತ್ತಲೇ ಇವೆ. ದಿನವೂ ದಿನಪತ್ರಿಕೆ ಓದುವವರಿಗೆ, ಟ.ವಿ. ನೋಡುಗರಿಗೆ ಈ ಸುದ್ದಿಗಳ ಮಾಹಿತಿ ಇದ್ದೇ ಇದೆ ; ಇದಕ್ಕೆ ಬೇರೊಂದು ಉದಾಹರಣೆ ನೀಡುವ ಅವಶ್ಯಕತೆಯಿಲ್ಲ. ದಲಿತರನ್ನು ಬಹಿಷ್ಕಾರ ಹಾಕುವುದು, ಸಾರ್ವಜನಿಕವಾಗಿ ಅವಮಾನಿಸುವುದು, ಗುಂಡಾಗಿರಿ ಮಾಡಿ ಹಲ್ಲೆ ಮಾಡುವುದು, ನಿರ್ದಾಕ್ಷಣ್ಯವಾಗಿ ದಲಿತರ ಮಾರಣಹೋಮ ನಡೆಸುವುದು, ದಲಿತ ಮಹಿಳೆಯರನ್ನು ಬೆತ್ತಲೆ ಮಾಡುವುದು ಇಲ್ಲವೆ ಅತ್ಯಾಚಾರ ಮಾಡುವುದು ಇನ್ನೂ ನಿರಂತರವಾಗಿವೆ ಎಂದರೆ ಪ್ರಜಾಪ್ರಭುತ್ವದ ಈ ದೇಶದ ಪ್ರಜೆಗಳಿಗೆ ನಾಚಿಕೆಯಾಗಬೇಕು !
ಇವೆಲ್ಲವುಗಳ ನಡುವೆ ಮಾನಸಿಕ ಗುಲಾಮಗಿರಿಯನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವ ದಲಿತರೂ ಇದ್ದಾರೆ. ಅವರು ಕಲಿತವರಿರಬಹುದು, ಸ್ಥಿತಿವಂತರಿರಬಹುದು ಅಥವಾ ಏನೇನೂ ಇಲ್ಲದವರೂ ಆಗಿರಬಹುದು. ಈ ಮಾನಸಿಕ ಗುಲಾಮಗಿರಿಗೆ ಈಡಾಗಿರುವ ದಲಿತರು ಸಾಮಾಜಿಕ ಬದಲಾವಣೆಯನ್ನು ಬಯಸುವ ಸಂದರ್ಭದಲ್ಲಿ ತುಂಬ ಅಪಾಯಕಾರಿ. ತಮ್ಮದೇ ತಪ್ಪು ಎಂಬ ತಲಾಂತರದ ಕರ್ಮ ಸಿದ್ಧಾಂತಕ್ಕೆ ಬಲಿಯಾಗಿರುವ ಇಂಥ ದಲಿತರನ್ನು ಎಚ್ಚರಗೊಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ. ಯಾಕೆಂದರೆ ಮೇಲ್ಜಾತಿಯವರೆನಿಸಿಕೊಂಡವರೊಂದಿಗೆ ಗುರುತಿಸಿಕೊಳ್ಳುವ ಬಲಿತ ದಲಿತರೂ ಭೂಮಿತತ್ವವನ್ನು ಮರೆಯುತ್ತಾರೆ ಮತ್ತು ತಾವು ದಲಿತರೆಂದು ಹೇಳಿಕೊಳ್ಳಲು ಸಹ ಸಂಕೋಚಪಡುತ್ತಾರೆ. ಕನಿಷ್ಟ ದಲಿತರನ್ನು ಆದಷ್ಟು ದೂರ ಇಡುವ ಪ್ರಯತ್ನವನ್ನೂ ಬಲಿತ ದಲಿತರು ಮಾಡುತ್ತಾರೆ. ಬಲಿತ ದಲಿತರ ಈ ಗುಪ್ತ ಗುಲಾಮಗಿರಿಯಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ದೂರೀಕರಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ ಮತ್ತು ನಡೆಯುತ್ತಿವೆ.
ಹೀಗಾಗಿಯೇ ಈ ದೇಶದಲ್ಲಿ ದಲಿತರು ಇನ್ನೂ ಶೋಷಣೆಯ ಅನುಭೋಗಿಗಳೇ ಆಗಿದ್ದಾರೆ. ತಿದ್ದಿಕೊಳ್ಳದಿದ್ದರೆ ಆ ಶೋಷಣೆ ಮುಂದುವರಿಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಮೇಲ್ಜಾತಿಯವರೆನಿಸಿಕೊಂಡವರು ದಲಿತರಲ್ಲಿ ಬಹಿಷ್ಕಾರದ ಭಯವನ್ನು ಬಿತ್ತುತ್ತಾರೆ ಮಾತ್ರವಲ್ಲ ಭಂಡತನಕ್ಕಿಳಿದು ಮೇಲ್ಮೆಯನ್ನು ಸಾಧಿಸಿಕೊಳ್ಳುತ್ತಾರೆ.
ಇದೆಲ್ಲವುಗಳ ಜೊತೆಗೆ ಇತ್ತೀಚೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಪರಾಕ್ರಮವನ್ನೂ ಸಾಧನೆ-ಸಿದ್ಧಿಯನ್ನೂ ಅಲ್ಲಗೆಳೆಯುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಆಗಿದೆ. ಇದಕ್ಕೆ ಕೇವಲ ದಲಿತೇತರರು ಮಾತ್ರವಲ್ಲ ಬಲಿತ ದಲಿತರೂ ಕಾರಣಕರ್ತರು ಎನ್ನುವುದು ಇನ್ನಷ್ಟು ಆತಂಕಕಾರಿಯಾದ ಸಂಗತಿಯೇ ಆಗಿದೆ. ಯಾರೋ ಒಬ್ಬರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದವರಲ್ಲಿ ಒಬ್ಬರೇ ಹೊರತು ಇಡೀ ಸಂವಿಧಾನ ರಚನೆಯನ್ನು ಅವರು ಮಾಡಿಲ್ಲ ಎಂಬುದನ್ನು ಮಾಧ್ಯಮಗಳಲ್ಲಿ ಹರಿಯಬಿಟ್ಟು ತಮ್ಮ ಉರಿಯನ್ನು ತಣ್ಣಗಾಗಿಸಿಕೊಳ್ಳುವಲ್ಲಿ ತೃಪ್ತಿಪಟ್ಟುಕೊಂಡರೆ, ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಾಷ್ಟ್ರವಿರೋಧಿ ಎನಿಸುವ ಕಾರ್ಯ ಮಾಡಿದ್ದಾರೆ ಎಂಬ ಪುಕಾರು ಎಬ್ಬಿಸುತ್ತಿದ್ದಾರೆ. ಮತ್ತೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೋರಾಟ 1930 ಆಸುಪಾಸಿನಲ್ಲಿ ಆರಂಭವಾಯಿತು ಎಂದು ಘೋಷಿಸಿ ಬೇರೆಯವರ ತಲೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ !
ಇವೆಲ್ಲವುಗಳಿಗಿಂತಲೂ ಹೇಯವಾದ ನಡುವಳಿಕೆ ಎಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಇಂದಿಗೂ ತಮ್ಮ ಶುದ್ಧ ವೈರಿ ಎಂದು ಭಾವಿಸುವ ಗುಂಪೊಂದು ಡಾ. ಬಾಬಾಸಾಹೇಬರ ಅಂಬೇಡ್ಕರ್ ಅವರ ವಿಚಾರಗಳನ್ನು ತಿರುಚುತ್ತ, ಅವರ ಮೂರ್ತಿಗಳನ್ನು, ಸ್ಮಾರಕಗಳನ್ನು ಭಗ್ನಗೊಳಿಸುವಲ್ಲಿ ‘ಆತ್ಮ’ ತೃಪ್ತಿಯನ್ನು ಅನುಭವಿಸುತ್ತ ವಿಜ್ರಂಭಿಸುವ ಸ್ವರತಿಗೆ ಮುಂದಾಗುತ್ತಿರುವುದು ! ಇನ್ನೂ ಕೆಲವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ‘ಹೊಲೆಯ’ ಎಂಬುದನ್ನಷ್ಟೇ ಪರಿಗಣಿಸಿ, ಅವರ ಇಡೀ ಸಾಧನೆಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ‘ಸಂಘಟನೆ’ ಮಾಡಿಕೊಂಡು ಹುಯಿಲೆಬ್ಬಿಸುತ್ತ ದಲಿತ ಶಕ್ತಿಯನ್ನು ಹಾಳು ಮಾಡುವಲ್ಲಿ ಸಾಫಲ್ಯ ಸಾಧಿಸುವ ಹಠಮಾರಿತನದಲ್ಲಿ ಅಂಡಲೆಯುತ್ತಿದ್ದಾರೆ !
ಇಂಥವುಗಳೆಲ್ಲ ಯಾಕೆ ನಡೆಯುತ್ತಿವೆ ಎಂದರೆ ಅದು ನಮ್ಮಲ್ಲಿ ಇರುವ ಅರಿವಿನ ಅಭಾವ ಎನ್ನಬೇಕಾಗುತ್ತದೆ. ಅರಿವಿನ ಅಭಾವದಿಂದ ಉದ್ಭವಿಸಿದ ಅಸಹನೆಯೇ ಇಷ್ಟಕ್ಕೆಲ್ಲ ಕಾರಣ ಎನ್ನದೆ ಬೇರೆ ಮಾರ್ಗವಿಲ್ಲ. ಜೊತೆಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂಘರ್ಷ-ಸಮನ್ವಯ ಸಿದ್ಧಾಂತ, ಸಾಂಘಿಕ ಬದುಕಿನ ಸದಾಶಯಗಳ ಫಲಾನುಭವಿಗಳಾಗಿರುವ ಬಹಳಷ್ಟು ಮಂದಿ ಬಲಿತ ದಲಿತರು ಉಂಡ ತಾಟಿನಲ್ಲೇ ಹೇಸಿಗೆ ಮಾಡಿಕೊಂಡು ಉಳ್ಳಾಡುತ್ತಿರುವುದು ಕೂಡ ಇಂತಹ ಅವಘಡಗಳಿಗೆ ಕೆಂಪು ಹಾಸಿಗೆ ಹಾಸಿದಂತಾಗಿದೆ !
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರ ಪರವಾಗಿ ಮಾತ್ರ ಹೋರಾಟ ಮಾಡಲಿಲ್ಲ. ದಲಿತ ಅಸ್ಮಿತೆಯ ಹೋರಾಟದೊಂದಿಗೆ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆ ಪರವಾಗಿಯೂ ಬಹುದೊಡ್ಡ ಚಳುವಳಿಯನ್ನು ಹುಟ್ಟು ಹಾಕಿದವರು. ಈ ದೇಶದ ಪ್ರತಿಯೊಬ್ಬ ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿಯೂ ಹೋರಾಟ ಮಾಡಿ ಯಶಸ್ಸು ಗಳಿಸಿದವರು. ಜೊತೆಗೆ ಮಹಾತ್ಮ ಫುಲೆಯವರು ಆರಂಭಿಸಿದ ರೈತರ ಪರವಾದ ಉಗ್ರ ಹೋರಾಟವನ್ನೂ ಮಾಡಿ ನ್ಯಾಯ ದೊರಕಿಸಿ ಕೊಡುವ ಕೈಂಕರ್ಯ ತೊಟ್ಟವರು. ಇವೆಲ್ಲವುಗಳನ್ನೂ ಮರೆ ಮಾಚಿ ಸುಳ್ಳು ಸುದ್ದಿಯನ್ನು ಹರಡುತ್ತಿರುವ ಕೆಲವು ಮನೋವಿಕಲ್ಪಕ್ಕೆ ಒಳಗಾದ ಜನರ ಚಟುವಟಿಕೆಗಳು ತೀರ ಅಕ್ಷಮ್ಯ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಡಿದ ಸಾಧನೆ-ಸಿದ್ಧಿಗಳ ಅರಿವನ್ನು ಅಥವಾ ಕನಿಷ್ಟ ಪರಿಚಯವನ್ನಾದರೂ ಕಿಲುಬುಗಟ್ಟಿರುವ ಇಡೀ ಭಾರತೀಯ ಸಮಾಜಕ್ಕೆ ತಿಳಿಯಪಡಿಸುವ ಜವಾಬ್ದಾರಿಯನ್ನು ಪ್ರಜ್ಞಾವಂತರಾದವರೆಲ್ಲರೂ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅರ್ಥವಾಯಿತು ಅಂದುಕೊಂಡಿದ್ದೇನೆ !

