Saturday, January 26, 2013

ಸಾಹಿತ್ಯ ಸಂಭ್ರಮಕ್ಕೆ ತಕ್ಷಣ ಪ್ರತಿಕ್ರಿಯಾತ್ಮಕ ವಿರೋಧ ಬೇಕು !

ಡಾ. ಸಿದ್ರಾಮ ಕಾರಣಿಕ

'ಸಾಹಿತ್ಯ ಸಂಭ್ರಮ ಹುಟ್ಟು ಹಾಕಿರುವ ಪ್ರಶ್ನೆಗಳು' ಎಂಬ ಎಂ.ಡಿ. ಒಕ್ಕುಂದ ಅವರ ಲೇಖನ (ವಿ.ಕ-25-01-2013) ಸಕಾಲಿಕವಾಗಿದೆ. ವ್ಯಾಪಾರೀ ಮನೋಭಾವವನ್ನಿಟ್ಟುಕೊಂಡು ಸಾಹಿತ್ಯವನ್ನು, ಸಾಹಿತ್ಯ ಚರ್ಚೆಯನ್ನು ಮಾಡಲು ಮುಂದಾಗಿದ್ದ ಸಾಹಿತ್ಯ ಸಂಭ್ರಮದ ಟ್ರಸ್ಟು, ಪ್ರಜ್ಞಾವಂತರ ಭಾರೀ ಪ್ರತಿಭಟನೆ ಮತ್ತು ವಿರೋಧದ ಕಾರಣವಾಗಿ ನಿಯಮಾವಳಿಗಳನ್ನು ಸಡಿಲಿಸಿಕೊಂಡಿರುವುದು ಸ್ವಾಗತಾರ್ಹವಾದರೂ ಅದರ ನಡೆಯಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

'ಸಾಹಿತ್ಯಿಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ' ಎನ್ನುವ ಟ್ರಸ್ಟಿನ ಗೌರವಾಧ್ಯಕ್ಷ ಡಾ. ಎಂ. ಎಂ. ಕಲಬುರ್ಗಿಯವರು ಹೇಳಿದ್ದು ಮತ್ತು ಟ್ರಸ್ಟಿನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್ ಅವರು ಹೇಳಿರುವ 'ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳುವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ' ಎನ್ನುವ ಮಾತುಗಳು ಕಾರ್ಯಕ್ರಮದ ಹೊಸ ಸಾಧ್ಯತೆಗಳ ಬಗ್ಗೆ ತಿಳಿಸುವ ಪರಿಯಲ್ಲಿದ್ದರೂ ಆ ಮಾತುಗಳ ಹಿಂದೆ ಚಳುವಳಿಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಬಗ್ಗೆ ಅವರಿಗಿರುವ ನಿಷ್ಕಾಳಜಿಯನ್ನು ವ್ಯಕ್ತಿಸುತ್ತವೆ. ಗೋಷ್ಟಿಗಳಲ್ಲಿ ಇರುವ ವಿಷಯಗಳು ಅಂಥ ಹೊಸ ಕಲ್ಪನೆಗಳನ್ನೇನೂ ಹುಟ್ಟು ಹಾಕುವುದಿಲ್ಲ. ಕತೆ ಹುಟ್ಟುವ ರೀತಿ, ಕತೆ ಹೇಳುವ ಕಲೆ, ಆತ್ಮಕತೆಗಳ ಓದು, ಪ್ರಶಸ್ತಿಗಳ ಹಾವಳಿ ಪ್ರಾಚೀನ ಕಾವ್ಯವಾಚನ, ಅಂತರ್ ಜಾಲ ಕನ್ನಡ, ಕನ್ನಡ ವಿಮರ್ಶೆ, ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು ಮೊದಲಾದವುಗಳ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. 'ಹಾಗಿರಬಾರದು; ಹೀಗೆ ಇರಬೇಕು; ಹೀಗೆಯೇ ಇರಬೇಕು' ಎಂಬುದರತ್ತಲೇ ಹೆಚ್ಚಿನ ಒತ್ತು ನೀಡುವ ಇದು ಸಂಭ್ರಮವಾದರೂ ಹೇಗಾದೀತು ? ತಮ್ಮ ಬದ್ಧತೆಗಳನ್ನೇ ಎಲ್ಲರೂ ಅನುಸರಿಸಬೇಕು ಎಂಬ ಯಜಮಾನಿಕೆಯ ಗತ್ತುಗಾರಿಕೆ ಇಲ್ಲಿ ಕಂಡು ಬರುತ್ತದೆ. ನಮ್ಮ ನಾಡಿನ ಗಮನ ಸೆಳೆಯುವ ಬರಹಗಾರರು, ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಎಂದುಕೊಂಡಿದ್ದ ಮಂದಿಯೇ ಇಂಥ ಯಜಮಾನಿಕೆ ನಡೆಸಲು ಮುಂದಾಗಿರುವುದು ತುಂಬ ವಿಪರ್ಯಾಸ ಎನ್ನುವುದಕ್ಕಿಂತ ನಂಬಿಕೆಯನ್ನೇ ಬುಡಮೇಲಾಗಿಸುವ ಮನೋಭಾವ ಎನ್ನಬಹುದೇನೋ ! ಇಂದು ನಡೆದ ಕಾರ್ಯಕ್ರಮವನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಭಾ ಭವನದ ಹೊರಗೆ ನಾಲ್ಕೈದು ಸೆಕ್ಯೂರಿಟಿ ಗಾರ್ಡುಗಳು, ಒಳಗೆ ಇನ್ನೊಂದಿಷ್ಟು ಸೆಕ್ಯುರಿಟಿ ಗಾರ್ಡುಗಳು ಟಿಪ್‌ಟಾಪ್ ಆಗಿ ನಿಂತಿದ್ದರು. ಒಳಗೆ ಮಾತನಾಡಿದರೆಲ್ಲಿ ಹೊರ ಹಾಕುತ್ತಾರೋ ಎಂದುಕೊಂಡು ಉಸಿರಾಡಿಸಲೂ ಕಷ್ಟಪಡುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು, ಹೊರಗಡೆ ಇನ್ನೂ ಪುಸ್ತಕಗಳ ಕಟ್ಟನ್ನೇ ಬಿಚ್ಚಿಡುತ್ತಿದ್ದ ನಾಲ್ಕೈದು ಪುಸ್ತಕ ವ್ಯಾಪಾರಿಗಳು, ಗಂಟು ಹಾಕಿಕೊಂಡಂತಿದ್ದ ಮುಖಗಳು ತುಂಬ ನಿರಾಸೆಯನ್ನುಂಟು ಮಾಡಿದವು. ಐನೂರು ಕೊಟ್ಟು ಬಂದವರು ಯಾವ ಸಾರ್ಥಕತೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಸಂಭ್ರಮಕ್ಕೆ ಆಗಮಿಸಿರುವ ದೊಡ್ಡ ದೊಡ್ಡ ಸಾಹಿತಿಗಳ ಜೊತೆಗೆ ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು ಎಂಬ ಅವರ ಹಂಬಲ ಮಾತ್ರ ಈಡೇರಬಹುದೇನೋ !

ಇಂತಹ ಸಾಂಸ್ಕೃತಿಕ ದಿವಾಳಿತನಕ್ಕೆ ಎಡೆ ಮಾಡಿಕೊಟ್ಟಿರುವ ಈ 'ಸಂಭ್ರಮ' ವನ್ನು ವಿರೋಧಿಸಿ ಧಾರವಾಡದ ಪ್ರಗತಿಪರ ಬರಹಗಾರರ ಹಾಗೂ ಸಂಘಟನೆಗಳ ವೇದಿಕೆ 'ಜನತೆಯತ್ತ ಸಾಹಿತ್ಯ' ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರೂ ಅದನ್ನು 'ಸಂಭ್ರಮ ಸಂಘಟಕರ' ಮಾತು ಕೇಳಿ ಮುಂದೆ ಹಾಕಿದ್ದಾದರೂ ಯಾಕೆ ಎಂದು ತಿಳಿಯುತ್ತಿಲ್ಲ. ರಾಜಿಯಾಗುವ ಮನೋಧರ್ಮ ಇನ್ನೂ ಬದಲಾಗಿಲ್ಲ ಎಂದರೆ ಧಾರವಾಡದಲ್ಲಿ ಇನ್ನು ಮುಂದೆ 'ಸಂಭ್ರಮ' ಮಾದರಿಯ ಕಾರ್ಯಕ್ರಮಗಳು ಯಾರ ಮುಲಾಜಿಗೂ ಕಾಯದೆ ಕಾರ್ಯಪ್ರವತ್ತರಾಗಬಲ್ಲವು ! 'ಸಂಭ್ರಮ' ಆರಂಭದ ದಿನವೇ ಒಂದು ಸಣ್ಣ ಪ್ರತಿಭಟನೆಯನ್ನೋ ಪರ್ಯಾಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೋ ಅದು ಬೀದಿಯಲ್ಲಾದರೂ ಸರಿ ಮಾಡಿದ್ದರೆ ಪ್ರತಿಭಟನೆಗೆ ಒಂದು ಅರ್ಥ ಬರುತ್ತಿತ್ತು. ಮಾರ್ಚಿನಲ್ಲಿ 'ಸಂಭ್ರಮ' ವನ್ನು ವಿರೋಧಿಸಿ ಮಾಡುವ ಕಾರ್ಯಕ್ರಮ ಪರ್ಯಾಯ ಎನಿಸಿಕೊಳ್ಳಲಾರದು. ಎಂ.ಡಿ. ಒಕ್ಕುಂದ ಅವರು ಹೇಳುವಂತೆ 'ಕರ್ನಾಟಕದ ಚರಿತ್ರೆಯಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು ಆಸ್ಥಾನೀಕರಿಸುವ, ಅಗ್ರಹಾರೀಕರಿಸುವ ಪ್ರಯತ್ನಗಳು ನಡೆದಾಗಲೆಲ್ಲ ತೀವ್ರವಾದ ಪ್ರತಿಭಟನೆಗಳು ಸಜನಶೀಲವಾದ ಪರ‌್ಯಾಯಗಳು ರೂಪ ತಾಳಿವೆ' ಎಂಬುದೇ ನಿಜವಾದರೆ ಇನ್ನೂ ಕಾಲ ಮಿಂಚಿಲ್ಲ; ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಎದುರಿನಲ್ಲೇ ನಡೆಯುತ್ತಿರುವ ವೈಚಾರಿಕ ಬದ್ಧತೆಯಿಲ್ಲದ 'ಸಂಭ್ರಮ' ದ ಕೊನೆಯ ದಿನವಾದರೂ ಪರ್ಯಾಯ ಮಾದರಿಯಲ್ಲಿ ವಿಶ್ವವಿದ್ಯಾಲಯ ವೃತ್ತದಲ್ಲಿ ಅಥವಾ ಇನ್ನೆಲ್ಲಿಯಾದರೂ ಒಂದು ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಧಾರವಾಡದ ಪ್ರಜ್ಞಾವಂತ ಗೆಳೆಯರು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.
 
ಕೃಪೆ: ವಿಜಯ ಕರ್ನಾಟಕ

Wednesday, January 23, 2013

ಮಾತ್ಗವಿತೆ-110

ನಶಾ ಮೈಯೇರಿ ದಿಶಾ ಭೂಲಾಗುವ
ಸಮಯದಲ್ಲಿ ಕಲ್ಲು ಕರಗುತಾವೆ ; ನೀರಾಗುತಾವೆ !
ಮರೆತು ದರಬಾರು ಮಾಡಿದಾಗೊಮ್ಮೆ
ದರಕಾರೂ ಮಾಡದೆ ದುಗಿಸಿ ನಗುತಾವೆ !
ನವಿಲಾಡಿ ನುಲಿತಾವೆ ; ಮೈ ಮನ ಕೆಡಿಸುತಾವೆ !
ಎಷ್ಟೆಂದರೂ ಹುಳುಗಳು ; ಕಡಿಯದಿರುತಾವೆಯೇ ?

Tuesday, January 22, 2013

ಹಿಂದು ಉಗ್ರವಾದ ನಿಜ: ಬರಗೂರು ರಾಮಚಂದ್ರಪ್ಪ



'ಹಿಂದೂ ಧರ್ಮದ ಹೆಸರಿನಲ್ಲೂ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳಿಂದ ಭಯೋತ್ಪಾದನೆ ನಡೆಯುತ್ತಿರುವುದು ಸತ್ಯ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್‌ ಸಂಘಟನೆಯಿಂದಲೇ ಅದು ನಡೆಯುತ್ತಿದೆ ಎಂಬುದನ್ನು ನಾನು ಹೇಳಲಾರೆ' ಎಂದು ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಇಂದು ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ. ಮುಸ್ಲಿಂ ಧರ್ಮಕ್ಕೆ ಸೇರಿದ ಹಾದಿ ತಪ್ಪಿದ ಕೆಲವರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂಬ ಆರೋಪ ಇತ್ತು. ಆದರೆ, ಈಗ ಹಿಂದೂ ಧರ್ಮದ ಹೆಸರಿನಲ್ಲೂ ಕೆಲ ವ್ಯಕ್ತಿ ಮತ್ತು ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಹೇಳಿದರು.

ಹಿಂದೂಗಳ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಹಿಂದೆ ಬಿಜೆಪಿ ಅಥವಾ ಆರೆಸ್ಸೆಸ್‌ ಇದೆ ಎಂದು ಹೇಳುವುದು ಕಷ್ಟ. ಹೀಗೆ ಹೇಳಿರುವ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಬಳಿ ಈ ಕುರಿತು ಯಾವುದಾದರೂ ದಾಖಲೆಗಳಿದ್ದರೆ ಬಹಿರಂಗ ಪಡಿಸುವುದು ಸೂಕ್ತ. ಈ ಬಗ್ಗೆ ನನ್ನ ಬಳಿ ಯಾವುದೇ ಸ್ಪಷ್ಟ ದಾಖಲೆಗಳು ಇಲ್ಲ ಎಂದು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

ಕೃಪೆ : ಉದಯವಾಣಿ : 22-01-2013

Monday, January 21, 2013

ಮಾತ್ಗವಿತೆ-109

ಸಿಡಿಲು ಕ್ಷಣದ ಬೆಳಕು ನೀಡಬಲ್ಲದು ;
ಸಿಡಿದು ಭಸ್ಮ ಮಾಡುವುದೇ ಅಧಿಕವಲ್ಲವೆ ?
ಉರುಪಿನ ಹುರುಪು ತೋರಿಕೆಯದಲ್ಲ ;
ಅಸ್ಮಿತೆಯನ್ನೇ ಇಲ್ಲವಾಗಿಸುವ ಹುನ್ನಾರವೂ ಇದೆ ;
ಹಾಳೂರಿಗೆ ಉಳಿದ ಗೌಡಕೀ ನನಗೆ ಬೇಡ !

ಸಾಹಿತ್ಯ ಸಂಭ್ರಮಕ್ಕೆ ಆತ್ಮೀಯ ಸ್ವಾಗತ !


ಡಾ. ಸಿದ್ರಾಮ ಕಾರಣಿಕ               

            ಜನೇವರಿ ೨೫, ೨೬, ೨೭ ರಂದು ಧಾರವಾಡದಲ್ಲಿ 'ಸಾಹಿತ್ಯ ಸಂಭ್ರಮ' ಜರುಗಲಿದೆ. ಸಂಘಟಕರು ವಿರೋಧಿ ಬಣದವರನ್ನು ಸಮಝಾಯಿಸಿ (ಬಗ್ಗು ಬಡಿದು) ಒಲಿಸಿಕೊಂಡಿದ್ದಾರೆ. ಸಾಹಿತ್ಯ ಎನ್ನುವುದನ್ನು ವ್ಯಾಪಾರವನ್ನಾಗಿಯೇ ನೋಡುವ ಕೆಲವು ಜನರು ರಾಜಿಯಾಗಿರುವುದರಲ್ಲಿ ಲಾಭದ ಉದ್ದೇಶವನ್ನು ಅಲ್ಲಗಳೆಯಲಾಗದು. ಹೋರಾಟ, ಕ್ರಾಂತಿ, ಪ್ರತಿಭಟನೆ ಮೊದಲಾದವುಗಳೆಲ್ಲ ಅರ್ಥ ಕಳೆದುಕೊಂಡಿರುವುದು ಇಂಥ ಲಾಭಕೋರ ಪ್ರಜ್ಞಾವಂತರಿಂದಲೇ ಎಂದರೆ ತಪ್ಪಾಗಲಾರದು ! ಧಾರವಾಡ ಇನ್ನಾದರೂ ಬದಲಾದೀತೆ ಎಂಬ ನನ್ನಂಥವರ ಪ್ರಶ್ನೆಗೆ ಇಲ್ಲಿ ಉತ್ತರ ಇರುವುದಿಲ್ಲ ; ಉತ್ತರಿಸುವ ವ್ಯವಧಾನವಾಗಲಿ ; ನಿರ್ಭೀತಿಯಾಗಲಿ ಸೋ ಕಾಲ್ಡ್ ಪ್ರತಿಭಟನಾಕಾರರಲ್ಲಿ ಇಲ್ಲವೇನೋ ಎನಿಸುತ್ತಿದೆ !
 
           ಈಗ ನನ್ನ ಅಭಿಪ್ರಾಯವೆಂದರೆ ಕೇವಲ ಧಾರವಾಡ ಮಾತ್ರವಲ್ಲ ಹೊರ ಊರಿನ ಹಲವಾರು ಗೆಳೆಯರು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವನ್ನು ಕೊಟ್ಟು ಬರಲು ತಯಾರಾಗಿದ್ದಾರೆ. ನಾನು ಹಾದಿ ಕಾಯ್ದೆ ; ಪ್ರತಿಭಟಿಸುವವರು 'ಪರ್ಯಾಯ' ಮಾಡಬಹುದು ಎಂದು ! ನೋ ಚಾನ್ಸ್ ! ಹೀಗಾಗಿ ನಾನೇ ಹೇಳುತ್ತಿದ್ದೇನೆ. ಇಷ್ಟವಿದ್ದವರು ಯಾವುದೇ ಸಂಹಿತೆ, ನಿಬಂಧನೆ, ಸಂವೇದನೆ, ಪ್ರಜ್ಞೆ, ಮನಸಾಕ್ಷಿ ಎನ್ನುವುದನ್ನು ಮರೆತು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

         ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಆಗಮಿಸುವ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತಿದ್ದೇನೆ ! 

Saturday, January 19, 2013

ಧಾರವಾಡ ಸಾಹಿತ್ಯ ಸಂಭ್ರಮ : ನಿಬಂಧನೆಗಳು ರದ್ದು !

ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ನಿಬಂಧನೆಗಳನ್ನು ನಾಡಿನ ಹಲವಾರು ಬರಹಗಾರರು ಖಂಡಿಸುವ ಮೂಲಕ, ವಿರೋಧಿಸುವ ಮೂಲಕ ಪರ್ಯಾಯ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ ಮೇಲೆ ಸಾಹಿತ್ಯ ಸಂಭ್ರಮದ ಸಂಘಟಕರು ಎಚ್ಚೆತ್ತುಕೊಂಡು ತಾವು ವಿಧಿಸಿದ್ದ ನಿಬಂಧನೆಗಳನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಂದ ಸುದ್ದಿ ಇಲ್ಲಿದೆ ನೋಡಿ ;

ಇದೇ 25, 26 ಮತ್ತು 27ರಂದು ನಗರದಲ್ಲಿ ನಡೆಯಲಿರುವ `ಧಾರವಾಡ ಸಾಹಿತ್ಯ ಸಂಭ್ರಮ'ದಲ್ಲಿ ಪಾಲ್ಗೊಳ್ಳುವವರಿಗೆ ವಿಧಿಸಲಾಗಿದ್ದ ನಿಬಂಧನೆಗಳನ್ನು ರದ್ದುಪಡಿಸಲಾಗಿದೆ ಎಂದು `ಧಾರವಾಡ ಸಾಹಿತ್ಯ ಸಂಭ್ರಮ'ದ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸ್ಪಷ್ಟಪಡಿಸಿದ್ದಾರೆ.
`ಈ ನಿಬಂಧನೆಗಳ ಬಗ್ಗೆ ಬಹಳಷ್ಟು ತಪ್ಪು ತಿಳಿವಳಿಕೆ ಉಂಟಾಗಿದ್ದರಿಂದ ಮತ್ತು ಇವುಗಳನ್ನೇ ಮುಖ್ಯವಾಗಿರಿಸಿಕೊಂಡು ವಿರೋಧ ವ್ಯಕ್ತವಾಗುತ್ತಿರುವುದರಿಂದ ಇವುಗಳನ್ನು ರದ್ದುಪಡಿಸಲಾಗಿದೆ. ಈ ಸಂಭ್ರಮವನ್ನು ಮೊದಲ ಪ್ರಯೋಗವಾಗಿ ಹಮ್ಮಿಕೊಳ್ಳಲಾಗಿದ್ದು, ಚರ್ಚಿಸಬೇಕಾಗಿರುವ ಸಾಕಷ್ಟು ವಿಷಯಗಳನ್ನು ಮುಂಬರುವ ಸಂಭ್ರಮಗಳಲ್ಲಿ ಎತ್ತಿಕೊಳ್ಳಲು ಅವಕಾಶ ಇದ್ದೇ ಇದೆ. 60 ಸಂಪನ್ಮೂಲ ವ್ಯಕ್ತಿಗಳು ಮತ್ತು ಸುಮಾರು 60 ವಿಶೇಷ ಆಮಂತ್ರಿತರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದಾರೆ'.
`ಅವರಿಗೆ ಯಾವುದೇ ಶುಲ್ಕ ಇರುವುದಿಲ್ಲ. 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರ ಕೊಡುವ ಅನುದಾನ ಸಾಲದೇ ಇದ್ದುದರಿಂದ ಸಂಭ್ರಮದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಪ್ರತಿನಿಧಿ ಶುಲ್ಕ ಆಕರಿಸಲಾಗುತ್ತಿದೆ. ಕೆಲವರು ತಪ್ಪು ತಿಳಿವಳಿಕೆಯಿಂದ ಆರೋಪಿಸುತ್ತಿರುವಂತೆ ಇದರಿಂದ ಯಾವುದೇ ಹಣ ಮಾಡಿಕೊಳ್ಳುವ ಉದ್ದೇಶ ಖಂಡಿತವಾಗಿಯೂ ಇಲ್ಲ. ಸಂಭ್ರಮದ ವೆಚ್ಚ ಸುಮಾರುರೂ 16ರಿಂದರೂ 18 ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಆದರೆ ಕೆಲವರು ಆರೋಪಿಸುತ್ತಿರುವಂತೆರೂ 40ರಿಂದರೂ 50 ಲಕ್ಷ ಸಂಗ್ರಹಿಸಲಾಗಿಲ್ಲ. ಸಂಭ್ರಮ ಮುಗಿದ ಕೆಲವೇ ದಿನಗಳೊಳಗಾಗಿ ಇದರ ಖರ್ಚು ವೆಚ್ಚವನ್ನು ಪಾರದರ್ಶಕವಾಗಿ ಪ್ರಕಟಿಸಲಾಗುವುದು' ಎಂದು ಡಾ.ಗಿರಡ್ಡಿ ತಿಳಿಸಿದ್ದಾರೆ.

ಈ ರೋಗ ಈಗ ಧಾರವಾಡಕ್ಕೂ ಹರಡಿದೆ: ಎಚ್ ಎಸ್ ಆರ್ « ಅವಧಿ / avadhi

ಈ ರೋಗ ಈಗ ಧಾರವಾಡಕ್ಕೂ ಹರಡಿದೆ: ಎಚ್ ಎಸ್ ಆರ್ 

Friday, January 18, 2013

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ಜೋಗಿ ಅವರ ಪತ್ರ

ಗೆ,
ಅಧ್ಯಕ್ಷರು,
ಧಾರವಾಡ ಸಾಹಿತ್ಯ ಸಂಭ್ರಮ

ಮಾನ್ಯರೇ,
ವಿಷಯ: ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸದೇ ಇರುವ ಕುರಿತು.

