Monday, April 29, 2013

ಮಾತ್ಗವಿತೆ-124

ತಳಬುಡವ ಅರಿಯದ ತಡವರಿಕೆಯಲ್ಲಿ
ಲೊಳಲೊಟ್ಟೆ ಅಂತ ಪುರಂದರ ಹಾಡಿದ್ದು ತಪ್ಪಲ್ಲ !
ಬಿತ್ತುವ ಬೀಜ ಮೊಳಕೆಯಾಗಬೇಕು  ಅಂದರೆ
ನೆಲ ಹಸಿಯಾಗಿರಬೇಕು ; ಬೀಜ ಬಲಿತಿರಬೇಕು !
ಹುಸಿಯಾಗದು ಬೆಳೆ
ಅಂದರೆ
ಅರ್ಥ ಹುಡುಕುವ ಅವಶ್ಯಕತೆ ಇಲ್ಲ !

Saturday, April 27, 2013

ಪೂರ್ವಿಕರ ಕನಸುಗಳ ದಾರಿಗೆ ...... !


- ಸಿದ್ಧರಾಮ ಹಿಪ್ಪರಗಿ, ಧಾರವಾಡ
ಹೊಟ್ಟೆಯೊಳಗಿನ ಸಂಕಟಗಳು
ಹೂಂಕರಿಸಿದರೆ ಹಿಂಸೆಗಳು
ಉಸಿರುಗಟ್ಟಿಸುವ ಅವಮಾನಗಳು
ದನಿಯೆತ್ತಲು ದಬ್ಬಾಳಿಕೆಗಳು
ಅಂಧತ್ವದ ದೌರ್ಜನ್ಯಗಳು
ಕಳೆದು ಹೋದವು ಸಾಕಷ್ಟು ಶತಮಾನಗಳು !

ಮೂರು ಕಾಸಿನ ಕೂಲಿಗೆ ಮೂಳೆ ಮುರಿದುಕೊಂಡು
ಅವಮಾನದ ಯಮ ಭಾರದ ಹೊರೆ ಹೊತ್ತುಕೊಂಡು
ಘೋರ ಹಸಿವಿನ ರಕ್ಕಸನ ಮಡಿಲಲ್ಲಿಟ್ಟುಕೊಂಡು
ಬಡತನವೆಂಬ ಭೂತಕ್ಕೆ ಸೊಡ್ಡು ಹೊಡೆದುಕೊಂಡು
ಭೀಮಜ್ಯೋತಿಯ ಮಾರ್ಗದಲ್ಲಿ ಉರಿದುಕೊಂಡು 
ಮೊದಲು ಮನುಷ್ಯ ನಾನೆಂಬ ಅರಿವಾಗಿಸಿಕೊಂಡು
ಕುಗ್ಗದೆ ಧೈರ್ಯವೆಂಬ ಆಯುಧ ಹಿಡಿದುಕೊಂಡು
ನಾನು ನಾನಾಗಲು ಜಾಗೃತಗೊಂಡು !

ಹೊರಟಿರುವೆನು  ದೃಢತೆಯ ಹೆಜ್ಜೆಯಲಿ
ಜೊತೆಗಿದೆ ಭೀಮ ಬಲದ ರಕ್ಷಾಕವಚ
ಅನ್ಯಾಯದ ವಿರುದ್ಧ ಒಗ್ಗೂಡುವಿಕೆಗೆ 
ನಾಗರಿಕ ಸಮಾಜದ ನಿರ್ದಯತೆಯ  ನಿರ್ಲಕ್ಷ್ಯ
ಹೋಗಲಿ ಬಿಡಿ ಅಂಜುವುದೇಕ್ಕೇನಿದೆ ?

ವಾಸ್ತವ ಪರಿಚಯಿಸಿದ ಚಳುವಳಿ
ಆಧ್ಯಾತ್ಮ ಪಯಣದ ಬಳುವಳಿ
ಜೀವನ ಪಾಠಗಳ ಕಲಿಯುತ
ಕಲಿತಿದ್ದನ್ನು ಅಳವಡಿಸಿಕೊಳ್ಳುತ
ಸಾಗಿದೆ ಸಂಗ್ರಾಮ ನಿರಂತರ !

ಸಮಾನತೆ-ಸಾಮಾಜಿಕ ನ್ಯಾಯ
ಸಹಬಾಳ್ವೆ-ಸಮಪಾಲು
ಆಶಾದೀವಿಗೆಯ ಜ್ಯೋತಿಗಳು
ಮನೆ-ಮನದ ಬಾಗಿಲುಗಳ
ಬಡಿದಾಗ ಸ್ವಾಗತಿಸುವ 
ಮುಖಗಳನು ಅರಳಿಸಬೇಕಿದೆ
ಸವಾಲುಗಳ ಎದುರಿಸಬೇಕಿದೆ
ಎಡರು-ತೊಡರು ನಿವಾರಿಸಿಕೊಳ್ಳಬೇಕಿದೆ !

ಮನೆಯ ದ್ವಾರಪಾಲಕ ನೀನಾಗದೇ 
ಆನೆಯಂತಿರುವ ದೈತ್ಯಮನೆಯ ಮಾಲೀಕನಾಗುವ 
ಪೂರ್ವಿಕರ ಕನಸುಗಳ ದಾರಿಗೆ 
ಹೂ ಹಾಸಬೇಕಿದೆ !

Monday, April 22, 2013

ಬದುಕು ನಶಿಸುವುದಿಲ್ಲ !



