Saturday, April 20, 2013

ಲಹರಿ-1

ಪಂಪ-ರನ್ನ-ಪೊನ್ನ ಜೊತೆಗೆ ಜನ್ನ !
ನಂತರದಲ್ಲಿ ಬಸವ-ಅಲ್ಲಮ-ಅಕ್ಕ ಚೆನ್ನ !
ತದನಂತರ ಹರಿಹರ-ರಾಘವಾಂಕ-ಚಾಮರ !
ಮತ್ತೇ ಸುರುವಾಯಿತು ಕುವರವ್ಯಾಸ, ಮುದ್ದಣ
ಬಂದರೋ ಬಿಎಂಶ್ರೀ, ಬೇಂದ್ರೆ, ಕಾರಂತ
ಜೊತೆಗೆ ಕುಪ್ಪಳ್ಳಿಯ ಪುಟ್ಟಣ್ಣ !
ಇಂದಿಗೂ ಮುಗಿದಿಲ್ಲ ಜಾತಿಯ ಲೆಕ್ಕಾಚಾರ !
ಅದಕೆ  ಸತ್ತವರು ಇವರು, ಇದಕೆ ಸತ್ತವರು ಇವರು !
ಜನಕಾಗಿ ಸತ್ತವರು ಯಾರು ? ಸಾಯಿಸಿದವರು ಯಾರು ?

- ಇದು ಬರೀ ಸಾಹಿತ್ಯ ಚರಿತ್ರೆಯಲ್ಲ ; ಕನ್ನಡದ ಇತಿಹಾಸ !

हिंदू पुरुषांच्या ब-याचशा दुष्ट चालींचा उगम........... -प्रबोधनकार ठाकरे


 - Prashanth M. Gaikwad 


हि नोट पब्लिश करण्यामागचा माझा  हेतू सगळ्यांना समजलाच असेल
''धम्मात स्त्रीचे स्थान अतिशय आदरणीय आहे …! '' हे वाचून झालच असेल हे पण एकदा वाचा .. 

हिंदुजनांचा –हास आणि अधःपात
प्रबोधनकार ठाकरे भाग ८

आपली लहान मुले कर्तव्यशील व्हावीत म्हणून हिंदू मातापितरे त्यांच्याजवळून रामायण वाचून घेतात. राम, सीता, लक्ष्मण यांची माहिती बहुतेकांस लहानपणीच होते. रामायण वाचणा-या या मुलांच्या मनांवर, इतर काही गोष्टींचा ठसा उमटो, वा न उमटो, पण त्यातील एक गोष्ट सर्वांच्या लक्षात ठळकपणे राहते. ती कोणती?

रावणाच्या बंदीतून सीता सोडविल्यानंतर सर्व सैनिकांसमक्ष सीतेने अग्निप्रेवश करून आपले पावित्र्य निष्कलंक असल्याचे सिद्ध करून दाखविल्यानंतर रामाने तिचा स्वीकार केला होता. पण पुढे अयोध्येस आल्यावर कोणा एका सामान्य मनुष्याने सीतेच्या शुद्ध शीलाबद्दल किंचित संशय व्यक्त करताच, रामाने पुढचा मागचा काहीत विचार न करता, सीता पूर्ण नऊ महिन्यांची गरोदर आहे हेही विचारात न घेता, तिला ताबडतोब अरण्यात हाकलून दिली. आणि हे इतके का ?

तर प्रजेची एक छचोर लहर सांभाळण्यासाठी! दैवी रामरायाने जे हे मोठे शतकृत्य केले त्याचे अनुकरण तुमची कर्तव्यशील हिंदु बाळे करावयास चुकतील अशी का तुमची समजूत आहे? असेल तर ती साफ चुकीची आहे. किती तरी बालसीता यापूर्वी या हिंदुस्थानात शोकभाराने मृत्युवश झाल्या आहेत. आणि मी खात्रीलायक सांगतो की, आजही कित्येक कजाग सासवा व नणंदा यांच्या वृथा संशयाला बळी पडलेल्या शेकडो बालसीता आपले अभागी आयुष्य रडण्यात कंठीत आहेत.

आजच्य आधुनिक कर्तव्यपरायण रामांची हृदये कठीण करण्याकरता अयोध्येच्या कुटाळ प्रजेची भूमिका या आजकालच्या सासवा आणि नणंदा घेत असतात.

असल्या रानटी व राक्षसी चित्राला रामायणात दैवी रंग चढविल्यामुळे किती तरी हिंदुंच्या संसारांचा हकनाहक नाश झालेला आहे. आणि किती तरी मुग्ध बालिकांच्या जीवनसर्वस्वाचा होम झालेला आहे.

असल्या पवित्र ग्रंथातील भूमिकेवर हिंदु-भारतवर्षाचे आजचे गृहजीवन उभारलेले आहे. धार्मिक भावनाशील किंवा आदर्शपूजना करणारे लोक यांचा यांच्यात फारसा दोष नाही. त्यांना बालपणापासून जे शिक्षण दिलेले असते, त्याची त्यांच्या मनःपटलावर जी चित्रे कोरली जातात, तीच कायम ठशाने जन्मभर तेथेच टिकून राहतात.ज्या ब्राह्मण लेखकाने रामाला अशा रानटी स्वरूपात जनतेपुढे उभा केला आहे. त्याकडे वास्तविक खरा दोष येतो. त्यातही पुन्हा या रामायणाचे सुद्धा प्रसंगाप्रमाणे आणि सोईप्रमाणे कित्येक वेळ शोधन आणि नवीन संपादन झालेले आहेच.
आज आमच्या हातात पडणारे रामायण हे खास काही मूळचे वाल्मिक रामायण नाही आणि विद्वानांच्या मते हल्ली उत्तररामचरित्र या नावाने जो भाग प्रसिद्ध केला आहे तो तर हमखास कुठल्या तरी दूर धोरणाने मागाहून कोणीतरी घुसडून दिलेला असला पाहिजे. हे दूर धोरण काय असावे याची आपण लवकरच मीमांसा करू.

ज्या शहाण्याने हे उत्तररामचरित्र निर्माण केले, त्याला सीतादेवी वरच्या नसत्या संशयाची पुनरावृत्ती टाळता आलीच नसती काय? अग्निदिव्याने संशयाची निवृत्ती जनजाहीर झाली असताही त्या लेखकाने काढलेले गरीबा बिचा-या सीतामाईचे पुढचे धिंडवडे त्याला का टाळता आले नाहीत? त्यात त्याने काय साधले? सीतामाईविषयीच्या संशयाचा पुनश्च पराचा कावळा करून नाचविण्याचा या उत्तररामचरित्रवाल्याचा हेतू, हिंदू स्त्रियांना एक सणसणीत कायमचा दम भरून ठेवण्यात आढळतो. त्याला स्त्रीजातीला बजावून ठेवावयाचे होते की, याद राखा, तुम्ही कितीही शुद्ध आणि सद्गुणी असलातरी तुमच्याविरुद्ध लवमात्रही वेडावाकडा शब्द ऐकू आला तर, तुम्हाला बिलकूल दयामाया न दाखविता, तुमची चौकशीसुद्धा न करता केवढी भयंकर शिक्षा तुमच्या नव-यांकडून फर्माविण्यात येईल, हे नीट ध्यानात ठेवा. संशयाच्या नुसत्या चुटपुटत्या कल्पनेचाही वारा तुमच्या बाबतीत आम्हा पुरुषांना क्षणमात्र खपणार नाही.उपदेश करण्याच्या दिमाखाने चितारलेल्या या खोडसाळ शब्दचित्राने सीतामाईच्या चारित्र्याला मुळीच धक्का लागलेला नाही. ते कमलपात्राप्रमाणे निष्कलंक आणि अवधूतच राहिले. स्त्रीजातीच्या सद्गुणांची दिव्य प्रतिमा म्हणून तिचा महिमा युगानुयुगे अधिकाधिक प्रकाशमानच होत आहे. पण – पण त्या तुमच्या आदर्शभूत दैवी रामाच्या पौरुषाचे घाणेरडे चित्र म्हणजे हिंदुस्थानाच्या पौरुषत्वाला नामुष्की आणणारी एक चिरंजीव शरमेची बात होऊन बसले आहे.

रामाला अनेक इतर ठिकाणी नीतिमत्तेचा आणि आत्मत्यागाचा केवळ पुतळा असा रंगविलेला आहे. त्या रंगवटीला अनुसरूनच, रामायण-लेखकाने खालच्या सारखे त्याचे चित्र रंगविले असते, तर किती तरी चांगले झाले असते? अयोध्येच्या लोकांनी सीतेच्या पावित्र्याबद्दल शंका घेताच, रामाने ताबडतोब एक जंगी दरबार भरवून लोकांना जाहीररीतीने सांगायचे होते की ``नागरिक जनहो, तुम्हाला माझ्या महाराणीबद्दल काही संशय येत आहे. माझ्याबरोबर सिंहासनी तिने बसू नये, असे तुम्हाला वाटत आहे काय? ठीक आहे. तर मग मला या राज्याचीच पर्वा नाही. आत्ताच्या आत्ता सर्व राज्यसूत्रे भरताच्या स्वाधीन करून सीतेसह मीच अरण्यवासाचा रस्ता पत्करतो. तुमचा संशय काहीही असला तरी सीतेच्य पावित्र्याबद्दल माझी बालंबाल खात्री झालेली आहे. मला इतरांच्या कुटाळक्यांकडे लक्ष देण्याचे मुळीच कारण नाही. प्रजाजनहो नीट विचार करा. सीतादेवी माझी वाग्दत्त विवाहबद्ध पत्नी आहे. ती पूर्ण दिवसांची गर्भवती असून, लवकरच तिला मातृपदही प्राप्त होणार आहे. अशा अवस्थेत केवळ तुमच्या संशयाच्या लहरीचे रंजन करण्यासाठी मी जर तिचा त्याग करीन तर राक्षसात आणि माझ्यात फरक तो काय?’’ मी जसा तुमचा राजा हे, तसा सीतेचाही राजा आहे. तुमच्याप्रमाणेच तिनेही जर न्यायाची मागणी केली, तर राजा या नात्याने कोणत्या तोंडाने मला ती नाकारता येईल सांगा. मी जर ही तिची न्यायाची मागणीच मान्य केली नाही, तर राजपदालाच काय, पण माणुसकीलाही मी नालायक ठरेन.’’
अशा त-हेने रामाची भूमिका जर रंगविली असती, तर रामायणातला राम आमच्या हिंदू राष्ट्राचा एक नमुनेदार पुरुषोत्तम (हीरो) म्हणून खास शोभून दिसला नसता काय?