Friday, July 20, 2012

ಗಾಂಧಿ ಜಯಂತಿ ಕಥಾಸ್ಪರ್ಧೆ – 2012


 
 
 

ಸ್ನೇಹಿತರೆ,
ರವಿ ಕೃಷ್ಣಾರೆಡ್ಡಿಯವರು 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ಅವರು ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ಅವರಿಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಈಗ ವರ್ತಮಾನದ ಅಡಿಯಲ್ಲಿ ಅದನ್ನು ಮುಂದುವರೆಸಬೇಕೆಂದು ತೀರ್ಮಾನಿಸಿದ್ದಾರೆ. ಬಹುಶ: ಈ ವರ್ಷದಿಂದ ಇದನ್ನು ಪ್ರತಿ ವರ್ಷ ತಪ್ಪದೆ ನಡೆಸುವ ಯೋಜನೆ ಅವರದು.
ಗಾಂಧಿ ಜಯಂತಿ ಕಥಾಸ್ಪರ್ಧೆಯ ಆರಂಭದಲ್ಲಿ ಈ ಸ್ಪರ್ಧೆಯ ಉದ್ದೇಶ ಮತ್ತು ಕತೆಗಳು ಯಾವುದರ ಹಿನ್ನೆಲೆಯಲ್ಲಿ ರೂಪುಗೊಂಡಿರಬೇಕು ಎಂದು ಕೆಲವು ಟಿಪ್ಪಣಿ ಇದ್ದವು. ಆದರೆ ಈ ಬಾರಿ ಅಂತಹ ನಿಬಂಧನೆಗಳು ಏನೂ ಇಲ್ಲ. ಉತ್ತಮ ಕತೆಗಳನ್ನು ಬರೆಯಿರಿ ಮತ್ತು ಕಳುಹಿಸಿ ಎಂದು ಅವರು ಕೋರಿದ್ದಾರೆ.

ಬಹುಮಾನಗಳ ವಿವರ:
ಮೊದಲ ಬಹುಮಾನ: ರೂ. 6000
ಎರಡನೆ ಬಹುಮಾನ: ರೂ. 4000
ಮೂರನೆಯ ಬಹುಮಾನ: ರೂ. 3000
ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000
ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ: ಆಗಸ್ಟ್ 31, 2012
ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಒಂದು ಪುಟ್ಟ ಸಭೆ ಮಾಡಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.
ಮಾಮೂಲಿನಂತೆ ಎಲ್ಲಾ ಕಥಾಸ್ಪರ್ಧೆಗಳ ನಿಬಂಧನೆಗಳು ಇಲ್ಲಿಯೂ ಅನ್ವಯಿಸುತ್ತವೆ: ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು; ಕನಿಷ್ಟ 1500 ಪದಗಳದ್ದಾಗಿರಬೇಕು.

ಕೆಲವು ತಾಂತ್ರಿಕ ಮತ್ತು ಅನುಕೂಲದ ಕಾರಣಕ್ಕಾಗಿ ದಯವಿಟ್ಟು ನಿಮ್ಮ ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಿ. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್  ವಿಳಾಸ: editor@vartamaana.com

Thursday, July 19, 2012

ಮಾತ್ಗವಿತೆ-93

ಕ್ಷಣಭಂಗುರವೆಂದರಿತರೂ
ಪ್ರತಿಕ್ಷಣದ ಹುಡುಕಾಟಕ್ಕೆ ಯಾಕೆ ಬಲಿಯಾಗಬೇಕು ?
ಗುಣಮಧುರನೆಂದು ತಿಳಿದರೂ
ಸಮ್ಮೀಳನದ ಸುಖಕ್ಕೆ ಯಾಕೆ ಎರವಾಗಬೇಕು ?
ಬಯಸಿದರೆ ಬರಬಹುದು ; ದಹಿಸಿದರೂ ಕೂಡ !
ದಶದಿಕ್ಕುಗಳ ಅರಿವಿಲ್ಲದ, ಕುರುಹಿಲ್ಲದ
ಕರ್ಮಣ್ಯವಾದಿಕಾರಸ್ತು ... ಎಂದು ಹಾಡಿದರೆ
ಸಂಬಂಧಗಳ ಸಂಕೀರ್ಣತೆಯಾದರೂ ಯಾಕೆ ಬೇಕಿತ್ತು ?

Wednesday, July 18, 2012

ಬಡವರ “ಕೊಳಚೆ” ಉಳಿದವರ “ಶುದ್ಧತೆ”


-      ಡಾ ಅಶೋಕ್ ಕೆ ಆರ್
 
ಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿ ಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ. ಆದ್ದರಿಂದ ಕುಸ್ಮಾ ಶಾಲೆಗಳಲ್ಲಿ ಆರ್.ಟಿ.ಐ ಕಾಯ್ದೆ ಅನುಷ್ಠಾನ ಸಾಧ್ಯವಿಲ್ಲ” ಎಂದು ‘ಅಮೋಘ ವಿವೇಕಭರಿತವಾದ’ ಹೇಳಿಕೆಯನ್ನಿತ್ತಿದ್ದಾರೆ. ಈ ಹಾಳು ವಿಚಾರವಂತರು, ಪ್ರಗತಿಪರರು ಈ ಹೇಳಿಕೆಗೂ ವಿರೋಧ ವ್ಯಕ್ತಪಡಿಸುತ್ತಾರಲ್ಲ ! ಎಂಥ ಕೆಟ್ಟ ಮನಸ್ಥಿತಿಯವರಿರಬೇಕು ಇವರೆಲ್ಲ?!