- ಸಿದ್ಧರಾಮ ಹಿಪ್ಪರಗಿ, ಧಾರವಾಡ
 
ಶಾಶ್ವತ ಭಾವ ಅನುಭವಿಸಿದಾಗ
ಬದುಕು 
ಸಂತಸದ ಕಣಜ !
ಅರಿಯಿರಿ
ಚಿತೆಯಂತಹ ಚಿಂತೆಗಳು ಕರಗುವವು !
ಉದ್ವೇಗದಲಿ
ದೇಹ ಸಾಮರ್ಥ್ಯ ಕಳೆದುಕೊಳ್ಳುವುದು !
ನಕಾರಾತ್ಮಕ ಸಂಗತಿ
ಆವರಿಸದಂತೆ ನೋಡಿಕೊಳ್ಳಿ
ಕೆಟ್ಟ ಆಲೋಚನೆಗಳಿಂದ ದೂರವಿರುವುದ !
ಕ್ಷಮಿಸೆಂದು ಭಯ ಬಿದ್ದವರು
ಜವಾಬ್ದಾರಿ ನಿಬಾಯಿಸಲು
ಔಟ್-ಪುಟ್ ತೋರಿಸಲು
ನಿಖರತೆಯಿಲ್ಲದ ಫಲಿತಾಂಶಕೆ ಶರಣಾಗುವರು !
ಕೊನೆಗೆ
ಚಡಪಡಿಕೆ ಅನುಭವದ 
ಅತೃಪ್ತರು !
ಶಾಂತಿಯಿಂದ ಚಿಂತಿಸಿ 
ಮುಂದಡಿಯಿಟ್ಟಿದ್ದರೆ !?
ಇಟ್ಟಿದ್ದರೆ ...
ಯಶಸ್ವಿ ಫಲಿತಾಂಶದ ಪರಿಮಳ ಎಲ್ಲೆಡೆ
ವ್ಯಾಪಿಸುತ್ತಿತ್ತು ಸಹಜಾನಂದದಲಿ !
ಕಿರುಗೆಲಸದಲಿ ಗುಣಮಟ್ಟ ;
ಬೇಡ ಖಾಲಿತನದ ಅಬ್ಬರ
ಕಳೆದುಕೊಳ್ಳುವುದು ಏನಿಲ್ಲ !
ಸಮಯದ ಹಂಗಿಲ್ಲ
ಬದುಕು ನಶಿಸುವುದಿಲ್ಲ
ಸಂತಸ ಆಚರಿಸಲು ತೊಂದರೆಯೇನಿಲ್ಲ !

Saturday, April 20, 2013

ಲಹರಿ-1

ಪಂಪ-ರನ್ನ-ಪೊನ್ನ ಜೊತೆಗೆ ಜನ್ನ !
ನಂತರದಲ್ಲಿ ಬಸವ-ಅಲ್ಲಮ-ಅಕ್ಕ ಚೆನ್ನ !
ತದನಂತರ ಹರಿಹರ-ರಾಘವಾಂಕ-ಚಾಮರ !
ಮತ್ತೇ ಸುರುವಾಯಿತು ಕುವರವ್ಯಾಸ, ಮುದ್ದಣ
ಬಂದರೋ ಬಿಎಂಶ್ರೀ, ಬೇಂದ್ರೆ, ಕಾರಂತ
ಜೊತೆಗೆ ಕುಪ್ಪಳ್ಳಿಯ ಪುಟ್ಟಣ್ಣ !
ಇಂದಿಗೂ ಮುಗಿದಿಲ್ಲ ಜಾತಿಯ ಲೆಕ್ಕಾಚಾರ !
ಅದಕೆ  ಸತ್ತವರು ಇವರು, ಇದಕೆ ಸತ್ತವರು ಇವರು !
ಜನಕಾಗಿ ಸತ್ತವರು ಯಾರು ? ಸಾಯಿಸಿದವರು ಯಾರು ?

- ಇದು ಬರೀ ಸಾಹಿತ್ಯ ಚರಿತ್ರೆಯಲ್ಲ ; ಕನ್ನಡದ ಇತಿಹಾಸ !

हिंदू पुरुषांच्या ब-याचशा दुष्ट चालींचा उगम........... -प्रबोधनकार ठाकरे


 - Prashanth M. Gaikwad 


हि नोट पब्लिश करण्यामागचा माझा  हेतू सगळ्यांना समजलाच असेल
''धम्मात स्त्रीचे स्थान अतिशय आदरणीय आहे …! '' हे वाचून झालच असेल हे पण एकदा वाचा .. 

हिंदुजनांचा –हास आणि अधःपात
प्रबोधनकार ठाकरे भाग ८

आपली लहान मुले कर्तव्यशील व्हावीत म्हणून हिंदू मातापितरे त्यांच्याजवळून रामायण वाचून घेतात. राम, सीता, लक्ष्मण यांची माहिती बहुतेकांस लहानपणीच होते. रामायण वाचणा-या या मुलांच्या मनांवर, इतर काही गोष्टींचा ठसा उमटो, वा न उमटो, पण त्यातील एक गोष्ट सर्वांच्या लक्षात ठळकपणे राहते. ती कोणती?

रावणाच्या बंदीतून सीता सोडविल्यानंतर सर्व सैनिकांसमक्ष सीतेने अग्निप्रेवश करून आपले पावित्र्य निष्कलंक असल्याचे सिद्ध करून दाखविल्यानंतर रामाने तिचा स्वीकार केला होता. पण पुढे अयोध्येस आल्यावर कोणा एका सामान्य मनुष्याने सीतेच्या शुद्ध शीलाबद्दल किंचित संशय व्यक्त करताच, रामाने पुढचा मागचा काहीत विचार न करता, सीता पूर्ण नऊ महिन्यांची गरोदर आहे हेही विचारात न घेता, तिला ताबडतोब अरण्यात हाकलून दिली. आणि हे इतके का ?

तर प्रजेची एक छचोर लहर सांभाळण्यासाठी! दैवी रामरायाने जे हे मोठे शतकृत्य केले त्याचे अनुकरण तुमची कर्तव्यशील हिंदु बाळे करावयास चुकतील अशी का तुमची समजूत आहे? असेल तर ती साफ चुकीची आहे. किती तरी बालसीता यापूर्वी या हिंदुस्थानात शोकभाराने मृत्युवश झाल्या आहेत. आणि मी खात्रीलायक सांगतो की, आजही कित्येक कजाग सासवा व नणंदा यांच्या वृथा संशयाला बळी पडलेल्या शेकडो बालसीता आपले अभागी आयुष्य रडण्यात कंठीत आहेत.

आजच्य आधुनिक कर्तव्यपरायण रामांची हृदये कठीण करण्याकरता अयोध्येच्या कुटाळ प्रजेची भूमिका या आजकालच्या सासवा आणि नणंदा घेत असतात.