लक्ष्मणाचीही मोठी स्तुती गाण्यात येते. का? तर म्हणे रावणाची बहीण जी शूर्पणखा, तिने लक्ष्मणाशी प्रेमाचा लघळपणा केला म्हणून त्याने तिचे नाक-कान छाटले. या गोष्टीचा आमच्या तरुणांच्या मनांवर किती घाणेरडा विकृत परिणाम होत असतो. याची कोणाला कल्पना तरी आहे काय? शूर्पणखेने स्त्रीस्वभावानुसार कितीही लघळपणा केला, तरी लक्षअमणाला त्या स्त्रीशी सौजन्याने दयाळूपणाने व दिलदारपणाने खास वागता आले असते. वाटेल त्या क्षुद्र कारणांवरून बायकांची नाके कापणे, किंवा इतर रीतीने त्यांना विद्रूप करणे, हा हिंदू पुरुषाचा मर्दपणा एकंदरीत बराच प्राचीन लौकिकाचा आहे
.
हेच काय, पण बायकांना पशुप्रमाणे क्रूर रीतीने वागविण्याच्या हिंदू पुरुषांच्या ब-याचशा दुष्ट चालींचा उगम, आदर्श म्हणून डंका पिटलेल्या या राम लक्ष्मणाच्या जोडीच्या चरित्रचित्रातच सापडतो. उत्तररामचरित्राच्या शेवटी लक्ष्मणाबद्दल एक दुःखद गोष्ट वर्णन केलेली आहे. राम कोणातरी ति-हाईताशी एकांतात बोलत बसला होता. राज्यकारभाराच्या काही महत्त्वाच्या गोष्टींबद्दल लक्ष्मणाला भेट घ्यायची होती. भानगड तर मोठी जरूरीची. क्षणाचाही विलंब नको होता. म्हणून लक्ष्मण तसाच आत गेला. झाले, रामरायाचा एकांत बिघडला. लक्ष्मणाने केलेल्या या भयंकर अपराधाबद्दल त्याला शिक्षा ठोठावण्यात आली की `मरेपर्यंत पुन्हा मला तोंड दाखवू नकोस.’

रामासाठी सारा जन्म लक्ष्मणाने जे अकृत्रिम बंधुप्रेम व भक्तीची निस्सीम सेवा केली, ती निमिषार्धात क्षुल्लक गैरसमजासाठी चुलीत गेली! या असल्या `पवित्र’ उदाहरणांचा परिणाम हिंदू समाजावर कसा झाला व होत आहे, हे पाहायचे असेल तर जरा हायकोर्टाच्या आणि स्मॉल कॉजेस कोर्टांच्या खटलेबाजीकडे लक्ष द्या. वडिलार्जित इस्टेटीच्या तुकड्यांसाठी एकमेकांच्या उरावर बसणा-या शेकडो राम-लक्ष्मणांच्या जोड्या तेथे तुम्हाला भेटतील. `

प्रबोधनकार ठाकरे या महापुरुषाला लाख-लाख प्रणाम.



Thursday, April 18, 2013

ವಚನ-26

ಗಟ್ಟಿ ಗಟ್ಟಿ ಅಂದುಕೊಂಡಿದ್ದೆಲ್ಲ ಅಳಕಾಗಿ
ಇಳಿದು ಹೋದಾಗ ನೆಮ್ಮದಿಗೆ ಭಂಗವಾಗಬಾರದು !
ದಂಗುಬಡಿಸುವಂತೆ ಮತ್ತೇ ಚಿಗಿಯಬೇಕು !
ಮತ್ತೇ ಗಟ್ಟಿಯಾಗಬೇಕು ; ಅಳಕಾಗಲಿ ಅಳುಕಬಾರದು !
ಗಟ್ಟಿ-ಅಳಕಿನ ನಡುವಿನ ಅಂಬಲಿಯೂ ಅಳಕಲ್ಲವೆ
ಕಾರಣಿಕ ಸಿದ್ಧರಾಮ ಅಳುಕಿಯೂ ಅಳುಕದಂತಿರಬೇಕು !

Wednesday, April 17, 2013

ಮಾತ್ಗವಿತೆ-123

ಕುಟೀಲ ಕಾರಸ್ಥಾನಗಳ ಮರಭೂಮಿ ನಾನು
ಅರಿವಿನ ಪರದೆ ಹರಿಯದ ಸಾಗರ ನಾನು
ಅಂದುಕೊಂಡಂತೆ ಆಗಿರುವಲ್ಲಿ ಬರೆ ಇರುವುದಿಲ್ಲ !
ಸುಡುಸುಡುವ ಕಾಯ್ದ ಸೀಸ ತುರುಕುತ್ತಿರುವ
ಅಡಿಗಡಿಗೆ ನಾಲಿಗೆ ಕತ್ತರಿಸಿ ಬೀಸಾಡುತ್ತಿರುವ
ನನ್ನವರಲ್ಲಿ ಖರೀದಿಗೆ ನಾ ನಿಲುಕುವುದಿಲ್ಲ !

Saturday, April 06, 2013

ವಚನ-25

ಒಳಗೊಳಗೆ ಉಂಡ ನೋವು ; ಕಂಡ ಬದುಕು
ನೆಂಟರೆಲ್ಲರ ಉಂಬಳಿಯ ಬಾವಿಯ ಸಾವು !
ಎಚ್ಚೆತ್ತುಕೊಂಡಾಗ ಬಿಚ್ಚುಗತ್ತಿಯ ಮರೆವು !
ಕಾರಣಿಕ ಸಿದ್ಧರಾಮ ನೆಚ್ಚಿಕೆಗೆ ಮುಚ್ಚಿಕೆ
ಆಗಿಬರದು ; ಆಗಬಾರದು ; ಆಗಗೊಡಬಾರದು !

Thursday, April 04, 2013

ಭಾರತ ದೇಶದ ಬಿಟ್ಟಿ ದೇವರುಗಳು !


ಸುನೀಲ್ ರಾವ್

ಕ್ರಿಯೇಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಭೇದಗಳು ಖಂಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒಂದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒಂದೇ ಆಗಿರಬೇಕು ಎಂಬ ಯಾವ ರಿವಾಜಿದೆ?