ಜೈಪುರ ಲಿಟರೇಚರ್ ಫೆಸ್ಟಿವಲ್ ಮಾದರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 3 ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಆಭಾರಿ.
ಆದರೆ, ನಾನು ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಕಾರಣಗಳು ಇಂತಿವೆ:
1. ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ಮುಕ್ತ ಪ್ರವೇಶ ಇರುವುದಿಲ್ಲ ಎಂದು ತಿಳಿಯಿತು. 1,500 ರುಪಾಯಿ ತೆತ್ತು ಅದರಲ್ಲಿ ಪ್ರತಿನಿಧಿಗಳು ಭಾಗವಹಿಸಬೇಕು ಅನ್ನುವುದು ನನಗೆ ಒಪ್ಪಿಗೆ ಇಲ್ಲ. 1500 ರುಪಾಯಿ ಕೊಟ್ಟು ಭಾಗವಹಿಸುವ ಪ್ರತಿನಿಧಿಗೆ ನಾನೇನು ಕೊಡಬಲ್ಲೆ ಎಂದು ಯಾರಾದರೂ ಕೇಳಿದರೆ, ನನ್ನಲ್ಲಿ ಉತ್ತರ ಇಲ್ಲ.
2. ತಾವು ಪ್ರತಿನಿಧಿಗಳಿಗೆ ವಿಧಿಸಿರುವ ಕಟ್ಟುಪಾಡುಗಳ ಬಗ್ಗೆ ನನಗೆ ವಿರೋಧವಿದೆ. ಅನುಮತಿ ಇಲ್ಲದೇ ಪ್ರಶ್ನೆ ಕೇಳಕೂಡದು, ಕರಪತ್ರ ಹಂಚಕೂಡದು ಇವೆಲ್ಲ ಪಾಳೇಗಾರಿಕೆಯಂತೆ ಭಾಸವಾಗುತ್ತಿದೆ. ಸಭ್ಯವಾಗಿ ವರ್ತಿಸಬೇಕು ಎಂದು ಓದುಗರಿಗೆ ಹೇಳಬಹುದೇ? ಶಸ್ತ್ರಾಸ್ತ್ರ ತರಬೇಡಿ, ಸಭಾಂಗಣದೊಳಗೆ ಕುಡಿಯಬೇಡಿ, ಮಾದಕ ದ್ರವ್ಯ ಸೇವಿಸಬೇಡಿ ಎಂದು ಸಜ್ಜನ ಸಾಹಿತ್ಯ ರಸಿಕರಿಗೆ ಹೇಳುವ ಮುಖಾಂತರ ಅವರ ವ್ಯಕ್ತಿತ್ವವನ್ನು ಅವಮಾನಿಸಬಹುದೇ? ಈ ಎಲ್ಲ ಗೊಂದಲಗಳೂ ನನ್ನಲ್ಲಿವೆ. ಸಾಹಿತ್ಯದ ವಿದ್ಯಾರ್ಥಿಗಳು ಕೂಡ ರುಪಾಯಿ 1000 ಕೊಟ್ಟು ಭಾಗವಹಿಸಬೇಕು ಅನ್ನುವುದು, ಕೇವಲ ಐವತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅನ್ನುವುದು ಸರಿಯಾ? ಇಂಥ ಕಟ್ಟುಪಾಡುಗಳಿದ್ದಿದ್ದರೆ ಬಡತನದಲ್ಲಿ ಓದಿ ಬೆಳೆದ ನಾವು ಯಾವುದಾದರೂ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿತ್ತೇ?
3. ನಿಮ್ಮ ನಿಯಮಾವಳಿಯೊಂದು ಹೀಗಿದೆ: ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ ಅಥವಾ ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು, ಕರಪತ್ರಗಳ ಮೂಲಕ ಹಂಚುವುದು, ಅಂಚೆಯ ಮೂಲಕ ಕಳಿಸುವುದು, ಕಂಪ್ಯೂಟರ್‌ದಲ್ಲಿ ಸೇರಿಸುವುದು ಇತ್ಯಾದಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಇದನ್ನು ಪಾಲಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ಅಂಚೆಯ ಮೂಲಕ ಕಳುಹಿಸುವುದನ್ನು ತಾವು ಹೇಗೆ ತಡೆಯಬಲ್ಲಿರಿ? ಕಂಪ್ಯೂಟರಿಗೆ ಸೇರಿಸುವುದಕ್ಕೆ ಅವಕಾಶ ಇಲ್ಲ ಎಂದರೆ ಕಾರ್ಯಕ್ರಮದ ಕುರಿತು ವಿಮರ್ಶೆಗಳನ್ನೂ ನಾನು ಬರೆಯುವಂತಿಲ್ಲ ಎಂದು ಅರ್ಥವೇ ತಿಳಿಯುತ್ತಿಲ್ಲ.
4. ಓದುಗರನ್ನು ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ನಾವು ಇದೇನು ಮಾಡಲು ಹೊರಟಿದ್ದೇವೆ ಎಂಬ ಬಗ್ಗೆ ನನಗೆ ಗೊಂದಲವಿದೆ. ಸರ್ಕಸ್ಸಿನಲ್ಲಿ ಹುಲಿ, ಸಿಂಹ, ಆನೆಗಳನ್ನು ತಂದು ಅವುಗಳಿಂದ ವಿವಿದ ಚಮತ್ಕಾರಗಳನ್ನು ತೋರಿಸಿ, ಪ್ರವೇಶ ದರ ನಿಗದಿ ಮಾಡಿ, ಪ್ರಾಣಿಗಳಿಗೆ ತಿಂಡಿ ಹಾಕುವಂತಿಲ್ಲ ಎಂದು ಕಟ್ಟುಪಾಡು ಮಾಡುವ ಸರ್ಕಸ್ಸು ಕಂಪೆನಿಯ ಮಾಲಿಕರಂತೆ ಸಾಹಿತಿಗಳು ಕಾಣಬೇಕಾಗಿಲ್ಲ ಎಂದು ನನ್ನ ವಿನಮ್ರ ಭಾವನೆ.
5. ನಾನು ಕವಿತೆ ಓದುತ್ತೇನೆ, ಕತೆ ಓದುತ್ತೇನೆ, ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದು ಮುಕ್ತ ಆಹ್ವಾನ ನೀಡುತ್ತಿದ್ದ ಸಾಹಿತಿಗಳ ಬಳಗ, ಹೀಗೆ ಪ್ರವೇಶ ಶುಲ್ಕ ಕೊಟ್ಟು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬನ್ನಿ ಎಂದು ಹೇಳುವ ಸಂಪ್ರದಾಯದಲ್ಲಿ ಪಾಲುದಾರನಾಗುವಷ್ಟು ಮಹಾನ್ ಲೇಖಕನಾಗಲೀ, ಭಾಷಣಕಾರನಾಗಲೀ ನಾನು ಅಲ್ಲದೇ ಇರುವುದರಿಂದ ಸಂಭ್ರಮದಿಂದ ದೂರ ಉಳಿಯಲು ಇಚ್ಛಿಸುತ್ತೇನೆ.

ಶುಭವಾಗಲಿ.

ಪ್ರೀತಿಯಿಂದ
ಜೋಗಿ

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ರಹಮತ್ ತರೀಕೆರೆ ಪತ್ರ

ಮಾನ್ಯರಾದ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ವಿಜ್ಞಾಪನೆಗಳು

ಪ್ರಿಯರೆ,
ಜನವರಿ ೨೫ರಿಂದ ೨೭ರ ತನಕ ನಡೆಯಲಿರುವ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ನನ್ನನ್ನುವಿಶೇಷ ಆಮಂತ್ರಿತನಾಗಿ ಆಹ್ವಾನ (ಪತ್ರ ೧೨.೧೨.೧೨) ನೀಡಿದ್ದಿರಿ. ತಮ್ಮ ವಿಶ್ವಾಸಕ್ಕೆ ಕೃತಜ್ಞತೆ ಹೇಳುತ್ತೇನೆ. ಈಗ ಧಾರವಾಡ ಗೆಳೆಯರು ಕಳಿಸಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ವಿವರಗಳನ್ನು ಕಂಡ ಮೇಲೆ ಬರಬೇಕು ಎಂದು ಅನಿಸುತ್ತಿಲ್ಲ . ಆದ್ದರಿಂದ ನನ್ನ ಹೆಸರನ್ನು ವಿಶೇಷ ಆಮಂತ್ರಿತರ ಪಟ್ಟಿಯಿಂದ ಕೈಬಿಡಬೇಕು ಎಂದು ಕೋರುತ್ತೇನೆ.
ವಂದನೆಗಳು

ತಮ್ಮ ವಿಶ್ವಾಸದ

ರಹಮತ್ ತರೀಕೆರೆ

ಸಾಹಿತ್ಯ ಸಂಭ್ರಮಕ್ಕೆ ಗೈರು ಆಗುವ ವಿಚಾರದ ಕುಂ.ವೀ. ಅವರ ಪತ್ರ

ಸಂಭ್ರಮ ಸಂಘಟಕ ಗೆಳೆಯರೇ,
ಶುಭೋದಯ,

ಕಾರ್ಯಕ್ರಮದ ನಿಯಮಾವಳಿಗಳಿಗೆ ನನ್ನ ಸಹಮತವಿಲ್ಲ,

ಅಂತ ಉಸಿರುಗಟ್ಟಿಸುವ ವಾತಾವರಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ,

ದಯವಿಟ್ಟು ಕ್ಷಮಿಸಿ ನನ್ನ ಗೈರುಹಾಜರಿಯನ್ನು,

ನಿಮ್ಮ

ಕುಂವೀ

ಧಾರವಾಡ ಸಾಹಿತ್ಯ ಸಂಭ್ರಮ : ಅಧ್ಯಕ್ಷರಿಗೊಂದು ಅಶೋಕ ಶೆಟ್ಟರ್ ಬಹಿರಂಗ ಪತ್ರ

 ಡಾ. ಗಿರಡ್ಡಿ ಗೋವಿಂದರಾಜ
ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ)
ಇವರಿಗೆ


ಡಿಯರ್ ಸರ್,

ಇದೇ (ಜನವರಿ, ೨೦೧೩) ೨೫, ೨೬, ೨೭ ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು ಪಾಲ್ಗೊಳ್ಳಬೇಕೆಂದು ಕೋರಿ ತಾವು ಕಳಿಸಿದ ಮುದ್ರಿತ ಓಲೆ ತಲುಪಿದೆ. ಮೊದಲಿಗೆ ತಮ್ಮ ಆತ್ಮೀಯ ಆಹ್ವಾನಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸದರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾನು ಇಚ್ಛಿಸುವದಿಲ್ಲ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ ಪಡೆದಿರುವ ಈ ಮತ್ತು ಇಂಥ ಯಾವುದೇ ಸಾಹಿತ್ಯಿಕ ಸಾಂಸ್ಕೃತಿಕ ಸಮಾವೇಶಗಳು ಸಾರ್ವಜನಿಕ ಡೊಮೈನ್ ನಲ್ಲಿ ಇರುವಂಥವಾದ್ದರಿಂದ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ್ದರ ಬಗ್ಗೆ ನನಗೆ ವಿಷಾದವೇಕಿಲ್ಲ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಬಹುದೆನ್ನಿಸುತ್ತದೆ.

ತಾವು ತಮ್ಮ ಪತ್ರದಲ್ಲಿ ಸರಿಯಾಗಿಯೇ ಹೇಳಿರುವಂತೆ ಧಾರವಾಡ ನಗರ ಅನೇಕ ಜನ ಸಾಹಿತಿ-ಕಲಾವಿದರ ನೆಲೆ. ಇಂದಿಗೂ ತನ್ನ ಹಿರಿಯ ಪರಂಪರೆಯನ್ನು ಕ್ರಿಯಾಶೀಲವಾಗಿ ಮುಂದುವರಿಸಿಕೊಂಡು ಬಂದಿರುವ ಊರು. ಧಾರವಾಡದ ಈ ಪರಂಪರೆಯ ವಾರಸುದಾರಿಕೆ ಯಾವೊಬ್ಬ ವ್ಯಕ್ತಿ, ಮನೆತನ, ಗುಂಪು, ಜಾತಿ, ಪಂಥಕ್ಕೆ ಸೇರಿದ್ದಲ್ಲ. ವಾಸ್ತವವಾಗಿ ಅದು ಬರಿದೇ ಧಾರವಾಡಕ್ಕೆ ಸೀಮಿತವಾದದ್ದೂ ಅಲ್ಲ. ಧಾರವಾಡ ನೆಲದಿಂದ ಹೊಮ್ಮಿದ ಸಾಹಿತ್ಯ, ಸಂಗೀತ, ವಿಮರ್ಶೆ, ಚಿತ್ರಕಲೆ, ರಂಗಪ್ರಯೋಗಗಳೇ ಮೊದಲಾದ ಸಮೃದ್ಧಿಯನ್ನು, ಅದರ ಜೊತೆಜೊತೆಗೇ ಇಲ್ಲಿಯ ಸ್ನೇಹ, ಪ್ರೀತಿ, ಸಂಘರ್ಷ, ಪ್ರತಿಭಟನೆ, ಹೊಸತನದ ಹುಡುಕಾಟಗಳ ವಿಶಿಷ್ಟ ಪರಂಪರೆಯ ಕುರಿತು ಹೆಮ್ಮೆ-ಮೆಚ್ಚುಗೆಗಳನ್ನು ಇಟ್ಟುಕೊಂಡವರು ಧಾರವಾಡದ ಹೊರಗೂ ಇದ್ದಾರೆ. ಜೈಪುರದ ಸಾಹಿತ್ಯಹಬ್ಬದಿಂದ ಪ್ರೇರಿತರಾಗಿ ತಾವು “ಇನ್ನೊಂದು ಹೊಸ ಪ್ರಯೋಗ” ವೆಂದು ವ್ಯಾಖ್ಯಾನಿಸಿಕೊಂಡಿರುವ ಸಾಹಿತ್ಯ ಸಂಭ್ರಮದ ಒಟ್ಟಾರೆ ಸ್ವರೂಪ, ಧಾಟಿ-ಧೋರಣೆ ಮತ್ತು ವಿಶೇಷವಾಗಿ ಅದರ ನಿಯಮ ನಿಬಂಧನೆಗಳು ಅಂಥ ಹಲವಾರು ಜನರನ್ನು ನಿರಾಶೆಗೊಳಿಸಿವೆ. ಧಾರವಾಡದಂಥ ಅನೌಪಚಾರಿಕವೂ ಆತ್ಮೀಯವೂ ಆದ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳ ಪರಂಪರೆಗೆ ವ್ಯತಿರಿಕ್ತವಾದ ವಿಲಕ್ಷಣ ನಿಯಮಾವಳಿಗಳನ್ನು ಓದಿ ನಿರಾಶೆಗೊಂಡವರಲ್ಲಿ ನಾನೂ ಒಬ್ಬ. ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಒಂದು ಗೋಷ್ಠಿಯನ್ನೂ ಒಳಗೊಂಡಿರುವ ಈ ಸಮಾವೇಶ ವಾಸ್ತವವಾಗಿ ಕನ್ನಡ ಸಾಹಿತ್ಯ ಸೃಜನೆ-ವಿಮರ್ಶೆಗಳ ಲೋಕದ ಕಾರ್ಪೊರೇಟೀಕರಣದಂತೇ ಭಾಸವಾಗುತ್ತಿದೆ. ಇದನ್ನು ಕನ್ನಡದ ಮನಸು ಸೈರಿಸಿಕೊಳ್ಳುತ್ತದೆಂದು ನನಗನಿಸುವುದಿಲ್ಲ.

ಸಾಹಿತಿ ಸಾಹಿತಿಗಳ ನಡುವೆ ಮತ್ತು ಲೇಖಕ ಓದುಗರ ನಡುವೆ ಆತ್ಮೀಯ ಸಂಬಂಧವನ್ನು ಬೆಳೆಸುವ ಉದ್ದೇಶವೂ ಈ ಸಂಭ್ರಮಕ್ಕಿದೆ ಎಂದು ನೀವು ಹೇಳಿದ್ದೀರಿ. ಸರಿಯೇ. ಆದರೆ ಸಂಘಟಕರು ಮತ್ತು ಸಾವಿರದೈನೂರು ರೂಪಾಯಿ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡ ಪ್ರತಿನಿಧಿಗಳ ನಡುವೆಯೂ ಒಂದು ಆತ್ಮೀಯ ಸಂಬಂಧ ಇರಬೇಕೆಂಬುದು ತಮಗೆ ತೋಚಿಲ್ಲವೆಂಬುದಕ್ಕೆ ನಿಯಮ ನಿಬಂಧನೆಗಳ ಒಕ್ಕಣೆಯೇ ಸಾಕ್ಷಿ. “ಮೊದಲಿಗೇ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ ಎಂದು ಕಂಬಾರರ ಒಂದು ಹಾಡಿನಲ್ಲಿ ಬರುವಂತೆ ರಂಗದ ಮೇಲೆ ದೇವಾಧಿದೇವತೆಗಳ ಪಾತ್ರವಹಿಸುವವರೂ ಮೊದಲಿಗೆ ದೈವಕ್ಕೆ ಅಂದರೆ ಎದುರಿಗೆ ಕುಳಿತ ಪ್ರೇಕ್ಷಕ ಗಣಕ್ಕೆ ಕೈ ಮುಗಿದು ಆಟ ಪ್ರಾರಂಭಿಸುವ ಜಾನಪದೀಯ ಪರಂಪರೆ ನಮ್ಮದು. ಜೈಪುರ ಲಿಟರರಿ ಫೆಸ್ಟಿವಲ್ ನಂಥವುಗಳಲ್ಲಿ ಅಂಥ ನಿಯಮ ನಿಬಂಧನೆಗಳು ಇರಲು ಕಾರಣವಾದ ಹಿನ್ನೆಲೆಗಳಿವೆ. ಧಾರವಾಡದಲ್ಲಿ ತಾವು ಹಲವಾರು ದಶಕಗಳಿಂದ ಇದ್ದೀರಿ. ಸಾವಿರಾರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದೀರಿ. ಎಷ್ಟು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ಅಸಭ್ಯವಾಗಿ ವರ್ತನೆಯನ್ನು ಕಂಡಿದ್ದೀರಿ ? ಅವಮಾನಕರ, ಅಪಕೀರ್ತಿಗೊಳಿಸುವ, ಹಕ್ಕುಚ್ಯುತಿಗೊಳಿಸುವ, ಅಸಭ್ಯ, ಕಾನೂನುಬಾಹಿರ ವಿಷಯಗಳನ್ನು, ಮಾಹಿತಿಗಳನ್ನು ಕರಪತ್ರಗಳ ಮೂಲಕ ಹಂಚಿದ್ದನ್ನು ನೋಡಿದ್ದೀರಿ ? ಪ್ರಚಾರ ಸಾಮಗ್ರಿಯನ್ನು ಕಾರ್ಯಕ್ರಮದ ಸ್ಥಳ,ಪ್ರದೇಶ,ಸಭಾಂಗಣದಲ್ಲಿ ತಂದದ್ದನ್ನು ಅನುಭವಿಸಿದ್ದೀರಿ? ಕಾರ್ಯಕ್ರಮದ ಸ್ಥಳದಲ್ಲಿ ಆಸ್ತಿ-ಪಾಸ್ತಿಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದ ಎಷ್ಟು ಉದಾಹರಣೆಗಳು ಧಾರವಾಡದಂಥ ಒಂದು ಸಭ್ಯರ ಊರ ಪರಂಪರೆಯಲ್ಲಿವೆ ? ಕಾರ್ಯಕ್ರಮದ ಸ್ಥಳದಲ್ಲಿ ಮದ್ಯ-ಮಾದಕವಸ್ತುಗಳನ್ನು ತಂದು ಸೇವಿಸುವಂಥ ಅರಾಜಕರೆ ಧಾರವಾಡದ ಮಂದಿ ? ಕಾರ್ಯಕ್ರಮದ ಪ್ರವೇಶಸ್ಥಳ/ಸಭಾಂಗಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ತರಬಾರದೆಂಬ ನಿಬಂಧನೆಯಂತೂ ಇವೆಲ್ಲವುಗಳ ಕಳಶ. ಇಂಥದೇನೂ ಎಂದೂ ಇಲ್ಲದ ಧಾರವಾಡದಲ್ಲಿ ಯಾಕಾಗಿ ಇಂಥ ಡಿಫೆನ್ಸಿವ್ ಕವಚದ ಅಗತ್ಯ ತಮಗೆ ಕಂಡಿತು ? ಏಕೆ ಇಂಥ ಹಾಸ್ಯಾಸ್ಪದ ಒಕ್ಕಣೆಯಿಂದ ಧಾರವಾಡವನ್ನು ಅವಮಾನಿಸಿದ್ದೀರಿ ?

ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಕೊರಳಲ್ಲಿ ಧರಿಸಲು ನಿರ್ಬಂಧಿತರಾದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಷಣಕಾರರಲ್ಲ, ಅವರಿಗೆ ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ ; ಅದನ್ನು ಅವರು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು, ಪರ ಊರಿನ ಪ್ರತಿನಿಧಿಗಳು ತಾವು ನಿಗದಿಗೊಳಿಸಿದ ಹೊಟೆಲ್ ಗಳ ಲಿಸ್ಟ್ ನಲ್ಲಿರುವ ಹೊಟೆಲ್ ಗಳ ವ್ಯವಸ್ಥಾಪಕರನ್ನು ಕಂಡು ತಮ್ಮ ವಸತಿ ವ್ಯವಸ್ಥೆಯನ್ನೂ ತಾವೇ ಮಾಡಿಕೊಳ್ಳಬೇಕು, ಪ್ರತಿನಿಧಿಗಳಿಗೆ ವಾಹನ ಸೌಕರ್ಯ ಇರುವದಿಲ್ಲ ; ತಮ್ಮ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು ..... ! ಹೇಳಿ, ಇಂಥ ವರಸೆಯ ಸ್ವಾಗತ ಎಂಥ ಆತ್ಮೀಯತೆಯನ್ನು ಮೂಡಿಸಬಲ್ಲದು?

ಸಾಹಿತ್ಯದಲ್ಲಿ ಸಂಭ್ರಮದ ಒಂದು ಆಯಾಮ ಇದ್ದೇ ಇದೆ. ಆದರೆ ಸಂಭ್ರಮಿಸಲು ತಕ್ಕುದಾದ ಮನಸ್ಥಿತಿಯೂ ಸನ್ನಿವೇಶವೂ ಇರಬೇಕಾಗುತ್ತದೆ. ನಮ್ಮ ಇಂದಿನ ಸನ್ನಿವೇಶದಲ್ಲಿ ತಾವು ಸಂಭ್ರಮಿಸಬಯಸುತ್ತಿದ್ದೀರಿ. ತಮ್ಮ ಸಂಭ್ರಮಕ್ಕೆ ಶುಭವಾಗಲಿ
ಅಶೋಕ ಶೆಟ್ಟರ್
 ಧಾರವಾಡ
 ೧೬ ಜನವರಿ ೨೦೧೩

Sunday, January 13, 2013

ಮಾತ್ಗವಿತೆ-108

ನಂಬುಗೆ ಇಟ್ಟು ಕೊಟ್ಟುದ್ದೆಲ್ಲ ಮುಚ್ಚಿಟ್ಟುಕೊಂಡು
ಜಟ್ಟಿಯಾಟಕ್ಕೆ ಜತೆಯಾಗಬಯಸುವ ನಿನ್ನ ಧಾಟಿ
ಇನ್ನಿಲ್ಲದ ಗೊಂದಲಕ್ಕೆ ಕೆಡವಿ ಕೆಡವಿ
ದಡ ಮುಟ್ಟದ ದೋಣಿಯ ಗುದಮುರುಗಿ ನನ್ನದು !
ಕದವಿಕ್ಕಿದ್ದರೆ ತೆರಯಬೇಡ ; ಕರೆಯಬೇಡ
ಗರ ಹೊಡೆಯಿಸಿದ ಪರಿಯ ದಡಫಡ ಬೇಡ !
ಧಾಂಗುಡಿ ಇಟ್ಟಲ್ಲಿ ಇಂದು ಕರಾಳ ಮೌನ ;
ಭೂಕಂಪವನ್ನೇ ಎದೆಯೊಳಗೆ ಇಟ್ಟುಕೊಂಡ
ಭೂಮಿಯ ಭಾವ ನನ್ನದು !

