Tuesday, May 01, 2012

ಉಸ್ಮಾನಿಯ ವಿಶ್ವವಿದ್ಯಾಲಯ : ದನದ ಮಾಂಸದ ತಿನಿಸಿನ ಉತ್ಸವ ಮತ್ತು ವಿರೋಧಿಗಳಿಗೆ ಉತ್ತರ !

Jayapal Hiriyalu ಹೇಳಿದ್ದು,
ಮೊನ್ನೆ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ದನದ ಮಾಂಸದ ತಿನಿಸಿನ ಉತ್ಸವ ಮಾಡಿದ ವಿದ್ಯಾರ್ಥಿಗಳನ್ನ ಮನಸೋ ಇಚ್ಚೆ ಥಳಿಸಲಾಗಿದೆ. ಕೆಲವು Professorsಗಳಿಗೆ ಪೋಲಿಸರ ಕಿರುಕುಳ ಶುರುವಾಗಿದೆ. ಅಂದು ಆಹಾರ ಉತ್ಸವದಲ್ಲಿ ಪಾಲ್ಗೊಂಡವರಾರು ಬಲವಂತದಿಂದ ಹೋದವರಲ್ಲ. ದನದ ಮಾಂಸವನ್ನ ಸೇವಿಸುವುದು ಕೂಡ ಆಹಾರ ಸಂಸ್ಕೃತಿ. ಅವರವರ ಪರಂಪರಾಗತ ಆಹಾರ ಪದ್ದತ್ತಿಯನ್ನ ಮುಂದುವರೆಸುವುದರಲ್ಲಿ ತಪ್ಪೇನಿದೆ. ತಿನ್ನುವ ಆಹಾರದಲ್ಲಿ ಧರ್ಮ ಬೆರೆಸುವ, ಯಜಮಾನ್ಯತೆ ತೋರಿಸುವ ವೈದಿಕ ಗೂಂಡಾಗಿರಿಗೆ ಧಿಕಾರವಿರಲಿ. ನಾಲ್ಕು ಜನ ಒಟ್ಟಿಗೆ ಕುಳಿತುಕೊಂಡು ತಮಗೆ ಇಷ್ಟವಾದ ಆಹಾರ ಸ್ವೀಕರಿಸುವುದಕ್ಕೆ ಆಗುವುದುದಿಲ್ಲವೆಂದರೆ ನಾವು ದೇಶವಾದರು ಹೇಗಾದೇವು....? ಇಂದು ವೈದಿಕರು ತಮ್ಮ ಗೂಂಡಾಗಿರಿಗೆ ಬಳಸಿಕೊಳ್ಳುತ್ತಿರುವುದು ಶೂದ್ರ ಸಮೌದಾಯಗಳನ್ನೆ. ಶೂದ್ರರ ದಬ್ಬಾಳಿಕೆ ರೂಕ್ಷ ಮತ್ತು ಭೌತಿಕ ನೆಲೆಗಟ್ಟಿನಲ್ಲಿರುವಂತದ್ದು, ಆದರೆ ವಂಚನೆಯನ್ನ, ಶೋಷಣೆಯನ್ನ ಬೌದ್ಧಿಕವಾಗಿ ಸಮರ್ಥಿಸಿ ಜೀವಂತವಗಿಡುವ ಸಾಮರ್ಥ್ಯವಿರುವುದು ಈ ವೈದಿಕರಿಗೆ ಮಾತ್ರ ಮತ್ತು ಈ ಮಾರ್ಗದ ಮುಖಾಂತರವೇ ಅಸಂಖ್ಯ ಶೂದ್ರರನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರಗತಿಪರರ ಮೇಲೆ ಮತ್ತು ದಲಿತರ ಮೇಲಿನ ತಮ್ಮ ಕಾರ್ಯಾಚರಣೆಯನ್ನ ಶೂದ್ರರ ಮುಖಾಂತರ ಮಾಡಿಸುತ್ತಿದ್ದಾರೆ. ಥೂ ಇದು ಒಂದು ವ್ಯವಸ್ಥೆಯಾ...!!
ಈ ಅಭಿಪ್ರಾಯಕ್ಕೆ Reginald Soans ಅವರು 
Lord Ram has been replaced by the holly cow, to beat and subjugate the very people who were subjected to oppresion and humiliation for thousands of years, by the grass eating primitives! In the present prevailing socio-political senario in this country, cow has become a deadly weapon in the hands of communal reactionary foces who are hell- bent on turning the clock back. Cow seems to be a double edged weapon against Dalits, minorities and starving shudras as well! Real tregedy of this country is that so called secular state is colluding with the barbarians. Incidentally beef is being eaten by 4/5 of the people world over including this country! ಎಂಬ ಸೂಕ್ತವಾದ ವಿಷಯವೊಂದನ್ನು ಪ್ರತಿಪಾದಿಸಿದ್ದರು.

