Sunday, January 13, 2013

ಮಾತ್ಗವಿತೆ-108

ನಂಬುಗೆ ಇಟ್ಟು ಕೊಟ್ಟುದ್ದೆಲ್ಲ ಮುಚ್ಚಿಟ್ಟುಕೊಂಡು
ಜಟ್ಟಿಯಾಟಕ್ಕೆ ಜತೆಯಾಗಬಯಸುವ ನಿನ್ನ ಧಾಟಿ
ಇನ್ನಿಲ್ಲದ ಗೊಂದಲಕ್ಕೆ ಕೆಡವಿ ಕೆಡವಿ
ದಡ ಮುಟ್ಟದ ದೋಣಿಯ ಗುದಮುರುಗಿ ನನ್ನದು !
ಕದವಿಕ್ಕಿದ್ದರೆ ತೆರಯಬೇಡ ; ಕರೆಯಬೇಡ
ಗರ ಹೊಡೆಯಿಸಿದ ಪರಿಯ ದಡಫಡ ಬೇಡ !
ಧಾಂಗುಡಿ ಇಟ್ಟಲ್ಲಿ ಇಂದು ಕರಾಳ ಮೌನ ;
ಭೂಕಂಪವನ್ನೇ ಎದೆಯೊಳಗೆ ಇಟ್ಟುಕೊಂಡ
ಭೂಮಿಯ ಭಾವ ನನ್ನದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.