Thursday, December 27, 2012

ಮಾತ್ಗವಿತೆ-105

ಕಲಸುಮೇಲೋಗರದ ಜಂಜಡದಲ್ಲಿ
ದುಡಿಮೆಯಿಲ್ಲದ ಕಾಸಿನಾಸೆಯ ದಂಡು
ಗುಂಗು ಹಿಡಿದ ಸಂಭ್ರಮದ ಸುಗ್ಗಿ !
ಅರಿವಿನ ಪರದೆಯಾಚೆಗೂ ವಿಸ್ತರಿಸುವ
ಬದುಕಿನ ಭಿನ್ನಕ್ಕೆ ಬಿನ್ನಹವಿಲ್ಲದೆ
ನಂಬಿಕೆಗಳ ಹಾದಿ ಕಳೆದು ಹೋಗಿದೆ !

Sunday, December 16, 2012

ಸಿಸ್ಟರ್ ಜೆಸಿಂತಾ ಇಂತಹ ತ್ಯಾಗ ಬೇಕಿತ್ತಾ ?

                          ಡಾ. ಎಚ್.ಎಸ್.ಅನುಪಮಾ

ಸುದ್ದಿ ಸಂಗ್ರಹಣೆಯ ಸಲುವಾಗಿ ಮಾಡುವ ಹುಡುಗಾಟ ಹಾಗೂ ಅದರ ಹಿಂದಿನ ಹಪಾಹಪಿತನ ಏನೆಲ್ಲ ಅನಾಹುತ ಉಂಟು ಮಾಡಿಬಿಡುತ್ತದೆ ಎಂದು ಎಷ್ಟು ಸಾರಿ ಬರೆಯುವುದು? ಅದು ನಿಷ್ಕರುಣವಾಗಿ ಎಷ್ಟೋ ಅಮಾಯಕರ ಸಾವಿಗೆ ಕಾರಣವಾಗುತ್ತಿರುವುದನ್ನು ಹಿಂದಿನಿಂದಲೂ ನಾಗರಿಕ ಸಮಾಜ ಎತ್ತಿ ತೋರುತ್ತಲೇ ಬಂದಿದೆ. ಆದರೂ ಮರುಕಳಿಸುತ್ತಲೇ ಇರುವ ಈ ಬಗೆಯ ಘಟನೆಗಳು ಇಂತಹ ಹಪಾಹಪಿತನಕ್ಕೆ ಕೊನೆ ಎಂಬುದೇ ಇಲ್ಲವೇನೋ ಎನ್ನಿಸುವಂತೆ ಮಾಡುತ್ತಿವೆ. ಕೇಳುಗರಲ್ಲಿ ನಗೆಬುಗ್ಗೆ ಉಕ್ಕಿಸುವ ಸಲುವಾಗಿ ಮಾಡಿದ ಒಂದು ಹುಡುಗಾಟದ ಫೋನ್ ಕರೆ, ಬ್ರಿಟನ್ನಿನ ನರ್ಸ್ ಜೆಸಿಂತಾ ಸಲ್ಡಾನಾ ಸಾವಿನಲ್ಲಿ ಕೊನೆಗೊಂಡಿದೆ. ಇದು ಗಣ್ಯರ ಗುಟ್ಟುಗಳೆಂಬ ಹುಸಿ ಬಿಕ್ಕಟ್ಟಿಗೆ, ಸುದ್ದಿಮನೆಯ ಹುಡುಗಾಟಕ್ಕೆ ಅಮಾಯಕ ಜೀವ ಬಲಿಯಾದುದರ ದ್ಯೋತಕವಾಗಿದೆ.
ನಡೆದಿದ್ದಿಷ್ಟು: ಬ್ರಿಟಿಷ್ ರಾಜ ಮನೆತನದವರು ತಪಾಸಣೆ- ಚಿಕಿತ್ಸೆಗಾಗಿ ಸಾಮಾನ್ಯವಾಗಿ ಹೋಗುವುದು ಕಿಂಗ್ ಎಡ್ವರ್ಡ್-7 ಮೆಮೋರಿಯಲ್ ಆಸ್ಪತ್ರೆಗೆ. ಅಲ್ಲಿ 46 ವರ್ಷದ, ಭಾರತ ಮೂಲದ ಜೆಸಿಂತಾ ನಾಲ್ಕು ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬ್ರಿಟನ್ ರಾಜಮನೆತನದ ವಿಲಿಯಮ್ಸ  ಪತ್ನಿ ಕೇಟ್ ಎಂಬ ಎಳೆಬಸುರಿಯನ್ನು ವಾಂತಿಯ ಕಾರಣಕ್ಕಾಗಿ ಆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಕುರಿತ ತಾಜಾ ಸುದ್ದಿಗಾಗಿ ಆಸ್ಟ್ರೇಲಿಯಾದ ರೇಡಿಯೊ  ಚಾನೆಲ್ `2ಡೆ'ಯ ಡಿ.ಜೆಗಳು ರಾಣಿ ಎಲಿಜಬೆತ್ ಹಾಗೂ ಅವರ ಪತಿ ಫಿಲಿಪ್ ಮಾತನಾಡುತ್ತಿರುವುದು ಎಂದು ಹೇಳಿಕೊಂಡು ಆಸ್ಪತ್ರೆಗೆ ತಮಾಷೆಯ ಹುಸಿ ಕರೆ ಮಾಡಿದರು.
ರಿಸೆಪ್ಷನ್ ಡೆಸ್ಕ್‌ನಲ್ಲಿ ಯಾರೂ ಇಲ್ಲದಿದ್ದ ಕಾರಣ ಕರೆ ಸ್ವೀಕರಿಸಿದ ಜೆಸಿಂತಾ, ಕೇಟ್ ಕೋಣೆಗೆ ಸಂಪರ್ಕ ಕಲ್ಪಿಸಿದರು. ಆ ಕೋಣೆಯ  ನರ್ಸ್ ನೀಡಿದ ಗರ್ಭಿಣಿಯ ಆರೋಗ್ಯ ಮಾಹಿತಿ ರೇಡಿಯೊನಲ್ಲಿ ಬಿತ್ತರಗೊಂಡಿತು.
ವಿಷಯ ಇಷ್ಟೇ. ಕೇಟ್ ಗರ್ಭಿಣಿ ಎಂಬುದು ಮೊದಲೇ ಪ್ರಪಂಚಕ್ಕೆ ಬಹಿರಂಗಗೊಂಡಿತ್ತು. ಆ ಡಿ.ಜೆಗಳ ಕರೆಯೂ ಹುಡುಗಾಟದ್ದಾಗಿ ಸ್ವತಃ ಅವರಿಗೇ ತಮ್ಮ ಕರೆ ಸ್ವೀಕಾರವಾಗಬಹುದೆಂಬ ನಂಬಿಕೆ ಇರಲಿಲ್ಲ. ಆದರೆ ರೋಗಿಯ ಕಾಯಿಲೆಗೆ ಸಂಬಂಧಪಟ್ಟ ವಿಷಯಗಳನ್ನು ಹತ್ತಿರದ ಸಂಬಂಧಿಗಳಿಗೆ ಹೇಳಬಹುದೇ ಹೊರತು ಬಹಿರಂಗಗೊಳಿಸಬಾರದು ಎನ್ನುವುದು ವೈದ್ಯಕೀಯ ನೀತಿಸಂಹಿತೆಯ ಅಲಿಖಿತ ನಿಯಮ. ಅದನ್ನು ಪಾಶ್ಚಾತ್ಯ ಸಮಾಜಗಳು ತುಂಬ ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಅದರಲ್ಲೂ ರಾಜಮನೆತನದ ಸುದ್ದಿಯನ್ನು ಅಧಿಕೃತ ವಕ್ತಾರರಲ್ಲದವರು ಬಹಿರಂಗಗೊಳಿಸಿದ್ದು ಪ್ರಮಾದ ಎಂಬಂತೆ ಬಿಂಬಿಸಲಾಯಿತು.
ಎಷ್ಟೋ ಗರ್ಭಿಣಿಯರು ಮೊದಲ ಮೂರು ತಿಂಗಳು ಒಂದಗುಳು ಅನ್ನವೂ ಹೊಟ್ಟೆಯಲ್ಲಿ ಉಳಿಯದಂತೆ ವಾಂತಿ ಮಾಡುತ್ತಾರೆ. ಮೊದಲ ಬಸುರಿನಲ್ಲಿ ಇದು ಸರ್ವೇಸಾಮಾನ್ಯ. ಆದರೆ ಇಲ್ಲಿ ಬಯಕೆ ಸಂಕಟಕ್ಕೆ ಒಳಗಾಗಿದ್ದು ಬ್ರಿಟಿಷ್ ರಾಜಮನೆತನದ ಮಹಿಳೆ. ಮಗು ಹೆಣ್ಣಾಗಲಿ, ಗಂಡಾಗಲಿ, ಆಕೆ ಹೆರಲಿರುವುದು ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯನ್ನು. ಎಂದೇ ಎಲ್ಲರ ಪ್ರಶ್ನಾರ್ಥಕ ನೋಟ ಜೆಸಿಂತಾ ಕಡೆಗೆ ತಿರುಗಿದ್ದು. ಸುದ್ದಿ ಸೋರಿಕೆಯಿಂದ ಆಸ್ಪತ್ರೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿ ಅದು ರಾಜಮನೆತನದವರ ಕ್ಷಮೆ ಕೇಳಿತು. ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿತು. ವಿಚಾರಣೆ, ತನಿಖೆ, ಮಾಧ್ಯಮದ ಪ್ರಶ್ನೆಗಳು ಎಲ್ಲವನ್ನೂ ಊಹಿಸಿಯೇ ಗಾಬರಿಗೊಂಡ ಜೆಸಿಂತಾ ಅದಾದ ಮೂರು ದಿನಗಳ ನಂತರ ಒಂದು ಬೆಳಿಗ್ಗೆ ಆಸ್ಪತ್ರೆಯ ಹತ್ತಿರದಲ್ಲೇ ಇರುವ ಅಪಾರ್ಟ್‌ಮೆಂಟಿನಲ್ಲಿ ಸಾವಿಗೆ ಶರಣಾದರು.
ಇಷ್ಟು ಸಣ್ಣ ವಿಷಯಕ್ಕೆ ಜೆಸಿಂತಾ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬಂದರೇ? ಜೀವ ಉಳಿಸುವ ವೃತ್ತಿಬದುಕಿನ ಒತ್ತಡವು ಜೀವ ಬೇಡ ಎನ್ನಿಸುವ ಮಟ್ಟಿಗಿರುವುದೇ? ಅಥವಾ ಜೆಸಿಂತಾ ಅತಿ ಸೂಕ್ಷ್ಮ ವ್ಯಕ್ತಿಯಾಗಿದ್ದು ಹೀಗಾಯಿತೇ? ಗಣ್ಯರ ಗುಟ್ಟುಗಳಾದರೂ ಎಂಥವು? ಆ ಬದುಕಾದರೂ ಎಂಥದು? ಸುದ್ದಿ ಸೋರಿಕೆ ಆಸ್ಪತ್ರೆ ಸಿಬ್ಬಂದಿಯ ಜೀವ ಬಲಿಯಾಗುವಷ್ಟು ದೊಡ್ಡ ವಿಷಯವೇ? ಹೀಗೆ ಈ ಪ್ರಕರಣ ಅನೇಕ ಪ್ರಶ್ನೆಗಳನ್ನು ಎತ್ತಿದೆ.
                                                                                    ***
ಪಾಶ್ಚಾತ್ಯ ಸಮಾಜ, ಅದರಲ್ಲೂ ಬ್ರಿಟನ್ ಅತಿ ಶಿಷ್ಟ ಸಮಾಜ. ಅಲ್ಲಿ ಕೆಲ ವಿಷಯಗಳು ಎಷ್ಟು ಮುಕ್ತವೋ ಮತ್ತೆ ಕೆಲವು ಅಷ್ಟೇ ಖಾಸಗಿ. ಖಾಸಗಿತನದ ಪರಾಕಾಷ್ಠೆ ಗಣ್ಯ ವ್ಯಕ್ತಿಗಳಿಗೆ ತಂತಾನೇ ಸಿಕ್ಕಿರುತ್ತದೆ ಅಥವಾ ಖಾಸಗಿತನವನ್ನು ಮಾರ್ಕೆಟ್ ಮಾಡುವುದು ಆ ಗಣ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಉಳಿದ ಮನುಷ್ಯರಂತೆಯೇ ಉಂಡು- ತಿಂದು- ಹೆತ್ತು- ಅತ್ತು ಬದುಕುವ ಗಣ್ಯರು ಸಹ ಮನುಷ್ಯರು ಎನ್ನುವುದನ್ನೇ ಸಮಾಜ ಮತ್ತು ಮಾಧ್ಯಮ ಮರೆಯತೊಡಗಿವೆ. ಎಂದೇ ಹೈ ಪ್ರೊಫೈಲ್ ಗಣ್ಯ ವ್ಯಕ್ತಿಗಳ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದು ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ರೋಚಕ ವಿಷಯವಾಗಿದೆ. `ಅರಸನ ಕಣ್ಣಿಗೆ ಬೀಳಬಾರದು' ಎನ್ನುವುದು ಜನಸಾಮಾನ್ಯರ ಹಳೆಯ ಗಾದೆ ಮಾತಾಯಿತು. ಈಗ ಅರಸ ಜನರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಓಡಬೇಕಾದ ಪರಿಸ್ಥಿತಿ ಇದೆ!
ಬ್ರಿಟನ್ ರಾಜಮನೆತನದ ಬಳಿ ಈಗ ಅಧಿಕಾರವಿದೆಯೋ ಇಲ್ಲವೋ, ಜನಸಮುದಾಯದ ಮೇಲೆ ಅದರ ಹಿಡಿತ ಎಷ್ಟು ನಗಣ್ಯವೋ -ಆದರೆ ಆ ಕುಟುಂಬದ ಗಣ್ಯತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅವರು ಈಗಲೂ ಸಮಾಜದ ಏಣಿ ಶ್ರೇಣಿಯ ತುತ್ತತುದಿಯಲ್ಲಿರುವ ಆಳುವ ವರ್ಗದ ಗಣ್ಯರು. ವಿಶ್ವದಾದ್ಯಂತ ತನ್ನ ವಸಾಹತುಗಳನ್ನು ಹೊಂದಿದ್ದ ಪುಟ್ಟ ದ್ವೀಪ ರಾಷ್ಟ್ರದ ರಾಜರಾಣಿಯರು ವಸಾಹತು ರಾಷ್ಟ್ರಗಳಿಗೂ ರಾಜರಾಣಿಯರಾಗಿದ್ದರು. ಹೀಗಾಗಿ  ಬ್ರಿಟಿಷ್ ಕಾಮನ್ವೆಲ್ತ್ ದೇಶಗಳಲ್ಲಿ ರಾಜಮನೆತನದ ಬಗ್ಗೆ ಕುರುಡು ಅಭಿಮಾನ, ಭಕ್ತಿ, ಕುತೂಹಲ ಸ್ವತಂತ್ರಗೊಂಡ ನಂತರವೂ ಹಾಗೇ ಮುಂದುವರಿದಿದೆ. ಉಳಿದ ದೇಶಗಳ ರಾಜ ಮನೆತನಕ್ಕಿಂತ ಅಥವಾ ಆಳುವ ಗಣ್ಯರಿಗಿಂತ ಹೆಚ್ಚು ಸ್ಥಾನ, ಘನತೆ ಬ್ರಿಟನ್ ರಾಜಮನೆತನಕ್ಕೆ ಅಬಾಧಿತವಾಗಿ ದೊರಕಿದೆ.
ಕುತೂಹಲಕ್ಕೆ ರೆಕ್ಕೆ ಬಂದಾಗ
ಈ ಅನುತ್ಪಾದಕ ವಿರಾಮ ವರ್ಗವಾದ ಗಣ್ಯರ ಎಲ್ಲ ಚಟುವಟಿಕೆಗಳು ಜನರಲ್ಲಿ ಅತ್ಯಾಸಕ್ತಿ ಕೆರಳಿಸುವುದು ಹೇಗೆ ಎನ್ನುವುದು ಅಚ್ಚರಿಯ ಸಂಗತಿ. ಕಣ್ಣಿಗೆ ರಾಚುವಂತಹ ಉಪಭೋಗದ ಪ್ರದರ್ಶನಗಳು ಜನರ ಕುತೂಹಲ ಕೆರಳಿಸುತ್ತವೆ. ಮಾಧ್ಯಮಗಳೂ ಅಷ್ಟೆ, ಗಣ್ಯತೆಯನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುತ್ತಲೇ ಪರೋಕ್ಷವಾಗಿ ಅವರನ್ನು ರಕ್ಷಿಸುತ್ತವೆ. ಆಡಳಿತ ವಿಧಾನವಾಗಿ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ಜನಸಮುದಾಯದ ಮನಸ್ಸು ರಾಜಮನೆತನಕ್ಕೆ ಭಾವನಾತ್ಮಕವಾಗಿ ಹೊಂದಿಕೊಂಡಿರುವುದನ್ನು ನೋಡಿದರೆ ಶೋಷಿತ- ಶೋಷಕ; ಆಳುವವ- ಆಳಿಸಿಕೊಳ್ಳುವವ; ಉತ್ಪಾದಕ- ಅನುತ್ಪಾದಕ ವರ್ಗಗಳ ಸಂಬಂಧ ಕುರಿತು ಯೋಚಿಸುವಂತಾಗುತ್ತದೆ. ಗಣ್ಯತೆಯ ಉಳಿವಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಬಲಿಯಾಗುವ ಬದುಕುಗಳು ವಿಷಾದ ಹುಟ್ಟಿಸುತ್ತವೆ. 
ಅತಿ ಶಿಷ್ಟಾಚಾರದ ಪಾಶ್ಚಾತ್ಯ ಬದುಕು ಸೃಷ್ಟಿಸುವ ಗಣ್ಯತೆ ಮುಕ್ತ ಚಲನೆ ಸಾಧ್ಯವಿರದ ಲೋಕ. ಬೆಂಬತ್ತುವ ಕುತೂಹಲಿಗಳ ಎದುರು ತೆರೆದುಕೊಂಡ ಜಾತ್ರೆಯೊಳಗಿನ ಬದುಕು ಅದು. ಅಲ್ಲಿ ಗಣ್ಯರಾಗಿ ಉಳಿಯಬೇಕಾದರೆ ಎಲ್ಲರಿಗಿಂತ ಬೇರೆಯಾಗಿ ಗಾಜಿನ ಮನೆಯಲ್ಲಿ ಬದುಕಬೇಕು. ಗಾಜು ಒಡೆವ ಅಪಾಯ, ಪಾರದರ್ಶಕವಾದದ್ದು ಮಾರುಕಟ್ಟೆ ಸರಕಾಗುವ ಅಪಾಯ ಸದಾ ಇದ್ದೇ ಇರುತ್ತದೆ. ಎಂದೇ ತಮ್ಮ ಖಾಸಗಿ ವಿವರಗಳಲ್ಲಿ ಯಾವುದನ್ನು ಯಾರು ಯಾವಾಗ ತಿಳಿಯಪಡಿಸಬೇಕೆಂದು ನಿರ್ಧರಿಸುವುದು ಗಾಜಿನ ಅರಮನೆಯ ಗಣ್ಯರ ಬದುಕಿನ ಭಾಗವೇ ಆಗಿದೆ. ಅವರ ದೇಹ, ಸೌಂದರ್ಯ, ಆರೋಗ್ಯ, ವೈಯಕ್ತಿಕ ಏರಿಳಿತ, ಸಂಬಂಧ, ಬಿಕ್ಕಟ್ಟು ಮತ್ತಿತರ ದೈನಂದಿನ ಬದುಕಿನ ಸಣ್ಣಪುಟ್ಟ ವಿವರಗಳೂ ಉಳಿದವರ ಗಮನ ಸೆಳೆದು ಗಣ್ಯತೆ ಗಟ್ಟಿಯಾಗುತ್ತದೆ. ಆರ್ಥಿಕ ಕಾರಣಗಳು ಅವರ ವರ್ತನೆಯನ್ನು ನಿಯಂತ್ರಿಸತೊಡಗುತ್ತವೆ.
ಇದು ಗಣ್ಯರ ಬಯಲು
ಗಣ್ಯತೆ ಒಂದು ಬಯಲು. ಆದರೆ ಅದು ಅಕ್ಕ ಅಲ್ಲಮರ, ವಿವೇಕಾನಂದರ, ಗಾಂಧಿ ಅಂತಹವರ ಬಯಲಲ್ಲ. ಅದು ಅಧಿಕಾರದ ಬಯಲು. ಅಲ್ಲಿಂದ ತಪ್ಪಿಸಿಕೊಳ್ಳಲೆಂದೇ ಬಿಲಗಳಿರುತ್ತವೆ. ಆದರೆ ಮಾಧ್ಯಮದ ಬಾಹು ಎಷ್ಟುದ್ದ ಮತ್ತು ಎಲ್ಲೆಲ್ಲ ಚಾಚುತ್ತದೆಂದರೆ ಅದು ಬಿಲ, ಹುತ್ತ, ಗವಿ, ಸುರಂಗಗಳನ್ನೆಲ್ಲ ಜಾಲಾಡುತ್ತದೆ. ಸುದ್ದಿ ಸಿಗದಿದ್ದರೆ ಊಹಾಪೋಹಗಳ ವಾಸನೆಯನ್ನಾದರೂ ಹಿಡಿಯುತ್ತದೆ. ಈ ಸುದ್ದಿ ಮನೆಯ ಆತುರಗಾರರಿಗೋ ಸುದ್ದಿ ಸಂಗ್ರಹಣೆಯಷ್ಟೇ ಕೆಲಸ. ಮನೋವ್ಯಾಪಾರದ ಉಳಿದ ಸೂಕ್ಷ್ಮಗಳಾವುವೂ ಅವರ ಗಮನಕ್ಕೆ ಬರುವುದೇ ಇಲ್ಲ. ಅವರ ದುಷ್ಟ ಕುತೂಹಲದ ಕಣ್ಣುಗಳೇ ಬ್ರಿಟನ್ ರಾಜಮನೆತನದ ಡಯಾನಾ ಸಾವಿಗೆ ಕಾರಣವಾದವು.
ಆಸ್ಟ್ರೇಲಿಯಾದ ಡಿ.ಜೆ.ಗಳು ಬ್ರಿಟನ್ ರಾಜಮನೆತನದ ಸುದ್ದಿಗಾಗಿ ಹಪಹಪಿಸುವಂತೆ ಮಾಡಿತು. ಸೂಕ್ಷ್ಮ ಪ್ರವೃತ್ತಿಯ ಜೆಸಿಂತಾ ಸಾವಿಗೂ ಕಾರಣವಾಯಿತು. ಆದರೆ ವೇಗದಲ್ಲಿ ಚಲಿಸುವ ವಾಹನದ ಗಾಲಿಯಾದರೋ ತನ್ನಡಿಗೆ ಸಿಕ್ಕಿ ಜೀವ ಬಲಿಯಾದದ್ದು ತನ್ನ ಅಪರಾಧ ಅಲ್ಲವೇ ಅಲ್ಲ ಎಂದೇ ಭಾವಿಸುತ್ತದೆ.
ಮೇಲಿನ ಘಟನೆ ವೈದ್ಯಕೀಯದಂತಹ ವೃತ್ತಿಪರ ಕೆಲಸಗಳಲ್ಲಿ ತೊಡಗಿರುವವರಿಗೆ ಉದ್ಯೋಗ ಸಂಬಂಧಿ ಒತ್ತಡ ಅತಿಯಾಗಿ ಆತ್ಮಹತ್ಯಾ ಮನೋಭಾವ ಹೆಚ್ಚುತ್ತಿರುವುದರ ಸೂಚಕವೂ ಹೌದು. ಜೊತೆಗೆ ಪ್ರತಿಯೊಬ್ಬರೂ ತಾವು ವಾಸಿಸುತ್ತಿರುವ ನೆಲದ ಕಾನೂನುಗಳ ಕನಿಷ್ಠ ಜ್ಞಾನ ಹೊಂದಿ ಅನವಶ್ಯಕ ಪ್ರಕರಣಗಳ ಒತ್ತಡದಿಂದ ಪಾರಾಗಬಹುದು ಎಂದು ತಿಳಿಸುವ ಪಾಠವೂ ಹೌದು.
 
                                                                          *****
`2ಡೆ' ರೇಡಿಯೊ ಸಂಸ್ಥೆ ಜೆಸಿಂತಾ ಕುಟುಂಬಕ್ಕೆ 2.85 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಆದರೆ ತಾಯಿಯನ್ನು ಕಳೆದುಕೊಂಡ ಇಬ್ಬರು ಹದಿಹರೆಯದ ಮಕ್ಕಳ ತಲ್ಲಣದ ಮುಖ ಕಣ್ಣು ಮಂಜಾಗಿಸುತ್ತದೆ. ಅವರ ತಬ್ಬಲಿತನಕ್ಕೆ ಯಾವ ಪರಿಹಾರ ಇದೆ ?
                                                                             

ರೇಡಿಯೊ ಜಾಕಿಗಳ ಈ ರೀತಿಯ ವರ್ತನೆ ಸರಿಯಲ್ಲ. ಒಂದು ರಾಯಲ್ ಕುಟುಂಬದಲ್ಲಿ ಏನೋ ಗೋಪತ್ಯೆ ಇರುತ್ತದೆ. ಅದು ಅವರ ಖಾಸಗಿ ವಿಷಯ. ಅದನ್ನು ಬಹಿರಂಗ ಮಾಡುವುದು ಸರಿಯಲ್ಲ.
ರೇಡಿಯೊ ಜಾಕಿಗಳಿಗೂ ಅರಿವಿರಬೇಕು. ಅದೂ ಅಲ್ಲದೆ ಅವರಿಗೆ ಈ ರೀತಿ ಖಾಸಗಿ ಮಾಹಿತಿಯ ಬೆನ್ನತ್ತಬಾರದು ಎಂಬ ತರಬೇತಿ ಕೂಡ ಕೊಟ್ಟಿದ್ದೇವೆ ಎಂದು ಸಂಸ್ಥೆ ಹೇಳಿದೆ. ಹಾಗಿದ್ದರೂ ಅವರು ಇನ್ನೊಬ್ಬರ ವೈಯಕ್ತಿಕ ಮಾಹಿತಿಯನ್ನು ಈ ರೀತಿ ಪ್ರಚಾರ ಮಾಡಿದ್ದು ಸರಿಯಲ್ಲ.
ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬ ನಿಜಾಂಶ ತನಿಖೆಯ ನಂತರ ತಿಳಿಯಬೇಕು. ಅವರ ಮೇಲೂ ಸಾಕಷ್ಟು ಒತ್ತಡ ಇರಬಹುದು. ಹಾಗಾಗಿ ಅವರ ಸಾವಿಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ.
ವಿದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ರಕ್ಷಣೆಯತ್ತ ಹೆಚ್ಚು ಗಮನ ನೀಡಬೇಕು. ಅವರಿಗೆ ಸರಿಯಾದ ಭದ್ರತೆ ಒದಗಿಸಿಕೊಡಬೇಕು. ಮಹಿಳೆಯರಿಗೆ ತೊಂದರೆಯಾದರೆ ಅವರು ನೇರವಾಗಿ ಸಂಪರ್ಕಿಸಬಹುದಾದ ಸಹಾಯ ಘಟಕವನ್ನು ಸರ್ಕಾರ ಒದಗಿಸಬೇಕು. ಇದರಿಂದ ಮಹಿಳೆ ನೆಮ್ಮದಿಯಾಗಿ ಇರಬಹುದು.
- ಗೀತಾ ಕೃಷ್ಣಮೂರ್ತಿ, ಕಾನೂನು ಬರಹಗಾರ್ತಿ
ಬೇರೆಯವರ ಬಗ್ಗೆ ಅತಿ ಕುತೂಹಲ ಪ್ರವೃತ್ತಿಯೇ ಇಂತಹ ದುರಂತಕ್ಕೆ ಕಾರಣ. ಸಾರ್ವಜನಿಕರನ್ನು ಇಂತಹ ಕುತೂಹಲಗಳಲ್ಲಿ ಕುಣಿಸುತ್ತಿರುವವರು ಕೂಡ ಈ ರೇಡಿಯೊ ಜಾಕಿಗಳೇ. ಇವರ ಹುಡುಗಾಟದಿಂದ ಒಂದು ಜೀವ ಬಲಿಯಾಗಿದೆ. ಎಲ್ಲದಕ್ಕೂ ಒಂದು ಮಿತಿ ಇರಬೇಕು. ಸಭ್ಯತೆಯ ಎಲ್ಲೆ ಮೀರಿ ಹೋಗಬಾರದು. ಜೆಸಿಂತಾ ಸಾವಿನಿಂದ ಅವರ ಮನೆಯವರ ಮೇಲೆ ಆಗಿರುವ ಪರಿಣಾಮವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ದೊಡ್ಡ ಮೊತ್ತದ ಪರಿಹಾರ ನೀಡುವ ಮೂಲಕ ಸತ್ತವರು ತಿರುಗಿ ಬರುವುದಿಲ್ಲ. ಅವರ ಕುಟುಂಬದವರ ಹೃದಯದ ನೋವು ನೀಗುವುದಿಲ್ಲ. ಇನ್ನಾದರೂ ಸರ್ಕಾರ ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಂತಹ ತಮಾಷೆ ಮಾಡುವ ಧೈರ್ಯವನ್ನು ಯಾರೂ ಮಾಡಬಾರದು. ಇಂತಹವರಿಗೆ ಸರಿಯಾದ ಪಾಠ ಕಲಿಸಬೇಕು.
ಬೇರೆ ದೇಶದಲ್ಲಿ ನೆಲೆಸಿರುವ ಹೆಣ್ಣು ಮಕ್ಕಳ ಭದ್ರತೆಯತ್ತ ಹೆಚ್ಚು ಗಮನ ನೀಡಬೇಕು. ಕರಾರು ಪತ್ರಗಳಲ್ಲಿ ನಮ್ಮ ದೇಶದ ಹೆಣ್ಣು ಮಕ್ಕಳ ಜೀವಕ್ಕೆ ಹಾನಿಯಾದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಸಂದೇಶವನ್ನು ಆ ದೇಶದ ಸರ್ಕಾರಕ್ಕೆ ನೀಡಬೇಕು. ಇದರಿಂದ ಬೇರೆ ದೇಶದವರು ಜವಾಬ್ದಾರಿಯಿಂದ ಇರುತ್ತಾರೆ.
- ಭಾರತಿ ಕಾಸರಗೋಡು, ಲೇಖಕಿ
ಬೇರೆಯವರ ಖಾಸಗಿ ವಿಷಯದಲ್ಲಿ ಮಜಾ ತೆಗೆದುಕೊಳ್ಳುವುದು ವಿಕೃತ ಮನೋಭಾವ. ಜೆಸಿಂತಾ ಪ್ರಕರಣದಲ್ಲಿ ರೇಡಿಯೊ ಜಾಕಿಗಳು ಮಾಡಿದ್ದು ಇದನ್ನೇ. ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಈ ರೀತಿ ಇನ್ನೊಬ್ಬರ ಬದುಕಿನ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ತಪ್ಪು. ಅಷ್ಟಕ್ಕೂ ಬಸಿರು, ಬಾಣಂತನ ಪ್ರಕೃತಿ ಸಹಜವಾದದ್ದು. ಇದೇನೂ ಹೊಸದಲ್ಲ. ಅವರ ವಿಷಯವನ್ನು ತಿಳಿಯುವ ಕೆಟ್ಟ ಕುತೂಹಲ ಏಕೆ? ಅಂತಹ ಕುತೂಹಲದಿಂದ ಒಂದು ಜೀವಕ್ಕೆ  ಆಗುವ ಹಾನಿಯನ್ನು ಒಂದು ಕ್ಷಣವಾದರೂ ಯೋಚಿಸಬೇಕಿತ್ತು.
ಸರ್ಕಾರ ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಒಂದು ದೇಶ ಬಿಟ್ಟು ಇನ್ನೊಂದು ದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ರಕ್ಷಣೆಗೆ ಒತ್ತು ನೀಡಬೇಕು. ಆ ದೇಶದ ಕಾನೂನು ಬೇರೆ ರೀತಿ ಇರುತ್ತದೆ. ಅದರ ಬಗ್ಗೆ ಅರಿವು ಮೂಡಿಸಬೇಕು.
- ಎನ್.ಗಾಯತ್ರಿ, ಲೇಖಕಿ
ಎಲ್ಲ ವಿಷಯವನ್ನು ಹೇಳಬೇಕು ಎಂಬ ಖುಷಿಗಾಗಿ ಮಾಡಿದ ಒಂದು ಕರೆ ಒಂದು ಜೀವಕ್ಕೇ ಕುತ್ತು ತಂದಿದೆ. ಇದರಿಂದ ಒಂದು ಜೀವ ಹೋಗುತ್ತದೆ ಎಂಬ ಅರಿವು ರೇಡಿಯೊ ಜಾಕಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇನ್ನೊಬ್ಬರ ಖಾಸಗಿ ವಿಷಯವನ್ನು ಪ್ರಚಾರ ಮಾಡುವುದು ತಪ್ಪು.
ವಿದೇಶದಲ್ಲಿ ಇರುವ ಭಾರತೀಯ ಮಹಿಳೆಯರ ಬಗ್ಗೆ ಸರ್ಕಾರ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ರೀತಿಯ ಆಪ್ತ ಸಲಹೆಗಳನ್ನು ನೀಡುವ ಮೂಲಕ ಅವರನ್ನು ಮಾನಸಿಕವಾಗಿ ಸದೃಢಗೊಳಿಸಬಹುದು. ಇಂತಹ ಕ್ರಮಗಳನ್ನು ತೆಗೆದುಕೊಂಡರೆ ಈ ರೀತಿಯ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.
-  ಮಹೇಶ್ ಗೌಡ, ಮನೋವಿಜ್ಞಾನಿ

 
ಸಂದರ್ಶನ: ಪವಿತ್ರ ಶೆಟ್ಟಿ  
ಕೃಪೆ : ಪ್ರಜಾವಾಣಿ : 15-12-2012 

ಮಾತ್ಗವಿತೆ - 104

ತುಂಬ ದಿನಗಳ ನಂತರದ ನೋಡುವಿಕೆ
ಯಾಕೋ ಕಾಡಲಿಲ್ಲ ; ನೋಯಿಸಲಿಲ್ಲ !
ಹಾಗಂತ ಏನೂ ಇಲ್ಲವೇ ಇಲ್ಲ ಎನ್ನುವಂತಿಲ್ಲ
ಬಹಿರಂಗಕ್ಕೆ ಹೀಗೇ ಹೇಳಬೇಕಿರುತ್ತದೆ !

