Saturday, June 16, 2012

ಕೋರೆಗಾವ ಕದನ-ಇತಿಹಾಸದ ಒಳಸುಳಿ

ಈ ದೇಶದ ಜಾತೀಯತೆಯ ಒಳಸುಳಿಗಳನ್ನು ಬಿಚ್ಚಿಡುವ ಕೃತಿ ‘ಕೋರೆಗಾವ ಕದನ: ದಲಿತ ದಿಗ್ವಿಜಯ’. ಸುಧಾಕರ ಖಾಂಬೆ ಅವರ ಮರಾಠಿ ಕೃತಿ ‘ಶೌರ್ಯ ಆಣಿ ಪರಾಕ್ರಮಾಚೆ ಪ್ರತೀಕ: ಭೀಮಾ ಕೋರೆಗಾವಾಚಾ ವಿಜಯ ಸ್ತಂಭ’ ಕೃತಿಯನ್ನು ಸಿದ್ರಾಮ ಕಾರಣಿಕ ಅವರು ಕನ್ನಡಕ್ಕೆ ತಂದಿದ್ದಾರೆ. ಸ್ಫೋಟಕ ಅಂಶಗಳನ್ನು ಹೊರಗಿ ಡುವ ಈ ಪುಟ್ಟ ಕೃತಿ, ಈ ದೇಶದ ಪೂರ್ವಾಗ್ರಹ ಪೀಡಿತ ಇತಿಹಾಸ, ವರ್ಣಸಂಘರ್ಷ ಮತ್ತು ಸ್ವಾತಂತ್ರದ ವಿರೋಧಾಭಾಸಗಳನ್ನು ತೆರೆದಿಡು ತ್ತದೆ. ಕೃತಿಯ ಕುತೂಹಲಕಾರಿ ಅಂಶವೆಂದರೆ, ಇಲ್ಲಿ ಕದನ ನಡೆಯುವುದು ಬ್ರಿಟಿಷರು ಮತ್ತು ಪೇಶ್ವೆಗಳ ನಡುವೆ.
ಈ ಕದನದಲ್ಲಿ ಮಹಾರ ದಲಿತ ಕಲಿ ಗಳು ಬ್ರಿಟಿ ಷರ ಪರವಾಗಿ ನಿಂತು ಎರಡನೆ ಬಾಜಿ ರಾಯನ ವಿರುದ್ಧ ಖಡ್ಗ ಬೀಸುತ್ತಾರೆ. ಮೇಲ್ನೋಟಕ್ಕೆ ಇದು ಬ್ರಿಟಿಷರ ವಿರುದ್ಧ ಪೇಶ್ವೆಗಳ ಕದನ ದಂತೆ ಕಂಡರೂ, ತಳದಲ್ಲಿ ಇದು ಈ ದೇಶದ ಜಾತೀ ಯತೆ ಮತ್ತು ಅಸ್ಪಶತೆಯ ವಿರುದ್ಧ ನಡೆಯುವ ಕದನದ ರೂಪ ಪಡೆಯುತ್ತದೆ. ವಿಶೇಷವೆಂದರೆ, ಇಲ್ಲಿ ದೇಶದ ಜಾತೀ ಯತೆ, ಶೋಷಕ ಸಮಾಜವನ್ನು ಪೇಶ್ವೆಗಳು ಪ್ರತಿನಿಧಿಸಿದರೆ, ಬೆನ್ನಿಗೆ ನಿಂತ ದಲಿತರ ಕಾರಣದಿಂದ, ಬ್ರಿಟಿ ಷರು ಜಾತೀಯತೆಯ ವಿರೋಧಿಗ ಳಾಗಿ ಗುರುತಿಸಲ್ಪಡುತ್ತಾರೆ. ಸ್ವಾತಂತ್ರ ಹೋರಾಟದ ವ್ಯಾಖ್ಯೆ ಇಲ್ಲಿ ವಿಸ್ತರಿಸಿ ಕೊಳ್ಳುತ್ತದೆ.
