Saturday, April 21, 2012

ಮಾತ್ಗವಿತೆ-70

ಕಟಕಿಯಾಡಿದವನೇನು
ಸರದಾರ ಅಲ್ಲ ;
ಖಬರದಾರ ಎನ್ನಲು
ಇದು ಅಸ್ತಿತ್ವದ ಪ್ರಶ್ನೆ ಸ್ವಾಮಿ !
ನಾತಾ ಜೋಡಿಸಬೇಕೆಂಬ
ಹಂಬಲದ ನಮಗಿಲ್ಲಿ ನಿತ್ಯ
ಕಟಕಿ ಕೇಳಿ-ಕೇಳಿ ಕುಟ್ಟಬೇಕು
ಮೆಟ್ಟಬೇಕು ಜಗಜಟ್ಟಿಯಾಗಬೇಕು
ಅನಿಸುತ್ತಲೇ ಇರುತ್ತದೆ !
ಸುಮ್ಮನಿರುವುದರಲ್ಲೇನಿದೆ ಸುಖಾ ?
ಒಂದು ಕೆನ್ನೆಯಾದ ಮೇಲೆ
ಇನ್ನೊಂದು ಕೆನ್ನೆ ಬೇಡ
ಚರ್ಮ ಸ್ಪರ್ಷ ಕಳೆದುಕೊಂಡಾವು !
ಸಿಟ್ಟು ಸುಷಮ್ನಾಳದ ಮೂಲಕ
ಎಲ್ಲೋ ಅಡಿಗಿ ಕುಳಿತುಕೊಂಡಿದೆಯಲ್ಲ
ಅದರ ಎಳೆಯೊಂದನ್ನು ಹಿಡಿದು ಜಗ್ಗು
ಇಡಿಯಾಗಿ ಹೊರ ಪ್ರವಹಿಸಲಿ
ಕಟಕಿಯಾಡಿದವರ
ಕೊಚ್ಚಿಕೊಂಡು ಹೋಗಲಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.