असल्या रानटी व राक्षसी चित्राला रामायणात दैवी रंग चढविल्यामुळे किती तरी हिंदुंच्या संसारांचा हकनाहक नाश झालेला आहे. आणि किती तरी मुग्ध बालिकांच्या जीवनसर्वस्वाचा होम झालेला आहे.

असल्या पवित्र ग्रंथातील भूमिकेवर हिंदु-भारतवर्षाचे आजचे गृहजीवन उभारलेले आहे. धार्मिक भावनाशील किंवा आदर्शपूजना करणारे लोक यांचा यांच्यात फारसा दोष नाही. त्यांना बालपणापासून जे शिक्षण दिलेले असते, त्याची त्यांच्या मनःपटलावर जी चित्रे कोरली जातात, तीच कायम ठशाने जन्मभर तेथेच टिकून राहतात.ज्या ब्राह्मण लेखकाने रामाला अशा रानटी स्वरूपात जनतेपुढे उभा केला आहे. त्याकडे वास्तविक खरा दोष येतो. त्यातही पुन्हा या रामायणाचे सुद्धा प्रसंगाप्रमाणे आणि सोईप्रमाणे कित्येक वेळ शोधन आणि नवीन संपादन झालेले आहेच.
आज आमच्या हातात पडणारे रामायण हे खास काही मूळचे वाल्मिक रामायण नाही आणि विद्वानांच्या मते हल्ली उत्तररामचरित्र या नावाने जो भाग प्रसिद्ध केला आहे तो तर हमखास कुठल्या तरी दूर धोरणाने मागाहून कोणीतरी घुसडून दिलेला असला पाहिजे. हे दूर धोरण काय असावे याची आपण लवकरच मीमांसा करू.

ज्या शहाण्याने हे उत्तररामचरित्र निर्माण केले, त्याला सीतादेवी वरच्या नसत्या संशयाची पुनरावृत्ती टाळता आलीच नसती काय? अग्निदिव्याने संशयाची निवृत्ती जनजाहीर झाली असताही त्या लेखकाने काढलेले गरीबा बिचा-या सीतामाईचे पुढचे धिंडवडे त्याला का टाळता आले नाहीत? त्यात त्याने काय साधले? सीतामाईविषयीच्या संशयाचा पुनश्च पराचा कावळा करून नाचविण्याचा या उत्तररामचरित्रवाल्याचा हेतू, हिंदू स्त्रियांना एक सणसणीत कायमचा दम भरून ठेवण्यात आढळतो. त्याला स्त्रीजातीला बजावून ठेवावयाचे होते की, याद राखा, तुम्ही कितीही शुद्ध आणि सद्गुणी असलातरी तुमच्याविरुद्ध लवमात्रही वेडावाकडा शब्द ऐकू आला तर, तुम्हाला बिलकूल दयामाया न दाखविता, तुमची चौकशीसुद्धा न करता केवढी भयंकर शिक्षा तुमच्या नव-यांकडून फर्माविण्यात येईल, हे नीट ध्यानात ठेवा. संशयाच्या नुसत्या चुटपुटत्या कल्पनेचाही वारा तुमच्या बाबतीत आम्हा पुरुषांना क्षणमात्र खपणार नाही.उपदेश करण्याच्या दिमाखाने चितारलेल्या या खोडसाळ शब्दचित्राने सीतामाईच्या चारित्र्याला मुळीच धक्का लागलेला नाही. ते कमलपात्राप्रमाणे निष्कलंक आणि अवधूतच राहिले. स्त्रीजातीच्या सद्गुणांची दिव्य प्रतिमा म्हणून तिचा महिमा युगानुयुगे अधिकाधिक प्रकाशमानच होत आहे. पण – पण त्या तुमच्या आदर्शभूत दैवी रामाच्या पौरुषाचे घाणेरडे चित्र म्हणजे हिंदुस्थानाच्या पौरुषत्वाला नामुष्की आणणारी एक चिरंजीव शरमेची बात होऊन बसले आहे.

रामाला अनेक इतर ठिकाणी नीतिमत्तेचा आणि आत्मत्यागाचा केवळ पुतळा असा रंगविलेला आहे. त्या रंगवटीला अनुसरूनच, रामायण-लेखकाने खालच्या सारखे त्याचे चित्र रंगविले असते, तर किती तरी चांगले झाले असते? अयोध्येच्या लोकांनी सीतेच्या पावित्र्याबद्दल शंका घेताच, रामाने ताबडतोब एक जंगी दरबार भरवून लोकांना जाहीररीतीने सांगायचे होते की ``नागरिक जनहो, तुम्हाला माझ्या महाराणीबद्दल काही संशय येत आहे. माझ्याबरोबर सिंहासनी तिने बसू नये, असे तुम्हाला वाटत आहे काय? ठीक आहे. तर मग मला या राज्याचीच पर्वा नाही. आत्ताच्या आत्ता सर्व राज्यसूत्रे भरताच्या स्वाधीन करून सीतेसह मीच अरण्यवासाचा रस्ता पत्करतो. तुमचा संशय काहीही असला तरी सीतेच्य पावित्र्याबद्दल माझी बालंबाल खात्री झालेली आहे. मला इतरांच्या कुटाळक्यांकडे लक्ष देण्याचे मुळीच कारण नाही. प्रजाजनहो नीट विचार करा. सीतादेवी माझी वाग्दत्त विवाहबद्ध पत्नी आहे. ती पूर्ण दिवसांची गर्भवती असून, लवकरच तिला मातृपदही प्राप्त होणार आहे. अशा अवस्थेत केवळ तुमच्या संशयाच्या लहरीचे रंजन करण्यासाठी मी जर तिचा त्याग करीन तर राक्षसात आणि माझ्यात फरक तो काय?’’ मी जसा तुमचा राजा हे, तसा सीतेचाही राजा आहे. तुमच्याप्रमाणेच तिनेही जर न्यायाची मागणी केली, तर राजा या नात्याने कोणत्या तोंडाने मला ती नाकारता येईल सांगा. मी जर ही तिची न्यायाची मागणीच मान्य केली नाही, तर राजपदालाच काय, पण माणुसकीलाही मी नालायक ठरेन.’’
अशा त-हेने रामाची भूमिका जर रंगविली असती, तर रामायणातला राम आमच्या हिंदू राष्ट्राचा एक नमुनेदार पुरुषोत्तम (हीरो) म्हणून खास शोभून दिसला नसता काय?