ಒಂದಷ್ಟು ಹಿಂದೆ ಸಾಗಿ ನೋಡಿದಾಗ 

          ನನ್ನ ಶಾಲಾ ದಿನಗಳನ್ನು ಮೆಲಕುಹಾಕಿದಾಗ ಸನ್ಮಾನ್ಯ ಶರ್ಮರವರ ಹೇಳಿಕೆ ಎಷ್ಟು ಸತ್ಯವೆಂದು ಮನದಟ್ಟಾಗುತ್ತದೆ. ಬಡ ವರ್ಗಕ್ಕೆ ಸೇರದ ಕುಟುಂಬದವನಾದ ಕಾರಣ ಸರಕಾರಿ “ಕೊಳಚೆ” ಶಾಲೆಗಳಿಗೆ ಹೋಗದೆ “ಶುದ್ಧ” ಕಾನ್ವೆಂಟ್ ಶಾಲೆಯಲ್ಲಿ ಓದಿದೆ. ಆದರೆ ಆ ಹಾಳು ಕಾನ್ವೆಂಟಿಗರಿಗೆ ಶುದ್ಧತೆಯ ಪರಿಕಲ್ಪನೆ ಇರಲಿಲ್ಲವೇನೋ. ನಮ್ಮಂಥ “ಶುದ್ಧ” ಮಕ್ಕಳ ಜೊತೆಗೆ “ಕೊಳಚೆ”ಯವರನ್ನೂ ಸೇರಿಸಿಬಿಟ್ಟಿದ್ದರು. ಇದರ ಅನಾಚಾರಗಳ ಅರಿವಾಗಿದ್ದು ಕುಸ್ಮಾದ ಅಧ್ಯಕ್ಷರ ವಿಚಾರವಾಣಿಯನ್ನು ಇಂದು ಓದಿದಾಗಲೇ! ಆ “ಕೊಳಚೆ”ಯವರಿಂದಲೇ ಅಲ್ಲವೇ ನಾನು ಸೂಳೆಮಗ, ಬೋಳಿಮಗ ಎಂಬ ಕೊಳಕು ಪದಗಳನ್ನು ಕಲಿತು ಆ ಪದಗಳನ್ನು ಉಳಿದ “ಶುದ್ಧ”ವಂತರಿಗೂ ಕಲಿಸಿದ್ದು?! ಆ “ಕೊಳಕಿನಿಂದ” ಹೊರಬಂದ ನಂತರವಷ್ಟೇ ಸಿರಿವಂತರ ಸಹವಾಸ ಮಾಡಿ shit man, fuck off ಎಂಬ “ಶುದ್ಧ” ಪದಗಳನ್ನು ಕಲಿತು ನಾನೂ ಒಂದಷ್ಟು ಪರಿಶುದ್ಧತೆ ಪಡೆದಿದ್ದು!

ವ್ಯಂಗ್ಯದಾಚೆಗೆ 

          ಮೇಲಿನ ವ್ಯಂಗ್ಯಭರಿತ ಸಾಲುಗಳನ್ನು ಪಕ್ಕಕ್ಕಿರಿಸೋಣ. ನಮ್ಮದೇ ನಾಡಿನ ವಿದ್ಯಾವಂತನೊಬ್ಬ ಧನಾಧಾರಿತ ವರ್ಗವನ್ನು ಪ್ರತಿಪಾದಿಸುತ್ತಾನೆಂದರೆ ನಮ್ಮ ಶಿಕ್ಷಣ ಪದ್ಧತಿಯಲ್ಲಿಯೇ ದೋಷವಿದೆಯಲ್ಲವೇ? ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದು ಸರ್ವರಿಗೂ ಸಮಾನವಾದ ಶಿಕ್ಷಣ ದೊರೆಯಬೇಕೆಂಬ ಅಭಿಲಾಷೆಯಿಂದ. ಆದರಿದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ರೀತಿ ಹಾಗಿದೆ. ಖಾಸಗೀಕರಣ, ಜಾಗತೀಕರಣದ ಪ್ರಭಾವಳಿಯಿಂದ ಶೈಕ್ಷಣಿಕ ಕ್ಷೇತ್ರವೂ ಹೊರಗುಳಿದಿಲ್ಲ. ಹಳೆಯ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಯನ್ನು ಸರ್ವ ರೀತಿಯಲ್ಲೂ ಬೆಳೆಸುವುದರಲ್ಲಿ ಆಸಕ್ತಿಯಿತ್ತು. ಆದರೆ ಇಂದಿನ ಬಹುತೇಕ ಖಾಸಗಿ ಶಾಲೆಗಳು ಹಣ ಮಾಡುವ ಉದ್ದಿಮೆಗಳಷ್ಟೇ. ಹಣ ಮಾಡುವುದನ್ನು ಮರೆತು ಸೇವೆ ಮಾಡಿ ಎಂದರೆ ಅವರು ಅಷ್ಟು ಸುಲಭವಾಗಿ ಒಪ್ಪುತ್ತಾರೆಯೇ? ನೇರವಾಗಿ ಹಣದ ಬಗ್ಗೆ ಮಾತನಾಡಲಾಗದೆ ತಮ್ಮ “ಶುದ್ಧ” ಜನರ ಪರವಾಗಿ ಮಾತನಾಡಿ ಕಾಯ್ದೆಯ ವಿರುದ್ಧ ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಹಣದ ಮಾನದಂಡದಿಂದಷ್ಟೇ ಬಡವರೆನ್ನಿಸಿಕೊಂಡವರ ಬಗ್ಗೆ ನಮ್ಮ ಕೆಲ ‘ವಿದ್ಯಾವಂತ ಮುಂದುವರಿದವರ’ ಮನದ ಮಾತನ್ನು ಶರ್ಮ ಆಡಿಬಿಟ್ಟಿದ್ದಾರೆ.

ಸರಕಾರ, ಉದ್ದಿಮೆ, ಖಾಸಗೀಕರಣ

          ಇಲ್ಲಿ ಮತ್ತೊಂದು ವಾಸ್ತವವನ್ನು ಗಮನಿಸದಿದ್ದರೆ ಅಪೂರ್ಣ ಸತ್ಯವನ್ನಷ್ಟೇ ತಿಳಿದಂತಾಗುತ್ತದೆ. ಕೈಯಲ್ಲಿ ಹಣವಿರುವ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವುದಿಲ್ಲ, ಆರೋಗ್ಯ ತಪ್ಪಿದಾಗ ಸರಕಾರಿ ಆಸ್ಪತ್ರೆಗಳಿಗೆ ಓಡುವುದಿಲ್ಲ [ನವೋದಯ ಶಾಲೆ, ಸರಕಾರಿ ವೈದ್ಯಕೀಯ ಕಾಲೇಜುಗಳು, ಏಮ್ಸ್, ನಿಮ್ಹಾನ್ಸ್ ನಂತಹ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ]. ಯಾಕೆ? ಸರಕಾರೀ ವ್ಯವಸ್ಥೆಯೆಂದರೆ ಕಳಪೆ ಎನ್ನುವ ಭಾವನೆ ಬೆಳೆದಿದ್ದ್ಯಾವಾಗ? ಸರಕಾರ ತನ್ನ ಶಾಲೆಗಳ ಗುಣಮಟ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಜೊತೆಗೆ ಅಂಕೆ ಮೀರಿ ಖಾಸಗಿ ಶಾಲೆಗಳಿಗೆ ಅನುಮತಿ ಕೊಡುತ್ತದೆ. ಖಾಸಗಿ ಶಾಲೆಗಳ ಶಿಕ್ಷಣ ‘ಉತ್ತಮ’ವೆಂಬ ಭಾವನೆಯನ್ನು ಜನರ ಮನದಲ್ಲಿ ಬಿತ್ತುವಲ್ಲಿ ಸಫಲವಾಗುತ್ತದೆ. ನಂತರ ಮಕ್ಕಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಶಾಲೆಗಳನ್ನು ಮುಚ್ಚುತ್ತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡಿ ಉಚಿತ ಶಿಕ್ಷಣ ಕೊಡಬೇಕಾದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆಯನ್ನು ಸರಕಾರ ಕೂಡ ‘ಉದ್ದಿಮೆ’ಯ ‘ಲಾಭ – ನಷ್ಟ’ದ ದೃಷ್ಟಿಯಲ್ಲಿ ನೋಡುವುದೇ ಆಗಿದೆ. ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ ಸರಕಾರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಾವುದೇ ಖಾಸಗಿ ಸಂಸ್ಥೆಗಿಂತ ಹೆಚ್ಚು ದಕ್ಷವಾಗಿ ಕೆಲಸ ಮಾಡುತ್ತ ‘ಲಾಭ’ ಮಾಡುತ್ತಿದೆ. ಬಸ್ಸಿನ ಸಂಸ್ಥೆಯನ್ನು ಉದ್ಧರಿಸಲು ಅಪಾರ ಆಸಕ್ತಿ ತೋರುವ ಸರಕಾರಗಳು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಇಷ್ಟೊಂದು ಉದಾಸೀನತೆ ತೋರುವುದ್ಯಾಕೆ? ‘ಲಾಭ – ನಷ್ಟಕ್ಕೆ’ ಹಣವೊಂದೇ ಮಾನದಂಡವಾಗಬೇಕಾ?
       
