Monday, July 02, 2012

ರಾಜಕೀಯ ದುರಾಡಳಿತಕ್ಕೆ ಪರ್ಯಾಯ ಏನು ?

ಟಿ.ವ್ಹಿ. ನೋಡುತ್ತಿದ್ದೆ. ಸರಕಾರದ ಬಗ್ಗೆ ಬೇಸತ್ತ ವ್ಯಕ್ತಿಯೊಬ್ಬ ಆತಂಕ ವ್ಯಕ್ತಪಡಿಸುತ್ತಿದ್ದ. ಆಂಕರ್ ಗಳು ಪಿಚಗುಟ್ಟುತ್ತಿದ್ದರು. ಆದರೆ ನನಗೆ ಅನ್ನಿಸುತ್ತೆ ಒಳ್ಳೆಯವರಿಗೆ ಮತದಾನ ಮಾಡಬೇಕು ; ಒಳ್ಳೆಯವರನ್ನು ಜನಪ್ರತಿನಿಧಿಯನ್ನಾಗಿ ಆರಿಸಿ ತರಬೇಕು ಎಂಬುದು ಇವತ್ತು ಹಳೆಯ ಮಾತು. ಯಾಕೆಂದರೆ ವ್ಯವಸ್ಥೆ ಬದಲಾಗುತ್ತಿಲ್ಲ. ಅದಕ್ಕೆ 'ಕಠಿಣ' ವಾದ (ಕಟ್ಟುನಿಟ್ಟಾದ) ನಿಯಮಗಳು, ನಿರ್ಬಂಧನೆಗಳು ಇರಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಒಂದು ಕ್ರಿಮಿನಲ್ ಕೇಸ್ ದಾಖಲಾದರೆ ಸಾಕು, ಆ ವ್ಯಕ್ತಿಗೆ ಚುನಾವಣೆ ಸ್ಪರ್ಧಿಸಲು ಚುನಾವಣಾ ಆಯೋಗ ಅನುಮತಿ ನೀಡಬಾರದು. ಆತ ನ್ಯಾಯಾಲಯದ ಮೂಲಕ ನಿರಪರಾಧಿಯಾಗಿ ಹೊರಬಂದರೆ ಮಾತ್ರ ಅವಕಾಶ ನೀಡಬೇಕು, ಅದೂ ಷರತ್ತುಬದ್ಧವಾಗಿರಬೇಕು. ಹಾಗಾದಾಗ ಸರಕಾರ, ಆಡಳಿತ ಎಲ್ಲವೂ ಒಂದಿಷ್ಟು ಮಟ್ಟಿಗೆ ಬದಲಾವಣೆ ಕಾಣಬಹುದು. ಏನಂತೀರಿ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.