Sunday, June 29, 2014

ವಚನ-38

ಒಮ್ಮೆ ಮಲ ತಿನ್ನುವ ಚಟ ಅಂಟಿಕೊಂಡರೆ ಮುಗೀತು
ನಾಯಿಗೂ ಮಿಗಿಲಾಗಿ ಬಾಲ ಅಲ್ಲಾಡತೊಡಗುತ್ತದೆ
ಬಾಲಕ್ಕೆ ಬೆಂಕಿ ಇಕ್ಕಿದರೆ ಲಂಕೆ ಹಾಳಾಗದು ಇಂದು
ಲಂಕೆಯ ಪಾವಿತ್ರ್ಯ ಹಾಳು ಮಾಡಿದವನಿಗೇ ಪೂಜೆ
ಕಾರಣಿಕ ಸಿದ್ಧರಾಮ ತಲೆ ಅಲ್ಲಾಡಿಸು
ಒಳಗಿನ ಹೇನು ಹೊರ ಹೋಗಲಿ !

Thursday, June 19, 2014

ಮಾತ್ಗವಿತೆ-172

ನಿನ್ನ ಕಣ್ಣಿಗೆ ಸೋತೆ ಎಂದರೆ ತಪ್ಪಾದೀತು
ನಿನ್ನ ಕೆನ್ನೆಗೆ ಸೋತೆ ಎಂದರೂ ತಪ್ಪಾದೀತು
ನಿನ್ನ ತುಟಿಯ ರಂಗಿನ ಗುಂಗು ಎಂದರೂ ತಪ್ಪು !
ನಿನ್ನ ಹಾರುವ ಮುಂಗುರುಳು ;
ಮೊದಲು ಅಂಟುವ ಮೂಗು
ತಣ್ಣಗಿನ ತುಟಿಯಂಚಿನ ನಗು
ಬಂಗಾರದ ಮೊಳೆ ಹೊಡೆದುಕೊಂಡ ಕಿವಿ
ನನ್ನ ಗಾಯಿಸಲಿಲ್ಲ ; ನೋಯಿಸಲಿಲ್ಲ
ಕೂಡಬೇಕು ; ಆಡಬೇಕು ಧಡಪಡಿಸಿ
ಉರಿಯೊಲೆಯ ಎಳ್ಳಾಗಿ ಸಿಡಿಯಬೇಕು
ಮುಗಮ್ಮಾಗಿ ಮೈ ಮರೆಯಬೇಕು
ಆಗ ನನ್ನ ಸೋಲು ; ನಿನ್ನ ಗೆಲುವು !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.