Monday, May 07, 2012

ಸದಾನಂದ ಗೌಡ ಸಂಪುಟ ಹೊರೆ ಸಮಗ್ರ ವಿವರ

 Sadananda Gowda Cabinet Ministers Portfolio Re Shuffle

ಬೆಂಗಳೂರು, ಮೇ.7: ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸಂಪುಟ ಪುನಾರಚನೆ, ಖಾತೆ ಹಂಚಿಕೆ, ಸಂಪುಟ ವಿಸ್ತರಣೆ ಇನ್ನೊಂದು ವಾರದಲ್ಲೇ ಆಗಲಿದೆ ಎಂದು ಸೋಮವಾರ(ಮೇ.7) ಮತ್ತೊಮ್ಮೆ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ವಿದೇಶಿ ಪ್ರವಾಸದಲ್ಲಿರುವುದರಿಂದ ಸಂಪುಟ ವಿಸ್ತರಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಕಮ್ಮಿ ಎನ್ನಬಹುದು.

'ಕತ್ತೆಯೂ ಹೊರದಷ್ಟು ಭಾರ ನಾನು ಹೊತ್ತಿದ್ದೇನೆ. ಸುಮಾರು 21 ಖಾತೆಗಳ ಭಾರ ಹೊರುವುದು ಸುಲಭದ ಮಾತಲ್ಲ. ಎಲ್ಲಾ ಖಾತೆಗಳಿಗೂ ನ್ಯಾಯ ಸಲ್ಲಿಸಲಾಗುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಅನಿವಾರ್ಯ' ಎಂದು ಸದಾನಂದ ಗೌಡ ಹೇಳಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳಾದ ಸಿಟಿ ರವಿ ಅವರು ಸಹಿ ಸಂಗ್ರಹ ಕಾರ್ಯ ಮುಗಿಸಿದ್ದು, ಸೋಮವಾರ(ಮೇ.7) ಪಕ್ಷದ ಹಿರಿಯ ನಾಯಕರಿಗೆ ನೀಡುವ ಸಾಧ್ಯತೆಯಿದೆ. ಪಕ್ಷ ನಿಷ್ಠ ಶಾಸಕರು, ಸಚಿವರು ಪಕ್ಷದ ಸಂಘಟನೆಯಲ್ಲಿ ತೊಡಗಲಿ, ಕುರ್ಚಿ ಬಿಟ್ಟು ಬರಲಿ ಎಂದು ಮನವಿ ಸಲ್ಲಿಸುತ್ತಿದ್ದಾರೆ.

Flash Back : ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಶಾಸಕರನ್ನು ಒಟ್ಟುಗೂಡಿಸಿ ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಡಿವಿ ಸದಾನಂದ ಗೌಡರು ಸೇರಿಸಿಕೊಂಡಿದ್ದು ಇಲ್ಲಿ ಸ್ಮರಿಸಬಹುದು.

ಕ್ಯಾಬಿನೆಟ್ ಸಚಿವರು ಅವರ ಕ್ಷೇತ್ರ ಹಾಗೂ ಖಾತೆ ವಿವರ ಹೀಗಿದೆ:

