Friday, May 11, 2012

ಮೀಸಲಾತಿ ಚರ್ಚೆಯ ಮುಂದುವರಿಕೆ ! ನೀವೇನಂತೀರೀ ?

ಐಜೂರ ಮತ್ತು ಶ್ರೀಕಾಂತ ಅವರಿಗೆ ಫೇಸ್ ಬುಕ್ಕಿನಲ್ಲಿ ವಾಗ್ವಾದ ನಡೆದಾಗ ನಾನು ಮಧ್ಯೆ ಪ್ರವೇಶಿಸಿ ಸಲಹೆ, ಸೂಚನೆ ನೀಡಿದೆ. ಆದರೆ ಇಡಿ ಅಭಿಪ್ರಾಯಗಳನ್ನು (ಶ್ರೀನಿವಾಸ ಎಂ.ವ್ಹಿ. ಅವರು ತಾವೇ ಆ ಪೋಸ್ಟಗಳನ್ನು ತೆಗೆದಿರುವುದಾಗಿ ನನ್ನೊಂದಿಗೆ ಮೊಬೈಲ್ ಮಾತುಕತೆಯಲ್ಲಿ ಹೇಳಿದ್ದಾರೆ ! ) ಅಳಿಸಿ ಹಾಕಲಾಯಿತು !

ಮೀಸಲಾತಿಯ  ಬಗ್ಗೆ ಚರ್ಚೆ ನಡೆದಾಗ ನಾನು ಏನೂ ಹೇಳಿದರೂ ಅರ್ಥ ಮಾಡಿಕೊಳ್ಳದ ಮೇಲೆ ನಾನು ಹೇಳಿದ್ದು, ಸರಿಯಾದ ಗ್ರಹಿಕೆಗಳು ಇರದಿದ್ದ ಪಕ್ಷದಲ್ಲಿ ಯಾರು ಏನು ಹೇಳಿದರೂ ರುಚಿಸುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಒಂದು ಮಾತು ಹೇಳಿದ್ದಾರೆ ಶ್ರೀಕಾಂತ, 'ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು' ಈ ಮಾತಿನರ್ಥ ಮಾಡಿಕೊಂಡು ಬದುಕಿ ; ಮನುಷ್ಯರನ್ನು ಮನುಷ್ಯರೆಂದು ಪರಿಗಣಿಸಿ ಮಾತನಾಡಿ, ವಂಶಪಾರಂಪರ್ಯವಾಗಿ ಬಂದ ಕೊಳಕುತನವನ್ನು ಇನ್ನಾದರೂ ಬಿಟ್ಟು ಹೊರಬನ್ನಿ. ಕೇವಲ ವಿತಂಡವಾದ ಹೂಡುವುದು ನಮ್ಮ ಕೆಲಸವಲ್ಲ ; ಸರಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ ; ಯಾಕೆ ಹೀಗಿದೆ ಎಂಬ ಬಗ್ಗೆ ವಾಸ್ತವದ ನೆಲೆಯಲ್ಲಿ ವಿಚಾರ ಮಾಡಿ. ಬುದ್ಧಿ ಸ್ಥಿಮಿತತೆಯನ್ನು ಕಳೆದುಕೊಂಡಂತೆ ವರ್ತಿಸುವುದರಿಂದ ಯಾವುದೇ ಪ್ರಯೋಜನಗಳಿಲ್ಲ. ಮನುಷ್ಯನ ಹೃದಯ ಗೆಲ್ಲಿ. ತಾಳ್ಮೆ ಇದ್ದರೆ ಒಂದಿಷ್ಟು ಓದಿಕೊಂಡು ಅರಿವು ಪಡೆದುಕೊಳ್ಳಿ ; ಇಲ್ಲವೆ ವಾಸ್ತವದ ಸಮಾಜವನ್ನು ಸುತ್ತು ಹಾಕಿ ಬನ್ನಿ ! ಏನೇನೂ ಸಾಧ್ಯವಿಲ್ಲ ಎಂದಾದರೆ ಸುಮ್ಮನಿರಿ ; ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ.

