Sunday, April 01, 2012

ಮಾತ್ಗವಿತೆ-61

ಹಸಿವುಗಳು ಹೆಚ್ಚಾದಂತೆಲ್ಲ 
ಕಸುವು ಕುಸಿಯುತ್ತ ಬರುತ್ತದೆ !
ಹೆಸರಿಗೆ ಉಸಿರಿನ ಆಸರೆ ಇರುವುದಿಲ್ಲ !
ಬಸಿರಿಗೆ ಹೆಸರಿನ ಹಂಗು ಇರುವುದಿಲ್ಲ !
ಮಾಡಿದ್ದೆಲ್ಲ ಸರಿಯಾಗಿಯೇ ಇದೆ
ಎಂದುಕೊಂಡರೆ
ಧೈರ್ಯ ತಂದುಕೊಳ್ಳಿ ; ನಿಮ್ಮ 
ಒಳಗಿನ ರಂಧ್ರಗಳೆಲ್ಲ ಅಲ್ಲಾಡಿ ಬಿಟ್ಟಾವು !
ಸೂರ್ಯನ ಹೊತ್ತುಕೊಂಡವನಿಗೆ ಸತ್ಯ 
ಹೇಳಲು ಯಾತರದ ಅಂಜಿಕೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.