Thursday, January 10, 2013

ದೇವರು ದೆವ್ವ ವಿಜ್ಞಾನ : ಮೌಢ್ಯತೆ ಹೊಡೆದೋಡಿಸುವ ಪುಸ್ತಕ

ಡಾ. ಸಿದ್ರಾಮ ಕಾರಣಿಕ   

    ಒಂದು ಪುಸ್ತಕ ಯಾಕೆ ಮೆಚ್ಚುಗೆ ಗಳಿಸುತ್ತದೆ ಎಂಬುದು ವಾಚಕನ ಅಭಿರುಚಿಯನ್ನು ಅವಲಂಬಿಸಿರುತ್ತದೆ. ವಾಚಕನ ಮನಸ್ಥಿತಿ ಮತ್ತು ಅನುಭವ ಗ್ರಾಹ್ಯತೆಗಳು ಅಭಿರುಚಿಯನ್ನು ನಿರ್ಧರಿಸುತ್ತವೆ. ಒಬ್ಬನಿಗೆ ಮೆಚ್ಚುಗೆಯಾದ ಪುಸ್ತಕ ಇನ್ನೊಬ್ಬನಿಗೆ ಮೆಚ್ಚುಗೆಯಾಗದೇ ಹೋಗಬಹುದು. ಡಾ. ಕೋವೂರ್ ಅವರ `ದೇವರು ದೆವ್ವ ವಿಜ್ಞಾನ' ಎಂಬ ಕೃತಿ ನನ್ನ ಮೆಚ್ಚಿನ ಪುಸ್ತಕ. ಅದು ನನ್ನ ಮೇಲೆ ಬೀರಿದ ಪ್ರಭಾವ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದರೆ ಕೆಲವರು ನಂಬಲಿಕ್ಕಿಲ್ಲ ! ಈ ಪುಸ್ತಕ ಮತ್ತು ಕುಮಾರ ಕಕ್ಕಯ್ಯ  ಪೋಳ ಅವರ `ಚಾತುರ್ವರ್ಣ ಧರ್ಮದರ್ಶನ' ಈ ಎರಡೂ ಪುಸ್ತಕಗಳನ್ನು ನಾನು ಹೈಸ್ಕೂಲಿನಲ್ಲಿದ್ದಾಗಲೇ ಓದಿ ತಿಳಿದುಕೊಂಡೆ. ಇನ್ನೂ ಕೂಡ ಯಾವಾಗಾದರೊಮ್ಮೆ ಈ ಪುಸ್ತಕಗಳ ಪುಟ ಹೊರಳಿಸುತ್ತಲೇ ಇರುತ್ತೇನೆ. ಈ ಎರಡೂ ಪುಸ್ತಕಗಳು ಮೊದಲ ಓದಿಗೇ ನನ್ನ ಮೇಲೆ ಅಗಾಧವಾದ ಪ್ರಭಾವ ಬೀರಿ, ಬದುಕಿನ ದಾರಿಯನ್ನೇ ಬದಲಿಸಿದವು ; ವೈಚಾರಿಕ ಮನೋಭಾವದ ತಳಹದಿಯನ್ನು ಗಟ್ಟಿಗೊಳಿಸಿದವು. ಅಲ್ಲಿಯವರೆಗೆ ಪೂಜೆ, ವೃತ, ಭಕ್ತಿ ಎಂದು ಕಂಡ ಕಂಡ ಕಲ್ಲು-ಕಟ್ಟಿಗೆಗಳಿಗೆ, ಕಲ್ಲು-ಮಣ್ಣಿನ ಕಟ್ಟಡಗಳಿಗೆ, ಬೊಂಬೆಗಳಿಗೆ ಭಯಭಕ್ತಿಯಿಂದ ನಮಸ್ಕರಿಸಿ, ಅವುಗಳ ಬಗ್ಗೆಯೇ ಇನ್ನೊಬ್ಬರು ಹೇಳಿದ್ದನ್ನು ಮತ್ತು ನನಗೆ ತಿಳಿದಿರುವುದನ್ನು ಕವಿತೆ ಮಾಡಿ ಹಾಡಿ ಖುಷಿ ಪಡುತ್ತಿದ್ದ ನಾನು ಆನಂತರದಲ್ಲಿ ತೀರ ಬದಲಾಗಿ ಹೋದೆ. ಭಕ್ತಿ, ಪೂಜೆ, ವೃತ ಮೊದಲಾದವುಗಳಿಗೆ ತಿಲಾಂಜಲಿ ನೀಡಿದೆ. ಅಷ್ಟೇ ಯಾಕೆ ಫ್ರೇಮಿನಲ್ಲಿ ಬೆಚ್ಚಗೆ ಕುಳಿತ ಚಿತ್ರಗಳನ್ನೂ ಕಿತ್ತೆಸೆದೆ ಮತ್ತು ನಾನು ಬರೆದ ಸ್ತುತಿ ಹಾಡುಗಳನ್ನು ಹರಿದು ಹಾಕಿದೆ. ದೇವರು-ದೆವ್ವಗಳ ನಿರಾಕರಣೆ ಮಾಡುತ್ತಲೇ ಬೊಗಳೆ ಬಿಡುತ್ತಿದ್ದವರ ಮುಂದೆ ಗೇಲಿ ಮಾಡಿ ನಗತೊಡಗಿದೆ ; ವಾದಿಸುತ್ತಿದ್ದೆ ; ವಾದಗಳಲ್ಲಿ ನಿಜವಾಗಿಯೂ ನನ್ನ ಮೇಲೆ ಪ್ರಭಾವ ಬೀರಿದ ಆ ಎರಡೂ ಪುಸ್ತಕಗಳಲ್ಲಿದ್ದ ಉದಾಹರಣೆ ನೀಡಿ ಗೆಲ್ಲುತ್ತಿದ್ದೆ.  ನನ್ನೊಳಗಿನ ಹೊಸ ಮನುಷ್ಯನ ಹುಟ್ಟಿಗೆ ಆ ಎರಡೂ ಪುಸ್ತಕಗಳು ಕಾರಣವಾಗಿವೆ. ಅವುಗಳಲ್ಲಿ ಡಾ. ಕೋವೂರ್ ಅವರ `ದೇವರು ದೆವ್ವ ವಿಜ್ಞಾನ' ಪುಸ್ತಕದ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೇನೆ.
    ಡಾ. ಕೋವೂರ್ ಅವರ ಮೂವತ್ತ್ಮೂರು ಲೇಖನಗಳನ್ನು ಎಚ್.ಎಂ. ಕುಮಾರಸ್ವಾಮಿ, ಮಹಾಬಲೇಶ್ವರರಾವ್, ತೀ.ನಂ. ಶ್ರೀಧರ, ಯಶವಂತ ಡೋಂಗ್ರೆ, ಸಬೀಹಾ ಗಜೇಂದ್ರಗಡ, ಎನ್. ಅನ್ನಪೂರ್ಣೇಶ್ವರಿ, ಒಡೆಯರ್ ಡಿ. ಹೆಗಡೆ ಕನ್ನಡೀಕರಣ ಮಾಡಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರು ಸಂಪಾದಕರಾಗಿರುವ ಈ ಪುಸ್ತಕವನ್ನು 1988ರಲ್ಲಿ ಬೆಂಗಳೂರಿನ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ಇಂದಿಗೂ ಈ ಪುಸ್ತಕದ ಪ್ರತಿಗಳು ಬಹುಬೇಗನೇ ಮುಗಿದು  ಪುನರ್‍ಮುದ್ರಣವಾಗುತ್ತಲೇ  ಇದೆ ಎಂದರೆ ಅದರ ಮಹತ್ವವನ್ನು ಯಾರಾದರೂ ಅರಿಯಬಹುದು.
    ಡಾ. ಅಬ್ರಾಹಂ ಟಿ. ಕೋವೂರ್ ಕೇರಳದ ತಿರುವಳ್ಳ ಎಂಬ ಗ್ರಾಮದಲ್ಲಿ 10ನೇ ಎಪ್ರೀಲ್ 1898 ರಂದು ಜನಿಸಿದರು. ಅವರ ತಂದೆ ರೆವ್ಹರಂಡ್ ಕೋವೂರ್ ಐಪೆತೊಮ್ಮಕತ್ತನಾರ್ ಅವರು ಮಲಬಾರಿನ ಸಿರಿಯನ್ ಚರ್ಚೊಂದರಲ್ಲಿ ಫಾದ್ರಿಯಾಗಿದ್ದರು. ಅಬ್ರಾಹಂ ಅವರು ತಂದೆಯ ಹಾದಿಯನ್ನು ಹಿಡಿಯಲಿಲ್ಲ. ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನು ಅಧ್ಯಯನ ಮಾಡಿದರೂ ವಿಶೇಷವಾಗಿ `ಅತೀಂದ್ರಿಯ ಮತ್ತು ಅತೀ ಮಾನಸ ಪ್ರಕ್ರಿಯೆಗಳು' (Pshychic and Para Pshychic ) ಎಂಬ ಹೆಸರಿನ ಮಹಾಪ್ರಬಂಧಕ್ಕೆ ಅಮೇರಿಕೆಯ ಮಿನ್ನಿಸೋಟ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಪಿಯಿಂದ ಡಾಕ್ಟರೇಟ್ ಪಡೆದರು.
    ಆನಂತರ ಕೇರಳದಲ್ಲಿ ಡಾ. ಕೋವೂರ್ ಅವರ ವೃತ್ತಿಜೀವನ ಆರಂಭವಾಯಿತು. ಕೊಟ್ಟಾಯಂನ ಸಿ.ಎಂ.ಎಸ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿ, ಅಲ್ಲಿಂದ ಶ್ರೀಲಂಕಾಗೆ ಹೋಗಿ ಜಾಪ್ನಾ ಸೆಂಟ್ರಲ್ ಕಾಲೇಜು, ಗಲ್ಲೆಯ ರಿಚ್ಮಂಡ್ ಕಾಲೇಜು, ಮೌಂಟ್ ಲೇವಿನಿಯಾದ ಸೇಂಟ್ ಥಾಮಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದರು. ಆನಂತರ ಕೊಲೊಂಬೋದ ಥಸ್ರ್ಟನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, 1959 ರಲ್ಲಿ ನಿವೃತ್ತಿಯಾದರು.
    ನಿವೃತ್ತಿಯ ನಂತರದಲ್ಲಿ ಡಾ. ಕೋವೂರ್ ರು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಕ್ರಿಯಾಶೀಲರಾದರು. ಜನರಲ್ಲಿ ಮಡುಗಟ್ಟಿದ ಮೌಢ್ಯದ ಕತ್ತಲೆಯಲ್ಲಿ ದೀಪ ಬೆಳಗಿಸಲು ನಿರಂತರವಾಗಿ ಪ್ರಯತ್ನಿಸಿದರು. ಸಾಂಪ್ರದಾಯಿಕ ಆಲೋಚನೆಗಳ ಸೆರೆಯಿಂದ ಹೊಸ ಬದುಕಿನ ಹಾದಿ ತೋರುವ ಅವರ ಪ್ರಯತ್ನ ಬಹಳಷ್ಟು ಗಟ್ಟಿಯಾಗಿತ್ತು. ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉದ್ದೀಪನಗೊಳಿಸುವತ್ತ ಆಸಕ್ತಿ ತಳೆದರು. ಅತೀಂದ್ರಿಯ, ಅತೀ ಮಾನಸ ಹಾಗೂ ಆಧ್ಯಾತ್ಮಿಕ ಶಕ್ತಿ ಹೊಂದಿದವರೆಂದು ಹೇಳಿಕೊಳ್ಳುವ ಮಂದಿ ವಂಚಕರಾಗಿರುತ್ತಾರೆ ಇಲ್ಲವೆ ಮನೋರೋಗಿಗಳಾಗಿರುತ್ತಾರೆ ಎಂಬ ವಾದವನ್ನು ಜನರ ಮುಂದಿಟ್ಟ ಕೋವೂರ್‍ರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಅದನ್ನು ಸಶಕ್ತವಾಗಿ ಮಂಡಿಸಿದರು.
    ಅತೀಂದ್ರಿಯ ಶಕ್ತಿ ಇದೆ ಎನ್ನುವವರು ಅದನ್ನು ಸಾಬೀತುಪಡಿಸಿದ್ದಲ್ಲಿ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ಅವರು ಘೋಷಿಸಿದರು. ಈ ಸವಾಲನ್ನು ಸ್ವೀಕರಿಸಿದ ಬೆಂಗಳೂರಿನ ರಾಘವೇಂದ್ರ ಸ್ವಾಮಿಭಕ್ತ ಡಾ. ಜಿ. ವೆಂಕಟರಾವ್ ಮತ್ತು ಸ್ವೀಡನ್ನಿನ ಪಾದ್ರಿ ಕೆಜಲ್ ಐಡ್ ತಮ್ಮತನವನ್ನು ತೋರಿಸಲು ಹೋಗಿ ಕೈ ಸುಟ್ಟುಕೊಂಡರು. ಡಾ. ಕೋವೂರ್‍ರು ಪುಟ್ಟಪರ್ತಿ ಸಾಯೀಬಾಬಾನಿಗೆ  ನೇರ ಸವಾಲು ಹಾಕಿ, ಶೂನ್ಯದಿಂದ ವಿಭೂತಿ, ಬಂಗಾರದುಂಗುರ ಸೃಷ್ಟಿಸಿ ಭಕ್ತರಿಗೆ ನೀಡುವಂತೆ ಒಂದು ಕುಂಬಳಕಾಯಿಯನ್ನು ಸೃಷ್ಟಿಸಿ ಕೊಡಿ ಎಂದಿದ್ದರು. ಪುಟ್ಟಪರ್ತಿ ಸಾಯೀಬಾಬಾ ಅದಕ್ಕೆ ಉತ್ತರವನ್ನು ನೀಡದೇ ಗಪ್‍ಚುಪ್ ಆಗಿದ್ದ ! ಡಾ. ಕೋವೂರ್ ರ ಇನ್ನೊಂದು ಹೆಗ್ಗಳಿಕೆ ಎಂದರೆ ದೇವಮಾನವರು ಎಂದು ಫೋಜು ಕೊಟ್ಟು, ಪವಾಡ ಮಾಡಿ, ಮೂಢಮಂದಿಯನ್ನು ಮರುಳು ಮಾಡುವ ಜನರ ಗುಟ್ಟುಗಳನ್ನೆಲ್ಲ ಬಯಲು ಮಾಡುತ್ತಿದ್ದರು. ಜನರು ನಂಬುತ್ತಿದ್ದ ಪವಾಡದಂತಹ ಕ್ರಿಯೆಗಳನ್ನು ಸ್ವತಃ ತಾವೇ ಮಾಡಿ, ಆ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಅನಾವರಣಗೊಳಿಸುತ್ತಿದ್ದರು.
    "ನಾನು ಮಾನವಪ್ರೇಮಿ. ನಾನು ಸಾಯುವುದರೊಳಗಾಗಿ ಸಾಧ್ಯವಾದಷ್ಟು ಇಂತಹ ಮೋಸಗಾರರ, ವಂಚಕರ ಎಲ್ಲ ಕುತಂತ್ರಗಳನ್ನು ಬಯಲಿಗೆಳೆದು ಇಂತಹ ನಯವಂಚಕರ ಜಾಲದೊಳಗೆ ಸಿಕ್ಕಿ ಒದ್ದಾಡುತ್ತಿರುವ ಲಕ್ಷಗಟ್ಟಲೇ ಜನರನ್ನು ಮುಕ್ತಿಗೊಳಿಸಿದರೆ ಅದೇ ನನಗೆ ತೃಪ್ತಿಯ ವಿಷಯ. ನಂತರ ಸಂತೋಷದಿಂದ ಸಾವನ್ನು ಸ್ವಾಗತಿಸುತ್ತೇನೆ." ಎನ್ನುತ್ತಿದ್ದ ಅವರು ಅಂದುಕೊಂಡಂತೆಯೇ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿ, ಫಲ ಪಡೆದರು. 1978 ರಲ್ಲಿ ಮರಣಿಸಿದ ಡಾ. ಕೋವೂರ್‍ರ ದೇಹವನ್ನು ಅವರ ಇಚ್ಚೆಯಂತೆಯೇ ವೈದ್ಯಕೀಯ ಸಂಶೋಧನೆಗೆ ಬಳಸಿಕೊಳ್ಳಲಾಯಿತು.
    ದೇವರು ದೆವ್ವ ವಿಜ್ಞಾನ ಕೃತಿಯಲ್ಲಿಯ ಎಲ್ಲ ಲೇಖನಗಳಲ್ಲಿ ಕತ್ತಲೆಯಿಂದ ಬೆಳಕಿನ ಕಡೆಗೆ ದಾದಿ ಕಾಣಿಸುವ ಪ್ರಬಲ ಪ್ರಯತ್ನವಿದೆ ಅಥವಾ ಅವರ ಸಾಧನೆಯ ಸಿದ್ಧಿ ಇದೆ. ಜಪಾನ್ ದೇಶದ ಹೆಣ್ಣುಮಗುವೊಂದು ಸತ್ತ ಮೇಲೆ ಅದರ ಆತ್ಮ ಒಂದು ಗೊಂಬೆಯಲ್ಲಿ ಸೇರಿದ್ದು, ಆ ಗೊಂಬೆಗೆ ಕ್ರಮೇಣ ತಲೆಗೂದಲು ಬೆಳೆಯುತ್ತಿವೆ ಎಂಬ ವರದಿಯನ್ನು ತಳ್ಳಿ ಹಾಕುವ ಕೋವೂರ್‍ರು ಕೂದಲು ಬೆಳೆಯಬೇಕಾದರೆ ದೇಹದಲ್ಲಿ ರಕ್ತ ಸಂಚಾರ ಇರಲೇಬೇಕಾಗುತ್ತದೆ. ಹಾಗಾಗಿ ಇದೊಂದು ಕಟ್ಟುಕತೆ ; ಹಾಸ್ಯಾಸ್ಪದ ಸಂಗತಿ ಎಂದು ತಿಳಿಸಿದರು.
    ದೇವರ ಅಸ್ತಿತ್ವವನ್ನು ಸಂಪೂರ್ಣವಾಗಿ ತಳ್ಳಿ ಹಾಕುವ ಅವರು `ಈ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಭೌತಿಕ ಎಂಬ ವೈಜ್ಞಾನಿಕ ವಿಚಾರವನ್ನು ಮರೆಯಬಾರದು' ಎಂದಿರುವ ಅವರು, `ಒಂದು ವೇಳೆ ವಿಶ್ವಕರ್ತೃ ಒಬ್ಬನಿದ್ದರೆ, ಒಳ್ಳೆಯದು-ಕೆಟ್ಟದ್ದು, ಸುಂದರ-ಕುರೂಪ ಇವೆಲ್ಲ ಅವನಿಂದಲೇ ಬಂದಿರಬೇಕಲ್ಲವೇ ?ಆದರೆ ಉದಾರಿಯಾದ ಆ ದೇವನು ಇಷ್ಟೊಂದು ಕೆಟ್ಟ ವಸ್ತುಗಳನ್ನೇಕೆ ಸೃಷ್ಟಿಸಿದ ?' ಎಂದು ಪ್ರಶ್ನಿಸುತ್ತಾರೆ. `ಪ್ರಪಂಚದಲ್ಲಿ  ನಡೆಯುವುದೆಲ್ಲವೂ ದೈವ ನಿಯಾಮಕವಾದರೆ ಕೊಲೆ, ಹಿಂಸೆ, ಯುದ್ಧ, ಬಲತ್ಕಾರ, ಮಾನಭಂಗ, ಕಳ್ಳತನ, ದರೋಡೆ, ಪ್ಲೇಗ್, ಕ್ಷಾಮ, ಪ್ರವಾಹ-ಈ ಎಲ್ಲ ದುರಂತಗಳಿಗೆ ಆತ ಸ್ವಯಂ ಬಾಧ್ಯಸ್ಥನಾಗಲೇಬೇಕಲ್ಲವೆ ?' ಎಂದು ಕೇಳಿದ್ದಾರೆ.
    ಧರ್ಮ ಮತ್ತು ದೇವರು ಮನುಷ್ಯನನ್ನು ಭ್ರಮೆಯಲ್ಲಿಡುತ್ತವೆ. ಬೈಬಲ್ `ದೇವವಾಣಿ' ಅಲ್ಲ ಎನ್ನುವ ಅವರು ಅಲ್ಲಿ ಬರುವ ಮ್ಯಾಥ್ಯೂ ಅಧ್ಯಾಯ 10 ರಲ್ಲಿ ಜೀಸಸ್ ಕ್ರಿಸ್ತ ಹೀಗೆ ಹೇಳುತ್ತಾನೆ, `ನಾನು ಶಾಂತಿಯನ್ನು ಸಾರಲು ಬಂದಿಲ್ಲ ; ಖಡ್ಗವನ್ನು ಕೊಡಲು, ತಂದೆಯ ವಿರುದ್ಧ ಮಗನನ್ನೂ ತಾಯಿಯ ವಿರುದ್ಧ ಮಗಳನ್ನೂ ಸೊಸೆಯ ವಿರುದ್ಧ ಅತ್ತೆಯನ್ನೂ ಎತ್ತಿ ಕಟ್ಟಲು ನಾನು ಬಂದಿದ್ದೇನೆ.' ಇದರಿಂದ ಜೀಸಸ್‍ನ ಉದ್ದೇಶ ಸ್ಪಷ್ಟವಾಗುತ್ತದೆ. ಹೀಗಾಗಿಯೇ ಅವರು ಕ್ರೈಸ್ತ ಧರ್ಮದ ಬಗ್ಗೆ ನಿರಾಕರಣ ವಾದವನ್ನು ಮಂಡಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಇತಿಹಾಸಕಾರ ಮಾರ್ಷಲ್ ಜೆ. ಗೌವ್‍ನ ಮಾತನ್ನು ಉದ್ದರಿಸುತ್ತಾರೆ. ಗೌವ್‍ನ ವಿಚಾರ ಹೀಗಿದೆ, `ಮನುಷ್ಯನಲ್ಲಿ ವಕ್ರಬುದ್ಧಿಯನ್ನು ಬೆಳೆಸುವಲ್ಲಿ ಬೈಬಲ್‍ನ್ನು ಮೀರಿಸುವ ಬೇರೊಂದು ಪುಸ್ತಕವಿಲ್ಲ. ಸುಳ್ಳು, ಕಪಟ, ಮೋಸ, ದಾಸ್ಯ, ಕೊಲೆ, ಸುಲಿಗೆ, ನರಭಕ್ಷಕತನ, ಸೂಳೆಗಾರಿಕೆ, ಅನೈತಿಕ ವ್ಯವಹಾರ, ಹಿಂಸೆ ಮೊದಲಾದ ಚಟುವಟಿಕೆಗಳಿಗೆ ಬೈಬಲ್ ಅನುಮತಿ ನೀಡುತ್ತದೆ ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತದೆ.'
    ಬೌದ್ಧ ಧರ್ಮದ ಜಾತಕ ಕತೆಗಳು ವೈಜ್ಞಾನಿಕ ವಾದವನ್ನು ಬುಡಮೇಲಾಗಿಸುತ್ತವೆ ಎಂದು ಡಾ. ಕೋವೂರ್‍ರು ಅಭಿಪ್ರಾಯಪಡುತ್ತಾರೆ. ಹಿಂದೂ ಧರ್ಮದ ದೇವತೆಗಳನ್ನೂ ಗೇಲಿ ಮಾಡಿರುವ ಅವರು, ಬ್ರಹ್ಮ ತನ್ನ ಮಗಳೇ ಆದ ಸರಸ್ವತಿಯನ್ನು ಮಾನಭಂಗ ಮಾಡಿ ಮದುವೆಯಾದದ್ದು, ಆನಂತರದಲ್ಲಿ ಅವರಿಬ್ಬರಿಗೆ ಹುಟ್ಟುವ ಸ್ವಯಂಭು ಮತ್ತು ಶತರೂಪಾ ಎಂಬ ಹೆಸರಿನ ಅಣ್ಣ-ತಂಗಿಯರೇ ದಂಪತಿಗಳಾಗಿ ಮಕ್ಕಳನ್ನು ಪಡೆಯುವುದು, ಶಿವನಿಂದ ಅತ್ಯಾಚಾರಕ್ಕೆ ಒಳಗಾದ ಮಧುರಾ ಮಂಡೋದರಿಯಾಗಿ ಗರ್ಭ ಧರಿಸುವುದು, ಇಂದ್ರ ಮತ್ತು ಶಂಕರಾಚಾರ್ಯರ ಅತೀ ಕಾಮುಕತನ, ಶಿವನ ಲೈಂಗಿಕ ಹಗರಣಗಳು, ಅನೈತಿಕ ಸಲಿಂಗ ಕಾಮದಿಂದ ಹುಟ್ಟಿದ ಶಬರಿಮಲೈ ಅಯ್ಯಪ್ಪ, ಕೃಷ್ಣನ ವಿಕೃತ ಕಾಮ ಮೊದಲಾದವುಗಳನ್ನು ಉದಾಹರಣೆ ಸಹಿತ ವಿವರಿಸುತ್ತಾರೆ. ಜೊತೆಗೆ ಕ್ರೈಸ್ತ ಯವಹಾನನು ಮೂವತ್ತೆರಡು ಸಾವಿರ ಕನ್ಯೆಯರೊಂದಿಗೆ ನಡೆಸಿದ ವಿಕೃತ ಕಾಮ, ಕ್ರಿಸ್ತನ ತಾಯಿ ಕನ್ಯೆಯಾಗಿಯೇ ಉಳಿದದ್ದು ಮೊದಲಾದವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ವಾಸ್ತವ ವಾದವನ್ನು ಪ್ರತಿಪಾದಿಸುತ್ತಾರೆ. ಈ ಎಲ್ಲ ಕಾರಣಗಳಿಂದಲೇ ಇಂಥವುಗಳನ್ನು ಪಠ್ಯಪುಸ್ತಕ ಮಾಡಬಾರದು ಎಂಬ ವಿಚಾರವನ್ನೂ ಅವರು ಮಂಡಿಸಿದ್ದಾರೆ.
    ದೇವಮಾನವರೆಂದು ಘೋಷಿಸಿಕೊಂಡ ವ್ಯಕ್ತಿಗಳ ಬಗ್ಗೆ ಕಿಡಿ ಕಾರುವ ಅವರು ಪುಟ್ಟಪರ್ತಿ ಸಾಯೀಬಾಬಾನ ಅನೈತಿಕ ಸಲಿಂಗರತಿಯ ವಿಕೃತ ಕಾಮ, ಮಹರ್ಷಿ ಎನಿಸಿಕೊಂಡಿದ್ದ ಮಹೇಶಯೋಗಿ ಪಾಪ್ ಸಂಗೀತಗಾರ್ತಿ ಮಿಯಾಫಾರೋ ಎಂಬಾಕೆಯನ್ನು ಬಲತ್ಕರಿಸಿದ್ದು, ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಿಬಿದ್ದ ಪ್ರಸಂಗಗಳನ್ನು ತಿಳಿಸುತ್ತಾರೆ. ಹಾಗೆಯೇ ನೀಲಕಂಠ ಬಾಬಾ, ಪಂಡರೀಮಲೈಸ್ವಾಮಿ ಆಚಾರ್ಯ ರಜನೀಶ್, ದತ್ತಾಬಾಳ್, ಗುರುದೇವ ಮುಕ್ತಾನಂದ, ನಿರ್ಮಲಾದೇವಿ, ಸ್ವಾಮಿ ಚಿನ್ಮಯಾನಂದ ಮೊದಲಾದವರ ಕುಟೀಲತೆಗಳನ್ನು ಬಹಿರಂಗಗೊಳಿಸುತ್ತಾರೆ.
    ಭೂತಚೇಷ್ಟೆ (ಪೋಲ್ಟರ್ ಗೋಸ್ಟ್) ಬಗೆಗಿನ ತಮ್ಮ ಸ್ವಂತ ಅನುಭವಗಳನ್ನು ದಾಖಲಿಸುವ ಡಾ ಕೋವೂರ್‍ರು ಘಟನೆ ನಡೆದ ಸ್ಥಳಕ್ಕೆ ಹೋಗಿ ವೈಜ್ಞಾನಿಕ ರೀತಿಯಿಂದ ಅವುಗಳನ್ನು ಅಧ್ಯಯನ ಮಾಡಿ, ಅವೆಲ್ಲ ಸುಳ್ಳು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. `ಬಾಲ್ಯದಿಂದಲೂ ಮನಸ್ಸಿನ ಮೇಲಾದ ಪ್ರಭಾವಗಳು ಮತ್ತು ಭೋದನೆಗಳ ಪರಿಣಾಮದಿಂದಾಗಿ ಶೇಖರಗೊಂಡ ಸುಳ್ಳು ನಂಬಿಕೆಗಳು, ಭೂತ-ಪ್ರೇತ-ಪಿಶಾಚಿ-ದೆವ್ವಗಳು, ಜ್ಯೋತಿಷ್ಯ, ಹಸ್ತಸಾಮುದ್ರಿಕ, ಶಕುನಗಳು, ಆಶೀರ್ವಾದ, ಶಾಪ, ಅಂಜನ, ಮುಹೂರ್ತ, ಸ್ವರ್ಗ-ನರಕ, ಪುನರ್ಜನ್ಮ, ಮಾಟ-ಮಂತ್ರ ಮೊದಲಾದವುಗಳು ಕೇವಲ ನಮ್ಮ ಭ್ರಮೆಗಳು ಮಾತ್ರ ಎಂದು ಸೋದಾರಹರಣೆಗಳ ಮೂಲಕ  ವಿಶ್ಲೇಷಿಸುವ ಅವರು, ಈ ಭ್ರಮೆಯನ್ನೇ ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಮಂದಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸುತ್ತಾರೆ.
    ಧ್ಯಾನದಿಂದ ಜ್ಞಾನೋದಯ ಎನ್ನುವದು ಒಂದು ಹಸಿಸುಳ್ಳು. ಅತೀಂದ್ರಿಯ ಧ್ಯಾನದಲ್ಲಿ ಕೆಲವರು ಕ್ರಿಪ್ಟೆಸ್ತೇಸಿಯಾ ಎಂಬ ನರವ್ಯಾಧಿಗೆ ಬಲಿಯಾಗಿರುವ ಸಾಧ್ಯತೆಗಳಿವೆ ಎಂಬುದನ್ನು ವಿಸ್ತಾರವಾಗಿ ಹೇಳುವ ಅವರು, ಮಾದಕ ವಸ್ತುಗಳೂ ಅದೇ ಕ್ರಿಯೆಯನ್ನು ಮನುಷ್ಯನಲ್ಲಿ ಉಂಟುಮಾಡುತ್ತವೆ ಎಂದೂ ಹೇಳುತ್ತಾರೆ. ಈ ಸ್ಥಿತಿಯಲ್ಲಿ ರೋಗಿ, ತನ್ನಲ್ಲಿ ಅತೀಂದ್ರಿಯ ಆಧ್ಯಾತ್ಮಿಕ ಹಾಗೂ ಮಂತ್ರಶಕ್ತಿಗಳಿವೆ ಎಂಬ ಮೂರ್ಖ ಭ್ರಾಂತಿಗೆ ಒಳಗಾಗುತ್ತಾನೆ. ಆದ್ದರಿಂದ ನಿದ್ರಾಜನಕ ಮದ್ದುಗಳಂತೆ ಧ್ಯಾನವನ್ನೂ ನಿಷೇಧಿಸಿ, ಅದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ.
    `ದೇವರು ದೆವ್ವ ವಿಜ್ಞಾನ' ಸಂಕಲನದಲ್ಲಿ ಕೇವಲ ಇಪ್ಪತ್ತೆರಡು ಲೇಖನಗಳಲ್ಲಿಯೇ ಇಷ್ಟೊಂದು ಮಾಹಿತಿಯಿರುವುದನ್ನು ಅರಿತಾಗ, ಡಾ. ಕೋವೂರ್ ಅವರ ಎಲ್ಲ ಬರಹಗಳನ್ನು ಅಧ್ಯಯನ ಮಾಡಿದಲ್ಲಿ ಇನ್ನೆಷ್ಟು ಮಾಹಿತಿಗಳು ಸಿಗಬಹುದು ; ವಿಚಾರ ಮಾಡಿ. ಈ ಪುಸ್ತಕದಲ್ಲಿರುವ ವಿಚಾರಗಳೇ ಮೂಢನಂಬಿಕೆಯ ಅಂಧಕಾರದಲ್ಲಿ ಸಿಲುಕಿರುವ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿವೆ.
                                                   *****