Monday, November 26, 2012

ಮಾತ್ಗವಿತೆ- 103

ಗೆದ್ದಾಗ ಬಾಲ ಹಿಡಿಯೋ ಮಂದಿ
ಬಿದ್ದಾಗ ಆಳಿಗೊಂದೊಂದು ಕಲ್ಲು !
ಸೋಲು-ಗೆಲವು ಇರಬೇಕಲ್ಲವೆ ?
ಪ್ರತಿಸಲವೂ ನಾವೇ ಗೆಲ್ಲಬೇಕು ಅಂದ್ರೆ
ಅದೇನು ಪುರಾಣದ ಪವಾಡವೋ ?

Friday, November 23, 2012

ಮಾತ್ಗವಿತೆ - 102

ಬಿರಿದ ತುಟಿಗಳ ನಡುವೆ ಮತ್ತಿನ ಗುಂಗು
ಬರಿದಾದ ಸಿಗಾರೇಟು ತುಂಡಿನ ಬೆಂಕಿ ಬೆಳಕು !
ಸುಡು ಸುಡುವ ಎದೆಯೊಳಗೆ ಕಗ್ಗತ್ತಲ ಕಣಿವೆ
ಸಿಗಬೇಕಿತ್ತು ಎನ್ನುವ ಝಗಮಗಿಸುವ ಅಗ್ನಿ ಕುಂಡ !

Thursday, November 22, 2012

ಪತ್ರಕರ್ತ `ಸಾಕ್ಷಿ'ಯಾಗಬೇಕೆ, `ರಕ್ಷಕ'ನಾಗಬೇಕೆ?

                                   - ದಿನೇಶ ಮೀನಮಟ್ಟು 
ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.

ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.

ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ` ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್` ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..` ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.

ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು` ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ`ನ ಸಂಪಾದಕರು ವಿವರಣೆ ಕೊಡಬೇಕಾಯಿತು.

ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.

ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.

`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ` ಎಂದು ಬಡಬಡಿಸುತ್ತಿದ್ದ` ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.

ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್` ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.

ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?` ಎನ್ನುವುದು ಮೊದಲ ಪ್ರಶ್ನೆ. 

ಮಂಗಳೂರಿನ `ಸ್ಟೇಹೋಂ` ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ` ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು` ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.

ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ` ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ`ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.

ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?` ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.

ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ`ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ`ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ` ಎಂದು ಪೊಲೀಸರು ಹೇಳುತ್ತಿದ್ದಾರೆ. 

ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ` ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.

`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?` ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್` ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್` ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.

 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್`ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.

ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....` ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ.

 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

ಕೃಪೆ : ಪ್ರಜಾವಾಣಿ

Wednesday, November 21, 2012

ಮಾತ್ಗವಿತೆ-101

ಸುಖಕ್ಕೆ ಸಾವಿರದ ಹಾದಿಗಳು
ತುಂಬ ಹಾಸಿರುವ ಕಲ್ಲುಮುಳ್ಳುಗಳು  !
ಕತ್ತಲ ರಾತ್ರಿಗೆ ಚಂದ್ರನ ಬೆಳಕಿಲ್ಲ ;
ಇರುವುದೊಂದೇ ಮಿಣುಕುವ ಚುಕ್ಕಿ
ಮುಚ್ಚಿದ ಮೋಡಗಳ ತೆರೆ ಸರಿಸುವ
ಗೆಲುವಿನ ನಗೆ ಬೀರುತ್ತಿದೆ !

Thursday, November 15, 2012

ಮೊಗ್ಗು ಅರಳಲೇ ಬೇಕು .... !

ಮೂಲ ಮರಾಠಿ : ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
ಜಯವಂತರಾವ ಜಗತಾಪ – ಮಾಧುರಿ !
ಇಬ್ಬರದೂ ಮಧುರ ದಾಂಪತ್ಯ ; ಸುಖೀ ಸಂಸಾರ !
ಇಬ್ಬರೂ ಕಲಿತವರು ; ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅವರು ಉದ್ಯೋಗಿಗಳು ಕೂಡ. ಅವರ ಸುಂದರವಾದ ಸಂಸಾರದಲ್ಲಿ ಹೂವು ಅರಳಿದಂತೆ ಸಾಗರ ಎನ್ನುವ ಮಗ ಮಡಿಲು ತುಂಬಿದ್ದ. ದುಂಡುದುಂಡಾಗಿದ್ದ ಸಾಗರ ಬೆಳೆದಂತೆಲ್ಲ ಬುದ್ಧಿವಂತನಾಗುತ್ತಲೇ ಶಾಲೆಯ ಕಟ್ಟೆಯನ್ನೂ ಹತ್ತಿ ಇಂಗ್ಲೀಷ್ ಪಾಠವನ್ನು ಕಲಿಯುತ್ತಿದ್ದ !
ಸುಖೀ ಸಂಸಾರಕ್ಕೆ ದೃಷ್ಟಿ ಹತ್ತಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ ಅಲ್ಲವೆ ?
ಜಯವಂತರಾವ ಮತ್ತು ಮಾಧುರಿ ದಾಂಪತ್ಯದಲ್ಲೂ ಹಾಗೇ ಆಯಿತು !
ಅವರಿಬ್ಬರಲ್ಲಿ ಈಗ ಕೆಲ ದಿನಗಳಿಂದ ವಿಚಾರವೊಂದು ತಲೆ ತಿನ್ನತೊಡಗಿತ್ತು !
ಇಂದು ಸಾಯಂಕಾಲ !
ಇಬ್ಬರೂ ಬ್ಯಾಂಕಿನಿಂದ ಮನೆಗೆ ಮರಳಿದ್ದರು. ತಲೆ ತಿನ್ನುತ್ತಿದ್ದ ವಿಷಯದ ಬಗ್ಗೆ ಚರ್ಚೆ ಮಾಡುವ ವಿಚಾರ ಅವರಲ್ಲಿ ಇತ್ತು !
ಮಾಧುರಿ ಮತ್ತೇ ಬಸುರಿಯಾಗಿದ್ದಳು !
ಕುತೂಹಲ, ಹಂಬಲ, ಉತ್ಸಾಹ, ಆತಂಕ ಇಬ್ಬರಲ್ಲೂ ಮನೆ ಮಾಡಿದ್ದವು !
ಹುಟ್ಟುವ ಕೂಸು ಹೆಣ್ಣೋ ಗಂಡೋ ?
ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿದರೆ ... ... ?
ಇದೇ ವಿಚಾರದ ಗೊಂದಲದಲ್ಲಿ ಅವರಿಬ್ಬರೂ ಚಿಂತಿತರಾಗಿದ್ದರು !
ಭ್ರೂಣಲಿಂಗ ಪತ್ತೆ ಮಾಡಿಸುವುದು ಕಾನೂನಿನ ಪ್ರಕಾರ ಅಪರಾಧ !
ಅದು ಅವರಿಬ್ಬರಿಗೂ ತಿಳಿಯದ ಸಂಗತಿಯೇನಲ್ಲ !
ಆದರೂ ... !
ಜಯವಂತರಾವ್ ಹೇಳತೊಡಗಿದ ;
“ಮಾಧುರಿ, ಕಾಯ್ದೆ ಮಾಡೋದ ಮುರಿಯು ಸಲ್ವಾಗಿ ! ನಮಗ ಅದ ಬೇಕಾಗಿಲ್ಲ ಬಿಡ. ಆದರ ಬರೀ ಮಾಹಿತಿ ತಿಳ್ಕೋ ಸಲ್ವಾಗಿಯಾದರೂ ಈ ಪರೀಕ್ಷೆ ಮಾಡ್ಸೂಣುಲಾ ? ಇದು ಪಾಪದ ಕೆಲ್ಸ, ಬೇಕಾಯ್ದೆಶೀರ ಅನ್ನೋದೇನೋ ಖರೆ. ಆದರ ಭಾಳಷ್ಟ ಮಂದಿ ಸಿಟಿ ಒಳಗಿರೋ ಪ್ರಸಿದ್ಧ ಡಾಕ್ಟರ್ ಮಾಧವ ಗುಂಡೆ ದವಾಖಾನಿಯೊಳಗ ಹಿಂಥಾದ್ದss ಮಾಡ್ತಾರಂತ ಮಾತಾಡ್ಕೋತಾರು”
ಚರ್ಚೆ ಮುಂದುವರಿದಿತ್ತು ... ... !
*****
ಮಾಧವರಾವ ಗುಂಡೆ !
ನಗರದ ಪ್ರಖ್ಯಾತ ಸ್ತ್ರೀ ರೋಗ ತಜ್ಞ ! ಹಲವಾರು ರಾಜಕೀಯ ಮುಖಂಡರೊಂದಿಗೆ ಆತನ ಸಂಪರ್ಕವೂ ಇತ್ತು !
ಆತ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡುತ್ತಿದ್ದ !
ಅನೇಕ ಏಜಂಟರನ್ನು ನೇಮಿಸಿಕೊಂಡು ದೇಶದಲ್ಲಿಯ ಮೂಲೆ ಮೂಲೆಗಳಲ್ಲಿ ವ್ಯಾಪಾರ ಸುರುವಿಟ್ಟುಕೊಂಡಿದ್ದ. ಸಾವಿರಾರು ರುಪಾಯಿಗಳನ್ನು ಜನರಿಂದ ಹಿರಿದುಕೊಂಡು ಪಾಪದ ಕೆಲಸ ಮಾಡುತ್ತಿದ್ದ ಕಟುಕ ! ಕಾಯ್ದೆಯನ್ನು ಮೀರಿಯೂ ಹೇಗೆ ಮುಂದುವರಿಯಬಹುದು ಎಂಬುದಕ್ಕೆ ಆತ ಗುಪ್ತ ಮಾರ್ಗವನ್ನೇ ತೋರಿಸಿದ್ದ ! ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳಲು ಶ್ರೀಧರ ಪೋಟಬಾಳೆ ಹೆಸರಿನ ನಂಬಿಗಸ್ಥ ಭಂಟನೊಬ್ಬನನ್ನು ಆತ ನೇಮಿಸಿಕೊಂಡಿದ್ದ !
*****
ಜಯವಂತರಾವ ಮತ್ತು ಮಾಧುರಿ ಕೊನೆಗೊಮ್ಮೆ ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ರಾಜಿಯಾದರು ! ಡಾ. ಗುಂಡೆಯ ದವಾಖಾನೆಗೆ ಹೋಗಲು ಅವರು ನಿರ್ಧರಿಸಿದರು ! ಸಾವಿರಾರು ರುಪಾಯಿ ಫೀಜು ತುಂಬಿ ರವಿವಾರದ ಒಂದು ದಿನ ಸಾಯಂಕಾಲ ಪರೀಕ್ಷೆಯ ಸಮಯವನ್ನು ನಿಗದಿಪಡಿಸಿಕೊಂಡರು !
*****
ರವಿವಾರ ಓಡೋಡುತ್ತ ಬಂತು !
ಸಂಜೆಯ ಸಮಯ. ದವಾಖಾನೆಯ ಭವ್ಯ ಕಟ್ಟಡದ ಸುಸಜ್ಜಿತ ನೆಲಮಾಳಿಗೆಯಲ್ಲಿ ಯಾರಿಗೂ ಸುಳಿವು ಸಿಗದಂತೆ ಡಾ. ಗುಂಡೆ ಸೊನೋಗ್ರಾಫಿ ಮಶೀನು ಇಟ್ಟಿದ್ದ ! ಮಾಧುರಿಯನ್ನು ಒಳ ಕರೆಯಲಾಯಿತು. ಪರೀಕ್ಷೆಯ ಎಲ್ಲ ಹಂತವನ್ನೂ ಒಂದೊಂದಾಗಿ ಮುಗಿಸಲಾಯಿತು. ಕೆಲ ಹೊತ್ತು ಕಳೆದ ಮೇಲೆ ತನ್ನ ಆಫೀಸಿಗೆ ಬರುವಂತೆ ಜಯವಂತರಾವ ಮತ್ತು ಮಾಧುರಿಗೆ ಹೇಳಿದ.
ಗಂಡ-ಹೆಂಡತಿಯರಿಬ್ಬರೂ ಒಳ ಹೊಕ್ಕಾಗ, ಡಾ. ಗುಂಡೆ, ರೀಪೋರ್ಟನ್ನು ತುಂಬ ಚಿಂತಾಕ್ರಾಂತನಾದಂತೆ ನೋಡುತ್ತಿದ್ದ ! ದಂಪತಿಗಳನ್ನು ಕುಳಿತುಕೊಳ್ಳಲು ಹೇಳಿ, ರಿಪೋರ್ಟು ಸರಿಸಿಟ್ಟು ಹೇಳಿದ,
“ಹೆಣ್ಣು ... ಹೆಣ್ಣು ಮಗುವಿದೆ !”
ಡಾ. ಗುಂಡೆಯ ಮಾತು ಕೇಳಿ ಜಯವಂತರಾವನ ಮುಖ ಕಳೆಗುಂದಿತು ! 
ಡಾ. ಗುಂಡೆಯೇ ಮತ್ತೇ ಮಾತನ್ನು ಮುಂದುವರಿಸಿದ.
“ಹ್ಞಾss ! ಏನ ಮಾಡೂಣು ಹೇಳ್ರಿ ? ಕೂಸ ಬೆಳಿಬೇಕೋ ಇಲ್ಲ ... ... ... ?”
ವಿಚಾರ ಮಾಡದೇ ನಿರ್ಧರಿಸುವುದು ಸರಿಯಲ್ಲ ಎಂದುಕೊಂಡ ಗಂಡ-ಹೆಂಡತಿಯರಿಬ್ಬರೂ ಆದಷ್ಟು ಬೇಗನೇ ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿ ಅಲ್ಲಿಂದ ಎದ್ದು ಸೀದಾ ಮನೆಗೆ ಬಂದರು !
*****
ಒಂದೆರಡು ದಿನ ಆ ಬಗ್ಗೆ ಯಾವ ಚರ್ಚೆಯೂ ನಡೆಯಲಿಲ್ಲ !
ಒಂದು ದಿನ ಮಾತನಾಡುತ್ತ ಕುಳಿತಾಗ ಆ ವಿಷಯವನ್ನು ಯಜವಂತರಾವನೇ ಪ್ರಸ್ತಾಪ ಮಾಡಿದ ;
“ಮಾಧುರಿ, ನಿನ್ನ ಅಭಿಪ್ರಾಯ ಏನು ?”
“ಯಾವುದಕ್ಕೆ ?”
“ಅದೇ ಡಾ. ಗುಂಡೆಯವರ ಕಡೆ ಹೋಗೋದು ... !”
“ನೋಡ್ರಿ, ನನ್ನ ಹೊಟ್ಟಿಯೊಳಗ ಹೆಣ್ಣುಕೂಸು ಬೆಳ್ಯಾಕತ್ತೇತಿ ಅನ್ನೂದss ನನಗ ಹೆಮ್ಮೀ ಅನ್ನಿಸಾಕತ್ತೇತಿ ! ದೇವ್ರು, ಮೊದಲ ಬಂಗಾರದಂಥಾ ಮಗನ ಕೊಟ್ಟ ; ಈಗ ಮಗಳು ! ಮಗಳ ಹುಟ್ಟಿ ಬಂದ್ರ ಮನಿಯೊಳಗ ಸುಖ-ಶಾಂತಿ ಹೆಚ್ಚಾಗ್ತಾವ್ರಿ !”
ಜಯವಂತರಾವ ಆಕೆಯ ಮಾತಿಗೆ ಸಹಮತ ತೋರಲಿಲ್ಲ !
ಹೆಣ್ಣುಮಗುವಿನ ತೊಂದರೆ ತಮಗೆ ಬೇಡ ಎಂದು ಬಿಟ್ಟ !
ಮಾಧುರಿಗೆ ಸಿಟ್ಟು ಉಕ್ಕಿ ಬಂತು ! ಆಕೆ ತುಂಬ ಜೋರಿನಿಂದಲೇ ಹೇಳತೊಡಗಿದಳು ;
“ನೋಡ್ರಿ, ಈ ಜಗತ್ತ ಉದ್ಧಾರ ಮಾಡುವಾಕೀ ಒಬ್ಬ ಹೆಣ್ಣss ಆಗಿರ್ತಾಳ ಅನ್ನೂದ ಮರೀಬ್ಯಾಡ್ರಿ. ಕ್ರಾಂತಿಗೂ ಆಕೀ ತಾಯಿ ಮತ್ತ ಶಾಂತಿಗೂ ತಾಯಿ ! ವೀರಮಾತಾ ಜೀಜಾಬಾಯಿ ಇರದಿದ್ರ ವೀರ ಪರಾಕ್ರಮಿ ಶಿವಾಜಿ ಮಾರಾಜ್ರು ಹುಟ್ಟಿ ಬರಾಕ ಸಾಧ್ಯssನ ಇರ್ಲಿಲ್ಲ ! ಸಾವಿತ್ರಿಬಾಯಿ ಫುಲೆ ಇರದಿದ್ರ ಸ್ತ್ರೀ ಶಿಕ್ಷಣದ ಹಾದಿಯೇ ಕಾಣ್ಸೂತ್ತಿರ್ಲಿಲ್ಲ ! ಸನಾತನಿ ವಿಚಾರಗೋಳಿಂದ ಕುರುಡ ಆಗಿರೋ ಸಮಾಜಕ್ಕ ಸ್ತ್ರೀ ಶಿಕ್ಷಣದ ಮೂಲಕನ ವೈಭವ ಪ್ರಾಪ್ತ ಆಗೇತಿ ಅನ್ನೋದ ಮರೀಬ್ಯಾಡ್ರಿ ! ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಾಗ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ತಾರಾರಾಣಿ, ಅಹಲ್ಯ ಹೋಳ್ಕರ್, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮೊದಲಾದ ವೀರವನಿತೇರು ರಣರಂಗಕ್ಕ ಇಳ್ದು ಹುತಾತ್ಮರಾಗ್ಯಾರು ! ಪಂಡಿತ ರಮಬಾಯಿ, ಆನಿಬೇಸೆಂಟ್, ಇಂದಿರಾ ಗಾಂಧಿ ವೊದಲಾದೋರೆಲ್ಲ ಇತಿಹಾಸ ನಿರ್ಮಿಸ್ಯಾರು ! ಸಿಂಧೂತಾಯಿ ಸಪಕಾಳ, ಕಲ್ಪನಾ ಚಾವ್ಲಾ ಮೊದಲಾದೋರು ಹೆಣ್ಣಮಕ್ಕಳss ಅಲ್ಲೇನ್ರಿ ? ... ... ...”
ಜಯವಂತರಾವ ತಟಸ್ಥನಾಗಿಯೇ ಕೇಳುತ್ತಿದ್ದ ! ಮಾಧುರಿ ತಡೆಯಿಲ್ಲದಂತೆ ಮಾತನಾಡುತ್ತಿದ್ದಳು !
“... ... ... ಜಗತ್ತನ್ನ ಉದ್ಧಾರ ಮಾಡೂ ಭಾಳ ದೊಡ್ಡ ಶಕ್ತಿ ಹೆಣ್ಣಮಕ್ಕಳ ಕಡೀ ಇರ್ತೇತಿ ! ಹೆಣ್ಣಂದ್ರ ಬರೀ ಹೆಣ್ಣಲ್ಲ ! ಆಕೀ ತಾಯಿ ಆಗ್ತಾಳು, ಮಗಳ ಆಗ್ತಾಳು, ಅಕ್ಕಾ-ತಂಗಿ ಆಗ್ತಾಳು, ಸೊಸಿ ಆಗ್ತಾಳು, ಅತ್ತೀ ಆಗ್ತಾಳು ! ತ್ಯಾಗ, ಪ್ರೇಮ, ಪರಾಕ್ರಮ, ಸಹಿಷ್ಣುತೆ, ವಿವೇಕ, ಚೊಲೋ ಗುಣಗೋಳ ಖಣಿ ಆಗಿರ್ತಾಳು ! ನಿಸರ್ಗವನ್ನ ಸಮತೋಲನ ಮಾಡಾಕೂ ಹೆಣ್ಣ ಬೇಕಾಗ್ತಾಳು ಮರೀಬ್ಯಾಡ್ರಿ ! ... ... ...”
ಒಂದಿಷ್ಟು ಉಸಿರು ಒಳಗೆಳೆದುಕೊಂಡ ಮಾಧುರಿ ಮತ್ತೇ ಮಾತನಾಡತೊಡಗಿದಳು ;
“... ... ... ಡಾ. ಗುಂಡೇದ ಪಾಪದ ಫಲಾ ತುಂಬಿ ಬಂದೇತಿ ಅಂತ ಮಂದಿ ಮಾತಾಡ್ತಿರ್ತಾರು ! ಹೊಟ್ಟ್ಯಾಗ ಇರೂವಾಗನ ಹೆಣ್ಣಕೂಸಗಳ್ನ ಕೊಲ್ಲೂ ಆ ಡಾ. ಗುಂಡೆ ವೈದ್ಯ ವೃತ್ತಿಗನ ಮಸಿ ಬಳಿಯಾಕತ್ತಾನು. ಅಂವಾ ನಮ್ಮ ಸಮಾಜಕ್ಕ ಅಂಟಿದ ಒಂದ್ ದೊಡ್ಡ ವಿಕೃತಿ ! ನಿಮಗ ಗೊತ್ತಿಲ್ಲೇನ್ರಿ ... ; ಮುನ್ಸಿಪಾಲ್ಟಿ ಗಟಾರದಾಗ ಎಳೀ ಕಂದಮ್ಮಗೋಳ ಹೆಣಾ ಸಿಕ್ಕಾವು ! ಬೀದಿ ನಾಯಿಗೋಳು ಹಂಗ ಹರ್ದ ತಿಂತಿರ್ತಾವು ! ಕಾಗಿ, ಹದ್ದು ಅಳಿದುಳಿದ ಎಲುವು ಮತ್ತ ಮಾಂಸವನ್ನು ಎತ್ಕೊಂಡ ಹೊಂಟಾವು ! ಅಷ್ಟ ಯಾಕ... ಡಾ. ಗುಂಡೆನ ಹೊಲದಾಗೀನ ಬಾವಿಯಾಗನ ಹೆಣ್ಣ ಕೂಸಗೋಳ ಎಲವುಗೋಳ ಸಿಕ್ಕಾವಲಾ ! ಕಾಯ್ದೆ, ಪೋಲೀಸ್ರು ಏನೂ ಮಾಡೂದಿಲ್ಲ. ಗೊತ್ತಿದ್ರೂ ಗೊತ್ತಿರ್ಲಾರ್ದಾಂಗ ಇರ್ತಾರು ! ಅಲ್ರಿ, ಆ ಸತ್ತ ಹೆಣ್ಣ ಮಕ್ಕಳ ಬದಕಿದ್ರ ಯಾರೋ ಡಾಕ್ಟರ್, ಲೆಕ್ಚರ್, ಇಂಜೀನಿಯರ್, ವಿಜ್ಞಾನಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸಮಾಜಸೇವಕಿ, ರಾಜಕಾರಣಿ, ಗೃಹಿಣಿ ಆಗ್ಬಹುದಿತ್ತಲ್ರಿ ? ನಿಮ್ಮ ಅವ್ವನೂ ಒಬ್ಬಾಕಿ ಹೆಣ್ಣ ಆಗಿದ್ರಿಂದನ ನೀವ್ ಇಂದ ಈ ಜಗತ್ತ ನೋಡಾಕತ್ತೇರಿ ! ಇದೆಲ್ಲ ನೀವ ಯಾಕ ಮರಿತೇರಿ ? ... ... ... ... ಖರೇ ಹೇಳ್ಬೇಕಂದ್ರ ಆ ಕೆಟ್ಟ ಹುಳಾ ಡಾ. ಗುಂಡೆ ಕಡೀ ನನಗ ಹೋಗಾಕ ಮನಸ್ಸ ಇರ್ಲಿಲ್ಲ ! ನಿಮ್ಮ ಬಲವಂತಕ ಬಲಿ ಆದ್ನಿ ಅಷ್ಟ”
ಜಯವಂತರಾವ ಆಕೆ ಮಾತನಾಡುವಾಗ ನಡುವೆ ಬಾಯಿ ಹಾಕಲಿಲ್ಲ ! ಆಕೆ ಮಾತು ನಿಲ್ಲಿಸಿದ ಮೇಲೆ ಏನೂ ತಿಳಿಯದವನಂತೆ ತನ್ನ ವಿಚಾರ ಹೇಳತೊಡಗಿದ !
“ಮುಗಿತೇನ ನಿನ್ನ ಸ್ತ್ರೀಮಾತ್ಮೆ ಪುರಾಣಾ ? ಮಾಧುರಿ, ಹಕೀಕತ್ತ ತಿಳ್ಯೂಲ್ಲದ ಭಾವನಾದ ಭರದಾಗ ತೆಗ್ದಕೊಳ್ಳೂ ನಿರ್ಧಾರಗೋಳು ತಪ್ಪ ಹಾದಿಗಿ ಒಯ್ಯತಾವು ! ಸಮಾಜದ ಹಿತಾ, ದೇಶದ ಹಿತಾ, ಸಮಾಜದ ಅರಿವು ಇಂದ ಬದುಕ ಕಟ್ಟೂದಿಲ್ಲ ! ಸ್ವಾರ್ಥ ಮತ್ತ ಸ್ವಹಿತ ಬಿಟ್ಟ ಬ್ಯಾರೆ ಯಾವುದರಾಗೂ ಮಂದಿಗಿ ಆಸಕ್ತಿ ಇಲ್ಲ ! ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣಮಕ್ಕಳ ಸಂಖ್ಯಾ ಕಮ್ಮಿ ಆಗ್ತೇತಿ ಅನ್ನೂ ನಿನ್ನ ವಿಚಾರ ತಲ್ಯಾಗಿಂದ ತಗದ ಬಿಡ. ನಾವು ನಮ್ಮ ಕುಟುಂಬದ್ದಷ್ಟss ವಿಚಾರ ಮಾಡೂಣು ! ಶಿವಾಜಿ ಮಾರಾಜ್ರು ಬ್ಯಾರೆಯೋರ ಮನಿಯೊಳಗ ಹುಟ್ಟಿ ಬರ್ಲಿ ಅಂತ ಯಾರಾದ್ರೂ ಅಂತಾರೇನ ? ಹುಚ್ಚರಾಂಗ ವಿಚಾರ ಮಾಡಬ್ಯಾಡ ! ಸುಮ್ನss ನಮ್ಮ ಮನ್ಯಾಗ ಕಿರಿಕಿರಿ ಬ್ಯಾಡ. ಟೈಮ್ ಭಾಳ ಕಮ್ಮಿ ಏತಿ. ಗರ್ಭಪಾತ ಮಾಡಸ್ಕೊಳ್ಳಾಕ ತಯಾರಾಗ ನೀ ! ಮುಂದಿಂದೆಲ್ಲ ಬರೊಬ್ಬರಿ ಆಗ್ತೇತಿ !”
ಆತನ ಮಾತು ಕೇಳಿದ ಮಾಧುರಿ ಸಂತಾಪಿತಗೊಂಡಳು ! ಆವೇಶದಿಂದಲೇ ಆಕೆ ಮರು ಉತ್ತರ ನೀಡತೊಡಗಿದಳು !
“ಅಲ್ರಿ, ನೀವು ಈ ಸಮಾಜದಾಗ ಸುಶಿಕ್ಷಿತ ವ್ಯಕ್ತಿ ಅನ್ಸಕೊಂಡಾವ್ರು ! ಹಿಂಥಾ ವಿಚಾರಗೋಳು ನಿಮಗ ಶೋಭಾ ತರೂದಿಲ್ಲ ! ನೀವ ಏssನ ಹೇಳ್ರಿ. ನಾ ಅಂತೂ ಒಪ್ಪೂದಿಲ್ಲ ! ಪಾಪದ ಹಾದಿ ತುಳಿಯೂದಿಲ್ಲ. ತಿಳ್ಕೋರಿ !”
ಜಯವಂತರಾವನಿಗೂ ಕೋಪ ಉಕ್ಕಿ ಬಂತು !
ಮಾಧುರಿಯ ಸಂಕಟ ಆತನಿಗೆ ಅರಿವಾಗಲೇ ಇಲ್ಲ ! ಹಠಕ್ಕೆ ಬಿದ್ದವರಂತೆ ಆತ ಮತ್ತೇ ವಾದಿಸಿದ !
“ನೋಡ ಮಾಧುರಿ, ನಾನು ಇಡೀ ಸ್ತ್ರೀ ಜಾತಿಯನ್ನ ದ್ವೇಷಾ ಮಾಡಾಕತ್ತಿಲ್ಲ ! ನಮಗ ಹೆಣ್ಣಮಗು ಯಾಕ ಬ್ಯಾಡ ಅನ್ನೂದಕ್ಕ ಕಾರಣಾ ಹೇಳ್ತೇನ ಕೇಳ ; ಸಮಾಜದ ಎಲ್ಲಾ ಸರದಾಟ ಒಂದಿಷ್ಟ ಕಣ್ಣ ಹಾಯ್ಸಿ ನೋಡ ! ಬಾಜೂ ಮನಿ ರಮಾಕಾಕೂನ ಉದಾಹರಣೀನ ತೊಗೋ ! ಆ ಗಂಡ ಸತ್ತ ಹೆಣ್ಣಮಗ್ಳು, ಬದುಕಿನ್ಯಾಗ ತಾ ಗಳಿಸಿದ್ದೆಲ್ಲಾ ತನ್ನ ಮಗಳ ಸುಗಂಧಾನ ಶಿಕ್ಷಣಕ್ಕಾಗಿ ಖರ್ಚ ಮಾಡಿದ್ಳು. ಶ್ರೀಮಂತ ಮನೆತನ ಸಿಗ್ಲಿ ಅಂತ ಸಿಕ್ಕಾಪಟ್ಟೆ ವರದಕ್ಷಿಣಿ ನೀಡಿ ಮದ್ವಿನೂ ಮಾಡಿಕೊಟ್ಳು. ಆದರ ಆದದ್ದೇನ ಗೊತ್ತೇತ್ತಲಾ ? ಮದ್ವಿ ಆದ ಒಂದss ವರ್ಷದಾಗ ಸುಗಂಧಾ ವರದಕ್ಷಿಣಿ ಕಿರುಕುಳಕ್ಕ ಬಲಿ ಆದ್ಳು ! ಆಕೀ ಅತ್ತಿ ಮನ್ಯಾವ್ರು ಹುಲ್ಲಿನ ಬಣವಿ ಸುಟ್ಟ ಹಾಕಿದಾಂಗ ಆಕೀನ ಸುಟ್ಟ ಹಾಕಿದ್ರು ! ಅಷ್ಟss ಅಲ್ಲ ; ಪೋಲೀಸ್ರನ ಒಳಗ ಮಾಡ್ಕೊಂಡ ಅದ ಆತ್ಮಹತ್ಯಾ ಕೇಸ್ ಅಂತ ಮುಚ್ಚಿ ಹಾಕಿದ್ರು ! ... ...”
ಜಯವಂತರಾವ ಸತ್ಯವನ್ನೇ ನುಡಿಯುತ್ತಿದ್ದ. ಅದು ಆತ ಕಂಡ ಸತ್ಯವೇ ಆಗಿತ್ತಲ್ಲವೆ ? ಮುಂದುವರಿದು ಆತ ಹೇಳತೊಡಗಿದ ;
“... ... ರಮಾಕಾಕೂ ನ್ಯಾಯಕ್ಕಾಗಿ ಭಾಳ ಹೋರಾಟ ಮಾಡಿದ್ಳು. ಆದರ ಅದೆಲ್ಲ ವ್ಯರ್ಥ ಆತು ! ತನ್ನ ಮಗಳ ಬೂದಿಯನ್ನ ಆಕಿ ಪಂಚಗಂಗಾ ನದಿಯೊಳಗ ಹಾಕಿಬಿಟ್ಳು ! ಮೂಕ ಆಗಿರೋ ಆ ನದಿ ಅನಿವಾರ್ಯದಿಂದನss ಆ ಪಾಪವನ್ನ ಹೊಟ್ಟಿಯೊಳಗ ಹಾಕ್ಕೊಂತು ! ಇನ್ನೊಂದ ನಿನಗ ಗೊತ್ತಿರಬೇಕಲಾ ? ಸೊಸಿ ನೋಡಾಕ ಚೊಲೋ ಅದಾಳು ಅಂತ ಆಕೀ ಮಾಂವ್ನss ಬಲತ್ಕಾರ ಮಾಡಿ ತನ್ನ ಹಸಿವ ತೀರ್ಸಕೊಂಡ ಸುದ್ದಿ ! ಮಾನಾ ಕಳ್ಕೊಂಡ ಆ ಸೊಸಿ ರೈಲ್ವೆ ಹಳಿಗಿ ತಲಿ ಕೊಟ್ಳು. ಆಕೀ ಎಲವ ಕೂಡ ಸಿಗದಿಲ್ಲ ! ಮಾಧುರಿ, ನಿಪ್ಪಾಣಿಯೊಳಗ ನನ್ನ ಒಬ್ಬ ಸ್ನೇಹಿತನ ಮಗ್ಳ ಮ್ಯಾಲ ಆಕೀ ಗಂಡನss ಮಾನಸಿಕ ಮತ್ತ ದೈಹಿಕ ಅತ್ಯಾಚಾರ ಮಾಡಿ, ಎರ್ಡೂ ಮಕ್ಳ ಜೊತಿ ಆಕೀನ ಮನಿಯಿಂದ ಹೊರ್ಗ ಹಾಕಿದಾ ! ಆ ಮಕ್ಳು ಪೋಟಗಿ (ಜೀವನಾಂಶ) ಸಲ್ವಾಗಿ ಕೋರ್ಟಿನ್ಯಾಗ ದಾವೆ ಹೂಡಿದ್ರೂ ಫಾಯ್ದಾ ಆಗ್ಲಿಲ್ಲ ! ಕೇಸ್ ಐದಾರ ವರ್ಷ ನಡೀತು ! ಗಂಡ ಆದಾವ್ನು ತನ್ನ ಆಸ್ತಿಯೆಲ್ಲಾ ಅಷ್ಟರೊಳಗss ಮಾರಿಬಿಟ್ಟಿದ್ದ ! ಮುಚ್ಚಮರೀಲೆ ಮತ್ತೊಂದ ಮದ್ವಿ ಮಾಡ್ಕೊಂಡ ಸಂಸಾರ ಸುರು ಮಾಡಿದ ! ಪೋಟಗಿ ಬದಲ ಜೇಲಿಗಿ ಹೋಗಾಕ ರೆಡಿ ಅದೇನ ಅಂತ ಅಂವಾ ಈಗ ಹೇಳ್ತಾನು ! ಅದ ಕಾಯ್ದಾದಾಗ ಇಲ್ಲ ! ಹಿಂಥಾ ಕಾಯ್ದೆ-ಕಾನೂನು ಕೋರ್ಟುಗಳ ಒತ್ತಡ ಇದ್ದಾಗ್ಲೂ ಹೆಣ್ಣಮಕ್ಳ ಮ್ಯಾಲ ಇನ್ನೂ ಶೋಷಣಾ ನಡೀತಾನss ಏತಿ ! ... ...”
ಜಯವಂತರಾವ ದಣಿವಿಲ್ಲದಂತೆ ಮಾತನಾಡತೊಡಗಿದ್ದ ! ಮಾಧುರಿ ತಲೆ ಕೆಳಗೆ ಹಾಕಿ ಕುಳಿತ್ತಿದ್ದಳು !
“... ... ಮಾಧುರಿ, ನೀ ಒಮ್ಮಿ ಕೋರ್ಟ್ ಕಂಪೌಂಡ್ದಾಗ ಹೋಗಿ ನೋಡ ; ಇಪ್ಪತ್ತ-ಇಪ್ಪತ್ತೆರಡ ವಯಸ್ಸಿನ ಸಾವಿರಾರು ಹೆಣ್ಣಮಕ್ಳು ಡೈವೋರ್ಸ್ ಮತ್ತ ಪೋಟಗಿ ಸಲ್ವಾಗಿ ಫ್ಯಾಮಿಲಿ ಕೋರ್ಟಿನ ಮುಂದ ನಿಂತಿರ್ತಾರು ! ಭವಿಷ್ಯದಾಗ ನಮಗ ಹುಟ್ಟೂ ಮಗ್ಳೂ ಕೋರ್ಟ್ ಕಂಪೌಂಡ್ದಾಗ ಕಾಣ್ಸೂದಿಲ್ಲ ಅಂತ ಹೆಂಗ ಹೇಳಾಕಾಗ್ತೇತಿ ? ಹೆಣ್ಣಮಕ್ಳಿಗಿ ಕೌಟಂಬಿಕ ಹಿಂಸಾಚಾರ್ದ ವಿರುದ್ಧ ಸಂರಕ್ಷಣಾ ಸಿಗ್ಬೇಕಂತ ಕಾಯ್ದಾನೂ ಏತಿ ! ಆದರ ಆ ಕಾಯ್ದೆಯಿಂದ ಗಂಡಾ-ಹೆಂಡ್ತಿ ನಡುವ ಜಗ್ಳ ಸುರುವಾಗ್ತೇತಿ ! ... ಹಿಂದೂ ವಾರಸಾ ಕಾಯ್ದೆಕ ತಿದ್ದಪಡಿ ತಂದ ಮಗ್ಳಿಗಿ ಅಪ್ಪನ ಆಸ್ತಿಯೊಳಗ ಅಣತಮರ ಜೋಡಿ ಸಮಾನ ಪಾಲ ಕೊಡಬೇಕನ್ನೂ ಕಾಯ್ದೆ ಮಾಡ್ಯಾರು. ಹಂಗss ಡೈವೋರ್ಸ್ ಕೊಡೂವಾಗ ಗಂಡನ ಆಸ್ತಿಯೊಳಗ ಹೆಂಡ್ತಿಗಿ ಅರ್ಧಾ ಪಾಲ ಕೊಡಬೇಕಂತ ವಿಧೇಯಕವನ್ನ ಪಾರ್ಲಿಮೆಂಟಿನ್ಯಾಗ ಮನ್ನೆ ಮನ್ನೆ ಪಾಸ್ ಮಾಡ್ಯಾರು ! ಈ ಕಾಯ್ದೆದಿಂದ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಅವ್ವ ಅನ್ನೂ ಸಂಬಂಧಗೋಳೆಲ್ಲ ಹಾಳಾಗಿ ಕುಟುಂಬ ವಿಘಟನಾ ಆಗಾಕತ್ತೇತಿ ! ಸಮಾಜದಾಗ ನೆಮ್ಮದಿ ಕನಸಿನ ಮಾತಾಗೇತಿ ! ಮಗಳನ್ನ ಸಾಕಿ, ಬೆಳ್ಸಿ ಮದ್ವಿ ಮಾಡ್ಸೂ ಅಷ್ಟೊತ್ತಿಗಿ ಹಡದ ಅವ್ವ-ಅಪ್ಪನ ಹೆಣಾ ಬಿದ್ದ ಹೋಗಿರ್ತೇತಿ ! ಇದ್ನೆಲ್ಲ ನೋಡಿ ಮನ್ಯಾಗ ಮಗ್ಳ  ಹುಟ್ಟಿದ್ರ ಪೀಡಾ ಹುಟ್ಟಿದಾಂಗ ಅನ್ನೂ ಭಾವ್ನಾ ಹೆಚ್ಚಾಗಾಕತ್ತೇತಿ ! ಮುಂದ ನಮಗಾಗ್ಲಿ, ನಮ್ಮ ಮಕ್ಳಿಗಾಗ್ಲಿ ತ್ರಾಸ ಆಗ್ಬಾರ್ದು ಅಂದ್ರ ಈಗ ನೀ ತ್ಯಾಗಾ ಮಾಡಾಕssಬೇಕ ! ‘ಸತ್ಯಮೇವ ಜಯತೆ’ ಕಾರ್ಯಕ್ರಮ ತೋರ್ಸತಾರು ಅಂದ್ರ ಇರೂ ಚಿತ್ರ ಬದ್ಲಾಗೂದಿಲ್ಲ ! ನೀ ಇಲ್ಲ ಅನ್ನಬ್ಯಾಡ. ಡಾ. ಗುಂಡೆಯವರ ಸಲ್ಲಾ ಪಡಕೊಂಡ ಲಗೂ ಮಾಡಿ ಈ ಗರ್ಭ ತೆಗೆಸೋಣು !”
ಮಾಧುರಿ ಒಳಗೊಳಗೆ ಕುದಿಯುತ್ತಿದ್ದಳು !
ಗಂಡ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಆಕೆ, ತನ್ನ ಗಂಡ ಸ್ತ್ರೀ ಜಾತಿಯ ಬಗ್ಗೆ ಎಂಥ ಮಾತಾಡ್ತಾನೆ ಎಂದು ಆಘಾತವಾಯಿತು ! ಆಕೆ ಸಾರಾಸಗಟಾಗಿ ಆತನ ಮಾತನ್ನು ಧಿಕ್ಕರಿಸಿದಳು !
ಜಯವಂತರಾವ ಕುದ್ದು ಹೋದ !
“ನೋಡ ಮಾಧುರಿ, ಎಲ್ಲಾ ಹೆಣ್ಣ ಜಾತೀನ ಕೀಳ ಮಾಡಿ ನಾ ಮಾತಾಡಾಕತ್ತಿಲ್ಲ.  ಆದರ ಇಷ್ಟೆಲ್ಲ ಆಗಾಕ ಹೆಣ್ಣss ಕಾರಣ ಅಂತ ಅನ್ಸೂದಿಲ್ಲ ನಿನಗ ? ಸೊಸಿ ಮ್ಯಾಲಿನ ಶೋಷಣಾ ಮತ್ತ ವರದಕ್ಷಿಣಿ ಕೇಸುಗಳೊಳಗ ಅತ್ತೀ ಕೈವಾಡ ಭಾಳ ಇರ್ತೇತಿ ! ಕೋರ್ಟಿನ್ಯಾಗೂ ಇದ ಸಿದ್ಧ ಆಗೇತಿ ! ಹೆಣ್ಣುಭ್ರೂಣ ಹತ್ಯಾದ ಪಾಪದೊಳಗ ಹೆಣ್ಣಿನ ಪಾತ್ರ ಭಾಳ ಏತಿ ಅನ್ನೋದ ಮರೀಬ್ಯಾಡ ! ಹೆಣ್ಣಮಕ್ಳು ದಿಟ್ಟತನದಿಂದ ಇದನ್ನ ನಿರಾಕರಿಸಿದ್ರ ಹಿಂಥಾ ಪಾಪಗೋಳ ಘಟ್ಸೂದಿಲ್ಲ ! ಆದರ ದುರ್ದೈವ ನೋಡ, ಹೆಣ್ಣುಭ್ರೂಣ ಹತ್ಯಾದಂಥಾ ಪಾಪದಾಗ ಹೆಣ್ಣುಗೋಳ ಸಮ್ಮತಿ ಇದ್ದss ಇರ್ತೇತಿ ! ಅವರ ಸಮ್ಮತಿ ಕೊಟ್ಟ ಮ್ಯಾಲನ ಡಾಕ್ಟರೂ ಈ ಅಪರಾಧದಾಗ ಸಹಭಾಗ ಆಗ್ತಾರು ! ... ...”
ಮಾಧುರಿಗೆ ತನ್ನ ಗಂಡನ ಮಾತಿನಲ್ಲಿ ಸತ್ಯ ಕಾಣಿಸತೊಡಗಿತು !
ಆತ ಹೇಳುತ್ತಿರುವುದರಲ್ಲಿ ತಪ್ಪೇನೂ ಇಲ್ಲ !
“ಎಲ್ಲಾದಕ್ಕೂ ಹೆಣ್ಣss ಜವಾಬ್ದಾರ ಆಗಿದ್ರ ಈ ಗರ್ಭ ತೆಗೆಸೋದನ್ನ ನಾ ಸಮರ್ಥನಾ ಮಾಡ್ಕೋದಿಲ್ರಿ ! ಗರ್ಭಪಾತದ ಪಾತಕ ನನ್ನಿಂದ ಸಾಧ್ಯ ಇಲ್ರಿ ! ನನ್ನ ಹೊಟ್ಟ್ಯಾಗಿರೋ ಕೂಸು ಜಗತ್ತ ನೋಡ್ಬೇಕ್ರಿ ! ನನ್ನ ಮೊಗ್ಗು ಅರಳಾಕssಬೇಕ್ರಿ !
ಜಯವಂತರಾವ ಮುಂದೆ ಮಾತನಡಲಿಲ್ಲ !
ಆತ ತನ್ನ ಪ್ರಯತ್ನವನ್ನೇ ಕೈ ಬಿಟ್ಟ !
*****
ಮಾಧುರಿಗೆ ನವಮಾಸಗಳು ತುಂಬಿದವು !
ಹೆರಿಗೆಯೂ ಆಯಿತು ; ಮುದ್ದಾದ ಮಗಳು ಮಡಿಲು ತುಂಬಿದ್ದಳು !
ಮಗಳಿಗೆ ‘ಪಾರು’ ಎಂದು ಪ್ರೀತಿಯಿಂದಲೇ ಹೆಸರಿಡಲಾಯಿತು ! ವಿಚಿತ್ರ ನೋಡಿ ; ಈಗ ಜಯವಂತರಾವ ತನ್ನ ಮಗಳನ್ನು ಬಿಟ್ಟು ಒಂದುಕ್ಷಣವೂ ಇರುತ್ತಿರಲಿಲ್ಲ ! ಗಂಡ-ಹೆಂಡತಿಯರಿಬ್ಬರೂ ಮಗಳ ಪಾಲನೆ-ಪೋಷಣೆ ಚೆನ್ನಾಗಿಯೇ ಮಾಡಿದರು. ಮಗನಿಗೆ  ನೀಡಿದಂತೆಯೇ ಒಳ್ಳೆಯ ಶಿಕ್ಷಣವನ್ನೂ ಕೊಡಿಸಿದರು.
ಪಾರು ತುಂಬ ಬುದ್ಧಿವಂತೆ ! ತುಂಬ ಚೂಟಿ !
ಪದವಿ ಮುಗಿಸಿದ ಮೇಲೆ ಐ.ಎ.ಎಸ್. ಪರೀಕ್ಷೆ ಬರೆದು ಪಾಸಾದಳು !
ದೇಶಸೇವೆಗಾಗಿ ಆಕೆ ಸರಕಾರಿ ಆಡಳಿತದಲ್ಲಿ ಬಹುದೊಡ್ಡ ಹುದ್ದೆ ಪಡೆದಳು !
ಕಮರಿ ಹೋಗಬೇಕಿದ್ದ ಮೊಗ್ಗು ಅರಳಿ ನಿಂತಿತ್ತು !
ಮಾಧುರಿ-ಜಯವಂತರಾವ ಇಬ್ಬರಲ್ಲೂ ಧನ್ಯತಾ ಭಾವ ಇತ್ತು !
ಮಾಧುರಿ ಇಡೀ ಜಗತ್ತಿಗೇ ಹಿರಿದಾದ ಸಂದೇಶವೊಂದನ್ನು ನೀಡಿದ್ದಳು ;
ಮೊಗ್ಗು ಅರಳಲೇ ಬೇಕು !’
*****

