Friday, March 30, 2012

ಮಾತ್ಗವಿತೆ-60

ನನಗೆ ಕನಸುಗಳಿಲ್ಲ ಎಂದು
ಯಾಕೆ ನಿನಗೆ ಅನಿಸಿತು ?
ಕಾಡಿಸುವುದು ಬೇಡವೆಂದು
ಸುಮ್ಮನಿರುವುದೇ ಸರಿಯಲ್ಲವೇನೋ ?
ನೂರೆಂಟು ಬಯಕೆಗಳು ; ಸಾವಿರದ ಕುಸುರುಗಳು
ಹೆಸರು ಹೇಳಲು ಕಾದು ಕುಳಿತಿವೆ !
ಸ್ಪರ್ಧೆಗೆ ಇಳಿದು ಮೇಲೇರಿ ಬರುತ್ತವೆ !
ಅನುಭವಿಸು ; ನೀನೇ ಕೇಳಿದ್ದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.