ಮಾತ್ಗವಿತೆ-107

ನಿನ್ನೊಳಗಿನ ನನ್ನ ಹೊರತೆಗೆ ಮೊದಲು
ಕಣ್ಣೊಳಗೆ ಪಡಿಯಚ್ಚಿಸಿದ ನೆನಪಿನ ಚಿತ್ತಾವನ್ನೆಲ್ಲ ಅಳುಕಿಸು
ನಿನ್ನಂತೆ ನಾನಲ್ಲ ; ನನ್ನಂತೆ ನೀನಲ್ಲ !
ವಾಸ್ತವದ ಅರಿವಿನೊಳಗಿನ ಸತ್ಯ ಅರ್ಥವಾಗಿದೆ ;
ಮರೆತು ಬಿಡು ! ಮರೆತು ಬಿಡು ! ಮರೆತು ಬಿಡು !

Wednesday, January 09, 2013

ರಾಘವಾಂಕನ ಹರಿಶ್ಚಂದ್ರ : ಒಂದು ಮರು ವಿವೇಚನೆ

                                                ಡಾ. ಸಿದ್ರಾಮ ಕಾರಣಿಕ
                       
   ಭಾರತೀಯ ಪುರಾಣ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬನಾದ ಹರಿಶ್ಚಂದ್ರ, ಸತ್ಯ ಹರಿಶ್ಚಂದ್ರನೆಂದೇ ಖ್ಯಾತಿ. ಕಾವ್ಯ ನಾಟಕಗಳಲ್ಲಿ ಆತ ಕಾಣಿಸಿಕೊಂಡು ಹಲವರಿಗೆ ಆದರ್ಶಪ್ರಾಯ. ಇಡೀ ಸಾಹಿತ್ಯದಲ್ಲಿ ಇದೊಂದು ವಿಸ್ಮಯ ಕೂಡ. ಹರಿಶ್ಚಂದ್ರನನ್ನು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಗುರುತಿಸಿದವನು ಕವಿ ರಾಘವಾಂಕ. ಕವಿಯ ಕಾವ್ಯದ ರೂಪ ಅತ್ಯಂತ ಮನಾಕರ್ಷಕವಾದುದು. ಕಾವ್ಯ ಕಟ್ಟುವ ಕಲೆ ರಾಘವಾಂಕನಿಗೆ ಜನ್ಮಜಾತ ಕರಗತ ಎನ್ನುವಷ್ಟರಮಟ್ಟಿಗೆ ಕಾವ್ಯದ ಹಿರಿಮೆ ಇದೆ. ಆದರೆ ಇದೆ ಮಾತನ್ನು ಕಾವ್ಯದ ವಸ್ತುವಿನ ಬಗ್ಗೆ ಹೇಳುವಂತಿಲ್ಲ. ಹರಿಶ್ಚಂದ್ರ ಕಾವ್ಯ ಬರೆಯುವುದರ ಉದ್ದೇಶ ಹರನ ಮಹಿಮೆಯನ್ನೂ ಆತನನ್ನು ನಂಬಿದವರಿಗೆ ಆತ ತೋರುವ ಕರುಣೆಯನ್ನೂ ವಿವರಿಸುವುದೇ ಆಗಿದೆ. ಹರಿಶ್ಚಂದ್ರನ ಕತೆ ಇಲ್ಲಿ ನೆಪ ಮಾತ್ರ. ಹೀಗಾಗಿ ಈ ಕಾವ್ಯದ ವಸ್ತು ಸೂತ್ರಬದ್ಧತೆಯನ್ನು ಕಳೆದುಕೊಂಡಿದೆ. ಇಲ್ಲಿ ಹರಿಶ್ಚಂದ್ರನ ಪಾತ್ರ ಮೇಲ್ಜಾತಿಯವನೆನ್ನಿಸಿಕೊಂಡ ಅರಸನೊಬ್ಬನ ಮಡಿವಂತಿಕೆಯನ್ನು ಮಾತ್ರ ಪ್ರತಿನಿಧಿಸುತ್ತದೆ. ಚಾತುರ್ವರ್ಣದ ಅಂಧಶೃದ್ಧೆಯಲ್ಲಿ ಕನಲುವ ಚಿತ್ರ ಇಲ್ಲಿದೆ. ಬಾಲಸಾಹಿತ್ಯದಲ್ಲಿ ಬಂದ ಕತೆಯನ್ನೇ ಓದಿಕೊಂಡು ಬಂದಿರುವವರಿಗೆ ಇದು ಒಲ್ಲದ ಸತ್ಯವೇ ! ರಾಘವಾಂಕನ ಹರಿಶ್ಚಂದ್ರ ಕಾವ್ಯ ಹರಿಶ್ಚಂದ್ರನ ಮಾನಸಿಕ ತೊಳಲಾಟವನ್ನು ಚಿತ್ರಿಸುವಲ್ಲಿ ಸಫಲತೆ ಕಂಡಿದೆ ಮತ್ತು ಮೊಗೆದಷ್ಟು ಹೊಸ ಹೊಸ ಅರ್ಥಗಳನ್ನು ಅನಾವರಣ ಮಾಡುತ್ತ ಸಾಗುತ್ತದೆ.
    ರಾಘವಾಂಕನ ಹರಿಶ್ಚಂದ್ರ, ವಿಶ್ವಾಮಿತ್ರ ಮತ್ತು ವಸಿಷ್ಠ ಎಂಬ ಎರಡು ಕೋಣಗಳ ನಡುವೆ ಸಿಕ್ಕಿಕೊಂಡ ಗಿಡ ಎಂಬ ಮಾತು ಸತ್ಯವಾದರೂ ವಸ್ತುಸ್ಥಿತಿ ಅರಿತ ಮೇಲಾದರೂ ಆ ಎರಡೂ ಕೋಣಗಳಿಂದ ಸಮದೂರ ಕಾಪಾಡಿಕೊಳ್ಳಲು ಸಾಧ್ಯವಿತ್ತು. ಆದರೆ ಆತ ಚಂಚಲ ವೃತ್ತಿಯಿಂದ ಚಲನೆಯನ್ನು ಕಳೆದುಕೊಳ್ಳುತ್ತಾನೆ. ಮನಃಶಾಸ್ತ್ರೀಯ ದೃಷ್ಟಯಿಂದ ಇಂಥ ವರ್ತನೆಯನ್ನು ಮಾನಸಿಕ ವಿಕಲ್ಪತೆ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಫೋಬಿಯಾ !
1. ಸತ್ಯ ಮತ್ತು ಹರಿಶ್ಚಂದ್ರ : ಸತ್ಯ ಎಂಬುದು ಶಿವ ಎಂಬರ್ಥವೂ ಇದೆ. ಇದಕ್ಕೆ ಮಂಗಳಕಾರಿ ಎಂಬ ಅನ್ಯೋಕ್ತಿಯೂ ಇದೆ. ರಾಘವಾಂಕನ ಹರಿಶ್ಚಂದ್ರ ಎಲ್ಲಿಯೂ ಈ ಸತ್ಯತನ ತೋರಿದ ಉಲ್ಲೇಖಗಳು ಸಿಗುವುದಿಲ್ಲ. ಸಾಂಪ್ರದಾಯಿಕ ನಂಬಿಕೆಗಳು ಮಾತ್ರ ಆತನನ್ನು ಸತ್ಯವಂತನೆಂದೇ ಪರಿಗಣಿಸುತ್ತವೆ. ಕೊಟ್ಟ ಮಾತಿಗೆ ತಪ್ಪಿ ನಡೆಯುವ ಆತನ ವರ್ತನೆ ಯಾವ ಸತ್ಯವನ್ನು ಅಥವಾ ಎಂಥ ಸತ್ಯವನ್ನು ಒಳಗೊಂಡಿದೆ ಎನ್ನವುದೇ ನಿಗೂಢ !
    ಹರಿಶ್ಚಂದ್ರ ದಿಟದ ವ್ಯಕ್ತಿಯಲ್ಲ ಎಂಬುದಕ್ಕೆ ವರುಣನಿಗೆ ಮಾತು ತಪ್ಪಿ ಜಲೋದರ ರೋಗಕ್ಕೆ  ಈಡಾದ ಪ್ರಕರಣವೇ ಸಾಕ್ಷಿ. ರಾಘವಾಂಕ ಇದನ್ನು ಚಿತ್ರಿಸಲು ಹೋಗದೇ ವಿಶ್ವಾಮಿತ್ರನ ಮೂಲಕ ಈ ಕತೆಯನ್ನು ಆಡಿಸಿದ್ದಾನೆ.
        ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ            
        ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ                
       ಧ್ವರಕೆ ಪಶುವಂ ಮಗನ ಮಾಡಲಾರದೆ ಮೋಹದಿಂದಜೀಗರ್ತ ಮುನಿಯ        
        ವರಸುತ ಶುನಶ್ಯೇಪನಂ ತಂದು ಯಾಗವಿಧಿ                
        ಗರಿದು ಬೇಳಲ್ಕೆ ಮನದಂದ ಪಾತಕನು ಭೂ               
      ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕೆಡೆನುಡಿದನು (2-19)
   
           ಇದು ವಿಶ್ವಾಮಿತ್ರ ಹುಟ್ಟಿಸಿಕೊಂಡು ಹೇಳಿದ್ದಲ್ಲ. ಆತ ಸತ್ಯದ ಅನಾವರಣ ಮಾಡಿದ್ದಾನೆ. ಹೀಗಾಗಿಯೇ ಈ ಮಾತಿಗೆ  ವಸಿಷ್ಠ ಯಾವುದೇ ನಿರಾಕರಣೆ ತೋರದೆ ತೇಲಿಸಿ ಮಾತನಾಡುತ್ತಾನೆ. ಮಗನಿಲ್ಲದೆ ಮುಕ್ತಿಯಿಲ್ಲ ಎಂಬ ನಂಬಿಕೆಯಿಂದಾಗಿ ವರುಣನ ವರದಿಂದ ಮಗನನ್ನು ಪಡೆದು ಮಾತಿಗೆ ತಪ್ಪುತ್ತಾನೆ. ಮಾಯದಬಲೆಯರನ್ನು ಹೊಡೆದೋಡಿಸಿದ ಮೇಲೆ ಕೆಂಡ ಕಾರುತ್ತ ಬರುವ ವಿಶ್ವಾಮಿತ್ರನ ಜತೆಯಲ್ಲಿಯ ಸಂವಾದ ಕೂಡ ಹರಿಶ್ಚಂದ್ರ ನುಡಿದಂತೆ ನಡೆಯುವ ವ್ಯಕ್ತಿಯಲ್ಲ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸುತ್ತದೆ.
        ಎಡೆವಿಡದೆ ಬೇಡಿ ಕಾಡುವಿರಾದಡಿನ್ನು ಕೇಳ್                
        ಕಡೆಗೆನ್ನ ಸರ್ವ ರಾಜ್ಯವನಾದಡಂ ನಿಮಗೆ                
        ಕೊಡಹಡೆವೆನೈಸಲ್ಲದೀಯೊಂದು ತೇಜಮಂ ಕೊಡೆ..... (8-32)
    ಎನ್ನುತ್ತಾನೆ. ಸರ್ವರಾಜ್ಯವನ್ನು ಧಾರೆ ಎರೆದು ಕೊಡುವುದಾಗಿ ಹೇಳುವ ಆತ, ಆನಂತರದಲ್ಲಿ ತಾನು ಹಾಗೇ ಹೇಳಿಯೇ ಇಲ್ಲ ಎಂದು ವಾದಿಸುವುದು ಸತ್ಯವಂತನ ಲಕ್ಷಣ ಹೇಗಾದೀತು ? ‘ನಾನಿತ್ತುದೇನಯ?’ ಎಂದು ಮರಳಿ ಪ್ರಶ್ನಿಸುವ ಮೂಲಕ ಜಾರಿಕೊಳ್ಳುತ್ತಾನೆ. ಹೀಗಾಗಿ ಹರಿಶ್ಚಂದ್ರ ಚಂಚಲ ಮನಸ್ಸಿನವನು ಎನ್ನದೇ ಅನ್ಯ ಮಾರ್ಗವಿಲ್ಲ. ‘ಹರಿಶ್ಚಂದ್ರಭೂನಾಥ ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ’ (2-20) ಎಂಬ ವಸಿಷ್ಠನ ಮಾತು ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ ಹಾಗೆಯೇ ಹಲವು ವಿಧದಿಂದ ರಾಜ್ಯವನ್ನು ಉಳಿಸಿಕೊಳ್ಳಲು ದೀನನಾಗಿ ವಿಶ್ವಾಮಿತ್ರನಲ್ಲಿ ಮೊರೆಯಿಡುವ ಹರಿಶ್ಚಂದ್ರನ ಪಾತ್ರ ಇಲ್ಲಿ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತದೆ. ವಿಶ್ವಾಮಿತ್ರನಂತಹ ಚಾಣಾಕ್ಷಮತಿ ಇಲ್ಲದೇ ಬೇರೆ ಪಾತ್ರ ಯಾವುದಾದರೂ ಅಲ್ಲಿದ್ದಿದ್ದರೆ ಹರಿಶ್ಚಂದ್ರ ತನ್ನ ಮಾತಿನ ಮೋಡಿಯಿಂದ ಮರುಳ ಮಾಡಿ ರಾಜ್ಯ ಉಳಿಸಿಕೊಳ್ಳುತ್ತಿದ್ದ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
    ಕಾಶಿ ನಗರದಲ್ಲಿ ಕೂಡ ಆತನ ವರ್ತನೆ  ಬದಲಾಗುವುದಿಲ್ಲ. ದಕ್ಷಿಣೆಯ ಹಣಕ್ಕಾಗಿ ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಮಾರುವ ಹರಿಶ್ಚಂದ್ರ ತನ್ನನ್ನೂ ಮಾರಾಟ ಮಾಡಿಕೊಳ್ಳಲು, ಗ್ರಾಹಕರನ್ನು ಕೂಗಿ ಕರೆಯುತ್ತಾನೆ. ಆದರೆ ಕೊಳ್ಳಲು ಬರುವ ವೀರಬಾಹುಕ ಕೇವಲ ಕೆಳಜಾತಿಯವ ಎಂಬ ಕಾರಣಕ್ಕಾಗಿಯೇ ತನ್ನನ್ನು ಮಾರಿಕೊಳ್ಳಲು ನಿರಾಕರಿಸುತ್ತಾನಲ್ಲದೇ ಕೊಳ್ಳಲು ಬಂದವನ ಮೇಲೆ ಕನಲಿ ಹರಿಹಾಯುವುದು ಆತನ ಮಾತಿಗೆ ತಪ್ಪುವ ಗುಣವನ್ನು ಮತ್ತೊಮ್ಮೆ ಪ್ರತಿನಿಧಿಸುತ್ತದೆ. ಹೀಗಾಗಿಯೇ ವೀರಬಾಹುಕ, ಹರಿಶ್ಚಂದ್ರನನ್ನು ‘ಹುಸಿಯಹೊಲೆಹೊರೆಕಾರ’ ಎಂದೇ ಸಂಬೋಧಿಸುವುದು ಉಚಿತವಾಗಿಯೇ ಇದೆ. ವ್ಯಾಪಾರದ ಸಂದರ್ಭದಲ್ಲಿ ಜಾತಿ, ಕುಲ, ಅಥವಾ ಇನ್ನಿತರ ಯಾವುದೇ ತೆರನಾದ ಭೇದಗಳನ್ನು ಪರಿಗಣಿಸಬಾರದು. ಗ್ರಾಹಕನಾದವ ವ್ಯಾಪಾರಿ ಹೇಳಿದ ದರ ಕೊಡಲು ಸಿದ್ಧನಾದರೆ ಯಾವುದೇ ತಕರಾರೂ ಇಲ್ಲದೇ ವ್ಯಾಪಾರ ಮಾಡಬೇಕಾಗುತ್ತದೆ. ಆದರೆ ಹರಿಶ್ಚಂದ್ರ ಇದಕ್ಕೆ ವ್ಯತಿರಿಕ್ತನಾಗಿ ವರ್ತಿಸುವ ಮೂಲಕ ತನ್ನ ಮಾತಿಗೆ ತಪ್ಪುವ ಗುಣವನ್ನು ಪ್ರದರ್ಶಿಸುತ್ತಾನೆ.
2. ವರ್ಣಧರ್ಮ ಮತ್ತು ಹರಿಶ್ಚಂದ್ರ : ರಾಘವಾಂಕನ ಹರಿಶ್ಚಂದ್ರ ವರ್ಣಧರ್ಮದ ಚೌಕಟ್ಟಿಗೆ ಒಳಗಾದವನು. ಅಷ್ಟೇ ಅಲ್ಲ, ಆ ತೆರನಾಗಿಯೇ ಎಲ್ಲರೂ ಬದುಕಬೇಕು ಎಂಬ ಕಠೋರ ಉಕ್ತಿ ಆತನದಾಗಿತ್ತು. ಇದು ಮೊಟ್ಟಮೊದಲ ಬಾರಿಗೆ ಅತ್ಯಂತ ಮಾರ್ಮಿಕವಾಗಿ ಮೂಡಿ ಬಂದದ್ದು ಮಾಯದಬಲೆಯರ ಪ್ರಸಂಗದಲ್ಲಿ. ಮೇಲು-ಕೀಳು ಜಾತಿ ಎಂಬ ವರ್ಗೀಕರಣದ ಮಡಿವಂತಿಕೆ ಹರಿಶ್ಚಂದ್ರನಲ್ಲಿದೆ. ಒಂದು ನಾಡಿನ ಒಬ್ಬ ಅರಸನಾಗಿ ಎಲ್ಲರನ್ನು ಸಮಾನಭಾವದಿಂದ ಕಾಣಬೇಕೆಂಬ ತತ್ವ ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕೊನೆಯಲ್ಲಿ ಬರುವ ವೀರಬಾಹುಕನ ಪ್ರಸಂಗದಲ್ಲೂ ಹರಿಶ್ಚಂದ್ರನ ಈ ಮಡಿವಂತಿಕೆಯ ವರ್ತನೆ ಪುನರಾವರ್ತಿತವಾಗುತ್ತದೆ.
    ಹೊಲತಿಯರು, ಅನಾಮಿಕೆಯರು, ಮಾಯದಬಲೆಯರು ಎಂಬ ಹೆಸರುಗಳಿಂದ ಕಾವ್ಯದಲ್ಲಿ  ಕಾಣಿಸಿಕೊಳ್ಳುವ ಈ ಯುವತಿಯರು ವಿಶ್ವಾಮಿತ್ರನ ಸೃಷ್ಟಿ. ಹಾಗೆಂದ ಕೂಡಲೇ ಅವರೇನು ಮಾಯಾ-ಮಂತ್ರಗಳಿಂದ ಜನ್ಮ ತಳೆದವರಲ್ಲ. ಯಾವುದೇ ಒಂದು ಹೆಣ್ಣಿನಲ್ಲಿ ವಿಶ್ವಾಮಿತ್ರನಿಗೆ ಹುಟ್ಟಿರಬಹುದಾದ ಮಕ್ಕಳೇ ಅವರಾಗಿದ್ದಾರೆ ಎಂಬುದನ್ನು ವಾಸ್ತವದ ಅರಿವಿರುವವರೆಲ್ಲರಿಗೂ ಸ್ಪಷ್ಟವಾಗಿರುವ ಅಂಶ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ ಬಂದೆವು ಎನ್ನುವ ಉಲ್ಲೇಖ ಇದನ್ನೇ ಸಾರುತ್ತದೆ. ಇಂಥ ಮಾಯದಬಲೆಯರನ್ನು ಹರಿಶ್ಚಂದ್ರ ಅಪಮಾನಗೊಳಿಸಿ, ಹೊಡೆದೊಡಿಸುವ ಕ್ರಿಯೆ ರಾಜನ ಮುಂಗೋಪಿತನಕ್ಕೆ ಸಾಕ್ಷಿಯಾಗುತ್ತದೆ ಮತ್ತು ಆತನ ಜಾತಿ ಬಗೆಗಿನ ವರ್ತನೆಯನ್ನು ಅನಾವರಣಗೊಳಿಸುತ್ತದೆ.
    ಹರಿಶ್ಚಂದ್ರ ಕಾಡಿನಲ್ಲಿ ಬೇಸತ್ತು, ದಣಿದು ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಯದಬಲೆಯರು ಅಲ್ಲಿಗೆ ಬಂದ ತಮ್ಮ ಮಧುರ ಗಾಯನದಿಂದ ಆತನ ಬೇಸರ ನೀಗುವಂತೆ ಮಾಡುತ್ತಾರೆ. ಇದರಿಂದ ಸಂತುಷ್ಟಗೊಂಡ ಹರಿಶ್ಚಂದ್ರ ಆಭರಣಗಳ ಕಾಣಿಕೆ ನೀಡಿದಾಗ ಅದನ್ನು ಸ್ವೀಕರಿಸಲೊಲ್ಲದ ಆ ಮಾನನಿಯರು ‘ಬಿರುಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮುತ್ತಿನ ಸತ್ತಿಗೆಯನ್ನು ಬಯಸುತ್ತಾರೆ. ಮುತ್ತಿನ ಸತ್ತಿಗೆ ರವಿಕುಲದ ಪ್ರತೀಕ. ಅದನ್ನು ಕೊಡಲಾಗದು ಎನ್ನುವ ಹರಿಶ್ಚಂದ್ರ ಅದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾನೆ. ಆಗ ಆ ಅನಾಮಿಕೆಯರು ಅದರ ಬದಲಾಗಿ ‘ವಲ್ಲಭನಾಗಿ ಚಿತ್ತದುಮ್ಮಳಿಕೆಯಂ ಕಳೆ’ ಎನ್ನುವ ಮೂಲಕ ಆತನ ರಾಣಿಯರಾಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ ಹರಿಶ್ಚಂದ್ರ ಅವರು ಕೀಳು ಕುಲದವರು ಎಂಬ ಒಂದೇ ಕಾರಣದಿಂದ ಅವರನ್ನು ತಿರಸ್ಕರಿಸುತ್ತಾನೆ. ಅವರು ಹಾಗೇ ಕೇಳಿದ್ದೇ ತಪ್ಪೆಂದು ವಾದಿಸುತ್ತಾನೆ. ‘ನಿಮಗೋಸಿಗೆನ್ನ ಕುಲಮಂ ಕೆಡಿಪೆನೆ’ ಎಂಬುದಾಗಿ ಪ್ರಶ್ನೆ ಎಸೆಯುತ್ತಾನೆ.
    ವರ್ಣಧರ್ಮದಲ್ಲಿ ಕೀಳು ಜಾತಿಯ ಹೆಣ್ಣುಗಳನ್ನು ಮದುವೆಯಾಗಲು ಯಾವುದೇ ತಕರಾರು ಇಲ್ಲ. ಆದರೆ ಹರಿಶ್ಚಂದ್ರ ವರ್ತಿಸುವ ರೀತಿ ತೀರ ವಿಚಿತ್ರವಾಗಿದೆ. ವೈದಿಕ ಧರ್ಮದ ನಿಯಮಾವಳಿಗಳಿಂದ ಕೂಡಿದ ಮನುಸ್ಮೃತಿಯೇ ಈ ಅನುಲೋಮ ವಿವಾಹಕ್ಕೆ ಮಾನ್ಯತೆ ನೀಡಿದೆ. ಆದರೆ ಕುಲದ ನೆಪವೊಡ್ಡಿ ಹರಿಶ್ಚಂದ್ರ ಆ ಅನಾಮಿಕೆಯರನ್ನು ತಿರಸ್ಕರಿಸುವ ಪರಿ ಬೇರೆ ಏನನ್ನೋ ಸೂಚಿಸುವಂತಿದೆ.
    ಜನಸಾಮಾನ್ಯರಲ್ಲಿ ಬೀಡು ಬಿಟ್ಟಿರುವ ಕಂದಾಚಾರಗಳ ಪ್ರತಿರೂಪ ಹರಿಶ್ಚಂದ್ರ ಎನ್ನಲಡ್ಡಿಯಿಲ್ಲ. ಆತನ ವರ್ತನೆಯೇ ಜಟೀಲ. ಕೀಳು ಕುಲದವರು ಅಸ್ಪೃಶ್ಯರೆಂದೇ ಭಾವಿಸುವ ವ್ಯಕ್ತಿ ಅವರನ್ನು ಹೇಗೆ ತಾನೆ ಮುಟ್ಟಿಯಾನು ? ಆ ಮಾಯದಬಲೆಯರನ್ನು ಮದುವೆಯಾಗುವಂತೆ ಸ್ವತಃ ವಿಶ್ವಾಮಿತ್ರನೇ ಬಂದು, ‘ಎನ್ನ ಬಸುರಿಂದ ಮೂಡಿರ್ದ ಕನ್ನೆಯರು’ (8/11) ಎಂದು ಹೇಳಿದರೂ ಹರಿಶ್ಚಂದ್ರನದು ಪುನರುಕ್ತಿಯಷ್ಟೆ ! ‘ಹೊಲತಿಯರ ನೆರೆವರೆ’ (8/14), ‘ಹೊಲತಿಯರನಿರಿಸಿಕೊ ಎಂದು ನೀಂ ಕರುಣಿಸಬಹುದೆ’ (8/23), ‘ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿಮಿತ್ತ ಹೋಹವನಲ್ಲ’ (8/20), ‘ಹೊಲೆಯರ ಸಂಗಮಂ ಮಾಡಿ ನಿಷ್ಕಾರಣಂ ಗೋರ ನರಕಾಳಿಯೊಳು ಬಿದ್ದು ಹೊರಳುವವನಲ್ಲ’ (8/27) ‘ಹೊಲತಿಯರ ಕೂಡಿ ನಡೆಯೆಂಬರೇ ಮುನಿಗಳು’ (8/20) ಎಂಬುದಾಗಿ ಪ್ರತಿಮಾತಿನ ಮೂಲಕ ಆ ಅನಾಮಿಕೆಯರನ್ನು ತಿರಸ್ಕರಿಸುತ್ತಾನೆ.
    ಈ ಮೊದಲೇ ಹೇಳಿದಂತೆ ಮಾಯದಬಲೆಯರು ವಿಶ್ವಾಮಿತ್ರನ ಅನೈತಿಕತೆಯ ಸಂತಾನವೇ ಆಗಿದ್ದಾರೆ. ವರ್ಣಧರ್ಮ ಅಂತಹ ವ್ಯಕ್ತಿಗಳ ಜೊತೆ ಸಂಬಂಧ ಬೆಳೆಸುವುದನ್ನು ನಿಷೇಧಿಸಿದೆ. ಈ ಕಾರಣವಾಗಿಯೇ ಹರಿಶ್ಚಂದ್ರ ಮಾತು ಮಾತಿಗೂ ಅವರು ಹೊಲತಿಯರು ಎಂದು ನುಡಿಯುತ್ತಾನೆ. ಅವರು ಬಹುಶಃ ವಿಶ್ವಾಮಿತ್ರನ ಕುಲೀನ ಹೆಣ್ಣುಗಳಾಗಿದ್ದರೆ ಹರಿಶ್ಚಂದ್ರ, ಅವರನ್ನು ಮದುವೆಯಾಗುತ್ತಿದ್ದನೇನೋ ? ಯಾಕೆಂದರೆ ದೇವಿಭಾಗವತದ ಪ್ರಕಾರ ಹರಿಶ್ಚಂದ್ರನಿಗೆ ನೂರು ಜನ ಹೆಂಡತಿಯರಿದ್ದರು. ಇನ್ನಿಬ್ಬರು ಹೆಚ್ಚಾಗುತ್ತಿರಲಿಲ್ಲ ಅಲ್ಲವೇ ?
3. ರಾಘವಾಂಕನ ದೃಷ್ಟಿ : ರಾಘವಾಂಕ ಕೂಡ ಜಾತಿಯ ಬಲೆಯಿಂದ ಹೊರಬಿದ್ದವನಲ್ಲ. ಕಾವ್ಯದ ವಸ್ತು ಹೇಗಿದ್ದರೂ ಅದನ್ನು ನಿರ್ವಹಿಸುವಲ್ಲಿ ಕವಿಯ ಪಾತ್ರ, ಮನೋಸ್ಥಿತಿ ಮುಖ್ಯವಾಗಿರುತ್ತದೆ. ಹೀಗಾಗಿ ಕವಿ ಇಲ್ಲಿ ಮಾಯದಬಲೆಯರ ಮೂಲಕ ಪಾಪದ ಫಲವಾಗಿ ಕೆಳಜಾತಿಯವರು ಹುಟ್ಟುತ್ತಾರೆ ಎಂಬ ವಾದ ಮುಂದಿಡುತ್ತಾನೆ. ‘ಶಾಪದಿಂದಾದ ದುಷ್ಕುಲಂ ಸತ್ಕುಲಜ ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂಬಾಪೇಕ್ಷೆಯಿಂ’ (7/22) ಬಂದೆವೆ ಎನ್ನುವ ಮಾಯದಬಲೆಯರ ಮಾತು ಇದನ್ನು ದೃಢಪಡಿಸುತ್ತದೆ. ಆ ಕಾಲದ ವಿಚಾರ ಏನೇ ಇದ್ದರೂ ಕವಿಯ ಮನೋಭಾವ ಶರಣಕ್ರಾಂತಿಯಿಂದ ಪ್ರೇರಿತವಾಗಿದ್ದರೂ ಜಾತಿಯ ಮೇಲು-ಕೀಳಿನ ತಾರತಮ್ಯವನ್ನು ಕವಿ ನಿರಾಕರಿಸುವುದಿಲ್ಲ. ಬಹುಶಃ ರಾಘವಾಂಕನಿಗೆ ಹರಿಹರ ಏಟು ನೀಡಿ ಹಲ್ಲು ಮುರಿದದ್ದು ಈ ಪ್ರಸಂಗದ ಕಾರಣವಾಗಿಯೇ ಇರಬೇಕು. ರಾಘವಾಂಕನನ್ನು ಬಂಡಾಯ ಕವಿ, ಕ್ರಾಂತಿ ಕವಿ ಎಂದು ಹೊಗಳಿದವರು ಈ ವಿಚಾರವನ್ನು ಗಮನಿಸಿದಂತೆ ತೋರುವುದಿಲ್ಲ.
    ರಾಘವಾಂಕನ ಹರಿಶ್ಚಂದ್ರ, ಕಾವ್ಯದ ಕೊನೆಯವರೆಗೂ ಕೂಡ ಜಾತಿಯ ಬಗ್ಗೆ  ಇಟ್ಟುಕೊಂಡಿರುವ  ಮೇಲರಿಮೆಯನ್ನು  ಬಿಟ್ಟುಕೊಡುವುದಿಲ್ಲ. ಕಾಶಿ ಕ್ಷೇತ್ರದಲ್ಲಿ ತನ್ನ ಹೆಂಡತಿ-ಮಗನನ್ನು ಮಾರಿದ ಮೇಲೆ, ಋಣದ ಭಾರ ಕಡಿಮೆಯಾಗದೇ ಇದ್ದಾಗ ತನ್ನನ್ನು ತಾನು ಮಾರಿಕೊಳ್ಳಲು ತಯಾರಾಗುತ್ತಾನೆ. ಆತನನ್ನು ಖರೀದಿಸಲು ಬಂದ  ವೀರಬಾಹುಕನ ‘ಸಂಬಳಿಗೋಲು’ ಕಂಡು ಈತ ಹೊಲೆಯನೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಹರಿಶ್ಚಂದ್ರ ಆತನಿಗೆ ತನ್ನನ್ನು ಮಾರಿಕೊಳ್ಳುವುದಿಲ್ಲ ಎನ್ನುತ್ತಾನೆ.
     
ನಡುಗದಂಜದೆ ಹೆದರದೋಸರಿಸದೆಕಟಕಟ               
ಕಡೆಯ ಹೊಲೆಯು ಮೇರೆದಪ್ಪಿ ಬಂದೆನ್ನ ತ               
ನ್ನೊಡೆಯಂಗೆ ದಾಸನಾಗೀಗಗಳೆಂದೆಂಬುದಿದು ಕಾಲಗುಣವೀ ಎನ್ನನು       
ಎಡೆಗೊಂಡ ಕರ್ಮಫಲವೋ ಕಡೆಗೆ ಮೆಣಸು ಹುಳಿ           
ತಡೆ ಜೋಳದಿಂ ಕುಂದೆ ನೋಡು ನೋಡೆಂದು ಘುಡು ಘುಡಿಸಿ        
ಕೋಪಾಟೋಪದಿಂ ಜರಿದು ಝಕಿಸಿದನವನಿಪನನಾಮಿಕನನು (7/19)
    ಕ್ರಯ ಮಾಡಲು ಬಂದ ಗ್ರಾಹಕನ ಜಾತಿ ಹಿಡಿದು ಭ್ರಾಂತಿ ಕಳೆದುಕೊಂಡಂತೆ ವರ್ತಿಸುವ ಹರಿಶ್ಚಂದ್ರನ ದೃಷ್ಟಿ ಎಷ್ಟೊಂದು ಸಂಕುಚಿತವಾದುದಾಗಿದೆ ಎಂಬುದನ್ನು ಈ ಪದ್ಯ ತಿಳಿಸುತ್ತದೆ. ತಾನೀಗ ರಾಜನಲ್ಲವೆಂದು ಅರಿತೂ  ಪರರಾಜ್ಯದಲ್ಲಿ ಬಂದು ‘ಹೊನ್ನುಳ್ಳ ಧನಿಕರಾರಾದೊಡಂ ಕೊಂಬುವರ್ ಬನ್ನಿ’ ಎಂದು ಕೂಗಿದವನೂ ಹರಿಶ್ಚಂದ್ರನೇ ವೀರಬಾಹುಕ ಹೊಲೆಯ ಎಂದರಿತ ತಕ್ಷಣ ಕನಲುವ ಅವಶ್ಯಕತೆ ಏನಿತ್ತು ? ಇಂಥ ವರ್ತನೆಯನ್ನು ಗಮನಿಸಿಯೇ ವೀರಬಾಹುಕನೂ ಕನಲಿ, ‘ಹದುಳಿಪ್ಪ ನಾನು ಚಾಂಡಾಳನೋ ಹುಸಿಯ ಹೊಲೆಯಿಂ ಹೋರುವ ನೀನು ಚಾಂಡಾಳನೋ’ ಎಂದು ಹೇಳುವ ಮಾತಿನ ಏಟು ಬಹುಶಃ ಹರಿಶ್ಚಂದ್ರನಿಗೆ ತಾಗಿದಂತಿಲ್ಲ. ನುಡಿದಂತೆ ನಡೆಯದ ಹರಿಶ್ಚಂದ್ರ ಸತ್ಯವಂತನೆಂದು ಜಗತ್ತಿಗೆ ಹೇಗೆ ಪರಿಚಯವಾದನೋ ? ಆತನನ್ನು ‘ಹುಸಿಯ ಹೊಲೆಹೊರೆಕಾರ’ ಎಂದು ವೀರಬಾಹುಕ ಸಂಭೋದಿಸಿರುವುದು ಔಚಿತ್ಯಪೂರ್ಣವಾಗಿದೆ.
    ಹರಿಶ್ಚಂದ್ರನಲ್ಲಿಯ ಜಾತಿಯ ಮೇಲರಿಮೆ, ಆತ ತಿನ್ನುವ ಕೂಳಿಗೂ ವ್ಯಾಪಿಸಿದೆ. ಹೆಣದ ಪಡಿಯಕ್ಕಿಯನ್ನು ವೃಷಭಕ್ಕೆ ತಿನ್ನಿಸಿ ಅದು ಹಾಕಿದ ಸೆಗಣಿಯಲ್ಲಿ ಪಚನವಾಗದೇ ಉಳಿದ ಅಕ್ಕಿಯನ್ನು ಆರಿಸಿ ಅನ್ನ ಮಾಡಿ ತಿನ್ನುವ ಆತನ ವರ್ತನೆ ವಿಚಿತ್ರವೆನಿಸುತ್ತದೆ.
    ಜಲ ಪ್ರೋಕ್ಷಿಸಿ ಶುದ್ಧೀಕರಣ ಮಾಡಿದರೆ ಸಾಕು ಎಂದು ಮನುಸ್ಮೃತಿಯೇ ಹೇಳುತ್ತದೆ. ಅದೂ ಅಲ್ಲದೆ ಶುದ್ಧೀಕರಣದ ಅವಶ್ಯಕತೆಯಾದರೂ ಏನು ? ತಾನು ಮಾಡುವ ವೃತ್ತಿಗೆ ಲಭ್ಯತೆಯ ಆಧಾರದ ಮೇಲೆ ಬದುಕಬೇಕೆಂಬ ಕನಿಷ್ಟ ಆಲೋಚನೆಯಾದರೂ ಆತನಿಗೆ ಬೇಡವೇ ? ತಾನು ಮೇಲ್ಜಾತಿಯವ, ಮೇಲಾಗಿ ಅರಸ ಎನ್ನುವ ಮೇಲರಿಮೆ ಆತನಿಂದ ಕಳಚುವುದೇ ಇಲ್ಲ. ಅಂಬಲಿ ಉಣ್ಣುವಾತನಿಗೆ ಮೀಸೆ ತಿಕ್ಕುಲೊಬ್ಬ ಆಳು ಎಂಬಂತೆ ವೀರಬಾಹುಕನ ಆಳಾಗಿ ದುಡಿಯುವ ಹರಿಶ್ಚಂದ್ರನ ಸೇವೆ (ಕೈ-ಕಾಲು ಒತ್ತುವುದು, ಗೋಮಯ ಅಕ್ಕಿಯನ್ನು ಆರಿಸಿ ತರುವುದು ಇತ್ಯಾದಿ) ಮಾಡಲು ಸತ್ಯಕೀರ್ತಿ ಎಂಬ ಮಂತ್ರಿ  ಇದ್ದೇ ಇರುತ್ತಾನೆ. ತನ್ನನ್ನು ತಾನು ಮಾರಾಟ ಮಾಡಿಕೊಳ್ಳದೇ ಸತ್ಯಕೀರ್ತಿಯನ್ನು ಮಾರಿದ್ದರೂ ನಡೆಯುತ್ತಿತ್ತಲ್ಲವೇ ? ಬೆಂಕಿಗೆ ಆಹುತಿಯಾಗಲು ನಾ ಮೊದಲೆಂದು ಮುನ್ನುಗ್ಗುವ ಸತ್ಯಕೀರ್ತಿ ಮಾರಾಟದ ವಸ್ತುವಾಗಲು ಹರಿಶ್ಚಂದ್ರನ ಮಾತಿಗೆ ಇಲ್ಲವೆನ್ನುತ್ತಿದ್ದನೇ ?
    ಎಲ್ಲ ನಿಟ್ಟಿನಿಂದ  ನೋಡಿದಾಗಲೂ ಹರಿಶ್ಚಂದ್ರ ಸತ್ಯವಂತ ಎಂಬುದಾಗಲೀ ಆದರ್ಶ ಅರಸನಾಗಿಯಾಗಲೀ ಕಾಣಿಸುವುದೇ ಇಲ್ಲ. ಒಬ್ಬ ಮೇಲ್ಜಾತಿಯ ಕನವರಿಕೆಯಲ್ಲಿ ಮತಿವಿಕಲ್ಪಕ್ಕೆ ಒಳಗಾದ ವ್ಯಕ್ತಿಯಂತೆ ಕಾವ್ಯದಲ್ಲಿ ಆತನ ವರ್ತನೆ ಸ್ಪಷ್ಟವಾಗಿ ಬಿಂಬಿತವಾಗಿದೆ.                
               
                                        *******

Tuesday, January 08, 2013

ಡಾ. ಅಂಬೇಡ್ಕರ್ ಮತ್ತು ನಂತರ.....