ಬ್ರಿಟಿಷರಿಂದ ರಾಜಕೀ ಯವಾಗಿ ಬಿಡುಗಡೆ ಪಡೆದರಷ್ಟೇ ದಲಿತರಿಗೆ ಸ್ವಾತಂತ್ರ ಸಿಕ್ಕಂತಾಗುವು ದಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿ ಡುವ ಮುಂಚೆಯೇ, ಶತ ಶತಮಾನ ಗಳ ಹಿಂದೆಯೇ ಈ ನೆಲದಲ್ಲಿ ದಲಿ ತರು ಪಾರತಂತ್ರವನ್ನು ಅನುಭ ವಿಸುತ್ತಿದ್ದರು. ಶೋಷಣೆಯನ್ನು ಅನು ಭವಿಸುತ್ತಿದ್ದರು. ಸಾರ್ವಜನಿಕ ಕೆರೆ, ಬಾವಿಗಳನ್ನು ಮುಟ್ಟುವುದಕ್ಕೂ ಅವ ಕಾಶವಿರಲಿಲ್ಲ. ಇಂತಹ ಹೀನ ಸ್ಥಿತಿ ಯಲ್ಲಿ ಬದುಕಿದ ದಲಿತರ ಪಾಲಿಗೆ, ಬ್ರಿಟಿಷರ ಪ್ರವೇಶ ಒಂದು ವರವಾ ಯಿತು. ಬ್ರಿಟಿಷರ ಶಿಕ್ಷಣ, ಕಾನೂನು ದಲಿತರ ಬದುಕಿನಲ್ಲಿ ಬದಲಾವಣೆ ತಂದಿತು.
ಕೋರೆಗಾವ ಕದನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಬ್ರಿಟಿಷರ ಪರವಾಗಿ ನಿಂತ ದಲಿತರನ್ನು ‘ದೇಶದ್ರೋಹಿ’ ಗಳಾಗಿ ಗುರುತಿಸುವ ಅಪಾಯವಿದೆ. ಶಿವಾಜಿಯ ಕಾಲದಲ್ಲಿ ಧೈರ್ಯ, ಸಾಹ ಸಕ್ಕೆ ಹೆಸರಾಗಿದ್ದ ಮಹಾರ ಯೋಧರು ಪೇಶ್ವೆಗಳ ಕಾಲದಲ್ಲಿ ಅವರ ವಿರುದ್ಧ ಬಂಡೆದ್ದರೂ. ಶಿವಾಜಿ ಶೂದ್ರನಾಗಿದ್ದ. ಇದೇ ಸಂದರ್ಭದಲ್ಲಿ, ಶಿವಾಜಿಯ ನಂತರ ಆಡಳಿತ ಚುಕ್ಕಾಣಿ ಹಿಡಿದ ಪೇಶ್ವೆಗಳು ಮೇಲ್ವರ್ಣವನ್ನು ಪ್ರತಿನಿಧಿಸು ತ್ತಿದ್ದರು. ಶಿವಾಜಿಗಾಗಿ ಎಲ್ಲವನ್ನು ತೊರೆದ ಮಹಾರರನ್ನು ಈ ಪೇಶ್ವೆಗಳು ಹೀನಾಯವಾಗಿ ಕಾಣಲಾರಂಭಿಸಿ ದರು.