लक्ष्मणाचीही मोठी स्तुती गाण्यात येते. का? तर म्हणे रावणाची बहीण जी शूर्पणखा, तिने लक्ष्मणाशी प्रेमाचा लघळपणा केला म्हणून त्याने तिचे नाक-कान छाटले. या गोष्टीचा आमच्या तरुणांच्या मनांवर किती घाणेरडा विकृत परिणाम होत असतो. याची कोणाला कल्पना तरी आहे काय? शूर्पणखेने स्त्रीस्वभावानुसार कितीही लघळपणा केला, तरी लक्षअमणाला त्या स्त्रीशी सौजन्याने दयाळूपणाने व दिलदारपणाने खास वागता आले असते. वाटेल त्या क्षुद्र कारणांवरून बायकांची नाके कापणे, किंवा इतर रीतीने त्यांना विद्रूप करणे, हा हिंदू पुरुषाचा मर्दपणा एकंदरीत बराच प्राचीन लौकिकाचा आहे
.
हेच काय, पण बायकांना पशुप्रमाणे क्रूर रीतीने वागविण्याच्या हिंदू पुरुषांच्या ब-याचशा दुष्ट चालींचा उगम, आदर्श म्हणून डंका पिटलेल्या या राम लक्ष्मणाच्या जोडीच्या चरित्रचित्रातच सापडतो. उत्तररामचरित्राच्या शेवटी लक्ष्मणाबद्दल एक दुःखद गोष्ट वर्णन केलेली आहे. राम कोणातरी ति-हाईताशी एकांतात बोलत बसला होता. राज्यकारभाराच्या काही महत्त्वाच्या गोष्टींबद्दल लक्ष्मणाला भेट घ्यायची होती. भानगड तर मोठी जरूरीची. क्षणाचाही विलंब नको होता. म्हणून लक्ष्मण तसाच आत गेला. झाले, रामरायाचा एकांत बिघडला. लक्ष्मणाने केलेल्या या भयंकर अपराधाबद्दल त्याला शिक्षा ठोठावण्यात आली की `मरेपर्यंत पुन्हा मला तोंड दाखवू नकोस.’

रामासाठी सारा जन्म लक्ष्मणाने जे अकृत्रिम बंधुप्रेम व भक्तीची निस्सीम सेवा केली, ती निमिषार्धात क्षुल्लक गैरसमजासाठी चुलीत गेली! या असल्या `पवित्र’ उदाहरणांचा परिणाम हिंदू समाजावर कसा झाला व होत आहे, हे पाहायचे असेल तर जरा हायकोर्टाच्या आणि स्मॉल कॉजेस कोर्टांच्या खटलेबाजीकडे लक्ष द्या. वडिलार्जित इस्टेटीच्या तुकड्यांसाठी एकमेकांच्या उरावर बसणा-या शेकडो राम-लक्ष्मणांच्या जोड्या तेथे तुम्हाला भेटतील. `

प्रबोधनकार ठाकरे या महापुरुषाला लाख-लाख प्रणाम.



Thursday, April 18, 2013

ವಚನ-26

ಗಟ್ಟಿ ಗಟ್ಟಿ ಅಂದುಕೊಂಡಿದ್ದೆಲ್ಲ ಅಳಕಾಗಿ
ಇಳಿದು ಹೋದಾಗ ನೆಮ್ಮದಿಗೆ ಭಂಗವಾಗಬಾರದು !
ದಂಗುಬಡಿಸುವಂತೆ ಮತ್ತೇ ಚಿಗಿಯಬೇಕು !
ಮತ್ತೇ ಗಟ್ಟಿಯಾಗಬೇಕು ; ಅಳಕಾಗಲಿ ಅಳುಕಬಾರದು !
ಗಟ್ಟಿ-ಅಳಕಿನ ನಡುವಿನ ಅಂಬಲಿಯೂ ಅಳಕಲ್ಲವೆ
ಕಾರಣಿಕ ಸಿದ್ಧರಾಮ ಅಳುಕಿಯೂ ಅಳುಕದಂತಿರಬೇಕು !

Wednesday, April 17, 2013

ಮಾತ್ಗವಿತೆ-123

ಕುಟೀಲ ಕಾರಸ್ಥಾನಗಳ ಮರಭೂಮಿ ನಾನು
ಅರಿವಿನ ಪರದೆ ಹರಿಯದ ಸಾಗರ ನಾನು
ಅಂದುಕೊಂಡಂತೆ ಆಗಿರುವಲ್ಲಿ ಬರೆ ಇರುವುದಿಲ್ಲ !
ಸುಡುಸುಡುವ ಕಾಯ್ದ ಸೀಸ ತುರುಕುತ್ತಿರುವ
ಅಡಿಗಡಿಗೆ ನಾಲಿಗೆ ಕತ್ತರಿಸಿ ಬೀಸಾಡುತ್ತಿರುವ
ನನ್ನವರಲ್ಲಿ ಖರೀದಿಗೆ ನಾ ನಿಲುಕುವುದಿಲ್ಲ !

Saturday, April 06, 2013

ವಚನ-25

ಒಳಗೊಳಗೆ ಉಂಡ ನೋವು ; ಕಂಡ ಬದುಕು
ನೆಂಟರೆಲ್ಲರ ಉಂಬಳಿಯ ಬಾವಿಯ ಸಾವು !
ಎಚ್ಚೆತ್ತುಕೊಂಡಾಗ ಬಿಚ್ಚುಗತ್ತಿಯ ಮರೆವು !
ಕಾರಣಿಕ ಸಿದ್ಧರಾಮ ನೆಚ್ಚಿಕೆಗೆ ಮುಚ್ಚಿಕೆ
ಆಗಿಬರದು ; ಆಗಬಾರದು ; ಆಗಗೊಡಬಾರದು !

Thursday, April 04, 2013

ಭಾರತ ದೇಶದ ಬಿಟ್ಟಿ ದೇವರುಗಳು !