ಕೃಪೆ : ಹಿಂಗ್ಯಾಕೆ (ಬ್ಲಾಗ್)

Sunday, July 15, 2012

ಮಾತ್ಗವಿತೆ-92

ನೋಡು ನೋಡುತ್ತಲೇ ಮುಗಿಲು ಮುಟ್ಟುವ
ಉಮೇದಿನಲ್ಲಿ ನೆಲವೂ ನೆಲೆಯಾಗದ ಬದುಕು !
ನೋವ ದಾಟಿ ನಲಿವು ಕಾಣಿಸಿಕೊಳ್ಳಬೇಕಾದ ಕಾಲದಲ್ಲಿ
ಹಳೆಯ ಗಾಯ ಮತ್ತೊಮ್ಮೆ ರಕ್ತ ಒಸರುತ್ತದೆ !
ಕಾಲಕ್ಕೆ ಕಾಯಬೇಕು ನಿಜ ;
ಕಾಯುವುದೇ ಕಾಯಕವಾದರೆ ಮಾಡುವುದೇನು ?

Thursday, July 12, 2012

शोधिशी मानवा !

 उत्तम कांबळे



पृथ्वी सूर्याभोवती फिरतेय हा सिद्धान्त मांडला गेला तेव्हा काय काय घडलं आठवा... निसर्गातला देव माणसानं स्वत-त आणून अहंब्रह्म म्हटलं तेव्हा काय काय घडलं आठवा... एवढंच काय, देवाच्या दर्शनासाठी कुठं पाणी पेटलं आणि कुठं इमारत हलली, हेही आठवा गड्यांनू...

रोज नऊ वाजता येणारी मोलकरीण आज तब्बल दीड तास उशिरा, म्हणजे साडेदहा वाजता, आली...आता काय होणार, याचा अंदाज यायला वेळ नाही लागला...मोलकरणीला होणाऱ्या उशिरातून झालेली अनेक महायुद्धं मी स्वत- पाहिली होती...आता हे आजचं महायुद्ध कितवं... हजारावं, दोन हजारावं...सांगता येत नव्हतं...पण मोलकरीण मोठी हुशार, आत पाऊल टाकताच ती म्हणाली, ""ताई, देवाला जाऊन आले. वाटंतच भंडारा होता... ही ।। गर्दी देवासाठी... देवधर्म कुणाला सुटलाय का ताई..?''

तिच्या उशिरावरून होणाऱ्या संभाव्य महायुद्धाची चाहूल न ऐकताच ती बोलू लागली...बोलता बोलता काम करू लागली...ताईनं एक शब्दही काढला नाही. कारण, मोलकरणीनं आज थेट देवाचं अस्त्र वापरलं होतं. तसं आपलं जीवन मोलकरणीशी जसं जोडलंय, तसं देवा-धर्माशीही जोडलं गेलंय. अलीकडं बायकाही मोलकरीण आली, की "बरं झालं बाबा जणू देवच आला', असं म्हणत सुटकेचा श्‍वास सोडतात...नाहीतर आपले काही देवही जातातच, की जातं ओढायला, भांगलायला, चिखल तुडवायला...

मोलकरणीनं आज वापरलेलं देवास्त्र थोडं वेगळं वाटलं मला. कारण, चारच दिवसांपूर्वी स्वित्झर्लंडमध्ये असंख्य शास्त्रज्ञांनी मिळून चाळीस वर्षांच्या अथक्‌ प्रयोगानंतर देवकण शोधून काढल्याची बातमी थडकली. माणसाचं एक बरंय, त्याला कणात, मनात, रेणूत, अणूत, पाल्यात, फळात, मातीत, दगडात कुठंही देव सापडतो. खरं तर सहजपणे देव सापडण्यामागं माणसाचीच तशी सोय असते. त्याच्या सोयीनुसार तो सारं काही घडवत राहतो. देवाच्या शोधासाठी तो जटा वाढवून कोणत्या तरी डोंगराच्या टक्कुऱ्यावरही बसतो. स्फोट घडवून बघतो. पृथ्वीचा गर्भ चिरून बघतो. समुद्राचा तळ शोधून बघतो आणि काहीच न करता कणात, मनातही देव सापडल्याचा दावा करतो. स्वत-तही देव बघतो. दुसऱ्यातही बघतो, पशू-पक्ष्यांतही देव बघतो... बघता बघता त्याचा वराह-अवतारही होतो...माणूस स्वत- सारं काही मिळवतो आणि सारं काही देवाचं आहे, असं जाहीर करतो. पूर्वी वारणेच्या खोऱ्यातला दरोडेखोरही दरोडा टाकायला जाताना देवाचा आशीर्वाद मागायचा आणि आता चंद्रावर जाणारा माणूस, पृथ्वीच्या बेंबीचं टोक शोधणारा माणूसही देवाचा आशीर्वाद मागतो. सारं काही देवाचं आहे, तोच हलवतो, तोच चालवतो, तोच बोलवतो, एवढंच काय, त्याच्या आज्ञेवाचून झाडाचं पान हलत नाही, की ते खाली पडत नाही...काय काय करून ठेवलंय माणसानं या देवाचं...देवासाठी तो काहीही करू शकतो...महायुद्धं घडवू शकतो, धर्मस्थळं पाडू शकतो, कुठंही अतिक्रमण करून देवाची प्रतिष्ठापना करू शकतो आणि एवढंच काय, कुणी तरी पुढं जाऊन स्वत-लाच देव जाहीर करून बसतो...अनादी कालापासून देवाच्या कल्पनेचा हा खेळ चालू आहे. कुणी त्याला निर्गुण, निराकार म्हणतं, कुणी द्वैत-अद्वैतात बसवतं...कुणी त्याचा प्रतिनिधी म्हणून अवतरतं...कुणी त्याचा सेवक होऊन स्वत-लाच देवाचा अंश म्हणून जाहीर करतं, तर कुणी देवाला चॅलेंज देण्याच्या प्रयत्नात प्राण गमावून बसतं...पृथ्वी सूर्याभोवती फिरतेय हा सिद्धान्त मांडला गेला तेव्हा काय काय घडलं आठवा...निसर्गातला देव माणसानं स्वत-त आणून अहंब्रह्म म्हटलं तेव्हा काय काय घडलं आठवा...देवाची वाणी न ऐकणाऱ्यांचं काय काय झालं आठवा...एवढंच काय, देवाच्या दर्शनासाठी कुठं पाणी पेटलं आणि कुठं इमारत हलली, हेही आठवा गड्यांनू...

साला, काय अस्त्र वापरलं आज मोलकरणीनं! ग्रेटच आहे ही बाई...मीही या अस्त्राचा विचार करू लागलो... असं अस्त्र, की एका महायुद्धाला जन्मापूर्वीच मारणारं...भ्रूणहत्येप्रमाणं युद्धहत्या करणारं...

खूप विचार करू लागलो देवाचा...पुन्हा पुन्हा विचार करू लागलो...विचार करत करत माणूस चार पायांवरून दोन पायांवर आला...त्यानं आपले पुढचे दोन पाय हे हात म्हणून वापरायला सुरवात केली, तिथंपर्यंत पोचलो...माणूस निसर्गातून बाहेर पडला होता आणि निसर्गाबाहेर जगण्यासाठी त्याला निसर्गाइतकी महाशक्ती हवी होती. निसर्गात जे जे महान आहे, शक्तिमान आहे, त्याची शक्ती कुठून येते आणि ती आपल्याला कधी मिळंल, याचा विचार तो करू लागला...आपल्यापेक्षा काही तरी प्रचंड शक्तिमान आहे, जे क्षय पावत नाही, मरत नाही, ते ते त्याला हवं होतं... त्याला सूर्याप्रमाणं तेजोमय, डोंगरासारखं अचल, सागरासारखं विशाल व्हायचं होतं; पण ते शक्‍य नव्हतं...कारण, माणसाला मरण आहे... सजीवाला मरण आहे... मरण चुकवायचं कसं, शक्तिमान व्हायचं कसं, याची उत्तरं शोधू लागला माणूस...महाशक्तींना शरण जाऊ लागला माणूस...या शक्तींसाठी माणसानं एक शब्द शोधून काढला - देव..! मग देवाचं ठिकाण शोधण्याचा प्रयत्न तो करू लागला...त्याला ते ठिकाण सापडलं स्वर्गात...मग स्वर्गात पोचण्यासाठी माणसानं आत्मा काढला शोधून...आता माणूस मरणार नव्हता... मरणानंतरही आत्म्याच्या रूपानं जगणार होता...त्याचं मरणोत्तर जीवन सुरू होणार होतं...मेल्यानंतर कोणता जन्म मिळणार, याची गणितंही मांडू लागला माणूस...सारे सारे पुनर्जन्म कैद करून त्यानं भरले कोणत्या तरी डेथ किंवा रिबर्थ साइटवर...आता स्क्रीनवरच्या माऊसचा वापर करून क्‍लिक करून तो शोधू शकतो स्वत-चा पुनर्जन्म... प्रश्‍न एवढाच, की मरणानंतर कुणीही हे सारं सांगायला आणि चौकात राहून भाषण करायला परत नाही येत...मला नेहमीच एक प्रश्‍न पडत आलाय...अर्थात, तो साऱ्यांनाच पडतो...वय वाढायला लागलं, की त्याची तीव्रता वाढायला लागते...प्रश्‍न असा, की माणसाला मरण नसतं तर?.. किती छोटा प्रश्‍न; पण उत्तरं आभाळाएवढी...

