Thursday, April 05, 2012

ಮಾತ್ಗವಿತೆ-63

ಯಾಕೆ ಹಾಗೆ ತಿಳಿದುಕೊಂಡಿರೋ
ಗೊತ್ತಿಲ್ಲ !
ನಿಮ್ಮ ಗೌಡಕಿಯ ದೌಲತ್ತಿಗೆ
ಚೌಡಕಿ ಬಾರಿಸಿ ಹಾಡುವವನು ನಾನಲ್ಲ !
ನಿಮ್ಮ ಧಾಡಸಿಯ ಮಾತಿಗೆ
ಬಡಬಡಿಸಿ ರಾಜಿಯಾಗಿಲ್ಲ !
ಇಷ್ಟು ದಿನ ಇರುವ ನೆಮ್ಮದಿಯನ್ನು
ಕೆಡಿಸುವ ಉಮೇದು ನನಗಿದ್ದರೂ
ನಿಮ್ಮ ಸಲುವಾಗಿಯೇ ಅಲ್ಲವೇ
ಮುಕಳಿ-ಬಾಯಿ ಮುಚ್ಚಿಕೊಂಡಿರುವುದು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.