                               ಡಾ. ಸಿದ್ರಾಮ ಕಾರಣಿಕ 


ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೌಲ್ವಿಕ ನೀತಿತತ್ವಗಳನ್ನು ಪ್ರತಿಯೊಬ್ಬರೂ ಹೇಳುತ್ತಾರೆ. ಆದರೆ ಹೇಳುವ ಹೇರಳ ಜನ, ಆಚರಣೆ ಸಂದರ್ಭದಲ್ಲಿ ಮಾತ್ರ ಇರುವುದೇ ಇಲ್ಲ. ಸಂಪ್ರದಾಯಶೀಲ ಭಾರತದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿಯ ಹಲವು ಮುಖಗಳೇ ಮುಂದುವರಿದುಕೊಂಡು ಬಂದಿವೆ. ಇಂಥ ಹಲವು ವಿಕೃತಿಗಳಲ್ಲಿ ಜಾತಿಸೃಷ್ಟಿ ಕೂಡ ಒಂದು. ಜಾತಿ ವಿನಾಶದ ಹಾದಿಯಲ್ಲಿ ಹಲವಾರು ಸಂತರು, ಶರಣರು, ವಿಚಾರವಾದಿಗಳು, ಮಹಾತ್ಮರು, ಮುನ್ನಾಳುಗಳು ಹೋರಾಟ ಮಾಡಿದ್ದಾರೆ. ಆ ಹೋರಾಟಗಳ ಫಲ ಒಂದಿಷ್ಟು ಜಾಗೃತಿಯನ್ನೂ ಜನರಲ್ಲಿ ತುಂಬಿದ್ದು ನಿಜ. ಆದರೆ ಜಾತಿಯೆಂಬ ಭೂತ ವಿವಿಧ ರೂಪಗಳಲ್ಲಿ ಮತ್ತೇ ಮತ್ತೇ ಮುಖದೋರುತ್ತ ಹೇಂಕರಿಸುತ್ತಲೇ ಇದೆ. ಭಾರತ ದೇಶದಲ್ಲಿ ಈ ಜಾತಿಯ ಕಾರಣದಿಂದಲೇ ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು ಇನ್ನೂ ಬದುಕುಳಿದು ಭೂತಾಕಾರವಾಗಿ ಬೆಳೆಯುತ್ತಲೇ ಇವೆ ; ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.
    ಡಾ. ಬಾಬಾಸಾಹೇಬ ಅಂಬೇಡ್ಕರ್ ರು ಈ ಜಾತಿ ವಿನಾಶಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದವರು. ಹಿಂದೂ ಧರ್ಮದ ಸನಾತನ ಸಂಪ್ರದಾಯವನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಟುವಾಕ್ಯಗಳಿಂದ ಆ ಧರ್ಮದ ಅಂತರಂಗದಲ್ಲಿದ್ದ ಕೊಳಕನ್ನು ಬಿಚ್ಚಿಟ್ಟಿದ್ದಾರೆ. ಈ ಧರ್ಮದಲ್ಲಿ ಅ
ಸ್ಪೃಶ್ಯರೆನ್ನಿಸಿಕೊಂಡವರ ಬದುಕು ಹಸನಾಗಲು, ಅವರೆಲ್ಲ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲು ತಮ್ಮ ಕೊನೆ ಉಸಿರಿನವರೆಗೆ ಕ್ರಿಯಾಶೀಲರಾಗಿದ್ದ ಮಹಾನ್ ನೇತಾರ ಡಾ. ಬಾಬಾಸಾಹೇಬ ಅಂಬೇಡ್ಕರರು. ಅಸ್ಪೃಶ್ಯ ಅನುಭವಗಳಿಂದ ರೊಚ್ಚಿಗೆದ್ದ ಅವರು ಅಸ್ಪೃಶ್ಯನ ಗೋಳನ್ನು ಸ್ವತಃ ಕಂಡುಂಡವರು.
    `ಇಡೀ ದೇಶದ ಮೂಲೆ ಮೂಲೆ ಬಿಡದೆ ಎಲ್ಲೆಲ್ಲೂ ಅ
ಸ್ಪೃಶ್ಯನೆಂಬುವನು ಆತಂಕವನ್ನೆದುರಿಸುತ್ತಾನೆ. ಪಕ್ಷಪಾತಕ್ಕೆ ಸಿಕ್ಕು ನರಳುತ್ತಾನೆ. ಇಂಡಿಯಾದ ಈ ಅವಕಾಶಹೀನ ನಿರ್ಭಾಗ್ಯನಿಗೆ ಎಲ್ಲ ಕಡೆಯೂ ಅನ್ಯಾಯವೇ ಎದುರಾಗುತ್ತದೆ. ಸುತ್ತು ಕೋಟಲೆಗಳ ನೆರೆಯಲ್ಲಿ ಮೈ ಮುರಿದು ಗೆಯ್ಯುವ ಅಸ್ಪೃಶ್ಯರಿಗೆ ಮಾತ್ರವೇ ಈ ಕಟುಸತ್ಯ ಅರಿವಾಗಲು ಸಾಧ್ಯ.'1 ಎನ್ನುವ ಮೂಲಕ, ಅವರು ಈ ಅನುಭವಗಳ ಮೂಲಕವೇ ಎಚ್ಚರಾಗಿ ಎದ್ದು ನಿಂತು ತಮ್ಮ ಮೇಲೆ ನಡೆಯುವ ಅನ್ಯಾಯವನ್ನು ಮೆಟ್ಟಿ ನಿಲ್ಲಲು  ಅಸ್ಪೃಶ್ಯರು ಸಿದ್ಧರಾಗಬೇಕು ಎಂದು ಕರೆ ನೀಡುತ್ತಾರೆ. ಯಾಕೆಂದರೆ ಯಾವ ಮಹಾತ್ಮಾನಾಗಲೀ ಜಗದ್ಗುರುವಾಗಲೀ ನಿಮ್ಮನ್ನು ಉದ್ಧಾರ ಮಾಡಲಾರರು ; ನಿಮ್ಮ ಉದ್ಧಾರವನ್ನು ನೀವೇ ಸ್ವತಃ ಮಾಡಿಕೊಳ್ಳಬೇಕು ಎಂಬುದು ಅವರ ಸ್ಪಷ್ಟ ವಿಚಾರವಾಗಿತ್ತು. 
    ಜಾತಿಯಿಂದ ಮೇಲು ಎಂದುಕೊಂಡು ಮೆರೆಯುವ ಮಂದಿಗೂ ಕೂಡ ಡಾ. ಬಾಬಾಸಾಹೇಬ ಅಂಬೇಡ್ಕರರು ಎಚ್ಚರಿಕೆ ನೀಡುತ್ತಾರೆ : `ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿ ಸಾಧಿಸಲಾರಿರಿ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ, ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ, ಜಾತಿಯ ತಳಗಳನ್ನಿಟ್ಟುಕೊಂಡು ನೀವು ಏನನ್ನೂ ಕಟ್ಟಲಾರಿರಿ, ರಾಷ್ಟ್ರವನ್ನು ನಿರ್ಮಿಸಲಾರಿರಿ, ನೀತಿಯನ್ನು ನೆಲೆಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಅದು ಏನೇ ಆಗಿರಲಿ ಬಿರುಕು ಬಿಡುವುದು ; ಅಖಂಡವಾಗಿ ಉಳಿಯಲಾರದು.'2
    ಈ ಮಾತು ಕೆಲವರಿಗಾದರೂ ತಟ್ಟಿರಬಹುದು. ಜಾತಿಯ ಬಲೆಯಿಂದ ಬಿಡಿಸಿಕೊಂಡು ಹೊರಬರಲು ಬಹಳಷ್ಟು ಜನರಿಗೆ  ಸಾಧ್ಯವಾಗಲೇ ಇಲ್ಲ. ಅದು ಇಂದಿನವರೆಗೂ ಸಾಧ್ಯವಾಗಿಲ್ಲ ಎಂದರೆ  ಅಚ್ಚರಿ ಪಡುವ ಇಲ್ಲ. ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆಯಾಗುವುದು ಸಾಧ್ಯವೇ ಇಲ್ಲ ಎಂಬುದನ್ನು  ಮನಗಂಡ ಡಾ. ಬಾಬಾಸಾಹೇಬರು ಹೋರಾಟವನ್ನು ತೀವ್ರಗೊಳಿಸಿದರು. `ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ಹಿಂದೂ ಧರ್ಮವು ಸಮರ್ಥವಾಗಿದೆ ಎಂದು ಭಾವಿಸುವುದೇ ತಪ್ಪು .............. ಹಿಂದೂ ಧರ್ಮವು ಸ್ವತಃ ಅಸ್ಪøಶ್ಯರ ವಿರುದ್ಧ ಅಸಮಾನತೆ ಹಾಗೂ ಅನ್ಯಾಯಗಳ ಸಾಕಾರ ರೂಪವಾಗಿದೆ. ಅದು ನ್ಯಾಯದ ಬಗ್ಗೆ ಉಪದೇಶ ನೀಡಿದರೆ ತನ್ನ ಅಸ್ತಿತ್ವದ ವಿರುದ್ಧ ಹೋದಂತೇ. ಇದು ಸಾಧ್ಯವಾಗುತ್ತದೆ ಎಂದು ಕನಸು ಕಾಣುವುದೂ ಒಂದೇ ಪವಾಡಕ್ಕೆ ಕಾಯುವುದೂ ಒಂದೇ'3
    ಹಿಂದೂ ಧರ್ಮದ ಕುತಂತ್ರ ಮತ್ತು ಒಳಸಂಚಿನ ವಿನ್ಯಾಸಗಳನ್ನು ಅಧ್ಯಯನ ಮಾಡಿ, ಅನುಭವದ ಮೂಲಕ ಕಂಡುಕೊಂಡ ಸತ್ಯ ಇದಾಗಿತ್ತು. ಡಾ. ಬಾಬಾಸಾಹೇಬರಿಗೆ ಹಿಂದೂ ಧರ್ಮದಲ್ಲಿರುವ ಪೊಳ್ಳುತನ, ನಯವಂಚಕತೆ ಮತ್ತು ಮೋಸಗಾರಿಕೆಗಳ ಪರಿಪೂರ್ಣ ಪರಿಚಯವಾಗಿತ್ತು. ಹೀಗಾಗಿಯೇ ಹೇಸಿಗೆ ಹುಟ್ಟಿಸುವಷ್ಟು ತಾರತಮ್ಯ ಹೊಂದಿದ ಸಮಾಜದ ವರ್ತನೆಯಿಂದ ಬೇಸತ್ತು ಅ
ಸ್ಪೃಶ್ಯರು ಹಿಂದೂಗಳಲ್ಲ ಎಂದು ಘೋಷಿಸಿಯೇ ಬಿಟ್ಟರು.
    `ಅ
ಸ್ಪೃಶ್ಯರು ಹಿಂದೂಗಳ ಸಮಾಜಕ್ಕೆ ಸೇರುವುದಿಲ್ಲ ಮತ್ತು ಹಿಂದೂಗಳಿಗೆ ತಾವು ಮತ್ತು ಅಸ್ಪೃಶ್ಯರು ಒಂದೇ ಸಮಾಜಕ್ಕೆ ಸೇರಿದವರು ಎಂಬ ಭಾವನೆ ಬರುವುದಿಲ್ಲ. ಈ ಕಾರಣದಿಂದಾಗಿಯೇ ಅಸ್ಪೃಶ್ಯರೊಂದಿಗಿನ ಹಿಂದೂಗಳ ನಡವಳಿಕೆಯಲ್ಲಿ ಯಾವ ನೈತಿಕ ಕಾಳಜಿಗಳಿಲ್ಲದ ಅಸಡ್ಡೆ ವ್ಯಕ್ತವಾಗುತ್ತದೆ'4 ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಹೀಗಾಗಿಯೇ ಹಿಂದೂ ಧರ್ಮ ತಮ್ಮದು ಎಂದು ಹೇಳಿಕೊಳ್ಳಲು ಯಾವ ಹೆಮ್ಮೆಯೂ ಇಲ್ಲ ; ಅದು ಸಾವಿನ ಪಾಶ ಎಂಬ ಅರಿವಿನಿಂದ ಹಿಂದೂ ಧರ್ಮವನ್ನು ತೊರೆಯಲು ಸಿದ್ಧರಾದರು. ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಎಂಬ ಹಣೆಪಟ್ಟಿ ಹೊತ್ತುಕೊಂಡ ರಾಜಕೀಯ ಪಕ್ಷವೊಂದರ ಪುಢಾರಿಯೊಬ್ಬ `ಡಾ. ಅಂಬೇಡ್ಕರರು ಹಿಂದೂ ಧರ್ಮದ ನಿಜವಾದ ಹೀರೋ' ಎಂಬ ಪ್ರಚಾರಕ್ಕೆ ತೊಡಗಿದ್ದ ! ಡಾ. ಬಾಬಾಸಾಹೇಬರನ್ನು ಅರ್ಥ ಮಾಡಿಕೊಳ್ಳಲಾರದ ಮೂರ್ಖತನವನ್ನು ಇದು ಸೂಚಿಸುತ್ತದೆ.
    ಸಮಾಜದಲ್ಲಿ ದಸ್ಯುಗಳಿಗಿಂತಲೂ ಕೀಳಾಗಿ ಅನ್ಯಾಯ, ಅವಮಾನ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದ ಅ
ಸ್ಪೃಶ್ಯರು, ಸನಾತನ ಹಿಂದೂ ಧರ್ಮದ ವಿಚಾರದಲ್ಲಿ  ಧರ್ಮಬಾಹಿರರು. ಇದ್ದೂ ಸತ್ತಂತೆ ಬದುಕುವುದಕ್ಕಿಂತ, ತಲೆಯೆತ್ತಿ ನಿಂತು, ಸ್ವಾಭಿಮಾನದೊಂದಿಗೆ  ಬದುಕುವ  ದಾರಿಯನ್ನು  ಡಾ. ಬಾಬಾಸಾಹೇಬರು ಹುಡುಕುತ್ತಿದ್ದರು. ಹಿಂದೂಗಳಲ್ಲಿ ಇರುವ ಕೊಳಕುತನ, ಕುಗೇಡಿತನ, ಕೊಳ್ಳುಬಾಕತನ ಮೊದಲಾದವುಗಳಿಂದ ಹೇಸಿಕೊಂಡ ಡಾ. ಬಾಬಾಸಾಹೇಬರು ಅಂಥ ಹೊಲಸಿನಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸುತ್ತಾರೆ ; ಹೊಸ ಬದುಕಿಗೆ ಹಾರೈಸುತ್ತಾರೆ.
    `ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನಪೂರ್ತಿ ಹೊಸದಾಗಬೇಕು. ಆದರೆ ಹೊಸ ಜೀವ ಹೆಣದ ದೇಹದಲ್ಲಿ ಹೋಗಲಾರದು. ಹೊಸ ಜೀವನಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವನ ಹುಟ್ಟಿ ಮಿಡಿಯಬೇಕಾದರೆ ಹಳೆಯದು ನಿಷ್ಕ್ರಿಯವಾಗಿ ಹೋಗಬೇಕು'5 ಎಂಬ ವಿಚಾರವನ್ನು ಪ್ರತಿಪಾದಿಸಿ ಅಂತಿಮವಾಗಿ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು.
    ಹಿಂದೂ ಧರ್ಮದಲ್ಲಿನ ಯಥಾಸ್ಥಿತಿವಾದ ಮತ್ತು ಸೋಗಲಾಡಿತನದಿಂದಲೇ ಡಾ. ಬಾಬಾಸಾಹೇಬ ಅಂಬೇಡ್ಕರರು ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಅದು ಅವರಿಗೆ ಅಂದಿನ ಅನಿವಾರ್ಯವೂ ಆಗಿತ್ತು. ಜಾತಿಯ ಸೂತಕದಿಂದ ಮುಕ್ತವಾಗಿ ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂದುಕೊಂಡ ಬಹಳಷ್ಟು ಅ
ಸ್ಪೃಶ್ಯರು ಡಾ. ಬಾಬಾಸಾಹೇಬಕಾಲದಲ್ಲಿ ಮತ್ತು ಆನಂತರದಲ್ಲಿ ಬೌದ್ಧ ಧರ್ಮವನ್ನು ಸೀಕರಿಸಿದರು ; ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ; ಇನ್ನೂ ಕೆಲವರು ಇಸ್ಲಾಂ ಧರ್ಮವನ್ನೂ ಅವಲಂಬಿಸಿದರು. ಇದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ವಾಸ್ತವ ಚಿತ್ರಣವನ್ನು ಗಮನಿಸಿದಾಗ ಹೀಗೆ ಮತಾಂತರವಾಗುತ್ತಿರುವವರು ಅತಂತ್ರರಾಗುತ್ತಿರುವುದು ಕಂಡು ಬರುತ್ತದೆ.
    ಭಾರತೀಯ ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿಯೂ ಕೂಡ ಜಾತಿಯ ಬೇರುಗಳು ಗಟ್ಟಿಗೊಳ್ಳುತ್ತಿವೆ. ಇದಕ್ಕೆ ಹಿಂದೂ ಧರ್ಮದ ಪ್ರಭಾವವೂ ಕಾರಣವಾಗಿರಬಹುದು. ಮತಾಂತರಗೊಂಡವರು ಅಲ್ಲಿ ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತಿದ್ದಾರೆ. ನವ ಬೌದ್ಧ, ನವ ಕ್ರಿಶ್ಚಿಯನ್ ಎನ್ನುವುದಾಗಲಿ ಅಥವಾ ದಲಿತ ಬೌದ್ಧರು, ದಲಿತ ಕ್ರಿಶ್ಚಿಯನ್ನರು ಎನ್ನುವುದಾಗಲಿ ಮೇಲು ನೋಟಕ್ಕೆ ಕಾಣಿಸಿಕೊಳ್ಳುವ ಪ್ರತ್ಯೇಕೀಕರಣಗಳು ! ಡಾ. ಬಾಬಾಸಾಹೇಬ ಅಂಬೇಡ್ಕರರು ಕಂಡ ಕನಸು ಇಂಥಲ್ಲಿ ನನಸಾಗದು. ಇಂಥ ಗೊಂದಲಗಳು ಅ
ಸ್ಪೃಶ್ಯರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಖಂಡಿತವಾಗಿಯೂ ಕಾಲ್ತೊಡಕುಗಳಾಗುತ್ತವೆ.
    ಹಿಂದೂ ಧರ್ಮದಲ್ಲಿನ ಜಾತಿ, ಮತಾಂತರಗೊಂಡ ಧರ್ಮದಲ್ಲಿನ ಪ್ರತ್ಯೇಕತೆ ಕಂಗೆಡಿಸುವ ಸಂಗತಿಗಳೇ ಆಗಿವೆ. ಹೀಗೆಂದುಕೊಂಡು ತೀರ ಹತಾಶರಾಗಬೇಕಾದ ಕಾರಣಗಳಿಲ್ಲ. ಇಂದು ಶಿಕ್ಷಣ ಮುಕ್ತವಾಗಿದೆ. ಅಕ್ಷರದ ಅರಿವಿನ ಮೂಲಕ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಜ್ಞಾವಂತರಾಗಬೇಕು. ಒಳಜಾತಿಗಳಲ್ಲಿ ಇರುವ ಭೇದ ಮರೆತು, ಸಂಬಂಧಗಳನ್ನು ಬೆಸೆಯಬೇಕು ; ಏಕತ್ವವನ್ನು ಸಾಧಿಸಬೇಕು. ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದೆ ಅವಕಾಶಗಳನ್ನು ಬಳಸಿಕೊಂಡು ಉನ್ನತಿಗೆ ಏರಬೇಕು. ರಾಜಕೀಯ ಶಕ್ತಿ ಪಡೆಯಬೇಕು. ಯಾರ ಕೃಪೆ, ದಾನಕ್ಕೆ ತಲೆಬಾಗದೇ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಬೇಕು. ಹೀಗಾದಾಗ ಮಾತ್ರ ಡಾ. ಬಾಬಾಸಾಹೇಬರು ಕಂಡ ಕನಸನ್ನು ನನಸು ಮಾಡುವುದರತ್ತ ಒಂದು ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.
ಅಡಿ ಟಿಪ್ಪಣಿಗಳು :
1. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು- 164
2.
ಅದೇ :
: ಪು-93
3. ಅದೇ : ಪು-529
4. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-5 : ಪು-150
5. ಡಾ. ಬಾಬಾಸಾಹೇಬ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು ಸಂ-1 : ಪು-108
                                                                   *****

Monday, January 07, 2013

ಅಕ್ಷರಹೀನ ವಚನಕಾರರು ?