एक - त्याला देवा-धर्माची गरज भासली असती काय?
दोन - आत्म्याचा विषय जन्माला असता काय?
तीन - स्वर्ग-नरक जन्माला आले असते काय?
चार - मी देवाची भेट घडवून देतो, असा दावा करणारी व्यवस्था जन्माला आली असती काय?
पाच - सोच, साथ क्‍या जानेवाला है, असं चकवा देणारं वाक्‍य जन्माला आलं असतं काय?
सहा - नशिबाची कल्पना जन्माला असती काय?
आणि सात - जितना तेरा है उतनाही तेरा है, असं वाक्‍य कुणी उच्चारलं असतं काय?
अजूनही काही प्रश्‍न आहेतच आहेत... साऱ्यांकडंच ते आहेत...

जगण्याच्या शर्यतीत काही जण ते तुडवत जातात; तर काही जण याच प्रश्‍नांचा इव्हेंट तयार करतात... झालंच तर स्पिरिच्युअल इकॉनॉमी तयार करतात...

पूर्वी काही मुलाखतींत प्रश्‍न विचारले जायचे... देव आहे, की नाही? एका वाक्‍यात उत्तर द्या... उत्तर असायचं, ज्याचा विश्‍वास आहे, त्याच्यासाठी देव आहे आणि ज्याचा विश्‍वास नाही, त्याच्यासाठी देव नाही...

देवावरच्या प्रश्‍नांचं असं उत्तर देऊन मोठे झालेले अनेक बाबू आहेत... टेबलावरच्या काचेखाली देवाचा फोटो ठेवून दोन नंबरचा व्यवहार करणारेही आहेत... माणूस असा दुभंगलेला... देव आहे आणि नाही असं एकाच वेळी सांगणारा... देवाला घाबरणारा आणि न घाबरणारा... देवाकडून महाशक्ती घेऊन स्वत- अमर्त्य होऊ पाहणारा...एकाच वेळी देवाला राजकारणातल्या मतांत आणि मंदिरात बंदिस्त करू पाहणारा माणूस...खरं तर देवाऐवजी "जय हो माणूस!' असंच म्हणायला हवं... माणसानं देवाला गळ्यातील ताइतात, बोटातल्या अंगठीत, लग्नातल्या सुपारीत, तुळशीच्या पानात, कपाळावरल्या कुंकू-भंडाऱ्यात जसं बंदिस्त केलं, तसं वेगवेगळ्या व्याख्यांमध्येही केलं बंदिस्त... व्याख्या तर बघा देवासाठी केलेल्या...

-विश्‍वाचं अस्तित्व इतकं तरल, की त्याचं वर्णनच अशक्‍य आहे. जे काही वर्णन आहे, ती केवळ कल्पना आहे.
(ताओवाद)

- ईश्‍वर हे जगाच्या निर्मितीचं कारण मानल्यास मानवी इच्छेचं स्वातंत्र्य आणि मानवी प्रयत्न याला वाव राहत नाही.
(बौद्ध तत्त्वज्ञान - संदर्भ डॉ. आ. ह. साळुंखे)

-माझा उगम कुणीच जाणू शकत नाही. ज्याला आदि नाही, अंत नाही, अशा सर्व भ्रमांपासून, अनिष्टांपासून मी आहे मुक्त.(भगवद्‌गीता)

-प्रारंभी शब्द होता. शब्द देवासह होता. शब्द देव होता, तोच प्रारंभी देवासह होता. सर्व काही त्याच्याद्वारे झालं आणि जे काही झालं, ते त्याच्यावाचून झालं नाही.
(नवा करार जॉनकृत शुभ वर्तमान अध्याय - 1-1 - 3)

-तू असं केवळ तत्त्व आहेस आणि तुझ्यातूनच हे सर्व अस्तित्व दृश्‍यमान झालं आहे.(सूफी पंथ)

-एकच असं ते चिरंतन, सार्वत्रिक सत्य आहे. सर्व दृश्‍य-अदृश्‍यांचा निर्माता कालातीत, द्वेषरहित, स्वनिर्मित असे ते "सत्त्व' आहे.(गुरुग्रंथ साहिब)

-सुरवातीला देवानं स्वर्ग व पृथ्वी निर्माण केली. कोणत्या पोकळीतून ती निर्माण केलेली नाही, तर जिथं राहता येईल, अशा रीतीनं ती निर्माण केली आहे. हा निर्माता एकमेव आहे.(यहुदी)

या सगळ्या व्याख्या वाचत पुन्हा एकदा "बिग बॅंग'च्या प्रयोगाकडं पाहू लागलो... प्रयोगकर्ते म्हणतात, कण सापडला आहे... जेव्हा एक कण सापडतो, तेव्हा त्याचा अर्थ अद्याप महापर्वत सापडायचा असतो. मेघ कसे दाटतात? पाऊस कसा येतो? बासरीतून सूर कसे बाहेर पडतात? पाकळ्या बाजूला सारून गंध कसा हसतो? अशा आशयाचं गाणंही मराठीत आहे...पुन्हा तेही परमेश्‍वराच्या शोधाचाच एक भाग आहे... शेवटी पुन्हा तोच प्रश्‍न... परमेश्‍वर कणात, मनात, हृदयात, स्फोटात, प्रयोगात, की आणखी कुठं शोधायचा? मोलकरणीनं आणलेल्या भंडाऱ्यातील प्रसादात... उशिरा येऊनही तिच्याशी भांडण न करण्याच्या वृत्तीत, की आणखी कुठं शोधायचा परमेश्‍वर...? मुळात तो शोधायचा का आणि शोधायचाच असंल, तर त्याचा संबंध आपल्या (माणसाच्या) स्वार्थाशी, दुर्बलतेशी, की आणखी कशाशी आहे, याचाही शोध घ्यायला हवा... पण असे प्रयोग झालेले नाहीत, होणारही नाहीत... माणूस आणि त्याचं न दिसणारं भावविश्‍व शोधण्याचे प्रयोग होत नाहीत... आपलं खरं रूप माणसाला दाखवायचं नसतं...भीती वाटते त्याला... स्वित्झर्लंडमध्ये जे झालं ते नीट समजून घ्यायला हवं. तिथं देवकण नाही सापडला, तर देवाच्या कल्पनेप्रमाणं सर्वव्यापी असलेला कण सापडला...त्याला नाव मिळालंय "देव'कण... याचा अर्थ देव शोधण्याची मोहीम संपलेली नाही... ती चालू ठेवायची, की नाही आणि खरंच उद्या देव सापडला, तर काय करायचं, हा ज्याचा त्याचा प्रश्‍न आहे... 

by - उत्तम कांबळे uttam.kamble@esakal.com

भारतीय'...म्हंजी काय रं भौ ?

भारत एकीकडे जगातील महासत्ता होण्याची वाट पाहात असतानाच, देशावर एक मोठं अभूतपूर्व संकट येऊन कोसळतं. देशच नाही, तर अख्खं जग हादरून जातं आणि या सगळ्याला कारणीभूत ठरतं, आडनिड महाराष्ट्र आणि कर्नाटक सीमेवर वसलेलं भारताच्या नकाशावर ठिपक्याएवढंही नसलेलं एक मागासलेलं गाव.

देश स्वतंत्र झाल्यापासून आजवर या गावात रस्ता, वीज, पाणी, शिक्षण असं काहीही पोचलेलं नाही. थोडक्यात प्रगतीची एकही खूण नाही. प्रगती नाही. याबद्दल कोणाचीही तक्रार नाही, कारण मग कामंही नाहीत. त्यामुळं वेळ भरपूर! तो भरून काढायला स्थानिक राजकारण आहेच! पण एक दिवस गावाला अक्षरशः घबाड सापडतं आणि हे स्थानिक राजकारण पार जागतिक होऊन जातं...

भारतापासून ते संयुक्त राष्ट्रसंघापर्यंत सर्वांचं रातोरात अक्षरशः धाबं दणाणतं आणि संपूर्ण जगाचं भवितव्य आडनिड्याच्या हाती येतं...असं म्हणतात, की शहाणपणाला लिमिट असतं पण मूर्खपणाला नाही. संपूर्ण जगाला वेठीला धरणाऱ्या या अडाणी आडनिड्याची ही आजवर कधीही न पाहिलेली धम्माल गोष्ट...