ಮಾತ್ಗವಿತೆ-100


Tuesday, November 13, 2012

`ಮಾರ್ಕ್ಸ್‌ವಾದದ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರಹ ನನ್ನದು'


ಶ್ರೀಲಂಕಾದ ಚೆಕಾಫ್ ಜಯತಿಲಕೆ ಕಮ್ಮಲ್ಲವೀರ ಸಂದರ್ಶನ 
                                                                                - ಡಿ.ಕೆ. ರಮೇಶ್



* ರಾಜಕೀಯ ಹೋರಾಟಗಾರರಾದ ನೀವು ಸಾಹಿತ್ಯದತ್ತ ಮುಖ ಮಾಡಿದ್ದು ಹೇಗೆ?ಚಿಕ್ಕಂದಿನಿಂದ ನನ್ನ ಒಲವು ಸಾಹಿತ್ಯದತ್ತಲೇ. ಉಳ್ಳವರು ಮತ್ತು ಉಳ್ಳದವರ ನಡುವಿನ ಘರ್ಷಣೆಯಿಂದಾಗಿ ಸಮತಾವಾದ ಶ್ರೀಲಂಕಾದಲ್ಲಿ ಬೇರು ಬಿಡುತ್ತಿತ್ತು. ಚಹಾ ತೋಟಗಳ ಕಾರ್ಮಿಕರು, ಬಂದರು ಕೆಲಸಗಾರರು ಸಂಘಟಿತರಾಗುತ್ತಿದ್ದರು. ಆಗ ದೇಶದ ತುಂಬಾ ರಷ್ಯಾ ಸಾಹಿತ್ಯದ ಅಲೆಯಿತ್ತು. ಬಡತನದ ಕಾರಣಕ್ಕೆ ಚಿಕ್ಕಂದಿನಿಂದಲೇ ಶಾಲೆ ತೊರೆದ ನಾನು ಅಂತಹ ಅನೇಕ ಸಾಹಿತ್ಯ ಕೃತಿಗಳನ್ನು ಓದತೊಡಗಿದೆ. ಹದಿನೇಳನೇ ವಯಸ್ಸಿಗೆ ಬರೆಯಲು ಆರಂಭಿಸಿದೆ. ಆ ಬಳಿಕ ನವ ಸಮ ಸಮಾಜದಲ್ಲಿ ದುಡಿದೆ. ಅದರಿಂದ ಸಾಕಷ್ಟು ಅನುಭವಗಳಾದವು. ಶ್ರೀಲಂಕಾದ ಹಳ್ಳಿ ಹಳ್ಳಿಗಳನ್ನು ತಿರುಗುವುದು, ಜನರ ನೋವು ನಲಿವುಗಳನ್ನು ಹತ್ತಿರದಿಂದ ನೋಡುವುದು ಸಾಧ್ಯವಾಯಿತು.


ಕೆಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಬಳಿಕ ಸಂಘಟನೆಯಿಂದ ದೂರ ಉಳಿದೆ. ಸಾಹಿತ್ಯದ ಕೆಲಸಗಳಲ್ಲಿ ಹೆಚ್ಚು ಮಗ್ನನಾದೆ. ದಕ್ಷಿಣ ಅಮೆರಿಕ, ಆಫ್ರಿಕಾ, ಭಾರತೀಯ ಸಾಹಿತ್ಯವನ್ನು ಓದುತ್ತಾ ಹೋದೆ. ಜತೆಗೆ ಬರವಣಿಗೆಯೂ ಸಾಗಿತು.
ಬರೆವ ಬೆರಗಿನ ಕುರಿತು ಒಂದಿಷ್ಟು...
ಕೆಲ ಕಾದಂಬರಿಗಳನ್ನು ಬರೆದಿದ್ದರೂ ಸೃಜನಶೀಲ ಬರವಣಿಗೆಯಲ್ಲಿ ಸಣ್ಣಕತೆಯೇ ನನ್ನ ನೆಚ್ಚಿನ ಪ್ರಕಾರ. ಇಡೀ ಶ್ರೀಲಂಕಾದಲ್ಲಿ ಕಾದಂಬರಿಕಾರನಿಗಿಂತಲೂ ಹೆಚ್ಚಾಗಿ ನನ್ನೊಳಗಿನ ಕತೆಗಾರನನ್ನು ಸಹೃದಯಿಗಳು ಗುರುತಿಸಿದ್ದಾರೆ. ಸೃಜನಶೀಲ ಬರವಣಿಗೆಯಲ್ಲಿ ಕತೆ ಅತ್ಯಂತ ಪ್ರಭಾವಶಾಲಿಯಾದುದು ಎಂದು ನಂಬಿದ್ದೇನೆ. ಅಲ್ಲದೆ ಇದು ಸಾಹಿತ್ಯದ ನವಿರು ಕಸರತ್ತು ಕೂಡ. ಒಂದೊಳ್ಳೆಯ ಕತೆ ಒಳ್ಳೆಯ ಕಾವ್ಯದಂತೆಯೇ ಮಧುರ. ಕತೆಯನ್ನು ಓದುವುದರಿಂದಲೇ ಸಾಹಿತ್ಯದ ಒಂದು ಅಭ್ಯಾಸ ಆರಂಭವಾಗುತ್ತದೆ. ಕತೆಯ ಪದ ಅಥವಾ ವಾಕ್ಯಗಳನ್ನು ಓದುವುದಕ್ಕಿಂತ ಅವುಗಳ ಧ್ವನಿಯನ್ನು ಗುರುತಿಸುವುದು ಮುಖ್ಯ.

ಇಂಗ್ಲಿಷ್‌ನಲ್ಲಿ eading between the lines ಎನ್ನುತ್ತಾರಲ್ಲಾ ಹಾಗೆ. ಅಲ್ಲಿನ ಉಪಮೆ, ಪ್ರತೀಕ, ಕಾಣ್ಕೆಗಳನ್ನು ಸಂದರ್ಭಕ್ಕೆ ಸರಿಯಾಗಿ ಗ್ರಹಿಸಿದಾಗಲೇ ಒಂದೊಳ್ಳೆ ರಸಾನುಭವ ಸಾಧ್ಯ. ಕತೆ ಬರೆಯುವಾಗ ಶೈಲಿ, ನಿರೂಪಣೆ ಕೂಡ ಅಷ್ಟೇ ಮುಖ್ಯ.

ಹೀಗಾಗಿ ನನ್ನ ಬರವಣಿಗೆಯಲ್ಲಿ ಬರೆವ ಶೈಲಿ, ಬಳಸುವ ಭಾಷೆ ಹಾಗೂ ನಿರೂಪಣೆಯ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ. ಇದು ಕೂಡ ಕತೆಯ ವಸ್ತುವಿನಷ್ಟೇ ಮಹತ್ವದ್ದು. ಸಾಂದರ್ಭಿಕ ಅರ್ಥಗಳು, ಪದಗಳ ಸಾಂಕೇತಿಕ ಪ್ರಸ್ತುತತೆ ಹಾಗೂ ಭಾಷೆಯ ಲಯವನ್ನು ವಿಶೇಷವಾಗಿ ಗಮನಿಸುತ್ತೇನೆ. ಏಕೆಂದರೆ ಎಲ್ಲಾ ಕತೆಗಳನ್ನು ಒಂದೇ ಶೈಲಿ ಹಾಗೂ ಲಯದಲ್ಲಿ ಬರೆಯಲು ಸಾಧ್ಯವಿಲ್ಲ. ಒಂದು ಭಾಷೆಗೆ ಇರುವ ಲಯವನ್ನು ಕಂಡುಕೊಳ್ಳುವುದು ಲೇಖಕನಿಗಿರಬೇಕಾದ ಮುಖ್ಯ ಗುಣ. ಜತೆಗೆ ಓದುಗರೂ ಬರೆದದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ಮುಂದುವರಿದಿರಬೇಕು. ಅವರ ಅಭಿರುಚಿಯೂ ಬರಹಗಾರನಷ್ಟೇ ಎತ್ತರದಲ್ಲಿರಬೇಕು. ಅನುಭವ ಹಾಗೂ ಭಾಷೆಯ ಸೂಕ್ಷ್ಮತೆಯನ್ನು ಗಮನಿಸುವ ಕೆಲಸ ಅವರಿಂದಾಗಬೇಕು.
* ನಿಮ್ಮ ಕತೆಗಳ ಒಟ್ಟು ದನಿ?
ಬಹುಶಃ ಕಪ್ಪು ಬಿಳುಪು ರೀತಿಯಲ್ಲಿ ಇದಮ್ಮಿತ್ತಂ ಎಂದು ನನ್ನ ಕತೆಗಳ ಆಶಯವನ್ನು ಹೇಳಿಕೊಳ್ಳಲಾಗದು. ಕಾಲ- ದೇಶಗಳಲ್ಲಿ ನಡೆದ ಸಾಹಿತ್ಯ ಕೃಷಿ ಮನುಷ್ಯ ಪರವಾಗಿರುವಂತೆಯೇ ನನ್ನ ಕತೆಗಳು ಕೂಡ ಅದರತ್ತಲೇ ತುಡಿಯುತ್ತವೆ. ಮಾರ್ಕ್ಸ್‌ವಾದದ ಹಿನ್ನೆಲೆಯಿಂದ ಬಂದವನಾದರೂ ಅದರ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರವಣಿಗೆ ನನ್ನದಾಯಿತು ಎಂದು ಹೇಳಬಹುದೇನೋ.
*  ಜನಾಂಗೀಯ ಕಲಹದ ಬಳಿಕ ಶ್ರೀಲಂಕಾದ ತಮಿಳು ಹಾಗೂ ಸಿಂಹಳ ಸಾಹಿತ್ಯದಲ್ಲಿ ಎಂಥ ಬದಲಾವಣೆಗಳಾದವು?
ತಮಿಳು ಸಾಹಿತ್ಯ ನನಗೆ ಅಷ್ಟು ಆಳವಾಗಿ ಗೊತ್ತಿಲ್ಲದ ಕಾರಣ ಅದರ ಕುರಿತು ಪ್ರಸ್ತಾಪಿಸುವುದಿಲ್ಲ. ಆದರೆ ಸಿಂಹಳ ಕವಿತೆ, ಸಣ್ಣಕತೆ ಹಾಗೂ ಕಾದಂಬರಿ ಪ್ರಕಾರಗಳ ಕುರಿತು ಪ್ರತಿಕ್ರಿಯಿಸಬಲ್ಲೆ. ಕದನದ ಸಮಯದಲ್ಲಿ ಕೂಡ ಬಹುತೇಕ ಸಿಂಹಳ ಬರಹಗಾರರು ಜನಾಂಗೀಯ ಕಲಹ ಕುರಿತು ಸೂಕ್ಷ್ಮಜ್ಞರಾಗಿರಲಿಲ್ಲ. ಸಮರೋತ್ತರ ಸಂದರ್ಭವಾದ ಈ ದಿನಗಳಲ್ಲಿಯೂ ನನಗೆ ಅಂಥ ಮಹತ್ವದ ಬದಲಾವಣೆಗಳು ಕಂಡು ಬರುತ್ತಿಲ್ಲ. ಹಾಗೆಂದು ಅಂತಹ ಸೂಕ್ಷ್ಮತೆಯಿಂದ ಎಲ್ಲರೂ ಹೊರತಾಗಿದ್ದಾರೆ ಎಂದರ್ಥವಲ್ಲ. ಹಾಗೆ ಸೃಜನಾತ್ಮಕವಾಗಿ ಸ್ಪಂದಿಸಿದ ಕೆಲವರ ಕೃತಿಗಳು ತುಂಬಾ ಶಕ್ತಿಶಾಲಿಯಾಗಿಯೇ ಇವೆ.