ಇದನ್ನು Mahadev Hadapad and Anilkumar Ogennavar ಮಾಡಿದರು. ಆನಂತರ  ಶ್ರೀಕಾಂತ್ ಎಂ ಅವರು  ನಾನು ಖಂಡಿತ ವಿತ್ತಂಡ ವಾದ ಮಾಡಲಿಲ್ಲ, ನಾವು ಮುಂದೆ ಎನು ಮಾಡಿದರೆ ಇದು ಸರಿ ಹೋಗಬಹುದೆಂದು ಹೇಳಿದೆ ಅಷ್ಟೇ, ನೀವು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಷ್ಟೇ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದು ನನಗೆ ಕಸಿವಿಸಿಯುಂಟು ಮಾಡಿತು. ಅದಕ್ಕೆ ನಾನು, ಇನ್ನೊಮ್ಮೆ ಓದಿ ಶ್ರೀಕಾಂತ ! ನಿಮ್ಮ ಹೆಸರಿದೆ ಅಲ್ಲಿ. ಆದರೆ ಅದು ಕೇವಲ ನಿಮಗಷ್ಟೆ ಅಲ್ಲ ; ಎಲ್ಲರಿಗೂ ಅನ್ವಯಿಸಿಯೇ ನಾನು ಆ ಮಾತುಗಳನ್ನು ಬರೆದಿದ್ದೇನೆ. ನಿಜ ಹೇಳಬೇಕು ಅಂದ್ರೆ ನೀವು ಹೇಳುವ ಮಾತುಗಳು ನಿಜವಾಗಿಯೂ ಅರ್ಥವಾಗುತ್ತ ಇಲ್ಲ ; ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ನೀವೇನು ಅದಕ್ಕೆ ಜವಾಬ್ದಾರ ಆಗೋದು ಬೇಡ ; ನಿಶ್ಚಿಂತೆಯಿಂದ ಇರಿ ಎಂದು ಪ್ರತಿಕ್ರಿಯಿಸಿದೆ.

ಮತ್ತೇ ಕಿರಿಕಿರಿ ಮಾಡಿದ ಶ್ರೀಕಾಂತ್ ಎಂ ಅವರು, ಕಾಲ ಕಾಲ ಎಂದು ಮುಂದೂಡಿ ೬೦ ವರ್ಷಕ್ಕೆ ತಂದಿದ್ದೀರಾ ಮತ್ತಷ್ಟು ವರ್ಷಗಳು ಹೀಗೆ ಕಾಯೋಣ ಇದೇ ರೀತಿ ಜಾತಿ ಜಾತಿ ಎಂದೆ ಇರೋಣ ಎನ್ನುತ್ತೀರಾ, ಆಗಬಹುದು, ನಮ್ಮ ಮುಂದಿನ ಪೀಳಿಗೆಗೂ ಇದನ್ನೇ ಧಾರೆ ಎರೆದು ಹೋಗೋಣ ಅಲ್ಲವೇ ಎಂದು ಕೇಳಿದರು. ಅದಕ್ಕೆ ನಾನು, ಮತ್ತೇ ಮತ್ತೇ ಅದೇ ಯಾಕೆ ಹಾಡುತ್ತೀರಿ ? ನನ್ನ ಜಾತಿ ಯಾವುದೆಂದು ನಿಮಗೆ ಗೊತ್ತಿಲ್ಲ ; ನಿಮ್ಮ ಜಾತಿ ಯಾವುದೆಂದು ನನಗೆ ಗೊತ್ತಿಲ್ಲ. ಆದರೂ ಜಾತಿಯನ್ನು ಯಾಕೆ ನಡುವೆ ಎಳೆದು ತರುತ್ತಿದ್ದೀರೋ ತಿಳೀತಾ ಇಲ್ಲ  ಎಂದು ಪ್ರತಿಕ್ರಿಯಿಸಿದೆ.

ಆದರೂ ಬಿಡದ ಶ್ರೀಕಾಂತ್ ಎಂ ಅವರು, ಅಲ್ಲಿ ನನ್ನ ಹೆಸರನ್ನು ನೋಡಿದೆ, ನೀವು ಜಾತಿ ಅನ್ನೋ ಪದ ಬಿಟ್ಟು ಬನ್ನಿ ಎಲ್ಲವೂ ಅರ್ಥ ಆಗುತ್ತೆ, ನೀವು ಹೇಳಿದ ಹಾಗೇನೆ ಜನ ಯಾವುದಕ್ಕೂ ಜವಾಬ್ದಾರರಾಗದೆ ನಿಶ್ಚಿಂತೆಯಿಂದ ನಿದ್ರೆ ಮಾಡಿ ಮಾಡಿದರಿಂದಲೇ ಇಂದಿನ ಸ್ಥಿತಿಗೆ ಕಾರಣ ಎಂಬ ಅಪವಾದ ಹೇರಿದರು. ಮಧ್ಯೆ ಪ್ರವೇಶಿಸಿದ Srinivasa MV ಅವರು, ಮಾನ್ಯ ಸಿದ್ದರಾಮ್ ಕರಣೀಕರಲ್ಲಿ ಮನವಿ: ಕನ್ನಡ ಕಟ್ಟೆಯಲ್ಲಿ ಕೆಲವರು ಪೂರ್ವಾಗ್ರಹಪೀಡಿತ ಮನೋಪ್ರವೃತ್ತಿಯಿಂದ ಮಾತ್ರವೇ ಕೆಲವು ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಈ ರೀತಿ ಯಾವುದೇ ಗೂಪ್‌ನಲ್ಲಿ ಆಗುವುದು ಸರಿಯಿಲ್ಲ. ಏಕತಾನತೆಯಿಂದ ಕೂಡಿದ, ಕೇವಲ ದೋಷಾರೋಪಣೆಗಳಿಗೆ ಎಡೆಮಾಡಿಕೊಡುವ ಇಂತಹ ಪ್ರಕಟಣೆಗಳಿಂದ ಏನು ಸಾಧಿಸುವರು. ನಿಮ್ಮಂತೆ ಬಹಳ ಜನಕ್ಕೆ ಬೇಸರ. ನಮ್ಮ ಮನಶಾಂತಿಯನ್ನು ನಾವು ಕೆಡಸಿಕೊಳ್ಳುವುದು ಬೇಡ ಎಂಬುದಾಗಿ ಸಲಹೆ ನೀಡಿದರು. ಯಾಕೆಂದರೆ 'ಕನ್ನಡ ಕಟ್ಟೆ' ಗ್ರೂಪ್ ಆರಂಭಿಸಿದವರು ಅವರೇ !


