Friday, March 01, 2013

ಮಾತ್ಗವಿತೆ-118

ನಿಶೆಯಾಗಿ ಹರಕು ಕಿಸೆಯಲ್ಲಿ ತಿರುಗಾಡುವಾಗ
ಜನುಮದ ಗೆಳೆಯ ಹಾಕಿದ ಚಿಲ್ಲರೆಯೇ ಅಖಂಡ ಸಂಪತ್ತು !
ಅಂದಿನದು ಅಂದೇ ಮುಗಿಸಬೇಕು
ಹಿಂದೆ ಕಾಯಬಾರದು ಎನ್ನುವ ತತ್ವ ಹಿರಿಯರದು ;
ಪಾಲಿಸಬೇಕಲ್ಲವೆ ಪರಂಪರೆಯ ವಾರಸುದಾರನಂತೆ !
ಮತ್ತೇ ಮರುದಿನ ಜೀವದ ಗೆಳೆಯನ ಹುಡುಕಾಟ ;
ನಿನ್ನೆ ಸಿಕ್ಕವನೇ ಇಂದು ಸಿಗಬೇಕೆಂದೇನೂ ಇಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.