ಸುನೀಲ್ ರಾವ್

ಕ್ರಿಯೇಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಭೇದಗಳು ಖಂಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒಂದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒಂದೇ ಆಗಿರಬೇಕು ಎಂಬ ಯಾವ ರಿವಾಜಿದೆ?

 
ನಾನು ‘ಅಲೆಮಾರಿ ಮನಸು’ ಕಾಲಂ ಶುರು ಮಾಡಿದಾಗ ಬಂದ ನೂರಾರು ಅಭಿಪ್ರಾಯ ಗಳಲ್ಲಿ ಶೇ.95ಪಾಲು ಬಿಟ್ಟಿ ಸಲಹೆಗಳೇ ಇದ್ದವು. ಪರಿಚಿತರೊಬ್ಬರು ಮೊದಲನೆ ಕಾಲಂ ಓದಿ ನೀನು ಬಹಳ ಇಂಪ್ರೂವ್ ಆಗ್ಬೇಕು ಎಂದು ಸಲಹೆ ಕೊಟ್ಟರು. ಒಹ್ ಹೌದಾ! ಏನ್ ಇಂಪ್ರೂವ್ ಆಗ್ಬೇಕು ಹೇಳಿ ಸಾರ್ ಅಂದ್ರೆ ಆತ ಉತ್ತರಿಸಲಿಲ್ಲ. ಇನ್ನೊಬ್ಬರು ಮೆಸೇಜ್ ಮಾಡಿ ನೀ ತಗೊಳ್ಳೊ ಟಾಪಿಕ್ ಗಳಲ್ಲಿ ಪೂರಾ ಪರ್ಸನಲ್ ಇರತ್ತೆ ಕಣಯ್ಯ ಅದೆಲ್ಲಾ ಬರೀಬೇಡ ಅಂದ್ರು. ನಂತರದ ವಾರ ಬೇರೆ ವಿಷಯ ಬರೆದೆ. 
ಮತ್ತೊಂದು ಮೆಸೇಜ್ ಬಂತು-ನೀವು ಬರೆಯುವ ಬರಹದಲ್ಲಿ ನಿಮ್ಮ ವೈಯಕ್ತಿಕವಾದ ಅನುಭವ ಬರೀರಿ ತುಂಬಾ ಚೆನ್ನಾಗಿರ್ತವೆ ಅಂತ. ಯಾವುದೋ ಕಾರ್ಯಕ್ರಮ ದಲ್ಲಿ ಸಿಕ್ಕ ಗೆಳೆಯರೊಬ್ಬರು ನೀವು ಕಾಲಂ ಬರೆ ಯೋರು ಲಂಕೇಶ್ ಪುಸ್ತಕಗಳನ್ನು ಓದ್ಬೇಕು ಸುನಿಲ್ ಆಗ ಕಾಲಂ ಅಂದ್ರೇನು ಅಂತ ಅರ್ಥ ಆಗತ್ತೆ ಅಂದ್ರು. ಲಂಕೇಶ್ ಥರ ಬರೆಯೋಕೆ ಲಂಕೇಶ್ ಇದ್ರಲ್ಲ ನಾ ಯಾಕ್ ಅವರನ್ನ ಇಮಿ ಟೇಟ್ ಮಾಡ್ಬೇಕಿತ್ತು ಎಂಬುದು ನನಗೆ ಅರ್ಥ ಆಗಲಿಲ್ಲ. ನನ್ನ ಬರಹಗಳು ಯಾವತ್ತಿಗೂ ನನ್ನ ಅನುಭವಗಳ ಮೂಲಕ ಕಟ್ಟಿಕೊಡಲು ಸಾಧ್ಯ. ಅದುಬಿಟ್ಟು ಕಾಣದ ಅಲೌಕಿಕವನ್ನು ತೋರಿಸುವ ತಾಕತ್ತು ನನಗಿಲ್ಲ. ಯಾಕೆಂದರೆ ನಾನೊಬ್ಬ ಯಕಶ್ಚಿತ್ ಮನುಷ್ಯ. ಪತ್ರಿಕೆಯವರೊಬ್ಬರು ನನ್ನ ಕಥೆಯೊಂದನ್ನು ಕೇಳಿದ್ದರು ಕಳಿಸಿದ್ದಾದ ಮೇಲೆ ಇ-ಮೇಲ್ ಮಾಡಿ ದ್ದರು-
‘‘ಪ್ರೀತಿಯ ಸುನೀಲ್ ನಿಮ್ಮ ಕತೆಯು ಬಹಳ ಚೆನ್ನಾಗಿದ್ದು, ಅದರ ಪಾತ್ರ ಹಾಗೂ ಸನ್ನಿ ವೇಶಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಾ. ಆದರೆ ಕೆಲವೊಂದು ಪಾತ್ರಗಳನ್ನು ಈಗಿನ ಕಾಲ ಮಾನಕ್ಕೆ ಕಟ್ಟಿಕೊಟ್ಟು ಬರೆದಿದ್ದೀರಿ ತುಂಬಾ ಹಸಿ ಹಸಿ ಅನ್ನಿಸ್ತಿವೆ ಬದಲಾಯಿಸಿ, ನಾಯಕನ ಪಾತ್ರ ವನ್ನು ಇನ್ನೊಂಚೂರ್ ಸ್ಟ್ರಾಂಗ್ ಮಾಡಿ ಕೊಟ್ಟರೆ ಮುಂದಿನ ಎಡಿಷನ್‌ಗೆ ಪ್ರಕಟಿಸಿಬಿಡ್ತೇವೆ’’ ಎಂದು ಬರೆದಿದ್ದರು..
ಅದಕ್ಕೆ ನನ್ನ ಉತ್ತರ ಹೀಗೆ ಬರೆಯಲೇಬೇಕಿತ್ತು -‘‘ಮಾನ್ಯರೇ, ನನ್ನ ಕತೆಯನ್ನು ಪ್ರಕಟಿಸುತ್ತೇನೆ ಎಂಬ ಆಶ್ವಾಸನೆ ಕೊಟ್ಟದ್ದಕ್ಕೆ ಧನ್ಯ ವಾದಗಳು, ಇನ್ನು ತಾವು ಹೇಳಿದ ಹಸಿ ಹಸಿ ಚಿತ್ರಣಗಳು ವಾಸ್ತವದಲ್ಲಿ ನಡೆಯುವಂತದ್ದು, ಅದನ್ನು ನಾನು ವಿವರಿಸುವುದಕ್ಕೆ ನಾನು ಇನ್ನೊಂದು ಕತೆ ಬರೆಯಬೇಕಾಗುತ್ತದೆ. 
