Saturday, March 03, 2012

ಇತಿಹಾಸದ ವಾರಸುದಾರರು ನಾವು ಪ್ರಶ್ನೆ ಕೇಳುತ್ತಿದ್ದೇವೆ : ಉತ್ತರ ಹೇಳಿ

ನಿಮ್ಮ ಕಾಲ್ತುಳಿತಕ್ಕೆ ಸಿಕ್ಕ
ನನ್ನ ಶ್ವಾಸ ಈಗಲೂ
ವಿಲಿವಿಲಿ ಒದ್ದಾಡುತ್ತಲಿದೆ.

ಊರ ಹೊರಗೆ ತಿಪ್ಪೆಯಲ್ಲಿ
ನಾವು ನಿಮಗೆ ಎಷ್ಟು ಕೊಡಬೇಕೆನ್ನುವುದನ್ನು
ಒಮ್ಮೆ ಲೆಕ್ಕ ತೋರಿಸಿ ಹೇಳಿ :

ಇತಿಹಾಸದ ವಾರಸುದಾರರು ನಾವು
ಪ್ರಶ್ನೆ ಕೇಳುತ್ತಿದ್ದೇವೆ : ಉತ್ತರ ಹೇಳಿ

ಮಹಾತ್ಮ ಫುಲೆ ಅಂಬೇಡ್ಕರ್ ರು ಈಗಾಗಲೇ
ನಿಮ್ಮ ಅಕೌಂಟ್ಸನ್ನು ಆಡಿಟ್ ಮಾಡಿದ್ದಾರೆ
ಗ್ರಂಥ ಗ್ರಂಥಗಳಲ್ಲಿ ಹುದುಗಿಕೊಂಡಿರುವ
ಫ್ರಾಡ್ಸ್ ಗಳನ್ನು ಡಿಟೆಕ್ಟ್ ಮಾಡಿದ್ದಾರೆ

ಜನರಲ್ ಎಂಟ್ರಿ ಎಷ್ಟು
ಮಾಡಬೇಕೆಂಬುದನ್ನು ಅವರು
ಆಡಿಟ್ ರಿಪೋರ್ಟ್ ಈಗಾಗಲೇ ನೀಡಿದ್ದಾರೆ

ಇಷ್ಟಿದ್ದರೂ ನೀವು ಅದೇ ಹಾಡು
ಹಾಡುವ ಕಿಸುಬಾಯಿ ದಾಸರು

ಹೋದ ಜನ್ಮದ ಕೊಳೆತ ಸ್ಟಾಂಪ್ಸ್ ಗಳು
ಈಗಾಗಲೇ ಔಟ್ ಡೇಟೆಡ್ ಗಳಾಗಿವೆ
ನಿಮ್ಮ ಹಣೆಯ ಮೇಲಿನ ಗಂಧ
ಅದಕ್ಕಿಂತಲೂ ಮೊದಲು ಬಾಯ್ ಕಟ್ ಆಗಿದೆ

ಈಗಲೂ ಅವಕಾಶವಿದೆ : ಮಾಡಿದ ತಪ್ಪು
ತಿದ್ದಿಕೊಳ್ಳಲು : ನಿಮ್ಮ ಪಾಪಗಳ ಎಕ್ಸೆಸ್
ಬ್ಯಾಲನ್ಸ್ ರಿಟರ್ನ್ ಆಫ್ ಮಾಡಿಕೊಡುತ್ತೇವೆ

ಅದಕ್ಕಾಗಿ

ನೀವು ಮಾಡಬೇಕಾದದ್ದಿಷ್ಟೆ :

ಮನುಷ್ಯರಂತೆ ಜೀವಿಸುವುದು ಕಲಿಯಿರಿ
ಒಂದು ವೇಳೆ ಅದು ಸಾಧ್ಯವಾಗದಿದ್ದರೆ
ದಿವಾಳಿಗೆದ್ದಿದ್ದೇವೆಂದಾದರೂ
ಜಾಹೀರು ಪಡಿಸಿರಿ !


ಮೂಲ ಮರಾಠಿ : ಪ್ರಹ್ಲಾದ್ ಚೆಂದವಣಕರ್
ಕನ್ನಡಕ್ಕೆ : ಡಾ. ಸರಜೂ ಕಾಟ್ಕರ್

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.