ಅನುಮಾನ, ಶಂಕೆ, ಅಸ್ಪಶತೆ ಇತ್ಯಾದಿಗಳ ಮೂಲಕ, ಮಹಾರ ಯೋಧರಿಗೆ ಪೇಶ್ವೆಯ ಆಡಳಿತ ನರಕ ವಾಯಿತು. ಕೋರೆಗಾವ್ ಕದನದ ಸಂದರ್ಭದಲ್ಲಿ ಈ ಮಹಾರ ಯೋಧರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿದ್ದರೆ ಅವರು ಬಾಜೀರಾ ಯನ ಪರವಾಗಿಯೇ ನಿಲ್ಲುತ್ತಿ ದ್ದರೋ ಏನೋ. ಆದರೆ ಅವರನ್ನು ಸಂಪೂರ್ಣವಾಗಿ ಪೇಶ್ವೆಗಳು ನಿರ್ಲ ಕ್ಷಿಸಿದರು. ಪರಿಣಾಮವಾಗಿ ಮಹಾರ್ ಯೋಧರು ಪೇಶ್ವೆಗಳ ವಿರುದ್ಧ ನಿಂತರು. ಬ್ರಿಟಿ ಷರ ಸೇನೆ ಸೇರಿದರು. ಅವರಿಗೆ ಹೋರಾಡ ಬೇಕಾಗಿದ್ದದ್ದು ಪೇಶ್ವೆಗಳ ಜಾತೀ ಯತೆಯ ವಿರುದ್ಧ, ಅವರ ಅಸ್ಪ ಶತೆಯ ವಿರುದ್ಧ.
ಅವರ ಶೋಷ ಣೆಯ ವಿರುದ್ಧ. ಬ್ರಿಟಿಷರು ಕೊಟ್ಟ ಮನ್ನಣೆ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿತು. ಪರಿಣಾಮವಾಗಿ, ಪೇಶ್ವೆ ಗಳ ಮಹಾಸೇನೆಯನ್ನು ಮಹಾರರು ಎದುರಿಸಲು ಸಿದ್ಧರಾದರು. ಒಂದು ಹಂತದಲ್ಲಿ ಬ್ರಿಟಿ ಷರು ಸೋಲುವ ಸನ್ನಿವೇಶವಿದ್ದಾಗ, ಮಹಾರರ ಹೋರಾಟ, ಬಲಿದಾನ ದಿಂದ ಫಲಿತಾಂಶ ಬದಲಾಯಿತು. ಬ್ರಿಟಿ ಷರು ಗೆದ್ದರು. ಬಾಜೀರಾಯ ತನ್ನ ಕಾರಣದಿಂದಲೇ ಯುದ್ಧದಲ್ಲಿ ಸತ್ತ. (ಇದೇ ಪೇಶ್ವೆಗಳು ಟಿಪ್ಪು ಸುಲ್ತಾ ನನ ವಿರುದ್ಧ ಯುದ್ಧದಲ್ಲಿ ಬ್ರಿಟಿಷರ ಪರವಾಗಿದ್ದರು ಎನ್ನು ವುದನ್ನು ಇಲ್ಲಿ ನೆನೆಯಬೇಕು). ಕೋರೆಗಾವ ಯುದ್ಧ ದಲ್ಲಿ ಅಸ್ಪಶತೆ, ಜಾತೀಯತೆ ಹೀನಾ ಯವಾಗಿ ಸೋತಿತು. ದಲಿತರು ಗೆದ್ದರು.
ಶಬ್ದ ಶಬ್ದದ ಅನುವಾದ ಇದಲ್ಲ ವಾದುದರಿಂದ ಓದಿಸಿಕೊಂಡು ಹೋಗುತ್ತದೆ. ಬರೇ ಒಣ ಇತಿಹಾ ಸದ ದಾಖಲೆಯೂ ಇದಲ್ಲ. ಬರಹ ಕಥನ ಗುಣವನ್ನು ಹೊಂದಿದೆ. ಅನುವಾದ ಸೃಜನಾತ್ಮಕವಾಗಿದೆ.
ಮೂಲಭೂತವಾದಿಗಳು ಈ ದೇಶದ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಗದಗದ ಲಡಾಯಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿರುವುದು ಶ್ಲಾಘನೀಯವಾಗಿದೆ. ಕೃತಿಯ ಮುಖಬೆಲೆ 40 ರೂ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.