ಇನ್ನು ಅದರಲ್ಲಿ ಬರುವ ಪಾತ್ರಗಳನ್ನು ಬದಲಾಯಿಸಿ ಬರೆಯಬೇಕಿದ್ದರೆ ಅದು ನನ್ನ ವಿವೇಚನೆಗೆ ಮೊದಲೇ ಬರುತ್ತಿತ್ತು ಅಥವಾ ನನ್ನ ಕಡಿಮೆ ಬುದ್ಧಿಗೆ ಅದು ಹೊಳೆಯಲಿಲ್ಲ. ನಿಮಗೆ ಆ ಕತೆಯಲ್ಲಿ ಯಾವ ತೆರನಾದ ಬದಲಾವಣೆ ಅಗತ್ಯವಿದೆಯೋ ಅದನ್ನೆಲ್ಲಾ ಸೇರಿಸಿ ನೀವೆ ಒಂದು ಕತೆ ಬರೆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತೇನೆ. ಧನ್ಯವಾದ’’ 
ಎಂದು ಪುನಃ ಬರೆದಿದ್ದಕ್ಕೆ ಅವರಿಂದ ಉತ್ತರ ಬರಲಿಲ್ಲ. ಸಲಹೆಗಳನ್ನು ಸ್ವೀಕರಿಸುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೇ ಬಿಟ್ಟಿ ಸಲಹೆಗಳನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಫೇಸ್‌ಬುಕ್‌ನಲ್ಲಿ ಕೊಂಚ ಮಟ್ಟಿಗೆ ನಾನು ಸಕ್ರಿಯ. ಅಲ್ಲಿ ಒಂದಷ್ಟು ಜನ ಸ್ನೇಹಿತರಾಗಿದ್ದಾರೆ, ಇನ್ನೊಂದಷ್ಟು ಜನ ಮೇಷ್ಟ್ರುಗಳಿದ್ದಾರೆ, ಮತ್ತೊಂದಷ್ಟು ಜನ ಹೆಡ್ ಮೇಷ್ಟ್ರುಗಳಿದ್ದಾರೆ. ಸ್ನೇಹಿತರನ್ನು ಹೊರತುಪಡಿಸಿ ಇನ್ನಿರುವ ಎರಡು ಪಂಗಡಗಳು ಸಕ್ರಿಯವಾಗಿ ಬಿಟ್ಟಿ ಸಲಹೆಗಳಲ್ಲಿ ನಿರತರಾಗಿರುತ್ತಾರೆ. ಯಾರೋ ಒಬ್ಬ ಸ್ನೇಹಿತ ಒಂದು ಕವನ ಬರೆದು ಅವನ ವಾಲ್ ಮೇಲೆ ಅಂಟಿಸಿದ್ದ. ಅದರ ಕಾಮೆಂಟುಗಳನ್ನು ಗಮನಿಸಿದ್ದೆ. ವಿದೇಶದ ಒಬ್ಬ ಹೆಡ್ ಮಾಸ್ಟರ್ ತಮ್ಮ ಸಮಯವನ್ನೆಲ್ಲಾ ಖರ್ಚು ಮಾಡಿಕೊಂಡು ಕವನಕ್ಕೂ ಮೀರಿ ಕತೆ ಬರೆದಂತೆ ಅರ್ಧ ಪುಟ-ಅವನು ಹೇಗೆ ಕವಿತೆ ಬರೆಯ ಬಹುದಿತ್ತು ಎಂಬುದಕ್ಕೆ ವಿವರಣೆ ಕೊಟ್ಟಿದ್ದರು. ಸಲಹೆಯನ್ನು ಕೊಟ್ಟ ವ್ಯಕ್ತಿ ಒಂದೇ ಒಂದು ಪದ್ಯವನ್ನ ಬರೆದಿದ್ದು ನಾನು ಇದುವರೆಗೂ ಕಂಡಿರಲಿಲ್ಲ. ಪಾಪ ಆ ಹುಡುಗ ಕವಿತೆ ಹಾಕು ವುದನ್ನೆ ಬಿಟ್ಟು ಬಿಟ್ಟ. 
ಇನ್ನು ಕೆಲವರು ತಮ್ಮದೇ ಸಿದ್ದಾಂತಗಳಿಗೆ ಒಳಪಟ್ಟವರು ಮತ್ತೆಲ್ಲರೂ ಹಾಗೆ ಜಗತ್ತನ್ನು ಕಾಣಬೇಕು ಎಂದು ಹಂಬಲಿಸುತ್ತಾರೆ. ತುಂಬಾ ಅರಿತ ಜನ ಯಾವತ್ತೂ ಇನ್ನೊ ಬ್ಬರಿಗೆ ಬಿಟ್ಟಿ ಸಲಹೆಗಳನ್ನು ಕೊಡಲಾರರು. ತೀರಾ ಅನಿವಾರ್ಯ ಸಲಹೆಗಳಿದ್ದರೆ ಅದನ್ನ್ನು ವೈಯಕ್ತಿಕವಾಗಿ ಹೇಳಿ ಮುಗಿಸುತ್ತಾರೆ. ಕ್ರಿಯೇ ಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಭೇದಗಳು ಕಂಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒಂದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲ ದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒಂದೇ ಆಗಿರ ಬೇಕು ಎಂಬ ಯಾವ ರಿವಾಜಿದೆ? ಇನ್ನು ಸಲಹೆ ಕೊಡುವವರು ಯಾರು ಎಂಬುದು ಬಹಳ ಮುಖ್ಯವಾದ ವಿಷಯ. ಪರೀಕ್ಷೆಯಲ್ಲಿ ಮೂರು ಬಾರಿ ಡುಮ್ಕಿ ಹೊಡೆದ ಹುಡುಗ ನೊಬ್ಬ- you have to come up in ur life understanding disolve ಎಂದು ಮೆಸೇಜ್ ಕಳಿಸಿ ನಗೆಪಾಟಲಾಗುತ್ತಾನೆ. ಇಲ್ಲಿ ಭಾಗಶಃ ಸಮಯ ಅದೇ ಆಗುತ್ತದೆ. ನನ್ನ ಇನ್ನೊಬ್ಬ ಸ್ನೇಹಿತ ಹೊಸದೊಂದು ಬ್ಯುಸಿನೆಸ್ ಮಾಡಿ ಕೈಸುಟ್ಟುಕೊಂಡ, ಸಾಲಗಳೂ ಆದವು.
ಅವನು ಉದ್ಯಮ ಶುರು ಮಾಡಿ, ಕೈಲಿ ನಾಕು ಕಾಸು ಓಡಾಡುತ್ತಿದ್ದಾಗ ಅವನ ಬಾಲ ಹಿಡಿದು ಓಡಾಡುತ್ತಿದ್ದ ಕೆಲವರೆಲ್ಲ ಈಗ ಅವನಿಗೆ ಬುದ್ಧಿ ಹೇಳುವ ಸರತಿಯಲ್ಲಿದ್ದರು. ಅವರೆಲ್ಲರ ಮಾತುಗಳನ್ನು ಸಮಾಧಾನದಿಂದ ಕೇಳಿ ತರುವಾಯ ರೋಸಿ ಹೋಗಿ-‘‘ನಿಮ್ಮಲ್ಯಾರಾದರೂ ನಾನು ಮಾಡಿರೋ ಸಾಲವನ್ನು ತೀರ್ಸಿದ್ರೆ, ನಿಮ್ಮ ಕಾಲಿನ ಚಪ್ಪಲಿ ತಗೊಂಡು ಹೊಡೆದರೂ ಹೊಡಿಸ್ಕೊತೀನಿ. ಯಾರಾದರೂ ನನ್ನ ಸಾಲ ತೀರಿಸ್ತೀರಾ?’’ ಎಂದು ರೇಗಿಬಿಟ್ಟ. ಆವತ್ತಿಂದ ಯಾವ ನೆಂಟನೂ ನನ್ನ ಸ್ನೇಹಿತನ ಮನೆ ಕಡೆ ಸುಳಿದಾಡಿದ್ದು ನನಗೆ ಕಾಣಲಿಲ್ಲ. ಬಂದಿದ್ದ ಒಬ್ಬೊಬ್ಬ ನೆಂಟನ ಹಿಂದೆ ಅಸಂಖ್ಯ ಸೋಲಿನ ಕತೆಗಳಿದ್ದವು. ಸೋಲಾದ ಮೇಲೆ ಹಲವಾರು ಸೋಲುಗಳು. ಸೋತು ಸುಣ್ಣವಾದವನು ಬದುಕಿನ ಯಶಸ್ಸಿಗೆ ಸೂತ್ರಗಳನ್ನು ಹೇಳಿಕೊಟ್ಟರೆ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಬಿಟ್ಟಿ ಸಲಹೆಗಳು ಕೆಲವೊಮ್ಮೆ ಆಪ್ತ ವಲಯದಿಂದಲೂ ಬಂದಿರುತ್ತದೆ. ಸಲಹೆಯನ್ನು ಕೊಡುವಾಗ ಆ ವ್ಯಕ್ತಿಗಳು ನಮ್ಮ ಜೀವನವನ್ನು ಕಮಾಂಡ್ ಮಾಡಲು ಬಂದಿರುತ್ತಾರೆ ಎನಿಸಿಬಿಡುತ್ತದೆ. ಅದರ ಅರಿವು ಅವರಿಗೆ ಕೆಲವೊಮ್ಮೆ ಇರುವುದಿಲ್ಲ. ಅದು ಎದುರಿಗಿನ ವ್ಯಕ್ತಿಗೆ ಎಷ್ಟು ಮುಜುಗರ ಮಾಡುತ್ತದೆ ಎಂದು ಅವರು ಊಹಿಸಿಕೊಳ್ಳಬೇಕು. ಪರ್ಸನಲ್ ವಿಚಾರಗಳಾದ ನಮ್ಮ ಮನೆ, ನಮ್ಮ ಪ್ರೀತಿ, ನಮ್ಮ ಉದ್ಯೋಗ ಹೀಗೆ ಎಲ್ಲ ಕಡೆಯಲ್ಲೂ ಅದು ಹರಿದಾಡುತ್ತದೆ. ನಾವು ಕಾಣದ ಯಾವುದೋ ಲೋಕವೊಂದನ್ನು ಸೃಷ್ಟಿ ಮಾಡಿಕೊಡಲು ಹೋಗುತ್ತಾರೆ. ಉದಾಹರಣೆ ಪ್ರೀತಿ ಪ್ರೇಮಗಳ ವಿಷಯದಲ್ಲಿ ಈಗಿನ ಕಾಲದ ಹುಡುಗರು ಕೊಂಚ ಮಟ್ಟಿಗೆ ಭಿನ್ನವಾಗಿ ಅರಿತಿರುತ್ತಾರೆ. ಪ್ರತಿಯೊಬ್ಬ ಹುಡುಗನಿಗಾಗಲಿ ಹುಡುಗಿಗಾಗಲಿ ತಮ್ಮ ಅಪ್ಪಅಮ್ಮನಂತೆ ಅನಿವಾರ್ಯಕ್ಕೆ ಬದುಕುವುದು ಖಂಡಿತವಾಗಿಯೂ ಇಷ್ಟವಿರುವುದಿಲ್ಲ. ಅಂತಹವರ ಮಧ್ಯೆ ಒಂದು ನವಿರಾದ ಭಾವನೆಗಳು ಸ್ವಂದನವಾಗಿರ್ತವೆ. ಮತ್ತು ಬದುಕುವ ವಿಧಾನಗಳಲ್ಲಿ ಸಿದ್ಧ ಮಾದರಿಗೂ ಮೀರಿದ ಒಂದು ಜೀವನ ಪರ್ಯಟನೆಯನ್ನು ಕಲ್ಪಿಸಿಕೊಂಡು ಇರುತ್ತಾರೆ. ಆಗ ಇದಿರಾಗುವ ಡಾಳು ಸಲಹೆಗಳು ಅದೆಷ್ಟು ಹಿಂಸೆ ಕೊಡ್ತವೆ ಅಂದರೆ ಅಸ್ತಿತ್ವದಲ್ಲೆ ಇಲ್ಲದ ಸಮಸ್ಯೆಗಳನ್ನೆಲ್ಲಾ ತಂದು ಆ ಇಬ್ಬರ ಮನಸಿನಲ್ಲಿ ಮೂಡಿಸಿಬಿಡುತ್ತಾರೆ ಹಿರಿಯರು. ಇದನ್ನು ಸಲಹೆ ಕೊಡುವವರ ತಪ್ಪುಎಂದು ಹೇಳಲಾರೆ. ಆದರೆ ಈಗಿನ ಮನಸ್ಥಿತಿ ಮತ್ತು ಗಳನ್ನು ಸಲಹೆಗಾರರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಮನಸ್ಥಿತಿ ಮತ್ತು ಸ್ವರೂಪಗಳು ಕಾಲಘಟ್ಟದಲ್ಲಿ ಭಿನ್ನವಾಗುತ್ತಾ ಹೋಗುತ್ತದೆ. 
ನಾನು ಆಗಲೇ ಹೇಳಿದಂತೆ ಸಲಹೆಗಳು ಸೂಕ್ತವಾಗಿದ್ದರೆ ಪಡೆಯಲು ಯಾವ ಮುಜುಗರವೂ ಸಲ್ಲ. ಆದರೇ ಪುಗಸಟ್ಟೆ ಸಲಹೆಗಳನ್ನಲ್ಲ. ಇತ್ತೀಚೆಗೆ ಅಂತಹ ಸಲಹೆಗಾರರಿಂದ ಒಂದು ಅಂತರವನ್ನು ಕಾಯ್ದುಕೊಂಡಿದ್ದೇನೆ. ನಮ್ಮ ಬದುಕಿನ ಪ್ರತೀ ಹೆಜ್ಜೆಯಲ್ಲೂ ಯಾರೋ ಬಂದು ಬದುಕಿದರೆ ಸಹಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಪರಮಹಂಸರು ಒಬ್ಬ ಹುಡುಗನಿಗೆ ಬೆಲ್ಲ ತಿನ್ನುವುದನ್ನು ಬಿಡಿಸಲು, ಸ್ವತಃ ತಾವು ಬಿಟ್ಟು ಅಮೇಲೆ ಆ ಹುಡುಗನಿಗೆ ಹೇಳಿದ ಕತೆ ಎಷ್ಟೊಂದು ಸೂಕ್ತ. ತಮ್ಮ ಬದುಕಿನ ಬಹುಭಾಗವನ್ನು ಕಂಡವರಿಗೆ ಸಲಹೆಗಳನ್ನು ಕೊಡುತ್ತಾ ಬದುಕುವವರನ್ನು ಕೆಲಕಾಲ ದೂರವಿಟ್ಟರೆ ಉತ್ತಮ. ಇಲ್ಲವಾದರೆ ಕಾರಂಜಿಯಂತೆ ಚಿಮ್ಮುವ ಬದುಕಿಗೆ ಉತ್ಸಾಹವೇ ಇಲ್ಲದಂತೆ ಕೊರಗಬೇಕಾಗುತ್ತದೆ. ಬಿಟ್ಟಿ ಸಲಹೆಗಳು ನಮ್ಮ ಮನಸಿನಲ್ಲಿ ಹಾಗೆ ಉಳಿದುಕೊಳ್ಳುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ, ಮತ್ತೆ ಅದೊಂದು ಸುಳ್ಳಾಗಿ ಮಾರ್ಪಾಡಾಗುತ್ತದೆ. ಮತ್ತೆ ಕುಂದುತ್ತೇವೆ.....ಇನ್ನೊಮ್ಮೆ ಆ ಕೆಲಸ ಮಾಡಲು ಹೋಗಲಾರೆವು. ಬಿಟ್ಟಿ ಸಲಹೆಗಳಿಂದ ನಮ್ಮ ಹಲವಾರು ಆವಿಷ್ಕಾರಗಳು ಶುರುವಾಗುವ ಮೊದಲೇ ಆಗಿ ಬಿಡುತ್ತದೆ. ಆಸೆಗಳು ಹುಟ್ಟುವ ಮೊದಲೇ ಹೊಸಕಿ ಹಾಕುತ್ತೇವಲ್ಲ ಅದೆಷ್ಟು ಪಾಪಕಾರ್ಯ!
ಮೇಲೆ ಬರುವ ಯಾವ ಪಾತ್ರ ಹಾಗೂ ಸನ್ನಿವೇಶಗಳೂ ಕಾಲ್ಪನಿಕವಲ್ಲ. ಎಲ್ಲವೂ ವಾಸ್ತವ ಮತ್ತು ಸತ್ಯವೇ ಆಗಿದೆ. ಈ ಪಾತ್ರಗಳಲ್ಲಿ ಯಾರಿಗಾದರೂ ತಮ್ಮ ಹೋಲಿಕೆಗಳಿದ್ದರೆ, ತಾವೇ ಎಂದು ಭಾವಿಸಿಕೊಳ್ಳಬಹುದು.
ಕೃಪೆ : ವಾರ್ತಾಭಾರತಿ

Wednesday, April 03, 2013

ವಚನ-24

ಹಾದರಕ್ಕೆ ಹಾಸಿದವರು ; ಹಾದರಕ್ಕೆ ಹೇಸಿದವರು
ಹಾದರ ಮಾಡುವುದ ಕಂಡ್ಯ ಕೋಲುಬಸವ !
ಇಂತಿಪ್ಪ ಜಗದೊಳು ಹಾದರಿಗನ ಕಂಡ ಬಸವ ಹೌಹಾರಿದ್ದ !
ಇಂತಿಪ್ಪ ಜಗದೊಳು ಚಾದರದೊಳಗಣ ಹಸಿಯ ಕಂಡಿದ್ದ
ಕಾರಣಿಕ ಸಿಧ್ಧರಾಮ ಹಾಡುಹಗಲೇ ಬುದ್ಧನಾಗಲು ಹೊರಟ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.