 
ನಾನು ‘ಅಲೆಮಾರಿ ಮನಸು’ ಕಾಲಂ ಶುರು ಮಾಡಿದಾಗ ಬಂದ ನೂರಾರು ಅಭಿಪ್ರಾಯ ಗಳಲ್ಲಿ ಶೇ.95ಪಾಲು ಬಿಟ್ಟಿ ಸಲಹೆಗಳೇ ಇದ್ದವು. ಪರಿಚಿತರೊಬ್ಬರು ಮೊದಲನೆ ಕಾಲಂ ಓದಿ ನೀನು ಬಹಳ ಇಂಪ್ರೂವ್ ಆಗ್ಬೇಕು ಎಂದು ಸಲಹೆ ಕೊಟ್ಟರು. ಒಹ್ ಹೌದಾ! ಏನ್ ಇಂಪ್ರೂವ್ ಆಗ್ಬೇಕು ಹೇಳಿ ಸಾರ್ ಅಂದ್ರೆ ಆತ ಉತ್ತರಿಸಲಿಲ್ಲ. ಇನ್ನೊಬ್ಬರು ಮೆಸೇಜ್ ಮಾಡಿ ನೀ ತಗೊಳ್ಳೊ ಟಾಪಿಕ್ ಗಳಲ್ಲಿ ಪೂರಾ ಪರ್ಸನಲ್ ಇರತ್ತೆ ಕಣಯ್ಯ ಅದೆಲ್ಲಾ ಬರೀಬೇಡ ಅಂದ್ರು. ನಂತರದ ವಾರ ಬೇರೆ ವಿಷಯ ಬರೆದೆ. 
ಮತ್ತೊಂದು ಮೆಸೇಜ್ ಬಂತು-ನೀವು ಬರೆಯುವ ಬರಹದಲ್ಲಿ ನಿಮ್ಮ ವೈಯಕ್ತಿಕವಾದ ಅನುಭವ ಬರೀರಿ ತುಂಬಾ ಚೆನ್ನಾಗಿರ್ತವೆ ಅಂತ. ಯಾವುದೋ ಕಾರ್ಯಕ್ರಮ ದಲ್ಲಿ ಸಿಕ್ಕ ಗೆಳೆಯರೊಬ್ಬರು ನೀವು ಕಾಲಂ ಬರೆ ಯೋರು ಲಂಕೇಶ್ ಪುಸ್ತಕಗಳನ್ನು ಓದ್ಬೇಕು ಸುನಿಲ್ ಆಗ ಕಾಲಂ ಅಂದ್ರೇನು ಅಂತ ಅರ್ಥ ಆಗತ್ತೆ ಅಂದ್ರು. ಲಂಕೇಶ್ ಥರ ಬರೆಯೋಕೆ ಲಂಕೇಶ್ ಇದ್ರಲ್ಲ ನಾ ಯಾಕ್ ಅವರನ್ನ ಇಮಿ ಟೇಟ್ ಮಾಡ್ಬೇಕಿತ್ತು ಎಂಬುದು ನನಗೆ ಅರ್ಥ ಆಗಲಿಲ್ಲ. ನನ್ನ ಬರಹಗಳು ಯಾವತ್ತಿಗೂ ನನ್ನ ಅನುಭವಗಳ ಮೂಲಕ ಕಟ್ಟಿಕೊಡಲು ಸಾಧ್ಯ. ಅದುಬಿಟ್ಟು ಕಾಣದ ಅಲೌಕಿಕವನ್ನು ತೋರಿಸುವ ತಾಕತ್ತು ನನಗಿಲ್ಲ. ಯಾಕೆಂದರೆ ನಾನೊಬ್ಬ ಯಕಶ್ಚಿತ್ ಮನುಷ್ಯ. ಪತ್ರಿಕೆಯವರೊಬ್ಬರು ನನ್ನ ಕಥೆಯೊಂದನ್ನು ಕೇಳಿದ್ದರು ಕಳಿಸಿದ್ದಾದ ಮೇಲೆ ಇ-ಮೇಲ್ ಮಾಡಿ ದ್ದರು-
‘‘ಪ್ರೀತಿಯ ಸುನೀಲ್ ನಿಮ್ಮ ಕತೆಯು ಬಹಳ ಚೆನ್ನಾಗಿದ್ದು, ಅದರ ಪಾತ್ರ ಹಾಗೂ ಸನ್ನಿ ವೇಶಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಾ. ಆದರೆ ಕೆಲವೊಂದು ಪಾತ್ರಗಳನ್ನು ಈಗಿನ ಕಾಲ ಮಾನಕ್ಕೆ ಕಟ್ಟಿಕೊಟ್ಟು ಬರೆದಿದ್ದೀರಿ ತುಂಬಾ ಹಸಿ ಹಸಿ ಅನ್ನಿಸ್ತಿವೆ ಬದಲಾಯಿಸಿ, ನಾಯಕನ ಪಾತ್ರ ವನ್ನು ಇನ್ನೊಂಚೂರ್ ಸ್ಟ್ರಾಂಗ್ ಮಾಡಿ ಕೊಟ್ಟರೆ ಮುಂದಿನ ಎಡಿಷನ್‌ಗೆ ಪ್ರಕಟಿಸಿಬಿಡ್ತೇವೆ’’ ಎಂದು ಬರೆದಿದ್ದರು..
ಅದಕ್ಕೆ ನನ್ನ ಉತ್ತರ ಹೀಗೆ ಬರೆಯಲೇಬೇಕಿತ್ತು -‘‘ಮಾನ್ಯರೇ, ನನ್ನ ಕತೆಯನ್ನು ಪ್ರಕಟಿಸುತ್ತೇನೆ ಎಂಬ ಆಶ್ವಾಸನೆ ಕೊಟ್ಟದ್ದಕ್ಕೆ ಧನ್ಯ ವಾದಗಳು, ಇನ್ನು ತಾವು ಹೇಳಿದ ಹಸಿ ಹಸಿ ಚಿತ್ರಣಗಳು ವಾಸ್ತವದಲ್ಲಿ ನಡೆಯುವಂತದ್ದು, ಅದನ್ನು ನಾನು ವಿವರಿಸುವುದಕ್ಕೆ ನಾನು ಇನ್ನೊಂದು ಕತೆ ಬರೆಯಬೇಕಾಗುತ್ತದೆ. 
ಇನ್ನು ಅದರಲ್ಲಿ ಬರುವ ಪಾತ್ರಗಳನ್ನು ಬದಲಾಯಿಸಿ ಬರೆಯಬೇಕಿದ್ದರೆ ಅದು ನನ್ನ ವಿವೇಚನೆಗೆ ಮೊದಲೇ ಬರುತ್ತಿತ್ತು ಅಥವಾ ನನ್ನ ಕಡಿಮೆ ಬುದ್ಧಿಗೆ ಅದು ಹೊಳೆಯಲಿಲ್ಲ. ನಿಮಗೆ ಆ ಕತೆಯಲ್ಲಿ ಯಾವ ತೆರನಾದ ಬದಲಾವಣೆ ಅಗತ್ಯವಿದೆಯೋ ಅದನ್ನೆಲ್ಲಾ ಸೇರಿಸಿ ನೀವೆ ಒಂದು ಕತೆ ಬರೆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತೇನೆ. ಧನ್ಯವಾದ’’ 
ಎಂದು ಪುನಃ ಬರೆದಿದ್ದಕ್ಕೆ ಅವರಿಂದ ಉತ್ತರ ಬರಲಿಲ್ಲ. ಸಲಹೆಗಳನ್ನು ಸ್ವೀಕರಿಸುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೇ ಬಿಟ್ಟಿ ಸಲಹೆಗಳನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಫೇಸ್‌ಬುಕ್‌ನಲ್ಲಿ ಕೊಂಚ ಮಟ್ಟಿಗೆ ನಾನು ಸಕ್ರಿಯ. ಅಲ್ಲಿ ಒಂದಷ್ಟು ಜನ ಸ್ನೇಹಿತರಾಗಿದ್ದಾರೆ, ಇನ್ನೊಂದಷ್ಟು ಜನ ಮೇಷ್ಟ್ರುಗಳಿದ್ದಾರೆ, ಮತ್ತೊಂದಷ್ಟು ಜನ ಹೆಡ್ ಮೇಷ್ಟ್ರುಗಳಿದ್ದಾರೆ. ಸ್ನೇಹಿತರನ್ನು ಹೊರತುಪಡಿಸಿ ಇನ್ನಿರುವ ಎರಡು ಪಂಗಡಗಳು ಸಕ್ರಿಯವಾಗಿ ಬಿಟ್ಟಿ ಸಲಹೆಗಳಲ್ಲಿ ನಿರತರಾಗಿರುತ್ತಾರೆ. ಯಾರೋ ಒಬ್ಬ ಸ್ನೇಹಿತ ಒಂದು ಕವನ ಬರೆದು ಅವನ ವಾಲ್ ಮೇಲೆ ಅಂಟಿಸಿದ್ದ. ಅದರ ಕಾಮೆಂಟುಗಳನ್ನು ಗಮನಿಸಿದ್ದೆ. ವಿದೇಶದ ಒಬ್ಬ ಹೆಡ್ ಮಾಸ್ಟರ್ ತಮ್ಮ ಸಮಯವನ್ನೆಲ್ಲಾ ಖರ್ಚು ಮಾಡಿಕೊಂಡು ಕವನಕ್ಕೂ ಮೀರಿ ಕತೆ ಬರೆದಂತೆ ಅರ್ಧ ಪುಟ-ಅವನು ಹೇಗೆ ಕವಿತೆ ಬರೆಯ ಬಹುದಿತ್ತು ಎಂಬುದಕ್ಕೆ ವಿವರಣೆ ಕೊಟ್ಟಿದ್ದರು. ಸಲಹೆಯನ್ನು ಕೊಟ್ಟ ವ್ಯಕ್ತಿ ಒಂದೇ ಒಂದು ಪದ್ಯವನ್ನ ಬರೆದಿದ್ದು ನಾನು ಇದುವರೆಗೂ ಕಂಡಿರಲಿಲ್ಲ. ಪಾಪ ಆ ಹುಡುಗ ಕವಿತೆ ಹಾಕು ವುದನ್ನೆ ಬಿಟ್ಟು ಬಿಟ್ಟ. 
ಇನ್ನು ಕೆಲವರು ತಮ್ಮದೇ ಸಿದ್ದಾಂತಗಳಿಗೆ ಒಳಪಟ್ಟವರು ಮತ್ತೆಲ್ಲರೂ ಹಾಗೆ ಜಗತ್ತನ್ನು ಕಾಣಬೇಕು ಎಂದು ಹಂಬಲಿಸುತ್ತಾರೆ. ತುಂಬಾ ಅರಿತ ಜನ ಯಾವತ್ತೂ ಇನ್ನೊ ಬ್ಬರಿಗೆ ಬಿಟ್ಟಿ ಸಲಹೆಗಳನ್ನು ಕೊಡಲಾರರು. ತೀರಾ ಅನಿವಾರ್ಯ ಸಲಹೆಗಳಿದ್ದರೆ ಅದನ್ನ್ನು ವೈಯಕ್ತಿಕವಾಗಿ ಹೇಳಿ ಮುಗಿಸುತ್ತಾರೆ. ಕ್ರಿಯೇ ಟಿವ್ ಬರಹಗಳಲ್ಲಿ ನಮ್ಮ ಬಿಟ್ಟಿ ಸಲಹೆಗಳು ಯಾರ ಅನಿವಾರ್ಯಕ್ಕೂ ಬರುವುದಿಲ್ಲ. ವಿಚಾರ ಪ್ರಭೇದಗಳು ಕಂಡಿತಾ ಬರುತ್ತದೆಯಾದರೂ, ಅದು ಒಬ್ಬ ವ್ಯಕ್ತಿ ಒಂದು ವಸ್ತು ಸ್ಥಿತಿಯನ್ನು ನೋಡುವ ಬಗೆ. ನನಗೆ ನನ್ನ ಅಮ್ಮ ಬಹಳ ಇಷ್ಟವಿದ್ದು, ಇನ್ನೊಬ್ಬನಿಗೆ ಅವನ ಅಮ್ಮ ಇಷ್ಟವಿಲ್ಲ ದಿದ್ದರೆ ಅದು ಅವನ ಅನುಭವ. ನಮ್ಮಿಬ್ಬರ ಅನುಭವ ಮತ್ತು ಇಷ್ಟಗಳು ಒಂದೇ ಆಗಿರ ಬೇಕು ಎಂಬ ಯಾವ ರಿವಾಜಿದೆ? ಇನ್ನು ಸಲಹೆ ಕೊಡುವವರು ಯಾರು ಎಂಬುದು ಬಹಳ ಮುಖ್ಯವಾದ ವಿಷಯ. ಪರೀಕ್ಷೆಯಲ್ಲಿ ಮೂರು ಬಾರಿ ಡುಮ್ಕಿ ಹೊಡೆದ ಹುಡುಗ ನೊಬ್ಬ- you have to come up in ur life understanding disolve ಎಂದು ಮೆಸೇಜ್ ಕಳಿಸಿ ನಗೆಪಾಟಲಾಗುತ್ತಾನೆ. ಇಲ್ಲಿ ಭಾಗಶಃ ಸಮಯ ಅದೇ ಆಗುತ್ತದೆ. ನನ್ನ ಇನ್ನೊಬ್ಬ ಸ್ನೇಹಿತ ಹೊಸದೊಂದು ಬ್ಯುಸಿನೆಸ್ ಮಾಡಿ ಕೈಸುಟ್ಟುಕೊಂಡ, ಸಾಲಗಳೂ ಆದವು.
