Wednesday, May 23, 2012

ಮಾತ್ಗವಿತೆ-79

ನೀನು ಇರುವ ಕಡೆಯೆಲ್ಲ ಹೂ ಹಾಸಬೇಕೆಂದಿದ್ದೆ
ನೀನು ಇರುವೆಡೆಯೆಲ್ಲೆಲ್ಲೂ ನೋವಾಗದಿರಲೆಂದು ಹಾರೈಸಿದ್ದೆ
ನೀನು ಜತೆಗಿರುವವರೆಗೂ ನೋವ ಮರೆಯಬೇಕೆಂದುಕೊಂಡಿದ್ದೆ
ನೀನು, ನಾನು ಬೇರೆಯಾಗದ ಸಂಬಂಧ ಬೆಸೆಯಬೇಕೆಂದಿದ್ದೆ
ನೀನು ಮರೆತು ಹೋದೆ ; ನಾನು ಮರೆಯಬೇಕೆಂದಿದ್ದೆ ;
ನೀನು ಬಿಟ್ಟು ಹೋದ ನೆನಪುಗಳು ಯಾಕೋ ಸಾಯುತ್ತಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.