ಸಿಂಹಳ ಸಿನಿಮಾಗಳಲ್ಲಿ ಮಾತ್ರ ಅಲ್ಪಮಟ್ಟಿನ ಬದಲಾವಣೆಗಳುಂಟಾದವು. ಯುದ್ಧದ ಸಂದರ್ಭಗಳಲ್ಲಿ ಕದನವನ್ನು ವಿಮರ್ಶಿಸಿ ಕೆಲವು ಚಿತ್ರಗಳು ತಯಾರಾದವು. ಆ ಚಿತ್ರಗಳ ಕೆಲವು ಕಲಾವಿದರನ್ನು ಬೆದರಿಸಲಾಯಿತು, ಅವಮಾನಿಸಲಾಯಿತು. ಆದರೆ ಅಂತಹ ಕಲಾವಿದರು ಅಂತರರಾಷ್ಟ್ರೀಯ ನೆಲೆಯಲ್ಲಿ ಗುರುತಿಸಿಕೊಂಡರು. ವಿಚಿತ್ರವೆಂದರೆ ಯುದ್ಧ ಮುಗಿವ ಹೊತ್ತಿಗೆ ಇಡೀ ಸಂಘರ್ಷವನ್ನು ವೀರಗಾಥೆಯಂತೆ, ದೇಶಭಕ್ತಿಯ ಸಂಕೇತವೆಂಬಂತೆ ಬಿಂಬಿಸಲಾಯಿತು. ಕಲಾತ್ಮಕ ಅಂಶಗಳಿಲ್ಲದಿದ್ದರೂ ಕೂಡ ಅಂತಹ ಚಿತ್ರಗಳಿಗೆ ಸರ್ಕಾರದ ಮನ್ನಣೆ ದೊರೆಯಿತು. ಈಗ ಜನಾಂಗೀಯವಾದಿ ಚಲನಚಿತ್ರಗಳತ್ತಲೇ ಹೆಚ್ಚು ಒಲವು ಇದ್ದಂತಿದೆ.
ತಮಿಳರ ಬದುಕು ನಿಮ್ಮನ್ನು ಕಾಡಲು ಕಾರಣ?
ತೀರಾ ಹತ್ತಿರದಿಂದ ತಮಿಳರ ಬದುಕನ್ನು ನೋಡಿದ್ದೆ. ಸಾಮಾನ್ಯ ಸಿಂಹಳ ವ್ಯಕ್ತಿಯ ನೋವುಗಳಿಗೂ ಅವರ ನೋವುಗಳಿಗೂ ಅಂಥ ವ್ಯತ್ಯಾಸ ಇರಲಿಲ್ಲ. ಎಲ್‌ಟಿಟಿಇಯ ತೀವ್ರಗಾಮಿ ಹೋರಾಟ ತಮಿಳರ ನೋವುಗಳಿಗೆ ನಿಜವಾಗಿ ಸ್ಪಂದಿಸಲಿದೆಯೇ ಎಂಬ ಅನುಮಾನ ನನ್ನೊಳಗೂ ಇತ್ತು. ಶ್ರೀಲಂಕಾಕ್ಕೆ ಸ್ವಾತಂತ್ರ್ಯ ದೊರೆತ ನಂತರ ಎಲ್ಲಾ ಸರ್ಕಾರಗಳೂ ತಮಿಳರನ್ನು ಮೂಲೆಗುಂಪು ಮಾಡಿದವು. ವೈವಿಧ್ಯತೆಗೆ ಅವಕಾಶ ನೀಡದೆ ಸಿಂಹಳೀಯರಿಗೆ ಮಾತ್ರ ಮಣೆ ಹಾಕಲಾಯಿತು. ತಮಿಳರ ದಮನಕ್ಕೆ ಇದೂ ಒಂದು ಕಾರಣ. ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಭಾಗಗಳ ಬದುಕು ದೊಡ್ಡಮಟ್ಟದಲ್ಲಿ ಅನಾವರಣಗೊಂಡಿರುವುದು ನನ್ನ ಕಾದಂಬರಿ `ಸಿಯೋತ್ ತತು ಸಿಂಧ`ದಲ್ಲಿ.
*  ನೀವು ಕಂಡುಕೊಂಡಂತೆ ಎರಡೂ ದೇಶಗಳ ನಡುವೆ ಇರುವ ಸಾರಸ್ವತ ಲೋಕದ ವ್ಯತ್ಯಾಸ?
ನಮ್ಮ ದೇಶದಲ್ಲಿ ಕೆಲವು ಪ್ರಗತಿಪರ ಸಾಹಿತ್ಯಕ ಹೋರಾಟಗಳು ನಡೆದಿವೆ. ಆದರೆ ಕನ್ನಡದಲ್ಲಿ ಅಥವಾ ಭಾರತದ ಕೆಲ ಭಾಷೆಗಳಲ್ಲಿ ಆಗಿರುವಂತೆ ನವೋದಯ, ಪ್ರಗತಿಶೀಲ, ನವ್ಯ, ದಲಿತ- ಬಂಡಾಯ ಹೀಗೆ ವಿವಿಧ ಕಾಲಘಟ್ಟಗಳ ಚಳವಳಿ ಸಾಧ್ಯವಾಗಿಲ್ಲ. ಈ ಚಳವಳಿಗಳ ಆಶಯ ನಮ್ಮ ಸಾಹಿತ್ಯದಲ್ಲಿ ಸಮಗ್ರವಾಗಿ ಅಡಕವಾಗಿವೆಯೇ ಹೊರತು ಒಡೆದು ಕಾಣುವ ಪ್ರತ್ಯೇಕತೆ ತೋರದು.

ಮೇಲಾಗಿ ಭಾರತದ ಜಾತಿ ಪದ್ದತಿ ಹಾಗೂ ದೊಡ್ಡ ಧಾರ್ಮಿಕ ಅಂತರ ನಮ್ಮಲ್ಲಿಲ್ಲ. ಬಹುತೇಕ ಹೋರಾಟಗಳು ನಮ್ಮ ದೇಶದಲ್ಲಿ ಆರ್ಥಿಕ ಅಸಮಾನತೆಯ ವಿರುದ್ಧ ನಡೆದಿವೆ. ಹೀಗಾಗಿ ಭಾರತದ ಯು.ಆರ್. ಅನಂತಮೂರ್ತಿ, ರವೀಂದ್ರನಾಥ ಟ್ಯಾಗೋರ್, ಕಮಲಾದಾಸ್, ಸಾದತ್ ಹಸನ್ ಮಾಂಟೊ, ಅರುಂಧತಿ ರಾಯ್, ಸಲ್ಮಾನ್ ರಶ್ದಿ ಮುಂತಾದವರು ಹೆಚ್ಚು ವೈವಿಧ್ಯಮಯವಾಗಿ ತೋರುತ್ತಾರೆ.

ಇನ್ನು ರಚನೆಯ ವಿಚಾರಕ್ಕೆ ಬಂದರೆ ನಮ್ಮಲ್ಲಿ ಕಾವ್ಯ ಬೆಳೆದಷ್ಟು ಇತರ ಸಾಹಿತ್ಯ ಪ್ರಕಾರಗಳು ಬೆಳೆದಿಲ್ಲ. ಕತೆ, ಕಾದಂಬರಿಗಳಂತಹ ಗದ್ಯ ಪ್ರಕಾರದಲ್ಲಿ ಸಾಕಷ್ಟು ಕೃಷಿ ನಡೆಯಬೇಕಿದೆ. ವಿವಿಧ ಭಾಷೆಗಳ ಅನುವಾದಿತ ಸಾಹಿತ್ಯ ಶ್ರೀಲಂಕಾದಲ್ಲಿ ವಿಫುಲವಾಗಿ ದೊರೆಯುತ್ತದೆ. ಆದರೆ ಸಿಂಹಳ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವಂತಹ ಅನುವಾದಕರ ಕೊರತೆ ಇದೆ. ಬಹುತೇಕ ದೇಶಗಳಲ್ಲಿ ನಡೆಯುವಂತೆ ಸಾಹಿತ್ಯದ ಬೆಳವಣಿಗೆ ಕುರಿತು ನಮ್ಮ ಸರ್ಕಾರದ ಗಮನ ಅಷ್ಟಕ್ಕಷ್ಟೇ.

ಕೃಪೆ : ಪ್ರಜಾವಾಣಿ  

Thursday, November 08, 2012

ಪ್ರಳಯವಾಗಲೇ ಬೇಕು !

ನಾಗೇಶ್ ಶಿವಶರಣ 
ಭ್ರಷ್ಟರ, ಧರ್ಮಾಂರ, ಕೊಲೆಪಾತಕಿಗಳ
ಸರ್ವನಾಶಕೇ
ಪ್ರಳಯವಾಗಲೇ ಬೇಕು  !
ಬೆಟ್ಟ ಗುಡ್ಡಗಳೇ ಬಾಯ್ತರೆಯಿರಿ
ಎಲ್ಲರ ಒಳನುಂಗಲು
ಜ್ವಾಲೆಯನೂದು ಭೂವಿಯೇ
ಎಲ್ಲರೆದೆಯ ಗಡ ಗಡ ನಡುಗಿಸಲು !

ಜಾತಿ ಧರ್ಮಗಳೆಲ್ಲ ಸುಟ್ಟು ಹೋಗಲಿ
ದೇವರುದಿಂಡಿರುಗಳ ಶವದ ಪೆಟ್ಟಿಗೆ ಕಟ್ಟಲಿ
ದಿಗ್ಗ ದಿಗಂತವ ನಡುಗಲಿ
ಈ ಜಗಕೆ ಪ್ರಳಯವಾಗಲಿ !

ಓ ಮಿಂಚು, ಗುಡುಗು, ಸಿಡಿಲುಗಳೇ ಸಿಡಿದೆದ್ದು ಬನ್ನಿ
ಭ್ರಷ್ಟರ ಸುಟ್ಟು, ಶಿಷ್ಟರ ಉಳಿಸಲು
ಚಂಡಮಾರುತಗಳೇ ನುಗ್ಗಿ ಬಿಡಿ
ನವಯುಗವ ಬೆಳೆಸಲು !

ಎಲ್ಲವೂ ಸರ್ವನಾಶವಾಗಲಿ
ಸತ್ಪುರ್ಶರು ಜನನಗೆಯಲಿ
ಅದಕೇ ಪ್ರಳಯವಾಗಲಿ
ಮಾನವಧರ್ಮ ಚಿಗುರಲಿ !

ಡಾ. ಅಂಬೇಡ್ಕರ್ ಬರೆಯುವ ಮೊದಲೇ ಭಾರತಕ್ಕೆ ಒಂದು ಸಂವಿಧಾನ ರಚನೆಯಾಗಿತ್ತು. ಆದರೆ ...?



ಸುರೇಂದ್ರ ಉಗಾರೆ, ವಕೀಲರು, ರಾಯಬಾಗ (ಬೆಳಗಾವಿ)
               
ಭಾರತ 1947ರಲ್ಲಿ ಸ್ವತಂತ್ರವಾಯಿತಾದರೂ  1950ರಲ್ಲಿ ಸಂವಿಧಾನ ಜಾರಿಯಲ್ಲಿ ಬಂದಿತ್ತು. ಈ ಸಂವಿಧಾನ ಡಾ// ಅಂಬೇಡ್ಕರ ಮುಖಂಡತ್ವದಲ್ಲಿ ರಚನೆಯಾಗಿರುವ ವಿಷಯ ಭಾರತೀಯರಿಗೆಲ್ಲ ಗೊತ್ತಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಕೈ ಹಾಕಿ ದಲಿತರ ವಿರೋದಿ ಕಟ್ಟಿಕೊಂಡವರು ಅನೇಕರು ಇದ್ದಾರೆ. ಯಾವ ವಿಷಯಕ್ಕಾಗಿ ತಿದ್ದುಪಡಿ ? ಅಥವಾ ದಲಿತನೊಬ್ಬನಿಂದ ರಚಿತವಾಗಿದೆ ಎಂಬ ಕಾರಣಕ್ಕಾಗಿಯೇ ? ಇಂತಹ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಸಂವಿಧಾನ ತಿದ್ದುಪಡಿಮಾಡಲು ಹೊರಟಿರುವ ಗಣ್ಯಮಾನ್ಯರೆ, ಭಾರತದ  ಇತಿಹಾಸದ ಪುಟಗಳನ್ನು ತೆಗೆದು ಓದಿರಿ. ಡಾ// ಅಂಬೇಡ್ಕರಗಿಂತ  20 ವರ್ಷಗಳ ಮೊದಲೇ ಭಾರತಕ್ಕೊಂದು ಸಂವಿಧಾನ ರಚನೆಯಾಗಿತ್ತು. ಆದರೆ, ಸಿಖ್ ರ ಹಾಗೂ ಮುಸ್ಲಿಂರ ವಿರೋದಿಂದ ದು ಹುಟ್ಟಿದ ದಿನವೆ ಮಣ್ಣು ಮಾಡುವ ಪ್ರಸಂಗ ಬಂದಿತ್ತು. ಸಂವಿಧಾನ ರಚನೆ ಮಾಡಲು ಹೋಗಿ ಕೋಮಿನ ಪಟ್ಟ ಕಟ್ಟಿಕೊಂಡು ಸಂವಿಧಾನ ಎಂಬ ಪದ ಬಿಟ್ಟು ವರದಿ ಎಂಬ ಸಂವಿಧಾನವನ್ನು ತಯಾರಿಸಿ ಹೆಸರು ಕೆಡಿಸಿಕೊಂಡ ಪುಣ್ಯಾತ್ಮನ ಇತಿಹಾಸ ನಿಮಗೆ ಗೊತ್ತಿದೆಯೇ ?  ಆ ಪುಣ್ಯಾತ್ಮನೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂದೆ ಮೋತಿಲಾಲ ನೆಹರು !
ಇಂಗ್ಲೆಂಡ ಸರಕಾರ ಭಾರತೀಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ 1919ರಲ್ಲಿ ಮಂಟೆಗೊ ಜೇಮ್ಸ ಪೊರ್ಡ ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಭಾರತೀಯರಿಗೆ ತೃಪ್ತಿ ನೀಡಲ್ಲಿಲ್ಲ, ನಿರಾಸೆಗೊಂಡ ಭಾರತೀಯರು ಸ್ವತಂತ್ರ ಚಳುವಳಿಯನ್ನು ತೀವ್ರಗೊಳಿಸಿದರು. ಆದರು ಬ್ರಿಟಿಷರು 1919ರ ಕಾಯ್ದೆಯ ವಿಫಲತೆಯನ್ನು ತಿಳಿಯಲು ಮತ್ತು ಭಾರತಿಯರ ಆಸೆಗೆ ಸ್ಪಂದಿಸಲು ಇಂಗ್ಲೆಂಡಿನಲ್ಲಿ ಸೈಮನ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿತು. ಈ ಆಯೋಗದಲ್ಲಿ ಏಳೂ ಜನ ಬಿಳಿಯರು ಇದ್ದುದ್ದರಿಂದ ಭಾರತೀಯ ಸ್ವತಂತ್ರ ಹೋರಾಟಗಾರರು ಈ ಆಯೋಗವನ್ನು ವಿರೋಧಿಸಿದರು ಮತ್ತು ಆಯೋಗ ಭಾರತಕ್ಕೆ ಬಂದರೆ ಭಾರತದ ತುಂಬ ಪ್ರತಿಭಟನೆ ಮಾಡುವುದಾಗಿ ಬ್ರಿಟಿಷರನ್ನು ಎಚ್ಚರಿಸಿದ್ದರು. ಅವಾಗ ಭಾರತದ ಇಂಗ್ಲೆಂಡಿನ ಕಾರ್ಯದರ್ಶಿಯಾಗಿದ್ದ ಲಾರ್ಡ ಬರ್ಕೆನ ಹೆಡ್ 1925 ಜುಲೈ 7ರಂದು ಭಾರತೀಯರು ತಮ್ಮ ಬೃಹತ್ ದೇಶಕ್ಕೆ ತಾವೇ ಸಂವಿಧಾನ ರಚಿಸುವುದಾದರೆ ರಚಿಸಲಿ ಎಂದು ಭಾರತೀಯರಿಗೆ ಸವಾಲು ಹಾಕಿದ್ದನು !
ಭಾರತದ ಕಾರ್ಯದರ್ಶಿಯ ಸವಾಲನ್ನು ಎದುರಿಸಲು ಮತ್ತು ಭಾರತೀಯರಿಗೆ ಸಂವಿಧಾನ ರಚಿಸುವ ಸಾಮರ್ಥ್ಯವಿದೆ ಎಂದು ತೋರಿಸುವ ಸಲುವಾಗಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ 1928ರಲ್ಲಿ ಬಾಂಬೆಯಲ್ಲಿ ಮೋತಿಲಾಲ್ ನೆಹರೂ ಮುಖಂಡತ್ವದಲ್ಲಿ ಸಮಿತಿಯೊಂದನ್ನು ರಚಿಸಿತು, ಈ ಸಮಿತಿಯಲ್ಲಿ 10 ಜನ ಸದಸ್ಯರಿದ್ದರು ಇವರಲ್ಲಿ ಮುಸ್ಲಿಂ ಮತ್ತು ಸಿಖರು ಇದ್ದರು ಹಾಗೂ ಪಂಡಿತ ಜವಾಹರಲಾಲ ನೆಹರೂರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಭಾರತೀಯರಿಗೆ ತಕ್ಕಂತಹ ಸಂವಿಧಾನ ರಚನೆ ಕಾರ್ಯ ಭರದಿಂದ ಸಾಗಿತ್ತು. ನಂತರ ಡಿಸೆಂಬರ[1928] ತಿಂಗಳಲ್ಲಿ ಕಲ್ಕತ್ತಾದ ಅಧಿವೇಶನದಲ್ಲಿ ಮೋತಿಲಾಲ್ ನೆಹರೂರವರು ಕೋಮಿಗೆ ಸಂಬಂಧಿಸಿದಂತೆ ಭಾಷಣ ಮಾಡಿದರು. ಅದೇ ಅಧಿವೇಶನದಲ್ಲಿ ಸಿಖರು, ಮುಸ್ಲಿಂರು ಮೋತಿಲಾಲರ ಭಾಷಣ ವಿರೋಧಿಸಿ ಸಂವಿಧಾನ ಜಾರಿಯಾಗದಂತೆ ಪ್ರತಿಭಟಿಸಲು ತಯಾರಿ ನಡೆಸಿದರು. ಕೊನೆಗೆ, ಇಂತಹ ವಿರೋದ ನಡುವೆಯೇ ಲಾಹೋರ ಅಧೀವೇಶನದಲ್ಲಿ ಆಯೋಗ ತಯಾರಿಸಿದ ಸಂವಿಧಾನವನ್ನು ಅಂಗೀಕರಿಸಿದರು. ಈ ಅಂಗೀಕಾರದ ವಿರುದ್ದ ಸಿಖ್ ಜನಾಂಗದವರು, ಕಾಂಗ್ರೆಸಿನ ಮುಸ್ಲಿಂರು ಹಾಗೂ ಮಹಮದ್ ಅಲಿ ಜಿನ್ನಾ ಮೊದಲಾದವರ ವಿರೋಧದಿಂದಾಗಿ 14 ಅಂಶಗಳ ಸಂವಿಧಾನದಲ್ಲಿ ಸೇರಪಡೆ ಪಟ್ಟಿಯಿಂದಾಗಿ  ಮೋತಿಲಾಲ ನೆಹರೂರವರು ತಯಾರಿಸಿದ ಸಂವಿಧಾನ ಅಂಗೀಕರಿಸಿದ ದಿನವೇ ಮಣ್ಣು ಕೊಡಬೇಕಾಯಿತು !
ಹೀಗೆ ಭಾರತದ ಇತಿಹಾಸದಲ್ಲಿ ಭಾರತೀಯರ ಆಸೆಗಳಿಗೆ ಅನುಗುಣವಾಗಿ ಸಂವಿಧಾನ ಬರೆಯಲು ಹೋಗಿ, ಕೋಮುಗಳನ್ನು ಸೃಷ್ಟಿಸುವವರೇ ಆಗಿದ್ದಾರೆ. ಇಂತಹವರು ಸಂವಿಧಾನ ಬರೆಯಲು ಅರ್ಹರೆ ಒಂದೇ ಒಂದು ಸಲ ಯೋಚಿಸಿ.  ಇತಿಹಾಸದಲ್ಲಿ ಮೋತಿಲಾಲ ನೆಹರು ಬರೆದಿರುವ ಸಂವಿಧಾನವನ್ನು  'ನೆಹರೂ ವರದಿ' ಎಂದು ಕರೆಯುತ್ತಾರೆ !  ಅಷ್ಟಕ್ಕೂ ಡಾ// ಅಂಬೇಡ್ಕರ ಕರಡು ರಚನಾ ಸಮಿತಿಯ ಅಧ್ಯಕ್ಷರು, ಇವರ ಜೊತೆ ಎಲ್ಲಾ ಜಾತಿಯ ಸದಸ್ಯರಿದ್ದರು. ಸಂವಿಧಾನ ಜಾರಿಯಾಗುವ ಸಮಯದಲ್ಲಿ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ, ಕರಡು ರಚನೆ ಮಾಡುವುದು ಡಾ// ಅಂಬೇಡ್ಕರವರಿಂದ ಮಾತ್ರ ಸಾಧ್ಯ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಪಂಡಿತ ಜವಾಹರಲಾಲ ನೆಹರೂ ಕೂಡಾ ಸಂವಿಧಾನ ಬರೆಯುವ ಸಾಮರ್ಥ್ಯ ಇತ್ತು ಎಂದಾದರೆ ಸಂವಿಧಾನ ಬರೆಯಲಿಲ್ಲ ಏಕೆ ? ಅಪ್ಪ ಮೋತಿಲಾಲ ನೆಹರೂ ಸಿಖ್ ವಿರೋಟ್ಟಿಕೊಂಡು ಸಂವಿಧಾನ ಶಿಲ್ಪಿ ಎಂಬ ಪಟ್ಟ ಕಳೆದುಕೊಂಡರೆ, ಮಗ ಜವಾಹರ ಲಾಲ ನೆಹರೂ ಇಂಗ್ಲೆಂಡಿನ ಔತಣ ಕೂಟದಲ್ಲಿ ತನ್ನಷ್ಟಕ್ಕೆ ತಾನೇ ಕುಳಿತಿದ್ದ ಜಿನ್ನಾನನ್ನು ಕೆಣಕಿ ಪಾಕೀಸ್ತಾನದ ರಚನೆಗೆ ಕಾರಣನಾದ ಇತಿಹಾಸವಿದೆ ! ಇಂತಹ ನಾಯಕರು ಸಂವಿಧಾನ ಬರೆದರೆ ಹೇಗಿರುತ್ತೆ ಎನ್ನುವ ಕಲ್ಪನೆ ಮಾಡಲು ಸಾಧ್ಯವೆ ? ಸಾಮರ್ಥ್ಯದ ಜೊತೆ ಹೊಂದಾಣಿಕೆಯು ಇರಬೇಕು. ಈ ಗುಣ ಜವಾಹರಲಾಲ ನೆಹರೂಗೆ ಇರಲಿಲ್ಲ. ನೆಹರೂ ಸಂವಿಧಾನ ಬರೆಯದಿದ್ದರೇನು ಲಾಹೋರ ಅಧಿವೇಶದಲ್ಲಿ ತಂದೆ ಮೋತಿಲಾಲ ಬರೆದ ಸಂವಿಧಾನದ ಅಂಗೀಕಾರದ ದಿನದ ನೆನಪಿಗಾಗಿ ಜನೇವರಿ 26ರಂದು ಈಗಿನ ಸಂವಿಧಾನವನ್ನು ಅಂಗೀಕರಿಸಲಾಯಿತಲ್ಲವೆ ?

Tuesday, November 06, 2012

ವಚನ-23


ಅಯ್ಯಾ ಎನ್ನ ಕುರುಡನ ಮಾಡಿದಿರಿ ;
ಎನ್ನ ಕುಂಟನ ಮಾಡಿದಿರಿ !
ಇನ್ನೂ ಮುಂದುವರೆದು
ನನ್ನ ಮೂಕನಾಗಿಸಿ, ಕಿವುಡನ ಮಾಡಿದಿರಿ !
ನಾನು, ನನಗೇ ಗೊತ್ತಿಲ್ಲದಂತೆ
ಗುದಮುರಗಿ ಹಾಕುವದ ಕಲಿಸಿದಿರಿ
ನನಗೇನು ಅರಿಯದೇ ? ನಾನು ಕಾರಣಿಕ ಸಿದ್ಧರಾಮ
ಅರ್ಥಕ್ಕೆ ನಿಲುಕುವುದಿಲ್ಲ ; ಅರಿವಿಗೆ ತೆರೆದುಕೊಳ್ಳುತ್ತೇನೆ !

Sunday, November 04, 2012

ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಎಂಬ ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ !



- ರಘೋತ್ತಮ ಹೊ.ಬ, ಚಾಮರಾಜನಗರ

ಇತ್ತೀಚೆಗೆ ಅಥವಾ 1950 ಜನವರಿ 26ರಿಂದಲೂ ಈ ದೇಶದಲ್ಲಿ ಒಂದು ಷಡ್ಯಂತ್ರ ನಡೆಯುತ್ತಾ ಬಂದಿದೆ. ಅದು ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಎಂಬ ಪಟ್ಟದಿಂದ ಕೆಳಕ್ಕಿಳಿಸುವುದು! ಅರುಣ್ ಶೌರಿ ಇರಬಹುದು ಅಥವಾ ಮತ್ಯಾರೋ ಆರ್ಯ ಶೂರ ಇರಬಹುದು, ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ. ಅಂಬೇಡ್ಕರ ರಿಂದ ಸಂವಿಧಾನ ಶಿಲ್ಪಿ ಎಂಬ ಟೈಟಲ್ಲನ್ನು ಕಿತ್ತುಕೊಳ್ಳುವುದು ಅಥವಾ ಅವರು ಸಂವಿಧಾನ ಬರೆದೇ ಇಲ್ಲ ಎಂದು ಸಾಧಿಸಿ ತೋರಿಸುವುದು!

ಇದು ಎಷ್ಟು ಸಾಧ್ಯ? ಅಥವಾ ಎಷ್ಟು ಅಸಾಧ್ಯ? ಅದನ್ನು ಕಾಲವೇ ನಿರ್ಣಯಿಸುತ್ತಿದೆ. ಯಾಕೆಂದರೆ ಹಿಂದೆಲ್ಲಾ ಇದು ಅಂದರೆ ಅವರು ಇವರು ಎನ್ನುವುದು ಅಥವಾ ಇವರು ಅವರೇ ಅಲ್ಲ ಎಂದು ಸಾಧಿಸಿ ತೋರಿಸುವುದು ಅಥವಾ ಸಾಧಿಸಿಯೇ ಬಿಡುವುದು ಆಗಾಗ ನಡೆಯುತ್ತಾ ಬಂದಿದೆ. ಉದಾ: ಬುದ್ಧನನ್ನು ವಿಷ್ಣು ಎನ್ನುವುದು, ಶಿವಾಜಿಯನ್ನು ಮುಸ್ಲಿಂ ದ್ವೇಷಿ ಎನ್ನುವುದು ಇತ್ಯಾದಿ.

ಹಾಗಿದ್ದರೆ ಹೀಗೆಯೇ ಅಂದರೆ ಬುದ್ಧನನ್ನು ವಿಷ್ಣು ಎಂದ ಹಾಗೆ ಸಂವಿಧಾನ ಶಿಲ್ಪಿ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸಲು ಸಾಧ್ಯವೇ? ಜನಸಾಮಾನ್ಯರೆ ಇದನ್ನು ತೀರ್ಮಾನಿಸಬೇಕು.ಯಾಕೆಂದರೆ ತಮಗೆ ಬೇಕೆಂದವರನ್ನು ಇಂದ್ರ ಚಂದ್ರ ಎನ್ನುವುದು, ತಮಗೆ ಬೇಡ ಎಂದವರನ್ನು ಹೀಗಳೆವುದು, ಇದು ಈ ದೇಶದ ಬ್ರಾಹ್ಮಣವಾದಿ ಚರಿತ್ರಕಾರರು ಮಾಡಿಕೊಂಡು ಬಂದಿರುವ ಪದ್ಧತಿ. ಅಂತಹ ಪದ್ಧತಿಯ ಮುಂದುವರಿದ ಭಾಗವಾಗಿಯೇ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿಅಲ್ಲ ಎಂದು ಸಾಧಿಸುವ ಈ ವ್ಯರ್ಥಾಲಾಪ. ಅಂದಹಾಗೆ ಅದುನಡೆದಿರುವುದು ಸುಭಾಷ್ ಕಶ್ಯಪ್ ಎಂಬ ಸಂವಿಧಾನ ತಜ್ಞ ಎನಿಸಿಕೊಂಡವರು ಬರೆದಿರುವ “Our Constitution”  ಎಂಬ ಕೃತಿಯಲ್ಲಿ.ಹಾಗೆ ಸಾಧಿಸ ಹೊರಟವರು ಮೊದಲು ಹೇಳುವುದು ಸಂವಿಧಾನದ ಪ್ರಥಮ ಕರಡನ್ನು ಸಿದ್ಧಪಡಿಸಿದವರು ಬಿ.ಎನ್.ರಾವ್ ಎಂಬವವರು ಎಂದು!

ಅಂದರೆ ಆಗಸ್ಟ್ 29, 1947ರಂದು ಕರಡು ಸಮಿತಿ ರಚಿಸಲ್ಪಟ್ಟರೆ ಅದು ರಚಿಸಲ್ಪಟ್ಟ ಒಂದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ 1947ರಲ್ಲಿ ಅದರ ಸದಸ್ಯರಲ್ಲೋರ್ವರಾದ ಬಿ.ಎನ್.ರಾವ್‌ರವರು ಪ್ರಥಮ ಕರಡು ರಚಿಸಿದರಂತೆ, ಅವರು ರಚಿಸಿದ ಕರಡನ್ನು ಅಂಬೇಡ್ಕರ್ ನೇತೃತ್ವದ ಸಮಿತಿ ಬರೀ ಪರಿಶೀಲಿಸಿತಂತೆ! ಇದು ಸುಭಾಷ್ ಕಶ್ಯಪ್‌ರಂತಹ ಬ್ರಾಹ್ಮಣ ಚರಿತ್ರಾಕಾರರ ಅಂಬೋಣ. ಆದರೆ ಅದೇ ಸುಭಾಷ್ ಕಶ್ಯಪ್ ತಮ್ಮ“Our Constitution” ಕೃತಿಯ ಅದೇ ಪುಟಗಳಲ್ಲಿ ಅಂಬೇಡ್ಕರರ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾರೆ.

ಆ ಹೇಳಿಕೆಯಲ್ಲಿ ಸ್ವತಃ ಅಂಬೇಡ್ಕರರೇ 1947 ಆಗಸ್ಟ್‌ರಿಂದ 1949 ಅಕ್ಟೋಬರ್‌ವರೆಗೆ ಕರಡು ಸಮಿತಿ ಅನೇಕ ಸಭೆಗಳನ್ನು ನಡೆಸಿ ಸಂವಿಧಾನದ ಕರಡಿನ ಅಂತಿಮ ಪ್ರತಿಯನ್ನು 1949 ನವೆಂಬರ್ ತಿಂಗಳಲ್ಲಿ ಸಂವಿಧಾನ ಸಭೆಗೆ ಸಲ್ಲಿಸಿತು ಎನ್ನುತ್ತಾರೆ. ಹಾಗಿದ್ದರೆ 1949 ನವೆಂಬರ್ ತಿಂಗಳಲ್ಲಿ, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಸಂವಿಧಾನ ಸಿದ್ಧಗೊಂಡಿತೆಂದರೆ ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರಿಗೆ ತಾನೆ? ಅಂದಹಾಗೆ 1947ರ ಆರಂಭದಲ್ಲಿ ಕೇಳಿಬರುವ ಬಿ.ಎನ್.ರಾವ್ ಎಂಬವವರ ಹೆಸರು ಸಂವಿಧಾನ ರಚಿಸಲು ತೆಗೆದುಕೊಂಡ ಮುಂದಿನ ಆ ಎರಡು ವರ್ಷಗಳ ಸಮಯದಲ್ಲಿ ಅಂದರೆ 1948, 1949ರಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ! (ಇತ್ತೀಚೆಗೆ ಹಿಂದುತ್ವವಾದಿಗಳಿಂದ ಕೇಳಿ ಬರುತ್ತಿರುವುದನ್ನೊರತು ಪಡಿಸಿದರೆ!).

ಇದಕ್ಕೆ ಪೂರಕವಾಗಿ ಸಂವಿಧಾನ ಸಭೆಯಲ್ಲಿ ಮಾತನಾಡಿರುವ ಸಮಿತಿಯ ಸದಸ್ಯ ಟಿ.ಟಿ.ಕೃಷ್ಣಮಾಚಾರಿಯವರು ಹೇಳಿರುವುದನ್ನು ನೋಡಿ ಸಂವಿಧಾನದ ಕರಡು ಸಮಿತಿಯಲ್ಲಿದ್ದ ಒಬ್ಬರು ತೀರಿಕೊಂಡರು, ಅವರ ಸ್ಥಾನಕ್ಕೆ ಮರುನೇಮಕ ಆಗಲಿಲ್ಲ. ಒಂದಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರಿಗೆ ಕರಡು ರಚನೆ ಕಾರ್ಯದಲ್ಲಿ ಭಾಗವಹಿಸಲಾಗಲಿಲ್ಲ. ಮಗದೊಬ್ಬರು ಸದಸ್ಯರು ದಿಲ್ಲಿಯಿಂದ ದೂರದಲ್ಲಿದ್ದುದರಿಂದ ಅವರು ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಸಂವಿಧಾನ ರಚನೆಯ ಪೂರ್ಣ ಜವಾಬ್ದಾರಿ ಅಂಬೇಡ್ಕರರ ಮೇಲೆ ಬಿದ್ದಿತು. ಅಂದಹಾಗೆ ಕೃಷ್ಣಾಮಾಚಾರಿಯವರ ಹೇಳಿಕೆಯ ಪ್ರಕಾರ ಸುಭಾಷ್ ಕಶ್ಯಪ್‌ರವರು ಹೇಳಿರುವ ಕರಡು ಸಮಿತಿ ಸದಸ್ಯರಾದ ಆ ಬಿ.ಎನ್.ರಾವ್ ಎಲ್ಲಿ ಹೋದರು? ವಿದೇಶಕ್ಕೋ ಅಥವಾ ನೇರ ಸ್ವರ್ಗಕ್ಕೋ?