ಅವನು ಉದ್ಯಮ ಶುರು ಮಾಡಿ, ಕೈಲಿ ನಾಕು ಕಾಸು ಓಡಾಡುತ್ತಿದ್ದಾಗ ಅವನ ಬಾಲ ಹಿಡಿದು ಓಡಾಡುತ್ತಿದ್ದ ಕೆಲವರೆಲ್ಲ ಈಗ ಅವನಿಗೆ ಬುದ್ಧಿ ಹೇಳುವ ಸರತಿಯಲ್ಲಿದ್ದರು. ಅವರೆಲ್ಲರ ಮಾತುಗಳನ್ನು ಸಮಾಧಾನದಿಂದ ಕೇಳಿ ತರುವಾಯ ರೋಸಿ ಹೋಗಿ-‘‘ನಿಮ್ಮಲ್ಯಾರಾದರೂ ನಾನು ಮಾಡಿರೋ ಸಾಲವನ್ನು ತೀರ್ಸಿದ್ರೆ, ನಿಮ್ಮ ಕಾಲಿನ ಚಪ್ಪಲಿ ತಗೊಂಡು ಹೊಡೆದರೂ ಹೊಡಿಸ್ಕೊತೀನಿ. ಯಾರಾದರೂ ನನ್ನ ಸಾಲ ತೀರಿಸ್ತೀರಾ?’’ ಎಂದು ರೇಗಿಬಿಟ್ಟ. ಆವತ್ತಿಂದ ಯಾವ ನೆಂಟನೂ ನನ್ನ ಸ್ನೇಹಿತನ ಮನೆ ಕಡೆ ಸುಳಿದಾಡಿದ್ದು ನನಗೆ ಕಾಣಲಿಲ್ಲ. ಬಂದಿದ್ದ ಒಬ್ಬೊಬ್ಬ ನೆಂಟನ ಹಿಂದೆ ಅಸಂಖ್ಯ ಸೋಲಿನ ಕತೆಗಳಿದ್ದವು. ಸೋಲಾದ ಮೇಲೆ ಹಲವಾರು ಸೋಲುಗಳು. ಸೋತು ಸುಣ್ಣವಾದವನು ಬದುಕಿನ ಯಶಸ್ಸಿಗೆ ಸೂತ್ರಗಳನ್ನು ಹೇಳಿಕೊಟ್ಟರೆ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಬಿಟ್ಟಿ ಸಲಹೆಗಳು ಕೆಲವೊಮ್ಮೆ ಆಪ್ತ ವಲಯದಿಂದಲೂ ಬಂದಿರುತ್ತದೆ. ಸಲಹೆಯನ್ನು ಕೊಡುವಾಗ ಆ ವ್ಯಕ್ತಿಗಳು ನಮ್ಮ ಜೀವನವನ್ನು ಕಮಾಂಡ್ ಮಾಡಲು ಬಂದಿರುತ್ತಾರೆ ಎನಿಸಿಬಿಡುತ್ತದೆ. ಅದರ ಅರಿವು ಅವರಿಗೆ ಕೆಲವೊಮ್ಮೆ ಇರುವುದಿಲ್ಲ. ಅದು ಎದುರಿಗಿನ ವ್ಯಕ್ತಿಗೆ ಎಷ್ಟು ಮುಜುಗರ ಮಾಡುತ್ತದೆ ಎಂದು ಅವರು ಊಹಿಸಿಕೊಳ್ಳಬೇಕು. ಪರ್ಸನಲ್ ವಿಚಾರಗಳಾದ ನಮ್ಮ ಮನೆ, ನಮ್ಮ ಪ್ರೀತಿ, ನಮ್ಮ ಉದ್ಯೋಗ ಹೀಗೆ ಎಲ್ಲ ಕಡೆಯಲ್ಲೂ ಅದು ಹರಿದಾಡುತ್ತದೆ. ನಾವು ಕಾಣದ ಯಾವುದೋ ಲೋಕವೊಂದನ್ನು ಸೃಷ್ಟಿ ಮಾಡಿಕೊಡಲು ಹೋಗುತ್ತಾರೆ. ಉದಾಹರಣೆ ಪ್ರೀತಿ ಪ್ರೇಮಗಳ ವಿಷಯದಲ್ಲಿ ಈಗಿನ ಕಾಲದ ಹುಡುಗರು ಕೊಂಚ ಮಟ್ಟಿಗೆ ಭಿನ್ನವಾಗಿ ಅರಿತಿರುತ್ತಾರೆ. ಪ್ರತಿಯೊಬ್ಬ ಹುಡುಗನಿಗಾಗಲಿ ಹುಡುಗಿಗಾಗಲಿ ತಮ್ಮ ಅಪ್ಪಅಮ್ಮನಂತೆ ಅನಿವಾರ್ಯಕ್ಕೆ ಬದುಕುವುದು ಖಂಡಿತವಾಗಿಯೂ ಇಷ್ಟವಿರುವುದಿಲ್ಲ. ಅಂತಹವರ ಮಧ್ಯೆ ಒಂದು ನವಿರಾದ ಭಾವನೆಗಳು ಸ್ವಂದನವಾಗಿರ್ತವೆ. ಮತ್ತು ಬದುಕುವ ವಿಧಾನಗಳಲ್ಲಿ ಸಿದ್ಧ ಮಾದರಿಗೂ ಮೀರಿದ ಒಂದು ಜೀವನ ಪರ್ಯಟನೆಯನ್ನು ಕಲ್ಪಿಸಿಕೊಂಡು ಇರುತ್ತಾರೆ. ಆಗ ಇದಿರಾಗುವ ಡಾಳು ಸಲಹೆಗಳು ಅದೆಷ್ಟು ಹಿಂಸೆ ಕೊಡ್ತವೆ ಅಂದರೆ ಅಸ್ತಿತ್ವದಲ್ಲೆ ಇಲ್ಲದ ಸಮಸ್ಯೆಗಳನ್ನೆಲ್ಲಾ ತಂದು ಆ ಇಬ್ಬರ ಮನಸಿನಲ್ಲಿ ಮೂಡಿಸಿಬಿಡುತ್ತಾರೆ ಹಿರಿಯರು. ಇದನ್ನು ಸಲಹೆ ಕೊಡುವವರ ತಪ್ಪುಎಂದು ಹೇಳಲಾರೆ. ಆದರೆ ಈಗಿನ ಮನಸ್ಥಿತಿ ಮತ್ತು ಗಳನ್ನು ಸಲಹೆಗಾರರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಮನಸ್ಥಿತಿ ಮತ್ತು ಸ್ವರೂಪಗಳು ಕಾಲಘಟ್ಟದಲ್ಲಿ ಭಿನ್ನವಾಗುತ್ತಾ ಹೋಗುತ್ತದೆ. 
ನಾನು ಆಗಲೇ ಹೇಳಿದಂತೆ ಸಲಹೆಗಳು ಸೂಕ್ತವಾಗಿದ್ದರೆ ಪಡೆಯಲು ಯಾವ ಮುಜುಗರವೂ ಸಲ್ಲ. ಆದರೇ ಪುಗಸಟ್ಟೆ ಸಲಹೆಗಳನ್ನಲ್ಲ. ಇತ್ತೀಚೆಗೆ ಅಂತಹ ಸಲಹೆಗಾರರಿಂದ ಒಂದು ಅಂತರವನ್ನು ಕಾಯ್ದುಕೊಂಡಿದ್ದೇನೆ. ನಮ್ಮ ಬದುಕಿನ ಪ್ರತೀ ಹೆಜ್ಜೆಯಲ್ಲೂ ಯಾರೋ ಬಂದು ಬದುಕಿದರೆ ಸಹಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಪರಮಹಂಸರು ಒಬ್ಬ ಹುಡುಗನಿಗೆ ಬೆಲ್ಲ ತಿನ್ನುವುದನ್ನು ಬಿಡಿಸಲು, ಸ್ವತಃ ತಾವು ಬಿಟ್ಟು ಅಮೇಲೆ ಆ ಹುಡುಗನಿಗೆ ಹೇಳಿದ ಕತೆ ಎಷ್ಟೊಂದು ಸೂಕ್ತ. ತಮ್ಮ ಬದುಕಿನ ಬಹುಭಾಗವನ್ನು ಕಂಡವರಿಗೆ ಸಲಹೆಗಳನ್ನು ಕೊಡುತ್ತಾ ಬದುಕುವವರನ್ನು ಕೆಲಕಾಲ ದೂರವಿಟ್ಟರೆ ಉತ್ತಮ. ಇಲ್ಲವಾದರೆ ಕಾರಂಜಿಯಂತೆ ಚಿಮ್ಮುವ ಬದುಕಿಗೆ ಉತ್ಸಾಹವೇ ಇಲ್ಲದಂತೆ ಕೊರಗಬೇಕಾಗುತ್ತದೆ. ಬಿಟ್ಟಿ ಸಲಹೆಗಳು ನಮ್ಮ ಮನಸಿನಲ್ಲಿ ಹಾಗೆ ಉಳಿದುಕೊಳ್ಳುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ, ಮತ್ತೆ ಅದೊಂದು ಸುಳ್ಳಾಗಿ ಮಾರ್ಪಾಡಾಗುತ್ತದೆ. ಮತ್ತೆ ಕುಂದುತ್ತೇವೆ.....ಇನ್ನೊಮ್ಮೆ ಆ ಕೆಲಸ ಮಾಡಲು ಹೋಗಲಾರೆವು. ಬಿಟ್ಟಿ ಸಲಹೆಗಳಿಂದ ನಮ್ಮ ಹಲವಾರು ಆವಿಷ್ಕಾರಗಳು ಶುರುವಾಗುವ ಮೊದಲೇ ಆಗಿ ಬಿಡುತ್ತದೆ. ಆಸೆಗಳು ಹುಟ್ಟುವ ಮೊದಲೇ ಹೊಸಕಿ ಹಾಕುತ್ತೇವಲ್ಲ ಅದೆಷ್ಟು ಪಾಪಕಾರ್ಯ!
ಮೇಲೆ ಬರುವ ಯಾವ ಪಾತ್ರ ಹಾಗೂ ಸನ್ನಿವೇಶಗಳೂ ಕಾಲ್ಪನಿಕವಲ್ಲ. ಎಲ್ಲವೂ ವಾಸ್ತವ ಮತ್ತು ಸತ್ಯವೇ ಆಗಿದೆ. ಈ ಪಾತ್ರಗಳಲ್ಲಿ ಯಾರಿಗಾದರೂ ತಮ್ಮ ಹೋಲಿಕೆಗಳಿದ್ದರೆ, ತಾವೇ ಎಂದು ಭಾವಿಸಿಕೊಳ್ಳಬಹುದು.
ಕೃಪೆ : ವಾರ್ತಾಭಾರತಿ

Wednesday, April 03, 2013

ವಚನ-24

ಹಾದರಕ್ಕೆ ಹಾಸಿದವರು ; ಹಾದರಕ್ಕೆ ಹೇಸಿದವರು
ಹಾದರ ಮಾಡುವುದ ಕಂಡ್ಯ ಕೋಲುಬಸವ !
ಇಂತಿಪ್ಪ ಜಗದೊಳು ಹಾದರಿಗನ ಕಂಡ ಬಸವ ಹೌಹಾರಿದ್ದ !
ಇಂತಿಪ್ಪ ಜಗದೊಳು ಚಾದರದೊಳಗಣ ಹಸಿಯ ಕಂಡಿದ್ದ
ಕಾರಣಿಕ ಸಿಧ್ಧರಾಮ ಹಾಡುಹಗಲೇ ಬುದ್ಧನಾಗಲು ಹೊರಟ !

Wednesday, March 27, 2013

ಮಾತ್ಗವಿತೆ-122

ನಶೆಯ ದಿಶಾ ದೂರಮಾಡಿ 
ಹೊಸ ಹಾದಿ ಕವಲೊಡೆದಾಗ ಹಾದಿಗಳೆರಡು
ದೂರದೂರಿನ ಹಂಬಲಿಕೆಗೆ ದುಂಬಾಲು ಬೇಡ ; 

ಅಂಬಲಿ ಕುಡಿದಾಗ ಕುಡಿಯೊಡೆದಿಲ್ಲವೆ ?
ಹೂವು ಅರಳತಾವು ; ಕೊಂಬಿ ಚಿಗಿತಾವು !

Tuesday, March 26, 2013

ಯಾವ ಸಂಘಟನೆಗಳು ವಸೂಲಿಗೆ ಇಳಿದಿವೆ ?


ಧಾರವಾಡದಲ್ಲಿ ಭಾನುವಾರ ನಡೆದ ಜನಸಾಹಿತ್ಯ ಸಮಾವೇಶದಲ್ಲಿ `ಸಮಾಜ ವಿಜ್ಞಾನ ಬರಹ ಮತ್ತು ಸಂಸ್ಕೃತಿ ಚಿಂತನೆ' ಕುರಿತು ಕೆ.ಫಣಿರಾಜ್ ಮಾತನಾಡಿದರು. ಸಿದ್ರಾಮ ಕಾರಣಿಕ, ಡಾ.ರಂಗನಾಥ್ ಕಂಟನಕುಂಟೆ ಇದ್ದಾರೆ
ಧಾರವಾಡ: `ಎಡಗೈ-ಬಲಗೈ ನೆಪದಲ್ಲಿ ಸಂಘರ್ಷಕ್ಕೆ ಇಳಿದಿರುವ ದಲಿತ ಸಂಘಟನೆಗಳು, ವಶೀಲಿಬಾಜಿ ಭರದಲ್ಲಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ' ಎಂಬ ಹೇಳಿಕೆ ಭಾನುವಾರ ಇಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು.
ಲೇಖಕ ಡಾ. ಲಕ್ಷ್ಮೀನಾರಾಯಣ ಅವರು, ಸಮಾವೇಶದ ಸಂವಾದದ ವೇಳೆ `ಉತ್ತರ ಪ್ರದೇಶದಲ್ಲಿ ದಲಿತರ ಪರವಾದ ಬಿಎಸ್‌ಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಕರ್ನಾಟದಕದಲ್ಲಿನ ದಲಿತ ಸಂಘಟನೆಗಳ ವಶೀಲಿ ಬಾಜಿಯಿಂದಾಗಿ ದಲಿತ ಚಳವಳಿ ತನ್ನ ಅಸ್ತಿತ್ವ ಕಳೆದುಕೊಂಡಿತು. ದಲಿತ ಚಳವಳಿ ಮೂರ್ತ ರೂಪ ಪಡೆದು ರಾಜಕೀಯ ಶಕ್ತಿ ಆಗಲೇ ಇಲ್ಲ' ಎಂದರು.
ಆಗ ವೇದಿಕೆ ಏರಿದ ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮೀನಾರಾಯಣ ನಾಗವಾರ, `ಯಾವ ಸಂಘಟನೆಗಳು ವಸೂಲಿಗೆ ಇಳಿದಿವೆ ಎಂಬುದನ್ನು ಸಾಬೀತುಪಡಿಸಿ, ಇಲ್ಲದಿದ್ದರೆ ಆ ಮಾತು ವಾಪಸ್ ಪಡೆಯಬೇಕು. ಪ್ರಗತಿಪರರು ಎನಿಸಿಕೊಂಡವರೇ ದಲಿತ ಸಂಘಟನೆಗಳ ಬಗೆಗೆ ಹೀಗೆ ಮಾತನಾಡಿದರೆ ಹೇಗೆ?' ಎಂದು ಪ್ರಶ್ನಿಸಿದರು.
ನಾಗವಾರ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಹಿರಿಯ ಸಾಹಿತಿ ರಾಜಪ್ಪ ದಳವಾಯಿ, `ದಲಿತ ಸಂಘಟನೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ ಅಥವಾ ವಿಘಟನೆಗೊಂಡಿವೆ ಎನ್ನುವ ಮೂಲಕ ಕೆಲವರು ಜನಸಾಮಾನ್ಯರಲ್ಲಿ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ. ಯಾರಾದರೂ ದಲಿತರ ಹಿತಾಸಕ್ತಿಗೆ ವಿರುದ್ಧವಾದ ಒಂದು ಹೇಳಿಕೆ ಕೊಟ್ಟು ನೋಡಲಿ. ಆಗ ದಲಿತರು ಏನು ಎಂಬುದು ಗೊತ್ತಾಗುತ್ತದೆ' ಎಂದು ಪರೋಕ್ಷ ಎಚ್ಚರಿಕೆ ನೀಡಿದರು.
`ದಲಿತರಲ್ಲಿ ಎಡಗೈ-ಬಲಗೈ ವಿಚಾರ ದೊಡ್ಡದು ಮಾಡುವ ಕೆಲವು ಪ್ರಗತಿಪರರೇ ಮೊದಲು ಸಮಾಜವನ್ನೇ ಅರ್ಥಮಾಡಿಕೊಂಡಿಲ್ಲ. ಇನ್ನು ಚಳವಳಿಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಪ್ರಶ್ನಿಸಿದರು.
`ದಲಿತರನ್ನು ಇನ್ನೂ ಎಡಗೈ, ಬಲಗೈ ಎಂದು ಒಡೆದು ಆಳಲಾಗುತ್ತಿದೆ. ಮೇಲ್ಜಾತಿಗಳಲ್ಲಿ ಒಳಪಂಗಡಗಳು ಇದ್ದು, ಹೊಡೆದಾಟ-ಕೊಲೆಗಳೇ ನಡೆದಿದ್ದರೂ ಅದನ್ನು ಅಷ್ಟಾಗಿ  ಪರಿಗಣಿಸದ ಕೆಲವರು ದಲಿತರನ್ನು ಈ ರೀತಿ ಗುರುತಿಸುತ್ತಿದ್ದಾರೆ' ಎಂಬ ದಲಿತ ಮುಖಂಡರ ಆಕ್ರೋಶವೂ ವ್ಯಕ್ತವಾಯಿತು. ಇದಕ್ಕೂ ಮುನ್ನ ನಡೆದ `ಹೊಸ ತಲೆಮಾರಿನ ಕಥಾ ಸಾಹಿತ್ಯ'  ಗೋಷ್ಠಿಯಲ್ಲಿ ಎಸ್.ಗಂಗಾಧರಯ್ಯ, `ಪ್ರಶಸ್ತಿ ನೀಡಲು ಪರಿಗಣಿಸುವ ಸಂದರ್ಭದಲ್ಲಿ ಅರ್ಹತೆ ಇದ್ದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ' ಎಂದು ಹೇಳಿದ್ದು ಬಿಸಿ ಚರ್ಚೆಗೆ ಕಾರಣವಾಯಿತು. ಗೋಷ್ಠಿ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಬಂದ ಲಕ್ಷ್ಮೀನಾರಾಯಣ ನಾಗವಾರ, `ಅಸ್ಪೃಶ್ಯರು' ಎಂಬ ಪದ ಬಳಕೆ ಸರಿಯಲ್ಲ. ಆ ಮೂಲಕ ಗಂಗಾಧರಯ್ಯ ದಲಿತರನ್ನು ಅವಮಾನಿಸುತ್ತಿದ್ದಾರೆ. ಆ ಪದ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ನಾಗವಾರ ಅವರ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಗಂಗಾಧರಯ್ಯ, `ಅಸ್ಪಶ್ಯರು' ಎಂಬ ಪದ ಬಳಕೆ ಮಾಡಿದ್ದು ಯಾರನ್ನೋ ನೋಯಿಸಲು ಅಲ್ಲ. ಬದಲಿಗೆ ಪ್ರಶಸ್ತಿಗೆ ಆಯ್ಕೆಯ ರಾಜಕೀಯ ಬಿಚ್ಚಿಡುವಾಗ ಮಾತಿನ ಭರದಲ್ಲಿ ಹೇಳಿದ್ದು, ಅದು ನೋವುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.

ಕೃಪೆ : ಮನೋಜ್‌ಕುಮಾರ್ ಗುದ್ದಿ, ಪ್ರಜಾವಾಣಿ 

Monday, March 18, 2013

ಡಾ. ಕಂಬಾರರಿಗೆ : ‘ಹೇಳತೇನಿ ಕೇಳು’ ಅಲ್ಲ : ‘ಕೇಳತೇನಿ ಹೇಳ್ರಿ !’