                                ಡಾ. ಸಿದ್ರಾಮ ಕಾರಣಿಕ
                           
    ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸಂಭವಿಸಿತು. ಜಾತಿ-ಜಾತಿಗಳಲ್ಲಿದ್ದ ಅಂತರವನ್ನು ದೂರ ಮಾಡಿ, ಪುರೋಹಿತಶಾಹಿ ವರ್ಗದ ವಿರುದ್ಧ ಸಿಡಿದು ನಿಂತು ಮಾಡಿದ ಕ್ರಾಂತಿಯ ಹೆಜ್ಜೆ ಯಾವತ್ತಿಗೂ ಅನುಕರಣೀಯವೇ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯ ಕೂಡ ಅಕ್ಷರ ಕಲಿತು ವಚನ ರಚಿಸಿದರು ಎಂಬುದು ಒಪ್ಪತಕ್ಕ ಮಾತು ಅಲ್ಲ ; ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ. ಹೀಗೆ ಹೇಳುತ್ತಿರುವುದನ್ನು ಒಪ್ಪದ ಕೆಲ `ಬುದ್ಧಿಜೀವಿಗಳು', `ಪಂಡಿತರು', ವಿದ್ವಾಂಸರು' ಅಪಸ್ವರ ಎತ್ತಿ ಹಾಡಲು ಸುರು ಮಾಡಬಹುದು ! ಈ ವಾದವು ಪರಾಂಪರಾಗತ ನಂಬಿಕೆಯೊಂದನ್ನು ಬುಡಮೇಲು ಮಾಡುವ ಹುನ್ನಾರ ಎಂದು ಹುಯಿಲೆಬ್ಬಿಸಬಹುದು ! ಆದರೆ ವಾಸ್ತವ ವಾಸ್ತವೇ ! ಇತಿಹಾಸದ ಸತ್ಯವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
    ವೈದಿಕ ಧರ್ಮದಲ್ಲಿ ದಲಿತರು, ಶೂದ್ರರು ಅಕ್ಷರ ಕಲಿಯುವಿಕೆಯನ್ನು ನಿರಾಕರಿಸಲಾಗಿದೆ. ಕೇವಲ ಪಠನ ಮಾಡಿದರೆ ಸಾಕು ನಾಲಿಗೆಯನ್ನೇ ಕಿತ್ತಿ ಹಾಕುವ, ವೇದ-ಮಂತ್ರಗಳನ್ನು ಕೇಳಿದರೆ ಸಾಕು ಕಿವಿಯಲ್ಲಿ ಕಾದ ಸೀಸವನ್ನು ಸುರಿಯುವ ಪದ್ಧತಿಯನ್ನು ಪ್ರಾಚೀನ ಕಾಲದಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ಪರಿಕ್ರಮಕ್ಕೆ ಹನ್ನೆರಡನೇ ಶತಮಾನವೂ ಕೂಡ ಹೊರತಾಗಿರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಬಸವಣ್ಣ ತೋರಿದ ಕ್ರಾಂತಿಕಾರಿ ನಿಲುವಿಗೆ ಸನಾತನವಾದಿಗಳು ತೋರಿದ ತೀವ್ರ ವಿರೋಧವನ್ನು ಗಮನಿಸಬೇಕು. ಹೀಗೆಲ್ಲ ಇರುವಾಗ ಒಂದು ಸೀಮಿತ ಅವಧಿಯಲ್ಲಿ ಅಕ್ಷರ ಹೀನ ದಲಿತರು, ಶೂದ್ರರು ಮತ್ತು ಮಹಿಳೆಯರು ಅಕ್ಷರ ಕಲಿತು ಪಾಂಡಿತ್ಯ ಗಳಿಸಿದರು ಎಂದರೆ ಅದೇನು ಪವಾಡವೇ ?
    `ಪುರುಷರೇ ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಆ ಕಾಲದಲ್ಲಿ ನೂರಾರು ಜನ ಸ್ತ್ರೀಯರು, ಅದರಲ್ಲೂ ದಲಿತ ವರ್ಗದ ಸ್ತ್ರೀಯರು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುವುದುರ ಮೂಲಕ ಬಹುದೊಡ್ಡ ಪ್ರಸಾರ ಮಾಧ್ಯಮವೊಂದು ವರಿಷ್ಠರ ವಜ್ರಮುಷ್ಠಿಯಿಂದ ಕನಿಷ್ಠ ವರ್ಗದ ಪುರುಷರ ಕೈಗೆ, ಸ್ತ್ರೀಯರ ಕೈಗೂ ಇಳಿದು ಬಂದದ್ದು ತೀವ್ರ ಗಮನಿಸಬೇಕಾದ ಅಂಶವಾಗಿದೆ.'1 ಎನ್ನುವ ಡಾ. ಎಂ. ಎಂ. ಕಲ್ಬುರ್ಗಿಯವರ ಮಾತಿನಲ್ಲಿರುವ `ಸಾಹಿತ್ಯ ನಿರ್ಮಿತಿ' ಬಂದದ್ದು ಕೇವಲ ಅನುಭಾವದಿಂದಾಗಿಯೇ ಹೊರತು ಅಕ್ಷರಜ್ಞಾನದಿಂದ ಅಲ್ಲವೇ ಅಲ್ಲ.
    `........ಪ್ರಾಚೀನ ಮಹಿಳಾ ಶಿಕ್ಷಣವನ್ನು ಗಮನಿಸಿದರೆ ಹೆಣ್ಣು ಸಾಂಸ್ಕøತಿಕವಾಗಿ ದಾಖಲಾಗಿರುವುದು ಗಮನಾರ್ಹ ವಸ್ತವಾಗಿದೆಯೇ ಹೊರತು ವಿದ್ಯಾವತಿಯಾಗಿ ಅಲ್ಲ'2 ಎನ್ನುವ ಡಾ. ಚೆನ್ನಕ್ಕ ಪಾವಟೆಯವರ ಮಾತುಗಳನ್ನು ದಲಿತ ಮತ್ತು ಶೂದ್ರರಿಗೂ ಅನ್ವಯಿಸಿಕೊಂಡು ಅವಲೋಕಿಸಿದಾಗ ಲೇಖನದ ಈ ವಾದಕ್ಕೆ ಸಾಕ್ಷ್ಯ ದೊರೆಯುತ್ತದೆ. ಆದರೆ ಈ ಮಟ್ಟಿಗಿನ ವಾದವನ್ನು ಬೆಳೆಸಲು ಬಹಳಷ್ಟು ಜನ ಹಿಂಜರಿಯುವುದೇ ಹೆಚ್ಚು. ಮತಾಂಧತೆಯ ಭಾರತದಲ್ಲಿ ಇದು ಸಹಜ ಕೂಡ !
    `ಯಾವ ದಲಿತರು ಅಜ್ಞಾನಿಗಳಾಗಿದ್ದರೋ ಅಂಥವರು ವಚನ ಚಳುವಳಿಯ ಸಂದರ್ಭದಲ್ಲಿ ವಿಚಾರವಂತರಾದರು. ವಿಚಾರವಾದಕ್ಕೆ ವ್ಯಾಖ್ಯೆಯನ್ನು ಬರೆದರು. ಯಾರನ್ನು ಈ ವ್ಯವಸ್ಥೆಯಲ್ಲಿ ಪಶು-ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿತ್ತೋ ಅಂತಹವರೇ ಹೊಸ ಸಂಸ್ಕøತಿಯ ಹರಿಕಾರರಾದರು. ಯಾರು ಭಯದಿಂದ ತತ್ತರಿಸಿ, ಕೀಳರಿಮೆಯಿಂದ ಮುದುಡಿಕೊಂಡಿದ್ದರೋ ಅಂಥವರೇ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಝಳಪಳಿಸುವ ಖಡ್ಗಗಳಾದರು. ಇದು ವಚನ ಚಳುವಳಿಯ ಅತ್ಯಂತ ಮಹತ್ವದ ಸಾಧನೆ.'3 ಎನ್ನುವ   ಡಾ. ಬಸವರಾಜ ಸಬರದ ಅವರ ವಿವರಣೆ ಪಾರಂಪರಿಕವಾಗಿ ಪ್ರಚುರಪಡಿಸುತ್ತ ಬಂದಿರುವಂಥದ್ದೇ ಆಗಿದೆ. ಈ ಮೊದಲು ನಾವು ಕೂಡ ಈ ವಿಚಾರವನ್ನೇ ಅಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದೇವು. ಆದರೆ ಇಲ್ಲಿರುವ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದಾಗ ವಚನ ಚಳುವಳಿ ಮೌಖಿಕ ಪರಂಪರೆಯ ಸಾಧನೆಯೇ ಆಗಿದೆ ಎಂಬುದು ಸಾಧಿತ ಅಂಶವಾಗಿ ಹೊರಹೊಮ್ಮುತ್ತದೆ.
    ಬಸವಣ್ಣನ ನಾಯಕತ್ವದಲ್ಲಿ ಜಾಗೃತಿ ಅಭಿಯಾನ ಆರಂಭವಾದಾಗ ಕೆಲವು ದಲಿತರು, ಶೂದ್ರರು ಮತ್ತು ಮಹಿಳೆಯರು ಸಾಂಪ್ರದಾಯಿಕ ಸಮಾಜವನ್ನು ಧಿಕ್ಕರಿಸಿ, ಹೊಸ ಸಮಾಜದ ಅಸ್ತಿತ್ವಕ್ಕಾಗಿ ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದರಷ್ಟೇ ಅಲ್ಲ, ತಮ್ಮ ವಿಚಾರಗಳನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಇನ್ನುಳಿದ ತಮ್ಮ ಬಾಂಧವರಿಗೆ ಅರಿವನ್ನುಂಟು ಮಾಡಲು ಮುಂದಾದರು. ಆದರೆ ಅವರಿಗೆ ಅಕ್ಷರದ ಅರಿವು ಇರಲಿಲ್ಲ. ಅವರ ಹೆಸರಿನಲ್ಲಿರುವ ವಚನಗಳು ಬೇರೆ ಯಾರೋ ಲಿಪೀಕರಣ ಮಾಡಿದರ ಫಲ ಮಾತ್ರ. ಆದರೆ ಆ ವಚನಗಳಲ್ಲಿ ಇರುವ ವಿಚಾರ ಮಾತ್ರ ಆ ವಚನಕಾರರದೇ ಆಗಿದೆ. ಅಂದರೆ ವಚನಕಾರರೆಲ್ಲ ಪ್ರಾಜ್ಞರೇ ಆಗಿದ್ದರೂ ಅಕ್ಷರವನ್ನು ಬಲ್ಲವರಾಗಿರಲಿಲ್ಲ.
    ಜಾನಪದ ಪರಂಪರೆಯನ್ನು ಗಮನಿಸಿದಾಗ ಈ ಪ್ರಕ್ರಿಯೆ ಬಹು ಹಿಂದಿನಿಂದಲೇ ಹೊರಹೊಮ್ಮಿ ಬಂದಿದೆ ಎನ್ನುವದು ಸ್ಪಷ್ಟವಾಗುತ್ತದೆ. ಈ ವಿಚಾರದಿಂದ ಜನಪದರು ಸೃಷ್ಟಿಸಿದ ಜಾನಪದ ಸಾಹಿತ್ಯ ಕೂಡ ಗಟ್ಟಿಕಾಳೇ ಆಗಿದೆ ಎನ್ನುವುದು ಸಾಬೀತಾಗುತ್ತದೆ. ಹೀಗಾಗಿ ಹನ್ನೆರಡನೇ ಶತಮಾನದ ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಆಯ್ದ ಕೆಲವರನ್ನು ಬಿಟ್ಟರೆ ಇನ್ನುಳಿದವರೆಲ್ಲ ಮೌಖಿಕ ಪರಂಪರೆಯವರು ಎಂಬುದು ಖಚಿತ.
    ಈ ವಾದಕ್ಕೆ ಇನ್ನಷ್ಟು ನಿಖರತೆಯನ್ನು ನೀಡಲು ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ಅವರನ್ನು ಅಧ್ಯಯನ ಮಾಡಬೇಕಾಗುತ್ತದೆ. ಯಾವುದೇ ಪುರಾಣ, ಕಥೆ, ಐತಿಹ್ಯ ತೆಗೆದು ನೋಡಿದರೂ ಅವುಗಳಲ್ಲಿ ಈ ಇಬ್ಬರು ಒಂದೇ ಕಡೆ ಹೆಚ್ಚು ಕಾಲ ಸ್ಥಾಯಿಯಾಗಿ ನೆಲೆ ನಿಂತವರಲ್ಲ ಎಂಬ ಪ್ರಸ್ತಾಪ ಕಂಡು ಬರುತ್ತದೆ. ಮಾಯಾ ಮೋಹವನ್ನೇ ತಿರಸ್ಕರಿಸಿ, ವಿಚಿತ್ರ ವೇಷದಲ್ಲಿ ದೇಶ ಸಂಚಾರ ಮಾಡಿದ ಅಲ್ಲಮ ಮತ್ತು ಭವದ ಬದುಕನ್ನೇ ತಿರಸ್ಕರಿಸಿ, ಕೇಶಾಂಬರಿಯಾಗಿ ಸಂಚಾರ ಮಾಡಿದ ಅಕ್ಕಮಹಾದೇವಿ ಜಂಗಮತ್ವವನ್ನು ಅಪ್ಪಿಕೊಂಡವರು. ಇಂದು ಇಲ್ಲಿದ್ದರೆ ನಾಳೆ ಮತ್ತೆಲ್ಲೋ ! ಅಲೆದಾಟದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದ ಇವರು ಸಂದರ್ಭಕ್ಕೆ ತಕ್ಕಂತೆ ಅನುಭಾವದ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಬಿತ್ತರಿಸುತ್ತ ಹೋಗಿದ್ದಾರೆ. ಅವೆಲ್ಲ ಅವರು ಬರೆದಿಟ್ಟ ವಿಚಾರಗಳಲ್ಲ ಅಥವಾ ಆನಂತರದಲ್ಲಿ ಅವುಗಳನ್ನು ಬರೆದುಕೊಂಡವರೂ ಅಲ್ಲ. ಬರೆದಿಡುವುದು ಸಾಧ್ಯವೂ ಇರಲಿಲ್ಲ.
    ಇದಕ್ಕೆ ಪೂರಕವಾಗಿ ಒಂದು ಮೂಲಭೂತವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಕೇಳಲೇಬೇಕಾಗುತ್ತದೆ ; ಅಲೆದಾಟದಲ್ಲಿದ್ದ ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ತಾವಾಡಿದ ಮಾತುಗಳನ್ನು ಬರೆದಿಟ್ಟುಕೊಳ್ಳಲು ತಮ್ಮ ಹತ್ತಿರ ಬರೆಯುವ ಹಾಳೆ, ತಾಳೆಗರಿ, ಲೆಕ್ಕಣಿಕೆ, ದೌತಿಗಳನ್ನು ಖಾಯಮ್ಮಾಗಿ ಇಟ್ಟುಕೊಂಡಿರುತ್ತಿದ್ದರೆ ? ಅನುಭಾವದ ವಿಚಾರಗಳನ್ನು ಹೇಳಿಯಾದ ಮೇಲೆ ಅವುಗಳನ್ನು ಲಿಪಿಬದ್ಧಗೊಳಿಸುತ್ತಿದ್ದರೆ ? ಹಾಗಾದರೆ ಅವರು ತಾವು ಬರೆದ ವಚನಗಳನ್ನು ಎಲ್ಲಿ ಸಂಗ್ರಹಿಸಿ ಇಡುತ್ತಿದ್ದರು ? ತಮ್ಮ ಜೊತೆಯಲ್ಲಿಯೇ ಗಂಟು ಕಟ್ಟಿಕೊಂಡು ತಿರುಗುತ್ತಿದ್ದರೆ ? ಅರಿವೆಯ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ಇವರು ಹೀಗೆಲ್ಲ ಮಾಡಲು ಸಾಧ್ಯವೇ ?
    ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೇ ಇಲ್ಲ. ಅದೂ ಅಲ್ಲದೇ `ಅಕ್ಕನ ದಿಗಂಬರತ್ವವನ್ನು ಕುರಿತ ಚರ್ಚೆ-ಪ್ರತಿಚರ್ಚೆಯನ್ನು ಬೆಳೆಯಿಸಿದ `ಶೂನ್ಯ ಸಂಪಾದನೆ'ಗಳಲ್ಲಿ ಬಂದಿರುವ ಅಲ್ಲಮನ ಹಾಗೂ ಅಕ್ಕನ ಉಕ್ತಿಗಳು (ವಚನಗಳು) ಈ ಸಂದರ್ಭದ ನಾಟಕೀಯತೆಗಾಗಿ ನಿರ್ಮಿತಿಯಾದವುಗಳೇ ಹೊರತು ಅವು ಅಲ್ಲಮ ಹಾಗೂ ಅಕ್ಕನ `ಮೂಲ ವಚನ'ಗಳಾಗಿರಲಾರವು.'4 ಎನ್ನುವ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾತಿನಲ್ಲಿ ವಚನಗಳನ್ನು ಬರೆದಿರುವ ಬಗ್ಗೆ ಗುಮಾನಿ ಇದೆ. ಆ ಸಂದರ್ಭದಲ್ಲಷ್ಟೇ ಅಲ್ಲ ಅವರ ಹೆಸರಿನಲ್ಲಿರುವ ಯಾವ ವಚನಗಳೂ ಅವರ ಮೂಲ ವಚನಗಳೇ ಅಲ್ಲ. ಯಾಕೆಂದರೆ ಅವರು ಮೌಖಿಕ ಪರಂಪರೆಯ ಪ್ರತಿನಿಧಿಗಳು.
    ಹಾಗಾದರೆ ವಚನಗಳನ್ನು ಲಿಪೀಕರಣ ಮಾಡಿದ್ದು ಯಾರು ಎಂಬ ಪ್ರಶ್ನೆ ಕೂಡ ಇಲ್ಲಿ ತಲೆ ತಿನ್ನುತ್ತದೆ. ಅದಕ್ಕೆ ಉತ್ತರವೂ ಇದೆ. ಪ್ರಾಚೀನ ಕಾಲದಲ್ಲಿ ಬರವಣಿಗೆ ಒಂದು ನಿರ್ದಿಷ್ಟ ಜಾತಿಯ ಕೆಲಸವಾಗಿತ್ತು. ಅವರು ಇತರರು (ಬರವಣಿಗೆಯ ಚೌಕಟ್ಟಿಗೆ ಸಂಬಂಧಿಸಿದವರು) ಹೇಳಿದ್ದನ್ನು ಲಿಪಿಬದ್ಧಗೊಳಿಸುತ್ತಿದ್ದರು. ಇದು ಒಂದು ವೃತ್ತಿಯೇ ಆಗಿತ್ತೆಂದರೆ ತಪ್ಪಾಗುವುದಿಲ್ಲ. ಇದರ ಜೊತೆಗೆ ಈ ಲಿಪೀಕರಣ ವ್ಯಕ್ತಿಯೊಬ್ಬನ ಆಸಕ್ತಿ ಕೂಡ ಆಗಿತ್ತು. ಬುದ್ಧನ ಕಾಲದಲ್ಲಿ ಬುದ್ಧನ ಆಚಾರ-ವಿಚಾರಗಳನ್ನು, ಬೋಧನೆಗಳನ್ನು ಬರೆದಿಡಲು `ಭಾಣಕರು' ಎನ್ನುವವರು ಇದ್ದರು. ಹನ್ನೆರಡನೇ ಶತಮಾನದಲ್ಲಿ ಕೂಡ ಇಂಥ ಪದ್ಧತಿ ಚಾಲ್ತಿಯಲ್ಲಿರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬಾರದು.
    ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಬರೆದಿಡುವ ಕಾಯಕದವರೂ ಇದ್ದರು. `ಪ್ರತಿಯೊಂದು ವಚನವೂ ಆಯಾ ವಚನಕಾರನ ಇಷ್ಟ ದೈವದ ಸಾಕ್ಷಿಯಲ್ಲಿ ನುಡಿದ ಮಾತು'5 ಆಗಿರುವುದರಿಂದ ಆ ವಚನಕಾರ ತನ್ನ ಮಾತನ್ನು ಇಷ್ಟದೈವದ ಹೆಸರಿನೊಂದಿಗೆ ನುಡಿಯುತ್ತಿದ್ದರಿರಬೇಕು. ಇಲ್ಲವೆ ವಚನಕಾರನ ಇಷ್ಟದೇವದ ಹೆಸರುಗಳನ್ನು ಅರಿತ ಲಿಪಿಕಾರ ವಚನಕಾರನ ಮಾತಿನ ಕೊನೆಯಲ್ಲಿ ಸೇರಿಸಿ ಬರೆಯುವ ರೂಢಿ ಇಟ್ಟುಕೊಂಡಿರಬೇಕು. ಇದನ್ನೇ ನಾವು ಮುದ್ರಿಕೆಗಳು ಎನ್ನುವುದು. ಈ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಅಧ್ಯಯನಗಳು ನಡೆಯಬೇಕಿದೆ. ಆವಾಗ ಮೂಲ ಹಸ್ತಪ್ರತಿಯ ಲಿಪಿಕಾರ ಯಾರು ಎನ್ನುವುದು ತಿಳಿಯಲು ಸಾದ್ಯವಾಗಬಹುದು.
    ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿಯರ ವಚನಗಳಿಗೆ ಈ ಮಾತು ಸರಿ ಹೊಂದಲಾರದು. ಅವರು ಅನುಭವ ಮಂಟಪದಲ್ಲಿದ್ದಾಗ ಅವರ ನುಡಿಗಳನ್ನು ಲಿಪಿಬದ್ಧಗೊಳಿಸಿರುವ ಲಿಪಿಕಾರ ಇಷ್ಟದೈವದ ಸೇರಿಸಿದ್ದರೆ, ಅವರು ಜಂಗಮತ್ವವನ್ನು ಹೊಂದಿ ನಿರಂತರ ತಿರುಗಾಟದಲ್ಲಿ ಇದ್ದಾಗ ಅವರ ಅಂಕಿತ ಅವರ ವಚನಗಳಿಗೆ ಹೇಗೆ ಬಂತು ಎಂಬ ಪ್ರಶ್ನೆಯೂ ವಿದ್ವಾಂಸರಿಂದ ಉದ್ಭವಿಸುತ್ತದೆ.
    ಇದಕ್ಕೂ ಸರಳವಾದ ಉತ್ತರವಿದೆ. ಮೇಲೆ ಹೇಳಿದಂತೆ ಇವರು ನುಡಿಯನ್ನು ಮುಗಿಸಬೇಕಾದರೆ ಇಷ್ಟದೈವದ ಹೆಸರನ್ನು ಹೇಳುತ್ತಿರಬೇಕು. ಹೀಗೆ ಅವರು ಹೇಳುತ್ತ ಹೋದಂತೆ ಆಸಕ್ತರಾಗಿರುವ ಕೆಲವು ಜನರು ಅವರ ವಿಚಾರಗಳಿಂದ ಪ್ರಭಾವಿತರಾಗಿ ಯಥಾವತ್ ಅಲ್ಲದಿದ್ದರೂ ನುಡಿಯ ಸಾರ ಮತ್ತು ಅಂಕಿತವನ್ನು ಲಿಪಿಬದ್ಧಗೊಳಿಸಿರಬೇಕು. ಈ ಕಾರಣದಿಂದಲೇ ವಚನಗಳ ಸಂಖ್ಯೆಯನ್ನು ನಿರ್ಣಯಿಸುವ ಕಾರ್ಯ ಇಂದಿಗೂ ಕಷ್ಟದಾಯಕವಾಗಿಯೇ ಇದೆ. ಯಾಕೆಂದರೆ ಭಿನ್ನ ಅಂಕಿತಗಳು ಇರುವ ಒಂದೇ ರೀತಿಯ ವಚನಗಳೂ ಇಂದು ನಮ್ಮ ನಡುವೆ ಇವೆ.ಯಾವುದು ಯಾರ ವಚನ ಎನ್ನುವುದನ್ನು ನಿರ್ಣಯಿಸುವಲ್ಲಿ ಇನ್ನೂ ಗೊಂದಲಗಳಿವೆ.  ಲಿಪಿಕಾರ ಮತ್ತು ಪ್ರತಿ ಲಿಪಿಕಾರನ ತಪ್ಪಿನಿಂದಲೇ ಇಂತಹ ಅವಘಡಗಳು ಸಂಭವಿಸಿವೆ.
    ಇದಕ್ಕಿಂತ ಮುಖ್ಯವಾಗಿ ವಚನಗಳನ್ನು ಸಾಮಾನ್ಯವಾಗಿ ನುಡಿ, ಮಾತು, ಸೂಳ್ನುಡಿ ಮೊದಲಾದವುಗಳಿಂದಲೇ ಸೂಚಿಸಲಾಗಿದೆ ಹೊರತು ಬೇರೆ ರೀತಿಯಲ್ಲಿ ಹೇಳಿಲ್ಲ. `ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬುದಾಗಿ ಹೇಳಲಾಗಿದೆಯೇ ಹೊರತು `ಬರೆದರೆ.....' ಎಂದು ಹೇಳಲಾಗಿಲ್ಲ. ಈ ವಾದ ತುಂಬ ಬಾಲಿಶ ಎನಿಸಬಹುದಾದರೂ ಕೂಡ ಅದೇ ಸತ್ಯವನ್ನು ತೋರುವ ಮಾರ್ಗವೂ ಆಗಬಲ್ಲದು ಎಂಬುದನ್ನು ಮಾತ್ರ ನಾವು ಮರೆಯುವಂತಿಲ್ಲ.
    ಈ ಎಲ್ಲ ಅಂಶಗಳನ್ನು ಅರ್ಥಪೂರ್ಣವಾಗಿ ಮನನ ಮಾಡಿಕೊಂಡು ಮಥಿಸಿದಾಗ ವಚನಕಾರರೆಲ್ಲರೂ ಅಕ್ಷರ ಕಲಿತವರಾಗಿರಲಿಲ್ಲ ಎಂಬ ವಾದ ಸಾಧಿತವಾಗುತ್ತದೆ. ಹೀಗಾಗಿ ವಚನ ಸಾಹಿತ್ಯ ಮೌಖಿಕ ಪರಂಪರೆಯ ಜಾನಪದ ಸಾಹಿತ್ಯ ಎಂದು ಪರಿಗಣಿಸಲು ಯಾವುದೇ ಅಡ್ಡಿಗಳಿಲ್ಲ ಅಲ್ಲವೇ ?

ಅಡಿ ಟಿಪ್ಪಣಿಗಳು :
1. ಮಾರ್ಗ ಸಂ-1 : ಡಾ. ಎಂ.ಎಂ.ಕಲ್ಬುರ್ಗಿ : 1995 : ಪು-260
2. ಅನುಗ್ರಹ : ಡಾ. ಚೆನ್ನಕ್ಕ ಪಾವಟೆ : 1999 : ಪು-217
3. ಸಮುದಾಯ ಮತ್ತು ಸಂಸ್ಕøತಿ : ಡಾ. ಬಸವರಾಜ ಸಬರದ : 2002 : ಪು-130
4. ಸಾಹಿತ್ಯ ವಿಮರ್ಶೆ-1992 : ಸಂ-ಡಾ. ರಹಮತ್ ತರೀಕೆರೆ : 1993 : (ಅಡಿ ಟಿಪ್ಪಣಿ)      ಪು-124
                    ********

Saturday, January 05, 2013

Jhalkari Bai : Dalit woman with Jhaansi !

Laxmibai and Jhalkari Bai led the Durga Dal ( women’s army) recruits to repeatedly foil attacks by the British army. And but for the betrayal by one of Laxmibai’s generals, the Jhansi fort would have remained invincible for at least some more time. Ignored by mainsteam historians, Jhalkari — a dalit woman — has now emerged from oblivion and finds mention in works of local writers, which include an epic poem by Chokhelal Verma, Virangana Jhalkari Bai by Bhavani Shankar Visharad, and a biography by dalit scholar and Arunachal Pradesh Governor Mata Prasad.
Her appearance, which was strikingly similar to Laxmibai, helped the Jhansi army evolve a military strategy to deceive the British. But before all that, Jhalkari was an ordinary village girl in Bundelkhand who would take care of household chores besides tending cattle and collecting firewood from the jungle.
She once had an encounter with a tiger in the jungle and killed the beast with her axe. On another occasion, she challenged a gang of dacoits who raided the house of a village businessman and forced them to retreat.
As a mark of gratitude, the village organised her marriage with Pooran Kori who matched her in courage. Pooran was inducted into Laxmibai’s army and his fighting skills were soon recognised by her generals. Once on the occasion of Gauri Puja, Jhalakari with the other village women went to the Jhansi fort to pay homage to the queen.
Laxmibai was struck by Jhalkari’s uncanny resemblance to her. After being told about her courage, she ordered Jhalkari’s induction into the Durga Dal. Jhalkari, along with the other village women, was trained in shooting and igniting the cannons at a time when the Jhansi army was being strengthened to face any British intrusion.
The British did not allow the childless Laxmibai to adopt her successor, in a bid to bring the state under their control. However, her generals and the people of Jhansi rallied round the queen and resolved to take up arms against the British instead of surrendering to them.
During April 1858, from inside the Jhansi fort, the queen led her army and repulsed several attacks by the British and their native allies. One of her commanders, however, betrayed her and opened a well protected gate of the fort. When the fall of the fortress became imminent, her generals advised Laxmibai to escape with a handful of fighters. The Rani slipped away from Jhansi on horseback.
Jhalkari’s husband Pooran was killed defending the fort but instead of mourning her loss, she worked out a plan to deceive the British. She dressed up like Laxmibai and took command of the Jhansi army. After which she marched out of the fort towards the camp of British general Hugh Rose. On reaching the British enclave, she shouted that she wanted to meet the general. Rose and his men were exultant. Besides capturing Jhansi, the British thought they had caught the queen alive. When the general — thinking she was the queen — asked Jhalkari what should be done to her, she firmly said, "hang me."
Bundelkhand legend has it that her reply stunned the general, who said that if even one per cent of Indian women were like Jhalkari, the British would soon have to leave India.

Friday, January 04, 2013

Udham Singh, a revolutionary nationalist .....


                                                                                  From : apnaorg.com/articles/udhamsingh
Udham Singh, a revolutionary nationalist, was born Sher Singh on 26 December 1899, at Sunam, in the then princely state of Patiala. His father, Tahal Singh, was at that time working as a watchman on a railway crossing in the neighbouring village of Upall. Sher Singh lost his parents before he was seven years and was admitted along with his brother Mukta Singh to the Central Khalsa Orphanage at Amritsar on 24 October 1907. As both brothers were administered the Sikh initiatory rites at the Orphanage, they received new names, Sher Singh becoming Udham Singh and Mukta Singh Sadhu Singh. In 1917, Udham Singh's brother also died, leaving him alone in the world.

Udham Singh left the Orphanage after passing the matriculation examination in 1918. He was present in the Jallianvala Bag on the fateful Baisakhi day, 13 April 1919, when a peaceful assembly of people was fired upon by General Reginald Edward Harry Dyer, killing over one thousand people. The event which Udham Singh used to recall with anger and sorrow, turned him to the path of revolution. Soon after, he left India and went to the United States of America. He felt thrilled to learn about the militant activities of the Babar Akalis in the early 1920's, and returned home. He had secretly brought with him some revolvers and was arrested by the police in Amritsar, and sentenced to four years imprisonment under the Arms Act. On release in 1931, he returned to his native Sunam, but harassed by the local police, he once again returned to Amritsar and opened a shop as a signboard painter, assuming the name of Ram Muhammad Singh Azad. This name, which he was to use later in England, was adopted to emphasize the unity of all the religious communities in India in their struggle for political freedom.

