Thursday, March 07, 2013

8 ಮಾರ್ಚ್ : ಒಂದೆರಡು ಮಾತುಗಳು !

ಡಾ. ಸಿದ್ರಾಮ ಕಾರಣಿಕ

8 ಮಾರ್ಚ್ ವಿಶ್ವ ಮಹಿಳಾ ದಿನ. ನಾವೆಲ್ಲ ಒಬ್ಬರಿಗೊಬ್ಬರು ವಿಶ್ ಮಾಡುತ್ತ ಖುಷಿಯಿಂದ ಕಳೆಯುತ್ತೇವೆ. ಆದರೆ ಇಂದಿಗಾದರೂ ಹೆಣ್ನುಮಕ್ಕಳ ಪಾಡು ಬದಲಾಗಿದೆಯೇ ? ಎಷ್ಟೋ ಹೋರಾಟಗಳು ನಡೆದರೂ ಸ್ತ್ರೀ ಇನ್ನೂ ಪುರುಷ ಪ್ರಧಾನ ಸಾಮಾಜಿಕ ಬಂಧನದಿಂದ ಬಿಡುಗಡೆ ಹೊಂದಿಯೇ ಇಲ್ಲ. ಮುಕ್ತವಾಗಲು ಆಕೆಗೆ ಅವಕಾಶಗಳೇ ಇಲ್ಲ. ದಿಲ್ಲಿಯಲ್ಲಿ ಅತ್ಯಾಚಾರ ನಡೆದಾಗ ಅದು ವಿಶ್ವವ್ಯಾಪಿಯಾಗಿ ಗಮನ ಸೆಳೆಯಿತು. ಪ್ರತಿಭಟನೆಗಳು ನಡೆದವು. ಆದರೆ ಫಲ ಮಾತ್ರ ಸೊನ್ನೆ ! ಯಾಕೆಂದರೆ ಅಂತಹ ಪ್ರಕರಣಗಳು ಮೇಲಿಂದ ಮೇಲೆ ಇನ್ನೂ ಹೆಚ್ಚಾಗಿಯೇ ವರದಿಯಾಗುತ್ತಿವೆ. ವರದಿಯಾದ ಪ್ರಕರಣಗಳನ್ನು ಬಿಟ್ಟು ಇನ್ನೂ ಎಷ್ಟೋ ಪ್ರಕರಣಗಳು ಹೇಳ ಹೆಸರಿಲ್ಲದಂತೆ ಈ ದೇಶದಲ್ಲಿ ನಡೆಯುತ್ತಲೇ ಇವೆ. ಇವೆಲ್ಲವುಗಳಿಗೆ ಕೊನೆ ಎಂಬುದೇ ಇಲ್ಲವೆ ಎನಿಸುತ್ತದೆ. ಹಾಗಾದರೆ ನಮ್ಮ ಪ್ರತಿಭಟನೆ, ಹೋರಾಟಗಳಿಗೆ ಇಂಥ ಸಾಮಾಜಿಕ ಜಾಡ್ಯವನ್ನು ಕೊನೆಗೊಳಿಸುವ ಶಕ್ತಿಯೇ ಇಲ್ಲವೆ ? ನಾವೆಲ್ಲ ಮೊಸಳೆ ಕಣ್ಣೀರು ಸುರಿಸುತ್ತಿದ್ದೇವೆಯೇ ? ಯಾಕೆ ಹೀಗಾಗುತ್ತದೆ ? ಮನುಷ್ಯರು ಮನುಷ್ಯರೇ ಅಲ್ಲವೇನೋ ಎಂಬಂತೆ ವರ್ತಿಸುವುದ್ಯಾಕೆ ? ನಮ್ಮ ಮನಸ್ಸುಗಳು ಇನ್ನೂ ಕೊಳಕುತನಗಳನ್ನು ಕಳೆದುಕೊಂಡಿಲ್ಲವೆ ? ಎಲ್ಲಿಯವರೆಗೆ ಸುಮ್ಮನಿರಬೇಕು ? ಮಾರ್ಚ್ ಎಂಟರಂದು ವಿಶ್ ಮಾಡುವ ಮೂಲಕವೋ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಮಾತನಾಡುವ ಮೂಲಕವೋ ಸಮಾನತೆಯ ವ್ಯಂಗ್ಯ ಮಾಡುತ್ತಿದ್ದೇವೆಯೇ ? ಯಾಕೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಿಲ್ಲ ? ಯಾಕೆ ನಮ್ಮಲ್ಲಿ ನೈತಿಕ ಉಳಿದೇ ಇಲ್ಲವೇ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.