Friday, January 18, 2013

ಸಾಹಿತ್ಯ ಸಂಭ್ರಮ ಅಧ್ಯಕ್ಷರಿಗೆ ರಹಮತ್ ತರೀಕೆರೆ ಪತ್ರ

ಮಾನ್ಯರಾದ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ವಿಜ್ಞಾಪನೆಗಳು

ಪ್ರಿಯರೆ,
ಜನವರಿ ೨೫ರಿಂದ ೨೭ರ ತನಕ ನಡೆಯಲಿರುವ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ನನ್ನನ್ನುವಿಶೇಷ ಆಮಂತ್ರಿತನಾಗಿ ಆಹ್ವಾನ (ಪತ್ರ ೧೨.೧೨.೧೨) ನೀಡಿದ್ದಿರಿ. ತಮ್ಮ ವಿಶ್ವಾಸಕ್ಕೆ ಕೃತಜ್ಞತೆ ಹೇಳುತ್ತೇನೆ. ಈಗ ಧಾರವಾಡ ಗೆಳೆಯರು ಕಳಿಸಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ವಿವರಗಳನ್ನು ಕಂಡ ಮೇಲೆ ಬರಬೇಕು ಎಂದು ಅನಿಸುತ್ತಿಲ್ಲ . ಆದ್ದರಿಂದ ನನ್ನ ಹೆಸರನ್ನು ವಿಶೇಷ ಆಮಂತ್ರಿತರ ಪಟ್ಟಿಯಿಂದ ಕೈಬಿಡಬೇಕು ಎಂದು ಕೋರುತ್ತೇನೆ.
ವಂದನೆಗಳು

ತಮ್ಮ ವಿಶ್ವಾಸದ

ರಹಮತ್ ತರೀಕೆರೆ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.