ಸಚಿವರ ಹೆಸರುಕ್ಷೇತ್ರಖಾತೆ
ಡಿ.ವಿ. ಸದಾನಂದ ಗೌಡ-ಹಣಕಾಸು, ಕಂದಾಯ, ಗುಪ್ತಚರ, ಆರೋಗ್ಯ, ಗಣಿಗಾರಿಕೆ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮುಜರಾಯಿ, ಮೂಲ ಸೌಕರ್ಯ, ಯುವಜನ ಸೇವೆ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಹಕಾರ, ಪರಿಸರ, ಮೀನುಗಾರಿಕೆ, ಯೋಜನೆ, ವಾರ್ತಾ ಇಲಾಖೆ, ಬೆಂಗಳೂರು ಅಭಿವೃದ್ಧಿ, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವಕ್ಫ್ ಮತ್ತು ಹಜ್ ಇಲಾಖೆ ಬಾಕಿ ಉಳಿದ ಎಲ್ಲಾ ಖಾತೆಗಳು
ಗೋವಿಂದ ಕಾರಜೋಳಮುಧೋಳಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ,
ದಿ. ವಿ.ಎಸ್. ಆಚಾರ್ಯವಿಧಾನಪರಿಷತ್ ಸದಸ್ಯ-
ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪಹಾನಗಲ್PWD, ಬಂದರು ಖಾತೆ ಹೊರತು ಪಡಿಸಿ
ಜಗದೀಶ್ ಶೆಟ್ಟರ್ಹುಬ್ಬಳ್ಳಿಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಗ್ರಾಮೀಣ ನೀರು ಪೂರೈಕೆ
ಆರ್ ಅಶೋಕ್ಪದ್ಮನಾಭ ನಗರಗೃಹ(ಗುಪ್ತಚರ, ಬಂದೀಖಾನೆ ಹೊರತುಪಡಿಸಿ), ಸಾರಿಗೆ
ನಾರಾಯಣಸ್ವಾಮಿಆನೇಕಲ್ಅಲ್ಪಸಂಖ್ಯಾತ ಸಮಾಜ ಕಲ್ಯಾಣ, ಬಂದೀಖಾನೆ
ವಿಶ್ವೇಶ್ವರ ಹೆಗಡೆ ಕಾಗೇರಿಶಿರಸಿಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಹೊರತು ಪಡಿಸಿ
ಬಿಎನ್ ಬಚ್ಚೇಗೌಡಹೊಸಕೋಟೆಕಾರ್ಮಿಕ ಖಾತೆ, ರೇಷ್ಮೆ
ಸುರೇಶ್ ಕುಮಾರ್ರಾಜಾಜಿನಗರಕಾನೂನು
ಎಸ್ ಎ ರವೀಂದ್ರನಾಥ್ದಾವಣಗೆರೆ ಉತ್ತರಸಕ್ಕರೆ, ತೋಟಗಾರಿಕೆ ಹಾಗೂ ಕೃಷಿ
ಎಸ್ ಎ ರಾಮದಾಸ್(ಮೈಸೂರು)ವೈದ್ಯಕೀಯ ಶಿಕ್ಷಣ(ಆರೋಗ್ಯ ಖಾತೆಯಿಂದ)
ಮುರುಗೇಶ್ ನಿರಾಣಿಬಿಳಗಿಮಧ್ಯಮ ಹಾಗೂ ಭಾರಿ ಕೈಗಾರಿಕಾ
ಶೋಭಾ ಕರಂದ್ಲಾಜೆಯಶವಂತಪುರಇಂಧನ, ಆಹಾರ ಮತ್ತು ನಾಗರಿಕ ಸೌಲಭ್ಯ ಪೂರೈಕೆ
ಉಮೇಶ್ ಕತ್ತಿಚಿಕ್ಕೋಡಿಕೃಷಿ
ರೇಣುಕಾಚಾರ್ಯಹೊನ್ನಾಳಿಅಬಕಾರಿ
ಬಸವರಾಜ್ ಬೊಮ್ಮಾಯಿಹಾವೇರಿನೀರಾವರಿ
ರೇವೂನಾಯಕ್ ಬೆಳಮಗಿಗುಲಬರ್ಗ ಗ್ರಾಮೀಣಗ್ರಂಥಾಲಯ, ಸಣ್ಣ ಉಳಿತಾಯ, ಹೈನುಗಾರಿಕೆ
ಸಿಸಿ ಪಾಟೀಲ್ನರಗುಂದ-ಸಂಪುಟದಿಂದ ಕೈ ಬಿಡಲಾಗಿದೆ
ಲಕ್ಷ್ಮಣ್ ಸವದಿಅಥಣಿ-ಸಂಪುಟದಿಂದ ಕೈ ಬಿಡಲಾಗಿದೆ
ಕೃಷ್ಣ ಪಾಲೇಮಾರ್ಮಂಗಳೂರು ಉತ್ತರ-ಸಂಪುಟದಿಂದ ಕೈ ಬಿಡಲಾಗಿದೆ
ವಿ ಸೋಮಣ್ಣವಿಧಾನಪರಿಷತ್ ಸದಸ್ಯವಸತಿ
ಬಾಲಚಂದ್ರ ಜಾರಕಿಹೊಳಿಅರಬಾವಿಪೌರಾಡಳಿತ
ಆನಂದ್ ಆಸ್ನೋಟಿಕರ್ಕಾರವಾರಐಟಿಬಿಟಿ, ವಿಜ್ಞಾನ ತಂತ್ರಜ್ಞಾನ
ಸಿ.ಪಿ ಯೋಗೀಶ್ವರ್ಚನ್ನಪಟ್ಟಣಅರಣ್ಯ
ನರಸಿಂಹ ನಾಯಕ(ರಾಜೂ ಗೌಡ)ಸುರಪುರಸಣ್ಣ ಕೈಗಾರಿಕೆ
ವರ್ತೂರು ಪ್ರಕಾಶ್ಕೋಲಾರಜವಳಿ
Posted by:
ಕೃಪೆ : ಒನ್ ಇಂಡಿಯಾ, ಕನ್ನಡ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.