एकीकडे ग्लोबल होण्याची स्वप्नं दाखवली जात असताना स्थानिक पातळीवर काहीच बदल घडत नाहीत. जात, पात, धर्म, भाषा आदी कारणांनी अनेकजण आपापलेच हितसंबंध जपायचा प्रयत्न करतात. या स्थानिक आणि 'ग्लोबल'च्या संघर्षातून घडत जाणारी गोष्ट म्हणजेच 'भारतीय'...म्हंजी काय रं भौ???


by- e sakal : Thursday, July 12, 2012

ಮಾತ್ಗವಿತೆ-91

ನಿನ್ನೊಳಗೆ ನಾನು ಇದ್ದರೆ
ಹಿರಿದು ತಾ ; ಸಾಧ್ಯವಾಗದು ಎಂದರೆ
ಹರಿದು ತಾ, ಗುರುತು ಉಳಿಯದಂತೆ !
ಮರೆತು ಹೋಗುವ ಬದುಕಿನ ನಡುವೆ
ಬೆರೆತು ಹೋಗದಿದ್ದರೆ ಮತ್ತೇನು ಹೇಳಲಿ ?

Monday, July 09, 2012

157 ಸ್ನಾತಕೋತ್ತರ, 67 ಪದವಿ ಹುದ್ದೆಗಳು ಖಾಲಿ:ಬೋಧಕರ ಕೊರತೆಯಿಂದ ಬಳಲುತ್ತಿದೆ ಕರ್ನಾಟಕ ವಿಶ್ವವಿದ್ಯಾಲಯ !

ಧಾರವಾಡ: ಭಾರತಕ್ಕೆ ಸ್ವಾತಂತ್ರ್ಯ ಬಂದ ಮೂರು ವರ್ಷಕ್ಕೇ (1950) ಆರಂಭವಾದ, ರಾಜ್ಯದ ಅತ್ಯಂತ ಹಳೆಯ ವಿವಿಗಳಲ್ಲಿ ಒಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಇದೀಗ ಪ್ರಾಧ್ಯಾಪಕರು/ ಉಪನ್ಯಾಸಕರ ಕೊರತೆಯಿಂದ ನಲುಗುತ್ತಿದೆ.
ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆರಂಭವಾದ ಬಳಿಕ ಕವಿವಿ ವ್ಯಾಪ್ತಿ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದ್ದು 300 ಕಾಲೇಜುಗಳು ಕವಿವಿಯೊಂದಿಗೆ ಸಂಯೋಜನೆ ಹೊಂದಿವೆ. ಕವಿವಿಯು ಹಾವೇರಿ, ಕಾರವಾರ ಹಾಗೂ ಗದಗ ನಗರಗಳಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಆರಂಭಿಸಿದ್ದು, ಅಲ್ಲಿಯೂ ಪೂರ್ಣ ಪ್ರಮಾಣದ ಕಾಯಂ ಉಪನ್ಯಾಸಕರಿಲ್ಲ.
 
ಕೆಲ ಉಪನ್ಯಾಸಕರು ಧಾರವಾಡದಿಂದಲೇ ಆಯಾ ಸ್ನಾತಕೋತ್ತರ ಕೇಂದ್ರಗಳಿಗೆ ಹೋಗಿ ತರಗತಿಗಳನ್ನು ನಡೆಸುತ್ತಿದ್ದಾರೆ.ಒಂದು ಅಂದಾಜಿನಂತೆ ವಿವಿಯ ಸ್ನಾತಕೋತ್ತರ ವಿಭಾಗಗಳಿಗೆ 157 ಹಾಗೂ ಪದವಿ ಕಾಲೇಜುಗಳಿಗೆ 67 ಮಂಜೂರಾದ ಹುದ್ದೆಗಳು ಖಾಲಿ ಉಳಿದಿವೆ. ಪ್ರಾಧ್ಯಾಪಕರು ನಿವೃತ್ತಿ ಹೊಂದುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕರೊಬ್ಬರು ಆತಂಕ ವ್ಯಕ್ತಪಡಿಸಿದರು.
ಕಳೆದ ತಿಂಗಳು 43 ಬ್ಯಾಕ್‌ಲಾಗ್ ಹುದ್ದೆಗಳಲ್ಲಿ 30 ಹುದ್ದೆಗಳನ್ನು ಭರ್ತಿ ಮಾಡಿದ್ದರಿಂದ ಬೋಧಕರ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದೆ. ಉಳಿದ 13 ಹುದ್ದೆಗಳಿಗಾಗಿ ನಡೆದ ಸಂದರ್ಶನದಲ್ಲಿ ಸೂಕ್ತ ಅಭ್ಯರ್ಥಿಗಳು ದೊರೆಯದಿರುವುದರಿಂದ ಮತ್ತೆ ಪ್ರಕಟಣೆ ನೀಡಿ ಭರ್ತಿ ಮಾಡಿಕೊಳ್ಳಲು ವಿವಿ ನಿರ್ಧರಿಸಿದೆ.
ಒಂದು ವಿಭಾಗಕ್ಕೆ ಕನಿಷ್ಟ ಆರು ಮಂದಿ ಬೋಧಕ ಸಿಬ್ಬಂದಿ ಅಗತ್ಯವಿದೆ. ಆದರೆ ಇದೀಗ ಸರಾಸರಿ ಮೂರರಿಂದ ನಾಲ್ಕು ಮಂದಿ ಪ್ರಾಧ್ಯಾಪಕ/ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉದಾಹರಣೆಗೆ ವಿವಿಯ ಇಂಗ್ಲಿಷ್ ವಿಭಾಗದಲ್ಲಿ ನಾಲ್ಕು ಮಂದಿ ಕಾಯಂ ಬೋಧಕ ಸಿಬ್ಬಂದಿ ಇದ್ದಾರೆ.
 
28 ವರ್ಷಗಳಷ್ಟು ಹಳೆಯದಾದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ಈಗಲೂ ಮೂರು ಮಂದಿ ಕಾಯಂ ಪ್ರಾಧ್ಯಾಪಕ/ ಉಪನ್ಯಾಸಕರು ಇದ್ದು, ಒಬ್ಬರು ಅತಿಥಿ ಉಪನ್ಯಾಸಕರಿದ್ದಾರೆ. ನಿರ್ವಹಣಾ ವಿಭಾಗ (ಎಂಬಿಎ)ದಲ್ಲಿ ಏಳು ಮಂಜೂರಾತಿ ಹುದ್ದೆಗಳಿದ್ದರೆ, ನಾಲ್ಕು ಮಂದಿ ಕಾಯಂ ಹಾಗೂ ಮೂವರು ಅತಿಥಿ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರಿಗೆ ವಿವಿ ತನ್ನ ಆಂತರಿಕ ನಿಧಿಯನ್ನು ಬಳಸಿಕೊಂಡು ವೇತನ ಪಾವತಿ ಮಾಡುತ್ತಿದೆ.

ಹುದ್ದೆ ಭರ್ತಿಗೆ ಪ್ರಸ್ತಾವನೆ: ಪ್ರೊ.ವಾಲೀಕಾರ
ಉಪನ್ಯಾಸಕರ ಕೊರತೆಯ ಕುರಿತು `ಪ್ರಜಾವಾಣಿ`ಯೊಂದಿಗೆ ಮಾತನಾಡಿದ ಕರ್ನಾಟಕ ವಿವಿ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ, `ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡುವಂತೆ ಈಗಾಗಲೇ ಉನ್ನತ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಹೆಚ್ಚು ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಿ ಯುಜಿಸಿಗೂ ಮನವಿ ಸಲ್ಲಿಸಲಾಗಿದೆ. ಉಪನ್ಯಾಸಕರಿಗೆ ವಿವಿ ಧನಸಹಾಯಕ ಆಯೋಗವು ವೇತನ ನೀಡಿದರೂ ಸಾಕು, ಉಳಿದದ್ದನ್ನು ವಿವಿಯೇ ನಿರ್ವಹಣೆ ಮಾಡಲಿದೆ` ಎಂದರು.
`ಬೋಧಕರ ಕೊರತೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಡಕಾಗಬಾರದು ಎಂದು ಉದ್ದೇಶದಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಣಕಾಸು ಪ್ರಸ್ತಾವನೆಯಿಂದ ಹುದ್ದೆ ನೇಮಕಕ್ಕೆ ಅನುಮತಿ ದೊರೆತ ಕೂಡಲೇ ಮುಂದಿನ ಪ್ರಕ್ರಿಯೆ ಆರಂಭಿಸುತ್ತೇವೆ. ಕಾಯಂ ಸಿಬ್ಬಂದಿ ನೇಮಕವಾಗಬೇಕಾದರೆ ಕನಿಷ್ಟ ಒಂದು ವರ್ಷ ಬೇಕಾಗಬಹುದು` ಎಂದು ತಿಳಿಸಿದರು.

