Thursday, May 23, 2013

ಮಾತ್ಗವಿತೆ-130

ಬೀಸು ರೆಕ್ಕೆ ಬಡಿದ ಹಕ್ಕಿ ಹಾರಲಾರದ ಸಂಕಟದಲಿ
ವಿಲವಿಲನೇ ಒದ್ದಾಡಿ ಗೋಳಿಗೆ ಕಣ್ಣೀರು ಮುಖ !
ಬಂಧು-ಬಳಗ ಕರೆಯಬೇಕೆಂದರೆ ಧ್ವನಿಯೇ ಅಡಗಿ
ಗೊರಲಾಗಿ ಮರುಗುವುದೊಂದೇ ಮಾರನ ಕರೆದು !
ಛೀ ! ಬಿಡು ! ಅಂತಃಕರಣ ಇಲ್ಲದವರ ಮರೆತು ಬಿಡು
ಹೊಸ ಬದುಕಿನ ಹಾದಿ ಮುಂದಿದೆ ; ಕಲ್ಲು-ಮುಳ್ಳು ಸರಿಸು
ನಿಚ್ಚಳವಾಗಿದೆ ನೋಡು ; ದಾರಿ ತೋರಲು ನಿಂತ ಸೊಡರು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.