Tuesday, April 03, 2012

ಮಾತ್ಗವಿತೆ-62

ಬರೆಯಬೇಕಾಗಿ ಬಂದಾಗ ಅಕ್ಷರಗಳು
ತನ್ನಿಂದ ತಾನೇ ಮೂಡತೊಡಗುತ್ತವೆ ;
ಮನಸ್ಸಿನ ಓಘಕ್ಕೆ ಸಾಟಿಯಾಗದೇ
ಒಮ್ಮೊಮ್ಮೆ ಮೌನವಾಗುತ್ತವೆ !
ಬರೆಯಬೇಕು ಎಂದರೆ
ನೋವು-ನರಳಿಕೆಗಳ ಉಲಿವಿಗೆ
ಪದಗಳ ಅಭಾವ ಇದೆ ಅನ್ನುವುದು
ನನ್ನೊಳಗಿನ ಮಾತು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.