ಕೃಪೆ : ಪ್ರಜಾವಾಣಿ ವಾರ್ತೆ/ಮನೋಜ್‌ಕುಮಾರ್ ಗುದ್ದಿ May 03, 2012

ಪಂಪನ ಆದಿಪುರಾಣದ ಮಾಗಧ

ಪಂಪನ ಆದಿಪುರಾಣದ ದ್ವಾದಶಾಶ್ವಾಸದಲ್ಲಿ ಬರುವ ಮಾಗಧನ ಮಾತು. ಭರತನಿಗೆ ಎದುರಾಗಿ ನಿಲ್ಲುವ ಎದೆಗಾರಿಕೆಯ ಮಾಗಧ, ಭರತನಿಗೆ ಶರಣಾಗಬೇಕು ಎಂಬ ತನ್ನ ಆಸ್ಥಾನದ ಹಿರಿಯರು ಹೇಳಿದಾಗ ಮಾರುತ್ತರ ನೀಡುವ ಆತ,
 

'ಕುಲದ ಚಲದಾಯದರಿವಿನ
ಕಲಿತನದುನ್ನತಿಯನಲಸದೀ ಸುರಸಭೆಯೊಳ್ /
ಪಲವಾಡುವೆನ್ನ ನಾಲಗೆ
ಬಲಸ್ಥನೊರ್ವಂಗೆ ಜೀಯ ದೇವೆಂದಪುದೇ
/' (12-101)

ಎಂದಿರುವುದು ಸ್ವಾಭಿಮಾನಿಯೊಬ್ಬನ ಉಕ್ತಿಯೇ ಆಗಿದೆ.

Friday, July 06, 2012

ಮಾತ್ಗವಿತೆ-90

ನಿನ್ನ ಮದರಂಗಿ ಹಚ್ಚಿದ ಕೈಯನು ಕಂಡು
ರಕ್ತ ಮಡುವಿನ ಜಾತಿ-ಮತ-ಧರ್ಮ-ಪಂಥಗಳೆಲ್ಲವೂ
ಫಕ ಫಕನೇ ನಕ್ಕು ಬಿಟ್ಟವು !
ನಗಲಿ ಬಿಡು ಎಂದರೆ ಎಂಥ ಅನಾಹುತ ;
ನಿನ್ನ ಮದರಂಗಿ ನಾಚುವಂತೆ ರಕ್ತದ ಓಕಳಿಯಾಡಿ
ಮತ್ತೇ ಫಕ ಫಕನೇ ನಕ್ಕವು !

Thursday, July 05, 2012

ವಚನ-21

ಕಾಣುವ, ಕೇಳುವ ಕ್ರಿಯೆಗಳೆಲ್ಲ
ಪ್ರಮಾಣೀಭೂತ ಸತ್ಯವಲ್ಲ !
ಓಡುವ, ಕೂಡುವ ಸುಖಗಳೆಲ್ಲ ನಿಧಿಗಳಲ್ಲ !
ಮಾರುವ, ಹಾರುವ ಸರಕುಗಳೆಲ್ಲ
ಬತ್ತದ ಬದುಕಿಗೆ ನೆರವಾಗುವುದಿಲ್ಲ !
ನಿಜ ಸಂಗದ, ಅಜ-ಗಜವಿಲ್ಲದ ಮೈತ್ರಿಯ ಮುಂದೆ
ಬೇರೇನೂ ಕಾಣದು ಕಾರಣಿಕ ಸಿದ್ಧರಾಮ
ನಿಜದ ಅರಿತೊಡೆ ಆತಂಕವಿಲ್ಲ !

Wednesday, July 04, 2012

ಸೋಲು ಯಶಸ್ಸಿನ ತಳಹದಿ

                                          ಡಾ. ಗುರುರಾಜ  ಕರ್ಜಗಿ
ಸೋಲು ಗೆಲುವಿನ ತಳಹದಿ  ಎಂದು ಹೇಳುತ್ತಾರೆ. ಆದರೆ, ಕೆಲವರು ಮಾತ್ರ ತಾವು ಕಂಡ ಸೋಲನ್ನು ಸರಿಯಾಗಿ ವಿವೇಚಿಸಿ, ಚಿಂತಿಸಿ, ಸೋಲಿಗೆ ಕಾರಣವಾದ ಸಂಗತಿಗಳನ್ನು ಅರಿತುಕೊಂಡು, ತಿದ್ದಿಕೊಂಡು ಗೆಲುವಿನತ್ತ ಮುಖ ಮಾಡುತ್ತಾರೆ.

ಬಹಳಷ್ಟು ಜನ, ಸೋಲನ್ನು ನೆನೆಯುತ್ತ ತಮ್ಮ ಕೈಯಿಂದ ಅದು ಆಗಲಾರದು ಎಂದುಕೊಂಡು, ಅದೃಷ್ಟ ಹಳಿದು ಕೈಚೆಲ್ಲಿ ಕೂಡ್ರುತ್ತಾರೆ. 1958ರಲ್ಲಿ ಫ್ರಾಂಕ್ ಮತ್ತು ಡ್ಯಾನ್ ಕಾರ್ನೆ ಎಂಬ ಅಣ್ಣ ತಮ್ಮಂದಿರು ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜು ಶಿಕ್ಷಣಕ್ಕೆ ಹಣ ಬೇಕಲ್ಲ.
 
ಅವರದೇ ಆದ ಒಂದು ಕಿರಾಣಿ ಅಂಗಡಿಯಿತ್ತು. ಅಲ್ಲಿಯ ವಸ್ತುಗಳ ಮಾರಾಟದಿಂದ ಬರುವ ಆದಾಯ ಅಷ್ಟಕ್ಕಷ್ಟೇ. ಈ ಹುಡುಗರು ಏನು ಮಾಡುವುದೆಂದು ಚಿಂತಿಸಿದರು. ಈಗ ಹೆಚ್ಚಾಗಿ ಚಲಾವಣೆಯಲ್ಲಿರುವ ವಸ್ತು ಯಾವುದು. ಯಾವುದನ್ನು ತಾವು ಮಾರಬಹುದು ಎಂದು ಸ್ನೇಹಿತರನ್ನೆಲ್ಲ ಕೇಳಿ ಅಭಿಪ್ರಾಯ ಸಂಗ್ರಹಿಸಿದರು.
 
ಆಗ ಹುಡುಗ-ಹುಡುಗಿಯರಿಗೆ ಪಿಜ್ಜಾ ಹುಚ್ಚು ಹೆಚ್ಚಾಗಿತ್ತು. ಫ್ರಾಂಕ್ ಮತ್ತು ಡ್ಯಾನ್ ಪಿಜ್ಜಾ ತಯಾರಿಸುವ ಘಟಕಕ್ಕೆ ಹೋಗಿ ಚೆನ್ನಾಗಿ ತರಬೇತಿ ಪಡೆದರು. ನಂತರ ಬಂದು ತಮ್ಮ ಕಿರಾಣಿ ಅಂಗಡಿಯ ಒಂದು ಭಾಗದಲ್ಲೇ ಅವುಗಳನ್ನು ತಯಾರಿಸಿ  ಮಾರಾಟ ಮಾಡತೊಡಗಿದರು.
 
ಈ ಮೊದಲು ಇಬ್ಬರೂ ಹತ್ತಿಪ್ಪತ್ತು ಬೇರೆ ವ್ಯವಹಾರಗಳಲ್ಲಿ ಹಣ ಹಾಕಿ ಸೋತಿದ್ದರು. ಅದರ ಪ್ರತಿಯೊಂದು ಸೋಲಿನ ಕಾರಣಗಳನ್ನು ಚೆನ್ನಾಗಿ ಅರಿತುಕೊಂಡಿದ್ದರು. ಈ ಬಾರಿ ಗಟ್ಟಿ ತೀರ್ಮಾನವನ್ನೇ  ಮಾಡಿದ್ದರು. ಇದು ಒಳ್ಳೆಯ ಉದ್ಯೋಗ, ಸಣ್ಣ ಪುಟ್ಟ ಸೋಲಿಗೆ ಹೆದರದೇ ಗಟ್ಟಿಯಾಗಿ ಇದಕ್ಕೇ ಅಂಟಿಕೊಂಡು, ಗುಣಮಟ್ಟ  ಸುಧಾರಿಸಿಕೊಳ್ಳುತ್ತ ಹೋಗಬೇಕು.
 
ಈ ಪಿಜ್ಜಾ  ಮಾರಾಟದಲ್ಲೂ ಅವರಿಗೆ ಯಶಸ್ಸು ಹುಡುಕಿಕೊಂಡು ಬರಲಿಲ್ಲ. ಪ್ರತಿಬಾರಿಯೂ ತಮ್ಮ ತಪ್ಪುಗಳಿಂದ ಕಲಿತರು. ತಮ್ಮ ಅಂಗಡಿಯಲ್ಲಿಯೇ ವ್ಯವಹಾರ ನಡೆಸುತ್ತಿದ್ದ ಅವರಿಗೆ ಈ ಅಂಗಡಿ ಒಂದು ಉತ್ತಮ ಸ್ಥಾನದಲ್ಲಿರುವುದರ ಅಗತ್ಯ ತಿಳಿಯಿತು.

ಅಂತೆಯೇ ನಗರ ಮಧ್ಯದಲ್ಲಿ, ಕಾಲೇಜುಗಳ ಹತ್ತಿರವೇ ಅಂಗಡಿ ತೆರೆದರು, ವ್ಯಾಪಾರ ದ್ವಿಗುಣವಾಯಿತು. ನ್ಯೂಯಾರ್ಕಿನ ಅಂಗಡಿ ಸ್ವಲ್ಪ ಬೆಳವಣಿಗೆಯನ್ನು ಕುಗ್ಗಿಸಿಕೊಂಡಾಗ ಕಾರಣ ಹುಡುಕಿದರು.
 