ಡಾ. ಸಿದ್ರಾಮ ಕಾರಣಿಕ

ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡವರೆನಿಸಿಕೊಂಡವರು, ವಿದ್ವಾಂಸರು ಎಂಬ ಬಿರುದಾಂಕಿತರು ಹೇಳಿಕೆಗಳನ್ನು ನೀಡಬೇಕಾದರೆ ಸಾವಿರ ಸಲ ಯೋಚಿಸಬೇಕು. ತಕ್ಷಣದ ಅನುಭವ ಅಥವಾ ಮಾತಿನ ಭರದಲ್ಲಿ ಬೇಕಾಬಿಟ್ಟಿಯಾಗಿ ವಿಚಾರ ಲಹರಿಗಳನ್ನು ಹರಿಯಬಿಡವುದು ಸೂಕ್ತವಲ್ಲ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ವಿಶ್ವವಿದ್ಯಾಲಯಗಳಿಂದ ಕೆಟ್ಟ ವಿಮರ್ಶಕರ ಸೃಷ್ಟಿಯಾಗಿದೆ ಎಂಬ ಆರೋಪವನ್ನು ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ (ವಿ.ಕ. 13-03-2013).
ಕಂಬಾರರು ಒಂದು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ಒಂದೇ ವಿಷಯ ಮತ್ತು ಪರಿಸರವನ್ನು ಇಟ್ಟುಕೊಂಡು ಹಲವಾರು ಪುಸ್ತಕಗಳನ್ನು ಬರೆದವರು. ನಡುನಡುವೆ ವಿಲಕ್ಷಣವಾದ ಹೇಳಿಕೆಗಳನ್ನು ನೀಡುತ್ತ ತಾವು ಪ್ರಬುದ್ಧರು ಎಂಬುದನ್ನು ಸಾಬೀತುಪಡಿಸಲು ಮುಂದಾದವರು. ಇವರು ಈಗ ಹೀಗೆ ಹೇಳುತ್ತಿರವುದನ್ನು ಕಂಡಾಗ ಇದನ್ನು ಅವರು ತಮ್ಮ ಅನುಭವದಿಂದಲೇ ಅವರು ಹೇಳಿರಬಹುದು ಎನಿಸುತ್ತದೆ.
ವಿಶ್ವವಿದ್ಯಾಲಯಗಳು ಇಂದು ಮೊದಲಿನ ವಾತಾವರಣವನ್ನು ಉಳಿಸಿಕೊಂಡಿಲ್ಲ ಎಂಬುದೇನೋ ನಿಜ. ಆದರೆ ಅದನ್ನೇ ಮುಂದಿಟ್ಟುಕೊಂಡು ತಮ್ಮ ಹಿರಿತನದ ಜಾಡ್ಯವನ್ನು ಬಿತ್ತುವುದು ಸರಿಯಾದ ಕ್ರಮವಲ್ಲ. ‘ಬ್ರಿಟಿಷರಿಂದ ನಮಗಾದ ದೊಡ್ಡ ಲಾಭವೆಂದರೆ ಅವರು ಶಿಕ್ಷಣವನ್ನು ಸಾರ್ವಜನಿಕಗೊಳಿಸಿದ್ದು. ಅದು ಐತಿಹಾಸಿಕ ಅನಿವಾರ್ಯ. ಆದರೆ ನಮ್ಮ ಮನಸು ಶಿಕ್ಷಿತವಾದದ್ದು ಪಾಶ್ಚಾತ್ಯ ರೀತಿಯಲ್ಲಿ. ವಿದ್ಯೆಗಳನ್ನು ಕಲಿಸಲು ಹೇಳಿಕೊಟ್ಟ ವಿಧಾನಗಳನ್ನೇ ಬಳಸಿದೆವು. ಕನ್ನಡ ಮತ್ತು ಸಂಸ್ಕೃತದಂಥ ವಿಷಯಗಳನ್ನೂ ಅವರ ವಿಧಾನದಲ್ಲಿಯೇ ಓದಿದೆವು’ ಎಂಬ ಕಂಬಾರರ ಹೇಳಿಕೆ ಅರ್ಧ ಸತ್ಯದಿಂದ ಕೂಡಿದೆ. ನಾವು ಪಾಶ್ಚಾತ್ಯರ ಮಾದರಿಯಲ್ಲಿ ವಿದ್ಯಾದಾನದ ವಿಧಾನಗಳನ್ನು ಇಂದಿಗೂ ಅನುಸರಿಸುತ್ತಿಲ್ಲ. ಪಾರಂಪರಿಕವಾದ ಗುರುಕುಲಗಳಲ್ಲಿ ಇದ್ದ ಶಿಕ್ಷಣ ಮಾದರಿಯೇ ಇಂದಿಗೂ ನಮ್ಮ ನಡುವೆ ಇದೆ. ಒಂದು ಬದಲಾವಣೆ ಎಂದರೆ ಎಲ್ಲ ಜಾತಿ-ಜನಾಂಗದವರಿಗೆ ಶಿಕ್ಷಣದ ಅವಕಾಶ ಇಂದು ನಮಗಿದೆ ಅಷ್ಟೆ. ಇದು ಕಂಬಾರರು ಹೇಳಿದಂತೆಯೇ ಬ್ರಿಟಿಷರಿಂದ ಆದ ಬದಲಾವಣೆ. ಮುಂದೆ ಶಿಕ್ಷಣದ ಪಠ್ಯಕ್ರಮವನ್ನು ಒಂದಿಷ್ಟು ನೋಡಿದರೆ ಕಂಬಾರರು ತಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳುತ್ತಾರೇನೋ ! ಯಾಕೆಂದರೆ ಇಂದಿಗೂ ದೇವರು, ಧರ್ಮ ಮೊದಲಾದ ವಿಷಯಗಳೇ ಪಠ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಅದೂ ಒಂದೇ ಧರ್ಮಕ್ಕೆ ಸಂಬಂಧಿಸಿದಂತೆ ! ಹಾಗಾದರೆ ಇದನ್ನು ಪಾಶ್ಚಾತ್ಯರ ಅನುಕರಣೆ ಎನ್ನೋಣವೆ ?
ಈ ದೇಶದಲ್ಲಿ ಯಂತ್ರ ಪದವೀಧರರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಕನ್ನಡ ಶಾಲೆಯಲ್ಲಿಯೇ ಕಲಿತು ಅದೇ ಬದಲಾವಣೆಯಿಲ್ಲದ ಪಠ್ಯದ ಮೂಲಕ ಒಂದಿಷ್ಟು ಓದು ಬರಹ ಕಲಿತ ಅಸಂಖ್ಯಾತ ಜನ ಇಂದಿಗೂ ಸರಿಯಾದ ಬದುಕಿನ ನೆಲೆ ಕಾಣದೆ ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಕಂಬಾರರು ಇದನ್ನು ಕಂಡಿಲ್ಲವೆ ? ಸಾಮಾನ್ಯ ಜನರ ಬದುಕು ಈ ಸಾಂಪ್ರದಾಯಿಕ ಶಿಕ್ಷಣದಿಂದ ಏನೇನೂ ಬದಲಾವಣೆ ಆಗಿಲ್ಲ. ಹೀಗೆ ಹೇಳಿದ ತಕ್ಷಣ ಡಾ. ಕಂಬಾರರು ತಮ್ಮ ಹಳೆಯ ಮಾತನ್ನು ಉಚ್ಚರಿಸಬಹುದು. ಅವರ ಪ್ರಕಾರ ಜನಪದ ಬದುಕು ಬದಲಾಗಬಾರದು ; ಇದರಿಂದ ಜಾನಪದ ಸಂಸ್ಕೃತಿಯೊಂದು ಅಳಿಯುತ್ತದೆ. ಕಾಡಿನಲ್ಲಿ ಇದ್ದವರಿಗೆ ಶಿಕ್ಷಣ ನೀಡುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಅವರ ಸಂಸ್ಕೃತಿ ಹಾಳಾಗುತ್ತದೆ ! ಹಾಗಾದರೆ ಯಾರು ಎಲ್ಲಿ ಇರುತ್ತಾರೋ ಅಲ್ಲಿಯೇ ಇರಬೇಕು ಎಂಬ ಮಾನಸಿಕ ಜಾಡ್ಯ ನಮ್ಮ ದೇಶದ ಬಹುಪಾಲು ವಿದ್ವಾಂಸರಲ್ಲಿದೆ ಎಂಬ ಅರ್ಥವಲ್ಲವೆ ?
ಇನ್ನು ಕನ್ನಡದ ಬಗ್ಗೆ ಕಂಬಾರರು ಎಲ್ಲಿ ಹೋದಲ್ಲಿ ಮಾತನಾಡುತ್ತಾರೆ. ಅವರು ಒಂದು ವಿಷಯವನ್ನು ಅರಿತುಕೊಳ್ಳಬೇಕು. ಯಾವುದೇ ಭಾಷೆಯಾದರೂ ಅದು ಬದುಕು ನೀಡಬೇಕು. ಬದುಕು ನೀಡದ ಭಾಷೆಯನ್ನು ಕಲಿಯುವುದರಿಂದ ಆಗುವ ಪ್ರಯೋಜನವಾದರೂ ಏನು ? ಹಾಗಾಗಿ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕಂಬಾರರು ಅಥವಾ ಅವರಂಥವರು ಹೇಳುವ ಅವಶ್ಯಕತೆಯೇ ಆಗ ಇರವುದಿಲ್ಲ. ಜನ ತಾವಾಗಿಯೇ ಕನ್ನಡವನ್ನು ಕಲಿಯಲು ಮುಂದೆ ಬರುತ್ತಾರೆ ; ಕನ್ನಡ ಕಲಿಯಲು ಪೈಪೋಟಿ ನಡೆಯುತ್ತದೆ. ಉನ್ನತ ಸ್ಥಾನಗಳಲ್ಲಿ ಇರುವ ಕನ್ನಡ ಪರ ಮಾತುಗಳನ್ನು ಉದರಿಸುವವರು ಸರಕಾರದ ಮುಂದೆ ಇಂಥ ಪ್ರಸ್ತಾಪವೇನಾದರೂ ಇಟ್ಟಿದ್ದಾರೆಯೇ ? ಇಟ್ಟಿದ್ದರೆ ಅವು ಕಾರ್ಯರೂಪಕ್ಕೆ ಬರಲು ಏನು ಹೋರಾಟ ಮಾಡಿದ್ದಾರೆ ? ಬರೀ ಹೇಳಿಕೆಗಳನ್ನು ಕೊಡುವುದರಿಂದಲೇ ತಾವು ಬಹುದೊಡ್ಡ ವಿದ್ವಾಂಸ ಎನಿಸಿಕೊಳ್ಳುತ್ತೇವೆ ಎಂದರೆ ತಪ್ಪಾಗುವುದಿಲ್ಲವೆ ?
*****

Sunday, March 17, 2013

ಜಾತೀಯತೆ ಎಂಬ ಪ್ರಿಸಮ್ !

