Monday, May 21, 2012

ಮಾತ್ಗವಿತೆ-78

ಇಲ್ಲಿಯವರೆಗಿನ ವೇದಿಕೆಯ ಮಾತುಗಳು ಇತ್ತಿತ್ತಲಾಗಿ
ಉಜಳಣಿಗೆ ಬರುತ್ತಿವೆ ; ಕರೆಯುತ್ತಿವೆ !
ಕೊರಗನ್ನು ಹತ್ತಿಸಿಕೊಂಡು ಹರಗುವವರು
ಹರೆಯದ ಹುಮ್ಮಸ್ಸಿನಲ್ಲಿ ಹೊಡಮರಳಿ
ಮತ್ತೇ ಕಿಚ್ಚು ಹಚ್ಚಿಕೊಳ್ಳುತ್ತಿದ್ದಾರೆ !
ಇನ್ನಾದರೂ ಇನ್ನು ಮುಂದಾದರೂ
ಮರೆಯುವುದನ್ನು ಮುಂದು ಮಾಡಬೇಡಿ !
ಗಂಡಾಂತರ ಬರುತ್ತದೆಯೆಂದಲ್ಲ ;
ಗಳಿಗೆ ಸರಿ ಇರುವುದಿಲ್ಲ ಅಷ್ಟೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.