ಅಲ್ಲಿಯ ಜನರ ರುಚಿಯಲ್ಲಿ ವ್ಯತ್ಯಾಸವಾಗಿತ್ತು. ಓಕ್ಲೊಹೋಮಾದಲ್ಲಿ ಜನರು ಪಿಜ್ಜಾ ಬಿರುಸಾಗಿರಬೇಕು, ಕುರುಕುರು ಆಗಿರಬೇಕು ಎಂದು ಅಪೇಕ್ಷೆ ಮಾಡಿದರೆ ನ್ಯೂಯಾರ್ಕಿನ ಜನ ಪಿಜ್ಜಾ ತುಂಬ ದಪ್ಪವಾಗಿ, ಮೃದುವಾಗಿರಬೇಕು ಎಂದು ಅಪೇಕ್ಷೆ ಪಡುತ್ತಿದ್ದರು.

ಅದನ್ನು ಗಮನಿಸಿ ದಪ್ಪ ಹಾಗು ಮೃದುವಾದ ಪಿಜ್ಜಾಗಳನ್ನು ತಯಾರು ಮಾಡಿದಾಗ ಜನ ಹುಚ್ಚೆದ್ದು ತಿಂದರು, ಅಂಗಡಿಯಲ್ಲಿ ಸ್ಥಳವಿಲ್ಲದಾಗ ರಸ್ತೆಯ ಬದಿಯಲ್ಲಿ ನಿಂತು ತಿಂದರು. ವ್ಯಾಪಾರ ಗಗನಕ್ಕೇರಿತು. ಹೀಗೆ ಪ್ರತಿಸಲ ವೈಫಲ್ಯ ಬಂದಾಗ ಮತ್ತಷ್ಟು ಛಲದಿಂದ ಪುಟದೆದ್ದು ಯಶಸ್ಸನ್ನು ಪಡೆದರು.
 
ತಮ್ಮ ಅಂಗಡಿಗಳಿಗೆ  `ಪಿಜ್ಜಾ ಹಟ್`  ಎಂದು ಹೆಸರಿಟ್ಟು ಜಗತ್ತಿನೆಲ್ಲೆಡೆ ಮಳಿಗೆಗಳನ್ನು ನಿರ್ಮಿಸಿ ಅದನ್ನು ಮೂವತ್ತು ಕೋಟಿ ಡಾಲರ್‌ಗಳಿಗೆ ಮಾರಾಟಮಾಡಿ ಕೋಟ್ಯಧೀಶರಾದರು.  ಸೋಲೇ ಗೆಲುವಿನ ತಳಹದಿ  ಎಂದು ಈ ಕಾರ್ನೆ ಸಹೋದರರು ಖಚಿತವಾಗಿ ನಂಬುತ್ತಾರೆ. ಸೋಲು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ.

ಸೋಲನ್ನು ನಮ್ಮ ವಿರುದ್ಧವಾಗಿ ನಿಲ್ಲಿಸಿ, ಕೊರಗಿ ಶಕ್ತಿ ವ್ಯಯ ಮಾಡಿಕೊಳ್ಳುತ್ತೇವೋ ಅಥವಾ ಅದನ್ನು ನಮ್ಮ ಸ್ನೇಹಿತನಂತೆ ನಮ್ಮಡನೆ ಸೆಳೆದುಕೊಂಡು, ಕಾರಣವನ್ನು ವಿಶ್ಲೇಷಿಸಿ ಮತ್ತಷ್ಟು ಶಕ್ತಿ ವೃದ್ಧಿಸಿಕೊಳ್ಳುತ್ತೇವೋ ಎನ್ನುವುದು ನಾವು ಜೀವನದಲ್ಲಿ ಪಡೆಯುವ ಯಶ ಅಥವಾ ಸೋಲನ್ನು ನಿರ್ಧರಿಸುತ್ತದೆ.
ಕ್ರಪೆ : ಪ್ರಜಾವಾಣಿ,   : ಜುಲೈ 3 2012 

ಮಾತ್ಗವಿತೆ-89

ಬರೀ ಹೋರಾಟ, ತತ್ವ, ಸಿದ್ಧಾಂತ, ಆದರ್ಶ
ನಮ್ಮ ಬದುಕನ್ನು ಕಟ್ಟಿ ಕೊಡಲಾರವು !
ಅವು ಕೇವಲ ವೇದಿಕೆಯ ಮಾತುಗಳು !
ಬದುಕು ಕಟ್ಟಿಕೊಳ್ಳುವ ಇಂದಿನ ದಿನಮಾನದಲ್ಲಿ
ರಾಜಿಯಾಗಬೇಕು ; ರಾಜಕೀಯ ಬೆರೆಯಬೇಕು !
ಘಾಸಿಯಾದರೂ ಹೇಸಿಕೆ ಎನಿಸಿದರೂ
ಪಾದಪೂಜೆ ಸಾಂಗವಾಗಿ ನಡೆಯಲೇ ಬೇಕು !
ಗುಲಾಮರೇ ಬೇಕಾಗಿರುವ ದೇಶಕ್ಕೆ
ಸಲಾಮು ಹೊಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು
ಇಲ್ಲದಿದ್ದರೆ ಮುಲಾಮಿಲ್ಲದೆ ಒಣಗುವ
ನಮ್ಮ ಗಾಯವನ್ನು ಮತ್ತಷ್ಟು ಕೆರೆಯಲಾಗುತ್ತದೆ !
ರಕ್ತ ಜಿನುಗಿ ಆವಾಗಾವಾಗ ನರಳುತ್ತಲೇ ಇರಬೇಕಾಗುತ್ತದೆ !

Monday, July 02, 2012

ರಾಜಕೀಯ ದುರಾಡಳಿತಕ್ಕೆ ಪರ್ಯಾಯ ಏನು ?

ಟಿ.ವ್ಹಿ. ನೋಡುತ್ತಿದ್ದೆ. ಸರಕಾರದ ಬಗ್ಗೆ ಬೇಸತ್ತ ವ್ಯಕ್ತಿಯೊಬ್ಬ ಆತಂಕ ವ್ಯಕ್ತಪಡಿಸುತ್ತಿದ್ದ. ಆಂಕರ್ ಗಳು ಪಿಚಗುಟ್ಟುತ್ತಿದ್ದರು. ಆದರೆ ನನಗೆ ಅನ್ನಿಸುತ್ತೆ ಒಳ್ಳೆಯವರಿಗೆ ಮತದಾನ ಮಾಡಬೇಕು ; ಒಳ್ಳೆಯವರನ್ನು ಜನಪ್ರತಿನಿಧಿಯನ್ನಾಗಿ ಆರಿಸಿ ತರಬೇಕು ಎಂಬುದು ಇವತ್ತು ಹಳೆಯ ಮಾತು. ಯಾಕೆಂದರೆ ವ್ಯವಸ್ಥೆ ಬದಲಾಗುತ್ತಿಲ್ಲ. ಅದಕ್ಕೆ 'ಕಠಿಣ' ವಾದ (ಕಟ್ಟುನಿಟ್ಟಾದ) ನಿಯಮಗಳು, ನಿರ್ಬಂಧನೆಗಳು ಇರಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಒಂದು ಕ್ರಿಮಿನಲ್ ಕೇಸ್ ದಾಖಲಾದರೆ ಸಾಕು, ಆ ವ್ಯಕ್ತಿಗೆ ಚುನಾವಣೆ ಸ್ಪರ್ಧಿಸಲು ಚುನಾವಣಾ ಆಯೋಗ ಅನುಮತಿ ನೀಡಬಾರದು. ಆತ ನ್ಯಾಯಾಲಯದ ಮೂಲಕ ನಿರಪರಾಧಿಯಾಗಿ ಹೊರಬಂದರೆ ಮಾತ್ರ ಅವಕಾಶ ನೀಡಬೇಕು, ಅದೂ ಷರತ್ತುಬದ್ಧವಾಗಿರಬೇಕು. ಹಾಗಾದಾಗ ಸರಕಾರ, ಆಡಳಿತ ಎಲ್ಲವೂ ಒಂದಿಷ್ಟು ಮಟ್ಟಿಗೆ ಬದಲಾವಣೆ ಕಾಣಬಹುದು. ಏನಂತೀರಿ ?

Sunday, July 01, 2012

ಮಾತ್ಗವಿತೆ-88

ಮಾತು ಮಾತಿಗೆ ಸುಳ್ಳು ಪೋಣಿಸುತ್ತ
ಸಾಥ್ ಕೊಡುವ ಮಾತುಗಳ ಮರೆಯುತ್ತ
ಕೊಲ್ಲುವುದ್ಯಾಕೆ ಪ್ರತಿಕ್ಷಣ ?
ಸಾವಿರದ ಸತ್ಯವನ್ನು ಒಮ್ಮೆ
ಕಕ್ಕಿ ಬಿಡಬಾರದೇ ?

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.