Saturday, May 04, 2013

ಹೆಮ್ಮರವಾಗಲಿ ಎದೆಗೆ ಬಿದ್ದ ಅಕ್ಷರ ಬೀಜ !

ಸಿದ್ಧರಾಮ ಹಿಪ್ಪರಗಿ, ಧಾರವಾಡ
 
ಪ್ರತಿದಿನವೂ ಬೀದಿಯಲಿ ಕಾಣುವುದಿಲ್ಲ
ಬಳಸಿ ಬಿಸಾಡುವ ದಿನಸಿ ವಸ್ತುವದಲ್ಲ
ಚೌಕಾಸಿಗೆ ಚಿಲ್ಲರೆ ವಿಷಯವದಲ್ಲ
ಕೊಳ್ಳಲು ಅಂಗಡಿಯಲಿ ಸಿಗುವುದಲ್ಲ
ನಿರಂತರ ಹರಿಯುವ ಅಂತರ್ವಾಹಿನಿ !

ಅರಿವಿರದ ಅಂದಿನ ಕಾಲದಲಿ
ಅಂದಿನ ಸಂದರ್ಭದ ಅವಶ್ಯಕತೆಯಲಿ
ಶ್ರೇಣೀಕರಣ, ವಸಾಹತೀಕರಣದಲಿ
ಕಾರಣವಿಲ್ಲದೇ ನಡೆದ ಶೋಣೆಗಳಲಿ
ಜಾಗೃತಗೊಂಡ ವಿರೋಧಿ ಪ್ರತಿಭಟನೆಯಲಿ
ಅಸ್ತ್ರಗಳಾಗಿ ಬಳಸಿಕೊಂಡ ಸಮಾಜವಾಹಿನಿ !

ವೇಗದ ತಾಂತ್ರಿಕತೆಯ ಇಂದಿನ ಕಾಲದಲಿ
ಬದಲಾದ ಯೋಚನಾ ಲಹರಿಗಳಲಿ
ಜಾಗತೀಕರಣ, ಮತಭ್ರಾಂತೀಕರಣಗಳಲಿ
ಎದುರಾಗುತಿರುವ ಆತಂಕಗಳಲಿ
ಎದುರಿಸಬೇಕಿರುವ ಸವಾಲುಗಳಲಿ
ಅಡಗಿಕೊಂಡಿರುವ ಅಜೆಂಡಾಗಳಲಿ
ಸ್ಮಾರ್ಟ ಶೈಲಿಯ ಶೋಷಣೆಗಳಲಿ
ಮುನ್ನುಗಬೇಕಾಗಿರುವ ದೃಢಹೆಜ್ಜೆಗಳಲಿ
ಆಶಾಭಾವ ಮೂಡಿಸುವ ಪ್ರಗತಿಪರತೆಗಳಲಿ
ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಹೊಳಹುಗಳಲಿ
ಸಮಾನತೆಯ ಕನಸು ಕಾಣುವ ಕ್ಷಣಗಳಲಿ
ಹೆಮ್ಮರವಾಗಲಿ ಎದೆಗೆ ಬಿದ್ದ ಬೀಜ ಅಕ್ಷರವಾಹಿನಿ !

ಜಗದ ಶ್ರಮಿಕ ಅಶಕ್ತರ ಭಾಗ್ಯೋಯಕಾಗಿ
ಅಕ್ಷರಜ್ಯೋತಿಯ ಜಾಗೃತಿಯ ಮುನ್ನಡೆಗಾಗಿ
ನಂಬೋಣ ಚಳುವಳಿಗಳ ದಾರಿ 
ಇದೆಯಲ್ಲವೇ ಬೆನ್ನಿಗೆ ಚರಿತ್ರೆಯ ಹೆಗ್ಗುರಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.