Thursday, November 10, 2011

ಎದೆಗಾರಿಕೆಯ ಧ್ವನಿ
ಆಗು ಬೇಡವೆಂದವರುಂಟೆ?
ಆಗುವ ಮುನ್ನ ಬಳುವಳಿಯ ಹಂಗೇಕೆ?

ಆಗಬೇಕೆಂಬ ದೃಢತೆಯಿದ್ದಾಗ ಸ್ವೀಕಾರದ ಉಸಾಬರಿಯೇಕೆ?
ಆಗಬೇಕು ಕೇವಲ ಚಪ್ಪಡಿ ಸೀಳಿಕೊಂಡು ಬರುವ ಧ್ವನಿಯಷ್ಟೇಕೆ?

ಆಗಲೇಬೇಕು ಸಮೂಹದ ಎದೆಗಾರಿಕೆಯ ಧ್ವನಿಯಾಗಲು ಅನುಮತಿಯೇಕೆ?
ಆಗುವುದು ಬೇಕು ಈ ಮಾನವ ಜನಾಂಗಕ್ಕೆ ಪೂರ್ತಿಯಾದ-ಸ್ಪೂರ್ತಿಯಲ್ಲವೇ?
                                                                                                                           - ಸಿದ್ಧರಾಮ ಹಿಪ್ಪರಗಿ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.