ಅಂಬೇಡ್ಕರರು ಸಂವಿಧಾನ ಶಿಲ್ಪಿ ಅಲ್ಲ ಎಂದು ಹೇಳುವವರು ಇದನ್ನು ಸ್ಪಷ್ಟಪಡಿಸಬೇಕು.ಸಂವಿಧಾನ ಅರ್ಪಿತವಾದ ಆ ಸಂಧರ್ಭದಲ್ಲಿ ಅಂದರೆ ನವೆಂಬರ್ 26,1949ರಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರ ಪ್ರಸಾದ್‌ರವರು ಡಾ.ಅಂಬೇಡ್ಕರ್‌ರವರಿಗೆ ಸಂವಿಧಾನ ರಚಿಸಲು ಪೂರ್ಣ ಸ್ವಾತಂತ್ರ ನೀಡಿದ್ದಿದ್ದರೆ, ಅವರು ಖಂಡಿತವಾಗಿಯೂ ತಮ್ಮದೇ ಆದ ಮತ್ತು ಭಿನ್ನವಾದ ಸಂವಿಧಾನವನ್ನು ಈ ದೇಶಕ್ಕೆ ನೀಡುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಂದಹಾಗೆ ರಾಜೇಂದ್ರ ಪ್ರಸಾದರ ಈ ಹೇಳಿಕೆ ಅರ್ಥೈಸುವುದೇನನ್ನು? ಸಂವಿಧಾನ ರಚಿಸುವ ಪೂರ್ಣ ಹೊಣೆ ಅಂಬೇಡ್ಕರರ ಮೇಲೆ ಬಿದ್ದಿತ್ತು ಆದರೆ ಅವರಿಗೆ ಕೆಲವು ತಡೆಗಳಿದ್ದವು ಎಂದು ತಾನೆ? ಅದೇನೆ ಇರಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದು ಘಂಟಾಘೋಷವಾಗಿ ಹೇಳಲು ಡಾ.ಬಾಬು ರಾಜೇಂದ್ರಪ್ರಸಾದ್ ಮತ್ತು ಟಿ.ಟಿ.ಕೃಷ್ಣಾಮಾಚಾರಿಯವರ ಇದಿಷ್ಟು ಹೇಳಿಕೆ ಮಾತ್ರ ಸಾಕು.

ಯಾಕೆಂದರೆ ಇವರಿಬ್ಬರು ಸಂವಿಧಾನದ ರಚನೆಯ ಜೊತೆ ಜೊತೆಯಲ್ಲೆ ಬೆಳೆದವರು, ಅರುಣ್ ಶೌರಿ ಮತ್ತು ಸುಭಾಷ್ ಕಶ್ಯಪ್‌ರ ಹಾಗೆ ಅದನ್ನು ಅದರ ಇತಿಹಾಸವನ್ನು ದೂರದಿಂದ ಹಿಂದುತ್ವದ ದೃಷ್ಟಿಯಿಂದ ಕೆದಕಿದವರಲ್ಲ! ಮುಂದುವರಿದು ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯದ ಬಗ್ಗೆ ಆಕ್ಷೇಪಿಸುವವರು ಹೇಳುವುದು ಸಂವಿಧಾನ ಎಂಬುದು ಕತೆಯಲ್ಲ, ಕಾದಂಬರಿಯಲ್ಲ ಅದನ್ನು ಅಂಬೇಡ್ಕರರೊಬ್ಬರೇ ಬರೆದಿದ್ದಾರೆ ಎನ್ನುವುದು ಎಷ್ಟು ಸರಿ? ಎಂದು. ನಿಜ, ಸಂವಿಧಾನ ಕತೆಯಲ್ಲ, ಕಾದಂಬರಿಯೂ ಅಲ್ಲ. ಹಾಗೆಯೇ ಸ್ವಾತಂತ್ರ ಎಂಬುದೂ ಕೂಡ ಕಡ್ಲೆಪುರಿಯಲ್ಲ! ಏಕೆಂದರೆ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ.

ಇದನ್ನು ಯಾರೂ ಗಾಂಧೀಜಿ ಸ್ವಾತಂತ್ರವನ್ನು ಯಾವಾಗ, ಯಾವ ಟೈಮಲ್ಲಿ, ಯಾರ ಕೈಗೆ ತಂದುಕೊಟ್ಟರು ಎಂದು ಎಲ್ಲಿಯೂ ಪ್ರಶ್ನಿಸುವುದಿಲ್ಲ! ಅಂಬೇಡ್ಕರ್‌ರವರು ರಚಿಸಿದ ಸಂವಿಧಾನಕ್ಕೆ ಸಾಕ್ಷಿಯಾಗಿ ಸಂವಿಧಾನದ ಆ ಮೂಲ ಪ್ರತಿ ಇದೆ. ಅದರ ರಚನೆಯ ಹೊಣೆ ಹೊತ್ತ ಕರಡು ಸಮಿತಿಯ ಅಧ್ಯಕ್ಷರು ಅವರು ಎಂಬುದಕ್ಕೆ ದಾಖಲೆ ಇದೆ. ಆದರೆ ಗಾಂಧೀಜಿ ಸ್ವಾತಂತ್ರ ತಂದುಕೊಟ್ಟರೆಂಬುದಕ್ಕೆ ಏನು ದಾಖಲೆ ಇದೆ? ಹಾಗೆ ಹೇಳುವುದಾದರೆ ದೇಶಕ್ಕೆ ಸ್ವಾತಂತ್ರ ಬಂದ ದಿನ ಗಾಂಧೀಜಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಇರಲೇ ಇಲ್ಲ. ದೂರದ ಕಲ್ಕತ್ತಾದಲ್ಲಿ ಇದ್ದರು! ಹಾಗಿದ್ದರೂ ಈ ದೇಶ ಅವರನ್ನು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂದು ಒಪ್ಪಿಕೊಂಡಿಲ್ಲವೆ?

ಗಾಂಧೀಜಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು ಎಂಬುದನ್ನು ಒಪ್ಪಿಕೊಳ್ಳಬಹುದಾದರೆ ಅಂಬೇಡ್ಕರರನ್ನು ಸಂವಿಧಾನಶಿಲ್ಪಿ ಎಂದು ಒಪ್ಪಿಕೊಳ್ಳಲು ಏನಡ್ಡಿ? ಯಾಕೆ, ಅಂಬೇಡ್ಕರರು ಅಸ್ಪಶ್ಯರು ಎಂಬ ಕಾರಣಕ್ಕೆ ಅವರಿಗೆ ಅಂತಹ ಗೌರವವನ್ನು ನೀಡಲು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಾಗುತ್ತಿಲ್ಲವೆ? ಸತ್ಯ ಹೇಳಿದರೆ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನೇರವಾಗಿ ಹೇಳಲಿ, ಅಂಬೇಡ್ಕರ್ ಅಸ್ಪಶ್ಯರು ; ಆದ್ದರಿಂದ ಅವರು ಸಂವಿಧಾನ ಶಿಲ್ಪಿಯಲ್ಲ ಎಂದು !
ಕೃಪೆ : ವಾರ್ತಾಭಾರತಿ
  
 

Friday, November 02, 2012

ಮಾತ್ಗವಿತೆ-99

ಹಲವು ಕೆಲವು ಹುಚ್ಚಾಟಗಳನ್ನೇ
ಹೆಚ್ಚಿನವು ಎಂದು ಪ್ರೀತಿ-ಪ್ರೇಮ
ಪರಿಚಯವಿಲ್ಲದವರು ಆ ಹೆಸರಲ್ಲಿ
ಪರಿಚಿತರಾದೋರು ಪಲ್ಲಂಗ ಪುರಾಣದ
ಕನಸು ಕಂಡವರು ಎಂದರೆ
ನನ್ನದು ಖಂಡಿತ ತಪ್ಪು !

Wednesday, October 31, 2012

ಮತ್ತೇ ನಾವು ಆಂಡಯ್ಯ ಆಗುವುದು ಬೇಡ !



ಡಾ. ಸಿದ್ರಾಮ ಕಾರಣಿಕ 
 
ಕನ್ನಡ ಶಾಸ್ತ್ರಕ್ಕೆ ಯಾರು ಎಂದರೆ ನಾವು ಬಹಳ ಹಿಂದೆ ಶಂಕರಭಟ್ಟರು ಎನ್ನುತ್ತಿದ್ದೇವು ! ಆದರೆ ಇಂದು ಶಂಕರ ಭಟ್ ಅವರು ಬರೆಯುತ್ತಿರುವುದನ್ನು ಕಂಡಾಗ ಯಾಕೋ ನಮಗೇ ಮುಜುಗರು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳೇ ಹುಟ್ಟುವುದಿಲ್ಲ ! ಹಾಗೆ ಪ್ರಶ್ನೆಗಳು ಹುಟ್ಟದಿದ್ದರೆ ನಾವು ಮನುಷ್ಯರು ಅನ್ನಿಸಿಕೊಳ್ಳುವುದಕ್ಕೆ, ನಮಗೂ ಒಂದು ವ್ಯಕ್ತಿತ್ವ ಇದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ಉಜಿರೆಯಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಸೇರಿದ ನಮ್ಮಲ್ಲಿ ಒಂದು ಪ್ರಶ್ನೆ ಹೀಗಿತ್ತು. ಶಂಕರ ಭಟ್ಟರು ಬರೆಯುತ್ತಾರೆ. ಅವರಿಗೆ ಕನ್ನಡದ ವ್ಯಾಕರಣ ಮತ್ತು ಶಾಸ್ತ್ರಗಳ ಪರಿಚಯವಿದೆ. ಆದರೂ ಅಸಂಬದ್ಧವಾಗಿ ಬರೆಯತ್ತಾರೆ ಮತ್ತು ಅದಕ್ಕೆ ಉತ್ತರವನ್ನು ಕೇಳಿದರೆ ಅವರು ಏನನ್ನೂ ಹೇಳುವುದಿಲ್ಲ ! ಅಂದರೆ ಅವರು ಬರೆದ ಪುಸ್ತಕದ ಬಗ್ಗೆಯೇ ವಿಮರ್ಶೆ ನಡೆದಾಗಲೂ, ಪ್ರೀತಿಯಿಂದ ಆ ‘ಕಾರ್ಯ’ಕ್ಕೆ ಅವರನ್ನು ಆಹ್ವಾನಿಸಿದರೂ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ !
ರವಿವಾರದ ವಿಜಯ ಕರ್ನಾಟಕದಲ್ಲಿ (9-9-2012) ಶಂಕರಭಟ್ಟ ಅವರು ಒಂದು ಲೇಖನ ಬರೆದಿದ್ದಾರೆ. ಅದರ ಶೀರ್ಷಿಕೆ ‘ಓದುವ ಹಾಗೆಯೇ ಬರೆಯುವುದು’ ಎಂದಿದೆ. ಅಂದರೆ ಸಂಸ್ಕøತದಿಂದ ಎರವಲು ಪಡೆದ ಪದಗಳನ್ನು ನಾವು ಯಾವ ರೀತಿ ಉಚ್ಚರಿಸುತ್ತೇವೆಯೋ ಅದೇ ರೀತಿಯಲ್ಲಿ ಬರೆಯಬೇಕೆಂದು ಸೂಚಿಸುತ್ತಾರೆ ! ಇದು ಆಂಡಯ್ಯನ ವಾದ ಎಂದರೂ ನಡೆಯುತ್ತದೆ ! ಶಂಕರಭಟ್ಟರು ಹಿರಿಯರು, ವಿದ್ವಾಂಸರು ಎನ್ನುವುದು ಬೇರೆ ಮಾತು. ಆದರೆ ಅದನ್ನೇ ಮುಂದು ಮಾಡಿಕೊಂಡು ಕನ್ನಡಿಗರನ್ನು ಹಾದಿ ತಪ್ಪಿಸುವ ನಡೆಯನ್ನು ಅವರು ಮುಂದುವರಿಸಿರುವುದು ಮಾತ್ರ ಸಮಂಜಸವೆಂದು ತೋರುತ್ತಿಲ್ಲ !
ಶಂಕರ ಭಟ್ಟರು ನಮ್ಮನ್ನು ಒಂದು ರೀತಿಯಲ್ಲಿ ಕನ್‍ಫ್ಯೂಜ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ ನನಗೆ ! ಜನಸಾಮಾನ್ಯರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಳ್ಳದ ಮತ್ತು ಆ ಬಗ್ಗೆ ಅನುಭವ ಇಲ್ಲದಿರುವ ಅವರು ತಮ್ಮ ಗೂಡಿನೊಳಗೆ ಕುಳಿತುಕೊಂಡು ತಮಗೆ ತೋಚಿದಂತೆ ವಿಚಾರಗಳನ್ನು ಹರಿಯಬಿಡುತ್ತಿರುವುದು ಸರ್ವಥಾ ಸರಿಯಲ್ಲ. ಯಾಕೆಂದರೆ ಅವರು ಉಪಯೋಗಿಸುವ ಕನ್ನಡ ಪದಗಳೇ ಒಮ್ಮೊಮ್ಮೆ ಕನ್ನಡಿಗರಿಗೆ ಅರ್ಥವಾಗಲಾರವು ! ‘ತಿಳಿವಿಗರು’, ‘ಹೊರಪಡಿಕೆಗಳು’, ‘ಎತ್ತುಗೆ’, ‘ಬರಿಗೆ’  ಮೊದಲಾದ ಪದಗಳು ಜನಸಾಮಾನ್ಯರಿಗೆ ಹೇಗೆ ಅರ್ಥವಾಗುತ್ತವೆ ? ನಿಮ್ಮ ಬುದ್ಧಿಶಕ್ತಿ ಅಪಾರವಾಗಿರಬಹುದು. ಆದರೆ ಅದನ್ನು ದಯವಿಟ್ಟು ಜನಸಾಮಾನ್ಯರ ಮೇಲೆ ಹೇರಬೇಡಿ !
ಇಡೀ ಲೇಖನವನ್ನು ಕಂಡಾಗ ಸಂಸ್ಕøತ ಭಾಷೆಯ ಅಕ್ಷರಗಳನ್ನು ಬಳಕೆ ಮಾಡುವುದರ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಆದರೆ ತಾವೇ ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಬಳಸುತ್ತಾರೆ ! ‘ಸುಲಭ>ಸುಲಬ, ಖುಷಿ>ಕುಶಿ, ಪೂಜ್ಯಭಾ>ಪೂಜ್ಯಬಾವ ಮೊದಲಾಗಿ ಬಳಸಿದ್ದಾರೆ. ಇದು ಕನ್ನಡ ಪ್ರೇಮವೇ ? ‘... ಮಾರ್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು’ ಎನ್ನುವ ಅವರಿಗೆ ತಾವು ಮಾಡುತ್ತಿರುವುದೂ ತೊಡಕಿನ ಸೃಷ್ಟಿಯೇ ಅಂತ ಯಾಕೆ ಅನ್ನಿಸುತ್ತಿಲ್ಲ ? ಮಹಾಪ್ರಾಣವನ್ನು ತಿರಸ್ಕರಿಸುವ ಮೂಲಕ ಬಳಕೆಯಲ್ಲಿರುವ ಕನ್ನಡ ಪದಗಳ ಅರ್ಥವ್ಯತ್ಯಾಸವಾಗುವುದಿಲ್ಲವೆ ? ನಾನು ಬದಲಾವಣೆಯ ಗಾಳಿ ಬೀಸುತ್ತಿದ್ದೇನೆ ಎಂದು ಅವರು ತಿಳಿದುಕೊಂಡಿದ್ದರೆ ಯಾಕೋ ಸಮಂಜಸವೆನಿಸಲಾರದು ! ಆಡುಭಾಷೆಯನ್ನು ಹದಗೆಡಿಸಿ ಕ್ಲಿಷ್ಟ ಮಾಡುವ ಪರಿ ಒಂದು ರೀತಿಯಲ್ಲಿ ನಗುವನ್ನೂ ತರುತ್ತದೆ !
ಶಂಕರ ಭಟ್ಟರ ಲೇಖನವಷ್ಟೇ ಅಲ್ಲ. ಸಿದ್ಧರಾಜು ಬೋರೇಗೌಡ ಅವರ ಲೇಖನ ‘ಬಾರತದವರು ಅಮೆರಿಕಾದವರಿಂದ ಆಳಗ್ಗಳೆ ಮತ್ತು ಆಳೀಳಿಗೆಯ ಪಾಟ’ (ವಿಜಯ ಕರ್ನಾಟಕ : 19-09-2012) ಕೂಡ ಇದೇ ರೀತಿಯ ಗೊಂದಲಗಳನ್ನು ಹುಟ್ಟು ಹಾಕುವಂತಿದೆ. ಯಾಕೆಂದರೆ ಲೇಖಕರು ಕನ್ನಡ ಲಿಪಿ ಸುದಾರಣೆಯಲ್ಲಿ ನುಡಿಯರಿಗೆ ಶಂಕರ ಬಟ್ಟರ ಶಾಲೆಗೆ ಸೇರಿದವರು. ಅಮೆರಿಕಾದ ಸ್ಕ್ರಿಪ್ಟ್ಸ್ ಅರಕೆ ಸಂಸ್ತೆಯಲ್ಲಿ ಬುಡಕಣಗಳ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ ! ಇವರು ಬಳಸುವ ಪದಗಳು ಕೂಡ ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ಇಲ್ಲ. ಶೀರ್ಷಿಕೆಯಲ್ಲಿಯೇ ಇರುವ ಆಳಗ್ಗಳೆ, ಆಳೀಳಿಗೆ ಹಾಗೂ ಲೇಖನದಲ್ಲಿ ಬಂದಿರುವ ಒಪ್ಪುಕೂಟ, ಮೇಟಿಯಾಳ್ಕೆ, ಆಳ್ಕೆ, ಈಳಿಗೆ, ಬೇರ್ಮೆ ಹಲತನ, ಹೆಗ್ಗಳ, ಮಿಂಬಲೆ ಮೊದಲಾದ ಪದಗಳನ್ನು ಒತ್ತಾಯಪೂರ್ವಕವಾಗಿಯೋ ಇಲ್ಲವೆ ಹಾಗೆ ಬರೆಯಲೇ ಬೇಕು ಎಂಬ ಹಠದಿಂದಲೋ ಉಪಯೋಗಿಸಿದ್ದಾರೆ !
ಸಿದ್ಧರಾಜು ಅವರೇ ಲೇಖನದಲ್ಲಿ ಒಂದು ಕಡೆ ‘ಹೆಚ್ಚೆಣಿಕೆಯವರ ತೀಟೆಗಾಗಿ ಕೊರೆಯೆಣಿಕೆಯವರನ್ನು ತೊಂದರೆಗೀಡು ಮಾಡುವುದು ಆಳಾಳ್ಕೆಯಾಗದು’ ಎನ್ನುತ್ತಾರೆ. ಹಾಗಾದರೆ ಶಂಕರಭಟ್ಟರು ಮತ್ತು ಅವರ ಅನುಯಾಯಿಗಳಾದ ಸಿದ್ಧರಾಜು ಅವರು ಮಾಡುತ್ತಿರುವುದದರೂ ಏನು ? ಕನ್ನಡದ ಬಗ್ಗೆ ತುಂಬ ಕಾಳಜಿ ಇದೆ. ಅದು ಉಳಿಯಬೇಕು, ಬೆಳೆಯಬೇಕು ಎಂಬುದು ಎಲ್ಲ ಕನ್ನಡಿಗರ ಆಶಯವಾಗಿರುತ್ತದೆ. ಆದರೆ ಅದನ್ನು ಹೀಗೇ ಇರಬೇಕು ಎಂದು ನಿರ್ದೇಶನ ಮಾಡಿ ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ ! ಶಂಕರ ಭಟ್ಟರಂತೂ ‘ಅಕ್ಷರ’ವನ್ನು ‘ಬರಿಗೆ’ ಎಂದೇ ಕರೆಯಲು ಆರಂಭಿಸಿದ್ದಾರೆ ! ಭಾಷೆಯೊಂದರಲ್ಲಿ ಕಡಿಮೆ ಅಕ್ಷರಗಳಿದ್ದಷ್ಟೂ ಆ ಭಾಷೆ ಬೆಳವಣಿಗೆ ಹೊಂದುತ್ತದೆ ಎಂಬ ವಿಚಾರವನ್ನು (ವಿ.ಕ. 21-10-2012) ಪ್ರತಿಪಾದಿಸತೊಡಗಿದ್ದಾರೆ. ಇಲ್ಲಿ ಹೊಸದೇನೂ ಇಲ್ಲ. ಕನ್ನಡದ್ದೇ ಎನ್ನುವ ಪದಗಳನ್ನು ಬಿಟ್ಟರೆ ವಿಚಾರವೆಲ್ಲ ಹಳೆಯದೇ. ಕೇಶಿರಾಜ ಕೂಡ ಅಕ್ಷರಗಳನ್ನು ಕಡಿಮೆ ಮಾಡಲು ಹೆಣಗಾಡಿದ್ದಾನೆ ; ಭಾಷಾಶಾಸ್ತ್ರಜ್ಞರೂ ಈ ಬಗ್ಗೆ ಈಗಾಗಲೇ ಚರ್ಚೆ ನಡೆಯಿಸಿದ್ದಾರೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅಕ್ಷರಗಳು ರೂಪುಗೊಂಡಿರುತ್ತವೆ. ಈ ವಿಚಾರವನ್ನು ಶಂಕರ ಭಟ್ಟರು ಯಾಕೆ ಮರೆತಿದ್ದಾರೋ ತಿಳಿಯದು. ಸಮಸ್ಕøತದಲ್ಲಿ ಕಡಿಮೆ ಅಕ್ಷರಗಳಿರುವುದನ್ನು ಹೇಳಿರುವ ಅವರು ಅದೇ ದೇವನಾಗರಿ ಲಿಪಿಯನ್ನು ಬಳಸಿಕೊಂಡು ಬೆಳೆದು ಬಂದಿರುವ ಹಿಂದಿ, ಮರಾಠಿ ಬಗ್ಗೆ ಮಾತನಾಡುವುದಿಲ್ಲ. ಮರಾಠಿ ಅಥವಾ ಹಿಂದಿಯಲ್ಲಿ ‘ಇ, ಈ, ಉ, ಊ’ ಇವೆಯಾದರೂ ‘ಎ, ಒ’ಗಳು ಇಲ್ಲ. ಹೀಗಾಗಿಯೇ ಮರಾಠಿಗರು ಮಾತನಾಡುವಾಗ ‘ಹೆಡ್ಮಾಸ್ಟರ್’ ಎನ್ನುವುದನ್ನು ‘ಹೇಡಮಾಸ್ಟರ್’ ಎಂದೇ ಉಚ್ಛರಿಸುತ್ತಾರೆ. ಹಾಗೆಯೇ ‘ಒದರುವ’ ಎಂಬುದನ್ನು ‘ಓದರುವ’ ಎಂದೇ ಮಾತಿನಲ್ಲೂ ಬರವಣಿಗೆಯಲ್ಲೂ ಬಳಸುತ್ತಾರೆ. ಹೀಗಾದಾಗ ಆಯಾ ಪ್ರದೇಶದ ಭಾಷೆಗಳ ಮಿತಿಯನ್ನು ತಿಳಿದುಕೊಂಡಿರಬೇಕು. ಕೇವಲ ಆಡುಮಾತುಗಳನ್ನೇ ಇಟ್ಟುಕೊಂಡು ವಾದಕ್ಕೆ ಇಳಿಯುವ ಶಂಕರ ಭಟ್ಟರು ಇಂಥ ಸೂಕ್ಷ್ಮಗಳನ್ನೂ ಅರಿತಿರಬೇಕಾಗುತ್ತದೆ. ಅಕ್ಷರಗಳು ಹೆಚ್ಚೋ, ಕಡಿಮೆಯೋ ಎಂಬುದು ಭಾಷಾ ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ ಎಂಬುದನ್ನು ಮೊದಲು ಅವರು ಗಮನಿಸಬೇಕು. ಚೀನಿ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಂತ ಚೀನಿ ಭಾಷೆ ನಶಿಸಿದೆಯೆ ? ಇಲ್ಲ. ಇವತ್ತು ಆ ದೇಶದ ಪ್ರತಿಯೊಂದು ಉತ್ಪನ್ನಗಳ ಮೇಲೆ ಆ ಭಾಷೆಯ ಬಳಕೆ ಇದೆ. ಕನ್ನಡಕ್ಕೆ ಕುತ್ತು ಇರುವುದು ಇಂಥಲ್ಲಿಯೇ ! ವಿನಃ ಶಂಕರ ಭಟ್ಟರು ಅಥವಾ ಅವರ ಅನುಯಾಯಿಗಳು ಹೇಳುವ ಕಾರಣಗಳಿಂದಲ್ಲ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ. ಒಂದು ನಾಡಿನ ಭಾಷೆಯೊಂದು ಅನ್ನ ಕೊಡುವ ತಾಕತ್ತು ಹೊಂದಿರಬೇಕು ; ಆ ನಾಡಿನಲ್ಲಿ ಉತ್ಪನ್ನವಾಗುವ ಎಲ್ಲ ವಸ್ತುಗಳ ಮೇಲೆ ಅಲ್ಲಿಯ ಭಾಷೆಯೇ ಪ್ರಮುಖವಾಗಿ ಕಾಣಿಸಬೇಕು. ಅಂದಾಗ ಮಾತ್ರ ಆ ನಾಡಿನ ಭಾಷೆ ಉಳಿಯುತ್ತದೆ ; ಬೆಳೆಯುತ್ತದೆ. ಒಣ ವೇದಾಂತಕ್ಕಿಂತ ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ.
ಇದೆಲ್ಲ ಬಿಟ್ಟು ಅಕ್ಷರಗಳನ್ನು ಕಡಿಮೆ ಮಾಡಬೇಕು. ಪದಗಳನ್ನು ‘ಹೀಗೆ’ ಪರಿವರ್ತಿಸಿಕೊಳ್ಳಬೇಕು ಎಂಬುದೆಲ್ಲ ಪ್ರಚಾರಕ್ಕಾಗಿ ಮಾಡುವ ಒಂದು ಗಿಮಿಕ್ಕಾಗಿ ತೋರುತ್ತದೆ ! ಇದರಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ‘ಎಲ್ಲರ ಕನ್ನಡ’ ಎಂದು ಹೇಳುತ್ತಲೇ ಕನ್ನಡವನ್ನು ತೀರ ಸಂಕೀರ್ಣಗೊಳಿಸಿ ಹಾಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಅಂಥವರಿಗೆ ವೇದಿಕೆ ಒದಗಿಸುವ ವೇದಿಕೆಗಳೂ ಕೂಡ ನಿಷ್ಪಕ್ಷಪಾತದಿಂದ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕು.
ಹೀಗೇ ಇರಬೇಕು. ಹೀಗೆಯೇ ಬರಬೇಕು ; ಬರೆಯಬೇಕು ಎಂಬ ವಿಚಾರಗಳನ್ನೇ ಇಟ್ಟುಕೊಂಡಿದ್ದ ಆಂಡಯ್ಯ ಕೂಡ ಕಬ್ಬಿಗರ ಕಾವ ಬರೆದ. ಆದರೆ ಅದರ ಪ್ರಭಾವ ಏನಾಯಿತು ? ಏನಾದರೂ ಬದಲಾವಣೆ ಸಾಧ್ಯವಾಯಿತೇ. ಈಗ ‘ಕಬ್ಬಿಗರ ಕಾವ’ ಅರ್ಥ ಮಾಡಿಕೊಳ್ಳುವವರೆಷ್ಟು ಇದ್ದಾರೆ ? ಇಂಥ ವಿಷಯಗಳನ್ನೆಲ್ಲ ಮನಗಾಣದೇ ವಿಚಾರಗಳನ್ನು, ಅಭಿಪ್ರಾಯಗಳನ್ನು ಹೇರುವುದು ಸರ್ವಥಾ ಸರಿಯಲ್ಲ. ಬಹುಶಃ ಆಂಡಯ್ಯನ ಅನುಯಾಯಿಗಳು ಇನ್ನೂ ಇದ್ದಾರೆ ಎನ್ನುವುದೇ ಸೋಜಿಗ ! ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

Sunday, October 28, 2012

ಬೇಂದ್ರೆ ಟ್ರಸ್ಟ್ ಪ್ರಶಸ್ತಿಯ ಅವಘಡಗಳು !


ಬಸವರಾಜ್ ಸುಳೇಭಾವಿ
ಬೇಂದ್ರೆ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ ! ಧಾರವಾಡದಲ್ಲಿರುವ ದ ರಾ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಗೆಳೆಯ ಶಿವರಾಜ ಬೆಟ್ಟದೂರು ಈ ಹೊತ್ತಿನ ಭರವಸೆಯ ಕವಿ. ಅವರು ತಮ್ಮ ಕವನ ಸಂಕಲನಕ್ಕೆ ಸಿಕ್ಕ ಈ ಸಲದ ಬೇಂದ್ರೆ ಟ್ರಸ್ಟಿನ ಪ್ರಶಸ್ತಿಯನ್ನು ನಾಜೂಕಾಗಿ ನಿರಾಕರಿಸಿದ್ದಾರೆ. ತಮಗೆ ಗುಂಗು ಹಿಡಿಸಿದ ಕವಿ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಯಾಕೆ ನಿರಾಕರಿಸಿದೆನೆಂದು ಅದರ ಹಿಂದಿರುವ ಕಾರಣಗಳನ್ನು, ಮುಜುಗರಗಳನ್ನು ನಾಡಿನ ಪ್ರಾಜ್ಞರೆದುರು ತೆರೆದಿಟ್ಟದ್ದಾರೆ. ಪ್ರಶಸ್ತಿ ಕೊಡುವವರ ಅಸೂಕ್ಷ್ಮತೆಗಳನ್ನು ಪ್ರಸ್ತಾಪಿಸಿದ್ದಾರೆ. ಆ ಸಂಗತಿಗಳನ್ನು ಓದಿ ಸುಮ್ಮನೆ ಮುಂದೆ ಸಾಗುವುದು ನನಗಂತೂ ಸಾಧ್ಯವಿಲ್ಲವೆಂದು ಅನ್ನಿಸಿತು.

ಬೇಂದ್ರೆ ಟ್ರಸ್ಟಿನ ಮೊಟ್ಟಮೊದಲ ಅಧ್ಯಕ್ಷರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಎಂ.ಎಂ.ಕಲಬುರ್ಗಿಯವರು. ಯಾವ ಜಾಗದಲ್ಲೇ ಇರಲಿ ಭವಿಷ್ಯತ್ ನ್ನು ರೂಪಿಸುವ ಕನಸುಗಳನ್ನಿಟ್ಟುಕೊಂಡು ಕೆಲಸ ಮಾಡುವ ಕಲಬುರ್ಗಿಯವರು ಯುವ ಸಾಹಿತಿಗಳಿಗೆ ಆಯಾ ಸಾಹಿತ್ಯ ಪ್ರಕಾರಗಳಿಗೆ ಬೇಂದ್ರೆ ಹೆಸರಿನ ಪ್ರಶಸ್ತಿ ನೀಡುವ ಯೋಜನೆಗೆ ಚಾಲನೆ ನೀಡಿದರು. ಅಲ್ಲದೇ ರಾಷ್ಟ್ರ ಮಟ್ಟದ ಕ್ಯಾನ್ವಾಸ ಇಟ್ಟುಕೊಂಡು ನಾಡಿನ ಹಿರಿಯ ಕವಿಗಳಿಗೊಬ್ಬರಿಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಕೊಟ್ಟು ಗೌರವಿಸುವದನ್ನು ಅನುಷ್ಟಾನಗೊಳಿಸಿದರು.ಕನ್ನಡವಲ್ಲದೆ ಬೇರೆ ಭಾಷೆಯ ದಿಗ್ಗಜ ಕವಿಗಳಿಗೆ ಪ್ರಶಸ್ತಿ ನೀಡಿ ಬೇಂದ್ರ ಟ್ರಸ್ಟಿನ ಇರುವಿಕೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಈ ಪ್ರಶಸ್ತಿ ಜ್ಞಾನಪೀಠದಷ್ಟು ಗೌರವ ಪಡಿಯಬೇಕೆಂಬ ಹಂಬಲ ಅವರದಾಗಿತ್ತು. ಅವರಿರುವ ತನಕ ಎಲ್ಲವೂ ಸರಿಯಾಗಿಯೇ ಇತ್ತು.

