Thursday, May 09, 2013

ದಾರಿ ತಪ್ಪಿಸುವ ಮಾಯಕಾರ ಜಗ ...!

ಹಿಪ್ಪರಗಿ ಸಿದ್ಧರಾಮ್, ಧಾರವಾಡ

ನಾ
ಮಾಡಿದ ತಪ್ಪಾದರೂ ಏನು?
ಪ್ರಶ್ನಿಸಲು ಯಾರು ಹರಿಲ್ಲಿ ?
ಜಂಜಾಟದ ಜಗದಲಿ 
ಕೆಲವು ಪ್ರಶ್ನೆಗಳಿಗೆ ಉತ್ತರಗಳೋ ...

 ಇರುವುದೇ ಇಲ್ಲವಂತೆ !




ದಾರಿ ತಪ್ಪಿಸುವ ಮಾಯಕಾರ 
ಜಗ ಪಾರಿಗೆ ಅಡ್ಡದಾರಿ ತೋರಿಸಿತ್ತು
ಮಾರ್ಗದರ್ಶನವೆಂಬುವ ಮಂತ್ರ  
ಬೋಧಿಸಲೇ ಬೇಕೆಂಬ ತಂತ್ರ ಮಾತ್ರ !

                                       ಪಾರಾದ ಮೇಲೆ ಅಂಬಿಗರ ಗಂಡ !
                                      ಚಿಂತೆಯ ಫಲದ ನಿರಾಸಕ್ತಿ
                                      ಸಕಲ ತೀಟೆ ತೀರಿದ ಬಳಿಕ
                                      ಮಾಡದು ಜಗ ಹೊಸ ಬದುಕಿನ ಉಸಾಬರಿ !

ತಾಯಿ ದೇವ ಪೂಜಿಸಲೆಂದೇ
ಹಾತೊರೆವ ಈ ನನ್ನ ದೇಶದ ಕಾಲಮಾನದಲ್ಲಿ 
ತನ್ನೊಡಲ ಕುಡಿ ನಿರಾಕರಣೆ !
ಗೊರಸು ಮಾತು ಬೇರೆ ; ಅನಾವಶ್ಯಕ ಪೀಡೆ !
                                      ಬೇಕಿಲ್ಲ ಅವಳಿಗೆ
                                      ನನ್ನ ಅಸ್ತಿತ್ವ-ಅಸ್ಮಿತೆ !
                                      ಅವಳ ಅಸ್ತಿತ್ವದೊಳಗೂ ನಾನಿರುವೆ ಎಂಬ
                                      ಅರಿವಿನ ಬೆಳಕಿನ ಭಾಗ್ಯವಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.