Thursday, March 01, 2012

ನಾಳಿನ ರೊಟ್ಟಿಯ ಚಿಂತೆ... !


ನಮ್ಮನ್ನು ನಾವೇ ಪ್ರೀತಿಸತೊಡಗಿ 
ಮದುವೆಯಾಗಲು ಅವಕಾಶವಿರಲಿಲ್ಲ
ಆಗಸದ ಕನಸಿನ ವ್ಯಾಪಾರಿಗಳೋ 
ತಮ್ಮ ಹಡಗುಗಳಿಗೆ ಲಂಗರು ಹಾಕಿಬಿಟ್ಟಿದ್ದರು
ನಡೆಯಲು ದಾರಿ ಸರಳವಿತ್ತು,

ಆದರೆ ಸುಖ ಸ್ವೇಚ್ಛೆಯ ಮಾಟದ 
ಒಡವೆ ಕಳಚಲಾಗದೆ ಉಳಿಯಿತು

ಆತ್ಮವು ಅಂತರಾಳದ ಸ್ವಮರುಕದ 
ಹಂಗಿನಿಂದ ಹೊರಬರುತ್ತಿದೆ
ಪ್ರತಿ ದಿನವೂ ಭವಿಷ್ಯದ ತುಟಿಗಳ 
ಮೇಲೆ ಮಂದಹಾಸ ಮೂಡಿಸುತ್ತದೆ
ದೇವಸೃಷ್ಟಿಯ ಈ ನರಕದೊಳಗೆ 
ಬಂದಿಯಾಗಲು ಇಷ್ಟವಿಲ್ಲ ನನಗೆ

ಅಮೃತ ಹೊತ್ತ ಮೋಡಗಳು 
ಅಮರತ್ವದ ಮಳೆ ಸುರಿಸುವವೋ ಇಲ್ಲವೋ
ಮೈಮರೆತು ಇಲ್ಲೇ ಗೋರಿಯಾಗಲಾರೆ

ನನ್ನ ಮಟ್ಟಿಗೆ ಈಗಲೂ ಅದೊಂದೇ
ನಾಳಿನ ರೊಟ್ಟಿಯ ಚಿಂತೆ...
ಮೂಲ ಮರಾಠಿ : ನಾಮದೇವ ಢಸಾಳ
ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.