ಆಗ ಬೆಂಗಳೂರಿನ ಪೊಲೀಸ್ ಕಮಿಷನರ್ ನಿವೃತ್ತ ರಾಗುವ ಸಮಯ ಬಂದಿತ್ತು. ಮುಂದೆ ಯಾರನ್ನು ಕಮಿಷನರ್ ಆಗಿ ನೇಮಿಸಬೇಕು ಎಂಬ ಬಗ್ಗೆ ಮುಖ್ಯ ಮಂತ್ರಿ ಶ್ರೀ ದೇವರಾಜ ಅರಸು ಅವರ ಜತೆ ಚರ್ಚೆ ನಡೆಯುತ್ತಿತ್ತು. ನನಗೆ ಆಗ ಅಷ್ಟು ಅನುಭವ ಇರಲಿಲ್ಲ. ಒಬ್ಬ ಅಧಿಕಾರಿಯ ಹೆಸರನ್ನು ನಾನು ಸೂಚಿಸಿದೆ. ವರಿಷ್ಠತೆಯ ಪ್ರಕಾರ ಆ ಅಧಿಕಾರಿ ಆಯುಕ್ತ ರಾಗಬೇಕಿತ್ತು. ಆಗ ಲಿನ್ ಸಾಹೇಬರು ''ಇಲ್ಲ, ಅವರು ''ಈ'' ಜಾತಿಗೆ ಸೇರಿದವರು. ಮಹಾನಿರ್ದೇಶಕರು ಮತ್ತು ಗೃಹ ಕಾರ್ಯ ದರ್ಶಿಯವರು ಕೂಡ ಅದೇ ಜಾತಿಗೆ ಸೇರಿ ದವರು. ಮೂರು ಜನ ಪೋಲಿಸ್ ಮೇಲಧಿಕಾರಿಗಳು ಒಂದೇ ಜಾತಿ ಯವರಾಗಿರಬಾರದು'' ಎಂದು ಹೇಳಿದರು. ಆಮೇಲೆ ಸರಿ ಯಾದ ಜಾತಿಯ ಒಬ್ಬ ಅಧಿಕಾರಿಯನ್ನು ಆಯ್ಕೆ ಮಾಡಲಾ ಯಿತು. ಉಪವಿಭಾಗಾಧಿಕಾರಿಯ ಹುದ್ದೆಯಿಂದ ನಾನು ನೇರ ವಾಗಿ ಮುಖ್ಯಮಂತ್ರಿಯವರ ಕಚೇರಿಗೆ ಉಪಕಾರ್ಯ ದರ್ಶಿ ಯಾಗಿ ನೇಮಕಗೊಂಡಿದ್ದೆ. ಅರಸು ಅವರು ಮುಖ್ಯಮಂತ್ರಿ ಆದ ನಂತರ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಎಂಬ ಎರಡು ಹುದ್ದೆಗಳ ರಚನೆ ಆಯಿತು. ಅದ ಕ್ಕಿಂತ ಮೊದಲು ಈ ಹುದ್ದೆಗಳು ಇರಲಿಲ್ಲ. ಮುಖ್ಯಮಂತ್ರಿ ಅವರ ಆಪ್ತಕಾರ್ಯದರ್ಶಿ ಹುದ್ದೆ ಮಾತ್ರ ಇತ್ತು. ಉಪಕಾರ್ಯ ದರ್ಶಿಯವರ ಹುದ್ದೆಯ ರಚನೆ ಆದ ನಂತರ, ಅಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ದಿವಂಗತ ಆರ್.ಜೆ.ರೆಬೆಲ್ಲೊ ಅವರು ಅರಸು ಅವರ ಬಳಿ, ''ಈಗ ಈ ಹುದ್ದೆ ರಚಿಸಲಾಗಿದೆ. ನೀವು ಅದಕ್ಕೆ ಯಾರನ್ನು ನೇಮಕ ಮಾಡಲು ಇಷ್ಟ ಪಡುತ್ತೀರಿ?'' ಎಂದು ಕೇಳಿದ್ದರು. ಅದಕ್ಕೆ ಅರಸು ಅವರು, ''ನನಗೆ ಇಲ್ಲಿನ ಜಾತಿಯ ಅಧಿಕಾರಿ ಬೇಡ. ಯಾರಾದರೂ ಹೊರಗಡೆಯಿಂದ ಬಂದವ ರನ್ನು ಕೊಡಿ'' ಎಂದು ಕೇಳಿದ್ದರು. ಹಾಗಾಗಿ ರೆಬೆಲ್ಲೊ ಅವರು ನನ್ನನ್ನು ಆ ಸ್ಥಾನಕ್ಕೆ ನೇಮಕ ಮಾಡಿದರು. ಅವತ್ತಿನಿಂದ ಇವತ್ತಿನ ವರೆಗೆ ಆಗಿರುವ ವ್ಯತ್ಯಾಸ ಎಂದರೆ ಈಗ ಸಚಿವರು ಸಾಮಾನ್ಯವಾಗಿ ತಮ್ಮ ಜಾತಿಯ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ನಾಡಿನಲ್ಲಿ ಜಾತಿ ಪ್ರಭಾವ ಹೆಚ್ಚಾಗುವ ಒಂದು ಉದಾಹರಣೆ ಇದು.

ಯಾವುದೇ ಒಂದು ಜಾತಿಯ ಪ್ರಾಬಲ್ಯ ಆಡಳಿತದಲ್ಲಿ ಇರಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ಪೊಲೀಸ್ ಆಯುಕ್ತರ ನೇಮಕಾತಿಯ ವಿಷಯ ಹೇಳಬೇಕಾಯಿತು. ಆದರೆ ಈಗ ನಾವು ನೋಡುತ್ತಿರುವ ಹಾಗೆ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತವೆ. ಇದು ವಿಚಿತ್ರ. ಏಕೆಂದರೆ ಒಬ್ಬ ವೈದ್ಯ, ದರ್ಜಿ, ವಾಸ್ತುಶಿಲ್ಪಿ, ಲೆಕ್ಕಿಗ ಅಥವ ಇತರ ಯಾವುದೇ ತಜ್ಞರ ಬಳಿ ಹೋಗುವಾಗ ನಾವು ಅವರ ಪ್ರವೀಣತೆಯನ್ನು ನೋಡು ತ್ತೇವೆಯೇ ಹೊರತು ಜಾತಿಯನ್ನು ನೋಡುವುದಿಲ್ಲ. ಆದರೆ ಚುನಾವಣೆಯ ಅಭ್ಯರ್ಥಿಗಳ ವಿಷಯ ಬಂದಾಗ ಜನರು ಜಾತಿಯನ್ನು ವಿಶೇಷವಾಗಿ ಪರಿಗಣಿಸುತ್ತಾರೆ.

ಪಂಜಾಬಿನಿಂದ ಬಂದ ನಂತರ, ಇಲ್ಲಿಯ ನಿತ್ಯ ಜೀವನದಲ್ಲಿ ಜಾತೀಯತೆಯ ಪ್ರಭಾವ ನೋಡಿ ನನಗೆ ಆಶ್ಚರ್ಯ ಆಯಿತು. ಇಲ್ಲಿಯ ಊಟದ ರುಚಿ ಜಾತಿ ಪ್ರಕಾರ ಹೋಗುತ್ತದೆ. ಅಲ್ಲಿ ಪಂಜಾಬಿ ಊಟ ಅಂದರೆ ಪಂಜಾಬಿ ಊಟ ಅಷ್ಟೆ. ಇಲ್ಲಿ ಊಟ ಆದ ನಂತರ ನಾನು ಕೇಳಿದ ಕೆಲವು ಟಿಪ್ಪಣಿಗಳು ಹೀಗಿವೆ: ''ಅಹಾ! ಇದು ಶುದ್ಧ ಅಯ್ಯಂಗಾರ್ ಊಟ; ಇದು ಮಾಧ್ವರ ಊಟ; ಇದು ಲಿಂಗಾಯತರ ಊಟ; ಇದು ಮುಲಕ್‌ನಾಡು ಊಟ; ಇದು ಕುರುಬರ ಊಟ; ಇದು ಒಕ್ಕಲಿಗರ ಊಟ'' ಇತ್ಯಾದಿ. ಈಗ ನಾನು ಕೂಡ ರುಚಿಯಿಂದ ಊಟದ ಜಾತಿಯನ್ನು ಗುರುತಿಸಬಲ್ಲೆ. ಒಂದು ಕಡೆ ಚಕ್ಕೆ, ಜೀರಿಗೆ, ಲವಂಗ ಮುಖ್ಯ ವಾದರೆ, ಇನ್ನೊಂದು ಕಡೆ ಇಂಗು, ಸಾಸಿವೆ, ಮೆಂತೆಕಾಳು; ಲಿಂಗಾ ಯ ತರಿಗೆ ಬೆಳ್ಳುಳ್ಳಿ ಇಷ್ಟವಾದರೆ, ಒಕ್ಕಲಿಗರಿಗೆ ಈರುಳ್ಳಿ. ಲಿಂಗಾ ಯತರಲ್ಲಿ ಮತ್ತು ಬ್ರಾಹ್ಮಣೇತರ ಜಾತಿಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹೆಚ್ಚು ಬಳಕೆ ಬಹುಶಃ ಬ್ರಾಹ್ಮಣರಿಂದ ತಮ್ಮ ಪ್ರತ್ಯೇಕತೆಯನ್ನು ತೋರಿಸಲು ಆಗಿದೆ. ಸ್ಮೃತಿಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿಯ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಇದನ್ನು ಮಾಡಿರಬಹುದು. ಆದರೆ ಕಾರಣ ಏನೇ ಇರಲಿ, ಈಗ ಬ್ರಾಹ್ಮಣರ ಮಜ್ಜಿಗೆಯಲ್ಲಿ ಇಂಗು, ಲಿಂಗಾಯಿತರ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ಮತ್ತು ಒಕ್ಕಲಿಗರ ಮಜ್ಜಿಗೆಯಲ್ಲಿ ಈರುಳ್ಳಿ ಇರುತ್ತದೆ. ಬಡ ಜಾತಿಯವರಿಗೆ ಏನು ಸಿಕ್ಕುತ್ತೋ ಅದೇ ನಡೆಯುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ದುರ್ವಾಸನೆಗೋಸ್ಕರ ಅವುಗಳನ್ನು ತಿನ್ನಬಾರದು ಅಂತ ಸ್ಮೃತಿಕಾರರು ಹೇಳಿರಬಹುದು. ಆದರೆ 'ಇದರ ಪರ್ಯಾಯವಾಗಿ ಅವರು ಅಷ್ಟೇ ದುರ್ವಾಸನೆಯುಳ್ಳ ಇಂಗನ್ನು ಹುಡುಕಿಬಿಟ್ಟರು' ಎಂದು ಸ್ವಾಮಿ ವಿವೇಕಾನಂದರು ಒಂದು ಕಡೆ ಬರೆದಿದ್ದಾರೆ. ಒಂದು ಕಾಲದಲ್ಲಿ ಮನುವಾದವನ್ನು ತಿರಸ್ಕರಿಸಿ, ಮಜ್ಜಿಗೆ ಮತ್ತು ಚಟ್ನಿಯಲ್ಲಿ ಬೆಳ್ಳುಳ್ಳಿ ಹಾಕುವ ಲಿಂಗಾ ಯತರು ಕೂಡ ಈಗ ಒಂದು ಜಾತಿ ಆಗಿಬಿಟ್ಟಿದ್ದಾರೆ. ನಾನು ಬೆಳಗಾವಿಯಲ್ಲಿ ವಿಭಾಗಾಧಿಕಾರಿಯಾಗಿದ್ದಾಗ ನನ್ನ ಮುಂದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಒಂದು ಮೇಲ್ಮನವಿ ಬಂದಿತ್ತು. ಮೇಲ್ಮನವಿದಾರರಿಗೆ 'ಲಿಂಗಾಯಿತ' ಎಂದು ಜಾತಿ ಪ್ರಮಾಣ ಪತ್ರ ಬೇಕಿತ್ತು. ನನ್ನ ತೀರ್ಪಿನಲ್ಲಿ, 'ಲಿಂಗಾಯಿತ ಎಂದರೆ ಜಾತಿಯ ನಿರಾಕರಣೆ. ಅದು ಜಾತಿ ಅಲ್ಲ' ಎಂದು ನಾನು ಹೇಳಿದೆ.