ಅಷ್ದರೊಳಗೆ ನನ್ನ ಪ್ರತಿಕ್ರಿಯೆಯಿಂದ ಬೆಸರಗೊಂಡ ಶ್ರೀಕಾಂತ್ ಎಂ ಅವರು, ಖಂಡಿತ ನಮ್ಮ ಜಾತಿಗಳ ಬಗ್ಗೆ ಮತ್ತೊಬ್ಬರಿಗೆ ಗೊತ್ತಿಲ್ಲ, ಆದರೆ ಈ ಚರ್ಚೆ ಪ್ರಾರಂಭಕ್ಕೆ ಕಾರಣವಾಗಿದ್ದೇ ಈ ಜಾತೀಯತೆ ಅಲ್ಲವೇ ಎಂಬುದಾಗಿ ಪ್ರಶ್ನೆ ಎಸೆದಿದ್ದರು !

ಅದಕ್ಕೆ ಮತ್ತೇ Srinivasa MV ಅವರು ಮಧ್ಯೆ ಪ್ರವೇಶಿಸಿ,  ಶ್ರೀಕಾಂತ್ ಅವರೆ ಇನ್ನು ಈ ಚರ್ಚೆ ಮುಂದುವರಿಯುವುದು ಬೇಡ ಎಂದು ಹೇಳಿದರು. ಆದರೆ ಪುರೋಗಾಮಿ ನೆಲೆಯ ನಾನು, ಚರ್ಚೆ ಇರಬೇಕು ; ಆದರೆ ಆರೋಗ್ಯಕರ ಚರ್ಚೆ ಬರಬೇಕು ಎಂದು ಹೇಳಿದೆ.

ಶ್ರೀಕಾಂತ್ ಎಂ ಅವರು  ‎Srinivasa MV ಮಾತನ್ನು ಒಪ್ಪಿಕೊಂಡು ಸರಿ ಸಾರ್ ಎಂದರು !

ಈ ಬಗ್ಗೆ ಮತ್ತೇ ಚರ್ಚೆ ಸುರುವಾಯಿತು. Ajith Sheregar ಅವರು ellarigu ondu prashne ondu groupina uddesha enagirbeku?? ಎಂದು ಪ್ರಶ್ನೆ ಎಸೆದರು !

Srinivasa MV ಅವರು,  'ನಾವು ನಾಗರೀಕರಾಗಿರಬೇಕು. ಪರಸ್ಪರ ದ್ವೇಷ ಅಸೂಯೆಗಳನ್ನು ಬೆಳಸಿಕೊಳ್ಳುವುದು ಸರಿಯಿಲ್ಲ'  ಎಂಬ ಹೇಳಿಕೆ ನೀಡಿದರು.

ಆನಂತರ Srinivasa MV ಅವರು ನನ್ನ ಮೊಬೈಲಿಗೆ ಕಾಲ್ ಮಾಡಿ ಶ್ರೀಕಾಂತ ಹೇಳಿದ ವಿಚಾರಗಳ ಪುನರುಚ್ಛಾರ ಮಾಡಿದರು. ನಾನು ಹೊರಗೆ ಹೋಗುವ ಗಡಿಬಿಡಿಯಲ್ಲಿದ್ದರೂ ಮಾತಾಡಿ ಅವರು ಹೇಳಿದ್ದೇ ಸರಿ ಎಂದು ಬಿಟ್ಟೆ ! ಅವರ ಮನಸ್ಸು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ ಅಷ್ಟೆ !
       