Udham Singh was deeply influenced by the activities of Bhagat Singh and his revolutionary group. In 1935, when he was on a visit to Kashmlr, he was found carrying Bhagat Singh's portrait. He invariably referred to him as his guru. He loved to sing political songs, and was very fond of Ram Prasad Bismal, who was the leading poet of the revolutionaries. After staying for some months in Kashmlr, Udham Singh left India. He wandered about the continent for some time, and reached England by the mid-thirties. He was on the lookout for an opportunity to avenge the Jalliavala Bagh tragedy. The long-waited moment at last came on 13 March 1940. On that day, at 4.30 p.m. in the Caxton Hall, London, where a meeting of the East India Association was being held in conjunction with the Royal Central Asian Society, Udham Singh fired five to six shots from his pistol at Sir Michael O'Dwyer, who was governor of the Punjab when the Amritsar massacre had taken place. O'Dwyer was hit twice and fell to the ground dead and Lord Zetland, the Secretary of State for India, who was presiding over the meeting was injured. Udham Singh was overpowered with a smoking revolver. He in fact made no attempt to escape and continued saying that he had done his duty by his country.

On 1 April 1940, Udham Singh was formally charged with the murder of Sir Michael O'Dwyer. On 4 June 1940, he was committed to trial, at the Central Criminal Court, Old Bailey, before Justice Atkinson, who sentenced him to death. An appeal was filed on his behalf which was dismissed on 15 July 1940. On 31 July 1940, Udham Singh was hanged in Pentonville Prison in London.

Udham Singh was essentially a man of action and save his statement before the judge at his trial, there was no writing from his pen available to historians. Recently, letters written by him to Shiv Singh Jauhal during his days in prison after the shooting of Sir Michael O'Dwyer have been discovered and published. These letters show him as a man of great courage, with a sense of humour. He called himself a guest of His Majesty King George, and he looked upon death as a bride he was going to wed. By remaining cheerful to the last and going joyfully to the gallows, he followed the example of Bhagat Singh who had been his beau ideal. During the trial, Udham Singh had made a request that his ashes be sent back to his country, but this was not allowed. In 1975, however, the Government of India, at the instance of the Punjab Government, finally succeeded in bringing his ashes home. Lakhs of people gathered on the occasion to pay homage to his memory.

BIBLIOGRAPHY 
Copyright © Harbans Singh "The encyclopedia of Sikhism. "
The word "militant" on this document was replaced on the request of Mr. Bhupinder Singh (bhupinder787@yahoo.com).

ಮಾತ್ಗವಿತೆ-106

ನಿನ್ನ ಒಲವು ಸಿಗಬಹುದು ಎಂದುಕೊಂಡ ಗಳಿಗೆ
ಗೀಳಾದ ಮರುದಿನವೇ ಗಲಿಬಿಲಿಗೊಂಡೆ !
ಈ ಲೋಕದ ನೀತಿ ತಿಳಿಯದೇ ಸೋತು ಹೋದೆ !
ಆದರೆ ಬಯಕೆ ಮಾತ್ರ ಮಾತ ಕೇಳದು ;
ಕೊನರುವ ಕೊರಡಿನ ಧ್ಯಾನ ನಿರಂತರ !

ಮೋದಿಗೆ ಉತ್ತರ ಉವೈಸಿಯಲ್ಲ ...


ಬಶೀರ್ ಬಿ.ಎಂ.
ವಾರ್ತಾಭಾರತಿ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯ ಸಂಪಾದಕೀಯ
ಖಾಲಿ ಮಡಕೆಯೊಳಗೆ ಒಂದು ಸಣ್ಣ ಕಲ್ಲು ಹಾಕಿದರೂ ಅದು ಭಾರೀ ಸದ್ದು ಮಾಡುತ್ತದೆ. ರಾಜಕಾರಣಿಗಳಿಗೆ ಇದು ಚೆನ್ನಾಗಿ ಅನ್ವಯಿಸುತ್ತದೆ. ಉದ್ವಿಗ್ನಕಾರಿ, ಪ್ರಚೋದನ ಕಾರಿ ಭಾಷಣ ಮಾಡುವವರನ್ನೆಲ್ಲ ನಾವು ಈ ಖಾಲಿ ಮಡಕೆಗಳಿಗೆ ಹೋಲಿಸಬಹುದಾಗಿದೆ. ಇಂತಹ ಖಾಲಿಗಳೇ ಈ ದೇಶವನ್ನು ಅವನತಿಯೆಡೆಗೆ ನಡೆಸುತ್ತಾ ಬಂದಿದ್ದಾರೆ. ಪ್ರವೀಣ್ ತೊಗಾಡಿಯಾರಿಂದ ಹಿಡಿದು, ವರುಣ್ ಗಾಂಧಿಯವರ ವರೆಗೆ, ಇಂತಹ ಪ್ರಚೋದನಾಕಾರಿ ಭಾಷಣಗಳಿಂದ ಈ ದೇಶಕ್ಕಾದ ನಷ್ಟ ಅಷ್ಟಿಷ್ಟಲ್ಲ. ಇವರ ಭಾಷಣದಲ್ಲಿ ಅದೇನೋ ಇದೆ ಜನ ಹುಚ್ಚೆದ್ದು ಚಪ್ಪಾಳೆ ತಟ್ಟುತ್ತಾರೆ. ಅಮರೇರಿದವರಂತೆ ವರ್ತಿಸು ತ್ತಾರೆ. ಆದರೆ ಏರಿದ ಅಮಲು ಇಳಿದಾಗ, ಎಲ್ಲವೂ ಮುಗಿದಿರುತ್ತದೆ. ಇಂತಹ ಪ್ರಚೋದನಕಾರಿ ಭಾಷಣಗಳ ಮೂಲಕವೇ ದೇಶದಲ್ಲಿ ಹೆಚ್ಚಿನ ಕೋಮುಗಲಭೆಗಳು ಸಂಭವಿಸಿವೆ. ಗುಜರಾತ್ ಗಲಭೆಗೆ ಮುನ್ನ, ಪ್ರವೀಣ್ ತೊಗಾಡಿಯಾ ಮಾಡಿದ ಭಾಷಣ ಅಲ್ಲಿನ ಜನರನ್ನು ಹುಚ್ಚರನ್ನಾಗಿ ಮಾಡಿತು. ಮುಂದೆ ಅದು ಭಾರೀ ಕೋಮುಗಲಭೆಗಳಿಗೆ ಕಾರಣವಾಯಿತು. ಮುಂಬಯಿ ಗಲಭೆಯಿಂದ ಹಿಡಿದು ಸುರತ್ಕಲ್ ಗಲಭೆಗಳವರೆಗೆ ನಾವು ಅವಲೋಕಿಸುತ್ತಾ ಬಂದರೆ, ಖಾಲಿ ಮಡಕೆಗಳ ಪ್ರಚೋದನಕಾರಿ ಭಾಷಣಗಳೇ ಜನರನ್ನು ಹಾದಿ ತಪ್ಪಿಸಿದವು. ಹಿಂಸೆಗಳಿಗೆ ಕಾರಣವಾದವು. ರಾಜದಲ್ಲಿ ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂತಹವರು ನಾಯಕರಾದುದು, ಇಂತಹ ವಿಷಪೂರಿತ ಭಾಷಣಗಳನ್ನು ಕಕ್ಕುವ ಮೂಲಕ. ಯಾವುದೇ ಮಾರಕ ಆಯುಧಗಳಿಗಿಂತ, ಯಾವುದೇ ಮಾದಕ ದ್ರವ್ಯಗಳಿಗಿಂತ ಹೆಚ್ಚು ಅಪಾಯಕಾರಿ ಈ ಭಾಷಣಗಳು.

ಇದೀಗ ಹೈದರಾಬಾದ್‌ನಲ್ಲಿ ಶಾಸಕನೊಬ್ಬ ಇಂತಹದೇ ಭಾಷಣವನ್ನು ಮಾಡುವ ಮೂಲಕ, ತನ್ನನ್ನು ತಾನು ಮುಸ್ಲಿಮರ ನಾಯಕನಾಗಿ ಬಿಂಬಿಸಲು ಹೊರಟಿದ್ದಾನೆ. ಆತನ ಹೆಸರು ಅಕ್ಬರುದ್ದೀನ್ ಉವೈಸಿ. ಅಖಿಲ ಭಾರತ ಮಜ್ಸಿಸ್ ಎ ಇತ್ತೆಹಾದ್ ಮುಸ್ಲಿಮೀನ್(ಎಂಐಎಂ) ವರಿಷ್ಠ ಅಸಾಸುದ್ದೀನ್ ಉವೈಸಿಯವರ ಸೋದರ ಈತ. ಮೋದಿಯವರನ್ನು ಕಟುವಾಗಿ ಟೀಕಿಸುವ ನೆಪದಲ್ಲಿ, ಈತ ಪರೋಕ್ಷವಾಗಿ ತನ್ನ ಭಾಷಣದಲ್ಲಿ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಆಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಪೊಲೀಸರಿಗೆ ಕೆಲವು ನಿಮಿಷ ಬಿಡುವು ಕೊಟ್ಟರೆ, ಈತ ಅದೇನೋ ಮಾಡಿ ತೋರಿಸುತಾರಂತೆ. ಈತ ಕಕ್ಕಿದ ವಿಷಕಾರಿ ಭಾಷಣ ಇದೀಗ ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ರಾರಾಜಿಸುತ್ತಿದೆ. ಈತನ ಭಾಷಣವನ್ನು ಮುಂದಿಟ್ಟುಕೊಂಡು, ಸಂಘ ಪರಿವಾರದ ಕೆಲವು ವಿಷಪೂರಿತ ಹಾವುಗಳು ಹೆಡೆ ಬಿಚ್ಚಲು ಮುಂದಾಗಿವೆೆ. ಈತನಿಗೆ ಭಾಷಣ ಮಾಡಿ ಮುಗಿಸಲು ಕೆಲವು ನಿಮಿಷಗಳು ಸಾಕಾಗಿರಬಹುದು. ಆದರೆ ಉಳಿಸಿ ಹೋದ ಪರಿಣಾಮವನ್ನು ಈ ದೇಶದ ಅಲ್ಪಸಂಖ್ಯಾತರು ವರ್ಷವಿಡೀ ಅನುಭವಿಸ ಬೇಕಾಗುತ್ತದೆ.

ಈ ದೇಶದಲ್ಲಿ ಮುಸ್ಲಿಮ್ ನಾಯಕರಿಗೆ ಮಾತನಾಡಲು ಬೇಕಾದಷ್ಟು ಮುಸ್ಲಿಮರ ಸಮಸ್ಯೆಗಳಿವೆ. ಶಿಕ್ಷಣ, ಬಡತನ, ಅನಾರೋಗ್ಯ ಸೇರಿದಂತೆ ಮುಸ್ಲಿಮರ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳು ಒಂದೋ ಎರಡೋ. ಭಾರತೀಯ ಮುಸ್ಲಿಮರನ್ನು ಸಾಚಾರ್ ಸಮಿತಿ ಆಧುನಿಕ ದಿನಗಳ ನವ ದಲಿತರು ಎಂದು ಕರೆದಿದೆ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಮೇಲೆತ್ತಲು ಮುಸ್ಲಿಮ್ ನಾಯಕರ ಪಾತ್ರ ಬಹುದೊಡ್ಡದಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಎಂಬ ಖಾತೆಯಲ್ಲಿ ಎಂಎಲ್‌ಎ, ಎಂಪಿಗಳಾದ ನಾಯಕರು ಬೀದಿಗಿಳಿದು ಹೋರಾಟ ಮಾಡಿದ್ದಿದ್ದರೆ, ತಮ್ಮ ಸಮುದಾಯದ ಏಳಿಗೆಗಾಗಿ ತನು ಮನ ಧನವನ್ನು ಮೀಸಲಿಟ್ಟು ಕೆಲಸ ಮಾಡಿದ್ದರೆ ದೇಶದ ಮುಸ್ಲಿಮರ ಸ್ಥಿತಿ ಈ ರೀತಿ ದಯನೀಯವಾಗುತ್ತಿರಲಿಲ್ಲ. ಮೋದಿಯ ವರಂಥವರು ಬಾಲ ಬಿಚ್ಚುವುದಕ್ಕೂ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಇಂದು ಮುಸ್ಲಿಮ್ ನಾಯಕರೇ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುತ್ತಿರುವುದರಿಂದ, ಅವರ ಸ್ಥಿತಿ ಹೃದಯವಿದ್ರಾವಕವಾಗಿದೆ. ಉವೈಸಿ ಸಾರ್ವಜನಿಕವಾಗಿ ಮೋದಿಯವ ರನ್ನು ಟೀಕಿಸುವ ಮೊದಲು, ತಾನು ಮುಸ್ಲಿಮರಿಗಾಗಿ, ಮುಸ್ಲಿಮರ ಅಭಿವೃದ್ಧಿಗಾಗಿ ಏನನ್ನು ಮಾಡಿದ್ದೇನೆ ಎನ್ನುವುದನ್ನು ಹೇಳಬೇಕಾಗಿತ್ತು. ಇತರ ಜಾತಿ, ಧರ್ಮಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವುದರಿಂದ, ಮುಸ್ಲಿಮರಿಗೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಅದರಿಂದ ಅವರು ಇನ್ನಷ್ಟು ಅನ್ಯಾಯಕ್ಕೊಳಗಾಗಬೇಕಾಗುತ್ತದೆ. ಉವೈಸಿಯ ಉದ್ವಿಗ್ನಕಾರಿ ಭಾಷಣವು ಪರೋಕ್ಷವಾಗಿ ಮೋದಿ, ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯಾಗಳನ್ನು ಸಮರ್ಥಿಸಿ ದಂತಾಗುತ್ತದೆ. ಒಂದು ರೀತಿಯಲ್ಲಿ ಉವೈಸಿ ಭಾಷಣದಿಂದ ಸಂಘಪರಿವಾರದ ಮಂದಿ ಸಂತೋಷದಿಂದ ಕುಣಿದಾಡಿದ್ದಾರೆ. ಈ ಭಾಷಣದೆಡೆಗೆ ಬೊಟ್ಟು ಮಾಡಿ, ಕೋಮುವಾದವನ್ನು ಹರಡಲು ಇವರಿಗೆ ಪರವಾನಿಗೆ ಸಿಕ್ಕಿದಂತಾಗಿದೆ. ಮುಸ್ಲಿಮರ ಕುರಿತಂತೆ ಯಾವುದೇ ಅಭಿವೃದ್ಧಿಯ ಮುನ್ನೋಟವಿಲ್ಲದ ಉವೈಸಿಯಂತಹವರು, ಮುಸ್ಲಿಮ್ ಸಮುದಾಯದ ನಡುವೆ ಆತ್ಮವಿಶ್ವಾಸ ತುಂಬುವ ಬದಲು ಅವರನ್ನು ಇನ್ನಷ್ಟು ಅನ್ಯಾಯದೆಡೆಗೆ ತಳ್ಳಿದ್ದಾರೆ. ಅಕ್ಬರುದ್ದೀನ್ ಉವೈಸಿ ಒಬ್ಬ ವಿಧಾನಸಭಾ ಶಾಸಕ. ಅವರಿಗೆ ಅವರದೇ ಜವಾಬ್ದಾರಿಗಳಿವೆ. ಹೊಣೆಗಾರಿಕೆಗಳಿವೆ. ಆದರೆ ಅದನ್ನು ಮರೆತು, ಜನರನ್ನು ಆಕರ್ಷಿಸಲು ಸಾರ್ವಜನಿಕವಾಗಿ ಉದ್ವಿಗ್ನಕಾರಿ ಮಾತನಾಡಿದುದು ಅಕ್ಷಮ್ಯ ಅಪರಾಧ. ಅವರ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

ಮೋದಿಯವ ರಂತಹ ಕೋಮುವಾದಿನಾಯಕರಿಗೆ ಪ್ರತಿ ಕೋಮುವಾದ ಉತ್ತರವಲ್ಲ. ಬದಲಿಗೆ, ಈ ದೇಶದ ಜಾತ್ಯತೀತತೆಯನ್ನು ಗಟ್ಟಿ ಮಾಡಿಕೊಂಡು, ಹಿಂದೂ, ಮುಸ್ಲಿಮ್ ಕ್ರೈಸ್ತರನ್ನು ಒಟ್ಟುಗೂಡಿಸುವುದೇ ಮೋದಿಯ ವರಿಗೆ ಈ ದೇಶ, ಸಂವಿಧಾನ ನೀಡುವ ಪ್ರತಿ ಉತ್ತರ. ಹಾಗಾದಲ್ಲಿ ಈ ದೇಶ ಎಂದೆಂದೂ ಅಖಂಡವಾಗಿ ಉಳಿದೀತು. ಅಭಿವೃದ್ಧಿಯತ್ತ ಮುನ್ನಡೆದೀತು.

 

Wednesday, January 02, 2013

ಕೋರೆಗಾವ ವಿಜಯ ದಿನ

ಬೆಂಗಳೂರು, ಜ.1: ದೇಶದಲ್ಲಿ ದಲಿತರ ಹಾಗೂ ಬಡವರ ಇತಿಹಾಸವನ್ನು ಪ್ರಜ್ಞಾಪೂರ್ವಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಅದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಕೋರೆಗಾಂವ್ ಘಟನೆಯೇ ಉದಾಹರಣೆಯಾಗಿದೆ ಎಂದು ಬೆಂಗಳೂರು ನಗರ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಮಂಗಳವಾರ ನಗರದ ಪುರಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೋರೆಗಾಂವ್ ವಿಜಯ ದಿನದ ಅಂಗವಾಗಿ ಏರ್ಪಡಿಸಿದ್ದ ‘ಮಹಾರ್ ವೀರ ಯೋಧರ ಬಲಿದಾನದ ನೆನಪಿಗಾಗಿ ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋರೆಗಾಂವ್ ಯದ್ಧವು ದಲಿತ ಮಹಾರ್ ಸೈನಿಕರು ತಮ್ಮ ಸ್ವಾಭಿಮಾನದ ರಕ್ಷಣೆಗಾಗಿ ಪೇಶ್ವೆಯ ಬೃಹತ್ ಸೈನ್ಯದ ವಿರುದ್ಧ ನಡೆಸಿದ ಹೋರಾಟವಾಗಿದೆ. ಆದರೆ ಭಾರತೀಯ ಇತಿಹಾಸದಲ್ಲಿ ದಲಿತರ ಈ ದಿಗ್ವಿಜಯವನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದ್ದು, ಈ ಬಗ್ಗೆ ಹೆಚ್ಚು ಮಾಹಿತಿಗಳೇ ಇಲ್ಲ ಎಂದು ರವಿಕಾಂತೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಬ್ರಿಟಿಷರು ತಮ್ಮ ದೊಡ್ಡ ರೆಜಿಮೆಂಟ್‌ನ್ನು ವಿಸರ್ಜಿಸಿ ದಲಿತ ಸೈನಿಕರಿಗೆ ಆದ್ಯತೆ ನೀಡಲು ಸಾಧ್ಯವಾದದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರಿಂದ. ಈ ಘಟನೆ ನಮ್ಮ ಪರಂಪರೆಗೆ ಸಿಕ್ಕ ದೊಡ್ಡ ಗೌರವವಾಗಿದೆ. ನಾವು ನಮ್ಮ ಇತಿಹಾಸ ಪರಂಪರೆಗಳ ಕಡೆಗೆ ಮತ್ತೆ ತಿರುಗಿ ನೋಡಬೇಕಿದೆ. ಇತಿಹಾಸದ ಸತ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದ್ದು, ಈ ಬಗ್ಗೆ ಗಂಭೀರ ಚಿಂತನೆಯಾಗಬೇಕು. ಈ ನಿಟ್ಟಿನಲ್ಲಿ ದಲಿತಾರ ಸೈನಿಕರ ಈ ದಿಗ್ವಿಜಯ ನಮ್ಮೆಲ್ಲರ ಕಣ್ಣುಗಳನ್ನು ಇತಿಹಾಸದ ಕಡೆಗೆ ತೆರೆಸುವ ಮೂಲಕ ಸ್ವಾಭಿಮಾನದೆಡೆಗೆ ಕೊಂಡೊಯ್ಯಲಿ ಎಂದು ರವಿಕಾಂತೇಗೌಡ ಆಶಿಸಿದರು.
ನಾವೆಲ್ಲ ಯದ್ಧ ವಿರೋಧಿಗಳಾಗಿದ್ದು, ಯದ್ಧಗಳನ್ನು ಮಾಡಿ ರಕ್ತ ಸುರಿಸುವುದಕ್ಕಿಂತ, ಮಡಿದ ವೀರ ಯೋಧರ ನೆನಪಲ್ಲಿ ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯವಾಗಿದೆ. ಪೊಲೀಸ್ ಇಲಾಖೆ ಸಹ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ರಕ್ತದ ತುರ್ತು ಅಗತ್ಯವಿರವವರು ಸಂಪರ್ಕಿಸಿದರೆ, ಪೊಲೀಸ್ ಸಿಬ್ಬಂದಿ ರಕ್ತ ನೀಡಲಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಸಿದ್ದರಾಮ ಕಾರ್ಣಿಕ್, ಅಂಬೇಡ್ಕರ್ ನಮಗೆಲ್ಲ ಕೇವಲ ಹೆಸರಾಗಿದ್ದಾರೆಯೇ ಹೊರತು, ಉಸಿರಾಗಿಲ್ಲ. ನಮಗೆ ಅವರು ಹೆಸರು ಹಾಗೂ ಉಸಿರಾದಾಗ ಮಾತ್ರ ದಲಿತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ ಶಿವಾಜಿ, ಸಾಂಬಜಿ ಸೇರಿದಂತೆ ಹಲವು ನಾಯಕರ ಸಮಾಧಿಗಳನ್ನು ಸರಕಾರ ಅಭಿವೃದ್ಧಿಪಡಿಸಿದೆ. ಆದರೆ ಸ್ವಾಭಿಮಾನಕ್ಕಾಗಿ ಹುತಾತ್ಮರಾದ ಮಹರ್ ಯೋಧರ ಸ್ಮಾರಕ ಶಿಥಿಲಗೊಂಡಿದ್ದು, ಸರಕಾರ ನಿರ್ಲಕ್ಷಿಸಿದೆ. ಆದುದರಿಂದ ಮಹಾರಾಷ್ಟ್ರ ಸರಕಾರ ಕೋರೆಗಾಂವ್ ಸ್ಮಾರಕವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ದಲಿತರು ಎಚ್ಚೆತ್ತುಕೊಳ್ಳದ ಕಾರಣ ಕೋರೆಗಾಂವ್‌ನಂತಹ ಹಲವು ಐತಿಹಾಸಿಕ ಘಟನೆಗಳು ಮುಚ್ಚು ಹೋಗುತ್ತಿವೆ. ನಾವು ಎದ್ದು ನಿಲ್ಲದಿದ್ದರೆ ನಮ್ಮ ಅವಸಾನವಾಗಲಿದೆ. ಆದುದರಿಂದ ಕೋರೆಗಾಂವ್ ಯೋಧರ ತ್ಯಾಗ, ಬಲಿದಾನ, ಸ್ವಾಭಿಮಾನಗಳನ್ನು ಅರ್ಥಮಾಡಿಕೊಂಡು ನಾವೆಲ್ಲ ಮುಂದುವರಿ ಯಬೇಕು. ಆ ಮೂಲಕ ಅಧಿಕಾರದ ಕೇಂದ್ರ ಸ್ಥಾನಗಳ ಗದ್ದುಗೆ ಏರಬೇಕು ಎಂದು ಡಾ.ಸಿದ್ದರಾಮ ಕಾರ್ಣಿಕ್ ನುಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ರಂಗಸ್ವಾಮಿ, ಅಂಬೇಡ್ಕರ್‌ರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾನತೆಗಾಗಿ ಹೋರಾಟ ನಡೆಸೋಣ ಎಂದರು.
ಅಧ್ಯಕ್ಷತೆಯನ್ನು ಡಿಎಸ್‌ಎಸ್‌ನ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು. ಕಿವಿ, ಸಾಹಿತಿ ರುದ್ರಪ್ಪ ಹನಗವಾಡಿ, ಪ್ರಜಾವಿಮೋಚನಾ ಚಳವಳಿಯ ಮುಖಂಡ ಪಟಾಪಟ್ ನಾಗರಾಜ್, ಟಿಪ್ಪು ಸಂಯುಕ್ತ ರಂಗದ ಅಧ್ಯಕ್ಷ ಅಹ್ಮದ್ ಖುರೇಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೃಪೆ : ವರ್ತಮಾನ ಭಾರತಿ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.