Monday, January 21, 2013

ಸಾಹಿತ್ಯ ಸಂಭ್ರಮಕ್ಕೆ ಆತ್ಮೀಯ ಸ್ವಾಗತ !


ಡಾ. ಸಿದ್ರಾಮ ಕಾರಣಿಕ               

            ಜನೇವರಿ ೨೫, ೨೬, ೨೭ ರಂದು ಧಾರವಾಡದಲ್ಲಿ 'ಸಾಹಿತ್ಯ ಸಂಭ್ರಮ' ಜರುಗಲಿದೆ. ಸಂಘಟಕರು ವಿರೋಧಿ ಬಣದವರನ್ನು ಸಮಝಾಯಿಸಿ (ಬಗ್ಗು ಬಡಿದು) ಒಲಿಸಿಕೊಂಡಿದ್ದಾರೆ. ಸಾಹಿತ್ಯ ಎನ್ನುವುದನ್ನು ವ್ಯಾಪಾರವನ್ನಾಗಿಯೇ ನೋಡುವ ಕೆಲವು ಜನರು ರಾಜಿಯಾಗಿರುವುದರಲ್ಲಿ ಲಾಭದ ಉದ್ದೇಶವನ್ನು ಅಲ್ಲಗಳೆಯಲಾಗದು. ಹೋರಾಟ, ಕ್ರಾಂತಿ, ಪ್ರತಿಭಟನೆ ಮೊದಲಾದವುಗಳೆಲ್ಲ ಅರ್ಥ ಕಳೆದುಕೊಂಡಿರುವುದು ಇಂಥ ಲಾಭಕೋರ ಪ್ರಜ್ಞಾವಂತರಿಂದಲೇ ಎಂದರೆ ತಪ್ಪಾಗಲಾರದು ! ಧಾರವಾಡ ಇನ್ನಾದರೂ ಬದಲಾದೀತೆ ಎಂಬ ನನ್ನಂಥವರ ಪ್ರಶ್ನೆಗೆ ಇಲ್ಲಿ ಉತ್ತರ ಇರುವುದಿಲ್ಲ ; ಉತ್ತರಿಸುವ ವ್ಯವಧಾನವಾಗಲಿ ; ನಿರ್ಭೀತಿಯಾಗಲಿ ಸೋ ಕಾಲ್ಡ್ ಪ್ರತಿಭಟನಾಕಾರರಲ್ಲಿ ಇಲ್ಲವೇನೋ ಎನಿಸುತ್ತಿದೆ !
 
           ಈಗ ನನ್ನ ಅಭಿಪ್ರಾಯವೆಂದರೆ ಕೇವಲ ಧಾರವಾಡ ಮಾತ್ರವಲ್ಲ ಹೊರ ಊರಿನ ಹಲವಾರು ಗೆಳೆಯರು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವನ್ನು ಕೊಟ್ಟು ಬರಲು ತಯಾರಾಗಿದ್ದಾರೆ. ನಾನು ಹಾದಿ ಕಾಯ್ದೆ ; ಪ್ರತಿಭಟಿಸುವವರು 'ಪರ್ಯಾಯ' ಮಾಡಬಹುದು ಎಂದು ! ನೋ ಚಾನ್ಸ್ ! ಹೀಗಾಗಿ ನಾನೇ ಹೇಳುತ್ತಿದ್ದೇನೆ. ಇಷ್ಟವಿದ್ದವರು ಯಾವುದೇ ಸಂಹಿತೆ, ನಿಬಂಧನೆ, ಸಂವೇದನೆ, ಪ್ರಜ್ಞೆ, ಮನಸಾಕ್ಷಿ ಎನ್ನುವುದನ್ನು ಮರೆತು ಈ 'ಸಂಭ್ರಮ'ದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

         ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಆಗಮಿಸುವ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತಿದ್ದೇನೆ ! 

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.