       ಮತ್ತೇ ನಾನು 'ಕನ್ನಡ ಕಟ್ಟೆ' ಮೂಲಕ ಹೀಗೆ ಹೇಳಿರುವೆ,  'ಶ್ರೀನಿವಾಸಜೀ, ನಿಮ್ಮ ವಿಚಾರಗಳು ತುಂಬ ಅಮೋಘವಾಗಿವೆ. ಮೀಸಲಾತಿ ಚರ್ಚೆಯನ್ನು ಬೇರೆ ದಾರಿಗೆ ಎಳೆಯುವ ಅವಶ್ಯಕತೆ ಇಲ್ಲ. ಶ್ರೀಕಾಂತ ಅವರಿಗೆ ನಾನು ಹೇಳಿದ್ದು ಸರಿಯಾಗಿಯೇ ಇದೆ. ನೀವು ಕಾಮೆಂಟ್ ನ್ನು ಗಮನಿಸಿಲ್ಲ ಎನಿಸುತ್ತದೆ. ನೀವು ನನ್ನ ಜೊತೆ ಫೋನ್ ಸಂಪರ್ಕ ಮಾಡಿದಾಗ ನಾನು ಹೇಳಿದ ವಿಚಾರಗಳು ಮತ್ತು ನಾನು ನಡೆದು ಬಂದ ದಾರಿಯ ವಿಚಾರಗಳು ಭಿನ್ನ. ನೀವು ಹಿರಿಯರು. ನಿಮ್ಮ ಬಗ್ಗೆ ಗೌರವ ಇದೆ. ದಯವಿಟ್ಟು ಮೀಸಲಾತಿಯ ವಿರುದ್ಧ ಮಾತಾಡಬೇಡಿ. ಒಂದಿಡಿ ಸಮೂಹ ನಮ್ಮೆದುರಿಗೆ ಇದೆ. ಅದರ ಬಗ್ಗೆ ದಯವಿಟ್ಟು ತಿಳಿದುಕೊಂಡಿದ್ದೀರಿ ಎಂದುಕೊಂಡಿರುವೆ. ಜಾತಿ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಮತ್ತು ಇರುತ್ತದೆ. ನಾನು ಎಡಪಂಥೀಯ ವಿಚಾರಗಳಿಂದ ಬಂದವನು. ಇಂದಿಗೂ ನಾನು ಅವರನ್ನು ಬೈಯ್ಯುತ್ತೇನೆ. ಆದರೆ ಆ ಬೈಯ್ಯುವಿಕೆಯ ಹಿಂದೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿಗಳು ಇರುತ್ತವೆ. ವಾದ ಮಾಡಿದರೆ ನಾನೂ ಸೋಲುವುದಿಲ್ಲ ; ನೀವೂ ಸೋಲುವುದಿಲ್ಲ ! ಸೋಲು ಏನಿದ್ದರೂ ಕೆಳಹಂತದ ಬದುಕಿನಲ್ಲಿ ಇನ್ನೂ ಜೀವಂತ ಇದ್ದಾರಲ್ಲ ಅವರದು. ಮತ್ತೇ ಮತ್ತೇ ಹೇಳುತ್ತಿದ್ದೇನೆ ಇತಿಹಾಸದ ಪಳಿಯುಳಿಕೆ ನಾವು ಎನ್ನುವ ಅರಿವು ನಮಗಿರಬೇಕು. ಹಿಂದೆ ಇದ್ದ ಪರಿಸ್ಥಿತಿ ಇಂದು ಇಲ್ಲ ಎಂದು ನೀವು ಹೇಳಿದ್ದು ಸರಿ. ನಮಗೆ ಬ್ರಾಹ್ಮಣರ ಬಗ್ಗೆ ಸಿಟ್ಟಿಲ್ಲ ; ಬ್ರಾಹ್ಮಣಶಾಹಿ ಮೇಲಿದೆ. ಅದಕ್ಕೆಂತಲೇ ನಾನು ದಲಿತರು ಮತ್ತು ಬಲಿತರು ಎನ್ನುವ ಪದ ಬಳಸುತ್ತೇನೆ. ಈ ಪದದ ಹಿಂದೆ ಜಾತಿ ವಾಸನೆ ಇಲ್ಲ. ಬಲಿತ ದಲಿತರೂ ಇಂದು ಜಾತಿಯತೆ ಮಾಡುತ್ತಿದ್ದಾರೆ. ಉದಾಹರಣೆ ನಾನು ಕೊಡಬಲ್ಲೆ ; ಸೌಹಾರ್ದದ ಚರ್ಚೆಗೆ ತೆರೆದುಕೊಳ್ಳೋಣ !'

ಇದಕ್ಕೆ ನೀವೇನು ಅಂತೀರಿ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.