Monday, November 14, 2011

ವಚನ-6

ಉಳ್ಳವರು ಶಿವಾಲಯ ಮಾಡಿದರೆ
ನಾನೇನು ಮಾಡಲಿ ಎನ್ನಲಾಗದು ಇಂದು !
ಮನುಷ್ಯ-ಮುನುಷ್ಯರ ನಡುವೆ ಸಂಬಂಧ ಬೆಸೆಯುವ
ಮಹಾಲಯ ಮಾಡುವ ಕನಸುಗಾರಿಕೆ ಬೇಕು !
ಜಗದ ಕೋಟಿ ಕೋಟಿ ಕನಸುಗಳಿಗೆ ಕಸುವಾಗಬೇಕು
ನೀಗಬೇಕೋ ಅಳಲಿನ ಬದುಕ ಕಾರಣಿಕ ಸಿದ್ಧರಾಮ
ನೀಗಿಸಲಾಗದ ನಿಗಿ ನಿಗಿ ಕೆಂಡ ಕೊನೆಗೂ ಬೂದಿ !

1 comment:

  1. ಅವರು ಶಿವಾಲಯ ಮಾಡಿದರೇನು? ಅವರು ಮಾಡಿದ್ದು ಅವರಿಗೆ !
    ನೀನೇನು ಮಾಡಬಲ್ಲೆ ? ನಿನ್ನನ್ನು ಜಗಕರ್ಪಿಸಿದ ಮಾತೃದೇವಿಗೆ !
    ನೀನು-ನಾನೆಂಬ ಅಭಾಸಗಳೆಕೆ? ನಾನೆಂಬ ನೀನಾದ ಸಮಭಾವದ ಬದುಕಿಗೆ !
    ಕನಸುಗಾರಿಕೆಯ ಕಸುಬೊಂದೆ ಸಾಕೆ? ತನ್ನೋಳಗಿರಬೇಕು ಸಮರ್ಪಣಾ ಭಾವದೀವಿಗೆ !
    ಕಸುವಿನ ಕನಸಿಗೇಕೆ ಬೇರೊಬ್ಬರ ಹಂಗು? ತೀವ್ರತೆಯ ಬುದ್ಧಿಬಲಕ್ಕೆ ಈಡಾಗುವವೇ ಜಗದ ಕನಸುಗಳು ಈ ಕನವರಿಕೆಗೆ !
    ಅಳಮುಂಜಿನ ಬದುಕಿನ ಮಾತೇಕೆ? ಕೆಂಡದಂತೆ ಕಂಡ ಕನಸು ಕರಗಿ ಬೂದಿಯಾದರೂ ಛಲಬೇಕು ಪೀನಿಕ್ಸ್ ಹಕ್ಕಿಯಂತೆ ಮರಳಿ ಉದ್ಭವಿಸುವಿಕೆಗೆ !

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.