ಈ ವಿಷಯವನ್ನೇ ಇಟ್ಟುಕೊಂಡು ಕಾಮೇಂಟ್ ಬರೆದಿರುವ  ಭರತ್ ಚಂದ್ರಶೇಕರ್ ಜೈರಾಮ್ ಎನ್ನುವವರು ನಿಮ್ಮ ಸ್ವಾತಂತ್ರದ ಮಾತು ನಿಜ. ಇದಕ್ಕೆ (ಸ್ವತಂತ್ರಕ್ಕೆ) ಅಡ್ಡಿ ಎಂದು ಬರಬಾರದು. ನಾನು ಮಾಂಸಹಾರಿ ವಿರೋದಿಯಲ್ಲ.

ಈ ಘಟನೆ ವೈದಿಕರ ಶೋಷಣೆಯ ವಿಷೆಯ ಹೇಗಾಯಿತು?

ಇದು ರಾಜಕೀಯ ವಿಷೆಯ. ಇಲ್ಲಿ ಸೂಕ್ಷ್ಮತೆಯಿಂದ ವಿಷೆಯವನ್ನು ನೋಡಬೇಕು. ಈ ಘಟನೆ ಒಂದು ರಾಜಕೀಯವಾಗಿ ಪ್ರೆರೆಪಿತಗೊಂಡ ಘಟನೆ. ಇದಕ್ಕೆ ಕುಮಕ್ಕು ಕೊಟ್ಟು ನಡೆಸಿದವರು ಇದ್ದಾರೆ. ಇದನ್ನು ತೋರಿಕೆಗಾಗಿ ಮಾಡಿದವರು ಇದ್ದಾರೆ. ಇವರಿಗೆಲ್ಲ ಸ್ತಳಿಯ ರಾಜಕೀಯಕ್ಕೆ ಒಂದು ವಿಷೆಯ ಬೇಕಿತ್ತು ಇದನ್ನು ಹಿಡ್ಕೊಂದರು.

ನಮಲ್ಲಿ ಅನಾದಿಕಾಲದಿಂದ ಗೋ ಮಾಂಸ ಜನ ತಿನ್ನುತ್ತಿದರೆ. ಇದಕ್ಕೆ ಈಗ್ಯಾಕೆ ವಿರೋದ? ವಿಷೆಯ ರಾಜಕಿಯವಗಿದಕ್ಕೆ ಅಷ್ಟೇ.

ಗಮನಿಸಿ - ನಮಲ್ಲಿ ಗೋ ಮಾಂಸ ತಿನ್ನುವ ಕ್ರಮ ಬೇರೆ. ಗೋವು ಸತ್ತರೆ ಅದನ್ನು ಕಡಿದು ತಿನುತ್ತಾರೆ. ಗೋವನ್ನು ಕೊಂದು ಎಂದು ತಿಂದಿಲ್ಲ. ವಿಷೆಯ ಇರುವುದು ಇಲ್ಲಿ. ಗೋವನ್ನು ಕಡಿಯಬಾರದು ಅನ್ನೋ ಒಂದು ನಂಬಿಕೆ. ಗೋ ಮಾಂಸ ತಿನ್ನೋದಕ್ಕಲ್ಲ. ಹಾಗೇನೆ ನಾವು ಮಂಗನನ್ನು ಕೊಲ್ಲೊಲ್ಲ. ಇದು ನಮ್ಮ ವಾಡಿಕೆ.

ಕಲ್ಲು ಕಂಡರೆ ವಿಗ್ರಹ ಕಾಣೋಲ್ಲ, ವಿಗ್ರಹ ಕಂಡರೆ ಕಲ್ಲು ಕಾಣೋಲ್ಲ. ಗೋವು ಪೂಜ್ಯನಿಯವಾಗಿ ಕಂಡರೆ ಬರಿ ಮಾಂಸದ ಮುದ್ದೆಯಾಗಿ ಕಾಣೋಲ್ಲ. ಬರಿ ಮಾಂಸದ ಮುದ್ದೆಯಾಗಿ ಕಂಡರೆ ಪೂಜ್ಯನಿಯವಗೋಲ್ಲ. ಅದಕ್ಕೆ ಗೋ ಹತ್ತ್ಯೆ ಮಾಡೋಲ್ಲ. ಆದರೆ ಅದು ನೈಸರ್ಗಿಕವಾಗಿ ಸತ್ತ ಮೇಲೆ ಅದನ್ನು ತಿನ್ನಬಹುದು. ಅದರ ಚರ್ಮ ಬಳಸಬಹುದು...... ಎಂದೆಲ್ಲ ಹೇಳಿದ್ದಾರೆ. ಆದರೆ ಈ ಮಾತಿಗೆ ನನ್ನ ವಿರೋಧವಿದೆ. ಅದಕ್ಕೆ ನಾನೂ ಜಯಪಾಲ ಅವರ ವಿಚಾರಕ್ಕೆ ಪೂರಕವಾಗಿಯೇ ಕಾಮೆಂಟ್ ಮಾಡಿದೆ.

