Sunday, August 31, 2014

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಕೆಡಿಸುವ ಹುನ್ನಾರ !





ದಲಿತರ ವಿಷಯವನ್ನು ಎತ್ತಿಕೊಂಡು ರಾಜ್ಯ ಸರಕಾರವನ್ನು ವಿರೋಧಿಸಿ ಒಂದು ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ಮಾಡಿ ಕೆಲವು ಸಮಸ್ಯೆಗಳ ಬಗ್ಗೆ ಸರಕಾರ ತೀವ್ರವಾಗಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದು ಸರಿಯಾದರೂ ಅಲ್ಲಿರುವ ಮುಖಂಡರ ಹೇಳಿಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಿದ್ದು ಸರಿಯಲ್ಲ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ (ದಿನಾಂಕ : 28-08-2014 : ನಮ್ಮ ಮಹಾನಗರ) ಈ ಸುದ್ದಿ ಪ್ರಕಟವಾಗಿದೆ.
‘ಗೋಮಾತೆಯನ್ನು ಪೂಜ್ಯನೀಯವಾಗಿ ಕಾಣುವ ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೂ ಕೂಡ ಗೋ ಹತ್ಯೆ ನಿಷೇಧ ಜಾರಿಗೆ ಬಂದಿಲ್ಲ. ಕಾರಣ ರಾಜ್ಯ ಸರಕಾರ ಆದಷ್ಟು ಬೇಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಗೋಹತ್ಯೆ ನಿಷೇಧ'ದ ಬಗ್ಗೆ ಎಲ್ಲಿಯೂ ಹೇಳಿದ ಬಗ್ಗೆ ನಮಗಂತೂ ಗೊತ್ತಿಲ್ಲ. ಪ್ರತಿಭಟನೆ ಮಾಡಿದ ಪಕ್ಷದವರು ಅದನ್ನು ಹೇಳಿದರೆ ನಮಗೆ ಒಂದಿಷ್ಟು ಜ್ಞಾನ ಲಭ್ಯವಾಗುತ್ತದೆ. ಇಲ್ಲವಾದರೆ ಸುಳ್ಳು ಹೇಳುವ ಮೂಲಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ
ಅವಶ್ಯಕತೆಯಿಲ್ಲ ; ಹಾಗೇನಾದರೂ ಮಾಡಿದರೆ ಇತಿಹಾಸವನ್ನು ಮರೆಮಾಚುವ ಮಂದಿಯ ವಿರುದ್ಧ ಕೆಂಡ ಕಾರಲೇ ಬೇಕಾಗುತ್ತದೆ. ಯಾವ ಹಿಂದೂ ಧರ್ಮವನ್ನು ಪ್ರತಿಭಟಿಸಿ, ವಿರೋಧಿಸಿ, ಹೊಸದೊಂದು ಇತಿಹಾಸ ನಿರ್ಮಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು, ಅವರು ಹೇಳದೇ ಇರುವ ಸಂಗತಿಗಳನ್ನು ಅವರ ತಲೆಗೆ ಕಟ್ಟಿ ಅಪಪ್ರಚಾರ ಮಾಡುವ ಉಮೇದಿನಲ್ಲಿ
ಇರುವ ಮಂದಿಯನ್ನು ತಹಬಂದಿಗೆ ತರುವ ಹೋರಾಟ ಇನ್ನಷ್ಟು ತೀವ್ರವಾಗುವ ಅನಿವಾರ್ಯತೆ ಇದೆ.

Wednesday, August 27, 2014

ಮಾತ್ಗವಿತೆ-173

ಕಾಲಕ್ಕೆ ಕಾಯು ಎಂದವರೇ
ಕಾಲನಾಗಿ ಇಲ್ಲವೇ ಕಾಲನಾಗಿ
ಹಣ ಮಾಡುತ್ತ ಹೆಣ ಮಾಡಿದರೆ
ನಾಲಿಗೆ ಕಳೆದುಕೊಂಡ ಮೌನಗಳು
ಮಾತ ಬಾರದೆಂದೆಂದೂ ಎಂದು
ಹರುಷ ಪಡುವ ಅವಶ್ಯಕತೆಯಿಲ್ಲ !
ದೇಹವ ದಂಡಿಸಿದವರ ; ಒಳಗ ಇರಿದವರ
ನೊಸಲ ಮೆಟ್ಟಿ, ರಸಾತಳಕ್ಕೆ ಅಟ್ಟುವಷ್ಟು
ಅಡಿಸಿದ ಅಳಕವಿದೆ ; ಬೆಳಕು ಇದೆ !
ನದಿ ದಾಟಲು ಈಸು ಬರಬೇಕು ಅಂತಲ್ಲ
ನಾವೆ ಇದ್ದರೂ ಸಾಕಲ್ಲವೇ ?

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.