Saturday, March 24, 2012

ಮಾತ್ಗವಿತೆ-57

ಒಳಗಣ್ಣಿನ ಒಳಲೋಕ ಕಾಣಬಾರದು !
ಒಳ ಅರಿವು ಒಳ ಹರಿವು ತೋರಬಾರದು !
ಒಳಗೊಂದು ಮಿಡಿತ ; ಹೊರಗೆ
ಹಲವು ತುಡಿತ !
ಕಾರಣಕ್ಕೆ ಕಾರಣಾಂತರಗಳೂ ಇರುತ್ತವೆ !
ಒಳ-ಹೊರಗಿನ ಘಾಸಿತನಕ್ಕೆ ಹೇಸಿಕೆ ಬಿಡು
ಹೊಸ ಲೋಕದ ಕನಸು ಧ್ಯಾನಿಸು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.