ಭರತ್ ಚಂದ್ರಶೇಕರ್ ಜೈರಾಮ್ ಹೇಳಿದ್ದು ನಾನು ಒಪ್ಪೋದಿಲ್ಲ. ತಿನ್ನದವರು ಬೇಡ ಅಂತಾರೆ. ತಿನ್ನುವರಿಗೆ ಅದು ಹೊಟ್ಟೆಯ ಸಮಸ್ಯೆ. ಸತ್ತದ್ದನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಳ್ಳೆಯದನ್ನೇ ಆರಿಸಿ ಮಾಂಸ ಮಾಡಿ ತಿನ್ನಬೇಕು. ಇಲ್ಲಾಂದ್ರೆ ರೋಗ ಬರುತ್ತೆ ! ನೀವೇ ಹೇಳಿ, ಗಿಡ-ಮರ-ಸಸ್ಯಗಳಲ್ಲೂ ಜೀವ ಇದೆ ಅನ್ನೋದು ವೈಜ್ಞಾನಿಕವಾಗಿ ಸತ್ಯವಾದ ಮಾತಾಗಿದೆಯಲ್ಲವೆ ? ಹಾಗಾಗಿ ಅಲ್ಲಿಯೂ ನಮಗೆ ಪೂಜ್ಯನೀಯ ಎನಿಸುವ ಗಿಡ-ಮರ-ಸಸ್ಯಗಳಿಲ್ಲವೆ ! ತುಳಸಿಯನ್ನು ನಾವು ಎಷ್ಟೊಂದು ಪೂಜೆ ಮಾಡುತ್ತಾವೆ ನಿಮಗೆ ಗೊತ್ತು. ಆದರೆ ಅದರ ಎಲೆಗಳನ್ನು ಹರಿದು ಔಷಧಿಗೆ ಉಪಯೋಗಿಸುವುದು ಕೂಡ ಗೋ ಮಾಂಸ ತಿಂದಂತೆಯಲ್ಲವೆ ? ಇಲ್ಲಿ ತರಕಾರಿ ಇತ್ಯಾದಿಗಳಲ್ಲೂ ಜೀವ ಇರುತ್ತದೆ. ಅವುಗಳನ್ನೂ ತಾಜಾ ಇದ್ದಾಗಲೇ ಮುರಿದು ತಂದು ತಿನ್ನೋದಿಲ್ವೆ. ಅದೂ ಮಹಾಪಾಪವೇ ಅಲ್ವೆ ? ಸತ್ತ ಮೇಲೆ ತಿನ್ನಬೇಕು ಅಂದ್ರೆ ತರಕಾರಿ ಬೆಳೆದು, ಅದರ ಆಯಸ್ಸು ತೀರಿದ ಮೇಲೆ ಮುರಿದು ತನ್ನಷ್ಟಕ್ಕೆ ತಾನೇ ಬೀಳುತ್ತಲ್ಲ, ಆವಾಗ ತಿನ್ನಬಹುದೇ ? ತಾಜಾ ತಾಜಾನೇ ಯಾಕೆ ಬೇಕು ? ಆದ್ದರಿಂದಲೇ ಹೇಳೋದು ಇನ್ನೊಬ್ಬರ ಆಹಾರದ ಬಗ್ಗೆ ಮಾತನಾಡಬಾರದು. ಯಾರು ಏನು ತಿನ್ನುತ್ತಾರೋ ಅದು ಅವರ ಆಹಾರ ಪದ್ಧತಿಯೇ ಆಗಿರುತ್ತದೆ. ಇದರಲ್ಲಿ ರಾಜಕೀಯ ಏನೂ ಇಲ್ಲ. ಸೋಗು ಹಾಕಿಕೊಂಡು ತನ್ನ ಹಿಂದಿನ ಇತಿಹಾಸ ಮರೆತು ಮೆರೆಯುತ್ತಿರುವ ಹಿಂದೂ ಧರ್ಮವೇ ನೇರ ಕಾರಣ. ಯಾವುದಕ್ಕೂ ವಿಚಾರ ಮಾಡಿ !
ಡಾ. ಸಿದ್ರಾಮ ಕಾರಣಿಕ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.