ಅಣ್ಣಾ ಹಜಾರೆ ಇರುವ ವರ್ಚಸ್ಸನ್ನು ಎಡಬಿಡಂಗಿತನ ನಡೆಗಳಿಂದ ಕಳೆದುಕೊಳ್ಳುತ್ತ ನಡೆದಿರುವುದು ಕಂಡುಬರುತ್ತಿದೆ. ಇದು ಲೋಕಪಾಲಕ್ಕಾಗಿ ನಡೆಸಿರುವ ಹೋರಾಟವಾಗಿರದೇ ಪ್ರಚಾರಕ್ಕಾಗಿ ರಚ್ಚೆ ಹಿಡಿದವರಂತೆ ಮಾಡುವ ತಂತ್ರಗಾರಿಕೆ ಎನಿಸುತ್ತಿದೆ. ಪ್ರಜ್ಞಾವಂತ ನಾಗರಿಕರು ಇದನ್ನು ಅರಿಯಬೇಕು. ಹಜಾರೆ ಆಂದೋಲನದ ಮೂಲಕ ದೇಶವನ್ನು ಒಡೆಯಲು ಹೊರಟಿದ್ದಾರೆ. ಲಕ್ಷಾನುಗಟ್ಟಲೆ ರುಪಾಯಿ ಖರ್ಚು ಮಾಡಿ ಸಿದ್ದಪಡಿಸುವ ವೇದಿಕೆಯ ಮೇಲೆ ಹಜಾರೆ ರಾಜನಂತೆ ಕುಳಿತುಕೊಳ್ಳುವುದನ್ನು ಕಂಡಾಗ ಇದು ಜನಸಾಮಾನ್ಯರ ಆಂದೋಲನವಾಗಿರದೆ ರಾಜಶಾಹಿತನವೇ ಆಗಿದೆ. ನಾವು ಆಂದೋಲನ ಮಾಡಿದಾಗ, ಮುಷ್ಕರ-ಮೆರವಣಿಗೆ ಮಾಡುವಾಗ ನಮ್ಮ ಕಿಸೆಗಳನ್ನು ಮುಟ್ಟಿ ನೋಡಿಕೊಳ್ಳುತ್ತೇವೆ ಎನ್ನುವ ದಲಿತ ಪ್ಯಾಂಥರ್ ನ ಮುಖಂಡ ಮತ್ತು ಹಿರಿಯ ಮರಾಠಿ ಲೇಖಕ ನಾಮದೇವ ಢಸಾಳ ಹೇಳಿರುವುದರಲ್ಲಿ ಅರ್ಥವಿದೆ.
Subscribe to:
Post Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...
No comments:
Post a Comment