ಬೇಂದ್ರೆಯವರು ಆಳದಲ್ಲಿ ಜಾತಿಪ್ರಜ್ಞೆಯಿಂದ ಹೊರತಾದವರು. ಅವರ ಕಾವ್ಯವನ್ನು ಓದಿಕೊಂಡವರಿಗೆ ಅವರು ಸನಾತನವಾದ , ವೈದಿಕಶಾಹಿಯನ್ನು ಸೂಕ್ಷ್ಮವಾಗಿ ವಿರೋಧಿಸುವ ಅಂಶಗಳು ಕಾವ್ಯದಲ್ಲಿ ಇರುವುದು ಅರಿವಿಗೆ ಬರುತ್ತದೆ. ಅವರ ಹೆಸರಿನ ಟ್ರಸ್ಟಿನ ಕಾರ್ಯನಿರ್ವಹಣೆಗಳು ಡಾ. ಕಲಬುರ್ಗಿಯವರು ಅಧ್ಯಕ್ಷರಾಗಿರುವವರಿಗೆ ಒಂದು ಜಾತಿಗೆ ಒಂದು ಮನೋಧರ್ಮಕ್ಕೆ ಸೀಮಿತವಾಗದಂತೆ ನಡೆಯುತ್ತಿದ್ದವು.

ಈ ವಿಚಾರವನ್ನು ಯಾಕೆ ಪ್ರಸ್ತಾಪ ಮಾಡಬೇಕಾಗಿದೆ ಎಂದರೆ ಈಗ ಟ್ರಸ್ಟಿನ ಕಾರ್ಯನಿರ್ವಹಣೆ ಹಾಗೆ ಉಳಿದಿಲ್ಲ.. ಧಾರವಾಡದಲ್ಲಿ ಇದ್ದು ಟ್ರಸ್ಟಿನ ಕಾರ್ಯಕ್ರಮ ನೋಡಿದವರಿಗೆಲ್ಲ ಹಾಗೆ ಅನಿಸುವುದು ಸಹಜವಾಗಿದೆ. ಬೇಂದ್ರೆಯಂಥ ಮಹಾನ ಕವಿಯ ಪ್ರಶಸ್ತಿಯನ್ನು ಸಂಘಪರಿವಾರದ ಘೋಷಿತ ತಿಂಕ್ ಟ್ಯಾಂಕ್ ಆದ .. ಅದಕ್ಕೆ ಬೇಕಾದ ಬೌದ್ದಿಕ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನೇ ಮಾಡುತ್ತ ಬಂದಿರುವ ಕೆ.ಎಸ್ ನಾರಾಯಣಾಚಾರ್ಯರಿಗೆ ಕಳೆದ ವರ್ಷ ನೀಡಿದಾಗಲೇ ಅದರ ಗುಣಮಟ್ಟ ನೆಲಕಂಡಿತ್ತು.. ಮುಖ್ಯವಾಗಿ ಇದೊಂದು ಕೊಡುಕೊಳೆಯ ವ್ಯವಹಾರದ ಹಾಗೆ. ತಾವು ಅಧ್ಯಕ್ಷರಾಗುವದಕ್ಕೆ ಕಾರಣವಾದ ವ್ಯವಸ್ಥೆಗೆ ಋಣ ಸಂದಾಯ ಮಾಡುವುದು. ಈಗಿನ ಅಧ್ಯಕ್ಷರಾದ ಶ್ಯಾಮಸುಂದರ ಬಿದರಕುಂದಿಯವರ ಸಂಘ ಪರಿವಾರದ ಪ್ರೇಮ ಮೊದಲಿನಿಂದಲೂ ಗುಟ್ಟಾದ ಸಂಗತಿಯೇನಲ್ಲ.. ಆದರೇನು ಅದನ್ನು ತೋರುಗೊಡದೆ ಎಲ್ಲದರಲ್ಲೂ ಮೂಲ ಬೇರು ಬಿಡದೆ ಬೆರೆಯುವಂತವರು.

ಶಿವರಾಜ ಬೆಟ್ಟದೂರ ಅವರಿಗೆ ಪ್ರಶಸ್ತಿ ನೀಡುವಲ್ಲಿ ಆಗಿರುವ ಅವಘಡವನ್ನು ಕೆದಕಿದ ಹಾಗೆ ಹಿಂದೆ ಆಗಿರುವ ಅನೇಕ ಅವಘಡಗಳು ಎದ್ದು ಬರುತ್ತವೆ.ನನಗಾದ ಅನುಭವವೂ ಅಷ್ಟೇ ಕಹಿಯಾದದು. ಟ್ರಸ್ಟಿನಲ್ಲಿದ್ದವರ ವ್ಯಕ್ತಿತ್ವದ ಕನ್ನಡಿಯಾಗುವಂಥದ್ದು. ಇಷ್ಟುದಿನ ಈ ವಿಷಯವನ್ನು ನಾನು ಎಲ್ಲಿಯೂ ಪ್ರಸ್ತಾಪಿಸಲು ಹೋಗಿರಲಿಲ್ಲ. ಈಗ ಹೇಳಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ ಎಂದು ಅದನ್ನಿಲ್ಲಿ ತೆರೆದಿಡುತ್ತಿರುವೆ

ಕಳೆದ ವರ್ಷ ಬೇಂದ್ರೆ ಟ್ರಸ್ಟ್ 2010 ರ ಸಾಲಿನ ಪ್ರಶಸ್ತಿಗಾಗಿ ವಿವಿಧ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಿದಾಗ ನಾನು ಆ ಸಾಲಿನಲ್ಲಿ ನಮ್ಮ ಪ್ರಕಾಶನ ಪ್ರಕಟಿಸಿದ ನನ್ನ ಸಂಗಾತಿ ವಿಭಾ ಅನುವಾದಿಸಿದ 'ಹರಿವ ನೀರೊಳಗಿನ ಉರಿ' ಪುಸ್ತಕವನ್ನು ಪ್ರಶಸ್ತಿ ಪರಿಶೀಲನೆಗಾಗಿ ಕಳಿಸಿಕೊಟ್ಟೆ.. ಈ ಪ್ರಶಸ್ತಿ ಇರುವುದು 35 ವಯಸ್ಸಿನ ಒಳಗಿನ ವಯೋಮಾನದ ಸಾಹಿತಿಗಳಿಗೆ. ವ್ಯವಸ್ಥಾಪಕರು ವಯೋಮಾನದ ನಿಖರತೆಗಾಗಿ ವಿಭಾಳ ಲಿವೀಂಗ್ ಸರ್ಟಿಪಿಕೇಟ್ ಕೇಳಿದರು. ನಾನದನು ಅವರಿಗೆ ತಲುಪಿಸಿದೆ. ಪ್ರಶಸ್ತಿ ವಿತರಣೆ ಒಂದು ವಾರವಿದೆ ಎನ್ನುವಾಗ ಅಧ್ಯಕ್ಷರಾದ ಡಾ. ಶ್ಯಾಮಸುಂದರ ಬಿದರಕುಂದಿಯವರು ಫೋನ್ ಮಾಡಿ ಅನುವಾದ ವಿಭಾಗದಲ್ಲಿ ವಿಭಾ ಅವರ 'ಹರಿವ ನೀರೊಳಿಗಿನ ಉರಿ' ಕೃತಿಗೆ ಪ್ರಶಸ್ತಿ ಬಂದಿದೆ. ತುಂಬ ಒಳ್ಳೆಯ ಕೃತಿ ಅದು. ಉತ್ತಮವಾಗಿ ಅನುವಾದಿಸಿದ್ದಾರೆ. ವಿಭಾ ಇದ್ದಿದ್ದರೆ ತುಂಬ ಖುಷಿಯಾಗುತ್ತಿತ್ತು. ಇರಲಿ ಅಂದು ಕಾರ್ಯಕ್ರಮಕ್ಕೆ ಬೇಗ ಬನ್ನಿ. ಮಗಳನ್ನು ಕರೆತನ್ನಿ.. ಟ್ರಸ್ಟಿಗೆ 'ಹರಿವ ನೀರೊಳಗಿನ ಹರಿ' ಪುಸ್ತಕದ ಇನ್ನು ಎರಡು ಪ್ರತಿ ಬೇಕು. ಅವನ್ನು ಟ್ರಸ್ಟಿಗೆ ತಲುಪಿಸಿ ಎಂದರು. ನಾನು ಆಗಲಿ ಸರ್ ಎಂದೆ. ಆಮೇಲೆ ಆ ವರ್ಷ ಇತರ ಪ್ರಕಾರಗಳಲ್ಲಿ ಪ್ರಶಸ್ತಿ ಪಡೆದ ನನ್ನ ಕಿರಿಯ ಗೆಳೆಯರು ತಮ್ಮ ಸಂತೋಷವನ್ನು ನನ್ನೊಡನೆ ಹಂಚಿಕೊಂಡರು.

ಪ್ರಶಸ್ತಿ ವಿತರಣೆಗೆ ಇನ್ನೊಂದು ದಿನ ಬಾಕಿ ಇತ್ತು. ಹಿಂದಿನ ದಿನ ಫೋನ್ ಮಾಡಿದ ಶ್ಯಾಮಸುಂದರ ಬಿದರಕುಂದಿಯವರು ಮೊದಲಿಗೆ ಕ್ಷಮೆ ಯಾಚಿಸಿದರು. ವಿಭಾ ಪುಸ್ತಕಕ್ಕೆ ಬಂದ ಪ್ರಶಸ್ತಿಯನ್ನು ಹಿಂತೆಗೆದುಕೊಂಡಿದ್ದೇವೆ. ಹಾಗಂತ ಟ್ರಸ್ಟಿನ ನಿರ್ದೇಶಕರ ಸಭೆಯಲ್ಲಿ ತೀರ್ಮಾನ ತಗೆದುಕೊಳ್ಳಲಾಗಿದೆ. ಈ ಪ್ರಶಸ್ತಿಯನ್ನು ಬೆಳೆಯಬೇಕಾದ ಯುವ ಸಾಹಿತಿಗಳಿಗೆ ಕೊಡುವುದು. ನಿಗದಿತ ವಯೋಮಾನದೊಳಗೆ ವಿಭಾ ಇದ್ದರೂ ತೀರಿಕೊಂಡವರ ಕೃತಿಗಳಿಗೆ ಪ್ರಶಸ್ತಿ ಕೊಡುವುದು ಬೇಡ ಎಂದು ನಿರ್ಣಯವಾಗಿದೆ.. ಕೃತಿ ಬಗ್ಗೆ ಎರಡು ಮಾತೇ ಇಲ್ಲ. ಅಷ್ಟೊಲ್ಲೆ ಕೃತಿ ಅದು ಎಂದರು.ಆ ಕ್ಷಣ ತಿರುಗಿ ಅವರಿಗೆ ನನಗೇನು ಹೇಳಬೇಕೆನಿಸಲಿಲ್ಲ. ಮೌನವಾದೆ. ಆನಂತರ ನನ್ನ ಆಪ್ತರಲ್ಲಿ ಈ ಸಂಗತಿ ಚರ್ಚೆಯಾಯಿತು..

ಕೆಲವು ಪ್ರಶ್ನೆಗಳು ಹಾಗೆ ಉಳಿದುಬಿಟ್ಟವು. ಟ್ರಸ್ಟ್ ಈ ಪ್ರಶಸ್ತಿಯನ್ನು ಕೊಡಲು ಆರಂಭಿಸಿದಾಗ ಇಂಥ ನಿಯಮಾವಳಿಯನ್ನು ಸೇರಿಸಿತ್ತೇ? ಡಾ. ಕಲಬುರ್ಗಿಯವರನ್ನು ಆನಂತರ ಕೇಳಿದಾಗ ಅಂಥ ನಿಯಮಾವಳಿ ಮಾಡಿರಲಿಲ್ಲ ಎಂದರು. ಈಗಿನ ಟ್ರಸ್ಟ್ ನಿರ್ದೇಶಕರು ಇಂತಹ ತೀರ್ಮಾನವೇಕೆ ತಗೆದುಕೊಂಡಿರು ಅನ್ನುವದಕ್ಕಿಂತ ಟ್ರಸ್ಟಿನಲ್ಲಿ ಚರ್ಚೆ ಮಾಡಲಾರದೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತೇ? ಯಾಕೆ ಮಾಡಲಾಯಿತು? ಘೋಷಣೆ ಮಾಡುವ ತುರ್ತು ಏನಿತ್ತು? ಪ್ರಶಸ್ತಿ ಘೋಷಣೆ ಮಾಡಿದ ಮೇಲೆ ಹಿಂತೆಗೆದುಕೊಂಡರೆ ಆಗುವ ಪರಿಣಾಮಗಳೇನು? ಈ ಬಗ್ಗೆ ಉತ್ತರಬೇಕಾದವರು ಯಾರು? ಯಾರಿಗೂ ಬಾಯಿ ಇರಲಿಲ್ಲ

ಈ ಬಗ್ಗೆ ಶ್ಯಾಮಸುಂದರ ಬಿದರಕುಂದಿಯವರೇನು ಹೇಳಲಿಲ್ಲ .. ನನಗೂ ಅವರನ್ನು ಮತ್ತೆ ಕೇಳಬೇಕೆನಿಸಲಿಲ್ಲ.ಸೂಕ್ಷ್ಮ ವಿಷಯಗಳಲ್ಲಿ ಸಣ್ಣ ಮನಸುಗಳೊಡನೆ ಗುದ್ದಾಡುವದರಲ್ಲಿ ಯಾವ ಅರ್ಥವೂ ಇಲ್ಲವೆನಿಸಿತು

ಈತನಕ ಪ್ರಕಟವಾದ ವಿಭಾಳ ಮೂರು ಕವನ ಸಂಕಲನಗಳು ( ಅದರಲ್ಲಿ ಎರಡು ಅನುವಾದಗಳು) ಅವಳ ಮರಣೋತ್ತರವೆ ಬಂದಿವೆ..ಕಥಾ ಸಂಕಲನ , ಲೇಖನ ಸಂಕಲನ, ವಿಮರ್ಶೆ ಬರೆಹಗಳ ಕೃತಿಗಳು ಪ್ರಕಟವಾಗಬೇಕು ಆ ಕೆಲಸ ನಡೆದಿದೆ . ಪ್ರಕಟವಾದ ಸಂಕಲನಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕ ವಿದ್ಯಾವರ್ದಕ ಸಂಘದ ಮಾತೋಶ್ರಿ ರತ್ನಮ್ಮ ಹೆಗ್ಗೆಡೆ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಹರಿಹರಶ್ರೀ ಕಾವ್ಯ ಪ್ರಶಸ್ತಿ, ಕ ಸಾಪ ದ ಮಲ್ಲಿಕಾ ದತ್ತಿ ನಿಧಿ ಪ್ರಶಸ್ತಿ. ಇತ್ಯಾದಿ.. ಇವೆಲ್ಲವೂ ಸಿಕ್ಕಿರುವುದು ಮರಣೋತ್ತರವಾಗಿ ಪ್ರಕಟವಾದ ಕೃತಿಗಳಿಗೆ. ಈ ಸಂಘ ಸಂಸ್ಥೆಗಳಿಗೆ ಇಲ್ಲವಾದ ಮರಣೋತ್ತರದ ಪ್ರಶ್ನೆ ಬೇಂದ್ರೆ ಟ್ರಸ್ಟಿಗೆ ಬಂದಿತೇಕೆ ಎಂಬ ಪ್ರಶ್ನೆ ನನಗೆ ಈಗಲೂ ಕಾಡುತ್ತಿದೆ. ಪ್ರಶಸ್ತಿಗೆ ಮುಖ್ಯವಾಗುವುದು ಯಾವುದು ಕೃತಿಯೋ .. ಲೇಖಕನೋ..?

ಈ ಸಂಗತಿ ನನ್ನ ಮನಸಿನ ಮೂಲೆಯಲ್ಲಿಯೇ ಉಳಿದುಬಿಟ್ಟಿತು.. ಶಿವರಾಜ ಬೆಟ್ಟದೂರರ ವಿಷಯ ಕೇಳಿ ಮತ್ತೆ ನೆನಪಿಗೆ ಬಂದಿತು. ಇದಕ್ಕೂ ಪೂರ್ವದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿರುವ ಗಣೇಶ ಅಮೀನಗಡ ಅವರ ಕೃತಿಗೆ ಬಂದ ಪ್ರಶಸ್ತಿಯನ್ನು ಘೋಷಣೆ ಮಾಡಿದ ಮೇಲೆ ಅಪದೆವಿಟ್ ಕಾರಣಕ್ಕಾಗಿ ಗಣೇಶ್ ಕೂಡ ಪ್ರಶಸ್ತಿಯನ್ನು ನಿರಾಕರಿಸಿದ ಘಟನೆ ಜರುಗಿಹೋಗಿದೆ.

ಡಾ. ಶ್ಯಾಮಸುಂದರ್ ಬಿದರಕುಂದಿಯವರು ಅಧ್ಯಕ್ಷರಾಗಿರುವ ತನಕ ಇಂಥ ಅವಘಡಗಳು ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಅವರ ಕಾರ್ಯವೈಖರಿಯೇ ಹಾಗೆ..ಆದರೆ ಕವಿ ಬೇಂದ್ರೆಯವರ ಹೆಸರಿನ ಟ್ರಸ್ಟಿನ ಕಾರ್ಯಗಳು ಈ ರೀತಿ ನಡೆಯಬಾರದಿತ್ತು ಎಂದು ಈ ಹೊತ್ತಿನಲ್ಲೂ ಅನಿಸುತ್ತಿದೆ ಅಷ್ಟೇ.

ಘಟನೆ ಮುಗಿದ ಮೇಲೆ ಮೂರ್ಖನೂ ಜಾಣನಾಗುವುದು ಲೋಕರೂಢಿ.. ಕೆಲವರು ಈ ಲೋಕರೂಢಿಗಳನ್ನು ಮುರಿಯುತ್ತಲೇ ಇರುತ್ತಾರೆ

-ಬಸೂ

Saturday, October 27, 2012

ಕಣ್ಣು ತೆರೆದು ನೋಡಿ....

- ಸಿಹಿಮೊಗ್ಗೆ (ನಂದಿನಿ ನಾಯ್ಡು)

ಎರಚುವಿರಯ್ಯಾ ತುಂಬಿದ ಕೊಡದ ಹಾಲನ್ನು,
ದೇವನೆಂಬ ಹೆಸರಿನಲ್ಲಿರುವ ಕಲ್ಲಿಗೆ,
ನೊಂದ ತಾಯಿ ಮೊರೆಯೊಡ್ಡಿಹಳು,
ಎನಗೆ ದೇವನಿಲ್ಲ ನೀವೆನ್ನ ದೈವ ಕೈಮುಗಿವೆ,
ಕೊಂಚ ಹಾಲ ಎಸೆಯಿರಯ್ಯ ಎನ್ನ ಹಸಿದ ಕಂದಮ್ಮನಿಗೆ.


ದೋಷಪರಿಹಾರಕ್ಕೆ ಸಾಲು ಸಾಲಿನಲ್ಲಿ ಮಂದಿ ಮಂದಿರದಲ್ಲಿ,
ದವಸ ಧಾನ್ಯಗಳಾ ಕೊಂಡೊಯ್ದು ಚೆಲ್ಲುವಿರಯ್ಯಾ ಗ್ರಹಗಳೆಂಬ ಕಲ್ಲಿಗೆ,
ಎನ್ನ ತಾಯಿ ಹಸಿವಿನಲ್ಲಿ ಹಾಸಿಗೆ ಹಿಡಿದಿಹಳು,
ಒಬ್ಬರಿಂದ ಒಂದೊಂದು ಕಾಳಂತೆ ಸಾಕು,
ಚೆಲ್ಲಿರಯ್ಯ ಎನ್ನ ಹಡೆದವ್ವಳ ಪ್ರಾಣಹಕ್ಕಿಯ ಉಳಿಸಲು.

ಮನುಷ್ಯ ಜನ್ಮ ಹುಟ್ಟಿಹುದೇ ಪುಣ್ಯಕೋಟಿ ಹಬ್ಬವಂತಯ್ಯಾ,
ವರುಷ ವರುಷ ಹುಟ್ಟುಹಬ್ಬದಿ ಕ್ಷೀರಾನ್ನ ಫಲಹಾರಗಳಾ ಅಭಿಷೇಕ ಕಲ್ಲಿನ ದೇವನಿಗೆ, .
ಅವನ ಮೇಲಿರುವ ಬಂಡೆಕಲ್ಲಿನಷ್ಟು ನಂಬಿಕೆಯಲ್ಲಿ ,
ಸಾಸುವೆ ಕಾಳಿನಷ್ಟು ನಂಬಿಕೆಯ ಒಡ್ಡಿರಯ್ಯಾ ಈ ಪಾಪಿಯಾ ಮೇಲೆ.
ಕೊಳೆತ ಹಣ್ಣಿನ ಎಸಲೊಂದ ಎಸೆಯಿರಿ ಅದೇ ಎಮಗೆ ಮೃಷ್ಟಾನ್ನ .

ಹರಿಕೆಯಾ ಹೆಸರಿನಲ್ಲಿ ಗುಡ್ಡೆ ಗುಡ್ಡೆಯಾಗಿ,
ವಸ್ತ್ರಗಳಾ ತೊಡಿಸುವಿರೆಯ್ಯಾ ಅಜೀವ ಕಲ್ಲುಗಳಿಗೆ,
ಎಮ್ಮ ಮಗಳು ಮೈನೆರೆದಿಹಳು ಹರಿದ ಉಡುಗೆ ಉಟ್ಟಿಹಳು,
ಹಳೆಯ ಹೊಲಸ ಬಟ್ಟೆಯೇ ಸಾಕು ಅವಳ ಮಾನ ಕಾಪಾಡಿಕೊಳ್ಳಲು,
ದೇವರ ಕರುಣೆಗಿಂತ ನಿಮ್ಮ ಕಣ್ಣ ತೆರೆದು ಬಿಸಾಡಿರಯ್ಯಾ ನಿಮಗೆ ಬೇಡದ.
ನಿಮಗೇ ನಾ ಶರಣು ಶರಣೆಂಬೆ.

Friday, October 19, 2012

Mulnivasis-Who and How ?

Balvinder Singh Mulnivasi

Some Sanskrit literature of Arya Brahmins, that is available today makes mention of some important aspects, related to Mulnivasis. According to this literature, in the ancient period there was heavy struggle between the Aryas
and the Mulnivasis.

This struggle is described in the Sanskrit literature. The terminology used for the Mulnivasis is Anarya, Dass, Dasyu, Asur, Rakshas, Ravan and Naga. These were the names given by Aryan invaders to the Mulnivasis. These are not praise-worthy names, but were used to abuse and condemn them.
Mulnivasi Sangh
Therefore, it is now proved that these Anarya, Dass, Dasyu, Asura, Rakshas and Danav are the original inhabitants of this country, who, are now referred in the constitution as Scheduled Castes and convert from them to religious minorities.
How can we say that these people are Mulnivasis?

This question can be answered in many ways and many reasons can be given, to call these people as Mulnivasis. One, these people were made untouchables and were driven out from the public life and were forced to live a wretched life of animals.
The Second section of the Mulnivasis are tribal people, who were forced to live in jungles and hills. Thus we can see that the Scheduled Castes are not Hindus, because they do not observe religious customs of Arya Brahmins. Arya-Brahmins call them Hindus, but have not granted them any rights of Hindus.

Hindu code bill was not applicable to the Scheduled Castes. Thus there is no similarity of conduct, thoughts, faith, belief, customs, religious tradition, language and way of life between Arya-Brahmins and Scheduled Castes / Scheduled Tribes.

The third big section, whom we call, Other Backward Class(OBC) is also Mulnivasis, because they have been deprived the right of holding power, acquiring property and possessing weapons(As per manusmruti). When these O.B.C. accepted the domination of Arya-Brahmins they granted them religious rights of Hindus, but adopted Puranic system for them, instead of Vedic system. From this, it is proved that this class is not Vedic. We can see that when rights were granted to O.B.C’s as per Mandal Commission, the Arya-Brahmins opposed it most. They tried to hatch a conspiracy against the objectives of the Mandal Commission and were successful in that.

From these SCs, STs and OBCs, who are the Mulnivasis have become Sikhs, Buddhists, Christians and Muslims. It means the 95% people of minorities are from this Mulnivasie castes. Arya-Brahmins call them foreigners, especially Muslims. Muslims are not foreigners, but are original inhabitants of this country. Thus we all are Mulnivasis. This is proved fact.
Struggle for liberation of Mulnivasis

When freedom struggle of our country was going on, we were dual slaves. The Arya Brahmins were slaves of British people and we, Mulnivasis (original inhabitants) were the slaves of the system established by them, in which we were made slaves, socially , culturally and religiously.
On 15th Aug. 1947, these Arya-Brahmins got freedom and became the masters and rulers of the country. And we, who were the slaves of the slaves are still slaves of these Arya-Brahmins. On 15th Aug. 1947, the country got the freedom, but the people of the country did not get this freedom. Only Arya brahmins got freedom and we, Mulnivasis are still their slaves.

Therefore, it is necessary to launch the struggle for the liberation of the Mulnivasis. Pride of the caste is the reason of our slavery and caste are invented by Arya Brahmins, through which they divided the Mulnivasis into 6000 small groups and perpetuated this division into them. Every caste is having its own caste people and there is ladder of high and low, based on graded inequality among these castes, they keep on fighting among themselves, instead of uniting themselves to fight against the common enemy. The Arya-Brahmins encourage and sponsor this fight. Because of this constant division of Mulnivasis of the country, they have become unfit for the resistance.

Along with this, another important aspect is that these Mulnivasis were prohibited from taking education, possessing weapons and acquiring property. Because of this, they became helpless, and hopeless and came to depend upon Arya-Brahmins. The brahmins took advantage of this dependency and made the Mulnivasis, slaves. When they were made slaves under Brahminical system, they could not save the independence of their country and along with them, India, their motherland also became slave.

Therefore, it is necessary to liberate the Mulnivasis and their motherland. It is necessary to free them from the system. Hence to achieve the objective of “Change of System” and to free the country from Arya-Brahmins, it has become necessary to launch the movement of their liberation of the Mulnivasis.
Point of view based on Social system

From the view point based on system, it can be seen that the Scheduled Castes, Scheduled Tribes, Other Backward Classes and Minorities are victims of the brahminical system. Therefore Mahatma Jyotirao Phule, Periyar Ramaswami and Dr. Babasaheb Ambedkar have fixed the objective of their movements to change this social System of inequality.
Therefore those who are suffering from this Social System, can only take active part in the movement of change of System. This is quite natural. There is no point in organising those communities, who were benefited by the System. Thus for changing the System of inequality, it is necessary to organise those communities, who were victims of the system, Therefore the Scheduled Castes, Scheduled Tribes, Other Backward classes and Minorities are being organised.
Aryan Brahmins are foreigners

If Scheduled castes, Scheduled Tribes, Other Backward Class and the minorities converted from them, who have been divided into 6000 castes, are the Mulnivasis of this country, then who are foreigners? We must find out an answer to this question. There is not much difference of opinion among historians on this point, that Aryans are foreigners. The only difference of opinion is on the issue of the country of their origin. On this issue

JAI MULNIVASI!

Tuesday, October 16, 2012

ಶಂಖದಿಂದ ಬಂದರೆ ಮಾತ್ರ ತೀರ್ಥ !



ಸಾಹಿತ್ಯದ ವಿಮರ್ಶೆಯ ಬಗ್ಗೆ ನಾನು ಪದೇ ಪದೇ ಅಂದ್ರೆ ಬಹಳಷ್ಟು ಸಲ ಹೊಸದಾಗಿ ಬರೆಯುವ ನನ್ನ ವಿದ್ಯಾರ್ಥಿಗಳಾದಿಯಾಗಿ ಎಲ್ಲರಿಗೂ ಹೇಳುವ ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಒಂದು ನಾಲ್ಕು ಸಾಲಿನ ಕವಿತೆಯನ್ನು ಕೊಟ್ಟು ಆ ಬಗ್ಗೆ ಬರೆಯುತ್ತೇನೆ. ಆ ಕವಿತೆ ಹೀಗೆಇದೆ ;

ಆತ ಅತ್ತ ಕಡೆಯಿಂದ ಬಂದ
ಆಕೆ ಇತ್ತ ಕಡೆಯಿಂದ ಬಂದಳು
ನಡುವೆ ಒಂದು ವೃತ್ತ
ಇಬ್ಬರೂ ಸಂಧಿಸುವಲ್ಲಿ
ಆತ ಬಲಕ್ಕೆ ಹೊರಳಿದ
ಆಕೆ ಎಡಕ್ಕೆ ಹೊರಳಿದಳು !

ಹೀಗೆ ಬರೆದು ಯಾರಾದರೂ ವಿದ್ವಾಂಸರು, ಬರಹಗಾರರು ಎಂದುಕೊಂಡವರ ಬಳಿಗೆ ನೀವು 'ಸರ್, ಇದು ನಾನು ಬರೆದ ಕವಿತೆ' ಎಂದುಕೊಂಡು ಹೋದಿರೋ ಮುಗಿಯಿತು ...  ಅವರು ಬುದ್ಧಿವಾದ ಹೇಳುತ್ತಾರೆ. ಇದು ಕವಿತೆಯೇ ಅಲ್ಲ ಎನ್ನುವಂತೆ ಮಾತಾಡುತ್ತಾರೆ ! ಇನ್ನೊಂದಿಷ್ಟು ಗಂಭೀರವಾಗಿ ಬರೆಯುವಂತೆ ಪುಕ್ಕಟೆ ಸಲಹೆಯನ್ನೂ ನೀಡುತ್ತಾರೆ !

ಅದೇ ನೀವು ಇದೇ ಕವಿತೆಯನ್ನು ತೆಗೆದುಕೊಂಡು ಯಾವುದೋ ಒಬ್ಬ ಹೆಸರಾಂತ ಕವಿಯ ಹೆಸರನ್ನು  ಬರೆದು 'ಇದು ಸರ್ ಇಂಥವರು ಬರೆದ ಕವಿತೆ' ಅನ್ನಿ. ಆವಾಗ ಸುರುವಾಗುತ್ತೆ ನೋಡಿ ಅವರ ವಿಮರ್ಶಕ ಬುದ್ಧಿ ! ಈ ಕವಿತೆಯನ್ನು ಅವರು ಹೊಗಳುತ್ತಾರೆ. ಪ್ರಕೃತಿ-ಪುರುಷ ಎಂದು ಮೊದಲಾಗಿ ಮಾತನಾಡುತ್ತಾರೆ. ಕೆಲವೊಬ್ಬರು ಅದಕ್ಕೆ ಆಧ್ಯಾತ್ಮಿಕ ಹೋಲಿಕೆಯನ್ನೂ ನೀಡುತ್ತಾರೆ !