ಊಟದ ಅಥವ ಉಡುಪುಗಳ ವ್ಯತ್ಯಾಸಗಳನ್ನು ಸಾಂಸ್ಕೃತಿಕ ವಿವಿಧತೆಯ ದೃಷ್ಟಿಯಿಂದ ನೋಡಿದರೆ ಅದು ಮಳೆಬಿಲ್ಲಿನ ಹಾಗೆ ವರ್ಣಮಯ ಎಂದನ್ನಿಸುತ್ತದೆ. ಆದರೆ ಶೇಖ್ ರೀದ್‌ಜೀ ಹೇಳಿದಂತೆ, ''ಈ ಕುಸುಬಿಯನ್ನು ಮುಟ್ಟಬಾರದು. ಇದು ಕೈಯನ್ನು ನೋಯಿಸುತ್ತದೆ.'' ಜಾತೀಯತೆ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಜನ ಎಲ್ಲವನ್ನೂ ಜಾತೀಯತೆಯ ಪ್ರಿಸಮ್‌ನಿಂದಲೇ ನೋಡುತ್ತಾರೆ. ಭೀಮ್‌ಸೇನ್ ಜೋಶಿಯ ವರು ವಚನಗಳನ್ನು ಹಾಡಲಿಲ್ಲ; ಮಲ್ಲಿಕಾರ್ಜುನ ಮನ್ಸೂರ್ ಅವರು ದಾಸರ ಪದಗಳನ್ನು ಹಾಡಲಿಲ್ಲ. ರಾಮರಾವ್ ನಾಯಕ್ ಅವರು ಮಲ್ಲಿಕಾರ್ಜುನ ಮನ್ಸೂರ್ ಅವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಸಂಗೀತವನ್ನು 'ಬೆಳ್ಳುಳ್ಳಿ ಹಾಡುಗಾರಿಕೆ' ಎಂದು ಅಣಕಿಸುತ್ತಿದ್ದರು.

ಕುಲ ಕುಲ ಎಂದು ಹೇಳುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಆಧುನಿಕ ಶಿಕ್ಷಣದ ಪ್ರಭಾವ ಹೆಚ್ಚಾಗುವುದರಿಂದ, ಈ ಕುಲ ಕುಲ, ಜಾತಿ ಜಾತಿ ಭಾವನೆ ಕ್ರಮೇಣ ಕ್ಷೀಣವಾಗಬಹುದು ಎಂಬ ನಂಬಿಕೆ ಇತ್ತು. ಆದರೆ ನಾವೀಗ ನೋಡುತ್ತಿರುವುದು ಇದಕ್ಕೆ ವಿರುದ್ಧವಾದದ್ದು. ಶಿಕ್ಷಿತರಿಂದಲೇ ಜಾತೀಯತೆಗೆ ಹೆಚ್ಚು ಪ್ರಚೋದನೆ ಸಿಗುತ್ತಿದೆ, ವಿಶೇಷವಾಗಿ ಚುನಾವಣೆಯ ಕಾಲದಲ್ಲಿ. ಚುನಾವಣೆ ಹತ್ತಿರ ಬರುತ್ತಿರುವಾಗ ನಾವು ಜಾತೀಯತೆಯ ತಾಂಡವವನ್ನು ನೋಡಬಹುದು.

ಅವಿಭಕ್ತ ಕುಟುಂಬಗಳು ಕೊನೆಗೊಳ್ಳುತ್ತಿರುವುದರಿಂದ ಮತ್ತು ಸಣ್ಣ ಕುಟುಂಬಗಳು ಹೆಚ್ಚಾಗುತ್ತಿರುವುದರಿಂದ ಬಹುಶಃ ಜನರು ಜಾತಿಯಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. 1970ರಲ್ಲಿ ನಾನು ಬಳ್ಳಾರಿಯ ಮೋಕ ಗ್ರಾಮದಲ್ಲಿ ಒಂದು ತಿಂಗಳು ವಾಸ ವಿದ್ದೆ. ಬೇಸಿಗೆಯ ರಜದಲ್ಲಿ ಮೋಕದ ಶಾಲೆ ನನ್ನ ವಾಸಸ್ಥಾನ ವಾಗಿತ್ತು. ಒಂದು ದಿನ ನಾನು ಅಲ್ಲಿಯ ಕರಣಂ (ಶಾನುಭೋಗ)ರಾದ ದಿವಂಗತ ಭುಜಂಗರಾವ್ ದೇಸಾಯಿಯವರಲ್ಲಿ, 'ಈ ಊರಿನ ಎಲ್ಲರಿಗಿಂತ ಬಡ ಕುಟುಂಬದ ಮನೆಗೆ ಹೋಗಬೇಕು' ಎಂದು ಹೇಳಿದೆ. ಅವರು ನನ್ನನ್ನು ಮೋಕ ಗ್ರಾಮದ ಅತಿ ಬಡವನೊಬ್ಬನ ಗುಡಿಸಲಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಕಳೆದುಕೊಂಡಿದ್ದ ಆತನಿಗೆ ಇಬ್ಬರು ಮಕ್ಕಳಿದ್ದರು. ಹಿರಿಯವನಿಗೆ ಸುಮಾರು ಒಂಬತ್ತು ವರ್ಷವಾಗಿದ್ದರೆ, ಕಿರಿಯವನಿಗೆ ಸುಮಾರು ಆರು ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿನಲ್ಲಿ ಆತನಿಗೆ ಸರಾಸರಿ ಇಪ್ಪತ್ತು ಅಥವ ಇಪ್ಪತ್ತೈದು ದಿನ ಕೆಲಸ ಸಿಗುತ್ತಿತ್ತು. ''ಕೆಲಸ ಸಿಗದೆ ಇರುವ ದಿನಗಳಲ್ಲಿ ನಿಮಗೆ ಊಟ ಎಲ್ಲಿಂದ ಸಿಗುತ್ತದೆ?'' ಎಂದು ನಾನು ಅವನನ್ನು ಕೇಳಿದೆ. ಅದಕ್ಕೆ ಆತ, ''ಅವತ್ತು ನಾನು ನೀರು ಕುಡಿದು ಉಪವಾಸ ಇದ್ದು ಬಿಡುತ್ತೇನೆ. ನನ್ನ ಮಕ್ಕಳಿಗೆ ನಮ್ಮ ಜಾತಿಯವರು ಊಟ ಕೊಡು ತ್ತಾರೆ'' ಎಂದು ಹೇಳಿದ. ಇದು ಜಾತಿಯ ಸಾಮಾಜಿಕ ಭದ್ರತೆ.

ಜಾತಿಯ ದೃಷ್ಟಿಯಿಂದ ಒಬ್ಬ ಮನುಷ್ಯನನ್ನು ನೋಡುವುದು ಎಂದರೆ ಮನುಷ್ಯತ್ವವನ್ನು ಕಿರಿದುಗೊಳಿಸಿದಂತೆ. ಒಮ್ಮೆ ಮಾಸ್ತಿಯವರು ಮಾತನಾಡುತ್ತಾ, ''ನಾನು ಕುವೆಂಪುಗೆ ನೀವು ಮಾನವತೆಯ ಕವಿಯಾಗಬೇಕು. ಒಕ್ಕಲಿಗರ ಕವಿ ಮಾತ್ರ ಆಗಬೇಡಿ ಎಂದು ಹೇಳಿದೆ'' ("I told Kuvempu, 'Ayya, be a poet for the humanity. Don't be a poet for the Vokkaligas alone'') ಎಂದು ನನ್ನ ಬಳಿ ಹೇಳಿದರು. ಕುವೆಂಪು ಅವರಿಗೆ ಆ ಮಾತನ್ನು ಹೇಳುವುದು ಮಾಸ್ತಿ ಅವರಿಗೆ ಮಾತ್ರ ಸಾಧ್ಯ ಇತ್ತು. ಈಗ ಇಂತಹ ಸಲಹೆಯನ್ನು ನಾಡಿನ ಜನತೆಗೆ ಕೊಡುವವರು ಯಾರಿದ್ದಾರೆ? ಈಗ ಸಾಹಿತ್ಯ ಮತ್ತು ಸಾಹಿತ್ಯದ ವಿಮರ್ಶೆಯನ್ನು ಕೂಡ ಜಾತೀಯತೆಯ ದೃಷ್ಟಿಯಿಂದ ನೋಡಲಾಗುತ್ತದೆ.

ಪ್ರಿಸಮ್‌ನಿಂದ ಹೊರಡುವ ಪ್ರಕಾಶ ಮಳೆ ಬಿಲ್ಲಿನ ಏಳು ಬಣ್ಣಗಳಲ್ಲಿ ವಿಭಕ್ತವಾಗುತ್ತದೆ. ಜಾತೀಯತೆಯ ಪ್ರಿಸಮ್‌ನಿಂದ ನೋಡಿದರೆ ಎಲ್ಲವೂ ವಿಭಕ್ತವಾದ ವರ್ಣಗಳಾಗಿ ಕಾಣಿಸುತ್ತವೆ. ಆದರೆ ಬಹಳ ಹೊತ್ತು ಆ ಪ್ರಿಸಮ್ ಅನ್ನು ಕಣ್ಣಮುಂದೆ ಇಟ್ಟರೆ ತಲೆನೋವು ಬರಬಹುದು. ಈ ತಲೆನೋವಿಗೆ ಉಪಚಾರ ಇಲ್ಲ.

ಕೃಪೆ : ವಿಜಯ ಕರ್ನಾಟಕ

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.