Thursday, April 19, 2012

ಮಾತ್ಗವಿತೆ-69

ಕಣ್ಣಿಗೇನೋ ಕಾಡಿಗೆ ಇದೆ
ಕಣ್ಣ ಕೆಳಗೇಕೆ ಕಪ್ಪು ಕಲೆ ?
ನೋವು ನಲಿವು ಬರುತ್ತವೆ ; ಹೋಗುತ್ತವೆ !
ಕಷ್ಟಗಳ ಬೆಟ್ಟ ಬಂದರೂ ಕೊರೆಯುವ
ವಜ್ರವಾಗಬೇಕಲ್ಲವೆ ನಾವು ?
ಬಿಡು ಬಿಡು ಮನದೊಳಗೆ ಬಚ್ಚಿಟ್ಟ
ಬಿಸಿಯುಸಿರಿನ ಬೇಸರಿಕೆಯ ಮೂಟೆ !
ಕಾಯು ; ಮತ್ತೇ ಬರುತ್ತಾನೆ ವಸಂತ
ಪಲ್ಲವಿಸುತ್ತಾನೆ ಬರಡು ಗಿಡದ ಕುಡಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.