ಹಾಗಾದರೆ ಶಂಖದಿಂದ ಬಂದದ್ದು ಮಾತ್ರ ತೀರ್ಥವೇ ?

Monday, October 15, 2012

ನನ್ನ ಅಕ್ಷರ ಮಾಯೆ ಪದ್ಯದ ಸಾಲುಗಳು:

- ಅರುಣ ಜೋಳದಕೂಡ್ಲಗಿ
 
ಬಿಳಿ ಹಾಳೆಯಲ್ಲಿ
ಅವಳೇ ಬರೆದ ಸಾಲುಗಳ ಮೇಲೆ
ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದಾಳೆ !
ಒಂದಕ್ಷರ ಕದಲಿದರೂ
ಅವಳು ಬೀಳುವುದು ಪ್ರಪಾತಕ್ಕೆ !
ಪ್ರತಿ ಅಕ್ಷರದ ಪಾದಕ್ಕೂ
ನಮಸ್ಕರಿಸಿ ಹೇಳಿದ್ದೇನೆ
ಅವಳ ಪಾದ ಚಲಿಸುವಷ್ಟು ಹೊತ್ತು
ಭಾರ ಹೊರುವ ಶಕ್ತಿ ನೀಡಲು
ನಿಮ್ಮ ತಾಯಂದಿರ ನೆನೆಯಿರಿ ಎಂದು !
ಈಗ ನನ್ನೆಸರಿನ ಮೇಲೆ ಪಾದ ಊರಿದ್ದಾಳೆ
ಮೈ ಬೆವರುತ್ತಿದೆ !

ಇಂಟರ್ ವ್ಯೂಗೆ ಬಂದ ಯುವಕರಿಗೆ...


ತಮಿಳು: ಎಂ.ರಾಮಲಿಂಗಂ
ಕನ್ನಡಕ್ಕೆ: ಓ.ಎಲ್. ನಾಗಭೂಷಣ ಸ್ವಾಮಿ.


ಓ ನನ್ನ ಪ್ರಿಯ ಗೆಳೆಯರೆ
ಪರಿತಾಪ ಪಡುವ ಜೀವಿಗಳೆ !

ಕನಸುಗಳ ಭಾರ ಹೊತ್ತ ನಿಮ್ಮ ಕೊರಳನ್ನು

ಯಾಕೆ ಮುಂದೊಡ್ಡಿದ್ದೀರಿ ?

ಈ ಸಂಯುಕ್ತೆ

ನಮಗೆ ಯಾರಿಗೂ

ಮಾಲೆ ಹಾಕುವವಳಲ್ಲ.
!

ಒಬ್ಬ ಪೃಥ್ವೀರಾಜ

ಈಗಾಗಲೆ ಅಡಗಿ ನಿಂತಿದ್ದಾನೆ
ಇನ್ ಪ್ಲುಯೆನ್ಸಿನ ಶಿಲಾ ವಿಗ್ರಹದ ಹಿಂದೆ.

ಬನ್ನಿ,

ಈ ಹಗಲು ನಾಟಕಕ್ಕೆ
ಸಾಕ್ಷಿಗಳಾಗಿರುವ ಬದಲು
ಮರೆಯೋಣ ನಮ್ಮೆಲ್ಲಾ ದುಃಖ
ಗಾಂಜಾ ಸೇದಿ

ಅಥವಾ

ಸ್ಪೋಟಿಸೋಣ ಈ ಶಿಲಾ ಪರ್ವತಗಳನ್ನು
ಎಸೆದು ಒಂದು ಬಾಂಬು !

(ಆತ್ಮೀಯ ಡಾ. ಅರುಣ ಜೋಳದಕೂಡ್ಲಗಿ ಅವರು ಕಳುಹಿಸಿದ ಕವಿತೆ)

Tuesday, October 02, 2012

ಮಾತ್ಗವಿತೆ-98

ನಿನ್ನೊಳಗಿನ ನನ್ನ ಹಿರಿದೊಗೆದು ಬಿಡು
ಹರಿದು ಹೋಗಲಿ ಸಂಬಂಧ
ಮತ್ತೇ ಸೂತಕ !
ಬೇವು ಬೆಲ್ಲದೊಳಲಿಡಲೇನು ಫಲ
ತತ್ವ ಹಳತಾಯಿತು ;
ಎರಡೂ ಸೇರಿದರೆ ಮಾತ್ರ
ಬದುಕು ; ಬೆದಕು ; ಕಲಕು
ಜಿಡ್ಡು ಗಟ್ಟಿದ ಮನಸ್ಸು
ಒಂದಿಷ್ಟು ನಿರಾಳವಾಗಲಿ !
ಇಲ್ಲವೆಂದರೆ ಹಿರಿದೊಗೆದು ಬಿಡು
ನಿನ್ನೊಳಗಿನ ನನ್ನ !

Wednesday, September 26, 2012

ವಚನ-22

ಸು ನೀತವನ್ನು ಹೇಳುವ ಅಕ್ಕ ;
ಭಾವಗಳ ಬಲೆಯಲ್ಲಿ ಬಿದ್ದ ಬಸವ !
ಸುನೀತಕ್ಕ ಬಸವಣ್ಣನ ಮನದಾಳ
ಮೀನನ ಹೆಜ್ಜೆ ಕಾರಣಿಕ ಸಿದ್ಧರಾಮ
ಹೊರಗಿದ್ದಂತೆ ಒಳ ತೆರೆಯಬಲ್ಲುದೇ ?

Monday, September 24, 2012

ಮಾತ್ಗವಿತೆ-97

ಕೂಡಿಕೆಗೆ ತಹತಹಿಸಿ 
ತಲ್ಲಣಗೊಳ್ಳುವಾಗಲೇ
ತಳ್ಳಿಕೊಂಡು ಬಂದ 
ವಿಚಾರಗಳು ಬೆಂಕಿ ಹಚ್ಚಿದವು !
ನೀರು, ಗಾಳಿ, ಮಣ್ಣು 
ಯಾವುದಕ್ಕೂ ಜಗ್ಗದೇ
ದಗದಗನೇ ಹೊತ್ತಿ ಉರಿಯುತ್ತ 
ದಹಿಸತೊಡಗಿದವು !

Sunday, September 23, 2012

ಹೇಳೋದು ಆಚಾರ ; ತಿನ್ನೋದು ಬದನೆ !


 ಕತೆ
ಮೂಲ ಮರಾಠಿ : ಅಡ್ವೋಕೇಟ್ ಕೆ.ಬಿ. ಹನ್ನೂರಕರ
ಕನ್ನಡಕ್ಕೆ : ಡಾ. ಸಿದ್ರಾಮ ಕಾರಣಿಕ
-------------------------------------------------------------------------------------------------------------
ಪ್ರತಾಪರಾವ್ ಸರನೋಬತ್ !
ಮುರಕಟ್ಟೆವಾಡಿ ಎಂಬೋ ಊರಿನಲ್ಲಿ ಇರುವ ಒಬ್ಬ ಡಾಕ್ಟರು !
ಪದವಿ ಪಡೆಯುವಾಗ ಸ್ವೀಕರಿಸಿದ ಪ್ರಮಾಣ ವಚನಕ್ಕೆ ತಕ್ಕಂತೆ ಡಾಕ್ಟರೀತನ ಮಾಡುವ ಡಾಕ್ಟರು ! ಒಬ್ಬ ಪ್ರಾಮಾಣಿಕ ಡಾಕ್ಟರು ಎಂದೇ ಜನಮನ್ನಣೆ ಗಳಿಸಿದ್ದ ಅಸಾಮಿ !
ಆ ದಿನ ಆ ಡಾಕ್ಟರಲ್ಲಿಗೆ ಬಂದವನು ಒಬ್ಬ ರೋಗಿ ; ಹೆಸರು ಗುಂಡೂ ಸಾವಂತ !
ಉಚಗಾವಿಯ ಗ್ರಾಮದೇವತೆ ಉಗ್ರಸ್ವರೂಪಿಣಿ. ಆ ದೇವತೆಗೊಂದು ದೇವಸ್ಥಾನ. ವರ್ಷದಲ್ಲಿ ಶ್ರಾವಣ ಮಾಸವೊಂದನ್ನು ಬಿಟ್ಟು ಉಳಿದ ಹನ್ನೊಂದು ತಿಂಗಳಿನ ನಲವತ್ತ್ನಾಲ್ಕು ವಾರಗಳಲ್ಲಿ ಎಂಬತ್ತೆಂಟು ಸಲ ಅಲ್ಲಿ ಜಾತ್ರೆ ನೆರೆಯುತ್ತದೆ !
ಬಂಧುಗಳ ಕರೆಯನ್ನು ಮನ್ನಿಸಿ ಗುಂಡೂ ಸಾವಂತ ಗ್ರಾಮದೇವತೆಯ ಜಾತ್ರೆಗೆಂದು ಉಚಗಾವಿಗೆ ಹೋಗಿದ್ದ ! ಅಲ್ಲಿಯ ದೇವಿಗೆ ಮಾಂಸಾಹಾರವೇ ನೈವೇದ್ಯ ! ಊರಿನ ಪ್ರತಿಯೊಬ್ಬರೂ ಊರದೇವಿಗೆ ಕುರಿಯನ್ನು ಬಲಿ ನೀಡಿ, ರಾತ್ರಿಯಲ್ಲಿ ಭರ್ಜರಿ ಮಾಂಸದಡುಗೆ ಮಾಡುತ್ತಿದ್ದರು ! ಊರಿಗೆ ಊರೇ ಮಸಾಲೆ ಮಾಂಸದ ವಾಸನೆಯಲ್ಲಿ ಪಾವನವಾಗುತ್ತಿತ್ತು ! ಮಾಂಸದಡುಗೆ ಇದೆ ಎಂದರೆ ಸಾರಾಯಿ ಇಲ್ಲದಿದ್ದರೆ ನಡೆಯುತ್ತದೆಯೇ ? ಸಾರಾಯಿ ತುಂಬಿ ಹರಿಯುತ್ತಿತ್ತು !
ಮಂಗಳವಾರ ಮತ್ತು ಶುಕ್ರವಾರ ಆ ದೇವಿಯ ವಾರಗಳು. ಆ ದಿನಗಳಲ್ಲಿ ಸಾರಾಯಿ ಮಾರಾಟಗಾರರಿಗೆ ಶುಕ್ರದೆಸೆ ! ಬುಕ್ಯಾಳದ ಸಾರಾಯಿ ತುಂಬಿದ ಟ್ಯೂಬ್‍ಗಳು ಊರ ಹೊರಗಿನ ಮಾವಿನ ತೋಪಿನಲ್ಲಿ ಒಟ್ಟಿದ್ದ ಬಣವೆಗಳಲ್ಲಿ ಅಥವಾ ಗೂಡುಗಳಲ್ಲಿ ತುಂಬಿರುತ್ತಿದ್ದವು ! ಜೊತೆಗೆ ಸರಕಾರಿ ಪರ್ಮಿಟ್ಟಿನ ಸಾರಾಯಿ ಕೂಡ ಇರುತ್ತಿತ್ತು !
ತಾವು ಆಮಂತ್ರಿಸಿದ ಬಂಧು-ಬಾಂಧವ-ಮಿತ್ರರನ್ನು ಆ ಊರಿನ ಮಂದಿ ಗ್ಲಾಸಿನ ಮೂಲಕವೇ ಸ್ವಾಗತಿಸುತ್ತಿದ್ದರು ! ಗುಂಡೂ ಸಾವಂತನಿಗೂ ಅದೇ ರೀತಿಯ ಸ್ವಾಗತ ಸಿಕ್ಕಿತ್ತು ! ಸ್ವಂತ ದುಡ್ಡಿನಲ್ಲಿ ಸಾರಾಯಿ ಕುಡಿಯಲು ಹಿಂದುಮುಂದೆ ನೋಡುತ್ತಿದ್ದ ಗುಂಡೂ ಜಾತ್ರೆಯ ನಿಮಿತ್ಯವಾಗಿ ಪುಕ್ಕಟೆ ಸಿಕ್ಕ ಸಾರಾಯಿಯನ್ನು ಮನಸೋ ಇಚ್ಚೆ ಕುಡಿದೇ ಕುಡಿದ ! ಆಮೇಲೆ ಸಾಕೆನಿಸುವಷ್ಟು ಮಟನ್ ಊಟ !
ಸಾರಾಯಿ ಕುಡಿದು, ಕುರಿಯ ಮಾಂಸದುಟವನ್ನು ಮುಗಿಸಿಕೊಂಡು ತನ್ನ ಮನೆಗೆ ಮರಳಿದ ಗುಂಡೂ ನೆಲ ಹಿಡಿದು ಮಲಗಿಯೇ ಬಿಟ್ಟ ! ಅತಿಯಾದರೆ ಅಮೃತವೂ ವಿಷವಾಗುತ್ತದೆಯಲ್ಲವೆ ? ಪುಕ್ಕಟೆಯಾಗಿ ಸಿಕ್ಕ ಸಾರಾಯಿ ಮತ್ತು ಕುರಿ ಮಾಂಸದ ಫೀಸುಗಳ ಭರ್ಜರಿ ಊಟ ! ಅತಿಯಾಗಲು ಇನ್ನೇನು ಬೇಕು ?
ವಾಂತಿ-ಭೇದಿ ಸುರುವಾಗಿ ಸುಸ್ತಾಗಿ ಹೋದ ಗುಂಡೂ !
ಗಂಡನ ಆವಸ್ಥೆ ಕಂಡ ಆತನ ಹೆಂಡತಿ ಶಟುಲಿ ಕೈ-ಕಾಲು ಕಳೆದುಕೊಂಡಂತಾದಳು ! ದುಃಖತಪ್ತ ಆಕೆ ಅಕ್ಕ-ಪಕ್ಕದವರ ಸಹಾಯದಿಂದ ಗಂಡನನ್ನು ಡಾ. ಸರನೋಬತ್ ಕಡೆ ಕರೆದುಕೊಂಡು ಬಂದಿದ್ದಳು !
*****
ಗುಂಡೂನನ್ನು ಪರೀಕ್ಷೆ ಮಾಡಿದ ಡಾ. ಸರನೋಬತ್ ಏನೋ ಹೇಳಬೇಕು ಎನ್ನುವಷ್ಟರಲ್ಲಿಯೇ ಅಲ್ಲಿಗೆ ನಾರಾಯಣ ಪಾಟೀಲನ ಆಗಮನವಾಯಿತು !
ಪಂಢರಪುರದ ವಾರಕರಿಯಾದ ನಾರಾಯಣ ಪಾಟೀಲ ಕೊರಳಲ್ಲಿ ತುಳಸಿ ಮಾಲೆ, ಹಣೆಗೆ ಗಂಧ ಧರಿಸಿಕೊಂಡು ಮಹಾರಾಜನಂತೆ ಬೈಕಿನ ಮೇಲೆ ಅಲ್ಲಿಗೆ ಬಂದಿದ್ದ ! ನಿಜವಾಗಿಯೂ ಆತನನ್ನು ಎಲ್ಲರೂ ಸಾಧು-ಸಂತರಿಗೆ ಕರೆಯುವಂತೆ ಮಹಾರಾಜ ಎಂದೇ ಕರೆಯುತ್ತಿದ್ದರು !
ಆತನ ಜೊತೆಯಲ್ಲಿ ಸುಂದರವಾದ ಹರೆಯದ ಹುಡುಗಿ ಬೇರೆ ಇದ್ದಳು !
ಆಕೆ ಆತನ ಹೆಂಡತಿಯ ತಂಗಿ !
ಬಂದದ್ದು ಒಂದು ಸಿರೀಯಸ್ ಕೇಸು ಎಂಬುದು ಆ ಹುಡುಗಿಯ ಮುಲುಕಾಟದಿಂದಲೇ ಕಂಡುಬರುತ್ತಿತ್ತು ! ಡಾಕ್ಟರ್ ಸರನೋಬತ್ ತಡ ಮಾಡದೇ, ತನ್ನ ಸಹಾಯಕಿಗೆ ಗುಂಡೂನನ್ನು ನೋಡಿಕೊಳ್ಳಲು ಹೇಳಿ, ನಾರಾಯಣ ಪಾಟೀಲನ ಕಡೆ ಬಂದ. ಇಬ್ಬರನ್ನೂ ಒಳಗಿನ ರೂಮಿಗೆ ಕರೆಯಿಸಿಕೊಂಡ ಡಾ. ಸರನೋಬತ್ ವಿಚಾರಿಸತೊಡಗಿದ.
“ಏನ್ ಅಂತೀರಿ ನಾರಾಯಣರಾವ್, ಏನ್ ಸಮಾಚಾರಾ ?”
“ನೋಡ್ರಿ ಡಾಕ್ಟರ್ ಸಾಹೇಬ್ರ, ನಾ ಈ ತುಳಸೀ ಮಾಲಿ ಮ್ಯಾಲ ಆಣಿ ಮಾಡ್ಯ ಹೇಳ್ತೇನಿ... ..”
ಡಾಕ್ಟರು ನಗುತ್ತಲೇ ಹೇಳಿದ, “ಅಲ್ರಿ, ನೀವ್ ಮಹಾರಾಜ ಅದೇರಿ. ಮಾಲಿ ಮ್ಯಾಲ ಆಣೀ ಮಾಡೂ ಅವಶ್ಯಕತಾನ ಇಲ್ಲ. ಈಗ ಹೇಳ್ರಿ ನಿಮ್ಮ ಇಬ್ಬರದಾಗ ಯಾರ್ಗೆ ಏನಾಗೇದ ?
“ಡಾಕ್ಟರ್ ಸಾಹೇಬ್ರ, ಈಕೀ ನನ್ನ ಮೇವಣ್ಯಾಳ್ತಿ. ದ್ರೌಪತಿ ವಾಘಮಾರೆ ಅನ್ನೂದು ಈಕೀ ಹೆಸ್ರು. ಈಗ ಎರಡ್ಮೂರ ದಿವ್ಸದಿಂದ ಈಕೀ ಭಾssಳ ತ್ರಾಸ ಮಾಡ್ಕೊಳ್ಳಾಕತ್ತಾಳು. ಒಮ್ಮಿಂದೊಮ್ಮಲೇ ಚೀರಾಕss ಸುರು ಮಾಡ್ತಾಳು !”
“ಅಂಥಾದ್ದೇನಾಗೇದ ಹೇಳ್ರ್ಯಲಾ ?”
“ಹೊಟ್ಟಿ ನೋಯ್ಸತೇತಿ ಅಂತ ಹೇಳ್ತಾಳ್ರಿ. ಭಾಳ ನೋಸತೇತಿ. ಹೊಟ್ಟ್ಯಾಗ ಗಂಟಾಗೇತಿ ಅಂತಾಳು ! ಯಾಡ್ ದಿವ್ಸದಿಂದ ಬರೀ ಇದನ ನೋಡ್ಯss ನೋಡ್ಯ ನಂಗೂ ಅದss ಸಂಸೇ ಬರಾಕತ್ತೇತಿ. ಡಾಕ್ಟರ್ ಸಾಹೇಬ್ರ, ಏನಾರ ಮಾಡ್ರಿ, ಮದಲ ಈಕೀ ಹೊಟ್ಟ್ಯಾಗಿಂದ ಗಂಟ ತಗದ ಹಾಕ್ರಿ. ಖಾಲಿ ಫುಕ್ಕಟ ಕಿರಿಕಿರಿ ಸಾಕಾಗೇತಿ !”
“ಈಕೀ ನಿಮ್ಮ ಮನ್ಯಾಗ ಇರ್ತಾಳೇನ್ರಿ ?”
“ಹೌಂದ್ರಿ. ಈಗ ನಮ್ಮ ಮನ್ಯಾಗ ಅದಾಳು. ನನ್ನ ಧರ್ಮಪತ್ನಿ ಮಂಜುಳಾ ಡೆಲಿವರಿ ಸಲುವಾಗಿ ತವರ್ಮನಿಗಿ ಹೋಗ್ಯಾಳು. ಮದಲ್ನೆ ಡೆಲಿವರಿ ನೋಡ್ರ್ಯ ತವರ್ಮನ್ಯಾಗ ಆಗಬೇಕನ್ನೂದು ಪ್ರಥಾ ಏತಿ. ಈಗ ಆಕೀ ಹೋಗಿ ಮೂರ ತಿಂಗ್ಳಾತ್ರಿ. ನಮ್ಮ ಮಾಂವ ಭಾಳ ಕಾಳಜಿ ಇರೂ ಮನಿಸ್ಯಾ. ಎಲ್ಲಾರ್ದೂ ಕಾಳಜಿ ಮಾಡ್ತಾನು ! ಜೋಡಿ ಇಲ್ಲದಿರಕ ಹೊಲಮನಿ ಕೆಲಸದಾಗ ನನ್ನ ಹೊಟ್ಟಿಪಾಡಿಂದ ಹೈರಾಣ ಆಗ್ತೇತಿ ಅಂತ, ಅವರss ಈ ದ್ರೌಪದೀನ ನಮ್ಮ ಮನ್ಯಾಗ ಇಟ್ಟ ಹೋಗ್ಯಾರು ! ಹಂಗಿದ್ರೂ ನಾ ಏನ ಸುಮ್ನಿಲ್ಲ. ಈಕೀ ಬಗ್ಗಿ ಭಾಳಂದ್ರ ಭಾಳ ಕಾಳಜಿ ಮಾಡ್ತೇನಿ. ಈಕೀನೂ ನಂದ ಭಾಳ ಕಾಳಜಿ ಮಾಡ್ತಾಳು ! ನೀವ್ ನೋಡಾಕತ್ತೇರಲ್ಲ, ನೋಡಾಕ ಎಷ್ಟ ಸುಂದರ ಅದಾಳು ಈಕಿ ! ಹೆಂಗ ಸುಂದರ ಅದಾಳೋ ಹಂಗ ಮನ್ಯಾಗೀನ ಎಲ್ಲಾ ಕೆಲಸಾನೂ ಮಾಡೋದ್ರಾಗ ಭಾssಳ ಹುಶಾರಿ !
ನಮ್ಮ ಮಾಂವ್ಗ ಕಂಡಾಪಟ್ಟಿ ಜಮೀನ ಏತಿ. ಕುಂತ ತಿಂದ್ರೂ ಕರಗುಲ್ಲದಷ್ಟ ಸಂಪತ್ತ ಏತಿ. ಆದರ ಅವ್ರಿಗಿ ಗಂಡ ಮಕ್ಳ ಇಲ್ರಿ. ಯಾಡ್ಡೂss ಹೆಣ್ಣಮಕ್ಕಳಾನ ಅದಾವು ! ನನ್ನ ಧರ್ಮಪತ್ನಿ ಮಂಜುಳಾ ಮತ್ತ ಈಕೀ ದ್ರೌಪದಿ. ಇಬ್ಬರ ! ಗಂಡಮಕ್ಕಳ ಇಲ್ಲಂತ ನಮ್ಮ ಮಾಂವ್ನ ಅಣತಮರು ಅಂವ್ನ ಆಸ್ತಿ ಕಸಗೊಳ್ಳಾಕ ತಯಾರ ಆಗ್ಯಾರು ! ಆ ಅಣತಮರು ಭಾಳ ಕೆಟ್ಟವ್ರ ಅದಾರು. ನಮ್ಮ ಮಾಂವಗ  ಮ್ಯಾಲಿಂದ ಮ್ಯಾಲ ತ್ರಾಸ್ ಮಾಡ್ತಿರ್ತಾರು ! ಡಾಕ್ಟರ್ ಸಾಹೇಬ್ರ, ನೀವ್ ನೋಡ್ಬೇಕರಿ, ದರ ಅಮಾಸಿಗಿ ಅವ್ರು ಮಾಟಾ ಮಾಡ್ಸಿ ನಮ್ಮ ಮಾಂವನ ಮನಿ ಮುಂದ ಒಗಿತಾರು ! ಟೆಂಗಿನಕಾಯಿ, ಸೂಂಜಿ ಚುಚ್ಚಿದ ಲಿಂಬಿಕಾಯಿ, ಗುಲಾಲದಾಗ ಮಾಡಿದ ಅನ್ನ, ಕರೀಗೊಂಬಿ ಹೀಂಗ್ ಏನೇನೋ ವಿಚಿತ್ರ ವಿಚಿತ್ರ ವಸ್ತುಗೋಳ್ನ ನಮ್ಮ ಮಾಂವ್ನ ಮನಿ ಆಜೂಬಾಜೂ ಬಿದ್ದಿರ್ತಾವು ! ಹಿಂಗಾಗಿ ನಮ್ಮ ಮಾಂವ್ನ ಮನ್ಯಾಗ ಭಾಳ ತ್ರಾಸ್ ಆಗಾಕತ್ತಾವು !
ನಮ್ಮ ಅತ್ತಿಗಿ ಭಾಳ ತ್ರಾಸ ಆಗೇತಿ. ಮಾಂವ್ಗೂ ತ್ರಾಸ್ ಏತಿ. ಬೆಳಗಾಂವದಾಗಿನ ಭಾಳ ಡಾಕ್ಟರ್ ಕಡೀ ಇಬ್ಬರೂನು ತೋರ್ಸೇವಿ. ರೊಕ್ಕ ಇರೂ ಪೆಸೆಂಟ್ ಸಿಕ್ರ ಅವಶ್ಯಕತಾ ಇರಲಿಕ್ಕಂದ್ರೂ ಏನೇನೋ ತಪಾಸ ಮಾಡಿ ಪೆಸೆಂಟ್‍ಗೋಳ್ನ ಲುಟಾಸ್ತಾರು ! ಬಿ.ಪಿ., ಶುಗರ್ ಇಲ್ಲಿಕಂದ್ರೂ ಅದಾವಂತ ಹೇಳಿ ಹಗಲಿ ದರೋಡಿ ಮಾಡ್ತಾರು ಡಾಕ್ಟರ್ ಸಾಹೇಬ್ರ, ನಾ ಅಂತೂ ಹೇಳಿ ಕೇಳಿ ಮಹಾರಾಜಾ ಮನಿಷ್ಯಾ. ಬೇಕಾರ ನಾ ಆಣಿ ಮಾಡ್ಯ ಹೇಳ್ತೇನಿ ; ನಮ್ಮ ಮಾಂವ್ನ ಮನ್ಯಾಗ ಏನೇನ ತ್ರಾಸ ಆಗಾಕತ್ತಾವಲಾ ಅವುಗೋಳೀಗೆಲ್ಲ ಅವರ ಅಣತಮರು ಮಾಡಿಸಿದ ಮಾಟಾssನ ಕಾರಣ ಏತಿ ! ದೇವ್ರಾಣಿರೀಪಾ, ಅವ್ರನೂ ನಿಮ್ಮ ಕಡೀನ ತೋರ್ಸಕ ಕರಕೊಂಡ ಬರಾಂವದೇನಿ !”
ದೀರ್ಘವಾಗಿ  ಹೇಳಿದ ನಾರಾಯಣನ ಆಮತು ಕೇಳಿ ಡಾಕ್ಟರ ಮನಸ್ಸು ದ್ವಂದ್ವಕ್ಕೆ ಸಿಲುಕಿತು !
“ನಾರಾಯಣರಾವ್, ನೀವ್ ಸಂತ ಮಹಾರಾಜ ಇದ್ದೇರಿ. ಆದರ ಮ್ಯಾಲಿಂದ ಮ್ಯಾಲ ದೇವ್ರಾಣಿ, ದೇವ್ರಾಣಿ ಅಂತ ಯಾಕ ಹೇಳ್ತೇರಿ ? ಮಂದಿ ಏನೋ ಮಾಡ್ಸಿದ್ದಾರು ಅಂತ ಎಂಥ ಭ್ರಮಾ ಇಟ್ಕೊಂಡೀರಲ್ಲ ? ಅಲ್ಲ, ಸಂತರು ಏನ ಹೇಳ್ಯಾರು ಗೊತ್ತದ ಏನ ನಿಮಗ ... ; ‘ಮೈಮ್ಯಾಗ ಬರೂ ಗಾಳಿಧೂಳಿ ಬರೀ ಸೋಗಿನ ದಾಳಿ !’ ಅಲ್ವೇನ್ರಿ ? ಜ್ಞಾನೇಶ್ವರ ಮಹಾರಾಜರು ಹೇಳ್ಯಾರಲ್ಲ ;  ‘ಮಂತ್ರದಿಂದ ವೈರಿ ಸತ್ತರ ಸೊಂಟಕ್ಯಾಕ ಉಡದಾರ ?’ ಮತ್ತೊಂದ ಕಡೀ ಅವರss ಹೇಳ್ಯಾರ, ‘ಹರಕೆ ಹೊತ್ತು ಮಗು ಹಡೆದರ ಕಾರಣ ಹೇಗಾಗುತ್ತಾನ ಪತಿ ?’ ಅಂದ್ರ ... ... ನಾ ಏನ ಹೇಳ್ಬೇಕಂತೀನಿ ಅಂದ್ರ ಈ ಹರಕೆ, ಮಾಟ-ಮಂತ್ರಾ ಎಲ್ಲಾ ಬಂಡಲ್ ಅದವು. ಇಂದ ಜಗತ್ತ ಎಷ್ಟ ಮುಂದ ಹೋಗೇದ ? ನೀವು ನೋಡ್ಯರ ಸಂತ ಮಹಾರಾಜ ಆಗಿನೂ ಹಳೀದನ್ನ ಜಗ್ಗಾಡ್ಕೊಂತ ಕುಂತೇರಿ ! ಮೂಢನಂಬಿಕಿ ಮ್ಯಾಲ ಯಾಕ ನಿಮಗ ನಂಬ್ಕಿ ? ವಿಚಿತ್ರ ಅನ್ನಿಸ್ತದ ನನಗ. ಕೊಳ್ಳಾಗ ಮಾಲಿ, ಕಾಲಾಗ ದಿಂಡಿ ಅಂತೇರಿ ; ಪಂಢರಪುರದ ವಾರಕರೀ ಅಂತೇರಿ ! ಮತ್ತ ಮ್ಯಾಲ ಇಂಥಾ ವಿಚಾರಗಳ್ನೆಲ್ಲ ನಂಬತೇರಿ ! ಖರೇ ಹೇಳ್ಬೇಕಂದ್ರ ನಿಮ್ಮಂಥವರ್ನ ನಾ ಎಂದೂ ನೋಡಿಲ್ಲ ! ಜ್ಞಾನೇಶ್ವರ, ತುಕಾರಾಮ, ಚೋಖಾಮೇಳ, ಸಾವತಾ, ಏಕನಾಥ ಮೊದಲಾದ ಸಂತ ಮಹರಾಜರು ಈ ಮೂಢನಂಬಿಕೆಯನ್ನು ಕಟುವಾಗಿ ಟೀಕಿಸ್ಯಾರ. ಇಂಥ ಹುಚ್ಚುತನದ ಕಲ್ಪನೆಗಳನ್ನ ತಿರಸ್ಕರಿಸ್ಯಾರ. ಕೆಟ್ಟ ರೂಢಿ, ಸಂಪ್ರದಾಯ ಅನ್ನೂ ಪ್ರವಾಹಗಳ ವಿರುದ್ಧ ಈಜಿ ನಮಗ ಅರಿವ ನೀಡೂ ಕೆಲಸಾ ಮಾಡ್ಯಾರು. ಇದೆಲ್ಲ ಬರೀ ಭ್ರಮಾ ನಾರಾಯಣರಾವ್ ! ಇದರಿಂದ ಇಡೀ ಸಮಾಜ ದುರ್ಬಲ ಆಗ್ತದ ಅಷ್ಟ !”
ಡಾಕ್ಟರು ತುಂಬ ವಿಷಯಗಳ ಮಾತನಾಡಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ. ಆದರೆ ಮೂರ್ಖನಾದ ಆ ನಾರಾಯಣರಾವ್ ಮಹಾರಾಜನಿಗೆ ಒಂದಿಷ್ಟೂ ತಿಳಿಯಲಿಲ್ಲ ! ಬದಲಿಗೆ ಆತ ಮತ್ತೇ ತನ್ನ ಹಳೇ ಹಾಡನ್ನೇ ಹಾಡುತ್ತ ಮೂರ್ಖತನದ ಸೂರು ಎಳೆದ !
“ಹಂಗಲ್ರಿss ಡಾಕ್ಟರ್ ಸಾಹೇಬ್ರ, ಈ ದ್ರೌಪದಿ ಮ್ಯಾಲ ಯಾರೋ ಮಾಟಾ ಮಾಡಿಸ್ಯಾರರೀ ! ಅದರ ಪ್ರಭಾವ ಇದೇತಿ. ಯಾರೋ ಮಾಟಾ ಮಾಡ್ಸಿ ಹೊಟ್ಟ್ಯಾಗ ಹಾಕ್ಯಾರಿ ! ರಾತ್ರಿ ಸರೋತ್ತಿನ್ಯಾಗ ಈಕೀ ಒದ್ದಾಡೋದೇನು, ಚೀರಾಡೋದೇನು ! ಹೊಟ್ಟ್ಯಾಗೀನ ಗಂಟದಿಂದ ಸಾಕಾಗೇತಿ ಅನ್ನೋದೇನು ! ಇದೆಲ್ಲ ಹೊಟ್ಟ್ಯಾಗೀನ ಗಂಟದss ತ್ರಾಸ ! ನಿಮಗ ಮಾಟಾ ಮಾಡ್ಸೂ ವಿಷ್ಯಾ ತಿಳ್ಯೂದಿಲ್ಲ ಬಿಡ್ರಿ ! ನೀವ್ ಈಕೀನ ಚೊಲೋತಂಗ ಚೆಕ್ ಮಾಡ್ರಿ. ಮತ್ತ ಹೊಟ್ಟ್ಯಾಗ ಇರೂ ಗಂಟಷ್ಟ ತಗದ ಬಿಡ್ರಿ ! ನಮ್ಮ ಮಾಂವ-ಅತ್ತೀಗಿ ಯಾಕ ಸುಮ್ನ ತ್ರಾಸ ಕೊಡೂದು ಅಂತ ನಾನss ಈ ಜವಾಬ್ದಾರಿ ಹೊತ್ಕೊಂಡೇನಿ. ಹೊಟ್ಟ್ಯಾಗಿಂದ ಅಷ್ಟ ನಿಕಾಲ ಮಾಡ್ರಿ”
“ನೀವ್ ಹೆಂಗ್ ಅಂತೇರಿ ಹಂಗ. ನಾ ಎಲ್ಲಾ ತಪಾಸ ಮಾಡ್ತೇನಿ. ಅಲ್ಲಿತಂಕಾ ನೀವೊಂದಿಷ್ಟ ಹೊರಗ ಹೋಗ್ರಿ”
“ಡಾಕ್ಟರ್ ಸಾಹೇಬ್ರ, ಫೀಜಿನ ಚಿಂತಿ ಮಾಡಬ್ಯಾಡ್ರಿ. ಎಷ್ಟಬೇಕೋ ಅಷ್ಟ ಖರ್ಚ ಮಾಡಾಕ ನಾ ತಯಾರಿದೇನಿ. ಈಕೀ ಚೊಲೋ ಆದರ ಸಾಕ ನೋಡ್ರಿ” ಎಂದು ನಾರಾಯಣರಾವ್ ತುಂಬ ಉತ್ಸುಕತೆಯಿಂದಲೇ ಹೇಳಿದ.
“ಓಕೆ, ಓಕೆ. ಆತಾತು. ನೀವ್ ಹೊರಗ ಕೂಡ್ರಿ. ನಾ ಚೆಕ್‍ಫ್ ಮಾಡ್ತೇನಿ” ಎಂದು ಹೇಳಿದ ಡಾಕ್ಟರು ದ್ರೌಪದಿಯೊಂದಿಗೆ ಚೆಕ್‍ಫ್ ರೂಮಿನೊಳಗೆ ಹೊಕ್ಕ !
*****
ಡಾಕ್ಟರ್ ಸರನೋಬತ್ ತುಂಬ ಚಾಣಾಕ್ಷ ವ್ಯಕ್ತಿ.
ಚಿಚ್ಚಿ ಅಂದ್ರ ಚಿಕನ್ ಅನ್ನೊದು ಆತನಿಗೆ ಗೊತ್ತು ! ಒಂದಿಷ್ಟು ಚೆಕಫ್ ಮಾಡುವಷ್ಟರಲ್ಲಿಯೇ ಹಕೀಕತ್ತು ಏನು ಎನ್ನುವುದು ಆತನಿಗೆ ಗೊತ್ತಾಗಿ ಹೋಗಿತ್ತು !
ದ್ರೌಪದಿಯ ಹೊಟ್ಟೆಯಲ್ಲಿ ಇರುವ ಗಂಟು ಬೇರೆಯೇ ಆಗಿದೆ !
ಆಕೆಗೆ ಇನ್ನೂ ಮದುವೆಯೇ ಆಗಿಲ್ಲ ; ಆದರೂ ಹೊಟ್ಟೆಯಲ್ಲಿ ಮುಲುಕಾಡುವ ಪಿಂಡ ಇದೆ !
ಹೇಗಾಯಿತು ಇದು ?
ಇದು ಮಾಟ ಮಾಡಿಸಿದ್ದಲ್ಲ !
ದ್ರೌಪದಿ ಯಾರೋ ಗಂಡಸಿನ ಜೊತೆ ಮೈತ್ರಿ ಮಾಡಿ, ಸಲ್ಲಾಪವಾಡಿ ಸುಖದಲ್ಲಿಯೇ ಗೊತ್ತಾಗದಂತೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಈ ಗಂಟು ಅಥವಾ ಪಿಂಡ ಬೆಳೆದು ನಿಂತಿದೆ !
ಇದು ಅನೈತಿಕ ಸಂಬಂಧದ ಪ್ರತಿಫಲವಲ್ಲದೇ ಬೇರೇನೂ ಅಲ್ಲ !
ದ್ರೌಪದಿಯನ್ನು ವಿಶ್ವಾಸಕ್ಕೆ ತೆಗದುಕೊಂಡ ಡಾ. ಸರನೋಬತ್ ಡಾಕ್ಟರು ಸತ್ಯವನ್ನು ಹೊತೆಗೆಯುವ ಪ್ರಯತ್ನ ಮಾಡಿದ ! ಆತ ಆತ್ಮೀಯವಾಗಿಯೇ ಮಾತನಾಡಿದ ;
“ನೋಡ ದ್ರೌಪದಿ, ನಿನ್ನ ರೋಗ ಭಾಳ ದೊಡ್ಡದು ! ಎಲ್ಲಾರಿಗೂ ತ್ರಾಸ ಮಾಡೂವಂಥದ್ದು ! ನಿಂದ ಮದ್ವಿ ಆಗಿಲ್ಲ ; ಆದರ ನಿನ್ನ ಹೊಟ್ಟ್ಯಾಗ ಪಿಂಡ ಬೆಳ್ಯಾಕತ್ತದ ! ಇದ ಹೆಂಗ ? ಮೂರ ತಿಂಗ್ಳಾದ್ರೂ ನೀ ಯಾಕ ಸುಮ್ಮನಿದ್ದೀ ? ಹಂಗ ನೋಡಿದ್ರ ಋತುಚಕ್ರದಾಗ ಒಂದೆರಡ ಪಾಳಿ ತಪ್ಪಿದ ಮ್ಯಾಲಾದ್ರೂ ನೀ ಒಂದಿಷ್ಟ ವಿಚಾರ ಮಾಡ್ಬೇಕಿತ್ತಲಾ ? ಆದರ ನೀ ಹಂಗ ಮಾಡಿಲ್ಲ ! ಖರೇ ಹೇಳ, ಇದೆಲ್ಲ ಭಾನಗಡಿ ಯಾರ್ದು ?”
ದ್ರೌಪದಿಗೆ ದುಃಖ ಒತ್ತರಿಸಿ ಬಂತು ! ಆಕೆ ಮುಳು ಮುಳು ಅಳುತ್ತಲೇ ಕತೆ ಹೇಳತೊಡಗಿದ್ದಳು !
“ಸರ್, ಇದೆಲ್ಲಾ ನಮ್ಮ ಮಾಮಾ ಮಾಡಿದ ಭಾನಗಡಿನ ! ನಮ್ಮ ಅಕ್ಕಾ ಡೆಲಿವರೀ ಸಲ್ವಾಗಿ ತೌರ್ಮನಿಗಿ ಹ್ವಾದ ಮ್ಯಾಲ, ಮಾಮಾನ ಹೊಟ್ಟೀದ ಹಾಲ್ ಆಗ್ಬಾರ್ದಂತ ನಮ್ಮ ಅಪ್ಪ ನನ್ನ ತಂದು ಇಲ್ಲಿಟ್ರು. ನಮ್ಮ ಮಾಮಾನ ಮ್ಯಾಲ, ನಮ್ಮ ಮನ್ಯಾವರ್ದು ಭಾಳಂದ್ರ ಭಾssಳ ವಿಶ್ವಾಸ ಇತ್ತು ! ಇವರ ಮಾರಾಜಾ ಅದಾರ ಅಂದ ಮ್ಯಾಲ ನಂಬ್ಕಿ ಇಡೂಲ್ಲದ ಏನ ಮಾಡ್ತಾರು ಹೇಳ್ರ್ಯಲ್ಲ ? ಆದರ ಮನಿಯೊಳಗ ನಮ್ಮಿಬ್ಬರ ನಡುವ ಪ್ರೇಮದ ರಂಗ ಹರದಾಡಿತು ! ಮನಿಯೊಳಗ ಇರಾವ್ರ ನಾವಿಬ್ರ ! ಹೊಲಕ್ಕ ಹೋಗಿ ಬಂದ ಇವ್ರು ನನ್ನ ಹಂತ್ಯಾಕ ಕರೀತಿದ್ರು ! ಎಣ್ಣಿ ಹಚ್ಚಿ ಮೈ ಮಾಲೀಸ್ ಮಾಡಾಕ ಹೇಳ್ತಿದ್ರು ! ತಲಿ ನೋಸಾಕತ್ತೇತಿ ಒರ್ಸು ಅಂತಿದ್ರು ! ನಾ ಬ್ಯಾರೆ ಏನೂ ವಿಚಾರ ಮಾಡೂಲ್ಲದ ಭಾಳ ವಿಶ್ವಾಸದಿಂದನ ಮಾಡತಿದ್ನಿ. ಆದರ ಸಾವಕಾಶ ನಮ್ಮ ಮಾಮಾ ಸಮತೋಲನ ಕಳ್ಕೊಂಡ್ರು ! ಗೊತ್ತಾಗದಂಗ ನನ್ನ ಹಾಸಿಗೀಗಿ ಎಳೆದ್ರು ! ನಾನೂ ಹರೇದ ಹುಡುಗಿ ! ನನ್ನ ವಿರೋಧ ಭಾಳ ದಿನ ಉಳಿಲಿಲ್ಲ ! ಹರೇದ ನನ್ನ ಮೈಯ್ಯಾಗನೂ ಹಸವ ಇತ್ತು ! ಪ್ರಕೃತಿ ನಿಯಮ ಮೀರಾಕ ಆಗದಿಲ್ಲ ! ಹಸವ ಹೆಚ್ಚಾತು ! .... ಮತ್ತ ಬ್ಯಾರೆ ಏನ ಆಗ್ತೇತಿ ಹೇಳ್ರ್ಯಲಾ ? ಏನ ಆಗಬಾರ್ದಿತ್ತಲಾ ಅದss ಆತು ! ಮೊದಲ ಸಲಾ ನನಗ ಕಾಂಡೋಮ್ ತೋರ್ಸಿ ಇದರಿಂದ ಹೊಟ್ಟೀಲಿ ಆಗೂದಿಲ್ಲ ಅಂತ ಮಾಮಾ ಹೇಳತ್ತಿದ್ರು ! ಇಬ್ರಿಗೂ ಸುಖಾ ಸಿಗಾಕತ್ತಿತ್ತು ! ನಾ ಮೋಹದ ಬಲ್ಯಾಗ ಬಿದ್ದೇನಿ ಅನ್ನೂ ಖಬರss ಇರ್ಲಿಲ್ಲ ! ಒಂದೆರಡಲ್ಲ ಭಾssಳ ರಾತ್ರಿಗೋಳು ಮೈ ಸುಖದಾಗ ಕಳದ ಹ್ವಾದೂ ! ಕಾಂಡೋಮ್‍ದಿಂದ ಯಾವ ತೊಂದ್ರೀನೂ ಇಲ್ಲ ಅಂತ ನನ್ನ ಗೆಳತ್ಯಾರ ಹೇಳೂದ ಕೇಳಿದ್ನಿ ! ಹಿಂಗಾಗಿ ದಿನ್ನಾ ಮೈ ಸುಖಾ ನಂಗೂ ಬೇಕ ಅನ್ನಸತಿತ್ತು ! ಆದರ ಆ ಸುಖದಾಗ ಕಾಂಡೋಮ್ ಏತ್ಯೋ ಇಲ್ಲೋ ತಿಳಿಲಾರ್ದ ಮೈ ಮರತ್ನಿ ! ಸುಖದಾಗ ಮೈ ಮರಿತಿದ್ರ ಫಲಾನ ಈ ಹೊಟ್ಟಿ !
ಸರ್, ಈಗ ಈ ಮಾಮಾ ನನ್ನೂ ಮದ್ವಿ ಆಗ್ತೇನು ಅಂತಾರು ! ಇಬ್ರನೂ ಖುಷಿಲೇ ಇಡ್ತೇನಿ ಅಂತಾರು ! ಈಗ ನೋಡ್ಯರ ಮಾಟಾ-ಮಂತ್ರ ಮುಂದ ಮಾಡಿ ತಾ ಬಚಾವ್ ಆಗಾಕ ನೋಡಾಕತ್ತಾರು ! ನನ್ನ ಈ ನರಕದಿಂದ ಪಾರ ಮಾಡ್ರಿ ಸರ್ ! ಇಲ್ಲಂದ್ರ ನಾ ಕೇರೀನೋ ಬಾಂವಿನೋ ನೋಡ್ಕೋಬೇಕಾಗ್ತೇತಿ ! ನಂಗ ಬ್ಯಾರೆ ಹಾದಿ ಇಲ್ಲ ... !”
*****
ಡಾ. ಸರನೋಬತ್‍ನಿಗೆ ನಡೆದಿರುವುದು ಏನು ಎಂಬುದು ಪಕ್ಕಾ ಗೊತ್ತಾಗಿ ಹೋಗಿತ್ತು ! ಆದರೆ ಮುಂದಿನ ದಾರಿ ಏನು ಎಂಬುದು ತಿಳಿಯಲಿಲ್ಲ ! ಆತ ನಾರಾಯಣರಾವ್‍ನನ್ನು ಒಳಗೆ ಕರೆಯಿಸಿದ.
“ನಾರಾಯಣರಾವ್, ಮಹಾರಾಜರ್ಹಂಗ ಸೋಂಗ ಹಾಕಿ ಮಾಟಾ-ಮಂತ್ರ ಮುಂದ ಮಾಡಿ ನೀವ್ ಭಾssಳ ಮೋಸಾ ಮಾಡೇರಿ ! ಪುಣ್ಯಕರ್ಮಕ್ಕ ಬೆನ್ನೆಲಬಾಗಿ ನಿಲ್ಲಬೇಕಾದ ನೀವss ಮಹಾರಾಜರ್ಹಾಂಗ ಸೋಂಗ ಹಾಕಿ ಭಾಳ ಕೆಟ್ಟ ಪಾಪಾ ಮಾಡೇರಿ ! ಈ ಹುಡ್ಗಿ ಹೊಟ್ಟ್ಯಾಗಿರೂ ಗಂಟು ಯಾರೋ ಮಾಟಾ ಮಾಡಿಸಿದ್ದಲ್ಲ ; ಅದು ನೀವss ಮಾಡಿದ ಪಾಪದ ಫಲಾ ! ಖರೇ ಹೇಳ್ಬೇಕಂದ್ರ ನಿಮ್ಮ ಹರಕತ್ತ ಕಂಡು ನನಗ ಹೇಸ್ಗಿ ಅನ್ನಿಸ್ಲಿಕ್ಕತ್ತದ ! ಭ್ರೂಣ ಹತ್ಯಾ ಮಹಾಪಾಪ ; ಆ ಪಾಪಾ ಮಾಡಂತ ನನಗ ಹೇಳ್ಕಲಿಕ್ಕತ್ತೀರಿ ? ನಿಮ್ಮ ಮಹಾರಾಜಗಿರಿಗಿ ಏನ ಅನ್ನಬೇಕೋ ತಿಳೀವಲ್ದು. ಈಗ ಸರಳ ನೀವ್ ಇಲ್ಲಿಂದ ಜಾಗಾ ಮಾಡ್ರಿ. ಇಲ್ಲಂದ್ರ ಪೋಲೀಸ್‍ರ್ನ ಕರ್ಸಬೇಕಾದೋತು !”
ಪೋಲೀಸು ಎಂಬ ಮಾತು ಕೇಳಿದ ತಕ್ಷಣ ನಾರಾಯಣನ ಮೈಯಿಂದ ನೀರು ಇಳಿಯತೊಡಗಿತು ! ಆತ ಲಗುಬಗೆಯಿಂದ ದ್ರೌಪದಿಯನ್ನು ಕರೆದುಕೊಂಡು ಆ ಆಸ್ಪತ್ರೆಯಿಂದ ಪಚಾರಾದ !
*****
ದ್ರೌಪದಿ ಹಠ ಹಿಡಿದು ಕುಳಿತ್ತಿದ್ದಳು !
“ನೀ ನಿರೋಧ ಹಾಕ್ಕೊಂಡ ಮ್ಯಾಲೂ ಇದ ಹ್ಯಾಂಗ ಆತು ? ಇದಕ್ಕ ಇನ್ನ ಉಳದಿರೋ ಹಾದಿ ಒಂದss ಒಂದ ; ಆತ್ಮಹತ್ಯೆ ! ಆದರ ಆತ್ಮಹತ್ಯಾ ಮಾಡ್ಕೊಳ್ಳಾಕೂ ಧೈರ್ಯಾ ಬೇಕಾಗ್ತೇತಿ. ಆ ಧೈರ್ಯಾನೂ ನಂಗಿಲ್ಲ ! ಇನ್ನ ನಿನ್ನ ಉಸಾಬರಿ ಸಾಕು. ನಾ ನಿನ್ನ ಬಿಟ್ಟ ಹೋಗ್ತೇನಿ”
ಸಿಟ್ಟಿನಿಂದ ಒಂದೇ ಸಮನೇ ಬೈಯ್ಯುತ್ತಲೇ ಇದ್ದ ದ್ರೌಪದಿ ಅದೇ ದಿನ ತನ್ನ ತವರಿಗೆ ಹೊರಟು ಹೋದಳು !
*****
ದ್ರೌಪದಿ ಹುಚ್ಚಿಯಂತಾಗಿದ್ದಳು !
ಅನ್ನ-ನೀರು-ನಿದ್ದೆಯ ಮೇಲಿನ ಆಕೆಯ ಲಕ್ಷ್ಯ ಹಾರಿ ಹೋಗಿತ್ತು ! ಕಾಲ ಉರುಳಿದಂತೆ ಆಕೆಯ ಪ್ರಕೃತಿ ಬಿಗಡಾಯಿಸತೊಡಗಿತ್ತು ! ಬರುಬರುತ್ತ ಆಕೆ ಯಾರೊಂದಿಗೂ ಮಾತನಾಡದೇ ಮೌನಿಯಾಗಿರತೊಡಗಿದಳು ! ನಿಜವಾಗಿ ಮೂಕಿಯೇ ಆದಳು ! ಆಕೆಯನ್ನು ಮಾತನಡಿಸುವ ಪ್ರಯತ್ನದಲ್ಲಿ ತಂದೆ-ತಾಯಿ ಸೋತು ಹೋದರು !
‘ಹೇಗೆ ಹೇಳಬೇಕು ?’
‘ಏನು ಹೇಳಬೇಕು ?’
‘ತಂದೆ-ತಾಯಿ ಏನು ತಿಳಿದುಕೊಳ್ಳಬಹುದು ?’
‘ಅಕ್ಕ ಸುಮ್ಮನಿರುತ್ತಾಳೆಯೇ ?’
ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಪೇಚಿನಲ್ಲಿ ದ್ರೌಪದಿ ಸಿಲುಕಿಕೊಂಡಿದ್ದಳು !
ಅತ್ತ ದರಿ ; ಇತ್ತ ಪುಲಿ !
ತುಂಬ ಪ್ರಯತ್ನದ ನಂತರ ಆಕೆ ಮೌನವನ್ನು ಮುರಿದಳು !
ಅಳಿಯನ ಅಯೋಗ್ಯತನ ಕೇಳಿ ತಂದೆ-ತಾಯಿಯ ತಲೆ ಗಿಮಿಗಿಮಿ ತಿರುಗತೊಡಗಿತ್ತು ! ಅವರು ಮೂರ್ಚೆ ಬೀಳುವುದೊಂದೇ ಬಾಕಿ ಇತ್ತು ! ಇದರಿಂದ ಹೇಗೆ ಪಾರಾಗಬೇಕು ಎಂಬ ಚಿಂತೆ ಅವರನ್ನು ಆವರಿಸಿಕೊಂಡು ಹಿಂಡಿ ಹಿಪ್ಪಿ ಮಾಡಿತ್ತು ! ಆದರೆ ಯಾವ ಹಾದಿಗಳೂ ಅವರ ಮುಂದೆ ಸುರಳಿತವಾಗಿ ತೆರೆದುಕೊಳ್ಳಲಿಲ್ಲ ! ಹಾಗೆ ಹೀಗೆ ಮಾಡಿ ಕೊನೆ ಅವರೊಂದು ನಿರ್ಧಾರಕ್ಕೆ ಬಂದರು ;
ದ್ರೌಪದಿಯನ್ನು ನಾರಾಯಣನಿಗೇ ಮದುವೆ ಮಾಡಿಕೊಡಬೇಕು !
*****
ದ್ರೌಪದಿ ಭಿಡೆ ಬಿಟ್ಟೇ ಹೇಳಿದಳು ;
“ಮಾಮಾ ನನ್ನ ಜೋಡಿ ಲಗ್ನಾ ಮಾಡ್ಕೋತೇನಿ ಅಂತ ಆಣೀ ಮಾಡ್ಯಾಣು ! ಅಂವ್ನ ಜೋಡೀನ ನಾ ಸಂಸಾರ ಮಾಡಾಕಿ. ಯಾವದರ ಗುಡ್ಯಾಗ ಯಾಕಾಗವಲ್ದು ನಮ್ಮ ಲಗ್ನಾ ಮಾಡ್ಸರಿ. ಲಗ್ನಾ ಆದ್ರ ಎಲ್ಲಾ ಚೊಲೋ ಆಗ್ತೇತಿ”
ತನ್ನ ಅಳಿಯನನ್ನು ಕರೆಯಿಸಿಕೊಂಡು ಯಾರಿಗೂ ಗೊತ್ತಾಗದಂತೆ ವೈಜನಾಥ ದೇವಾಲಯದಲ್ಲಿ ಮದುವೆ ಮಾಡಿ ಬಿಡಬೇಕು ಎಂದು ಆಕೆಯ ಅಪ್ಪನೂ ನಿರ್ಧರಿಸಿದ !
ಆದರೆ ಮಂಜುಳಾ ?
ಮಂಜುಳಾ ವಿರೋಧಿಸಿದಳು !
“ನನ್ನ ತಂಗೀನ ಸಂವತಿ ಅಂತ ನಾ ಹೆಂಗ್ ಒಪ್ಕೊಳ್ಲಿ ? ಇಷ್ಟ ದಿವಸ ಅಕ್ಕಾ-ತಂಗಿ ಅಂತ ಪ್ರೀತಿಲೇ ಬದಕೇವಿ. ಈಗ ಸಂವತೇರ ಆಗಿ ಬದಕಬೇಕೇನ ? ಸಂವತಿ ಅಂದ್ರ ಮನ್ಯಾಗ ಜಗಳ ಆಗೇ ಆಗ್ತಾವ ! ನಾ ಈ ಲಗ್ನಕ ಒಪ್ಪೂದಿಲ್ಲ ತಿಳ್ಕೋರಿ”
ಮಂಜುಳಾ ಮಾತು ಕೇಳಿದ ಮೇಲೆ ನಾನಾ ಪರಿಯಿಂದ ಆಕೆಯನ್ನು ಸಮಾಧಾನಿಸಿ, “ಸಧ್ಯ ಇರೋದ ಇದೊಂದ ಹಾದಿ. ಇಲ್ಲಂದ್ರ ಎರಡೂ ಮನೆತನಗಳ ಮಾನ-ಮರ್ಯಾದೆ ಹರಾಜಾಗ್ತೇತಿ” ಎಂದಾಗ ಆಕೆ ಗತ್ಯಂತರವಿಲ್ಲದೆ ಹ್ಞೂಂಗುಟ್ಟಿದಳು !
*****
ಅಳಿಯ ನಾರಾಯಣನನ್ನು ಊರಿಗೆ ಕರೆಯಿಸಲಾಯಿತು !
ಆತನ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ಆತನಿಂದಲೇ ಆದ ಈ ಹಲ್ಕಾ ಕೆಲಸಕ್ಕಾಗಿ ಜಗಳಾ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿ ಹೇಳಿದರು !
ನಾರಾಯಣ ತಿರುಗಿ ಬಿದ್ದ !
ಎಲ್ಲವನ್ನೂ ಕೇಳಿದ ಆತನಿಗೆ ಒಂದುಕ್ಷಣ ಒಳ್ಳೆಯದೇ ಆಯಿತು ಎನಿಸಿದರೂ ಮಹಾರಾಜ ಮಂಡಳಿಯಲ್ಲಿ ತನಗೆ ಸ್ಥಾನಮಾನ ಸಿಗಲಾರದು ; ಅದರಿಂದ ತಾನು ದೂರ ಉಳಿಯಬೇಕಾಗುತ್ತದೆ ಎಂದುಕೊಂಡ. ಆತನ ಕಪಟ ಸಂತತನ ಜಾಗೃತವಾಗಿತ್ತು. ತನ್ನದೇನೂ ತಪ್ಪಿಲ್ಲ ಎಂದು ವಾದಿಸತೊಡಗಿದ !
“ನೀವೇನ ಆಟಾ ಸುರು ಮಾಡೇರಿ ? ನಿಮ್ಮ ಮಗ್ಳ ಎಲ್ಲಿ ಸೆಗಣಾ ತಿಂದ ಬಂದಾಳೋ ಯಾರ್ಗಿ ಗೊತ್ತ ! ಆಕೀ ಮಾತ ಕೇಳಿ ನೀವ್ ಆ ಸೆಗಣಾ ನನ್ನ ಮ್ಯಾಲ ಚೆಲ್ಲೂ ವಿಚಾರ ಮಾಡೇರಿ ? ಜನಕ್ಕ ಅಂಜದಿದ್ರೂ ಮನಕ್ಕಾದ್ರೂ ಅಂಜಬೇಕಲಾ ! ನನ್ನ ಮ್ಯಾಲ ಇಲ್ಲದ ಆರೋಪ ಹೊರ್ಸಬ್ಯಾಡ್ರಿ. ಯಾರ ಮುಂದಾರ ಇದ್ನ ಹೇಳ್ಯರ ಕೇಳಿದೋರು ನನ್ನ ಮುಖಕ ಸೆಗಣಿ ಬಳದಾರಲಾ ! ಇದರಾಗ ನನ್ನ ಸೇರ್ಸಕೋಬ್ಯಾಡ್ರಿ. ಮುಂದ ನನ್ನ ಏನೂ ಕೇಳಬ್ಯಾಡ್ರಿ. ಏನ್ ಮಾಡ್ಕೋತಿರೋ ಮಾಡ್ಕೋರಿ”
ಅವಸರ ಅವಸರವಾಗಿಯೇ ಎಲ್ಲವನ್ನೂ ಒದರಿ ತರತುರಿಯಲ್ಲೇ ಆತ ಅಲ್ಲಿಂದ ಹೊರಟು ಹೋದ !
ಈಗ ಮಾತ್ರ ಕುಟುಂಬ ಮೇಲೆ ಆಕಾಶವೇ ಹರಿದು ಬಿದ್ದಂತಾಯಿತು ! ಹೇಗಾದರೂ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದ ಹುಮ್ಮಸ್ಸು ಕರಗಿ ದುಸುಮುಸುಗಳು ಆರಂಭವಾದವು !
*****
ಇದ್ದಕ್ಕಿದ್ದಂತೆ ಒಂದು ದಿನ ಮನೆಯಲ್ಲಿ ಹಾಹಾಕಾರವೇ ಎದ್ದಿತು !
ಬೆಳಗಾಗಿ ತುಂಬ ಹೊತ್ತದರೂ ದ್ರೌಪದಿ ಎದ್ದಿಲ್ಲ ಎಂದುಕೊಂಡು ಮನೆಯವರು ಬಾಗಿಲು ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದರು. ಆದರೆ ತುಂಬ ಹೊತ್ತು ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ! ಗಾಭರಿಯಾದ ಮನೆಯವರು ಬಾಗಿಲು ಮುರಿದು ಒಳಹೊಕ್ಕರು !
ದ್ರೌಪದಿ ಹೆಣವಾಗಿ ಮಲಗಿದ್ದಾಳೆ !
ಅಸ್ತವ್ಯಸ್ತಗೊಂಡ ಆಕೆಯ ದೇಹ ಒದ್ದಾಡಿ ಒದ್ದಾಡಿ ಹೆಣವಾಗಿದೆ ! ಮನೆಯಲ್ಲಿದ್ದ ಕೀಟನಾಶಕ ಔಷಧಿಯ ಡಬ್ಬಿ ಅಲ್ಲೇ ಪಕ್ಕದಲ್ಲಿ ಉರುಳಿ ಬಿದ್ದಿತ್ತು !
ಇಡೀ ಮನೆ ರೋಧಿಸತೊಡಗಿತು !
ಅಕ್ಕಪಕ್ಕದವರು ಸೇರಿದರು. ತಮ್ಮ ಮನೆಯ ಮಾನ ಉಳಿಸಿಕೊಳ್ಳಲು ಹಾರ್ಟ್ ಅಟ್ಯಾಕ್ ಆಗಿ ತನ್ನ ಮಗಳು ತೀರಿಕೊಂಡಿದ್ದಾಳೆ ಎಂದು ತಂದೆ-ತಾಯಿ ಹೇಳಿಕೊಂಡು ಅತ್ತರು !
ಮನೆಯ ಮಾನವೇನೋ ಉಳಿಯಿತು !
ಬಂಗಾರದಂಥ ಮಗಳು ಬದುಕುಳಿಯಲಿಲ್ಲ !
ದ್ರೌಪದಿ ಸಹಜವಾಗಿ ಸಾಯದೇ ಮಹಾರಾಜ ಅನ್ನಿಸಿಕೊಂಡ ನಾರಾಯಣನ ಹಲ್ಕಟ್ ಕೆಲಸದಿಮದ ಹೆಣವಾಗಿದ್ದಳು !
ಹೊರಜಗತ್ತಿಗೆ ಇದು ತಿಳಿಯಲೇ ಇಲ್ಲ ! ನಾರಾಯಣ ಮಹಾರಾಜನ ಸಂತತನ ಅಭಾದಿತವಾಗಿ ಮುಂದುವರಿಯಿತು !
ನಾರಾಯಣನಂತಹ ಸೋಗಲಾಡಿ ಜನರನ್ನು ಕಂಡೇ ಸಂತ ತುಕಾರಾಮ ಒಂದು ಹೇಳುತ್ತಾನೆ;
‘ತುಕಾನ ಮಾತಿದು ಇಂಥ ನರರನ್ನು
ಚಪ್ಪಲಿಯಿಂದ ಹೊಡೆಯಬೇಕು !’
*****

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.